ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

“ನಾನು ದಣಿದಿದ್ದೇನೆ” ಮೂಲ: ಟಿನ್ಜಿನ್ ತ್ಸುನದು(ಟಿಬೇಟಿಯನ್ ಕವಿ) ಕನ್ನಡಕ್ಕೆ: ಕಮಲಾಕರ ಕಡವೆ “ನಾನು ದಣಿದಿದ್ದೇನೆ” ನಾನು ದಣಿದಿದ್ದೇನೆ,ನಾನು ದಣಿದಿದ್ದೇನೆ ಮಾರ್ಚ ಹತ್ತರ ಆಚರಣೆ ಮಾಡುತ್ತಧರ್ಮಶಾಲಾದ ಗುಡ್ಡಗಳಿಂದ ಚೀರುತ್ತ. ನಾನು ದಣಿದಿದ್ದೇನೆ,ನಾನು ದಣಿದಿದ್ದೇನೆ ಹಾದಿಬದಿ ಸ್ವೇಟರುಗಳನ್ನ ಮಾರಾಟ ಮಾಡುತ್ತನಲ್ವತ್ತು ವರ್ಷಗಳ ಕಾಲಧೂಳು, ಎಂಜಲುಗಳ ನಡುವೆ ಕುಳಿತುಕೊಳ್ಳುತ್ತ. ನಾನು ದಣಿದಿದ್ದೇನೆಅನ್ನ, ದಾಲ್ ತಿನ್ನುತ್ತಾಕರ್ನಾಟಕದ ಜಂಗಲ್ಲುಗಳಲ್ಲಿ ದನ ಕಾಯುತ್ತ. ನಾನು ದಣಿದಿದ್ದೇನೆಮಂಜು-ತಿಲಾದ ಕೊಳಚೆಯಲ್ಲಿನನ್ನ ಧೋತಿಯ ಎಳೆದಾಡುತ್ತ. ನಾನು ದಣಿದಿದ್ದೇನೆ, ನಾನು ನೋಡೇ ಇಲ್ಲದನನ್ನ ನಾಡಿಗಾಗಿ ಹೋರಾಡುತ್ತ.*************ಮಾರ್ಚ್ ಹತ್ತು: ಟಿಬೆಟಿಯನ್ ಕ್ರಾಂತಿ ದಿನ*ಧರ್ಮಶಾಲಾ: ವಲಸೆಯಲ್ಲಿರುವ ಟಿಬೆಟಿಯನ್ ಸರಕಾರದ ಕೇಂದ್ರ*ಮಂಜು-ತಿಲಾ : ದೆಹಲಿಯ ಟಿಬೆಟಿಯನ್ ಕಾಲನಿ. ======= “I am Tired” I am tired,I am tired doing that 10th March ritual,screaming from the hills of Dharamsala. I am tired,I am tired selling sweaters on the roadside,40 years of sittingin dust and spit. I am tired,eating rice ‘n daland grazing cows in the jungles of Karnataka. I am tired dragging my dhotiin the dirt of Manju Tila. I am tired fighting for the countryI have never seen. Dhoti – sarong-like garment worn by men in IndiaManju Tila – Tibetan colony in Delhi called Majnu-ka-Tilla **********

ಅನುವಾದ ಸಂಗಾತಿ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಗಜಾನನ ಹೆಗಡೆ ಅಸ್ತಂಗತ.. ಕೆ.ಶಿವು ಲಕ್ಕಣ್ಣವರ ಖ್ಯಾತ ಸುದ್ದಿ ನಿರೂಪಕ, ಹಿರಿಯ ಪತ್ರಕರ್ತ ಗಜಾನನ ಹೆಗಡೆ ಅಸ್ತಂಗತ..! ಖ್ಯಾತ ಸುದ್ದಿ ನಿರೂಪಕ, ಹಿರಿಯ ಪತ್ರಕರ್ತ ಗಜಾನನ ಹೆಗಡೆ ಇಂದು ವಿಧಿವಶರಾಗಿದ್ದಾರೆ. ಇತ್ತೀಚಿಗೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಅವರನ್ನು ಬೆಂಗಳೂರಿನ ಜೆ.ಪಿ.ನಗರದ ಪಿ ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ ೨೬-೨-೨೦೨೦ರಂದು ಮಧ್ಯಾಹ್ನ ಕೊನೆಯುಸಿರೆಳೆದರು. ಮೃತರಿಗೆ ಪತ್ನಿ, ಒಬ್ಬ ಪುತ್ರ (ಮಯೂರ) ಹಾಗೂ ಒಬ್ಬ ಪುತ್ರಿ ಇದ್ದಾರೆ. ಉತ್ತರ ಕನ್ನಡ ಮೂಲದವರಾದ ಗಜಾನನ ಹೆಗಡೆಯವರು ಹೊನ್ನಾವರ – ಗೇರುಸೊಪ್ಪ ಮಧ್ಯೆದಲ್ಲಿರೋ ಕವಲಕ್ಕಿ ಗ್ರಾಮದವರು. ಮಾಧ್ಯಮ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂದು ಇಪ್ಪತ್ತು ವರ್ಷಗಳ ಹಿಂದೆ ಮನೆ ಬಿಟ್ಟು ಹೊರ ಬಂದಿದ್ದರು. 2001ರಲ್ಲಿ ‘ಈ ಟಿವಿ’ ಕನ್ನಡ ಸುದ್ದಿ ವಾಹಿನಿ ಮೂಲಕ ನ್ಯೂಸ್ ಆಂಕರ್ ಆಗಿದ್ದವರು. ಬಳಿಕ ಕನ್ನಡ ವಾಹಿನಿ ‘ಕಸ್ತೂರಿ 24’ನಲ್ಲಿ ಆಂಕರ್ ಚೀಫ್ ಆಗಿ ಕಾರ್ಯ ನಿರ್ವಹಿಸಿದರು. ಅಲ್ಲಿಂದ ಮತ್ತೊಂದು ಖಾಸಗಿ ಸುದ್ದಿ ವಾಹಿನಿಯಾದ ‘ಪ್ರಜಾ ಟಿವಿ’ಯಲ್ಲಿ ಮುಖ್ಯ ಸುದ್ದಿ ನಿರೂಪಕರಾಗಿ ಮನೆ ಮಾತಾಗಿದ್ದರು. ಪ್ರಚಲಿತ ವಿದ್ಯಮಾನಗಳ ಕುರಿತು ಗಂಟೆಗಟ್ಟಲೇ ಚರ್ಚೆ ನಡೆಸಿ ತೆಗೆದುಕೊಂಡ ವಿಷಯದ ಮೇಲೆ ಬೆಳಕು ಚೆಲ್ಲುತ್ತಿದ್ದರು. ಮಾಧ್ಯಮ ರಂಗದಲ್ಲಿ ಅನೇಕ ಮಿತ್ರರನ್ನು ಸಂಪಾದಿಸಿದ್ದರು ಅವರು. ಜೊತೆಗೆ ಅನೇಕ ಶಿಷ್ಯರಿಗೂ ಅವರು ಮಾರ್ಗದರ್ಶಕರಾಗಿದ್ದರು. ಇಂತಹ ಗಜಾನನ ಹೆಗಡೆ ಧಾರವಾಡದಲ್ಲಿ ಡಿಗ್ರಿ ಓದುತ್ತಿರುವಾಗಲೇ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಸಲುಗೆ ಬೆಳೆಸಿದ್ದರು. ಮುಂದೆ ಅದೇ ಸಲುಗೆ ಪ್ರೇಮಕ್ಕೆ ತಿರುಗಿ ಇಬ್ಬರೂ ಪಾಲಕರನ್ನು ಒಪ್ಪಿಸಿ ಮದ್ವೆಯಾಗಿದ್ದರು. ಗಜಾನನ ಹೆಗಡೆಯವರು ಪ್ರೀತಿಸಿದ ಹುಡುಗಿ ಲಿಂಗಾಯತರೆಂಬ ಕಾರಣಕ್ಕೆ ಬ್ರಾಹ್ಮಣರಾದ ಹೆಗಡೆಯವರ ಮನೆಯವರು ಮೊದ ಮೊದಲು ಒಪ್ಪಿರಲಿಲ್ಲವಂತೆ. ನಂತರ ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾದ ಗಜಾನನ ಅವರಿಗೆ ಹಾಡು, ನಾಟಕವನ್ನು ಬಿಟ್ಟು ಬೇರೇನೂ ಗೊತ್ತಿರಲಿಲ್ಲ. ಹೀಗಾಗಿ ಪ್ರೀತಿಸಿದವಳನ್ನು ಕಟ್ಟಿಕೊಂಡ ಸಂತೋಷ ಒಂದು ಕಡೆಯಾದರೆ, ಯಾರ ಸಹಾಯವಿಲ್ಲದೇ ಬದುಕನ್ನು ಕಟ್ಟಿಕೊಳ್ಳೋದು ಹೇಗೆ? ಎಂಬ ಚಿಂತೆಯಾಗಿತ್ತು. ಆಗ ನೆರವಿಗೆ ಬಂದದ್ದೇ ‘ಈ ನಾಡು’ ಕನ್ನಡ ವಾಹಿನಿ! ಆಗ ತಾನೆ ಮೂಡಿ ಬಂದಿದ್ದ ‘ಈ ಟಿವಿ’ಯಲ್ಲಿ ಗೆಳೆಯರ ನೆರವಿನಿಂದ ಗಜಾನನ ಹೆಗಡೆ ಮೊದಲಿಗೆ ಎಂಟರ್ ಟೈನ್ಮೆಂಟ್ ವಿಭಾಗದಲ್ಲಿ ನಿರೂಪಕರಾಗಿ ಕೆಲಸ ಆರಂಭಿಸುತ್ತಾರೆ. ಈ ವೇಳೆ, ಅದಾಗಲೇ ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದ ಮತ್ತು ಅದೇ ಟಿವಿಯಲ್ಲಿ ನ್ಯೂಸ್ ಆಂಕರ್ ಆಗಿದ್ದ ಗೌರೀಶ್ ಅಕ್ಕಿ ಮತ್ತು ಚೆನ್ನವೀರ ಸಗರನಾಳ್ ಅವರ ಪರಿಚಯವಾಗುತ್ತೆ. ಮದುವೆ ಮಾಡಿಕೊಂಡು ಪತ್ನಿಯನ್ನು ಊರಿನಲ್ಲಿಯೇ ಬಿಟ್ಟು ಬಂದಿದ್ದ ಗಜಾನನ ಅವರಿಗೆ ಇಬ್ಬರು ಸ್ನೇಹಿತರು ತಮ್ಮಲ್ಲೇ ಆಶ್ರಯವೊದಗಿಸುತ್ತಾರೆ. ಮುಂದೆ ಕೆಲ ದಿನಗಳಲ್ಲಿಯೇ ಗಜಾನನ ಹೆಗಡೆಯವರು ತಮ್ಮ ಪತ್ನಿಯನ್ನು ಹೈದರಾಬಾದ್ ಗೆ ಕರೆದುಕೊಂಡು ಬಂದು ಸಂಸಾರದ ನೊಗ ಎಳೆಯುತ್ತಾರೆ. ಹೈದರಾಬಾದ್ ನಲ್ಲಿಯೇ ಸುಮಾರು ಹತ್ತು ವರ್ಷಗಳನ್ನು ಕಳೆದ ಗಜಾನನ ಹೆಗಡೆ ತಿರುಗಿ ನೋಡಿದ್ದಿಲ್ಲ. ಗಜಾನನ ಹೆಗಡೆ ಕನ್ನಡ ಸುದ್ದಿ ನಿರೂಪಕರಲ್ಲಿ ಎದ್ದು ಕಾಣುವಂಥ ವ್ಯಕ್ತಿತ್ವವುಳ್ಳವರು. ಅವರದು ಕಂಚಿನ ಕಂಠ. ಕನ್ನಡವನ್ನು ಬಹುವಾಗಿ ಪ್ರೀತಿಸುತ್ತಿದ್ದ ಗಜಾನನ ಹೆಗಡೆ ಕನ್ನಡವನ್ನು ಅಷ್ಟೇ ಸೊಗಸಾಗಿ ಮತ್ತು ಸ್ಪಷ್ಟವಾಗಿ ಮಾತನಾಡುತ್ತಿದ್ದರು. ಟಿವಿಯಲ್ಲೂ ಅಷ್ಟೇ ಸುಂದರವಾಗಿ ಕಾಣುತ್ತಿದ್ದರು. ಗಜಾನನ ಹೆಗಡೆಯವರು ಓರ್ವ ರಂಗಕರ್ಮಿ ಕೂಡ ಆಗಿದ್ದರು ಅನ್ನೋದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಗಜಾನನ ಅವರು ನೀನಾಸಂ ನಲ್ಲಿದ್ದರು. ಬಣ್ಣ ಹಚ್ಚಿ ನಾಟಕ ಮಾಡಿದ್ದುಂಟು. ಒಳ್ಳೆಯ ಗಾಯಕರೂ ಆಗಿದ್ದ ಗಜಾನನ ಹೆಗಡೆ, ಬೇಂದ್ರೆಯವರ ಶ್ರಾವಣ ಬಂತು ನಾಡಿಗೆ ಹಾಡನ್ನು ತಮ್ಮದೇಯಾದ ವಿಶಿಷ್ಟ ರೀತಿಯಲ್ಲಿ ಹಾಡುತ್ತಿದ್ದರು. ಮಾತ್ರವಲ್ಲ, ಅವರು ಅಲ್ಲಲ್ಲಿ ಸಂಗೀತ ಕಚೇರಿ ನಡೆಸಿದ್ದೂ ಉಂಟು. ಯೂ ಟ್ಯೂಬ್ ಚಾನೆಲ್ ಗೂ ಅಲ್ಬಮ್ ಮಾಡಿದ್ದರು. ಇಂತಹ ಗಜಾನನ ಹೆಗಡೆ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ಮಾಧ್ಯಮ ಸ್ನೇಹಿತರಿಗೆ ಶಾಕ್ ಉಂಟಾಗಿದೆ. ಮೊದಲಿಗೆ ಯಾರೂ ನಂಬದಾಗಿದ್ದರು. ಆಂಕರ್ಸ್ ಗ್ರೂಪ್ ನಲ್ಲಿ ಆ ಬಗ್ಗೆ ಚರ್ಚೆ ನಡೆದಿತ್ತು. ಆಸ್ಪತ್ರೆಯಲ್ಲಿ ಶವವಾಗಿ ಮಲಗಿದ್ದ ಗಜಾನನ ಹೆಗಡೆಯವರ ಭಾವಚಿತ್ರವನ್ನು ನೋಡಿ ಎಲ್ಲರೂ ದಿಗ್ಬ್ರಮೆಗೊಳಗಾದರು. ಈ ವೇಳೆ ಬಹುತೇಕ ಎಲ್ಲ ಸುದ್ದಿ ನಿರೂಪಕರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಇಂಥ ಗಜಾನನ ಹೆಗಡೆಯವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಗಜಾನನ ಹೆಗಡೆಯವರ ಸ್ವಂತ ಊರಿಗೆ ತೆಗೆದುಕೊಂಡು ಹೋಗಲಾಗುತ್ತೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಸದ್ಯ ಬೆಂಗಳೂರಿನ ಜೆಪಿ ನಗರದಲ್ಲಿರೋ ಹೆಗಡೆ ನಿವಾಸದಲ್ಲಿ ಯಾರೂ ಇಲ್ಲದೇ ನೀರವ ಮೌನ ಆವರಿಸಿದೆ. ಏನೇ ಆಗಲಿ ಗಜಾನನ ಹೆಗಡೆಯವರಿಗೆ ಶಾಂತಿ ದೊರಕಲಿ ಎಂದು ಹಾರೈಸೋಣ. *********

ಸ್ವಾತ್ಮಗತ Read Post »

ಕಾವ್ಯಯಾನ

ಕಾವ್ಯಯಾನ

ವಿರಹಿಣಿ ವಿಜಯಶ್ರೀ ಹಾಲಾಡಿ (ಸುಮ್ನೇ ಹೀಗೊಂದು ಝಲಕ್) ಯಾರೋ ಕವಿ ಬರೆದವಿರಹಿಣಿಯ ಚಿತ್ರಣಕಾದು ಕಾದು ಕಾಲುಬೆರಳುಸಪೂರ ಆಗಿ ಕಾಲುಂಗುರಕಳೆದುಹೋದ ಕತೆ .. ಅಬ್ಬಎಷ್ಟೂಂತ ಕಾಯುವುದುಮೊನ್ನೆಯಿಂದ ಇದ್ದೇನೆಇಲ್ಲೇ ಆನ್ ಲೈನಲ್ಲೇ….ಮಧ್ಯರಾತ್ರಿಯ ಕೊನೆಗೆಐದು ನಿಮಿಷತೂಕಡಿಸಿದಾಗಲೂ ಸುಪ್ತಮನಸ್ಸಿನ ಎಚ್ಚರಹೃದಯ ಹಿಂಡಿದಂತೆನರನರಗಳೆಲ್ಲ ಹೊಸೆದಂತೆರಿಂಗ್ ಟೋನೇ ಕರೆದಂತೆ … ಎಲ್ಲಿ ಹೋದ ಇವನುಮರೆತನೇ ಮೊಬೈಲ್-ಕಳಕೊಂಡನೇ -ನೆಟ್ವರ್ಕ್ಇಲ್ಲದ ಕಾಡುಗಳಲ್ಲಿಅಲೆಯುತ್ತಿರುವನೇಈ ನನ್ನವನು …ಅಥವ ಇನ್ನವಳ್ಯಾರೋಶ್! ಹುಚ್ಚಿ ಹಾಗೇನಿರಲ್ಲ. ! ‘ಇವಳೇನು ಇಲ್ಲೇಬೀಡುಬಿಟ್ಟಿದ್ದಾಳೆಂದು’ಗೆಳೆಯ ಗೆಳತಿಯರೆಲ್ಲHii. ಎಂದರುಅಣಕಿಸಿ ನಕ್ಕರುಕಣ್ಣುಹೊಡೆದರುಛೆನನ್ನ ವಿರಹವನದಿಯಂತೆ ಬೆಳೆಸುತ್ತಲೇಆಫ್ ಲೈನಾದರು …. ಸಿಟ್ಟಿಗೆ ಮೊಬೈಲ್ ಕುಕ್ಕಿಜೋಡಿಸಿಟ್ಟ ಪುಸ್ತಕಬಟ್ಟೆಗಳನೆಲ್ಲ ನೆಲಕ್ಕೆಅಪ್ಪಳಿಸಿದ್ದಾಯಿತುಸಂದೇಶಗಳ ಶಬ್ದಕ್ಕೆಓಡೋಡಿ ಬಂದುಹೊಸ್ತಿಲಿಗೆ ಕಾಲೆಡವಿಮಂಡಿ ತರಚಿದ್ದಾಯಿತು ಹೋಗೆಲೋ ಹುಚ್ಚಕತ್ತೆ ಕೋತಿ ಕರಡಿಎಂದೆಲ್ಲ ಅವನಿಗೂಟೈಪಿಸಿ ಬಯ್ದದ್ದಾಯಿತುಪ್ರೀತಿಮಾತೂ ಹೇಳಿದ್ದಾಯಿತುಭಯದಿಂದಲೇ ಕಾಲ್ ಮಾಡಿಸ್ವಿಚ್ ಆಫ್ ನಾಟ್ ರೀಚೇಬಲ್ಉಲಿಗಳಿಗೆದನಿತೆಗೆದು ಅತ್ತದ್ದಾಯಿತು … ನಾಳೆಯಾದರೂ ಸಿಗುವನೆಂದುಓಹ್ನೆಟ್ ಪ್ಯಾಕ್ ಮುಗಿಯುವುದೆಂದುಪೇಟೆಗೆ ಹೋಗಿಬರುವೆತಡೆಯಿರೆಂದು …ಥೋ ! ಈಗಿನ್ನೂಹಾಲುಬೆಳದಿಂಗಳುಬೆಳಗಿನ ಜಾವದ ೩ ! **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮನದಿಂ ನಗು ರೇಖಾ ವಿ.ಕಂಪ್ಲಿ ನಗುವ ನಗು ಮನದಿಂ ಮಗುವ ನಗುವ ನಗು ನಗುವ, ನಗಲೆಂದು ನಗದಿರು ನಗುವ ನಕ್ಕರೆ ಸಕ್ಕರೆ ಗಿಂತ ಸಿಹಿಯಾದ ನಗುವ ನಗು ಮೊಗದ ಕಳೆಗಾಗಿ ನಗುವ ನಗದಿರು ಮನದ ಕೊಳೆಯನು ತೊರೆದು ನಗು ಬುದ್ಧಿ ಶುದ್ಧಿಯೊಳು ನಗುವ ನಗು ಕಿರು ನಗೆಯು ನೊರೆ ಹಾಲಿನ ನಗುವ ನಗು ಝರಿ ದಾರೆಯ ಜಳಪಿಸುವ ನಗುವ ನಗು ನಗುವ ನಗು ಮನದಿಂ ನಿನ್ನ ಮನದ ನಗೆಯ ನಗು ಎದಿರಿರುವವನ ಎದೆ ನಗುವಂತೆ ನಗು ಅಪಹಾಸ್ಯ ಮಾಡದೇ ಬರಿ ವಿನೋದಕಾಗಿ ನಗುವ ನಗು ಪರ ಮನ ಅರಿತು ನಗುವ ನಗು ನಗುವ ನಗು ಮನದಿಂ ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ್ಪಟಿಕವಾಗಬೇಕಿದೆ ಮೂಗಪ್ಪ ಗಾಳೇರ ಹಕ್ಕಿಗಳಿಗೆ ಗೂಡ ಕಟ್ಟಲು ಯಾವ ಮರದ ಅನುಮತಿ ಬೇಕಿಲ್ಲ ಇರುವೆಗಳು ಸಾಲಾಗಿ ನಡೆಯಲು ಯಾವ ಅಭಿಯಂತರರ ನೀಲಿನಕ್ಷೆ ಬೇಕಿಲ್ಲ ಹಾಗಂತ ಈ ಹೃದಯವೇನು ಬಿಟ್ಟಿ ಬಿದ್ದಿಲ್ಲ ನಿನ್ನಿಷ್ಟ ಬಂದಾಗೆ ಬಂದು ಹೋದಾಗೆ ಹೋಗಲು………. ಶಾಂತ ಸಾಗರದಲ್ಲಿ ತೇಲುವ ನಾವೆಯಂತೆ ಈ ಹೃದಯ ಮೊದಲು ದಡ ಸೇರಬೇಕೋ ಇಲ್ಲೇ ಇದ್ದು ಸಾಗರದ ಸವಿ ಸವಿಯಬೇಕೋ……. ಎದೆಯೊಳಗೆ ನೂರೆಂಟು ತಳಮಳ ಏಕಾಂತದಲ್ಲಿ ಇದ್ದರು ನಿನ್ನದೇ ಪ್ರೀತಿಯ ಪರಿಮಳ ಮತ್ತೆ ಮತ್ತೆ ಹೃದಯದ ಕೋಣೆಯಲ್ಲಿ ನಿನ್ನದೇ ಸಡಗರ…….. ಹೆತ್ತುಹೊತ್ತ‌ ಜೀವಗಳಿಗೆಲ್ಲಾ ನನ್ನ ಏಕಾಂತದ ಅರಿವಾಗಿದೆ ಹಣತೆ ಹಚ್ಚಬೇಕಿದೆ ನನ್ನಲ್ಲಿ ನೀನು ಹಾಗೆ ಹಚ್ಚಿದ ಹಣತೆ ಪಸರಬೇಕಿದೆ; ಗಡಿ ಇಲ್ಲದ ವಿಶ್ವದ ಬೀದಿಯಂಗಳದಲ್ಲಿ………. ಒಳ ಕೋಣೆಗಳನ್ನೆಲ್ಲಾ ಚದುರಿ ಸ್ಪಟಿಕ ವಾಗಬೇಕಿದೆ; ಜಾತಿ ಧರ್ಮ ಮೀರಿದ ಹೆದ್ದಾರಿ ಪಯಣದಲ್ಲಿ………. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೋರಾಟ ಪ್ಯಾರಿ ಸುತ ದೈತ್ಯಶಹರ ರಾಜಬೀದಿಯೊಳಗೆ ಹೋರಾಟ ಮುಚ್ಚುಮರೆಯಲಿ ಜಮಾಯಿಸಿ ಇಟ್ಟ ಕಲ್ಲುಗಳತೂರಾಟ ಎತ್ತರದಲ್ಲಿ ಜೋತುಬಿದ್ದ ಮೈಕಿನಲ್ಲಿ ರಕ್ತಕುದಿಸುವ ಘೋಷಣೆಗಳ ಕೂಗಾಟ ಕಪ್ಪುನೀಲಿಶಾಯಿ,ರಕ್ತದಿಂದ ಬರೆಯಲ್ಪಟ್ಟ ರಟ್ಟು,ತಗಡು,ಬಿಳಿಬಟ್ಟೆಗಳ ಹಾರಾಟ ಗುಂಪುಗಳ ಮಧ್ಯಸಿಕ್ಕು ಕಾರು,ಬೈಕು,ಬಸ್ಸು ಲಾರಿ, ರೀಕ್ಷಾಗಳ ಚೀರಾಟ ಹಳ್ಳಿಕೇರಿಗಳಿಂದ ಸಂತೆಬಜಾರಿಗೆ ಬಂದವರ, ಊರಿಂದ ಊರಿಗೆ ಹೋಗುವವರ ಶಾಲಾಕಾಲೇಜು ಮಕ್ಕಳ,ಓಪ್ಪತ್ತು ಊಟದ ವ್ಯಾಪಾರಸ್ಥರ,ಕೂಲಿ ನಂಬಿದ ಸ್ಟೇಷನ್ ಕೂಲಿಕಾರ್ಮಿಕರ, ಊರುಕೇರಿಯ ಸಾರ್ವಜನಿಕರ ಪರದಾಟ ಅವರದೇ ಜೀವನದಲ್ಲೊಂದಿಷ್ಟು ಗೋಳಾಟ ಅರೆಸೇನೆ,ಪೊಲೀಸಪಡೆಗಳಿಂದ ಮದ್ದುಗುಂಡು, ಅಶ್ರುವಾಯುಗಳ ಎರಚಾಟ ಕಟ್ಟಾಳು ಕರೆ ತಂದವರಿಗೆ ಬಿರಿಯಾನಿ ಬಾಡೂಟ ಬೀರುಬ್ರಾಂಡಿ,ವಿಸ್ಕಿ ಕುಡಿದವರ ನಡುವೆ ಏರ್ಪಟ್ಟ ಮಂಗನಾಟ ಎಡಬಲ ನೀತಿ ನಿಯಮಗಳ ನಡುವೆ ತಿಕ್ಕಾಟ ಸಾವಿರ ಸಾವಿನ ಪ್ರತಿಫಲಕ್ಕೆ ನಡುರಾತ್ರಿ ದಕ್ಕಿದ ಸ್ವಾತಂತ್ರ್ಯಕ್ಕೆ ಶನಿಕಾಟ *******

ಕಾವ್ಯಯಾನ Read Post »

You cannot copy content of this page

Scroll to Top