ಕಾವ್ಯಯಾನ
ನಿರ್ವಾಣದೆಡೆಗೆ ಎಮ್.ಟಿ. ನಾಯ್ಕ. ಹೆಗಡೆ ಹೋಗಿ ಬಂದವನು ನಾನುನಿರ್ವಾಣದೆಡೆಗೆಸರ್ವ ಚೈತನ್ಯ ಶೂನ್ಯದಂಚಿಗೆ ಕೋಟೆ, ಕಿರೀಟ, ಕೀರ್ತಿಗಳನೆಲ್ಲಾತೊರೆದು ಸಾಗುವ ದಾರಿಅರಸು ಆಳುಗಳನೆಲ್ಲಾ ಕೊನೆಗೆಕೂಡಿಸುವ ಕೂಡುದಾರಿ ….! ನಡೆದ ಬಸವಣ್ಣಕಲ್ಯಾಣ ಕ್ರಾಂತಿಯ ನಡುವೆ ,ತನ್ನ ಶಿಲುಬೆ ತಾ —ಹೊತ್ತು ನಡೆದ ಯೇಸುನಿರ್ವಾಣದೆಡೆಗೆ . ಕಾಲಪುರುಷನಾಣತಿಯಂತೆಲ್ಲಾತೊರೆದು ಹೊರಟಲೋಕದ ‘ ಶ್ರೀ ರಾಮ ‘ ,ಜಗನ್ನಾಟಕ ಸೂತ್ರಧಾರಿಯಗರಿಮೆ ಹೊತ್ತವ —ಕಾನನದ ನಡುವೆ ವ್ಯಾಧನ‘ ಶರಕೆ ‘ ಹೊರಟನಲ್ಲಿಂದಲೇನಿರ್ವಾಣದೆಡೆಗೆ ಕ್ಷಣಭಂಗುರದ ಬದುಕಿನಕತೆಯ ತೆರೆದಿಡುವ ಗಳಿಗೆಜೀವ ಜಗದಗಡಿಯಾರದ ಗುರುತುನಿರ್ವಾಣದ ಗಳಿಗೆ ದಾಟಿ ಉಳಿದವರಿಲ್ಲ ಆ ಗಳಿಗೆ..! **********









