ಕಾವ್ಯಯಾನ
ಹೂಗನಸು ಬಾಲಕೃಷ್ಣ ದೇವನಮನೆ ಹಿತವಾದ ಹೂಗನಸಲಿಸಂಚಾರಿ ಮಧುರ ಭಾವದುಂಬಿತಿಳಿಯಾದ ಬಾನಲ್ಲಿ ರೆಕ್ಕೆ ಹರಡಿಇಳೆಗೆ ಚಂದ್ರನನೇ ಹೊತ್ತುತಂದಿದೆ ಕತ್ತಲೆ ಮೈಗೆ ಮುಸ್ಸಂಜೆಬಳಿದ ರಂಗು ಹಾಗೇ ಉಳಿದಿದೆತಬ್ಬಿಕೊಳುವ ತೆರೆಯ ಆಟದಂಡೆಯಲಿ ಇನ್ನೂ ಮುಂದುವರಿದಿದೆ… ಎಲೆಯುದುರಿದ ಶಿಶಿರಕೆತಂಗಾಳಿ ಬೀಸಿ ಚೈತ್ರ ಬಂದಿದೆಹೂ ದಳದ ಮೇಲೆಇಬ್ಬನಿ ಸಾಲು ಸಂತೆ ತೆರೆದಿದೆ ಚಿಗುರು ಮೊಗ್ಗಿನ ಮನಸುಪರಿಮಳದ ಪಯಣ ಹೊರಟಿದೆತುಂತುರು ಹನಿಗಳ ಹಿಂಡು ರೆಪ್ಪೆ ತೆರೆದುಹೂಗನಸಿಗೆ ಬೆಳಕು ಹರಿದಿದೆ **********









