ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಪ್ರೀತಿಸಲಾಗುವುದಿಲ್ಲವಲ್ಲ ದೀಪಾ ಗೋನಾಳ.. ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ ಎನೆಲ್ಲ ನೋವು ಹತಾಷೆ, ಸಂಕಟ ಅನುಭವಿಸಿಯು ಅನದೆ ಉಳಿಯಬೇಕಲ್ಲ ಹಾವು ತುಳಿದರೂ ಹೂವು ತುಳಿದದ್ದೆಂದು ಸಂಭಾಳಿಸಬೇಕಲ್ಲ ಕನಸು ಕನವರಿಕೆ ಬೆಸುಗೆ ಹಾಕಿ ಚೆಂದದ ಮಾತ ಹೇಳಿದಾಗಲೂ ಮುನಿಸು ಮಾಡುವ ಗೆಳೆಯನ ಉಳಿಸಿಕೊಳಬೇಕಲ್ಲ ಕಾಡಿಗೆಯಿಟ್ಟ ಕಣ್ಕೆಳಗಿನ ಕಪ್ಪು ವರ್ತುಲಕೆ ಬೆಳ್ಳಂಬೆಳ್ಳಗಿನ ಪೌಡರು ಹಾಕಿ ನಿಂದು, ಒಂದೂದ್ದದ ನಿದ್ದೆ ಮಾಡಿದೆ ಕನಸಿನ ತುಂಬ ನೀನೆ ಎಂದಂದು ಅವನ ಕನಸಿನ ಹೆಣಿಕೆಗೆ ದಾರವಾಗಬೇಕಲ್ಲ ಭುಜ ಹಿಡಿದು ಅಲುಗಿಸಿದಾಗೆಲ್ಲ ಕಳೆದು ಹೋದ ಚಿಂತೆಜಾತ್ರೆಯ ಮುಚ್ಚಿಟ್ಟು ಆಕಾಶ ನಿರುಕಿಸಬೇಕಲ್ಲ ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ ಅವನೆಂಬ ಅಂಬಾರಿಯ ಎದೆತುಂಬ ಹೊತ್ತು ಜೀವನ ಸವಾರಿಗೆ ಸಿಗದ ಸುಖೀ ಚಣಗಳ‌‌ ಹುಡುಕುತ್ತ ರಥ‌ ಬೀದಿಯಲ್ಲಿ ಸಾಗಬೇಕಲ್ಲ ಭಾರವಾಯಿತೆನ್ನುವಂತಿಲ್ಲ ಶ್ವಾಸಕ್ಕಿಳಿದ ಗಾಳಿ, ಅರಸುತ್ತ ಉಸಿರೆಳೆದವಳು ನಾನೇ ಅಲ್ಲವೇ ಅನ್ನುತ್ತಾನಲ್ಲ ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ.. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತಾಳು ಮನವೆ. ಚೈತ್ರಾ ಶಿವಯೋಗಿಮಠ ತಲ್ಲಣಿಸದಿರು ಮನವೆ! ದಟ್ಟೈಸುವ ಕಾರ್ಮೋಡಗಳ ಸುರಿದು ಹಗುರಾಗಿ ಮತ್ತೆ ಕಂಗೊಳಿಸದೆ ನೀಲ ನಭವು??? ತಲ್ಲಣಿಸದಿರು ಮನವೆ! ಕಗ್ಗತ್ತಲ ಒಡಲ ಹರಿದು ಪ್ರಖರವಾಗಿ ಇರುಳ ಗರ್ಭದಿ ಜನಿಸಿ ಬರುವನಲ್ಲವೆ ಇನನು?? ತಲ್ಲಣಿಸದಿರು ಮನವೆ! ಬೊಬ್ಬೆಯಿಟ್ಟು ಚಂಡಿಹಿಡಿದ ಕಂದನ ಹಾಲುಣಿಸಿ ಸಂತೈಸಲು ಬರಲಾರಳೇನು ಅಬ್ಬೆಯು?? ತಲ್ಲಣಿಸದಿರು ಮನವೆ! ಶೀತ ಹೇಮಂತನ ಕೊರೆತವ ಕರಗಿಸಿ ಬಿಸುಪ ಮುದ ನೀಡಲು ಬರುವಳಲವೆ ಗ್ರೀಷ್ಮಳು? ತಲ್ಲಣಿಸದಿರು ಮನವೆ! ಕಾಲಚಕ್ರವದು ನಿಲದೆ ತಿರುಗುವುದು ಅಹಿತವು ಅಳಿದು ಹಿತವು ನಿನಗಾಗಿ ಬಾರದೆ?? ತಲ್ಲಣಿಸದಿರು ಮನವೆ!! ಮಂದಸ್ಮಿತವು ವದನದೊಳಿರಲಿ!! ತಲ್ಲಣಿಸದೆ ಶಾಂತನಾಗು ಮನವೆ!! *********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಹೊಸ ಮನ್ವಂತರ ಗಣೇಶಭಟ್ ಶಿರಸಿ ಹೊಸ ಮನ್ವಂತರ ದಾರಿ ತೋರಲಿರುವ ಕೊರೋನಾ ಪಿಡುಗು ಆಗಿದ್ದೆಲ್ಲ ಒಳ್ಳೆಯದಕ್ಕೇ, ಆಗುತ್ತಿರುವುದು ಒಳ್ಳೆಯದಕ್ಕೆ. ಮುಂದಾಗುವುದೂ ಒಳ್ಳೆಯದಕ್ಕೇ ಎಂಬುದು ಭಗವದ್ಗೀತೆಯ ಪಾಠ. ಕೊರೊನಾ ಪಿಡುಗಿನಿಂದ ಉಂಟಾಗಿರುವ ಆವಾಂತರವನ್ನು ಗಮನಸಿದಾಗ ಮುಂಬರುವ ದಿನಗಳಲ್ಲಿ ಆಗುವ ಒಳಿತನ್ನು ಸುಲಭದಲ್ಲಿ ಊಹಿಸಬಹುದು. ಕೊರೊನಾ ಕುರಿತು ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳು ಭೀತಿಯನ್ನು ಹುಟ್ಟಿಸುತ್ತಿವೆ. ಕೊರೊನಾ ವೈರಾಣುವಿನಿಂದ ಸತ್ತವರ ಸಂಖ್ಯೆ ಮೂವತ್ತು ಸಾವಿರ ಮೀರಿದೆ. ಸೋಂಕಿತರ ಸಂಖ್ಯೆ ಐದು ಲಕ್ಷ ಮೀರುತ್ತಿದೆ ಇತ್ಯಾದಿ. ಯಾವುದೇ ರೋಗ ಇಡೀ ಪ್ರಪಂಚವನ್ನು ಕಾಡುತ್ತಿರುವದು ಇದು ಮೊದಲನೇ ಬಾರಿಯಂತೂ ಅಲ್ಲ. ಜನವರಿ ೧೯೧೮ ರಿಂದ ಡಿಸೆಂಬರ್ ೧೯೨೦ ರವರೆಗೆ ಇಡೀ ಜಗತ್ತನ್ನು ಆವರಿಸಿ, ಅಂದಿನ ಜನಸಂಖ್ಯೆಯ ಕಾಲು ಭಾಗದಷ್ಟು ಜನರಿಗೆ ತಗಲಿ, ಸುಮಾರು ಐದು ಕೋಟಿ ಜನರ ಮರಣಕ್ಕೆ ಕಾರಣವಾದ ಸ್ಪೇನ್‌ನ ಪ್ಲೂ ಎಂದೇ ಕರೆಯಲ್ಪಡುವ , ಪ್ಲೂ ಇತಿಹಾಸದಲ್ಲಿ ದಾಖಲಾದ ಭೀಕರ ಸಾಂಕ್ರಾಮಿಕ ರೋಗವೆಂದು ಹೇಳಲಾಗುತ್ತದೆ. ಪ್ಲೂ ವೈರಾಣುವಿನ ಆಕ್ರಮಣ ಶೀಲತೆಗಿಂತ ಅಪೌಷ್ಠಿಕತೆ , ವೈದ್ಯಕೀಯ ಸೌಲಭ್ಯಗಳ ಕೊರತೆ, ನೈರ್ಮಲ್ಯದ ಅಭಾವ ಮುಂತಾದವುಗಳೇ ಸಾವಿಗೆ ಕಾರಣವೆಂದು ನಂತರ ನಡೆಸಿದ ಅಧ್ಯಯನದಿಂದ ಬಹಿರಂಗವಾಯಿತು. ಇನ್‌ಪ್ಲೂಯೆಂಜಾ ಹಾಗೂ ಅಂತಹುದೇ ಜ್ವರಕ್ಕೆ ಕಾರಣವಾದ ವೈರಾಣುಗಳ ವಿವಿಧ ಪ್ರಬೇಧಗಳು ಮಾನವನನ್ನು ಕಾಡುತ್ತಲೇ ಇವೆ. ಇತ್ತೀಚಿನ ದಶಕಗಳಲ್ಲಿ ಜನರನ್ನು ಕಂಗೆಡಿಸುತ್ತಿರುವ ಮಂಗನಕಾಯಿಲೆ, ಚಿಕನ್‌ಗುನ್ಯ, ಸಾರ್ಸ್, ಹಂದಿಜ್ವರ ಮುಂತಾದ ಹಲವು ವಿಧದ ಅನಾರೋಗ್ಯವನ್ನುಂಟು ಮಾಡುವ ವೈರಾಣುಗಳಿಂದಲೇ ರೋಗಿಗಳ ಸಾವುಂಟಾಗುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ ಇತರ ರೋಗಗಳಿಂದ ಪೀಡಿತರಾಗಿರುವವರೇ ಈ ಸೋಂಕು ತಗಲಿದ ನಂತರ ಮರಣ ಹೊಂದುವದು ಕಂಡು ಬಂದಿದೆ. ಮಾಧ್ಯಮಗಳ ಅಬ್ಬರದ ಪ್ರಚಾರಕ್ಕೆ ಕಂಗೆಟ್ಟಿರುವ ಜನರನ್ನು ಇನ್ನಷ್ಟು ಬೆದರಿಸುವಂತೆ ಸರ್ಕಾರದ ನಡೆಯಿದೆ. ಕೊರೊನಾ ವೈರಸ್ ಇಂದು ಪ್ರಚಾರ ಪಡೆಯುತ್ತಿರುವಷ್ಟು ಆಕ್ರಮಣಕಾರಿಯೇ ಎಂಬುದನ್ನು ಅರಿಯಲು ವೆಬ್‌ಸೈಟ್ ಮೊರೆ ಹೋಗುವುದು ಉತ್ತಮ. ಹಲವು ದೇಶಗಳ ಆರೋಗ್ಯ ಇಲಾಖೆಯ ಅಧಿಕೃತ ವೆಬ್ ಸೈಟ್‌ಗಳು ತಮ್ಮ ದೇಶದಲ್ಲಿ ವಿವಿಧ ಕಾರಣಗಳಿಂದ ಮೃತರಾದವ ಅಂಕಿಅಂಶಗಳನ್ನು ಪ್ರಕಟಿಸುತ್ತವೆ. ಪ್ಲೂ ಸಂಬಂಧಿತ ವೈರಾಣು ಪೀಡೆಯಿಂದ ಮರಣ ಹೊಂದಿದವರು (Deaths Due to Flue Related Diseases)ಎಂದು ಅಂತರ್ಜಾಲದಲ್ಲಿ ದೇಶವಾರು ಹುಡುಕಿದರೆ ಕೆಳಗಿನ ಮಾಹಿತಿ ಲಭ್ಯವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಶೀತಜ್ವರ ಸಂಬಂಧಿತ ರೋಗಗಳಿಂದ ಜಗತ್ತಿನಾದ್ಯಂತ ಪ್ರತಿ ವರ್ಷ ಆರರಿಂದ ಆರೂವರೆ ಲಕ್ಷ ಜನರು ಸಾಯುತ್ತಾರೆ. ಪೃಥ್ವಿಯ ಉತ್ತರ ಗೋಲಾಧದಲ್ಲಿ ಅಕ್ಟೋಬರ್ ಕೊನೆಯವಾರದಿಂದ ಎಪ್ರಿಲ್ ಕೊನೆಯವರೆಗೂ ಚಳಿಗಾಲ ಇರುವುದರಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿರುತ್ತದೆ.ಹೀಗಾಗಿ ಆ ಸಮಯದಲ್ಲಿ ಪಾಶ್ಚಾತ್ಯ ದೇಶದಲ್ಲಿ ಶೀತಜ್ವರ ಸಂಬಂಧಿತ ವೈರಾಣುಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತದೆ. ಅಮೇರಿಕಾ ಸರ್ಕಾರದ ಪ್ರಕಟಣೆಯಂತೆ ೨೦೧೭ ರಲ್ಲಿ ಆ ದೇಶದಲ್ಲಿ ಮರಣಹೊಂದಿರುವ ಒಟ್ಟು ೨೮ ಲಕ್ಷ ಜನರಲ್ಲಿ ಪ್ಲೂ ಸಂಬಂಧಿತ ವೈರಾಣುವಿನಿಂದ ಸತ್ತವರ ಸಂಖ್ಯೆ ೫೫೬೭೨. ಈ ವಿಧದ ರೋಗಗಳಿಂದ ೨೦೧೯-೨೦ ರ ಸಾಲಿನಲ್ಲಿ ಸುಮಾರು ಎಂಬತ್ತು ಸಾವಿರ ಜನರು ಮರಣ ಹೊಂದಬಹುದೆಂದು ಅಲ್ಲಿನ ಸರ್ಕಾರ ಅಂದಾಜಿಸಿತ್ತು. ಭಾರತ ಸರ್ಕಾರದ ರಾಷ್ಟ್ರೀಯ ರೋಗನಿಯಂತ್ರಣ ಕೇಂದ್ರ (National Center For Disease Control) ಪ್ರಕಟಿಸಿರುವ ಮಾಹಿತಿಯಂತೆ ಶೀತಜ್ವರ ಸಂಬಂಧಿ ವೈರಾಣುಗಳಿಂದ ೨೦೧೯ ರಲ್ಲಿ ೨೮೭೯೮ ಜನರಿಗೆ ಸೋಂಕು ತಗುಲಿದ್ದು ೧೨೧೮ ಜನ ಸತ್ತಿದ್ದಾರೆ. ಅದೇ ವರ್ಷ ಕರ್ನಾಟಕ ದಲ್ಲಿ ೨೦೩೦ ಜನರಿಗೆ ಸೋಂಕು ತಗುಲಿದ್ದು ೯೬ ಜನರು ಮೃತ ಪಟ್ಟಿದ್ದರು. ೨೦೧೫ ರಲ್ಲಿ ಇಡೀ ದೇಶದಲ್ಲಿ ೪೨೫೯೨ ಸೋಂಕಿತರಲ್ಲಿ ೨೯೯೧ ಜನರ ಮರಣ ಹೊಂದಿದ್ದರೆ, ಕರ್ನಾಟಕದಲ್ಲಿ ಸೋಂಕಿತರು ೩೫೬೫ ಹಾಗೂ ೯೪ ಸಾವಿನ ಸಂಖ್ಯೆ. ೨೦೧೭ ರಲ್ಲಿ ದೇಶ ಹಾಗೂ ಕರ್ನಾಟಕದಲ್ಲಿ ಅನುಕ್ರಮವಾಗಿ ಸೋಂಕಿತರು ೩೮೮೧೧ ಮತ್ತು ೩೨೬೦, ಸಾವು ೨೨೭೦ ಮತ್ತು ೧೫. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೀತಜ್ವರ ವೈರಾಣುವಿನ ಕುಟುಂಬಕ್ಕೆ ಸೇರಿದ ಕೊರೊನಾದಿಂದ ಆಗುತ್ತಿರುವ ಅನಾಹುತಕ್ಕಿಂತ ಅದರ ವೈಭವೀಕರಣವೇ ಹೆಚ್ಚು ಎಂಬುದು ವೇದ್ಯವಾಗುತ್ತದೆ. 24×7 ರ ಸುದ್ದಿ ವಾಹಿನಿಗಳು, ಜಾಗತಿಕ ಆರ್ಥಿಕ ಷಡ್ಯಂತ್ರ, ಮಾಧ್ಯಮ ಪ್ರತಿನಿಧಿಗಳಲ್ಲಿ ಅಧ್ಯಯನದ ಕೊರತೆಗಳೇ ಇವಕ್ಕೆ ಮುಖ್ಯ ಕಾರಣಗಳು. ಕಳೆದ ವಾರ ಅಂದರೆ ೧೯-೦೩-೨೦೨೦ ರಂದು ಬ್ರಿಟನ್ ಸರ್ಕಾರ ಕೊರೊನಾ ವೈರಾಣುವಿನ ತೀವ್ರತೆಯ ಕುರಿತಾದ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿತು. ಅಲ್ಲಿನ ತಜ್ಞರ ತಂಡವು ಕೆಲವು ತಿಂಗಳುಗಳ ಹಿಂದೆ ನೀಡಿದ ತಮ್ಮ ಅಭಿಪ್ರಾಯವನ್ನು ಪುನರ್ವಿಮರ್ಶಿಸಿ , ಕೊರೊನಾ ವೈರಸ್ ತಾವು ಊಹಿಸಿದಷ್ಟು ಆಕ್ರಮಣಕಾರಿ ಮತ್ತು ಅಪಾಯಕಾರಿಯಲ್ಲವೆಂದು ಘೋಷಿಸಿತು. ಬ್ರಿಟನ್ ಪ್ರಧಾನಿಗೆ ಸೋಂಕು ತಗಲಿರುವುದನ್ನೇ ವೈಭವೀಕರಿಸುತ್ತಿರುವ ಮಾಧ್ಯಮದವರಿಗೆ ಈ ವರದಿ ಕಾಣಲೇ ಇಲ್ಲ. ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದ ಅತಿ ಹೆಚ್ಚು ತೊಂದರೆಗೊಳಗಾದವರೆಂದರೆ ದೈನಂದಿನ ದುಡಿಮೆಯಿಂದ ಬದುಕು ಸಾಗಿಸುವವರು. ನಿಲ್ಲಲು ನೆಲೆ ಇಲ್ಲದೆ, ದುಡಿಮೆಯ ಅವಕಾಶ ಸಿಗದೇ, ಊಟ, ತಿಂಡಿಗಾಗಿ ಪರದಾಡುವ ಬದಲು ನಗರಗಳಿಂದ ತಮ್ಮ ಗ್ರಾಮಗಳಿಗೆ ಮರು ವಲಸೆ ಹೊರಟಿದ್ದಾರೆ. ಕೊರೊನಾ ರೋಗದ ಭಯಕ್ಕಿಂತ ಹೆಚ್ಚಾಗಿ ಹಸಿವು ಅವರನ್ನು ಕಾಡುತ್ತಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ನೂರಾರು ಕಿ.ಲೋ ಮೀಟರ್ ನಡೆದು ತಮ್ಮ ಊರಿನತ್ತ ಸಾಗುತ್ತಿದ್ದಾರೆ. ದುಡಿಯಲು ಬಂದಿರುವ ಊರಿನಲ್ಲಿ ಇದ್ದು, ಹಸಿವೆಯಿಂದ ಸಾಯುವ ಬದಲಿಗೆ ತಮ್ಮ ಊರಿಗೆ ತಲ್ಪಿ ರೋಗದಿಂದ ಸತ್ತರೂ ಚಿಂತೆಯಿಲ್ಲವೆಂದೂ ಗೋಳಾಡುತ್ತಿರುವ ಜನಸಾಮಾನ್ಯರ ಸಂಕಷ್ಟ ಮಾಧ್ಯಮ ಸರ್ವಜ್ಞರಿಗೆ, ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ. ಮನೆಯಲ್ಲಿ ಅಗತ್ಯ ವಸ್ತುಗಳಿಲ್ಲದೇ , ಮಾರುಕಟ್ಟೆಯಲ್ಲಿ ಲಭ್ಯವಾಗದಿರುವ ಪರಿಸ್ಥಿತಿಯಲ್ಲಿ ಜನರು ನಿಸ್ಸಹಾಯಕರಾಗಿ ಬಾಗಿಲು ಮುಚ್ಚಿರುವ ಮಾರುಕಟ್ಟೆಯಲ್ಲಿ ಕಾಣುವುದನ್ನು ನಮ್ಮ ಜನಕ್ಕೆ ಬುದ್ದಿಯೇ ಇಲ್ಲ ವೆಂದು ಕೂಗಾಡುತ್ತಿರುವ ಮಾಧ್ಯಮ ಪ್ರಭೃತಿಗಳು ಮನುಷ್ಯತ್ವವನ್ನು ಮರೆತಿದ್ದಾರೆಯೇ ಎಂದು ಎನಿಸುತ್ತದೆ. ದೇಶದ ಲಾಕ್ ಡೌನ್‌ಗೆ ಜನರು ಸ್ಪಂದಿಸುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಕೊರೊನಾದಿಂದ ಉಂಟಾಗಬಹುದಾದ ಸಾವಿನ ಭೀತಿ (ಈ ಭೀತಿ ಹುಟ್ಟ್ಟಿಸಲು ಮಾಧ್ಯಮಗಳೇ ಕಾರಣ) ಹಾಗೂ ಪೋಲೀಸ್ ಲಾಠಿಯ ಹೆದರಿಕೆ. ಬೀದಿಯಲ್ಲಿ ಜನರ ಸಂಚಾರ ವಿರಳವಾಗಿರುವುದನ್ನೇ ಲಾಕ್ ಡೌನ್ ಯಶಸ್ಸು ಎಂದು ಬಣ್ಣಿಸುವವರಿಗೆ ಕಟಾವಿಗೆ ಬಂದಿರುವ ಬೆಳೆ ಹೊಲದಲ್ಲೇ ಕೊಳೆಯುತ್ತಿರುವುದನ್ನು ಮೌನವಾಗಿ ಕಾಣುವ ರೈತನ ಹತಾಶೆ, ಅಂಗಡಿ ಬಾಗಿಲು ತೆರೆಯಲಾರದೇ ಪರಿತಪಿಸುತ್ತಿರುವ ಸಣ್ಣ ಪುಟ್ಟ ಅಂಗಡಿಕಾರರು ಹಾಗೂ ಉದ್ಯಮಿಗಳ ಹತಾಶೆ ಅರ್ಥವಾಗುವುದಿಲ್ಲ.. ಅಮೇರಿಕಾ ಮತ್ತು ಪಾಶ್ವಾತ್ಯ ದೇಶಗಳನ್ನು ಆರ್ಥಿಕವಾಗಿ ಮಣಿಸಿದ ಚೀನಾ ತೋಡಿದ ಖೆಡ್ಡಾಕ್ಕೆ ಆ ದೇಶಗಳು ಬಿದ್ದಿವೆ. ಪಾಶ್ಚಾತ್ಯ ದೇಶಗಳ ಅಂಧಾನುಕರಣೆ ಮಾಡಲು ಹೋಗಿ ಭಾರತದ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಕಬ್ಬಿಣದ ಪರದೆಯ ಹಿಂದೆ ಕಾರ್ಯನಿರ್ವಹಿಸುತ್ತಾ, ತನ್ನದೇ ಆದ ಅಂತರ್ಜಾಲ ವ್ಯವಸ್ಥೆಯನ್ನು ಹೊಂದಿರುವ ಚೀನಾ ದೇಶವು , ತನ್ನ ದೇಶದಲ್ಲಿ ಕೊರೊನಾ ಪೀಡಿತವಾದ ಪ್ರದೇಶವನ್ನು ಇಡೀ ಜಗತ್ತಿಗೆ ತೆರೆದು ತೋರಿಸಿತು. ಸರ್ಕಾರದ ನಡೆ ವಿರೋಧಿಸುವ ಸಾವಿರಾರು ಜನರನ್ನು ಪ್ರತಿದಿನ ಮಟ್ಟ ಹಾಕುತ್ತಿದ್ದರೂ ಬಾಹ್ಯ ಜಗತ್ತಿಗೆ ಗುಟ್ಟು ಬಿಟ್ಟು ಕೊಡದ ಚೀನಾ , ರೋಗಗ್ರಸ್ಥರ ಕೆಲವರ ಸಾವನ್ನು ಇಡೀ ಜಗತ್ತಿಗೆ ಪ್ರದರ್ಶಿಸತೊಡಗಿತು. ಕೊರೊನಾ ನಿಯಂತ್ರಣಕ್ಕಾಗಿ ಬಲಾತ್ಕಾರದ ಲಾಕ್ ಡೌನ್ ಮಾಡುತ್ತಿದ್ದೇವೆಂದು ಮಾಧ್ಯಮಗಳೆದುರು ಚೀನಾ ಬಿಂಬಿಸಿತು. ಮನೆಮನೆಗಳಲ್ಲೂ ಸಾಮಾಜಿಕ – ಅಂತರ ಕಾದುಕೊಳ್ಳಲು ಕೆಲವೆಡೆ ಪೋಲೀಸ್ ಬಲದಿಂದ ಪ್ರಯತ್ನಿಸುತ್ತಿರುವುದಾಗಿಯೂ ತೋರಿಸಲಾಯಿತು. ಇದಾದ ಕೆಲವೇ ವಾರಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆಯೆಂದು ಘೋಷಿಸಲಾಯಿತು. ಸಾಕಷ್ಟು ಪೂರ್ವತಯಾರಿಯಿಂದ ಚೀನಾ ನಡೆಸಿದ ಈ ನಾಟಕದ ಖೆಡ್ಡಾಕ್ಕೆ ಪಾಶ್ಚಾತ್ಯ ದೇಶಗಳು ಸುಲಭವಾಗಿ ಬಿದ್ದವು. ಅಷ್ಟರಲ್ಲಾಗಲೇ ಕೊರೊನಾ ಪಾಶ್ಚಾತ್ಯ ದೇಶಗಳಲ್ಲಿ ಹಬ್ಬಿದ್ದರಿಂದ ( ಪ್ರತಿ ವರ್ಷ ಚಳಿಗಾಲದಲ್ಲಿ ವ್ಯಾಪಕವಾಗುವ ಶೀತಜ್ವರ ರೀತಿಯ ರೋಗಗಳಂತೆ) ಅವು ಕೂಡಾ ಚೀನಾದ ನಾಟಕವನ್ನು ನಂಬಿ ಲಾಕ್ ಡೌನ್ ಘೋಷಿಸಿಕೊಂಡವು. ಇದರ ಪರಿಣಾಮದಿಂದ ಆರ್ಥಿಕ ಹಿನ್ನೆಡೆಯಾಗಿ ಶೇರು ಮಾರುಕಟ್ಟೆ ಕುಸಿಯತೊಡಗಿತು. ಈ ಸನ್ನಿವೇಶವನ್ನು ನಿರೀಕ್ಷಿಸಿದ್ದ ಚೀನಾ ತನ್ನ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಬಹುರಾಷ್ಟ್ರಿಯ ಕಂಪನಿಗಳ ಶೇರನ್ನು ಖರೀದಿಸಿ ತನ್ನ ಹತೋಟಿಗೆ ತೆಗೆದುಕೊಂಡಿತು. ಸಾಮಾಜಿಕವಾಗಿ, ಆರ್ಥಿಕವಾಗಿ, ಪಾಶ್ಚಾತ್ಯ ದೇಶಗಳಿಂದ ತೀರಾ ಭಿನ್ನವಾಗಿರುವ ಭಾರತವೂ ಲಾಕ್ ಡೌನ್ ಘೋಷಿಸುವ ಪ್ರಮಾದ ಎಸಗಿ ಜನಸಾಮಾನ್ಯರನ್ನು ಹಾಗೂ ದೇಶದ ಅರ್ಥವ್ಯವಸ್ಥೆಯನ್ನು ಸಂಕಷ್ಟಕ್ಕೆ ದೂಡಿತು. ಇಲ್ಲಿ ಕೂಡಾ ಶೇರುಮಾರುಕಟ್ಟೆ ಕುಸಿತ ಕಂಡಿತು. ಬೆರಳೆಣಿಕೆಯ ಶ್ರೀಮಂತರು ಈ ಪರಿಸ್ಥಿತಿಯ ಲಾಭಪಡೆದು, ಸಾರ್ವಜನಿಕರ ಕೈ ಸೇರಿದ್ದ ತಮ್ಮದೇ ಕಂಪನಿಯ ಷೇರುಗಳನ್ನು ಅಗ್ಗದಲ್ಲಿ ಖರೀದಿ ಮಾಡಿ ತಮ್ಮ ಪಾರಮ್ಯ ಮತ್ತು ನಿಯಂತ್ರಣ ಹೆಚ್ಚಿಸಿಕೊಂಡಿದ್ದಾರೆ. ಕೊರೊನಾ ಭಯದಿಂದ ಹೊರಬಂದು ಪುನಃ ದೇಶದ ಹಾಗೂ ವೈಯಕ್ತಿಕ ಆರ್ಥಿಕತೆಯನ್ನು ಬಲಪಡಿಸುವುದು ಈಗ ಅನುಸರಿಸುತ್ತಿರುವ ಅಭಿವೃದ್ಧಿಯ ಮಾದರಿ ಎಂದರೆ ಬಂಡವಾಳವಾದ ಆಧಾರಿತ ಕೇಂದ್ರೀಕೃತ ಅರ್ಥನೀತಿಯನ್ವಯ ಸಾಧ್ಯವಾಗದ ಕೆಲಸ. ಈ ನಿರಾಶಾದಾಯಕ ಸ್ಥಿತಿಯಲ್ಲಿ ಅಭಿವ್ಯದ್ಧಿಯ ಪರ್ಯಾಯ ಮಾದರಿಗಳ ಕುರಿತು ಚಿಂತಿಸುವುದು ಅನಿವಾರ್ಯವಾಗಲಿದೆ. ಉದಾಹಣೆಗಾಗಿ ನಗರಗಳಿಂದ ಕಾರ್ಮಿಕರ ಮರು ವಲಸೆಯಿಂದಾಗಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗದ ಹೊಸ ಸಮಸ್ಯೆ ಎದುರಾಗಲಿದೆ. ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಗಳಿಂದ ಇದು ಪರಿಹಾರ ಕಾಣದು. ಪ್ರಾದೇಶಿಕ ಆರ್ಥಿಕ ಸ್ವಾವಲಂಬನೆ ಸೂತ್ರವೇ ಇದಕ್ಕೆ ಪರಿಹಾರ. ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಪ್ರದೇಶವನ್ನು ಗುರ್ತಿಸಿ ( ಇದು ಒಂದಿಡೀ ರಾಜ್ಯವಾಗಬಹುದು ಅಥವಾ ಒಂದೇ ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಘಟಕಗಳೂ ಆಗಬಹುದು) ಅಲ್ಲಿನ ಪ್ರತಿಯೋರ್ವ ವ್ಯಕ್ತಿಗೂ ಫಲಪ್ರದವಾದ ಉದ್ಯೋಗ ಸೃಷ್ಟಿಸುವ ಸಲುವಾಗಿ ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಉದ್ದಿಮೆ ಸ್ಥಾಪಿಸಲು ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು. ದೆಹಲಿ, ಬೆಂಗಳೂರು, ಚೆನ್ನೈಗಳಲ್ಲಿ ಕೇಂದ್ರೀಕೃತವಾಗಿರುವ ಉದ್ದಿಮೆಗಳನ್ನು ದೇಶದ ಉದ್ದಗಲಕ್ಕೂ ವಿಸ್ತರಿಸುವ ಕುರಿತು ಯೋಚಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ದೊರಕುತ್ತದೆ. “ಕರ್ನಾಟಕದ ಉದ್ಯೋಗ ಕನ್ನಡಿಗರ ಹಕ್ಕು”, “ಕನ್ನಡಿಗರೆಲ್ಲರಿಗೂ ಕರ್ನಾಟಕದಲ್ಲೇ ಉದ್ಯೋಗ” ಎಂಬ ಈಗಾಗಲೇ ಪ್ರಾರಂಭವಾಗಿರುವ ಅಭಿಯಾನ ಇಡೀ ದೇಶವನ್ನು ವ್ಯಾಪಿಸಲಿದೆ. ಬಿಹಾರಿಗಳಿಗೆ ಬಿಹಾರದಲ್ಲೇ ಉದ್ಯೋಗ ಓಡಿಸ್ಸಿಗರಿಗೆ ಓಡಿಶಾದಲ್ಲೇ ಉದ್ಯೋಗ, ಮುಂತಾದ ಪ್ರಾದೇಶಿಕ ಆರ್ಥಿಕ ಸ್ವಾಯತ್ತತೆಯ ಚಳವಳಿಗಳು ಬಹುಬೇಗ ರೂಪುಗೊಳ್ಳಲಿವೆ. ಜಗತ್ತಿನ ಬಹಳಷ್ಟು ರಾಷ್ಟ್ರಗಳು ಲಾಕ್ ಡೌನ್ ಅನುಸರಸುತ್ತಿರುವುದರಿಂದಾಗಿ ಆಯಾತ ನಿರ್ಯಾತಗಳಿಗೆ ತಡೆ ಬಿದ್ದಿದೆ. ಉದಾಹರಣೆಗಾಗಿ ಭಾರತ ಮತ್ತು ವಿಯೇಟ್ನಾಂ ಅಕ್ಕಿಯ ನಿರ್ಯಾತಕ್ಕೆ ತಡೆ ಒಡ್ಡಿವೆ. ಆಹಾರ ಪದಾರ್ಥಗಳ ಆಯಾತವನ್ನೇ ಅವಲಂಬಿಸಿದ ದೇಶಗಳು ಇಂತಹ ಪರಿಸ್ಥಿತಿಯಲ್ಲಿ ಸಂಕಷ್ಟ ಎದುರಿಸಲಿವೆ. ಇದಕ್ಕೆ ಪರಿಹಾರವೆಂದರೆ , ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ವಸ್ತ್ರ, ವಸತಿ, ಶಿಕ್ಷಣ, ಔಷದೋಪಚಾರಗಳ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು. ಚಿಕ್ಕಪುಟ್ಟ ದೇಶಗಳು, ದೇಶದ ಹಂತದಲ್ಲಿ ಸ್ವಾವಲಂಬಿ ಯಾಗುವ ರೀತಿಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತವೆ. ಆದರೆ ಭಾರತದಂತಹ ವೈವಿದ್ಯಮಯ ದೇಶದಲ್ಲಿ ಜೀವನದ ಕನಿಷ್ಠ ಅಗತ್ಯತೆಗಳ ಉತ್ಪಾದನೆಯ ಸ್ವಾವಲಂಬನೆಯನ್ನು ಪ್ರಾದೇಶಿಕ ಹಂತದಲ್ಲೇ ಸಾಧಿಸಬೇಕಾಗುತ್ತದೆ. ಪ್ರಕೃತಿ ಎಂದೂ ಪಕ್ಷಪಾತಿಯಲ್ಲ, ಪೃಥ್ವಿಯ ಎಲ್ಲೆಡೆಗೂ ಸಂಪನ್ಮೂಲಗಳನ್ನು ನೀಡಿದೆ ಹಾಗೂ ಅವುಗಳಲ್ಲಿ ವೈವಿಧತೆಯನ್ನು ತುಂಬಿದೆ. ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯನ್ನು ಗುರ್ತಿಸಿ, ಅವುಗಳನ್ನು ಸೂಕ್ತ ವಿಧಾನದಲ್ಲಿ ಬಳಸಿ, ಆ ಪ್ರದೇಶದ ವಾಸಿಗಳೆಲ್ಲರಿಗೂ ಉತ್ತಮವಾದ ಬದುಕು ಕಟ್ಟಿಕೊಳ್ಳುವ ರೀತಿಯನ್ನೂ ಕಂಡುಕೊಳ್ಳುವ ಬುದ್ಧಿಮತ್ತೆಯನ್ನು ಮಾನವನಿಗೆ ನೀಡಿದೆ. ನಿಸರ್ಗದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಮಾನವನ ಅಹಂಕಾರ ಚಿಕ್ಕ ಅಣು ಕೊರೊನಾ ವೈರಸ್ ಮುಖೇನ ಧೂಳೀಪಟವಾಗಿದೆ. ಇನ್ನು ಮುಂದಾದರೂ ಪರಿಸರ ಪೂರಕ ಅಭಿವೃದ್ಧಿ ಪಥದಲ್ಲಿ ನಡೆಯುವಂತೆ ಎಚ್ಚರಿಕೆಯನ್ನು ನೀಡಿದೆ. ಕೊರೊನಾ ವೈರಾಣು ಹರಡುವುದು ಸಂಪರ್ಕ, ಸ್ಪರ್ಶ, ಗಾಳಿಯ ಮೂಲಕ ಅಂದರೆ ಸ್ಥೂಲ ವಾಹಕಗಳ ಮೂಲಕ. ಇದಕ್ಕಿಂತ ಭಿನ್ನವಾದ, ಶಬ್ದಗಳ ಮೂಲಕ ಹರಡಬಲ್ಲ, ವಿಚಾರಗಳ ಮುಖೇನ ಪ್ರಸಾರಗೊಳ್ಳಬಲ್ಲ, ಅಣುಗಳ ಕುರಿತು

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸ್ಮಿತಾ ರಾಘವೇಂದ್ರ ಗಜಲ್ ಎಡ ಬಿಡದೇ ಸುಳಿದಾಡುವ ನೋವು ಹಿಂಸೆ ನೀಡುತ್ತದೆ. ಗವ್ ಎನ್ನುವ ತಣ್ಣಗಿನ ಮೌನ ಉಸಿರುಗಟ್ಟಿಸುತ್ತದೆ. ಗಾಳಿಯಲಿ ವಿಹರಿಸುವಾಗ ಭಾವಗಳು ಸದಾ ನಿರಾಳ/ ಬಣ್ಣದ ಚಿತ್ರಗಳ ಹಿಂದಿನ ಅಳಲು ಹೆಪ್ಪುಗಟ್ಟುತ್ತದೆ. ನೋಟಕ್ಕೆ ನಿಲುಕಿದ್ದೆಲ್ಲ ನಂಬಲರ್ಹವೇನು ಇಲ್ಲಿ/ ತಾಳ್ಮೆ ಕಳೆದುಕೊಂಡಾಗ ಸತ್ಯವೂ ಸುಳ್ಳೆನಿಸುತ್ತದೆ ತಡರಾತ್ರಿಯಲಿ ಬೆಚ್ಚಿ ಬೆವರೊಡೆದ ಒದ್ದೆ ನೆನಪು / ಕದ ಮುಚ್ಚುವಾಗ ಅಂತರಂಗ ತುಟಿ ಬಿರಿಯುತ್ತದೆ. ಆಡಿಕೊಂಬವರ ಅನುರಾಗವೋ ಭ್ರಮೆಯ ಮುಸುಕು/ ಆಪ್ತ”ಸ್ಮಿತ”ಕುಹಕವೆನಿಸಿದಾಗ ಎಲ್ಲವೂ ಸ್ತಬ್ಧವಾಗುತ್ತದೆ **************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಈ ದಾರಿಗಳಿಗೆ ಎಷ್ಟೊಂದು ಮುಖ ಸತ್ಯಮಂಗಲ ಮಹಾದೇವ ಬದುಕು ಒಂದು ಜೀವನ ನೂರು ಮೊಗ ಒಂದು ಮುಖವಾಡ ಹಲವು ಪದ್ಯ ಒಂದೇ ಅನೇಕ ಪದಗಳು ಜೀವ ಒಂದೇ ಜೀವಿಸುವ ದಾರಿ ನೂರು ಆಯ್ಕೆಗೊಂದು ಮುಖ ನಡೆಗೊಂದು ಮುಖ ನೋಟದ ದಾರಿಗೂ ಒಂದು ಮುಖ ಮುಖವಾಡದೊಳಗೆ ಉಸಿರುಕಟ್ಟುವಾಗ ಝಳ ಝಳನೆ ಉದುರುವ ನೀರು ಉಪ್ಪು ನದಿಯ ನೋಡಿ ಖುಷಿ ಇಟ್ಟೆ ಕಾಲು ಒಳಸೆಳೆತದ ದಾವಂತ ಬೊಗಸಯಲ್ಲೆ ಹಿಡಿದು ಕುಡಿದೆ ಜೀವ ಉಳಿಸಿಕೊಂಡೆ ಈಗ ಜೀವ ಆ ನೀರಿನ ಹೆಸರಲ್ಲಿದೆ ನದಿಗೂ ಮುಖವಾಡವಿತ್ತು ನನ್ನ ಉಸಿರಿಗೂ ಅದರ ಸೋಂಕಿದೆ ಕರೋನ ಬಂದಿದ್ದರೆ ಪರವಾಗಿಲ್ಲ ಅದು ನೆಗಡಿ ಮೂಗು ಇರುವವರೆಗೆ ತಪ್ಪದ ನೇಹ ಹೊರಗಡೆ ಹೆಜ್ಜೆ ತಗೆದರೆ ನನ್ನ ಹೆಜ್ಜೆ ಈ ನೀರ ಗುರುತು ನೆಲಕ್ಕೊಂದು ನನ್ನ ಹೆಜ್ಜೆಯ ಮುಖವಾಡ ಬಿಸಿಲಿಗೆ ಆವಿಯಾದ ಮುಖ ಕಾಲಲ್ಲೇ ಉಳಿದ ಇನ್ನೊಂದು ಮುಖ ನಡಿಗೆಯೊಳಗೊಂದು ನುಡಿಯೊಳಗೊಂದು ಪಾದರಕ್ಷೆಯೊಳಗೊಂದು ತನ್ನ ತುಂಬಿಕೊಂಡ ಕಾಲುಚೀಲದೊಳಗೆ ಈ ಎಲ್ಲಾ ವರ್ತಮಾನಗಳ ಕಂಡು ಬೆವೆತು ಬೆಂಡಾಗಿ ಮತ್ತೆ ಚಿಗುರುವ ಆಸೆ ಈ‌ ಆಸೆಗೊಂದು ಮುಚ್ಚಿದ ಮುಖ ಇತ್ತೀಚೆಗೆ ಈ ಹೃದಯವೂ ಹೇಳಿದ ಮಾತು ಕೇಳುವುದಿಲ್ಲ ಜೀವಕ್ಕೆ ನದಿಯ ಸೆಳವು ನದಿಗೆ ಮುಖವಾಡಗಳ ಸೆಳವು ಮುಖವಾಡಗಳ ಹೊರುವ ಊರದಾರಿಯ ತುಂಬಾ ಈಗ ಮುಖ ಪುಸ್ತಕಗಳ ಮಾಡಿದ್ದಾರೆ ಮುಖಪುಸ್ತಕಗಳ ಜಾತ್ರೆ. ಅವರದೇ ಮುಖ ಅವರೊಳಗೊಂದು ಮೊಗ ಮಾನಕ್ಕೊಂದು, ಸತ್ಯಕ್ಕೊಂದು ಸುಳ್ಳಿಗೊಂದು ಮಾನವತೆಗೂ ಒಂದು ರಾಕ್ಷಸತ್ವಕ್ಕೂ ಒಂದು ರೋಗಕ್ಕೂ ಒಂದು ಆರೋಗ್ಯಕ್ಕೂ ಒಂದು ನದಿಗೆ ಹಲವು ದಾರಿ ನದಿಗೆ ಹೊರಟವನಿಗೂ ಹಲವು ದಾರಿ ಹರಿಯುವ ನದಿಗೆ ಮೈಯೆಲ್ಲಾ ದಾರಿ ಈ ದಾರಿಯು ಹರಿಯುವಾಗ ಮುಖವೇ ಒಂದು ದಾರಿ ಮುಖವಾಡಗಳಿಗಂತೂ ಭಿನ್ನ ದಾರಿ. ********

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಹಸಿವು ಮತ್ತು ಬಾಯಾರಿಕೆ ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ:ಡಾ.ಬೆಳ್ಳೂರು ವೆಂಕಟಪ್ಪ ಧರ್ಮಛತ್ರದ ಕಾವಲುಗಾರನಾಗಿದ್ದ ವೃದ್ದನೊಬ್ಬ ಕೇಳಿದ: ಹಸಿವು ಮತ್ತು ಬಾಯಾರಿಕೆ ಬಗ್ಗೆ ತಿಳಿಸಿ: ಪ್ರವಾದಿ ನಗುತ್ತಾ ಹೀಗೆ ಹೇಳಿದ: ಬೆಳಕನ್ನು ಹೀರಿ ಬೆಳೆವ ಮರಗಿಡಗಳ ರೀತಿ ತಂಗಾಳಿಯ ಜತೆ ಸುಗಂಧ ಬಿರಿವ ಭೂಮಿಯ ಮೇಲೆ ನಿಮಗೆ ಬದುಕುವುದಕ್ಕೆ ಸಾಧ್ಯವೇ? ಆದರೆ ಕೊಂದು ತಿನ್ನುತ್ತೀರಿ ಪ್ರಾಣಿಗಳ ಹಾಲನ್ನು ಕದ್ದು ಕುಡಿಯುತ್ತೀರಿ ಹಸಿವು ಮತ್ತು ಬಾಯಾರಿಕೆ ನೀಗಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿರುವ ಈ ಪ್ರಕೃತಿ ನಿಯಮ ಪೂಜನೀಯವಾಗಿದೆ ನಿಮ್ಮ ವಾಸದ ಮನೆಗಳನ್ನು ಕಟ್ಟಲು ಆ ಮುಗ್ಧ ಕಾಡಿನ ಮರಗಳನ್ನು ಬಲಿ ಕೊಡುತ್ತೀರಿ ಇನ್ನೂ ಮುಗ್ಧತೆಯ ಪ್ರತಿಕವಾಗಿರುವ ನಿಮಗೆ ಪರಿಶುದ್ಧ ಗುಣದ ಕಾಡು ಎಲ್ಲವನ್ನೂ ತ್ಯಾಗ ಮಾಡಿದೆ. ಆಡು ಕುರಿ ಕೋಳಿ ಇತರೆ ಯಾವುದಾದರೂ ಜೀವಿಗಳನ್ನು ಕೊಲ್ಲುವಾಗ ನೀವು ನಿಮ್ಮ ಹೃದಯಕ್ಕೆ ಹೀಗೆ ಹೇಳಿ “ಯಾವ ನಿಯಮ ನಿಮ್ಮನ್ನು ಕೊಲ್ಲುವಂತೆ ಮಾಡಿದೆಯೊ ಅದೇ ನಿಯಮ ನನ್ನನ್ನೂ ಕೊಂದು ನನ್ನ ದೇಹದ ಮಾಂಸವನ್ನು ಬೇರೆ ಜೀವಿಗಳು ಸೇವಿಸುತ್ತವೆ” “ಕೊಂದು ತಿನ್ನಲು ಯಾವ ಪ್ರಕೃತಿ ನಿಮ್ಮನ್ನು ನನ್ನ ಕೈಲಿರಿಸಿದೆಯೊ ಅದೇ ಪ್ರಕೃತಿ ನನ್ನನ್ನು ಇನ್ನೊಂದು ಕಾಣದ ಕೈಯಲ್ಲಿ ಇರಿಸಿದೆ” “ನನ್ನ ರಕ್ತ ಮತ್ರು ನಿಮ್ಮ ರಕ್ತ ಬೇರೇನೂ ಅಲ್ಲ ಸ್ವರ್ಗದ ಮರಗಳ ಬೇರುಗಳಿಗೆ ಜೀವರಸ ಮಾತ್ರ” ಹಾಗೆಯೇ ಸೀಬೆಯ ಹಣ್ಣನ್ನು ಕಚ್ಚಿ ತಿನ್ನುವಾಗ ನಿಮ್ಮ ಹೃದಯಕ್ಕೆ ಕೇಳಿಸುವಂತೆ ಹೀಗೆ ಹೇಳಿ: “ನಿಮ್ಮ ಬೀಜಗಳು ನನ್ನ ಹೊಟ್ಟೆಯಲ್ಲಿ ಸೇರಿದ್ದು ಅವು ಮುಂದೆ ನಳನಳಿಸುವ ಹೂವಾಗಿ ನನ್ನ ಹೃದಯದಲ್ಲಿ ಅರಳುತ್ತವೆ “ “ನಿನ್ನ ಸುಗಂಧ ನನ್ನ ಉಸಿರಾಗಲಿ ಎಲ್ಲ ಋತುಗಳಲ್ಲಿ ಕೂಡಿ ಬಾಳೋಣ” ಅದೇ ತರ ಶರತ್ಕಾಲದ ದ್ರಾಕ್ಷಿತೋಟದಿಂದ ಕಿತ್ತು ತಂದ ಹಣ್ಣುಗಳನ್ನು ತುಳಿದು ವೈನ್ ತಯಾರಿಸುವಾಗ ಕೂಗಿ ಹೇಳಿ ನಿಮ್ಮ ಹೃದಯಕ್ಕೆ: “ನಾನೂ ಕೂಡ ಒಂದು ದ್ರಾಕ್ಷಿತೋಟ ನನ್ನ ಎಲ್ಲ ರಕ್ತ ಮಾಂಸ ದ್ರಾಕ್ಷಿ ಹಣ್ಣುಗಳ ರೀತಿ ತುಳಿಯಲ್ಪಟ್ಟು ದ್ರಾಕ್ಷಾರಸವಾಗುತ್ತವೆ” “ನಾನು ಹೊಸ ವೈನ್ ಅಗಿ ಅನಂತ ಕಾಲದ ಪಾತ್ರೆಗಳಲ್ಲಿ ಬಂಧಿಯಾಗುತ್ತೇನೆ” “ಚಳಿಗಾಲಕ್ಕೆ ನೀವು ಕುಡಿವ ಆ ವೈನಿನ ಪ್ರತಿ ಕಪ್ಪಿನಲ್ಲೂ ಸೇರಿ ನಿಮ್ಮ ಹೃದಯದ ಹಾಡಾಗುತ್ತೇನೆ” “ಆ ಹಾಡಿನಲ್ಲಿ ಶರತ್ಕಾಲದ ದ್ರಾಕ್ಷಿ ತೋಟ ಮತ್ತು ವೈನ್ ಮತ್ತೆ ನೆನೆಪಾಗಲಿ” ***********

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಮರಳಿ ಕಟ್ಟಬೇಕಲ್ಲವೇ ಸಂಮ್ಮೋದ ವಾಡಪ್ಪಿ ಹದವಾದ ಮಣ್ಣ ಅಡಿಯಿಂದ ತೇವವಾದ ಕಣ್ಣು, ನೋವುಂಡ ಒಡಲಿಂದ ಎದ್ದು‌‌ನಿಲ್ಲುತಿದೆ ಒಂದು ಮೊಳಕೆ ಚಿಗುರೊಡೆದು ಟಿಸಿಲಾಗಿ ಹರಡಿದೆ ಬೆಂದ‌ ಧರೆಗೆ ಆಗಸದ ಮುತ್ತು ಈ ಕೂಸಿಗಾಗಿಯೆ‌ ಮೇಲೇಳಲೆಂದು ಕೂಸು ನಗುನಗುತ ಉದರದಿ ಸರಿದು ಕಾಲಿಗೆ ಶಕ್ತಿ ಅಲ್ಪ, ಅಂಬೆಗಾಲಲಿ ಎದ್ದು ಹಗಲಿರುಳು ಓಟ ಕಲಿಸುತಿದೆ ಜೀವನ ಪಾಠ ತಾಯ ಸೆರಗಲಿ ಧೈರ್ಯ, ವಸುದೇವನ ಮೌಲ್ಯ ಎತ್ತರವಾಗುತಿದೆ ಬಾಳು, ಧ್ಯೇಯಗಳ ತುಂಬಿ ಕೌಶಲ್ಯಲ ಅತ್ತ ಇತ್ತ, ಕಲಿಕೆ ಅನುಭವಗಳು, ನವ್ಯ‌ಗ್ರಹಿಕೆ ನಡೆಯು ನುಡಿಯು,ಹೊಸ ಆಯಾಮಗಳು ಓಟದಿ‌ ಗೆಲುವಿನ‌ ರುಚಿ, ಹಸಿವು ಹೆಚ್ಚಾಯಿತು ಗೆಳೆತನ, ಪ್ರೀತಿ, ಹಗೆ, ಆಸೆ, ದುರಾಸೆ ಬಾಗದಂತೆ ಆಗಿದ್ದು ಹೆಮ್ಮರ, ನೆಲದಿ ಮಹಾ ಸಮರ ಮೇಲೆದ್ದು‌ ಕಾಣದೇ ಹೋಯಿತು ಕೆಳಗಿನ‌ ಬದುಕು ಮೌಲ್ಯ ಬಚ್ಚಿಟ್ಟು, ಕಾಂಚಾಣಕ್ಕೆ ಚೀಲ ಒಡ್ಡಿ ನಿಂತದ್ದು ಮಗುವೆ ಅರಿ, ತಿಳಿಯಾಗಿಸು‌ ಮನವ ಬಾಗು, ಬೀಗುವುದೇಕೆ? ಅಂತರಾತ್ಮದಿ‌ ಮಾತೆಯ ಸಂಸ್ಕಾರದ ಕೂಗು..‌ಪ್ರತಿದ್ವನಿ ಕತ್ತಲಲಿ ಜೋರಾದ ಓಟದಿ ಬಿದ್ದಾಗ, ಸುತ್ತಲೂ ಅಪಹಾಸ್ಯದ‌ ನಗುವಿನ‌ ದ್ವನಿ ಇರಲಿ, ತಾಳು ಸರಿ ತಪ್ಪುಗಳ ಶೋಧನೆಯಲಿ ಚಲನೆ ಓಡುವಾಗ ಕಲಿಯಲೇ ಬೇಕು‌‌‌ ಪಾಠಗಳ, ತತ್ವಗಳ ಬಿದ್ದ ನೋವಿಗೆ ಕುಗ್ಗದೆ,‌‌‌ ಭದ್ರವಾಗಿ ಹಿಡಿದ ಕೈಗಳ ಬಲವಿಹುದು ಕಟ್ಟಡಗಳು ಕುಸಿದು ಬೀಳಬಹುದು ಬದುಕಿನ ಬಿರುಗಾಳಿಯಲಿ ಆತ್ಮಬಲದ, ಸಂಕಲ್ಪದಲಿ‌ ಕಟ್ಟಲೇ‌ಬೇಕಲ್ಲವೇ ಎತ್ತರಕೆ ಏರಲು ಮರಳಿ ಮರಳಿ…. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅವಳು ನಾಗರೇಖಾ ಗಾಂವಕರ ಅವಳು -1 ಬಿಂಬಕ್ಕೆ ಸರಿಯಾಗಿ ಪ್ರತಿಬಿಂಬ ಮೂಡಿಸುವ ಕನ್ನಡಿಯ ನಾಜೂಕಿನಿಂದಲೇ ಕಾಯ್ದಿರಿಸಿದ್ದಾಳೆ ಅವಳು ಕನ್ನಡಿ ಹೇಳುತ್ತಲೇ ಇರುವ ಬಿಂಬ ಪ್ರತಿಬಿಂಬದ ಸರಳ ಸೂತ್ರ ಆಕೆಗೇನೂ ಅರ್ಥವಾಗುವುದಿಲ್ಲ. ತಲ್ಲಣಗಳ ತಕ್ಕಡಿ ಹಿಡಿದೇ ಎದುರು ಬದುರಾಗುವ ಮುಖಗಳು ಬಿಂಬ ಪ್ರತಿಬಿಂಬವಾದರೂ ಒಂದನ್ನೊಂದು ಬೆಂಬಲಿಸುವುದೇ ಇಲ್ಲ ಬಿಂಬದ ಎಡಕೈ ಎತ್ತಿದರೆ ಕನ್ನಡಿಯಲ್ಲಿ ಏರುವ ಬಲಗೈ ಕನ್ನಡಿಯ ಬೆನ್ನಿಗಂಟಿದ ಪಾದರಸದ ಲೇಪನ ಅಲ್ಲಲ್ಲಿ ಕಿತ್ತು ಹೋಗಿದೆ ಈಗೀಗ ಬಿಂಬ ಪ್ರತಿಬಿಂಬ ಮೂಡಿಸುವುದು ಕನ್ನಡಿಗೂ ಕಷ್ಟವಾಗಿದೆ. ಆದರೂ ಆ ಕನ್ನಡಿಯಲ್ಲಿಯೇ ಮೂಡುವ ಮುಖವನ್ನು ದಶರ್ಿಸಿಕೊಳ್ಳುತ್ತ ಹಣೆಬೊಟ್ಟನ್ನು ನಿಧಾನಕ್ಕೆ ಬೆರಳಿಂದ ಒತ್ತಿ ಲೇಪಿಸಿಕೊಳ್ಳುತ್ತ ಮುಗುಳ್ನಗುತ್ತಾಳೆ ಅವಳು ಅವಳು- 2 ಅವನ ಬಿಂಬವನ್ನು ಪ್ರತಿಬಿಂಬವನ್ನು ಹಗಲೂ ಇರುಳು ಕೊರೆದು, ಕೆತ್ತಿ ತಿವಿದು ಮೊನೆದು ತನ್ನದನ್ನಾಗಿಸಿಕೊಂಡಿದ್ದಾಳೆ ಅವಳು ಬರೀ ಗದ್ದಲದ ನಡುವೆ ಕಳೆದುಹೋಗುತ್ತಿರುವ ಅವನನ್ನು ಮಾನಸ ಲೋಕದಲ್ಲೇ ಜಪಿಸಿ ಸಿದ್ದಿ ಮಾಡಿಕೊಂಡವಳ ಮರೆತು ಹೋಗುವ ಬಣ್ಣ ಬಣ್ಣದ ಸೆರಗ ಮರೆಯಲ್ಲಿ ಮುದುಡಿ ಬಿದ್ದವನ ನಿರಾಕರಣಕ್ಕೆ ಮುನಿಯುವುದಿಲ್ಲ ಅವಳು ಸ್ಪರ್ಷಕ್ಕೆ ಸಿಗದ ಮುತ್ತುಗಳು ಹವಳದ ದಂಡೆಗಳಂತೆ ಸಾಲಾಗಿ ಹೆಣೆದು ಕೂತಿವೆ ಮನದ ಮೂಲೆಯಲ್ಲಿ ನಿಯತ ಭೋರ್ಗರೆವ ಕಡಲಿನ ಆರ್ಭಟಕ್ಕೆ ಕಿವುಡಾದ ಅವನನ್ನು ಶಪಿಸುವುದಿಲ್ಲ ಅವಳು ದಹಿಸಬೇಕು ಒಳಗಿನ ಉರಿ ಉಕ್ಕಿ ಚೆಲ್ಲದಂತೆ ಸ್ಪೋಟಗೊಳ್ಳದಂತೆ, ಹದವಾಗಿ ಬೇಯಬೇಕು,ಕೆನೆಗಟ್ಟಬೇಕು ಪ್ರೀತಿ ಎನ್ನುವವನ ಧಿಕ್ಕರಿಸುವುದಿಲ್ಲ ಅವಳು ದೇಹವೊಂದು ಪದಾರ್ಥವಾಗದೇ ಕಲ್ಪಿತ ಭ್ರಮೆಗಳಲ್ಲಿ ಹುಟ್ಟುವ ಅವನನ್ನು ಆವಾಹಿಸಿಕೊಳ್ಳುತ್ತಾಳೆ ಆಘ್ರಾಣಿಸುತ್ತಾಳೆ, ಬಿಚ್ಚಿ ಹರಹಿದ ಹೆರಳುಗಳ ನಡುವೆ ಬಂಧಿಸುತ್ತಾಳೆ ಪರವಶಳಾಗುತ್ತಾಳೆ ಅವಳು ಅವನಿಲ್ಲದೇ ಅವಳ ದೇವರು ಇರುವುದಾದರೂ ಹೇಗೆ? ಆ ದೇವನಿಗಾಗಿ ಕಾಯುತ್ತಾಳೆ ಅವಳು ಕಾಯತ್ತಲೇ ಇರುತ್ತಾಳೆ ಅವಳು. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವರ್ಕ್ ಫ್ರಂ ಹೋಂ ಸುಜಾತಾಗುಪ್ತ ವರ್ಕ್ ಫ್ರಂ ಹೋಂ ವರ್ಕ್ ಫ್ರಂ ಹೋಂ ಕೇಳಲು ಖುಷಿಯಾಯಿತು ಕರೋನ ಬಿಸಿಯಲು ಮನ ತಂಪಾಯ್ತು ಪತಿರಾಯನ ಸಾಂಗತ್ಯಕೆ ವಾರಾಂತ್ಯವೇ ಬೇಕಿಲ್ಲ ಅಹಾ..ಎನಿಸಿತು ಆ ಕ್ಷಣ. ಮನೆಯಲ್ಲೇ ಇದ್ದರೂ ಕಂಪ್ಯೂಟರ್ ಸಂಗ ಉಷೆ ಸಂಧ್ಯೆಯ ಸ್ವಾಗತಿಸೋತನಕ ತಪ್ಪದ ಬವಣೆ.. ಆಯ್ತು ಮನೆಯೇ ಕಛೇರಿ.. ಕರೋನ ಬೆನ್ನಲೆ ಬಂತು ಮಕ್ಕಳಿಗೆ ಬೇಸಿಗೆ ರಜೆ ಶಾಲೆಯು ಸ್ವೇಚ್ಛೆಯ ನೀಡಿತ್ತು ಕರೋನ ಅದ ನುಂಗಿತ್ತು ರಜೆಯ ಮಜದ ಮೂಡಲ್ಲಿದ್ದ ಮಕ್ಕಳಿಗೆ ಗೃಹ ಬಂಧನ… ಅದೆಂಥ ವಿಪರ್ಯಾಸ.. ಮೌನದೆ ಕೂರಲು ಗೊಂಬೆಗಳಲ್ಲ ಸ್ವಾಮಿ.. ಅವರು ಚಿನ್ನದಂತ ಚಿಣ್ಣರು ಆಡಿ ಕುಣಿದು ಕಿರುಚಾಡಿದರೆ ಪತಿರಾಯರಿಗೆ ಕಿರಿಕಿರಿ ಬಾಯ್ಮುಚ್ಚಿ ಕೂರಲು ಪುಟಾಣಿಗಳಿಗೆ ಕಸಿವಿಸಿ ಎಲ್ಲಿಯದು ಈ ಪರಿತಾಪ.. ಗಂಟೆಗೊಮ್ಮೆ ಬಿಸಿ ಕಾಫಿ- ಚಹ ಇಲ್ಲದಿರೆ ಪತಿಗೆ ತಲೆ ಬಿಸಿಯಂತೆ ಮಾಡು ತೊಳೆ ಮಾಡು ತೊಳೆ ನಂಗೆ ಮೈಯೆಲ್ಲಾ ಬಿಸಿ ಬಿಸಿ .. ಬೇಸರ ಕಳೆಯೆ ಅಪ್ಪಮಕ್ಕಳಿಗೆ ಕುರುಕುಲು ತಿಂಡಿ ಬೇಕಂತೆ ರೇಷನ್ನೇ ಮುಗಿದಿರೆ ನಾ ತರಲಿ ಎಲ್ಲಿಂದ ನೀವು ಹೇಳಿ ಸ್ವಾಮಿ.. ವರ್ಕ್ ಫ್ರಾಂ ಹೋಂ ಲಿ ನಾ ಅಡುಗೆ ಮನೆಯಲ್ಲಿ ಬಂಧಿ ಅಪ್ಪ ಮಕ್ಕಳನಡುವೆ ಬಡವಾದೆ ಟಿ.ವಿ ಬಂದ್ ಆಯ್ತು ಮೊಬೈಲ್ ಪೂರ್ತಿ ಕಟ್ ಆಯ್ತು ಗೆಳತಿಯರ ಸಂಗ ಮರೆತೋಯ್ತು ವರ್ಕ್ ಫ್ರಂ ಹೋಂಸಾಕಾಯ್ತು.. ಶ್ರೀ ರಘುರಾಮ ನಿನಗೆ ಶರಣು ಮಹಾಮಾರಿಯ ಸಂಹರಿಸು ಜಗಕೆ ಆರೋಗ್ಯ ನೀಡು ಪತಿಯ ಕಛೇರಿಗೆ ಕಳುಹಿಸು ಮಕ್ಕಳ ಶಾಲೆಗೆ ಕಳುಹಿಸು ನಂಗೆ ನೆಮ್ಮದಿ ನೀಡೋ ಕರುಣಾಮಯಿ ಶ್ರೀ ರಾಮ.. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪದ್ಯ ಸೌತೇಕಾಯಿ ಅಶ್ವಥ್ ಪದ್ಯ ಸೌತೇಕಾಯಿ ರಾಮನವಮಿಗೆಂದೇ ಪೋಷಿಸಿ ಪಾಲಿಸಿ ಬೆಳೆಯಿಸಿದ ಸೌತೇಬಳ್ಳಿ ನೀರುಣಿಸಿ ಹೂವರಳಿ, ಈಚು ಕಾಯಾಗಿ ಹೊರಳಿ ಮರಿ ಮುನ್ನೂರೆಣಿಸುವ ಉದ್ದ ಬಳ್ಳಿ ರುಚಿಯಲ್ಲೆಣೆಯಿಲ್ಲ ಹೋಲಿಕೆಯೆಲ್ಲಾ ಸಣ್ಣ ಹೇಳತೀರದ ಹೊಳಪು, ಕೆನೆಯಂಥಾ ಬಣ್ಣ ಬಾಯಿ ತಾಕಿದರಾಗ ಗರಿಗರಿಯಾದ ಸದ್ದು ನಾಲಗೆಯು ಬಾಚಿ ಮಾಡುವುದು ಮುದ್ದು ತಣ್ಣನೆಯ ಆ ಅನುಭವ ತರಿಸುವುದು ಮುಗುಳ್ನಗೆ ಹೊತ್ತ ಮುಖವನ್ನೊಂದು ಎಂಥಾ ಬದಲಾವಣೆ , ಮನ ಧಿಮ್ಮಗೆ ಸಾಧ್ಯವುಂಟೇ ಒಂದು ಸೌತೇಕಾಯಿಗೆ ನುಂಗಿಯಾದ ಮೇಲೆ ರುಚಿಯೆಲ್ಲ ಮಾಯ ಆದರೂ ಮುಗಿದೇ ಹೋಯಿತೆನ್ನುವ ಗಾಯ ಬಾಯಿರುಚಿಗೆ ಕಚ್ಚಿದ ಈ ಕಾಯಿಪಲ್ಯ ಇದಕೂ ಬೇಕೇ ಒಂದು ದಿಟವಾದ ಪದ್ಯ? ಎಲ್ಲ ಸರಿಯಿದ್ದರೆ ಆಗಬೇಕಿತ್ತು ಇಂದು ಹೆಸರುಬೇಳೆ ಜೊತೆಗೆ ಕೊತ್ತಂಬರಿ ತಂದು ಹಣ್ಣು ಹೊಳೆಸಿದ ಬಣ್ಣ ಕನಕಾಂಬರಿ ಪಾನಕದ ಜೊತೆಗೆ ಕೊಡುವ ಕೋಸಂಬರಿ! ಸೀತಾಪತಿ ಹೆಸರಲಿ ಎಂಥಾ ಯೋಜನೆಯಿತ್ತು ಕಿತಾಪತಿಯ ಜೊತೆ ಅಮಲು ಏರಿಸಲಿತ್ತು ರಾಮನವಮಿಗೆಂದೆಣಿಸಿದ್ದ ಕೋಸಂಬರಿ ಬುಸುಗುಡುತಲಾಯ್ತು ದುಷ್ಟ ಕಾದಂಬರಿ! ***********

ಕಾವ್ಯಯಾನ Read Post »

You cannot copy content of this page

Scroll to Top