ಕಾವ್ಯಯಾನ
ಆಗಬಹುದು. ಎಂ.ಆರ್.ಅನಸೂಯ ಆಗಬಹುದು ಧುಮ್ಮಿಕ್ಕುವ ಕಣ್ಣೀರು ಕೇವಲ ಕಣ್ಣಂಚಿನ ಕಂಬನಿ ಮಲಗಬಹುದು ಕೆರಳಿ ನಿಲ್ಲುವ ದ್ವೇಷ ಮೊಂಡಾದ ಮಚ್ಚಾಗಿ ಮರಗಟ್ಟಬಹುದು ಬೆಂಕಿಯುಗುಳುವ ಕೋಪವೂ ಕೊರೆವ ಹಿಮಗಡ್ಡೆಯಾಗಿ ಇಳಿಯಬಹುದು ಉಕ್ಕಿ ಹರಿವ ಉನ್ಮಾದವೂ ನೆರೆಯಿಳಿದ ನದಿಯಾಗಿ ********
ಗಝಲ್ ಎ ಎಸ್ ಮಕಾನದಾರ. ಗಲ್ ಗಲ್ ಗಜ್ಜೆಯ ನಾದ ಹೊಮ್ಮಿಸುತ ಮನದ ಅಂಗಳದಲಿ ಒಮ್ಮೆ ಓಡಾಡಿ ಬಿಡು ಕತ್ತಲು ತುಂಬಿದ ಮನೆಯ ಮೂಲೆ ಮೂಲೆಯಲೂ ನಗುವ ತೂರಾಡಿ ಬಿಡು ಸೂರ್ಯ ಚಂದ್ರ ನಕ್ಷತ್ರಗಳ ಬೆಳಕೇಕೆ ನಿನ್ನ ಕಣ್ಣ ಬೆಳದಿಂಗಳು ಸಾಕು ಬೆಳಕ ಹಬ್ಬಕೆ ಬಾಗಿಲು ಕಿಟಕಿಗಳಾಚೆ ಇರಲಿ ಆ ಮುಗಿಲ ತಾರೆಯರು ಬಾಚಿಕೊಳ್ಳುತ್ತೇನೆ ಒಲವನ್ನೊಮ್ಮೆ ತೂರಾಡಿ ಬಿಡು ಬಾಳನಂದನಕ್ಕಿಗ ಚೈತ್ರ ಬಂದಾಗಿದೆ ಹಸಿರು ಬಳ್ಳಿಯ ತುಂಬ ಆಸೆಗಳ ಒಸಗೆ ಮೊಗ್ಗು ಹೂವಾಗಿ ಅರಳಿ ನಲಿಯುವ ಕಾಲ ತೋಳ ತೆಕ್ಕೆಯಲಿ ಒಲಾಡಿ ಬಿಡು ಹೃದಯ ಸಿಂಹಾಸನದಲಿ ನೀನೇ ಮಹಾರಾಣಿ ಯಾವ ದಾಳಿಗೂ ನಾನು ಹೆದರಲಾರೆನು ಎದೆ ಹಿಗ್ಗಿ ಹಾಡುವ ಹಾಡು ಕಿವಿಗೊಟ್ಟು ಕೇಳುತ್ತಾ ಪ್ರೀತಿಯ ಮತ್ತಲಿ ತೇಲಾಡಿ ಬಿಡು ಕನವರಿಕೆಯ ಕದ ತೆರೆದು ಕರಿ ನೆರಳ ಪರದೆ ಸರಿಸಿ ನೋಡು ಜಗವನೊಮ್ಮೆ ಎಷ್ಟು ಸುಂದರ ನೀ ಹೆಜ್ಜೆ ಇಟ್ಟಲ್ಲೆಲ್ಲಾ ಹೊನ್ನ ಸಾಲಿನ ಬೆಳೆಯು ಮಕಾನ ಎದೆ ಹೊಲದ ತುಂಬ ನಲಿದಾಡಿ ಬಿಡು ******
ಬಚ್ಚಿಟ್ಟ ನೆನಪುಗಳು ವೀಣಾ ರಮೇಶ್ ನೀ ಬರುವೆಯೆಂದು ಕಾಯುತ್ತಿದ್ದೆ……. ಒಡಲಸೆರಗಲಿ ಅದುಮಿಟ್ಟ ಬಯಕೆಗಳು ತಬ್ಬಲಿಯಾದ ನಿನ್ನ ಕನಸುಗಳ ಜೊತೆ ನನ್ನ ಕನಸುಗಳು ಕಾಡುವುದು ಬಸಿರಾಗದ ಆಸೆಯ ಕುಡಿಗಳು, ,ಹಸಿಯಾಗಿ, ಹುಲ್ಲುಜಾಡಿನಲಿ ಕಳೆಗೂಡಾದ ಬದುಕು ಹೊಸಕಿ.. ನೀ ಬರುವೆಯೆಂದು ಕಾಯುತ್ತಿದ್ದೆ …… ಹಾಕಿದ ಏಳು ಹೆಜ್ಜೆಗಳು ಬಿಸಿಯ ಕೆಂಡದ ಮೇಲಿನ ಅವಳ ತಪ್ಪಿನ ನಡೆಗಳು ಹೊಸಿಲ ಮೇಲೆ ಜಾಡಿಸಿ ಒದ್ದ ಸೇರಿನ ಜೊತೆ ಕನಸುಗಳ ಒದ್ದೋಡಿಸಿದೆ ಸರಕಾಗಿದೆ ನಿನ್ನ ಮೌಲ್ಯಗಳು, ಬಿಕರಿಯಾಗುತ್ತಿದೆ ಕನಸುಗಳು,…. ಬೆತ್ತ ಲಾಗಬೇಡ ಬತ್ತಿದ ಕನಸುಗಳಿಗೆ, ಮನಸು ಹರಿದ ಪುಟಗಳ ಮತ್ತೆ ಸೇರಿಸಿ ಸಂಬಂಧಗಳ ದಾರದಿಂದ ಬಿಗಿದು,ನಿನ್ನ ಕನಸುಗಳ ಬಸಿರಿಗೆ ಮೆಲುವಂಗಿ ಹೊದಿಸು ,ನೀ ಕಟ್ಟುವ ಕನಸಿಗೆ ಪ್ರೀತಿಯ ದೇಣಿಗೆ ನಾ ನೀಡುವೆ, ಮಾತು ಮೌನದಲ್ಲೆ ಅಡಗಿಸಿ ಪದಗಳು ಸ್ಪರ್ಶ ವಿಲ್ಲದೆ ಎದೆಯಲಿ ಬಚ್ಚಿಟ್ಟು ನೆನಪುಗಳು ನೀ ಇಲ್ಲದೆ ಒದ್ದಾಡಿವೆ….. ಅಲ್ಲೊಂದು ಇಲ್ಲೊಂದು ಕರಗಿಬಿದ್ದ ನೀರಹನಿಯೊಂದು ಚಿಗುರೊಡೆದ ಹಸಿರೊಂದು ಬಸಿರಾಗುವ ಕನಸಿಗೆ, ನೀಳಗೆನ್ನೆಯ ಮೇಲೆ ತುಸು ಹರಿದು ಎದೆಯ ತಂಪಾಗಿಸಿದ ಕಣ್ಣೀರ ಹನಿ ತಂದು, ಹೊಸ ಮನ್ವಂತರದ ಪರ್ವದಲ್ಲೊಂದು ಬದಲಾಯಿಸಿದ ಬದುಕಿನ ಗತಿ ಹಚ್ಚಿದ ಕನಸಿನ ಹಣತೆಗೆ ಬಾಳ ಸಮತೆಯಲಿ ಉರಿವ ದೀಪವಾಗಿ, ನಿನ್ನೊಡಲ ಕಾಂತಿಗೆ ಬೆಳಕಾಗುವೆ ನಾ ಕಾಯುತ್ತಿರುವೆ. ನೀ …ಬಂದೆ ಬರುವೆಯೆಂದು….. ********
ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ಜಹಾನ್ ಆರಾ ಎಚ್. ಕೋಳೂರು ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ನೇರಭಾವಕ್ಕೆ ತೂಕ ಕಡಿಮೆ ಸಾಗರದ ಆಳಗಲವಂತೆ ಆಗಸದ ಅನೂಹ್ಯವಂತೆ ನಾಜೂಕಂತೆ, ಸುಲಭವು ಅಲ್ಲವಂತೆ ಬಿಡಿ ಬಿಡಿ ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ನಾನು ಬರೆದದ್ದು ಅವನೊಪ್ಪನು ಇವ ಬರೆದದ್ದು ಮತ್ತೋರ್ವನೊಪ್ಪನು ಅವರು ಬರೆದದ್ದು… ನಾ ಒಪ್ಪಬೇಕಂತೆ!!! ಭಾವ ಭಕುತಿ ಅವರಿಗೆ ಬಿಟ್ಟದು. ಇಲ್ಲಿ ಜರೂರಾಗಿ ಹೇಳಬೇಕಾದ ನಿಯಮ ಕಡಿಮೆ ಪದಗಳ ಪೋಣಿಕೆ ಹೆಚ್ಚು ಭಾವ ಭಾರ ತುರುಕುವಿಕೆ ಶಬ್ಧ ಮಣಿಗಳ ದರ್ಪಣದಲಿ ನಿಂತರೂ ಪಾಶ್ಚಾತ್ಯ ಸಿಂಗಾರದ ಪ್ರತಿಬಿಂಬ ಬಿಡಿ ಬಿಡಿ ಹೇಳಿದೆಲ್ಲಾ ಕವಿತೆಯಾಗುದಿಲ್ಲ ನೇರ ಭಾವಕ್ಕೆ ತೂಕ ಕಡಿಮೆ ತಕ್ಕಡಿಯಲ್ಲಿ ಒದ್ದಾಡುತ್ತಿದ್ದ ಕವಿತೆಯಿಂದ ಅವ ಕವಿತ್ವ ಹೊರಹಾಕಿದ ಅರೆ! ತೂಕ ಸರಿಯಾಗಬೇಕು ಸತ್ವಕ್ಕೆ ಸ್ವಲ್ಪ ಮೇಕಪ್ ಬೇಕು ನಾನು ಮಾಡಿದರಾಗದು ಅವರಾದರೆ ಮಾಡಬಹುದಂತೆ ಈಗ ಭಾವವೂ ಕಸದಬುಟ್ಟಿ ಸೇರಿತು ‘ವ್ಹಾ! ಎಂತಹ ಕವಿತೆ’ ಎಂದವನೆ ಮತ್ತೆ ಮತ್ತೆ ತೂಕಕಿರಿಸಿದ ತಡಕಾಡಿ ತಮ್ಮಿಸಿ ಅತ್ತಿತ್ತ ಕಲಿತಿದ್ದನ್ನು ಸ್ಮರಿಸಿ ನನ್ನ ಮುಂದೆ ವಾಂತಿ ಮಾಡಿ “ಕ್ಷಮಿಸಿ, ಹೇಳಿದೆಲ್ಲಾ ಕವಿತೆಯಾಗುದಿಲ್ಲ” ಎಂದು, ಗುಜರಿ ಅಂಗಡಿಯವ ಬಾಗಿಲು ಹಾಕಿಕೊಂಡ ತನ್ನತನವೇ ಕಳಚಿ ಉಸಿರುಗಟ್ಟಿದ ಕವಿತೆ ರಕ್ತಸಿತವಾಗಿ ಚೂರಿಯಿಂದಾದ ಗಾಯಗಳನ್ನು ನಾಲಿಗೆಯಿಂದ ನೆಕ್ಕಿದಂತೆ ಕುಂಯ್ಯಿ ಎನ್ನದೆ ನನ್ನ ಕಡತ ಸೇರಿತು. ಮತ್ತದೇ ಗುಡುಗು “ಬಿಡು ಬಿಡು ಬರೆದದ್ದಲ್ಲಾ ಕವಿತೆಯಾಗುದಿಲ್ಲ” *********
ಅರಿವು ಶಿವಲೀಲಾ ಹುಣಸಗಿ ಚಿಂತೆಯನು ಬಿಡುಮನವೇ ಕಾಯ್ವನೊಬ್ಬನಿಹನೆಮಗೆ! ಕಲ್ಲರಳಿ ಹೂವಾಗಿ ನಿಂತಿಹುದಿಲ್ಲಿ ಕಂಬನಿಯ ಮಿಡಿಯದೆ ಮೌನದಲಿ ಸ್ವೀಕರಿಸು ನಿನ್ನಾಸೆ ಬಳ್ಳಿ ಚಿಗುರೊಡೆದು ಹಬ್ಬಲಿ ಕರಳ ಬಳ್ಳಿ…….. ದೇಹವಿದು ನಶ್ವರವು ಬಾಳಿಕೆ ಬರದು ಆತ್ಮವಿದು ಶಾಶ್ವತವು ಕಂಗಳಿಗೆ ಕಾಣದು ಎಲುಬಿನಹಂದರದಲ್ಲಿ ವ್ಯಾಮೋಹ ಇಲ್ಲ ಬದಿಗೊತ್ತಿ ಚಿತ್ತವಿರಿಸು ಮುಕ್ತಿಯಲಿ…… ಉಸಿರಿನಲ್ಲೊಂದಾಗಿ ಕಾಯಕದಿ ನೆಲೆಸಿ ಕರ್ಮವೊಂದೇ ನಮಗೆ ಕೈಲಾಸ ಫಲಾಫಲಗಳು ನಿನ್ನಲ್ಲೇ ನೆಲೆಸಿ ಭಿಕ್ಷೆ ನೀಡೆಮಗೆ ಮುಕ್ತಿಯ ಕರುಣಿಸಿ…… ಜೀವಿಗಳೆದೆಯಲಿ ಕಿರಣಚಿಮ್ಮಿಸಿ ನಲಿವೆಂಬ ಹೂವನರಳಿಸಿ ಕಂಗಳೆದೆಯಲಿ ಬಿಂಬವಿರಿಸಿ ಭಾವದಾಚೆಯೆನ್ನ ಮುಕ್ತ ಗೊಳಿಸಿ…… *********
ಭಾವ ರಂಗವಲ್ಲಿ ಶಾಲಿನಿ ಆರ್. ಬೆರಳೊಳಿಡಿದ ಮರುಳಿಗೆ ಹುಡಿ ಒಡಮೂಡಿ ಅಂಗಳದಲಿ ನಲವಿಸುತಿದೆ, ಮನದ ಭಾವವೆಲ್ಲ ಮುದದಿ ಮೂಡಿ ಅರಳಿ ಮೆಲ್ಲಗೆ ರಂಗವಲ್ಲಿ ಇಲ್ಲಿ, ಎಳೆದ ಪ್ರತಿ ಗೆರೆ ಗೆರೆಯಲು ಅವನದೆ ಪ್ರೇಮದಮಲು ಅಂಕುಡೊಂಕಿನ ವೈಯಾರದಲು ಗೆರೆ ಬಿಂಕ ತೋರಿ ಅಣಕಿಸಲು ಅರಳಿತ್ತು ಮೋಡಿಗಾರ ರಂಗವಲ್ಲಿ ಇಲ್ಲಿ, ಗೆರೆಯಿಂದ ಗೆರೆಯ ಬಳಸಿ ಒಲವನೆಲ್ಲ ಸುತ್ತಿ ಬಳಸಿ ಮನವದು ಸೃತಿಸಿ ಶೃತಿಸಿ ಸ್ಪುರಿಸಿತಾಗ ನಗೆಯ ರಂಗವಲ್ಲಿ ಇಲ್ಲಿ, ನೀಲನಲಿ ನೀಲವಾಗಿ ತೇಲುತಿದೆ ಮನ ಪರಿಮಳಿಪ ಗಂಧವಾಗಿ ತೀಡುತಿದೆ ಭಾವ ಇಟ್ಟ ಪ್ರತಿ ಗೆರೆಗಳು ಸರಸದಿ ಬೆಸೆವ ಪರಿಗೆ ಲಜ್ಜೆವರಿತು ನಾಚುತಿದೆ ರಂಗವಲ್ಲಿ ಇಲ್ಲಿ, ಕ್ಷಣದ ಕಣ್ಣ ನೋಟಕೆ ಸರಸರನೆ ಹರಿದು ಮನದ ಎಲ್ಲ ಭಾವಕೆ ಬಂಧಿಯಾಗಿ ಬೇಡಿದಷ್ಟು ನಿಂದು ಗಾಢವಾಗಿ ಮೂಡುತಿದೆ ರಾಗದೊಲವ ರಂಗವಲ್ಲಿ ಇಲ್ಲಿ, ಆತ್ಮಕೊಲಿದವನ ನೇಹಕೆ ಬೆರಳ ಸ್ಪರ್ಶ ಮಾಟಕೆ ಕವನವಾಗಿ ಪದದೊಳಗೆ ಒಂದಾಗಿ ಮೂಡಿದೆ ಭಾವಲಹರಿ ರಂಗವಲ್ಲಿ ಇಲ್ಲಿ, ಮನ ಮನಗಳ ದ್ವಂದ್ವಗಳನಳಿಸಿ ಸುಸಂಬಂಧಗಳ ಉಳಿಸಿ ಮರೆಸಿ ಬೆಸೆವ ಸಾಂಸ್ಕೃತಿಕ ಪರಿಕಾರದ ಪ್ರತೀಕ ಶುಭಕೋರುವ ಸಿರಿ ರಂಗವಲ್ಲಿ ಇಲ್ಲಿ… ******
ಜಗದ ಜ್ಯೋತಿ ರೇಮಾಸಂ ದಂಡಿ ಕಟ್ಟದೇ ಮಾಡಿಕೊಂಡೆಯಲ್ಲ ಕೊರಳಿಗೆ ತಾಳಿಯನೂ ಬಿಗಿಯಲಿಲ್ಲ ಮೈಗೆ ಅರಿಶಿಣ ಮೆತ್ತಿಕೊಳ್ಳಲಿಲ್ಲ ಮದುವೆಯ ಹಂದರವು ಹರಿವಿರಲಿಲ್ಲ ಹೊಸ ಇತಿಹಾಸವ ಸೃಷ್ಟಿಸಿಬಿಟ್ಟೆಯಲ್ಲ ಸಮಾನತೆಗಾಗಿ ಧರಣಿ ಹೂಡದೆ ಹೆಣ್ಣೆಂದು ಅವಕಾಶವಾದಿಯಾಗದೆ ಅಲ್ಲಮರ ಮಂಟಪದ ಜ್ಯೋತಿಯಾದೆ ಉಡತಡಿ ಉಡುಗೊರೆಯಾಗಿ ಉದಯಿಸಿದೆ ಕದಳಿಗೆ ಕರ್ಪುರದಂತೆ ಅರ್ಪಿತಳಾದೆ ನೀ ಶರಣ ಚಳುವಳಿಯ ಚೇತನ ಅಲ್ಲಮರ ಸಮ ಸಂವೇದನಶೀಲಳು ಅನುಭಾವಿಯುಕ್ತ ಮೇರು ಸಾಹಿತಿ ವಿಶಿಷ್ಟ ವೈಚಾರಿಕ ಮೌಲಿಕ ವಚನಗಾರ್ತಿ ಕನ್ನಡದ ಪ್ರಥಮ ಬಂಡಾಯ ಕವಯತ್ರಿ ಸಾರಿದೆ ಜಗದ ಕಣ್ಣು ಬೆತ್ತಲಾಗಿದೆ ಮನವು ಚಂಚಲದಿ ಬೆತ್ತಲಾಗಿದೆ ಇಷ್ಟ ಕಾಮ್ಯಗಳಡಿ ಸಿಕ್ಕಿಕೊಂಡಿದೆ ಭೌತಿಕ ಭೋಗದ ಬಂಧನದಲಿದೆಯಂದೆ ಜಗದ ಬೆತ್ತಲ ನೀ ಸ್ವತಃ ತೋರಿದೆ ಭೋಗ ಜೀವನದ ಬಲಿದಾನ ಕರ್ಮಠ ಯೋಗಿಣಿಯಾಗಿ ಸಾಧನ ಯೋಗಾಂಗ ತ್ರಿವಿಧಿಯ ಅನುಷ್ಠಾನ ಅಲ್ಲಮರಿಂದ ಧೀರ ನುಡಿಯ ತಾಯಿಯ ನಮನ ಅಕ್ಕ ನೀ ವೈರಾಗ್ಯ ನಿಧಿ ಜ್ಞಾನ ಘನ ವಿರತಿ ಘನ ಚನ್ನಮಲ್ಲಿಕಾರ್ಜುನೊಬ್ಬನೇ ಪುರುಷನೆಂದವಳು ಮಿಕ್ಕವರೆಲ್ಲ ಎನಗೆ ಸ್ತ್ರೀ ಸಮಾನರೆಂದವಳು ಕೇಶಾಂಬರವು ಜಗದ ಜನರ ಹಂಗಿಗೆಂದವಳು ಗಟ್ಟಿಗಿತ್ತಿ ಸಾದ್ವಿ ಅಕ್ಕಮಹಾದೇವಿಯಾದಳು ಅಕ್ಕ ವಿಶ್ವ ಸ್ತ್ರೀ ಕುಲದ ಜ್ಯೋತಿಯಾಗಿಹಳು ***********
ಅಪ್ಪಣ್ಣನಿಗೊಂದು ಮನವಿ ಎ.ಎಸ್. ಮಕಾನದಾರ ಗದಗ ಅಪ್ಪಣ್ಣ ಎಷ್ಟೊಂದು ಕತ್ತಿಗಳು ಸೇರಿಕೊಂಡಿವೆ ನಿನ್ನ ಹಸಬಿಯೊಳು ಆ ಕತ್ತಿಗಳೇ ಮಾಡಿದ ಕ್ಷೌರ ಹೇಗೆ ಸೂಚಿಸಿ ಬಿಡುತ್ತವೆ. ಆ ಚಾಂದ ದಾಡಿ ಮುಸ್ಲಿಮನದೆಂದು ಆ ಜುಟ್ಟು ಬ್ರಾಹ್ಮಣನನದೆಂದು ಆ ಕೆಳದಾಡಿ ಸಿಖ್ಖನದೆಂದು ಆ ಫ್ರೆಂಚ್ ದಾಡಿ ಕ್ರಿಶ್ಚಿಯನನದೆಂದು ಮೀಸೆ ಬಿಟ್ಟರೊಂದು ಜಾತಿ ಕೇಶ ಬಿಟ್ಟರೊಂದು ಜಾತಿ ಮುಡಿ ಕಟ್ಟಿ ದಾಡಿ ಬಿಟ್ಟರೊಂದು ಜಾತಿ ಎಲ್ಲವನು ಬೋಳಿಸಿಟ್ಟು ಹೊಸದೊಂದು ವ್ಯವಸ್ಥೆ ನಿರ್ಮಿಸಬಾರದಿತ್ತೇ ಅಪ್ಪಣ್ಣ ನೀನು ಅಣ್ಣ ಅಕ್ಕ ಅಲ್ಲಮರೊಂದಿಗೆ ಅನುಭವ ಮಂಟಪದ ಚುಕ್ಕಾಣಿಯಾಗಿದ್ದಿ ಯಾಕಣ್ಣ ಈ ವ್ಯವಸ್ಥೆಗೆ ಕಡಿವಾಣ ಹಾಕದೆ ಸುಮ್ಮನಾದೆ ಗಂಡಲ್ಲದೆ-ಹೆಣ್ಣಲ್ಲದೆ ಒಳಗಿರುವ ಆತ್ಮಕ್ಕೆ ಅನುಭವ ಮಂಟಪದಲಿ ಅಂತರಂಗ ಶುದ್ಧಿ ಮಾಡಿದ ನೀನೇ ಬಹಿರಂಗ ಶುದ್ಧಿಗಾಗಿ ಮಾಡಿದ ಈ ಕ್ಷೌರದಿಂದ ಅದ್ಹೇಗೆ ಅಶಾಂತಿ ತಾಂಡವವಾಡುತ್ತಿದೆ ? ಅಪ್ಪಣ್ಣ ನಿನಗೆ ನೆನಪಾಗಲಿಲ್ಲವೇ ಶೂನ್ಯನಾದ ಅಣ್ಣ ಬೆತ್ತಲಾದ ಅಕ್ಕ ಜಗದ ಕೊಳೆ ತೊಳೆಯುವ ಮಾಚಿದೇವ ತನ್ನ ಚರ್ಮವನೇ ಕತ್ತರಿಸಿ ಚಡಾವು ಮಾಡಿದ ಹರಳಯ್ಯ ಕಲ್ಯಾಣಮ್ಮ ಯುದ್ಧಕ್ಕೆ ವಿದಾಯವಿತ್ತ ಅಶೋಕ ಬುದ್ಧನಾದ ಸಿದ್ಧ ಅಂತೆಯೇ ಎಸೆದು ಬಿಡಲು ಹೇಳು ಎಲ್ಲ ಸಹೋದರರಿಗೆ ಈ ಜಾತಿ ಸೂಚಕ ಕತ್ತಿಗಳನು…….. ********
ಗಝಲ್ ಕಾಫಿ಼ಯಾನಾ…………. ಎ.ಹೇಮಗಂಗಾ ಮಧುಪಾನದ ನಶೆಯಲ್ಲಿ ಭೂತವನ್ನು ಮರೆಯಬೇಕಿದೆ ಬೆಂಬಿಡದೇ ಕಾಡುವ ಕಹಿಕ್ಷಣಗಳಿಗೆ ಗೋರಿ ಕಟ್ಟಬೇಕಿದೆ ಮರೆಯಲಾಗದ ನೋವ ಮರೆವುದಾದರೂ ಹೇಗೆ ಸಾಕಿ? ಅಂತರಂಗದ ಬಿಕ್ಕುಗಳನ್ನು ಅಲ್ಲಲ್ಲಿಯೇ ಹೂಳಬೇಕಿದೆ ನೋವು, ಯಾತನೆಗಳು ಹೊಸದಲ್ಲ ಎಲ್ಲ ಅವಳಿತ್ತ ಕೊಡುಗೆ ಅವಳಿಗೆಂದೇ ಪ್ರತಿಕ್ಷಣ ಮಿಡಿದ ಧಮನಿಗಳ ಸಂತೈಸಬೇಕಿದೆ ಬಾಳು ಪಾಳು ಬಿದ್ದ ಮನೆಯಂತೆ ಭಣಗುಡುತ್ತಲೇ ಇದೆ ಸಾಕಿ ಅವಳನ್ನೇ ಬಯಸುವ ಹುಚ್ಚುಮತಿಗೆ ಅರಿವಳಿಕೆ ನೀಡಬೇಕಿದೆ ಗರಿ ಚಾಮರಗಳು ತೊನೆದಂತೆ ಕಂಡಿವೆ ಮಧುಪಾತ್ರೆಯಲ್ಲಿ ಭ್ರಮೆಯನ್ನೇ ನಿಜವೆಂದು ನಂಬಿದ ಮನಕೆ ತಿಳಿಹೇಳಬೇಕಿದೆ ಕಾಣದ ಕೈ ಕದಡುತ್ತಲೇ ಇದೆ ಜೊಂಡಾದ ಎದೆಗೊಳವನ್ನು ಮೊರೆಯಿಡುವ ಹೃದಯಕೆ ಮೌನಪಾಠವನು ಕಲಿಸಬೇಕಿದೆ ಮಧುಶಾಲೆಯ ಪ್ರತಿ ಭೇಟಿಯೂ ಸಾವಿನ ಮನೆಗಲ್ಲವೇ ಸಾಕಿ? ನೆನಪುಗಳೇ ವಿಷವಾಗಿರೆ ಕೊನೆಗೊಮ್ಮೆ ಉಸಿರು ನಿಲ್ಲಿಸಬೇಕಿದೆ *********
ಗಝಲ್ ಉಮೇಶ ಮುನವಳ್ಳಿ ನೀನು ಬಯಸಿದಂತೆ ಬದಲಾಗಿರುವೆ, ಅದಲುಬದಲಾದದ್ದು ನಿನಗೆ ನೆಮ್ಮದಿಯೇ? ನೀನು ಅಂದುಕೊಂಡಂತೆ ಸಾಕಾರಗೊಂಡಿರುವೆ, ಗುರಿ ನೆರವೇರಿದ್ದು ನಿನಗೆ ನೆಮ್ಮದಿಯೇ? “ನಿನ್ನ ಜೊತೆಗಿನ ಕೆಲಸ ಮುಗಿದು ಹಳೆಮಾತಾಗಿದೆ ಮತ್ತೆ ಪೀಡಿಸದಿರು” ಇದು ನಿನ್ನ ಕೋರಿಕೆ ದುಃಖ ಉಮ್ಮಳಿಸಿ ಕತ್ತು ಹಿಸುಕುತಿದೆ, ಹನಿಯಾಗಿಸದೆ ನಕ್ಕಿದ್ದು ನಿನಗೆ ನೆಮ್ಮದಿಯೇ? “ಪ್ರೀತಿ ಎಂದರೆ ಇದು ಮಾರುಕಟ್ಟೆಯಲ್ಲ, ನನ್ನಲ್ಲಿ ನಿನಗೆ ನಿರೀಕ್ಷೆ ಬೇಡ” ಇದು ನಿನ್ನ ಅಳಲು ಪ್ರೀತಿಯಲಿ ಒಂದಿಷ್ಟು ಸಲುಗೆ ಬೇಡವೆ, ನಾನು ಪರಿಷ್ಕರಣಗೊಂಡಿದ್ದು ನಿನಗೆ ನೆಮ್ಮದಿಯೇ? “ಮಾತು ಮಿತವಾಗಿರಲಿ ಹಿತವಾಗಿರಲಿ, ಬುದ್ದಿವಾದ ನನಗೆ ಇಷ್ಟವಿಲ್ಲ” ಇದು ನಿನ್ನ ಸಂಕಷ್ಟ ತಿದ್ದಿ ಹೇಳಿದ್ದು ಇಷ್ಟವಾಗದಿದ್ದರೆ, ನಾನೇ ತಿದ್ದಿಕೊಂಡಿದ್ದು ನಿನಗೆ ನೆಮ್ಮದಿಯೇ? “ಸೈರಣೆ ಇರಲಿ, ನಾನು ಹೇಳುವುದನ್ನು ಸಮಾಧಾನದಿಂದ ಕೇಳು” ಇದು ನಿನ್ನ ಆಜ್ಞೆ ನನ್ನ ಭಾವನೆ ವ್ಯಕ್ತಪಡಿಸಲಾಗದೇ, ಬಯಕೆ ಬಚ್ಚಿಟ್ಟುಕೊಂಡಿದ್ದು ನಿನಗೆ ನೆಮ್ಮದಿಯೇ? “ಬಂದಿರುವ ಅತಿಥಿಗಳಿಗೆ ಸಮಯಕೊಡಬೇಕಿದೆ ಸಹನೆಯಿಂದಿರು” ಇದು ನಿನ್ನ ಅಹವಾಲು ಇಚ್ಛೆಗಳ ಸಹಿಸಿ ದಹಿಸಿಕೊಂಡಿರುವೆ, ಬೂದಿಯಾಗಿ ಬಿದ್ದಿದ್ದು ನಿನಗೆ ನೆಮ್ಮದಿಯೇ? “ಆರಾಮವಾಗಿರಿ, ಯೋಚಿಸದಿರಿ, ನಿಮ್ಮ ಪಾಡಿಗೆ ನೀವು ಇದ್ದುಬಿಡಿ” ಇದು ನಿನ್ನ ಸವಾಲು ‘ಉಮಿ’ಗೆ ದಿಗಿಲು, ಭುಗಿಲೆದ್ದ ಜ್ವಾಲೆ, ಉರಿ ನಂದಿಸಿ, ವಂದಿಸಿ ನಿಂತದ್ದು ನಿನಗೆ ನೆಮ್ಮದಿಯೇ? ******
You cannot copy content of this page