ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಯಾನ

ಮೇರಿಯ ಮಕರಸಂಕ್ರಮಣ ವೇಣುಗೋಪಾಲ್ ಸ್ನಾನ ಮುಗಿಸಿ ಉದ್ದ ಕೂದಲಿಗೆ ಟವಲ್ ಸುತ್ತುಕಟ್ಟಿ ಕನ್ನಡಿಯ ಎದುರು ಬೆತ್ತಲೆ ನಿಂತವಳಿಗೆ ನವಯೌವನದ ಉಮ್ಮಸ್ಸೊಂದು ದೇಹದ ಪ್ರತಿ ಅಂಗಗಳಲ್ಲೂ ಹೊಮ್ಮಿದಂತೆ ಕಾಣುತಿತ್ತು. ಆ ಅನಿರೀಕ್ಷಿತ ಮಿಲನದ ಘಳಿಗೆಯನ್ನು ಮೆಲುಕು ಹಾಕುತ್ತ ನಿಂತುಬಿಟ್ಟಳು, ಕೆಲವು ವರ್ಷಗಳೇ ಕಳೆದಿದ್ದೋ ಗಂಡನ ಅಗಲಿಕೆಯ ನಂತರ ದೇಹ ಸುಖ ಕಂಡು.! ಅನಿರೀಕ್ಷಿತವೆಂಬಂತೆ ವಾರಪೂರ್ತಿ ಸುರಿದ ಇಳೆ ಮಳೆಯಾಟದೊಳಗೆ ಅವರಿಬ್ಬರ ರತಿಕಾಮದಾಟವೂ ಮುಗಿದಿತ್ತು..! ಅವನು ಎಂದಿನಂತೆ ಸಂಜೆಯ ನಾಲ್ಕು ಘಂಟೆಗೆ ಬರುತ್ತಿದ್ದವನು ಸ್ವಲ್ಪತಡವಾಗಿ ಬಂದಿದ್ದ..! ಮೊಗವೇಕೋ ಬಾಡಿದಂತಿತ್ತು.! ಹೊರಗೆ ಕಟ್ಟಿದ್ದ ‘ಮುನ್ನಿ’ ಯಾಕೋ ಇಂದು ಹುಚ್ಚು ಬಂದವಳಂತೆ ಬೊಗುಳುತ್ತಿದ್ದಳು.! ಎಷ್ಟು ಸಾಮಧಾನಿಸಿದರು ಬೊಗಳುವುದು ಮಾತ್ರ ನಿಲ್ಲಿಸಲಿಲ್ಲ.. ಆಗಸ ಪೂರ್ತಿಯಾಗಿ ಕಡುಕಂದು ಬಣ್ಣದ ಮೋಡಗಳಿಂದ ಅವಕುಂಠನವಾಗುತ್ತಿತ್ತು. ಮೋಡದ ಸಂಧುಗಳಲ್ಲಿ ಸಣ್ಣನೆಯ ಮಿಂಚುಗಳಿಂದ ಶುರುವಾದ ತಿಳಿಮಳೆ ಸಿಡಿಲಿಗೆ ತಿರುಗಿ ಜೋರಾಗಿ ಧರೆಗೆ ಎರಗುತ್ತಿತ್ತು. ಇವನು ಮಾತ್ರ ಸದ್ದಿಲ್ಲದೆ ಮೌನಕ್ಕೆ ಶರಣಾಗಿದ್ದ.! ಟೀ ತಂದುಕೊಟ್ಟೆ ಹೀರುತ್ತ ಗಾಢವಾದ ಯೋಚನೆಯಲ್ಲಿ ಮುಳುಗಿದ್ದ, ನಾನು ಅವನನ್ನೇ ನೋಡುತ್ತಾ ಕುಳಿತುಬಿಟ್ಟೆ ಹೊರಗಿನ ಚಳಿಯಿಂದ ಮೈ ಕಂಪಿಸುತ್ತಿತ್ತು.! ಇಂದೆಕೋ ಅವನ ಕಣ್ಣುಗಳು ಮಾದಕವಾಗಿ ಕಾಣುತ್ತಿತ್ತು, ನಾನೇ ಎದ್ದು ದಿನವೂ ಆಡುತ್ತಿದ್ದ ಚದುರಂಗದ ಬೋರ್ಡ್ ಅನ್ನು ಅವನ ಮುಂದಿಟ್ಟೆ..! ಏನು ಮಾತನಾಡದೆ ಆಟದ ಒಳಗಿಳಿದು ಮಗ್ನನಾದ.! ಈ ಮಳೆಯ ಚಳಿಗೆ ನನ್ನ ಭಾವನೆಗಳು ಸಣ್ಣಗೆ ಅರಳುತ್ತ ಅವನ ಉಸಿರಿನ ಬಿಸಿಗೆ ಬಿರಿದು ಕಟ್ಟದಾಚೆ ಮುಗುಚುವ ನೀರಿನಪಾತದಲ್ಲಿ ಉದುರಿ ಸತ್ತ ಹೂಗಳಂತೆ..! ಅವನ ಶುಭ್ರವಾದ ಕಡುಕಪ್ಪಿನ ಕಣ್ಣುಗಳ ನೋಟಕ್ಕೆ ನೋಟ ಬೆಸೆಯಾಲಾಗದೆ ಆಸೆಗಳು ಸಾಯುತ್ತಿದ್ದವು..! ಪ್ರತಿ ಬಾರಿಯ ಚದುರಂಗದ ನಡೆಯಲ್ಲಿ ನನ್ನ ಕಾಲಾಳು ಬಲಿಯಾದಾಗಲು ನಾನು ಅವನ ಕಂಗಳನ್ನು ನೋಡುತ್ತಿದ್ದೆ.! ಅವನು ಮಾತ್ರ ಆ ನೋಟದ ಸೆಳೆತಕ್ಕೆ ಸಿಗುತ್ತಿರಲಿಲ್ಲ, ಆಟವು ಕೊನೆಹಂತಕ್ಕೆ ತಲುಪಿತ್ತು.! ನಾನು ಕೂಡ..! ರಾಜನನ್ನು ಅಲುಗದಂತೆ ಕಟ್ಟಿಹಾಕಿ ‘ಚೆಕ್ಮೇಟ್’ ಹೇಳಿ ಮುಗುಳುನಗುತ್ತ ನನ್ನ ಮೊಗನೋಡಿದ. “ಹೌದು” ಆ ಘಳಿಗೆಯಲ್ಲಿ ಅವನನ್ನು ನನ್ನ ನೋಟದ ಸೆಳೆವಿನಲ್ಲಿ ಸಿಕ್ಕಿಸಿಕೊಂಡುಬಿಟ್ಟೆ; ನೋಟ ಕದಲದಂತೆ. ಅವನು ಸಣ್ಣಗೆ ಕಂಪಿಸಿದ್ದ.! ನನ್ನ ಎದೆಯ ಏರಿಳಿತ ಹೆಚ್ಚಾಗುತ್ತಿತ್ತು.! ಮಳೆಯ ಅಬ್ಬರವು ಹೆಚ್ಚಾಗುತ್ತಿತ್ತು.! ಮುನ್ನಿಯ ಬೊಗಳುವಿಕೆ ಕೂಡ ಹೆಚ್ಚಾಗುತ್ತಿತ್ತು.! ಕಂದರದ ಒಡಲಾಳದಿಂದ ಭಾರಿ ಸಿಡಿಲೊಂದು ಢಮ್ ಎಂದು ಭೂಮಿಗೆ ಅಪ್ಪಳಿಸಿತು. ಬೆಚ್ಚಿಹೋದೆ.! ಅವನ ಮಗುಲಿಗೆ ಬಂದು ಭುಜವಿಡಿದು ಕುಳಿತೆ, ಮತ್ತೊಂದು ಮೊಗದೊಂದು ಬಡಿಯುತ್ತಲಿವೆ..! ಅವನು ನನ್ನ ಬೆನ್ನ ಮೇಲೆ ಭಯ ನೀಗಿಸಲು ಕೈಇಟ್ಟ.! ಆ ಕೈಗಳನ್ನಿಡಿದು ತುಟಿಗೆ ಒತ್ತಿಹಿಡಿದೆ.! ಪ್ರತಿರೋಧಿಸುತ್ತಿದ್ದ ಇಷ್ಟು ವರ್ಷಗಳಿಂದ ಕಟ್ಟಿದ್ದ ಬಯಕೆ ಇಂದು ಬೋರ್ಗರೆದು ಸುರಿಯುತ್ತಿರುವ ಮಳೆಗೆ ತುಂಬಿ ಕೋಡಿಯೊಡೆದಿತ್ತು.! ಹೌದು ನನ್ನ ಬಯಕೆಯ ಪಾತಕ್ಕೆ ಸಿಕ್ಕಿ ಮಗುಚಿ ಬಿದ್ದು ತೋಯ್ದು ಹೋದ..! ನನ್ನ ಪ್ರತಿ ಮುತ್ತಿನಲ್ಲೂ ಕರಗಿ ಶರಣಾಗತನಾದ.! ಇಬ್ಬರೂ ಶೃಂಗಾರದ ಕಡಲೊಳಗೆ ಈಜುವ ಮೀನುಗಳಾಗಿದ್ದರೂ ಅವನ ಪ್ರತಿ ಸ್ಪರ್ಶದಲ್ಲೂ ಅವಳ ಹೆಣ್ಣತನದ ಆಸೆಯೆಲ್ಲ ಜಿನುಗಿ ನೀರಾಗಿ ಅವನ ಆಗಮನಕ್ಕೆ ಅಣಿಯಾಗಿ ಸುಖದ ತುತ್ತತುದಿಗೆ ತಲುಪಿದ್ದಳು.! ಇಬ್ಬರೂ ಮಳೆಯೊಳಗೆ ಬಿಸಿಯಾದ ಹನಿಗಳಾಗಿ ಕರಗಿ ಹೋಗಿದ್ದರು ಆಸೆಯೂ ಕೂಡ ಬೆವರಾಗಿ ಬಸಿದು ಇಂಗಿಹೋಗುತ್ತಿತ್ತು.! ವಾರಪೂರ್ತಿ ಅಖಂಡ ಕಾಮದೊಳೊಗೆ ಮುಳುಗಿ ವಿಧ ವಿಧವಾಗಿ ಈಜಿದ್ದರು.! ಈ ಅಖಂಡ ಮಿಲನದಿಂದ ಅವಳ ಕಾಮದಸಿವು ಇಂಗಿತ್ತ…!? ಅಥವಾ ಅವನ ನಿರ್ಮಲ ಪ್ರೇಮವೂ ಸತ್ತು ಅವಳ ಕಾಮದಸಿವಿಗೆ ಆಹಾರವಾಗಿತ್ತ..!? ಇಲ್ಲಾ ಪ್ರೇಮವೂ ಕೊನೆಯ ಹಂತ ತಲುಪಿ ಮಿಲನವಾಗಿ ಅವಳಲ್ಲಿ ಕರಗಿತ್ತ..!? ಹತ್ತು ವರುಷಗಳ ಹಿಂದೆ ರಂಗನಾಥಗುಡಿಯ ಹೊರಭಾಗದ ಒಂಟಿ ಅರಳಿಮರದ ಕೆಳಗೆ ಜನಿವಾರವಾಕಿದ್ದ ಈ ಸತ್ಯ ಕುಳಿತಿದ್ದ, ವಸಂತನ ಹಾವಳಿಗೆ ಬದಲಾಗುತ್ತ ಹಚ್ಚ ತಿಳಿಹಸಿರಿನಿಂದ ಚಿಗುರೊಡೆಯುತ್ತಿರುವ ಅರಳಿಮರ ಹಿಂಬದಿಗಿತ್ತು, ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಾಗಿದ್ದ ಸೂರ್ಯ ಎದುರಿಗಿದ್ದ ರೇಖಾಳಿಂದ ಬದಲಾಗಿದ್ದ ಈ ಮೇರಿ ಅವನ ಪಕ್ಕದಲ್ಲೇ ಕುಳಿತ್ತಿದ್ದಳು, ಬದಲಾವಣೆ ಈ ಜಗದ ನಿಯಮ ಹೊಸದೊಂದು ಹುರುಪಿನೊಂದಿಗೆ ಹೊಸತನ ಆಗಮಿಸಲೇ ಬೇಕು, ಹಾಗೆ ಆಗಮನವಾಗಿದ್ದು ಕೂಡ ನಿರ್ಗಮಿಸಲೇ ಬೇಕು.! ಇದು ಕೂಡ ಜಗದ ನಿಯಮವೇ.! ಆದರೆ ಅಂದು ನನಗೆ ತಿಳಿಯಲೇ ಇಲ್ಲ.! ಅವನು ಮೌನವಾಗಿ ಕುಳಿತಿದ್ದ ಸಣ್ಣಗೆ ಗಾಳಿ ಬೀಸಿದರು ಸತ್ತುಬಿದ್ದ ಎಲೆಗಳ ಜೂರ್ಗುಟ್ಟುವ ಶಬ್ದಮಾತ್ರ ಕೇಳುತ್ತಿತ್ತು..! ಇದೆ ಎಲೆಗಳು ಚಿಗುರೊಡೆದು ಬೆಳೆದು ಬಲಿಯುವಾಗ ಮೌನವಾಗಿರುತ್ತವೆ ಆದರೆ ಸತ್ತು ಬಿದ್ದಿರುವಾಗ ಸದ್ದುಮಾಡುತ್ತಿವೇ.! ಮನುಷ್ಯಮಾತ್ರ ಇದರ ತದ್ವಿರುದ್ಧ..! ನಾನೇ ಆ ಮೌನ ಒಡೆದು ‘ಸತ್ಯ’ ಎಂದೇ ಅವನು ಮಾತನಾಡಲಿಲ್ಲ.! ಮತ್ತೊಮ್ಮೆ ಏರುಧನಿಯಲ್ಲಿ ‘ಹೇ ಸತ್ಯ’ ಎಂದೇ ‘ಹೂ’ ಎಂದ.. ಆದರೆ ನನ್ನೆಡೆಗೆ ತಿರುಗಲಿಲ್ಲ ನನ್ನ ಸಂಭ್ರಮಕ್ಕೆ ಅಷ್ಟೇ ಸಾಕಿತ್ತು.! ನನ್ನ ಮದುವೆಯ ಬೆಳವಣಿಗೆಯನ್ನೆಲ್ಲ ಮತ್ತು ಹುಡುಗನ ಬಗ್ಗೆ ಗೊತ್ತಿದ್ದಷ್ಟು.! ನಾನು ಸೃಷ್ಟಿಸಿಕೊಂಡಿದಷ್ಟು.! ಇಲ್ಲದಷ್ಟು.! ಇರುವುದಕ್ಕಿಷ್ಟು.! ಸೇರಿಸಿ ಅವನು ಕರುಬುವಂತೆ ಗುಣಗಾನ ಮಾಡಿ ಹೇಳುತ್ತಿದ್ದೆ, ಅವನ ಮುಖದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ, ಶಿಲುಬೆ ಏರಿದ ಏಸುವಿನಂತಿತ್ತು.! ನಾನು ನಿರುತ್ಸಾಹಳಾದೆ, ಸಿಕ್ಕಾಗಲೆಲ್ಲ ನನ್ನ ಧರ್ಮದ ಬಗ್ಗೆ ಹೀಯಾಳಿಸುವ ಮಾತನಾಡುತ್ತಿದ್ದ.! ಎಲ್ಲಾ ಧರ್ಮಗಳ ಲೋಪಗಳನ್ನೆಲ್ಲ ತೆಗಳಿ ಉಗಿಯುತ್ತಿದ್ದ.! ತನ್ನ ಧರ್ಮವೇ ಮೇಲೆಂದು ಎಂದು ಹೇಳಿದವನಲ್ಲ.! ಮನುಷ್ಯನ ಸುಖ ಜೀವನಕ್ಕೆ ಈ ಧರ್ಮಗಳೇ ಬೇಲಿ ಎನ್ನುತ್ತಿದ್ದ.! ಅವನು ಹೇಳುವುದು ಸರಿ ಎನಿಸಿದರೂ ಸೋಲುವಂತ ಹೆಣ್ಣು ನಾನಾಗಿರಲಿಲ್ಲ; ಪ್ರತಿವಾದಿಸುತ್ತಿದ್ದೆ. ವಿತಂಡವಾದಕ್ಕಿಳಿಯುತ್ತಿದ್ದೆ.! ನಂತರ ಇಬ್ಬರು ಜಗಳವಾಡಿ ಸುಮ್ಮನಾಗುತ್ತಿದ್ದೆವು.. ಇಂದು ನಾನು ಅಷ್ಟು ಮಾತನಾಡಿದರು ಪ್ರತಿಮಾತನಾಡಲಿಲ್ಲ, ನಿರ್ಲಿಪ್ತತತೆಯಿಲ್ಲದ್ದಿದ್ದರು ಅವನು ಗೊಂದಲದಲ್ಲಿದ್ದ, ‘ಏನು ಹೇಳು ಸತ್ಯ ಏತಕ್ಕಾಗಿ ಈಗಿದ್ದಿಯ ಮಾತನಾಡು’ ಎಂದೇ ಮುಖ ನೋಡಿದ. ಎದ್ದು ನಿಂತ. ಅವನು ಕೇಳುವ ಪ್ರಶ್ನೆಗಳಿಗೆಲ್ಲ ನನ್ನಿಂದ ಆಗಲೇ ಉತ್ತರ ಸಿಕ್ಕಿವೆಂಬಂತೆ! ನಾಳೆಯಿಂದ ನಾನು ಊರಿನಲ್ಲಿ ಇರುವುದಿಲ್ಲವೆಂದ. ಎಷ್ಟು ದಿನ ಸತ್ಯ.? ‘ಗೊತ್ತಿಲ್ಲ’ ‘ಎಲ್ಲಿಗೆ ಹೋಗುತ್ತಿಯ.? ‘ನಿನಗೆ ಬೇಡದ ವಿಷಯ’, ಧನಿಯಲ್ಲಿ ತಿರಸ್ಕಾರವಿತ್ತು. ‘ನನ್ನ ಮದುವೆಗಾದರು ಬರುತ್ತಿಯ ತಾನೇ’ ಎಂದೆ. ಅವನು ಮಾತನಾಡಲಿಲ್ಲ… ಆ ಮೌನ ಅವನ ಮಾತಿಗಿಂತ ಕಠಿಣವಾಗಿತ್ತು . ಹಾಗೆ ಹೊರಟುಹೋದ. ಮೌನದಲ್ಲಿ ಮುಳುಗಿದ ಸೂರ್ಯನಂತೆ ಗುಡಿಯ ಒಳಗೆ ಸಂಕ್ರಮಣ ಪೂಜೆಯ ಘಂಟವಾದ್ಯಗಳು ಮೊಳಗಿದ್ದವು, ಸಂಕ್ರಮಣದ ಸೂರ್ಯಕೂಡ ಎದುರಿನ ಚಿಕ್ಕ ಬೆಟ್ಟದ ಕೆಳಗೆ ಮುಳುಗಿದ್ದರು ಅವನ ಇರುವಿಕೆಯ ಬೆಳಕು ಮಾತ್ರ ಮೋಡಗಳಿಂದ ಗೆರೆ ಗೆರೆಯಾಗಿ ಸೀಳಿ ಪ್ರಕಾಶಿಸುತ್ತಿತ್ತು.. ಅವಳು ಸ್ವಲ್ಪ ಸಮಯ ಅಲ್ಲೇ ನಿಂತು ಸೂರ್ಯ ಮುಳುಗಿದ ದಿಕ್ಕಿನೆಡೆಗೆ ಹೊರಟುಹೋದಳು.. ಇಬ್ಬರ ಬದುಕಿಗೂ ವಸಂತನ ಆಗಮನವಾಗಿತ್ತು ಅವಳು ಚಿಗುರೆಲೆಯ ಹುರುಪಿನಲ್ಲಿದ್ದಳು.! ಅವನು ಉದುರಿಬಿದ್ದ ಎಲೆಯಂತಿದ್ದ..! ಮದುವೆಯ ಹಿಂದಿನ ದಿನಕೂಡ ಅರಳಿಮರದ ಬಳಿ ಬಂದು ಹೋಗಿದ್ದಳು ಬೃಹದಾಕಾರದ ದೈತ್ಯಮರ ಮಾತ್ರ ಹಸಿರೋದ್ದು ನಿಂತಿತ್ತು..! ಸತ್ಯ ಕಾಣಲಿಲ್ಲ.! ಅವನೆದೆಯ ಕಗ್ಗತ್ತಲ ಕಮರಿಯೊಳಗೆ ದಾರಿ ತಪ್ಪಿದವನಂತೆ ಅಲೆಯುತ್ತಿದ್ದ ಕಿರುಚುತ್ತಿದ್ದ ಅಳುತ್ತಿದ ಸುತ್ತಲೂ ನೋಡುತ್ತಿದ್ದ ಗವ್ವೆನುವಷ್ಟು ಅಂಧಕಾರ ಬೆಳಕಿಲ್ಲ.! ಸೂರ್ಯನಿಲ್ಲ.! ಚಂದ್ರನಿಲ್ಲ..! ಚುಕ್ಕಿಗಳಿಲ್ಲ.! ತಂಪಾದ ಗಾಳಿಯೂ ಇಲ್ಲ..! ಆ ಗಾಢಾಂಧಕಾರದಲ್ಲಿ ಸತ್ಯ ಸಣ್ಣಗೆ ಜರ್ಜರಿತನಾಗಿ ನಲುಗುತಿದ್ದ.! ಇದ್ದ ಊರೆಕೋ ನರಕವಾಗುತ್ತಿತ್ತು ಆ ಮರ ಮುಂದಿನ ದೇವಸ್ಥಾನ ಇಬ್ಬರು ನೆಡೆದ ಹಾದಿಗಳು.. ಮರಕೋತಿ ಆಡುತ್ತಿದ್ದ ಜಾಗ, ಮಾವಿನ ಹಣ್ಣು ಕದ್ದು ತಿನ್ನುವಾಗ ಸಿಕ್ಕಿಬಿದ್ಧ ತೋಟಗಳು ಎಲ್ಲವೂ ಈಗ ಅವನಿಗೆ ನರಕದ ರಾಯಭಾರಿಗಳಗಿದ್ದವು ಊರುಬಿಟ್ಟವನೆ, ಅಕ್ಕನ ಮನೆಯ ಮಹಡಿಸೇರಿ ಮಲಗಿಬಿಟ್ಟ ಸತ್ಯನ ಆ ಮಹಡಿಯ ಮನೆಗೂ ಮನಕ್ಕೂ ಸೂತಕ ಬಂದು ಒಳಹೊಕ್ಕಿ ಮಲಗಿ ಬಿಟ್ಟಿದೆ ಎಚ್ಚರವಾದಗ ಸಾವಾಗಬಹುದು….. ಕುಡಿದ ಅಮಲಿನಲ್ಲಿ ರಾತ್ರಿ ಹಗಲುಗಳ ಪರಿವಿಲ್ಲದಂತೆ ನಶೆಯಲ್ಲಿ ಮುಳುಗಿ ಮೌನವಾಗಿ ಹಳೆಯದನ್ನೆಲ್ಲ ಕ್ಷಣಕಾಲ ಮರೆತು ಮತ್ತೊಮ್ಮೆ ದೈತ್ಯಕಾರವಾಗಿ ಸೃಷ್ಟಿಸಿಕೊಂಡು ಮನದ ಒಳಗೂ ಹೊರಗೂ ಕಾದಾಡುತ್ತಿದಾನೆ.. ಆತ ಮನೆಯ ಹೊರಗಿನ ಬೆಳಕನ್ನು ಕಾಣುವುದು ಕೂಡ ವಾರಕೊಮ್ಮೆ ಅಷ್ಟೇ..! ತನ್ನ ಬಳಿ ಇದ್ದ ತುಂಬಿದ ಬಾಟಲುಗಳು ಖಾಲಿಯಾದಗ ಮಾತ್ರ ಮಹಡಿಯ ಒಂದೊಂದೇ ಮೆಟ್ಟಿಲುಗಳನ್ನ ತಡವರಿಸಿಕೊಂಡಿಳಿದು ಗೇಟಿನ ಬಾಗಿಲು ತೆಗೆಯುವ ಸದ್ದಿಗೆ ತನ್ನ ಅಕ್ಕನ ಬೈಗುಳ ಕೇಳುತ್ತವೆ ಆದರೆ ಅವು ಅವನ ಒಳ ತಾಕುವುದಿಲ್ಲ, ಆತುರ ಆತುರದಲ್ಲೇ ನೆಡೆದು ಬೇಕಾದಷ್ಟನ್ನು ತಂದು ಮಹಡಿ ಹತ್ತಿ ಬಾಗಿಲು ಮುಚ್ಚಿ ಕುಳಿತು ಬಿಡುತ್ತಾನೆ..! ಊಟ ತಿಂಡಿಗಳು ಅಕ್ಕನ ಮನೆಯಿಂದಲೇ ಮೆಟ್ಟಿಲನತ್ತಿ ಬರುತ್ತವೆ.. ಕೆಲವು ಬಾರಿ ಖಾಲಿಯಾಗುತ್ತದೆ ಕೆಲವೊಮ್ಮೆ ಹಾಗೆ ಒಣಗಿಯೋ ಹಳಸಿಯೋ ವಾಪಸಿಳಿದು ಕಸದ ಬುಟ್ಟಿ ಸೇರುತ್ತವೆ. ಇತ್ತ ಮೇರಿಯ ಸಂಸಾರದ ಸಂತೋಷದ ದಿನಗಳೆಲ್ಲ ಮುಗಿದ್ದುಹೋಗಿದ್ದೊ, ಸೂತಕವು ಇವಳ ಮನೆಯ ಬಾಗಿಲನ್ನು ಬಂದು ಬಡಿಯಿತು ಅವಳ ಗಂಡನೆಂಬ ಜೀವ ಸತ್ತುಬಿತ್ತು.. (ಸಾವಿಗೆ ಸಾವಿರ ಕಾರಣಗಳು ಇರುತ್ತವೆ.ಇಲ್ಲಿ ಈ ಸಾವಿಗೆ ಕಾರಣದ ಅವಶ್ಯಕತೆ ಇಲ್ಲ ಹೆಸಲಿಲ್ಲದ ಪಾತ್ರ ಸಾಯಬೇಕು) ಇವಳು ಕೂಡ ಕೆಲವು ತಿಂಗಳುಗಳು ನಲುಗಿದ್ದಳು ಆದರೆ ಸೋಲುವ ಹೆಣ್ಣಲ್ಲ ಬದುಕಿನ ಸವಾಲುಗಳನ್ನೇ ತುಳಿದು ನೆಡೆಯುತ್ತಿದಳು. ಇಂದಿಗೂ ಅವಳನ್ನು ಸೆಣಸಿ ಸೋಲಿಸಿ ಕಣ್ಣೀರಿಡಿಸುವ ಕೊರತೆಯೆಂದರೆ ಮಕ್ಕಳದ್ದು ಮಾತ್ರ. ಭಾನುವಾರದಂದು ಚರ್ಚೆಗೆ ಬರುವ ಮಕ್ಕಳೊಂದಿಗೆ ಆಟವಾಡಿ ನಲಿಯುತ್ತ ಆ ಕೊರತೆಯನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದಾಳೇ. ಇಲ್ಲದನೆಲ್ಲ ತನ್ನೊಳಗೆ ಸೃಷ್ಟಿಸಿಕೊಂಡು ಬದುಕುತ್ತಿದ್ದಾಳೆ, ಹೀಗೆ ಇಬ್ಬರ ದಿನಗಳು ಕಳೆಯುತ್ತಿವೆ…..(ಈ ಕಥೆಯಲ್ಲಿ ಇಬ್ಬರೂ ಮತ್ತೊಮ್ಮೆ ಭೇಟಿಯಾಗಬೇಕು ಆಗಾಗಿ ಇಬ್ಬರನ್ನು ಒಂದೇ ರಸ್ತೆಗೆತಂದುಬಿಟ್ಟೆ) ಮೇರಿಗೆ ತನ್ನ ಸತ್ಯನ ದರ್ಶನವಾಯಿತು ಆದರೆ ಸತ್ಯ ಅವಳನ್ನು ಗಮನಿಸಲಿಲ್ಲ ಅವನು ಹಾಗೆ ನೆಡೆದ ಹಿಂಬಾಲಿಸಿದಳು ಮಹಡಿ ಹತ್ತಿ ಒಳಹೋದ ಸಲ್ಪ ಸಮಯಕಾದಳು ಮತ್ತೆ ಹೊರಬರಲಿಲ್ಲ ಅವಳು ಕೂಡ ಮಹಡಿ ಹತ್ತಿ ಬಾಗಿಲು ತೆರೆದು ಒಳ ಹೋದಳು. ಸಿಗರೇಟಿನ ಗಾಟು ಎಣ್ಣೆಯ ಕಮಟುಮಿಶ್ರಿತವಾಸನೆ ರಪ್ಪೆಂದು ಮೂಗಿಗೆ ಬಡಿಯಿತು, ಹಗಲು ರಾತ್ರಿಗಳ ವ್ಯತ್ಯಾಸವಿಲ್ಲದ ಮನೆಯೊಳಗೆ ನಿಂತ ಗೋಡೆಗಳು.! ಮೌನವಾಗಿ ಬಿಗಿದುನಿಂತ ಕಿಟಕಿಗಳು.! ಚಾವಣಿಗೂ ಗೋಡೆಗಳ ಮೂಲೆಗೂ ಸೇರಿಸಿ ಎಣೆದ ಜೇಡರ ಬಲೆಯೊಳಗೆ ಸತ್ತ ಹುಳಗಳು.! ನೆಲದ ಮೇಲೆಲ್ಲ ಬಿದ್ದ ಸಿಗರೇಟಿನ ಫಿಲ್ಟರಗಳು.! ಕದದಮೂಲೆಯಲ್ಲಿದ್ದ ಖಲಿಬಾಟಲ್ಗಳು.! ಗಾಢಮೌನದೊಳಗೆ ಅಲಲ್ಲಿ ತೂತುಬಿದ್ದ ಬನಿಯನ್ ಮತ್ತು ಲುಂಗಿ ತೊಟ್ಟು ದಿಂಬನ್ನೂರಗಿ ಕುಡಿಯುತ್ತ ಕುಳಿತ್ತಿದ್ದ ಸತ್ಯ.! ಕೃಷವಾದ ದೇಹ ವಯಸ್ಸಿಗಿಂತ ಹೆಚ್ಚಾಗಿ ಕಾಂತಿಗುಂದಿದ ಚರ್ಮ.! ಅಡ್ಡದಿಡ್ಡಿ ಬೆಳೆದ ಗಡ್ಡ ಮೀಸೆಗಳು.! ಅವನ ಕಣ್ಣಗಳಲ್ಲಿ ಜೀವಚೈತನ್ಯದ ಬೆಳಕಿಲ್ಲ ಶವವೊಂದು ಕುಡಿಯುತ್ತಿದ್ದಂತಿತ್ತು..! ಇಬ್ಬರ ನೋಟಗಳು ಸಂಧಿಸಿದವು ಕುಶೋಲೋಪರಿಯ ಅಗತ್ಯವಿರಲಿಲ್ಲ.! ಇಬ್ಬರ ಕಣ್ಣುಗಳಲ್ಲೂ ಸಿಕ್ಕ ಸಂತೋಷವಿರಲಿಲ್ಲ.! ಕೆಲವೇ ಕ್ಷಣಗಳಲ್ಲಿ ಮೌನ ಮನೆಕಟ್ಟಿತ್ತು ಮಾತಿನ ಪೆಟ್ಟು ಬೇಕಿತ್ತು ಮೌನ ಒಡೆಯಲು.! ಅವನೇ ಆ ಮೌನ ಒಡೆದ ಮಾತಿಗಿಳಿದ.! ಮತ್ತಿನಲ್ಲಿದ್ದ.! “ಈ ಕಾಲವೇ ಹೀಗೆ ಹಳೆಯದೆಲ್ಲ ಕಳೆದುಹೋಗಿದ್ದರು ಸಾಕ್ಷಿಗಳನ್ನು ಮಾತ್ರ ನಿಲ್ಲಿಸಿ ಹೋಗುತ್ತವೆ ನಿನ್ನ ಜೊತೆ ಕಳೆದ ಬಾಲ್ಯದ ದಿನಗಳು ಯೌವನದ ಕ್ಷಣಗಳನೆಲ್ಲ ಸಾಯಿಸಬೇಕೆಂದು ಈ ಅಮಲಿಗೆ ದಾಸನಾಗಿಬಿಟ್ಟೆ.! ಅಮಲು ಹೆಚ್ಚಾದಗಳಲೇಲ್ಲ ನೀ ನನ್ನೊಳಗೆ ಇರುವಂತೆ ಮುದ್ದಿಸಿದಂತೆ ತಾಯಿತನದ ಸುಖ ನೀಡಿದಂತೆ ಅನಿಸುತ್ತದೆ ರೇಖಾ..! ಈ ಅಮಲು ಎಷ್ಟು ನೆಮ್ಮದಿಕೊಡುತ್ತದೆ ಗೊತ್ತಾ..! ಆ ಯೌವನದ ದಿನಗಳಲ್ಲಿ ನಾನು ನಿನ್ನ ಹತ್ತಿರಕ್ಕೆ ಬರಲು ಪ್ರತಿ ಹೆಜ್ಜೆ ಮುಂದಿಟ್ಟಗಾಲು ನೀನು ಮಾತ್ರ ಅದರ ಹತ್ತುಪಟ್ಟು ದೂರವಾಗುತ್ತಿದ್ದೆ.! ನಾನು ಈ ಧರ್ಮವೆಂಬ ಮುಳ್ಳುಪೊದೆಗಳ ದಾಟಿ ಪ್ರೀತಿಯ ಬೋರೆಮೇಲೆ ಬಂದುನಿಂತು ನೀನಗಾಗಿ ಕನವರಿಸಿದೆ ನೀನು ಮಾತ್ರ ಆ ಧರ್ಮಗಳ ಬೇಲಿಯಿಂದಾಚೆ ಬರಲೇ ಇಲ್ಲಾ..! ಮೂಲಕ್ರಿಶ್ಚಿಯನ್ನರು ಪಾಲಿಸದಷ್ಟು ನಿನ್ನ ಧರ್ಮನಿಷ್ಠೆಗಳು ಅತಿರೇಖವಾಗಿದ್ದವು ರೇಖಾ..! ನೀನು ನಿನ್ನ ಧರ್ಮದ ಹೆಸರಿನಲ್ಲಿ ಕೃತಕಗೋಡೆಯೊಂದನ್ನು

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ರಾಮರಾಯರು ಜಿ. ಹರೀಶ್ ಬೇದ್ರೆ  ರಾಮರಾಯರು ರಾಮರಾವ್ ಹಾಗೂ ಸುಲೋಚನ ರವರಿಗೆ ಮೂರು ಹೆಣ್ಣು, ಒಂದು ಗಂಡು ಮಗು. ಹೆಣ್ಣುಮಕ್ಕಳೇ ಹಿರಿಯರು, ಮಗ ಕೊನೆಯವನು. ರಾಯರು ಅತ್ಯಂತ ನೇರ ನುಡಿಯ ವ್ಯಕ್ತಿ. ಸರಿ ಇದ್ದರೆ ಸರಿ, ತಪ್ಪಾಗಿದ್ದರೆ ಅವರು ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ದರು ಮುಲಾಜು ನೋಡದೆ ತಪ್ಪನ್ನು ಹೇಳಿ ನೀರಿಳಿಸುತ್ತಿದ್ದರು. ರಾಯರದು ಖಾಸಗಿಯವರ ಬಳಿ ಕೆಲಸ, ಆದಾಯ ಕಡಿಮೆ. ಆದರೂ ನಾಲ್ಕು ಮಕ್ಕಳನ್ನು ಚೆನ್ನಾಗಿಯೇ ಓದಿಸಿದ್ದರು.  ಮೂರನೆಯವಳ  ಮದುವೆಯಾಗಲಿಕ್ಕೂ  ಇವರ ಆರೋಗ್ಯ ಕೈಕೊಟ್ಟು ಮನೆಯಲ್ಲೇ ಉಳಿದರು. ಮಗನ ಓದು ಆಗಷ್ಟೇ ಮುಗಿದಿದ್ದು, ಕೆಲಸಕ್ಕೆ ಪ್ರಯತ್ನಿಸುತ್ತಿದ್ದ. ಸ್ಥಳೀಯವಾಗಿ ಅಂದುಕೊಂಡ ಒಳ್ಳೆಯ ಕೆಲಸ ಸಿಗದೆ ಬೆಂಗಳೂರಿಗೆ ಹೋದ.  ಹೊಸದಾಗಿ ಕೆಲಸಕ್ಕೆ ಸೇರಿದ್ದರಿಂದ ತಿಂಗಳಿಗೊ, ಎರಡು ತಿಂಗಳಿಗೊ ಒಮ್ಮೆ ಬಂದು ಹೋಗುತ್ತಿದ್ದ. ರಾಮರಾಯರು ಸದಾ ನಾಲ್ಕು ಜನರ ನಡುವೆ ಇದ್ದು ಕೆಲಸ ಮಾಡುತ್ತಿದ್ದವರು, ಈಗ ಎಲ್ಲಾ ಬಿಟ್ಟು ಮನೆಯಲ್ಲೇ ಇರಬೇಕು ಎಂದರೆ ಬಹಳ ಕಷ್ಟವಾಗುತ್ತಿತ್ತು.  ಹೊರಗಡೆ ಹೋದರೂ, ಸುಮ್ಮನೆ ಹರಟೆ ಹೊಡೆದು ಕಾಲ  ಕಳೆಯುವ ಅಭ್ಯಾಸ ಇರದ ಅವರಿಗೆ ಅಲ್ಲಿರಲು ಸಾಧ್ಯವಾಗದೆ ಮನೆಗೆ ಮರಳಿ ಬರುತ್ತಿದ್ದರು.  ಒಂದು ಕಡೆ ಅನಾರೋಗ್ಯ ಜೊತೆಗೆ ಕೆಲಸವಿಲ್ಲದೆ ಹೆಂಡತಿ ಮುಖ ನೋಡಿಕೊಂಡು ಮನೆಯಲ್ಲಿರುವುದು ಅಸಾಧ್ಯವಾಯಿತು. ಇದೇ ಚಿಂತೆಯಲ್ಲಿ ಬಿ.ಪಿ.ಯ ಜೊತೆ ಶುಗರ್ ಸಮಸ್ಯೆಯೂ ಆರಂಭವಾಯಿತು. ಅವರು ಯಾವಾಗ ಯಾವ ವಿಷಯಕ್ಕೆ ಸಿಟ್ಟಾಗುತ್ತಾರೆ, ಯಾವುದಕ್ಕೆ ಸುಮ್ಮನಿರುತ್ತಾರೆ ಎನ್ನುವುದು ಸುಲೋಚನರವರಿಗೆ ತಿಳಿಯದಾಯಿತು.  ಮೊದಲೇ ಮಿತಭಾಷಿಯಾದ ಅವರು ಮತ್ತಷ್ಟು ಮೌನಕ್ಕೆ ಶರಣಾದರು.ಅದೊಂದು ದಿನ ಸಂಜೆ ಇದ್ದಕ್ಕಿದ್ದಂತೆ ರಾಮರಾಯರು ಮನೆಯಲ್ಲೇ ಕುಸಿದು ಬಿದ್ದರು. ತಕ್ಷಣವೇ ಸುಲೋಚನಾ ಪಕ್ಕದ ಮನೆಯವರು ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪರೀಕ್ಷೆ ಮಾಡಿದ ವೈದ್ಯರು, ಬಿ.ಪಿ. ಹಾಗೂ ಶುಗರ್ ಎರಡೂ ಹೆಚ್ಚಾಗಿದೆ, ಒಂದೆರೆಡು ದಿನ ಇಲ್ಲೇ ಇರಲೆಂದರು.  ವಿಚಾರ ತಿಳಿದ ಮಕ್ಕಳು ತಂದೆಯನ್ನು ನೋಡಲು ಒಂದೇ ಉಸಿರಿಗೆ ಇದ್ದ ಊರುಗಳಿಂದ ಓಡಿ ಬಂದರು. ಇದಾದ ಮೇಲೆ ತಮ್ಮದೇ ಅಸಡ್ಡೆಯಿಂದ ರಾಯರು ವರುಷದಲ್ಲಿ ಹಲವು ಬಾರಿ ಆಸ್ಪತ್ರೆಗೆ ಸೇರಿದರು. ಇದರಿಂದ ಬೇಸತ್ತ ಮಗ, ಹಗಲೆಲ್ಲ ರಜ ಹಾಕಿ ಊರಿಗೆ ಬರಲು ಸಾಧ್ಯವಿಲ್ಲ ಎಂದು ಬಲವಂತವಾಗಿ ತಂದೆ ತಾಯಿ ಇಬ್ಬರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ. ಅವನಿಗೆ ಬರುವ ಸಂಬಳಕ್ಕೆ ತಕ್ಕಂತಹ ಸಣ್ಣ ಮನೆಯೊಂದನ್ನು ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆಗೆ ತೆಗೆದುಕೊಂಡಿದ್ದ.    ಅವನು ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ಮತ್ತೆ ಸೇರುತ್ತಿದ್ದದ್ದು ರಾತ್ರಿ ಎಂಟು ಗಂಟೆಗೆ. ಅಲ್ಲಿಯವರೆಗೆ ಗಂಡ ಹೆಂಡತಿ ಇಬ್ಬರೇ ಮನೆಯಲ್ಲಿ ಇರಬೇಕಿತ್ತು. ಇದು ರಾಮರಾಯರಿಗೆ ಮತ್ತಷ್ಟು ವಿಚಲಿತರಾಗುವಂತೆ ಮಾಡಿತ್ತು. ಊರಲ್ಲಾದರೆ, ಮನೆಯ ಮುಂಬಾಗಿಲಿಗೆ ಬಂದು ನಿಂತರೆ ಸಾಕು, ಹೋಗಿ ಬರುವ ಪರಿಚಿತರು ಮುಗುಳ್ನಕ್ಕು, ಅದು ಇದು ಮಾತನಾಡುತ್ತಾ ಮುಂದೆ ಸಾಗುತ್ತಿದ್ದರು. ಇಷ್ಟಕ್ಕೆ ಅವರಿಗೆ ಎಷ್ಟೋ ಹಿತವೆನಿಸಿಸುತ್ತಿತ್ತು. ಆದರೆ ಇಲ್ಲಿ ಮನೆಗಳು ನೂರಿದ್ದರೂ ಎಲ್ಲಾ ಅಪರಿಚಿತರು. ಅದೇಷ್ಟೋ ದಿನಗಳ ನಂತರ ಒಂದಿಬ್ಬರು ಪರಸ್ಪರ ಮಾತನಾಡಿಸುವಂತಾಗಿದ್ದರು. ಅದೂ ಹೆಸರಿಗೆ ಮಾತ್ರ ಅನ್ನುವಂತಿತ್ತು. ಹಾಗಾಗಿ ಹೊತ್ತು ಹೋಗದೆ ರಾಮರಾಯರು, ತಾವು ಊರಿಗೆ ಹಿಂದಿರುಗುವುದಾಗಿ ಹೇಳುತ್ತಿದ್ದರು. ಆದರೆ ಅಲ್ಲಿ ಇವರನ್ನು ನೋಡಿಕೊಳ್ಳುವವರು ಯಾರೂ ಇಲ್ಲದೆ ಎಲ್ಲಾ ಜವಾಬ್ದಾರಿಯನ್ನು ತಾಯಿಯ ಮೇಲೆ ಹಾಕಲು ಮನಸ್ಸು ಒಪ್ಪದೆ ಮಗ ಬೇಡ ಅನ್ನುತ್ತಿದ್ದ. ಒಂದು ದಿನ ರಾಯರು ಹಟ ಮಾಡಿದಾಗ ಕಡ್ಡಿ ಮುರಿದಂತೆ ಎಲ್ಲಿಗೂ ಕಳಿಸುವುದಿಲ್ಲ ಎಂದು ಸ್ವಲ್ಪ ಒರಟಾಗಿಯೇ ಹೇಳಿದ.  ಇದು ಮೊದಲೇ ಕುಗ್ಗಿ ಹೋಗಿದ್ದ ರಾಮರಾಯರು ಮತ್ತಷ್ಟು ಕುಗ್ಗುವಂತೆ ಮಾಡಿತು. ಬರಬರುತ್ತಾ ಅವರ ನಡವಳಿಕೆಯಲ್ಲಿ ಏರುಪೇರಾಗತೊಡಗಿತು. ಒಮ್ಮೊಮ್ಮೆ ಏನಾದರು ಬಡಬಡಿಸಿದರೆ ಮತ್ತೆ ಕೆಲವೊಮ್ಮೆ ದಿನಗಟ್ಟಲೆ ಒಂದೇ ಒಂದು ಪದವನ್ನು ಆಡದೆ ಎಲ್ಲೋ ನೋಡುತ್ತ ಮೈಮರೆತು ಕುಳಿತುಬಿಡುತ್ತಿದ್ದರು. ಊಟ ತಿಂಡಿಯ ಪರಿವೆಯೂ ಇರುತ್ತಿರಲಿಲ್ಲ, ಒಂದು ಎರಡು ಇದ್ದ ಜಾಗದಲ್ಲೇ ಆಗಿರುತ್ತಿತ್ತು. ಇದನ್ನು ನೋಡಿ ಮಗ, ಹಲವಾರು ಡಾಕ್ಟರುಗಳಿಗೆ ತೋರಿಸಿದರೂ ಏನೂ ಉಪಯೋಗವಾಗಲಿಲ್ಲ.   ಈ ಪರಿಸ್ಥಿತಿಯಲ್ಲಿ ತಂದೆಯನ್ನು ಅಮ್ಮನೊಂದಿಗೆ ಊರಿಗೆ ಕಳಿಸಲು ಸಾಧ್ಯವಿಲ್ಲ. ಹಾಗೊಮ್ಮೆ ಕಳೀಸಲೇ ಬೇಕೆಂದರೆ ತಾನೂ ಅವರೊಂದಿಗೆ ಹೋಗಬೇಕು. ಆದರೆ ಕೈಯಲ್ಲಿರುವ ಕೆಲಸ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ಮಗನೂ ತುಂಬಾ ಒದ್ದಾಡುತ್ತಿದ್ದ. ಗಂಡ ಹಾಗೂ ಮಗನ ಪರಿಸ್ಥಿತಿ ಅರ್ಥವಾದರೂ ಸುಲೋಚನಾ ಏನೂ ಮಾಡುವಂತಿರಲಿಲ್ಲ.  ಹೊತ್ತು ಹೊತ್ತಿಗೆ ಸರಿಯಾಗಿ ಗಂಡನ ಬೇಕು ಬೇಡಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದರು. ಆದಷ್ಟು  ಅವರ ಒದ್ದಾಟ ಮಗನಿಗೆ ತಿಳಿಯದಿರಲೆಂದು ಕಷ್ಟ ಪಡುತ್ತಿದ್ದರು. ತೀರಾ ಅನಿವಾರ್ಯ ಎಂದಾಗ ಮಾತ್ರ ಮಗನ ಗಮನಕ್ಕೆ ತರುತ್ತಿದ್ದರು. ಮಗನಿಗೆ ಎಲ್ಲವೂ ಅರ್ಥವಾಗುತ್ತಿತ್ತು ಆದರೆ ತನಗೆ ಗೊತ್ತಿದೆ ಎಂದು ತೋರಿಸಿಕೊಂಡರೆ ಅಮ್ಮ ಮತ್ತಷ್ಟು ನೊಂದುಕೊಳ್ಳಬಹುದೆಂದು ತಾನು ಆರಾಮಾವಾಗಿ ಇರುವಂತೆ ನಡೆದು‌ಕೊಳ್ಳುತ್ತಿದ್ದ. ಅಲ್ಲದೆ ಅಪ್ಪನಿಗಾಗಿ ಊರಿಗೆ ಹಿಂದಿರುಗಬೇಕೆಂದು ಅಲ್ಲಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದ. ಅದೊಂದು ದಿನ ಮನೆಯ ಎಲ್ಲಾ ಹೆಣ್ಣುಮಕ್ಕಳು ತಮ್ಮ ಗಂಡ, ಮಕ್ಕಳೊಂದಿಗೆ ಅಪ್ಪನನ್ನು ನೋಡಲು ಬೆಂಗಳೂರರಿಗೆ ಬಂದರು. ಅವರು ರಾಮರಾಯರಿಗೆ ಎಷ್ಟೇ ಮಾತನಾಡಿಸಿದರೂ ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವರನ್ನು ಗುರುತೂ ಹಿಡಿಯಲಿಲ್ಲ. ರಾಮರಾಯರಿಗೆ, ಮಗ ಹಾಗೂ ಹೆಂಡತಿಯ ಹೊರತಾಗಿ ಎಲ್ಲರೂ ನೆನಪು ಅಳಿಸಿಹೋಗಿತ್ತು. ಇದು ಸುಲೋಚನಾ ಮತ್ತು ಮಗನ ಗಮನಕ್ಕೆ ಬಂದೇ ಇರಲಿಲ್ಲ.  ಇದು ತಿಳಿದೊಡನೆ ಕುಸಿಯುವ ಸರದಿ ಮಗನದಾಯಿತು. ಮನೆಗೆ ಬಂದ ಹೆಣ್ಣುಮಕ್ಕಳು , ಕೆಲಸಕ್ಕೆ ಕಾಯದೆ ತಕ್ಷಣ ಅಪ್ಪನನ್ನು ಅವರ ಆಸೆಯಂತೆ ಊರಿಗೆ ಕರೆದುಕೊಂಡು ಹೋಗು. ನಿನಗೆ ಕೆಲಸ ಸಿಗುವ ವರೆಗೂ ನಾವು ಸಹಾಯ ಮಾಡುತ್ತೇವೆ ಎಂದು ತಮ್ಮನಿಗೆ ಹೇಳಿದರು. ಇದು ಅವನಿಗೂ ಸರಿ ಎನಿಸಿ,  ಕೆಲಸಕ್ಕೆ ರಾಜಿನಾಮೆ ಕೊಟ್ಟು ಹೊರಡುಸುವುದಾಗಿ ಹೇಳಿದ.  ಹೇಳಿದಂತೆ ಕೆಲಸಕ್ಕೆ ರಾಜಿನಾಮೆ ಸಲ್ಲಿಸಿದ. ಆದರೆ ಅಲ್ಲಿನ ನಿಯಮಗಳ ಪ್ರಕಾರ ಅವನು ಒಂದು ತಿಂಗಳ ನಂತರವಷ್ಟೇ ತನ್ನ ಕೆಲಸದಿಂದ ಬಿಡುಗಡೆ ಹೊಂದಬೇಕಾಗಿತ್ತು.    ಅಷ್ಟರೊಳಗೆ ಊರಲ್ಲಿ ಇರಲು ಬೇಕಾದ ವ್ಯವಸ್ಥೆಗಳನ್ನು ಮಾಡಿ ಕೊಳ್ಳತೊಡಗಿದ. ಇದ್ದ ಕೆಲಸದಿಂದ ಬಿಡುಗಡೆ ಆಗಲು ಎರಡು ದಿನ ಬಾಕಿ ಇರುವಾಗ ಅದೃಷ್ಟ ಎನ್ನುವಂತೆ ಊರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಕರೆ ಬಂತು. ಇದು ತಾಯಿ ಮಗ ಇಬ್ಬರಿಗೂ ತುಂಬಾ ಸಮಾಧಾನ ತಂದಿತ್ತು. ಕೊನೆಯ ದಿನದ ಕೆಲಸ ಮುಗಿಸಿ ಮಾರನೇ ದಿನವೇ ಊರಿಗೆ  ಹೋಗುವುದೆಂದು ಮನೆಯ ಎಲ್ಲಾ ವಸ್ತುಗಳನ್ನು ಗಂಟು ಕಟ್ಟಿ, ಅದನ್ನು ಸಾಗಿಸಲು ಬೇಕಾದ ಲಾರಿಯನ್ನು ಗೊತ್ತು ಮಾಡಿದ್ದ.  ಹಿಂದಿನ ದಿನ ರಾತ್ರಿ ಪಕ್ಕದ ಮನೆಯವರು ಕೊಟ್ಟಿದ್ದನ್ನೇ ಮೂವರು ಊಟ ಮಾಡಿ, ನಾಳೆಯಿಂದ ಸ್ವಂತ ಊರಲ್ಲಿ ವಾಸವೆಂದು ಸಂತೋಷದಿಂದ ಬಹಳ ಹೊತ್ತು ತಾಯಿ ಮಗ ಮಾತನಾಡುತ್ತಿದ್ದರು. ರಾಮರಾಯರು ಏನೊಂದೂ ಮಾತನಾಡದಿದ್ದರೂ ಅವರ ಮುಖದಲ್ಲಿ ಹಿಂದೆಂದೂ ಕಾಣದ ತೇಜಸ್ಸು ಕಾಣುತ್ತಿತ್ತು.  ತಾಯಿ ಮಗ ಮಾತನಾಡುತ್ತಾ ಯಾವಾಗ ಮಲಗಿದರು ಅವರಿಗೇ ಗೊತ್ತಿಲ್ಲ. ಬೆಳಿಗ್ಗೆ ಯಾರೋ ಜೋರಾಗಿ ಬಾಗಿಲು ಬಡಿದಾಗಲೇ ಅವರಿಗೆ ಎಚ್ಚರವಾಗಿದ್ದು. ಇಬ್ಬರೂ ಲಾರಿಯವನು ಬಂದಿರಬೇಕೆಂದು ದಡಬಡಾಯಿಸಿ ಎದ್ದು  ಬಾಗಿಲು ತೆರೆದರು.  ಅಲ್ಲಿ ಮೇಲಿನ ಮನೆಯವರು ಇವರಿಗೆ ಕುಡಿಯಲು ಕಾಫಿಯನ್ನು ತಂದಿದ್ದರು. ಅವರೊಂದಿಗೆ ನಾಲ್ಕು ಮಾತನಾಡಿ ಒಳಬಂದ ಸುಲೋಚನಾ, ರಾಮರಾಯರು ಕಾಫಿ ಕುಡಿಯಲೆಂದು ಎಬ್ಬಿಸತೊಡಗಿದರು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಹೆದರಿಕೆಯಾಗಿ ಮಗನನ್ನು ಕೂಗಿದಾಗ, ಅವನೂ ಓಡೋಡಿ ಬಂದು ತಂದೆಯನ್ನು ಎಬ್ಬಿಸಲು ಎಷ್ಟೇ ಪ್ರಯತ್ನ ಪಟ್ಟರೂ ರಾಮರಾಯರು ಏಳಲೇ ಇಲ್ಲ. ರಾತ್ರಿ ಅವರ ಮುಖದಲ್ಲಿ ಕಂಡ ತೇಜಸ್ಸು ಈಗಲೂ ಹಾಗೇ  ಇತ್ತು………. *********

ಕಥಾಯಾನ Read Post »

You cannot copy content of this page

Scroll to Top