ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾಲಿಗೆ ಕತ್ತರಿಸಿ ನಡೆದವರು

The age of pain—and comfort

ಜಹಾನ್ ಆರಾ

ದೂರ ವಿಮಾನದಿಂದ
ಹಾರಿ ಬಂದವರು ತಂದ
ಆಧುನಿಕತೆಯ ಭಾರವನ್ನು
ಸಾವಿರಾರು ಮೈಲಿ ಹೊತ್ತು ನಡೆಯುತ್ತಿದ್ದೇವೆ
ಈಗ ಕಾಲುಗಳು ಸೋತಿವೆ
ತಲುಪುವ ಊರು ಇನ್ನೂ ಬಹು ದೂರ

ದುಡಿದು ತಿಂದ ದೇಹ ದಾರಿಯುದ್ಧಕ್ಕೂ
ಬೇರೆಯವರ ದಾನಕ್ಕಾಗಿ ಕೈ ಒಡ್ಡಿತು
ಮೇಲೆ ಕುಳಿತವನು ಆಡಿಸಿದಂತೆ
ದೀಪವು ಹಚ್ಚಿದ್ದೇವೆ
ನಮ್ಮ ರಕುತ ಬಸೆದು
ಜಾಗಟೆಯೂ ಬಾರಿಸಿದ್ದೇವೆ
ಖಾಲಿ ಹೊಟ್ಟೆ ಬಡಿದು

ಹಗಲು-ರಾತ್ರಿ ಬಿಸಿಲು ಹಸಿವು
ಯಾರ ಮಾತು ಕಿವಿಗೆ ಬೀಳಲಿಲ್ಲ
ನಿಮ್ಮ ಆಶಾದಾಯಕತೆಯ ಹೊರತು
ಊರಿನಲ್ಲಿ ತನ್ನವರು ಸತ್ತರು
ಜೊತೆಗೆ ನಡೆದವರು ಇಲ್ಲವಾದರು

ಕರಾಳತೆಯ ಕರಳು
ಯಾವ ವಯಸ್ಸಿಗೂ ಮಿಡಿಯಲಿಲ್ಲ
ಪ್ರಸವ ಬೇಗೆಯು ಸಹಿಸಿದೆವು
ಗರ್ಭವನ್ನು ಇಳಿಸಿ ನಡೆದೆವು
ಬಿಟ್ಟು ಬಂದ ಗೂಡು ಸೇರಲು
ಹಗಲಿರುಳು ನಡೆದೆವು

ಸೌಲಭ್ಯವಿದೆಯಂತೆ
ಮಾಗಿದ ಮಾವಿನಂತೆ
ನಮಗೆ ಗೊಟ್ಟೆಯಾದರು ಸಿಕ್ಕಿದರೆ
ಚೀಪಿ ನಾವು ತಿಂದಷ್ಟೇ ಸುಖಿಸುವೆವು

ನಡೆನಡೆದು ಸೊರಗಿದ ಚಪ್ಪಲಿಗಳು
ನಮ್ಮ ಮೇಲೆ ವಿರಸ ಹಾಡುವೆ
ಇನ್ನೂ ಪಾದದ ಚರ್ಮಕ್ಕೆ
ಹೊಲಿಗೆ ಹಾಕಿಕೊಂಡು ನಡೆಯುತ್ತಿದ್ದೇವೆ

ನೀವು ತಂದ ಹುಳುಗಳು
ನಮ್ಮ ಹೆಸರು ಹೇಳುತ್ತಿದೆ ಕೇಳಿ
ವಲಸಿಗರಿಂದ ಕಾರ್ಮಿಕರಿಂದ
‘ನಾ ರಾರಾಜಿಸುವೆ ‘ಎನ್ನುತ್ತಿವೆ ನೋಡಿ
ನೀವು ಬಾಯಿಮುಚ್ಚಿಕೊಂಡು ಇರಲು ಹೇಳಿದ್ದೀರಿ
ನಾವು ನಾಲಿಗೆಯನ್ನು ಕತ್ತರಿಸಿ ನಡೆಯುತ್ತಿದ್ದೇವೆ
ನೋಡಿ
ಸ್ವಲ್ಪ ಕರುಣೆ ಇದ್ದರೆ ನಿಮಗೆ
ರಸ್ತೆಗಳನ್ನು ಕತ್ತರಿಸಿ ಕಿರಿದಾಗಿಸಿ
ನಾಲ್ಕೈದು ಹೆಜ್ಜೆಗಳಲ್ಲಿ ಮನೆ ಸೇರುವಂತೆ

*********

About The Author

2 thoughts on “ಕಾವ್ಯಯಾನ”

  1. ವಾಸ್ತವ.. ಸಕಾಲಿಕ ಪರಿಸ್ಥಿತಿಗೆ ಹಿಡಿದ ಕನ್ನಡಿ

Leave a Reply

You cannot copy content of this page

Scroll to Top