ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪಯಣ

ಶಂಭುಗೌಡ.ಆರ್.ಗಂಟೆಪ್ಪಗೌಡ್ರ)

ಬೆವರ ಬಸಿಯಬಹುದೇ
ಹೇಳು ನೀನು
ಶ್ರಮದ ಕವಾಟ ತಟ್ಟದೇ
“ಬೆಳಕು”
ಕತ್ತಲ ಸಮಾದಿಯ
ಮೇಲೊಬ್ಬ ಗೊತ್ತಿಲ್ಲದೇ
ಇಟ್ಟು ಹೋದ ಮೊಗ್ಗಲ್ಲದ ಹೂ
“ಪ್ರೀತಿ”
ಮುಚ್ಚಿದ ಕಣ್ಣೊಡಲೊಳಗಿನ
ದಿವ್ಯ ಚೇತನ
ಬೆಳಕು ಮತ್ತೆ ಪ್ರೀತಿ
ಸಂಗತಿ ಎರಡಾದರೂ
ಬೆಳಗುವ ತತ್ವವೊಂದೇ,

ಬದುಕೊಂದು ಎರಡು ಬಾಗಿಲು
ತೆರೆದರೊಂದು
ಮುಚ್ಚುವುದು ಮತ್ತೊಂದು
ತೆಗೆದು ಮುಚ್ಚುವ ಮಧ್ಯೆ
ತನ್ನ ತನವ ಬಚ್ಚಿಟ್ಟು
ಪರರ ಮೆಚ್ಚಿಸುವ
ಬಣ್ಣದಾಟವೇನು ಬದುಕು
ಹೇಳು ನೀನು ;

ಕಾಣದವನ ಸೂತ್ರಗಳ
ಬೀಜಾಕ್ಷರಗಳು ನಾವು
ಒಬ್ಬರನ್ನೊಬ್ಬರು
ಕೂಡಲೂ ಬಹುದು
ಇಲ್ಲವೇ
ಒಬ್ಬರೊಳಗೊಬ್ಬರು
ಕಳೆದು ಹೋಗಲೂ ಬಹುದು
“ಬದುಕು”
ಯಾರೋ ಕಟ್ಟಿಟ್ಟ
ಮತ್ಯಾರೋ ಜೀಕುವ ಜೋಕಾಲಿ


About The Author

1 thought on “ಕಾವ್ಯಯಾನ”

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಗರ

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

Leave a Reply

You cannot copy content of this page

Scroll to Top