ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ತಿಪ್ಪೆಗುಂಡಿಯಲ್ಲಿ ಮಗು ಫಾಲ್ಗುಣ ಗೌಡ ಅಚವೆ ಅಲ್ಲಿ ಮುರ್ಕಿಯಲ್ಲಿರುವತಿಪ್ಪೆಗುಂಡಿಯಲ್ಲಿ ಎಸೆದು ಹೋಗಿದ್ದಾಳೆಇದೀಗ ಎಂಬಂತೆ ಒಂದು ಮಗು. ನವೆಂಬರ್ ಬೆಳಗಿನ ಚುಮು ಚುಮುಚಳಿಯಲ್ಲಿ ಅಮ್ಮನ ಮಡಿಲಲ್ಲಿರಬೇಕಾದಂತೆಅಲ್ಲೇ ಗುಲ್ ಮೋಹರ್ ಮರಗಳಲ್ಲಿಹೊಡೆದು ಕೂಡ್ರಿಸಿದಂತೆಬೆಳ್ಳಕ್ಕಿಗಳು ಸಣ್ಣಗೆ ಮುಸುಗುತ್ತಿವೆ. ಗಸ್ತು ತಿರುಗುವ ಇರುವೆಗಳುಯಾರನ್ನೋ ಕರೆತರಲು ಹೊರಟಂತೆಎಲ್ಲಿಗೋ ಪಯಣ ಹೊರಟಿವೆ. ತುಸು ತಡವಾಗಿ ವಾಕಿಂಗ್ ಹೊರಟವರುಮಂಕಿ ಕ್ಯಾಪ್ ಬಿಟ್ಟು ಬಂದವರಂತೆತಡವರಿಸುತ್ತ ಎದೆಗೆ ಕೈ ಕಟ್ಟಿಕೊಂಡುಹೊರಡುವ ಸನ್ನಾಹದಲ್ಲಿಅವರದೇ ರಾತ್ರಿಯಹಳಸಿದ ಕನಸುಗಳ ಜೊತೆಗೆ. ಹಾಸಿಗೆ ಮಡಚಿಟ್ಟು ಆಗಸಮುಖ ತೊಳೆದು ಕೊಳ್ಳುತ್ತಿದೆಮೋಡಗಳ ಮರೆಯಲ್ಲಿಬೆಳಗಿನ ಕೆಲಸಕ್ಕೆ ತಡವಾಯಿತೆಂಬರಾತ್ರಿ ನರಳಿಕೆಯ ಮುಖ ಭಾವದಲ್ಲಿ. ಪುರಸೊತ್ತು ಮಾಡಿಕೊಂಡುಬಸುರಾದವಳಿಗೆ ತೀಟೆಗೆಂಬಂತೆಹೊಟ್ಟೆಯ ತಿಂಗಳುಗಳಜವಾಬ್ದಾರಿಯಿಂದ ಯಾವಮುಸುಕಿನಲ್ಲಿ ಹುಗಿಸಿದ್ದಳೊ? ತಮ್ಮದೇ ಧಾವಂತದಲ್ಲಿ ಹಾಲು ತರಲುಹೊರಟವರಿಗೇನು ಗೊತ್ತುಅಲ್ಲೆ ಮಗು ಅಳುವ ಸದ್ದು?ಆಚೆ ಮನೆಯಲ್ಲಿ ದಿನ ಬೆಳಗಾದರೆಅಳುವ ಸದ್ದುಗಳುಅನವರತ ಧಾವಿಸುತ್ತಿರುತ್ತವೆ. ತಮ್ಮ ಏಕಾಂತಕ್ಕೆ ಭಂಗ ಬರುವದೆಂದುಬಿಟ್ಟು ಹೊರಟವರ ಮನಸುಇಡೀ ಜಗವನೊಂದು ಮಾಡುವಅಳುವ ಆಲಿಸುತ್ತಿದ್ದರೂಅಲೆಯದ ಸಮುದ್ರದಂತೆಸ್ತಬ್ಧಗೊಂಡಂತಿದೆಕೀಳರಿಮೆಯ ಬೇಲೆಯಲ್ಲಿ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳದೇಕರಳು ಕತ್ತರಿಸಿದ ರಕ್ತ ಒಸರುತ್ತಿರುವಮಗು ಮುಂದುವರೆಸಿದೆ ತನ್ನ ಪ್ರತಿಭಟನೆಇದನಾಲಿಸದೇ ಎಸೆದವರುನಸುಕಿನ ರೈಲು ಹತ್ತಿ ಹೊರಟಿದ್ದರುಅದು ಹೋದ ನಿಲ್ದಾಣದೆಡೆಗೆ. ರಸ್ತೆಯಲ್ಲಿ ಹೊರಟ ಹೆಂಗಸರ ಬಾಯಲ್ಲಿಪ್ರಕಟವಾದ ತಾಜಾ ಸುದ್ದಿಯೆಂದರೆಎಲ್ಲಿಂದಲೋ ಬಂದ ನಾಯಿಹೊತ್ತು ಹೋಯ್ತಂತೆ! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ದೂರದ ಊರು ನಡೆಯುತ್ತಾ ನಡೆಯುತ್ತಾ ಹೋರಟ ಅಪ್ಪನ ಎದೆಯ ಉಸಿರು ಜೋರಾಗಿತ್ತು. ಬೀಸುವ ಬಿರುಗಾಳಿಯ ತಂಪಿಗೆ ನನ್ನಪ್ಪನ ಹೆಗಲು ಬಿಸಿಕಾವು ನೀಡುತ್ತಿತ್ತು. ನನ್ನ ಪಾದಗಳಿಗೆ ನೋವಾಗಬಾರದೆಂದು ನನ್ನಪ್ಪ ತನ್ನ ಪಾದಗಳ ನೆತ್ತರನು ಲೆಕ್ಕಿಸಲೇ ಇಲ್ಲ. ಹಸಿವು ಎನ್ನ ಕಾಡದಿರಲೆಂದು ದಾರಿ ಮಧ್ಯ ಮಧ್ಯದಲಿ ಕೈತುತ್ತ ನೀಡುತ್ತಲೇ ಇದ್ದ . ತನಗೆ ಹಸಿವಾಗದೆಂದು ಮುಗುಳು ನಗೆ ನಕ್ಕು ಮುಂದೆ ನಡೆಯುತ್ತಲೇ ಇದ್ದ. ಊರಿನ ದಾರಿಯು ಕಂಡ ಮೇಲೆ ಅಪ್ಪ ಬಲು ಸಂತಸ ಪಟ್ಟು ನನ್ನನ್ನು ಸುರಕ್ಷಿಸಿದೆ ಎಂದು ನಿರಾಳತೆಯಲ್ಲಿ ನಿಟ್ಟುಸಿರು ಬಿಟ್ಟ. ನಾ ಮತ್ತೊಮ್ಮೆ ಎದೆಗವಚಿಕೊಂಡಾಗ ನನ್ನಪ್ಪನ ಬಿಗಿ ಉಸಿರು ತಂಪಾಗೆ ಇತ್ತು. ಎಂದೂ ಬಿಸಿ ಉಸಿರಿನ ಅಪ್ಪುಗೆ‌ ನನಗೆ‌ ಸಿಗಲೇ‌ ಇಲ್ಲ. ಕಾರಣ ಅಪ್ಪ ನನ್ನ ಬಿಟ್ಟು ಬಹು ದೂರ ಹೋದನಲ್ಲ. ತನ್ನ ಉಸಿರಂತೆ ಇದ್ದ ನನ್ನ ತಬ್ಬಲಿ ಗೈದನಲ್ಲ. ( ಕೋರಾನಾ ಮಹಾಮಾರಿಯು ತಂದ ದಾರುಣ ಕಥೆಯ ವ್ಯಥೆ ಇದು.) ******** ರಜಿಯಾ ಕೆ.ಬಾವಿಕಟ್ಟೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೀಗೆಯೇ ಬಂದು ಬಿಡುತ್ತಾರೆ ಕೆಲವರು ಶೀಲಾ ಭಂಡಾರ್ಕರ್ ಹೀಗೆಯೇ ಬಂದು ಬಿಡುತ್ತಾರೆ ಕೆಲವರು ಮೌನವಾಗಿದ್ದ, ಶೂನ್ಯವಾಗಿದ್ದ, ಏಕಾಂಗಿ ಬದುಕಿನೊಳಗೆ, ಒಮ್ಮೆಲೇ ಬಂದು ಬಿಡುತ್ತಾರೆ ಕೆಲವರು ಇದ್ದಕ್ಕಿದ್ದಂತೆ ಅಕಾಲದ ಮಳೆ ಹನಿಗಳು ರಸ್ತೆಯಲ್ಲಿ ನಡೆಯುವವರನ್ನು ತೋಯಿಸಿದ ಹಾಗೆ. ಛತ್ರಿಯನ್ನು ಮನೆಯಿಂದ ತರುವುದರೊಳಗೆ ತಂದರೂ ಬಿಚ್ಚುವುದರೊಳಗೆ ಅಥವಾ ಹಾಗೇ ಸುಮ್ಮನೆ ತೋಯುವುದು ಕೂಡ ಅಪ್ಯಾಯವೆನಿಸುವ ಹಾಗೆ ಭೋರೆಂದು ಸುರಿಸುರಿದು ಬಟ್ಟೆಗಳ ಮೇಲೆ, ಮುಚ್ಚದ ಅಂಗಾಂಗಗಳ ಮೇಲೆ, ಕಣ್ಣುಗಳೊಳಗೆ, ಕಿವಿಗಳಲ್ಲಿ, ಮುಟ್ಟಲಾಗದ ದೇಹದ ಸಂಧಿಗೊಂದಿಗಳಲ್ಲಿ, ದಾರಿ ಹುಡುಕುತ್ತಾ, ನುಸುಳಿದಂತೆ ಬಂದು ಬಿಡುತ್ತಾರೆ ಕೆಲವರು ಮೌನವಾಗಿದ್ದ ಏಕಾಂಗಿ ಬದುಕಿನೊಳಗೆ. ಖುಷಿಯೆನಿಸುತ್ತದೆ ರಸ್ತೆಯಲ್ಲಿ ನಡೆಯುತ್ತಿರುವಾಗ ಅಚಾನಕ್ಕಾಗಿ ಹೀಗೆ ಒದ್ದೆಯಾಗುವುದು ಏನೋ ಒಂದು ರೀತಿಯ ಖುಷಿ ಕೊಡುತ್ತದೆ. ಮಳೆ ಸಂಪೂರ್ಣ ನಿಂತ ಮೇಲೆ ಇನ್ನೂ ನಡೆಯುತ್ತಲೇ ಇರುವಾಗಲೇ ಮೋಡಗಳೆಡೆಯಿಂದ ಇಣುಕುವ ಬಿಸಿಲಿಗೆ ಬಟ್ಟೆ ಮತ್ತು ನಾನು ನನ್ನ ಮೈಮೇಲಿನ ಹನಿಗಳು ಒಣಗುತಿದ್ದೇವೆ. ಇನ್ನು ಮನೆವರೆಗಿನ ದಾರಿ ಮಳೆ ಬರದೆ ಬಿಸಿಲು ಸುರಿದರೆ ಸಾಕು. ಮಳೆಗೆ ತೋಯ್ದ ಎಲ್ಲವೂ ಒಣಗಿದರೆ ಖುಷಿ ಇದೆ..ಹೀಗೆ ಒದ್ದೆಯಾಗುವುದರಲ್ಲೂ. ಹೀಗೆಯೇ ಬಂದು ಬಿಡುತ್ತಾರೆ ಕೆಲವರು ಇದ್ದಕ್ಕಿದ್ದಂತೆ ಅಕಾಲದ ಮಳೆ ಹನಿಗಳು ರಸ್ತೆಯಲ್ಲಿ ನಡೆಯುವವರನ್ನು ತೋಯಿಸುವ ಹಾಗೆ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿನ್ನ ಹುಡುಕಾಟದಲ್ಲಿ ನಾಗರಾಜ ಹರಪನಹಳ್ಳಿ ಉರಿ ಉರಿ ಬಿಸಿಲು ಎಲ್ಲಿ ಹುಡುಕಲಿ ಪ್ರೇಮವ ತಕ್ಷಣ ಕಂಡದ್ದು ನಿನ್ನ ಮೊಗದ ಮುಗುಳ್ನೆಗೆ ಆಸೆಯ ಬೆನ್ನು ಹತ್ತಿದೆ ಓಡಿದೆ ಓಡಿದೆ ದಣಿವರಿಯದೆ ಓಡಿದೆ ಕೊನೆಗೆ ಸಿಕ್ಕದ್ದು ದುಃಖ ಇನ್ನೆನು‌ ಮುಗಿಯಿತು ಅನ್ನುವಾಗ ಕಂಡದ್ದು ನಿನ್ನ ಮುಖದ ಮಂದಹಾಸ ಮೋಕ್ಷವನ್ನೇನು ಹುಡುಕಿ ಹೊರಡಲಿಲ್ಲ ನಾನು ಪ್ರೀತಿಯ ಹುಡುಕಿ ಹೊರಟಿದ್ದು ನಿಜ , ಆದರೆ ನೀ ಹೇಳಿದ ಬಯಲಿನಂತಹ ಪ್ರೀತಿ‌ ಈ ಹುಲುಮಾನವರಿಗೆ ಅರ್ಥವಾದೀತು ಹೇಗೆ ಗೌತಮ ಸಾವಿಲ್ಲದ ಮನೆಯ ಸಾಸಿವೆ ತರಲು ಸೋತದ್ದು ನಿಜ ನನ್ನ ತಾಯಿ ಆದರೆ ; ನಿನ್ನ ಒಗಟಿನ ಮಾತು ನಿಶಬ್ದ ಮೌನ ಅರ್ಥವಾದೀತು ಹೇಗೆ ಬುದ್ಧದೇವ ಮುಪ್ಪು , ಯೌವ್ವವ ; ಹಸಿವು ನಿನಗೆ ಅರ್ಥವಾದಂತೆ ಈ ಜಗದ ಕೇವಲ ಮನುಷ್ಯರಿಗೆ ಅರ್ಥವಾಗದವು ಕಾರಣ ಅವರು ಬದುಕಿನ ಅಶ್ವಾಶತೆಯ ಅರಿಯದ ಮರೆವಿನ ಮಹಾಪುರುಷರು ಬುದ್ಧ ನಾನಿನ್ನು ಬರುತ್ತೇನೆ ಸಾಕಾಗಿದೆ ಈ‌ ಜಗದ ಜಂಜಡ ನನಗೆ ಏಕಾಂತದ ಅರ್ಥ ಹುಡುಕಬೇಕಿದೆ ಜನರ ಗೊಂದಲಗಳ ಅರಿಯುತ್ತಲೇ… *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಎಂದೂ ಮರೆಯದಾ ಗುರುತು ರಜಿಯಾ ಕೆ.ಬಾವಿಕಟ್ಟೆ ಕಡಲ ಮೌನದಲಿ ನೆಮ್ಮದಿಯ ಕಾಣುವ ಭರವಸೆಯ ನಿರಾಳದಿ ದಿಟ ದಾವಂತದಲಿ ಎಷ್ಟೋ ಕನಸುಗಳು ಆಸೆಗಳು ಮಡಿಲಿಗಂಟ್ಟಿದ್ದವು. ಸಂತಸದ ಮನವು ಬಾನು ಭೂವಿಗಳ ಅಂತರವೇ ಲೆಕ್ಕಿಸದಷ್ಟು ಸಂತೋಷದ ದಿನಗಳು ಅಪಾರತರದಲ್ಲಿದ್ದವು. . ದಿನದಿನವು ಕಳೆದಂತೆ ಕರಾಳತೆಯ ಕಹಳೇಗಳು ಬೆನ್ನ ಹಿಂದೆಯೇ ಬೆನ್ನಟ್ಟಿ ಹೊರಟುನಿಂತಿದ್ದವು. ಆಗಾಧತೆಯ ಖುಷಿಗಳೆಲ್ಲ ಕಳೆದು ಬರೀ ಸಾಲು ಸಾಲು ಸಮಾಧಿಯ ನಿಟ್ಟುಸಿರಿಗೆ ನನ್ನ ಜೊತೆ ಜೊತೆಗಿದ್ದ ಅಣ್ಣತಮ್ಮಂದಿರನೇ ಆ ವಿಧಿ ಬಲಿ ಪಡೆದು ನನ್ನ ನನ್ನಮ್ಮನ ಒಂಟಿಯಾಗಿಸಿದ್ದವು. ಐವರ ಒಕ್ಕೂಟದಲಿ ನಾನೋಬ್ಬಳೇ ಪ್ರೀತಿಯ ಕುಸುಮ ನನ್ನನಗಲಿ ದೂರ ದೂರ ಹೋದರೆಲ್ಲ ಒಂದೇ ಕ್ಷಣ ಕ್ಷಣದಲಿ ನಿಮಗಿದು ಸರಿನಾ? ನನ್ನ ಹೆತ್ತ ಒಡಲಿಗೆ ಯಾರು ಸಾಂತ್ವನ ನೀಡುವರು ಹೇ ದೈವವೇ ? ತಾಯಿಯ ನೋವಿಗೆ ನಾ ಅದೆಷ್ಟೋ ಸಹಕರಿಸಲಿ. ಮಸಣ ಮಾಳಿಗೆಯನ್ನೇ ಸೃಷ್ಟಿಸಿದೆಯಲ್ಲಾ‌ ಈ ಬದುಕಲಿ. ಅಳಿದುಳಿದ ಈ ಬದುಕಿಗೆ ಇನ್ನೂ ಯಾಕೇ ಬದುಕುವ ಹಂಗು ನೀನೇ ಕೊಟ್ಟ ಖುಷಿಗೆ ನೀನೇ ಕೊಳ್ಳಿ ಇಟ್ಟ ಮೇಲೆ ಇನ್ನೂ ಯಾಕೇ ಈ ಉಸಿರು ಹರಸಿ ಕರೆದೊಯ್ದದರು ಸರಿಯೇ ಇನ್ನೂ ಒಲ್ಲದ ಈ ಜೀವನ. ಆ ಕಡಲ ಮೌನದಲಿ ನಾ ನಿತ್ಯವೂ ರೋಧಿಸುವೇ ಕಂಬನಿಯನು ಧಾರೇ ನೀಡುವೆ ಅದು ಎಂದೂ ನನ್ನ ಕತೆಗೆ ಉತ್ತರಿಸಲೇ ಇಲ್ಲ . ನನ್ನಾಧಿ ಒಡಲಿಗೆ ಕಡಲು ಭೊರ್ಗರಿಸಿ ಒಡೆಯುದಷ್ಟೇ | ವಿನಹ ನನ್ನ ಪ್ರಶ್ನೇಗೆ ಎಂದೂ ಮೌನ ಮುರಿಯಲೇ ಇಲ್ಲ . ಇನ್ನೂ ನಾ ಜೀವಂತ ಶಿಲೆ ಅಷ್ಟೇ ಹೊರತು ಭಾವಗಳನು ಸಂಭ್ರಮಿಸೊ ಸಡಗರಿಸೂ ಮನವಾಗಲಾರೆನೂ ಎಂದಿಗೂ ಎಂದೆಂದಿಗೂ …… ಪದ್ಮರಾಗ….. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕರೆಯದೆ ಬರುವ ಅತಿಥಿ ಚೇತನಾ ಕುಂಬ್ಳೆ ಕರೆಯದೆ ಬರುವ ಅತಿಥಿ ನೀನು ಕರೆದರೂ ಕಿವಿ ಕೇಳಿಸದವನು ಯಾರೂ ಇಷ್ಟ ಪಡದ ಅತಿಥಿ ನೀನು ಎಲ್ಲಿ ಯಾವಾಗ ಹೇಗೆ ಯಾಕೆ ಯಾವ ನಿಮಿಷದಲ್ಲಿ ಯಾವ ರೂಪದಲ್ಲಿ ನೀನು ಬರುವೆಯೆಂದು ಗೊತ್ತಿಲ್ಲ ನನಗೆ ಮುನ್ಸೂಚನೆ ನೀಡದೆ ಬರುವೆ ನೀನು ಎಲ್ಲಿಂದ ಬರುವೆಯೋ ಎಲ್ಲಿಗೆ ಕರೆದೊಯ್ಯುವೆಯೋ ತಿಳಿದಿಲ್ಲ ನನಗೆ ಒಡೆದು ನುಚ್ಚುನೂರು ಮಾಡುವೆ ಸಣ್ಣಪುಟ್ಟ ಸಂತೋಷಗಳನ್ನು ಹೋಗುವೆ ನೀನು ಒಮ್ಮೆಯೂ ತಿರುಗಿ ನೋಡದೆ ಮನದ ತುಂಬ ವೇದನೆ ನೀಡಿ ಹಿರಿಯರೆಂದೋ ಕಿರಿಯರೆಂದೋ ಶ್ರೀಮಂತರೆಂದೋ ಬಡವರೆಂದೋ ನೋಡದೆ ಓಡಿ ಬರುವೆ ಎಲ್ಲರ ಬಳಿಗೆ ಕಾಲಕಾಲಕೆ ಕಾರಣ, ಸಮಾನರಲ್ಲವೆ ಎಲ್ಲರೂ ನಿನ್ನ ಕಣ್ಣಿಗೆ ಕಣ್ಣೀರು ಕಂಡರೂ ಕರಗದ ಹೃದಯ ನಿನ್ನದು ನೋವನ್ನರಿತರೂ ಮಿಡಿಯದ ಮನಸ್ಸು ನಿನ್ನದು ಓ ಅತಿಥಿಯೇ‌‌‌… ಯಾಕಿಷ್ಟು ಕ್ರೂರಿಯಾದೆ ನೀನು ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತಲೆ ಮಾರಾಟಕ್ಕಿದೆ.. ಶೀಲಾಭಂಡಾರ್ಕರ್ ತಲೆ ಮಾರಾಟಕ್ಕಿದೆ ಕೊಳ್ಳವವರಿದ್ದಾರೆಯೇ? ಸಾಕಾಗಿದೆ ಈ ತಲೆನೋವು, ಜಂಜಾಟಗಳು. ಆಗಾಗ ತಲೆ ಬಿಸಿ ಯಾರಿಗಾದರೂ ಕೊಟ್ಟು ಹಾಯಾಗಿರೋಣ ಅನಿಸುತ್ತಿದೆ. ಒಂದು ನಿಮಿಷವೂ ತೆಪ್ಪಗಿರಲ್ಲ. ಸುಮ್ನೆ .. ಏನಾದರೂ ವಟಗುಟ್ಟದಿರೆ ಸಮಾಧಾನವಿಲ್ಲ. ಬೇಡದ ಕಸವೇ ತುಂಬಿಕೊಂಡಿದೆಯಲ್ಲ. ದುಡ್ಡು ಕೊಡಬೇಕಾಗಿಲ್ಲ ಹಾಗೇ ಸ್ವಲ್ಪ ದಿನದ ಮಟ್ಟಿಗಾದರೂ ತಿರುಗಾಡಿಸಿ ತಂದರೂ ಅಡ್ಡಿ ಇಲ್ಲ. ಆಹಾ…!!! ಎಷ್ಟು ಗಮ್ಮತ್ತು.. ಖಾಲಿ ತಲೆ ನೆನೆಸಿಕೊಂಡಾಗಲೇ ಏನೋ ಪುಳಕ.. ಹಗುರವಾಗಿ ತೇಲಾಡುವ ತವಕ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೋಡ ನೋಡುತ್ತಿದ್ದ ಹಾಗೆ ಬೆಳಗಾಗಿಬಿಟ್ಟಿತು ಕನವರಿಸುತ್ತಿದ್ದಂತೇ ಕನಸು ಹರಿದುಬಿಟ್ಟಿತು ಹಂಬಲಿಸಿದ್ದೆಷ್ಟು ತಯಾರಿಯ ಸಂಭ್ರಮವೆಷ್ಟು ತಾಸೆರಡು ತಾಸಿನಲ್ಲಿ ‘ಆಟ’ ಮುಗಿದೇಬಿಟ್ಟಿತು ಹೊಳೆ ಮೈಲು ದೂರವಿರುವಾಗಲೇ ಸಿದ್ಧನಿದ್ದೆ ಪಾದವನ್ನೂ ನೆನೆಸದೆ ನೀರು ಸರಿದುಬಿಟ್ಟಿತು ಭಾರವನ್ನು ಅವರೂ ಹೊರುವ ನಿರೀಕ್ಷೆಯಿತ್ತು ನನ್ನ ತಲೆಗೇ ಎಲ್ಲ ಕಟ್ಟಿ ಮಂದಿ ಕೈಬಿಟ್ಟಿತು ಬೆಳಗಾದರೆ ಪರಿಹಾರ ಸಿಗುವ ವಿಶ್ವಾಸವಿತ್ತು ನಸೀಬು ಖೊಟ್ಟಿ, ರಾತ್ರಿಯೇ ಎಣ್ಣೆ ತೀರಿಬಿಟ್ಟಿತು ಕೈಗೆ ಸಿಗದೇ ನಡೆಯುವ ‘ಜಂಗಮ’ನ ಕೇಳಬೇಕು ಇರವು-ಅರಿವಿನ ನಡುವೇಕೆ ಬಿರುಕುಬಿಟ್ಟಿತು ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜೇಡ ರಾಜೇಶ್ವರಿ ಭೋಗಯ್ಯ ಕಾವ್ಯಕ್ಕೆ ವಸ್ತುವಾಗಲೆಂದು ಜೇಡವನ್ನು ಆರಿಸಿಕೊಂಡಿದ್ದೆ ಕವಿಯೊಬ್ಬರು ಹೇಳಿದ್ದರು , ವಸ್ತು ಯಾವುದಾದರೂ ಆಗಬಹುದು ಕವನ ಕಟ್ಟುವುದಕ್ಕೆ, ಒಡೆದ ದೋಣಿ ,ಮುರಿದ ಏಣಿ ಹೀಗೆ… ಜೇಡ ಕಟ್ಟುತ್ತಲೇ ಇತ್ತು ಬಲೆಯನ್ನು ನಾ ಕೆಡವುತ್ತಲೇ ಇದ್ದೆ ಪದೇ ಪದೇ ಅದರ ಬದುಕನ್ನು ಕೂತು ನೋಡಿದ್ದೇ ಬಂತು, ಪದಗಳು ಬರಲಿಲ್ಲ ರಾಜ ಬಲೆ ಹೆಣವುದ ನೋಡಿಯೇ ಸ್ಪೂರ್ತಿಗೊಂಡನಲ್ಲ ಜೇಡ ಬಲೆಯನ್ನು ಹೆಣೆಹೆಣೆದು ಕಟ್ಟಿಯೇ ಬಿಟ್ಟಿತು ತನ್ನರಮನೆಯನ್ನು ದಿಕ್ಕೆಟ್ಟಿದ್ದವ ಅವ, ಜೇಡ ಮನೆಕಟ್ಟಿದ್ದ ನೋಡಿ ತಾನೂ ಕಟ್ಟಿದ ಪುನಃ ಸೈನ್ಯವ ನಾನೋ ಯಾರಿಗೂ ಆಗಿರಲಿಲ್ಲ ರಾಜ ಮುಳುಗಿರಲಿಲ್ಲ ಸಾಮ್ರಾಜ್ಯ ಸುಖಾಸುಮ್ಮನೆ ಯಾರು ಯಾರಿಗೋ ಮೂಡುವುದಿಲ್ಲ ಪದಗಳು ಜೀವ ತಲ್ಲಣಿಸದೆ ಕಟ್ಟಲಾಗುವುದಿಲ್ಲ ಬಲೆಯನ್ನೂ , ಬದುಕನ್ನು. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮತ್ತೆ ವಸಂತ ತೇಜಾವತಿ.ಹೆಚ್.ಡಿ ಮರಳ ಅಂಗಳದೊಳಗೆ ಬಾಳರಂಗೋಲಿ ಬಿಡಿಸುವುದು ಬೇಡ ಗೆಳೆಯ… ಶಿಲೆಗಳಲ್ಲಿ ಕೆತ್ತೋಣ ಶಾಶ್ವತವಾಗಿ… ! ಭುವಿಯಾಗಸ ಚಂದ್ರಾರ್ಕರ ಸಾಕ್ಷಿ ಸಾಕು.. ತೊಟ್ಟ ಬಟ್ಟೆ ಒಳಗಿನ ಕಾಯ ಕುಳಿತ ಜಾಗ ಕೊಚ್ಚಿಹೋಗುವ ಮುನ್ನ ಎದ್ದು ನಡೆಯೋಣ.. ಗತದ ಕಹಿನೆನಪುಗಳ ದೊರೆತಿರುವ ಒಲವಿನಲಿ ಮುಳುಗಿಸಿಬಿಡು! ಒಡಲ ದಹಿಸಿದ ವ್ಯರ್ಥ ಮಂದಾಗ್ನಿಯ ಉಗುಳಿಬಿಡು.. ಮತ್ತೆ ಸ್ವಚ್ಛಂದವಾಗಿ ನಾ ನಿನಗೆ, ನೀ ನನಗೆಂದು ಒಲವಸಾಗರದಲ್ಲಿ ಮತ್ಸ್ಯಗಳಾಗೋಣ.. ! ಬೇರೆಲ್ಲ ಬದಿಗಿರಲಿ ಮೊದಲು ನಮ್ಮ ತನವ ಮೆರೆಯೋಣ. . ಹಮ್ಮು ಬಿಮ್ಮುಗಳ ದಾಟೋಣ ಅನರ್ಥ ಮೌಢ್ಯಗಳ ತೂರೋಣ ಜಡ ಮನಗಳಲಿ ಕಾಂತಿಯ ದೀಪ ಬೆಳಗೋಣ ಕೊಳಕು ಮನಸುಗಳ ಘಮದ ಸುಮಗಳಲಿ ಕಂಪು ಪಸರಿಸೋಣ… ಮತ್ತೆ ಬಂದಿದೆ ವಸಂತ.. ! ಕೋಗಿಲೆಯಾಗಿ ಕೂಗೋಣ ಗೆಳೆಯ ನವಬದುಕಿಗೆ ನಾಂದಿ ಹಾಡೋಣ ******

ಕಾವ್ಯಯಾನ Read Post »

You cannot copy content of this page

Scroll to Top