ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ವಿಭಿನ್ನ

Image result for imagesofstick of gandhi

ರೇಶ್ಮಾ ಗುಳೇದಗುಡ್ಡಾಕರ್

ಕೋಟೆ ಕಟ್ಟುವೆ ಭಾವನೆಗಳ ನಡುವೆ
ಎಂದವ ಹೆಣವಾಗಿ ಬಿದ್ದನು
ಒಡೆದ ಕನಸುಗಳ ಅವಶೇಗಳ
ಮಧ್ಯೆ ….

ಮಾನವತೆಯ ಹರಿಕಾರ
ನೋಂದಮನಗಳ ಗುರಿಕಾರ ಎಂದು
ನಕಲಿ ಫೋಸು ಕೊಟ್ಟವನು
ಎಡಬಿಡದೆ ಭಾಷಣಗಳ
ಸುರಿಮಳೆಗೈದವನು ಬಹಳ ದಿನ
ಬಾಳಿಕೆ ಬರಲಿಲ್ಲ ಸತ್ಯಗಳ ಮುಂದೆ ….

ಮಾತಿನಲ್ಲೆ ಬಂದೂಕು ಇಟ್ಟವನು
ಮುಗ್ದ ಮಂದಿಯ ಚಿತ್ತ ಕದಲಿದನು
ಅನಾಯಾಸವಾಗಿ ಗೆಲುವು ಪಡೆಯಲು
ನಿರಂತರವಾಗಿ ಹೆಣಗುತಿರುವನು
ಗುಂಪುಗಳ ನಡುವೆ ….

ಹಿಡಿ ಮಣ್ಣಿಗೆ ಸಾರವ ಪರೀಕ್ಷಿಸುವವರು
ಬದುಕಿನ ಸಾರವ ಹೊತಿಟ್ಟು
ಮುಖವಾಡಗಳಿಗೆ ಬಣ್ಣ ಹಚ್ಚುವರು

ಸರಳತೆಯೇ ಉಸಿರು ಎಂದು
ಆದರ್ಶಗಳೇ ಬದುಕು ಎಂದು
ಅಹಿಂಸೆಯೇ ದೇವರೆಂದವರು
ಇಂದು ಎಂದೆಂದು “ಮಹಾತ್ಮ “
ನೇ ಅಗಿರುವರು ……

*******

About The Author

1 thought on “ಕಾವ್ಯಯಾನ”

Leave a Reply

You cannot copy content of this page

Scroll to Top