ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ತಾರೆಗಣ್ಣು ಸ್ವಭಾವ ಕೋಳಗುಂದ ಪಾದಗಳು ಬಿರುಕು ಬಿಟ್ಟಿವೆ ನೆರಕೆ ಬಳಿದು ವರ್ಷವಾಗುತ್ತಾ ಬಂತು ದೀಪದ ಕಮಟು ಆರಿಲ್ಲ ಓರೆ ಕದ ಮುಚ್ಚಿಲ್ಲ ಪದೇ ಪದೇ ಗುಯ್ಗುಡುವ ಸೊಳ್ಳೆ ರೇಗಿಸುತ್ತಲೇ ತಾಳ್ಮೆಗೆ ಸವಾಲು ಇನ್ನೂ ಕುದಿ ಬಂದಿಲ್ಲ ಚಿಪ್ಪು ಹಸೀಟ್ಟು ಒಯ್ದು ತಿರುವಿ ಕಟ್ಟಲು ಅದರ ಗೊಣ್ಣೆ ಆಗಾಗ ಇಣುಕುತ್ತ ಸ್ವಾರೆಗೂ ಗಂಗ್ಳಕ್ಕೂ ಕಣ್ಣು ಕೊಂಡಿ ಹಾಕುತ್ತಿದೆ ಉರಿಯದ ಹೊಲೆ, ಹಾಲಿಲ್ಲದ ಮೊಲೆ ಹರುಕು ಅಂಗಿ ಹಸಿವಿನ ಜೊತೆ ಕಾದು ಕಾದು ಸೋತಿತ್ತು ತೇಪೆಗೆ ಸೂಜಿಗಣ್ಣಾಗಿ ಸೂರಂಚಲಿ ತೂಗಿತ್ತು ಅವನ ಜೇಬೋ ನಕ್ಷತ್ರದೂರು ತಾರೆಯೂರ ಚಂದ್ರಣ್ಣ ಬೆಳಗು ಬಳಿಯೋ.. ಹಟ್ಟಿಯ ಹುಡುಗರ ಚ್ವಾಮಂದೇವರ ಮೆರವಣಿಗೆ ಹರಕೆ ಕುಣಿತ ತಟ್ಟೆಯ ಬಡಿತ ಹಾಳು ಬಾವಿಗೆ ಗಣೇಶ ಸಂಭ್ರಮ ಜೈ ಜೈ ಹೊಗೆ ಕಿಂಡಿಯ ಬೆಳಕಲ್ಲಿ ಜೇಡ ಹೆಣೆದ ಬಲೆಯಲ್ಲಿ ಹಲ್ಲಿಯ ಬೇಟೆ ಬುಡ್ಡಿ ಉರಿದು ಕತ್ತಲಿಗೆ ಕೇಡು ಮಾಡಿತ್ತು ದೂರ ಬೆಟ್ಟದ ಕನಸು ರಂಗೋಲಿಯ ಹಾಸಿತ್ತು ಮೂರು ಪಟ್ಟಿಗೆ ಕೈಲಾಸ ನಾಮಕ್ಕೆ ವೈಕುಂಟ ಕಾಯ್ವ ಊರ ಮಾರಿಗೆ ಕರಿ ಹುಂಜನ ಭೇಟೆಯ ಊಟ ಮಡಿ ಪೂಜಾರಿಯ ಕಾಲಿಗೆ ನಾಯಿ ಉಚ್ಚೆಯ ಮಜ್ಜನ ಮಾಡಿತ್ತು ಬೊಚ್ಚು ಬಾಯ ಅಜ್ಜಿ ಅಂಗಳದ ಕತೆಗೆ ಹೂಂಗುಡುವ ಹುಡುಗರ ಸಾಲು ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೊರೊನ ಕಾಲದಲ್ಲಿ… ಶ್ವೇತಾ ಎಂ ಯು. ಕರೋನಾ ಕಾಲದಲ್ಲಿ ಕೂತುಂಡು ಮೈ ಭಾರ ಹೆಚ್ಚಿಸಿದವರ ನಡುವೆ ದುಡಿಮೆಯಿಲ್ಲದೆ ಜೀವಭಯದಿಂದ ಬದುಕೊ ಹಠವು ನಾಳೆ ಹೇಗೆಂದು ಸೊರಗಿದವರು ಅನಾಯಾಸವಾಗಿ ಸಿಕ್ಕ ರಜೆಗೆ ಹಾಯಾಗಿ ಪ್ರವಾಸ ಮಾಡಲಾಗದೆ ಮರುಗುತಿರುವ ಮಂದಿಯ ನಡುವೆ ತವರ ಸೇರಿಕೊಳ್ಳಲು ಉಟ್ಟ ಬಟ್ಟೆಯಲಿ ಬರಿಗಾಲಲ್ಲಿ ನಡೆದು ಬೀದಿ ಪಾಲಾದವರು ಚೆಂದ ಸೀರೆಯುಟ್ಟು ತುಟಿಗೊಂದಿಷ್ಟು ಹೆಚ್ಚೇ ರಂಗು ಬಳಿದ ಲಲನೆಯರು ರಾಜಕೀಯ ಭವಿಷ್ಯವು ಲೆಕ್ಕಾಚಾರವು ಸಹಾಯ ಹಸ್ತ ಚಾಚಿ ತೆಗೆದ ಸೆಲ್ಫಿಗೆ ನಗುವ ಚೆಲ್ಲಿ, ಕೈ ಚಾಚಿದ ನೋವ ಮರೆತು ಹಸಿದೊಡಲ ತುಂಬಲು ಕಾದುನಿಂತಿರುವವರು ಕುಡಿದು ಮೋಜು ಮಸ್ತಿ ಖಾಲಿ ರೋಡು ಜಾಲಿ ರೈಡು ದಕ್ಕಿದ ಪಾಸಿಗೆ ತುಂಬಿದ ಜೇಬು ತುಂಬು ಗರ್ಭಿಣಿ ಹತ್ತಾರು ಮೈಲಿ ನಡೆದು ಉಸಿರ ಬಿಡುವಾಗ ಅಯ್ಯೋ! ಏನದ ಯಾವುದೇ ಚೆಕ್ ಪೋಸ್ಟು ಮನೆಯಲ್ಲಿರಿ ಸುರಕ್ಷಿತರಾಗಿರಿ ಎಂದರೆ ರಸ್ತೆಗಿಳಿದು ಗೊತ್ತು ಗುರಿಯಿಲ್ಲದೆ ಸುಖಾಸುಮ್ಮನೆ ಅಲೆದವರ ನಡುವೆ ತಮ್ಮವರ ಸಾವು ನೋವಿಗೂ ಸ್ಪಂದಿಸಲಾರದೆ ಕ್ವಾರಂಟೈನ್ ಗೆ ಸಿಲುಕಿದ ಬಡಪಾಯಿಗಳು ದೊಡ್ಡ ಕಾರೊಳಗಿದ್ದ ಸೆಲೆಬ್ರಿಟಿ ಮಾಡಿದ ಅಪಘಾತಕ್ಕೆ ಚಿಕ್ಕದೆ ಒಂದು ಕೇಸು ದೊಡ್ಡವರ ಕಾನೂನಿಗೆ ಹೆದರಿ ರೈಲು ಹಳಿಗಳ ಮೇಲೆ ದಣಿವಾರಿಸಿಕೊಳ್ಳುವ ಧಾವಂತದಲ್ಲಿ ಕಟ್ಟಿಟ್ಟರೊಟ್ಟಿ ಮರೆತು ಪ್ರಾಣ ತೆತ್ತು ಕರೋನ ಕಾಲದಲ್ಲಿ ಸುದ್ದಿಯಾದವರು ನನ್ನ ಜನ. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಹೇಮಗಂಗಾ ಕೊರೋನಾ ಕನಸುಗಳ ಕಮರಿಸಿದೆ ಮರಳಿ ಊರ ಸೇರುವುದು ಹೇಗೆ ? ಹಾಳು ಸುರಿವ ಬೀದಿ ಮಸಣವಾಗಿದೆ ಮರಳಿ ಊರ ಸೇರುವುದು ಹೇಗೆ ? ಶಾಂತವಾಗಿ ಹರಿಯುತ್ತಿದ್ದ ಬಾಳಕಡಲಿನಲಿ ಎಣಿಸದ ಉಬ್ಬರವಿಳಿತ ಇರುವ ನೆಲೆ ಜೀವಗಳ ನಲುಗಿಸಿದೆ ಮರಳಿ ಊರ ಸೇರುವುದು ಹೇಗೆ ? ದುಡಿಮೆ ಆದಾಯವಿಲ್ಲದ ಬದುಕು ನರಕಸದೃಶವಲ್ಲದೇ ಮತ್ತೇನು ? ತಿನ್ನುವ ಅನ್ನಕೂ ತತ್ವಾರವಾಗಿದೆ ಮರಳಿ ಊರ ಸೇರುವುದು ಹೇಗೆ ? ಅನುಕಂಪವಿಲ್ಲದ ಸಾವು ಹಗಲಲ್ಲೂ ಭೀತಿಯ ಕಾರಿರುಳ ಹರಡಿದೆ ಬೆದರಿದ ಮನ ದೃಢತೆ ಕಳೆದುಕೊಂಡಿದೆ ಮರಳಿ ಊರ ಸೇರುವುದು ಹೇಗೆ ? ತಿಳಿದಿಲ್ಲ ಹೊಂಚು ಹಾಕಿದ ಹದ್ದಿನಂತೆ ಎಂದೆರಗುವುದೋ ಎಂದು ಮದ್ದಿಲ್ಲದ ಮಹಾಮಾರಿ ಹೆದರಿಸಿದೆ ಮರಳಿ ಊರ ಸೇರುವುದು ಹೇಗೆ ? ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಸಹದೇವ ಯರಗೊಪ್ಪ ಬದುಕಿಗೆ ಅರ್ಥ ಕಲ್ಪಿಸಲು ಉಲಿದೆ ನೀ ಬರಲೇ ಇಲ್ಲ ಒಲವಿಗೆ ಬಲವ ತುಂಬಲು ಕೂಗಿದೆ ನೀ ಬರಲೇ ಇಲ್ಲ ಬೆವರಿನ ಅಂಬಲಿ ಉಂಡು ಒಡಲ ಹಂಬಲ ತಣಿಸುವೆ ಬಾ ಪ್ರೇಮದ ಎಲ್ಲೆ ಮೀರಲು ಗೋಗರೆದೆ ನೀ ಬರಲೇ ಇಲ್ಲ ಇರುಳ ಕಾಲುದಾರಿ ಕತ್ತಲು ಮೆತ್ತಿ ಮೈ ಮುರಿಯುತಿದೆ ಭಾವನೆಗಳ ಬೆಳಕಲಿ ಒಂದಾಗಲು ಕರೆದೆ ನೀ ಬರಲೇ ಇಲ್ಲ ಮದಿರೆಯಲಿ ಅಧರ ಕಳಚಿ ನೂರು ನವಿಲು ಕುಣಿದಂತಾಗಿದೆ ಭಾರವಾದ ತನು ಹಗುರುಗೊಳಿಸಲು ಕೈ ಚಾಚಿದೆ ನೀ ಬರಲೇ ಇಲ್ಲ ನೇಸರ ಮಗ್ಗಲು ಬದಲಿಸುವ ಮುನ್ನ ಮರಳಿ ಬರುವ ನೀರಿಕ್ಷೆ ಇತ್ತು ಪಾದ ಮುತ್ತಿಕ್ಕಿದ ಎದೆಯ ಹೊಸ್ತಿಲು ಕಾಯುತಿದೆ ನೀ ಬರಲೇ ಇಲ್ಲ ಸಾಚಿಯ ಆ ದಿನಗಳ ನೆನಪು ಕುಡಿದು ತೂರಾಡುತಿವೆ ತುಟಿಯ ಮೊಗ್ಗಿಗೆ ಮಧು ಸವರಲು ಕಾದೆ ನೀ ಬರಲೇ ಇಲ್ಲ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಈರಪ್ಪ ಬಿಜಲಿ ಕಗ್ಗೊಲೆಯಾದ ಕನಸುಗಳನು ಗಂಟುಕಟ್ಟಿ ಹೊತ್ತುಕೊಂಡು ನಡೆದಿದ್ದೇವೆ ಹತ್ಯೆಯಾದ ಮನಸುಗಳನು ವಸ್ತ್ರದಲಿ ಸುತ್ತಿಕೊಂಡು ನಡೆದಿದ್ದೇವೆ ।। ವಿಧಿಯಾಟಕೆ ಬದುಕು ಬಲಿಯಾಗಿ ಕೊನೆಯಾದಂತೆ ಕಾಣುತಿದೆ ಬೂಟಾಟಿಕೆ ಮಾತಿಗೆ ಮರುಳಾಗಿ ಬಾಳಬಂಡಿ ಹತ್ತಿಕೊಂಡು ನಡೆದಿದ್ದೇವೆ ।। ಶ್ರಮಿಕರು ಸತ್ತರು ನೆತ್ತರು ಬೀದಿಬೀದಿಗೆಲ್ಲ ನದಿಯಾಗಿ ಹರಿದಿದೆ ಧನಿಕರು ಮೂಗಿಗೆ ಸವರಿದ ತುಪ್ಪವನು ಮೆತ್ತಿಕೊಂಡು ನಡೆದಿದ್ದೇವೆ ।। ಹೊತ್ತೊತ್ತಿಗೂ ಅನ್ನಆಹಾರ ನೀರಿಲ್ಲದೇ ಕ್ಷಣಕ್ಷಣವು ಬಳಲಿದೇವು ಉಸಿರಳಿವ ಮುನ್ನ ಗೂಡುನೆನೆದು ಮನೆ ಸೇರುವಾಸೆ ಕಟ್ಟಿಕೊಂಡು ನಡೆದಿದ್ದೇವೆ।। ಬೆಂದುಬೆಂಡಾದ ಜೀವಿಗಳ ಮೊಗದಲಿ ಬಿಜಲಿ ಮಿನುಗಿ ಒಳಿತಾಗಲಿ ನಡುನೀರಲಿ ನಿಂತವರು ದಡಸೇರಲು ಮುತ್ತಿಕೊಂಡು ನಡೆದಿದ್ದೇವೆ *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

‘ಒಲವ ವಿಜ್ಞಾಪನೆ ವಸುಂಧರಾ ಕದಲೂರು ಹೀಗೆ…ಮಾತು ಮಾತಿಗೂ ಮಾರುತ್ತರ ಬೇಡಎನ್ನವೆಯಲ್ಲಾ ನನ್ನ ಸೋಗೆಮಾತೇ ಆಡದಲೆ ನಾ ನಿನಗೆಅರ್ಥ ಮಾಡಿಸುವುದು ಹೇಗೆ ಚೆಂದದಲಿ  ಮಾತನಾಡದೆಬಿಮ್ಮನೆ ಬಿಗುಮಾನದಲಿನೀ ನಿನ್ನ ಪಾಡಿಗೆ, ನಾ ನನ್ನಷ್ಟಕೆಇರಲೇನು ಸೊಗಸು ಹೇಳು ಮುನಿಸು ಮೋಡ ಕರಗಿಸೋನೆ ಸುರಿದು ಕುದಿ ಮನಸುತಂಪಾಗಿ, ಹಸಿರು ಚಿಗುರಿತೆನೆ ತುಂಬಿ ಬಾಗುದಿರಲೇನು ಚೆಂದ ಮೌನಕ್ಕೂ ಬೇಸರ ಬಂತೀಗಮನಸು ಸೋಲುತಿದೆ ಬಾ ಬೇಗಈ ಬಾಳಿನಾಚೆ ಇನ್ನೇನಿದೆನಾನಿನಗೆ ನೀನನಗೆಂದು ಒಲವಾಗಿದೆ *****

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಹೇಮಗಂಗಾ ಲೌಕಿಕ ಸುಖಗಳು ತೃಣಸಮಾನವೆಂದು ಹೊರಟವಳು ನೀನು ಎಲ್ಲ ತ್ಯಜಿಸಿ ವೈರಾಗ್ಯವನೇ ಆಭರಣದಂತೆ ಧರಿಸಿದವಳು ನೀನು ಮೋಹಿಸಿದ ಕೌಶಿಕನೊಡನೆ ಬಾಳು ಮುಳ್ಳಿನ ಮಂಚವಾಯಿತು ಅರಮನೆಯ ವೈಭೋಗದತ್ತ ಚಿತ್ತವಿಡದೇ ನಡೆದವಳು ನೀನು ಹಸಿವೆ, ನಿದಿರೆ, ಅಂಜಿಕೆಗಳಾವುವೂ ಕಾಡಲಿಲ್ಲ ನಿನ್ನ ಹೇಗೆ ? ಚೆನ್ನಮಲ್ಲಿಕಾರ್ಜುನನ ಅರಸುತ್ತಾ ಕಾನನದಿ ಅಲೆದವಳು ನೀನು ಅಗಣಿತ ಅನುಭವದ ಮೂಸೆಯಲಿ ಪುಟಕ್ಕಿಟ್ಟ ಚಿನ್ನವಾದೆ ಹೆಣ್ಣೂ ಗಂಡಿಗೆ ಸಮಾನವೆಂಬ ತತ್ವ ಜಗಕೆ ಸಾರಿದವಳು ನೀನು ಆಧ್ಯಾತ್ಮವನಪ್ಪಿ ಮೊದಲಿಗಳಾದೆ ಶಿವಶರಣೆಯರ ಸಾಲಿನಲ್ಲಿ ವಚನಕ್ಷೇತ್ರದ ಹೇಮ ಮುಕುಟಕೆ ರತ್ನವಾದವಳು ನೀನು ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಳೆ ವಸುಂಧರಾ ಕದಲೂರು ಕಿಟಕಿ ಸರಳಾಚೆಸುರಿವ ಮಳೆ ಕಂಡುಮೂಗೇರಿಸುತ್ತೇನೆಮಣ್ಣ ಘಮಲಿಗೆ.. ಬಿದ್ದ ಹನಿಯೆಲ್ಲಾಸಿಮೆಂಟು ರೋಡಿನಲಿಉರುಳಾಡಿ ಕೊಚ್ಚೆಮೋರಿ ಸೇರುವಾಗಎಲ್ಲಿಂದ ಬರಬೇಕುಮಣ್ಣ ವಾಸನೆ.. ಊರ ಮನೆಯಲ್ಲಿಪುಟ್ಟ ತೊರೆಯಾಗಿಮಳೆ ನೀರು ತುಂಬಿಹರಿಯುತ್ತಿದ್ದ ಮೋರಿಗಳುಘಮ್ಮೆನುತ್ತಿದ್ದವು… ಪುಟ್ಟ ಫ್ರಾಕಿನ ಹುಡುಗಿಬಿಟ್ಟ ಕಾಗದದ ದೋಣಿಹೊತ್ತೋಯ್ದು ಮರೆಯಾದನೆನಪೂ ಘಮ್ಮೆಂದಿತು.. ಊರ ಮಳೆ ಕೇರಿ ಮಳೆನೆಲದ ಮಳೆಯಾಗಿತ್ತು.ಹರಿದು ಕಡಲ ಸೇರಿದಟ್ಟ ಮುಗಿಲಾಗಿ ಘಮ್ಮೆಂದಿತು… ಈ ನಗರ ಮಳೆ ಮಾತ್ರಒಂದು ನೆನಪೂ ತುಂಬುವುದಿಲ್ಲ.ಭೋರೆಂದು ಸುರಿದ ಮಳೆಗೆಮಣ್ಣಿಲ್ಲದ ನೆಲವೂ ಇಂಗುವುದಿಲ್ಲಮಣ್ಣಿಲ್ಲದೆ ಘಮಲು ಅಡರುವುದಿಲ್ಲ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಮ್ಮ ಶಿವಲೀಲಾ ಹುಣಸಗಿ ಭುವಿಗೆ ಬಿದ್ದ ದೇಹಕೆ ಸೊಕಿಲ್ಲ ಹನಿ ಕೆಸರು ಅಂಗೈಯಗಲ ಬೆಳೆದ ಮಾಂಸದ ಮುದ್ದೆಗೆ. ನವಮಾಸಗಳ ಜೀವದುಸಿರ ಬಸಿರ ಹೊತ್ತವಳು ತಾಯತನದ ಸುಖವ ಹಂಬಲಿಸಿದವಳು.. ಸಾವುನೋವಿನಲಿ ಮರುಜನ್ಮ ಪಡೆದವಳು.. ತನುವಿನೊಳು ಅಡಗಿದ ತನ್ನಾತ್ಮ ಕಂಡು ನಕ್ಕವಳು. ಎದಗಪ್ಪಿಕೊಂಡು ಅಮೃತವ ಉಣಸಿದವಳು. ಕರುಳ ಬಳ್ಳಿಯ ಕಡಿದು ಮಡಿಲೊಳೆರಗಿದವರೂ ನಸು ನಕ್ಕು ಸೆರಗ ಗಂಟಲಿ ಬಿಗಿದು ಅಂಬೆಗಾಲಿಡಲು ಹೆಜ್ಜೆಯ ಮೂಡಿಸಿದವಳು ಬೇಕು ಬೇಡಗಳ ಕಾಡಿಬೇಡಿ ಪಡೆದವರು ತುತ್ತನುಂಡು ತೊಳತೆಕ್ಕೆಯಲಿ ಮಲಗಿದವರು ತೊದಲು ನುಡಿಯ ತುಂಬ ಆವರಿಸಿದವಳು ‘ಅಮ್ಮಾ’ ಯೆಂದು ಕೂಗಿ ಕರೆದಾಗ ಓಗೊಟ್ಟವಳು ಕರುಳು ಹರಿದರೂ,ಕರುಳ ಕೂಗಿಗೆ ಧ್ವನಿಯಾಗಿ.. ಕಷ್ಟಗಳ ಸರಮಾಲೆಯಲಿ ಸಲುಹಿದವಳು… ಹಸಿದು ಬಂದೊರ ಹಸಿದೊಡಲಿಗೆ ತುತ್ತನಿಟ್ಟವಳು ಮನೆಯ ಅನ್ನಪೂರ್ಣೇಶ್ವರಿಯಾದವಳು. ಅಮ್ಮಾ ನಿನಗೆ ಸರಿಸಾಟಿಯಾರಿಹರು ಜಗದೊಳಗೆ?? ನಿನ್ನೊರತು ಏನೂಂಟು ಈ ಭುವಿಯೊಳಗೆ.? ಏನ್ನ ತಪ್ಪು ಗಳೆಲ್ಲ ನಿನ್ನ ಎದಯೊಳಗೆ ಅಪ್ಪಿರುವೆ. ನಿನ್ನಪ್ಪಿ ಕಾಯ್ವ ಪ್ರೇಮವ ನನ್ನಲ್ಲಿ ಬಿತ್ತಿರುವೆ.. ನಿನ್ನ ದೇಹವಿದು ನಿನಗರ್ಪಿತ ಅನುದಿನವು ಭವದೆಲ್ಲ ಸುಖವು ನಿನ್ನಡಿಗೆ ಸಮರ್ಪಿತವು… **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅವ್ವ ಲಕ್ಷ್ಮಿ ದೊಡಮನಿ ನಮ್ಮನೆ ಮುತ್ತೈದಿಯಾದಾಕಿ ಅವ್ವ ನೀನಂದ್ರ ನನ್ಜೀವ ಅಪ್ಪನ ಅರ್ಧಾಂಗಿಯಾದಾಕಿ ಅವ್ವ ನೀನಂದ್ರ ನನ್ಜೀವ ಚಳಿಗಾಲದಾಗ ಸೂರ್ಯಾನು ವ್ಯಾಳಿ ಮೀರ್ತಾನ ಆದ್ರ ಹೊತ್ತೀಗ ಕೈತುತ್ತಿಡುವಾಕಿ ಅವ್ವ ನೀನಂದ್ರ ನನ್ಜೀವ ನನ್ನ ಚಿಕ್ಕಂದನ್ನ ಚಿನ್ನದ ಚಣಗಳಿಂದ ಹೆಣಿದು ಒಲವು ಸುರಿಸಿದಾಕಿ ಅವ್ವ ನೀನಂದ್ರ ನನ್ಜೀವ ಜೇನುಗೂಡಿನ ಛಾವಣಿ ನಿಸರ್ಗ ಕೋಪಕ ನಡುಗಿದ್ರೇನ ಸೆರಗು ಅಲ್ಲಾಡಿಸದಾಕಿ ಅವ್ವ ನೀನಂದ್ರ ನನ್ಜೀವ ಕಾಡೋ ಒಲಿ,ಉರಿಸೋ ಹೊಗಿ, ಅಳಿಸೋ ಬಡತನವ ಸೋಲಿಸಿ ನಗುವಾಕಿ ಅವ್ವ ನೀನಂದ್ರ ನನ್ಜೀವ ಊಟದ ನಡುವ ಗುಟುಕ ಅಂಬಲಿ ಕುಡಿದಾಂಗ ಸವಿಸವಿ ಮಾತಾಡಾಕಿ ಅವ್ವ ನೀನಂದ್ರ ನನ್ಜೀವ ಅಡುಗಿ ಮಾಡಾಗ ಕತಿ ಹೇಳಿ ಒಳಮನಸ್ಸಿಗ ಕೈಹಾಕಿ ಮೊದಲ ಮೇಷ್ಟಾದಾಕಿ ಅವ್ವ ನೀನಂದ್ರ ನನ್ಜೀವ **********

ಕಾವ್ಯಯಾನ Read Post »

You cannot copy content of this page

Scroll to Top