ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಿವೇದನೆ…

ಕವಿತೆ ಹರೀಶ ಕೋಳಗುಂದ ಹೌದು…ನನಗೆ ಗೊತ್ತುನೀ ನನ್ನ ಪಕ್ಕದಲ್ಲೇ ಕುಳಿತಿರುವೆಸುಳ್ಳು ಹೇಳುವುದಿಲ್ಲ ನಾನುಈ ಕಡುಗತ್ತಲಲ್ಲೂ ನಿನ್ನ ಮುಖತಿಳಿನೀರ ಬಾವಿಯಲ್ಲಿ ಬಿದ್ದಚಂದಿರನ ಬಿಂಬವೆಂದು ಎಡತಾಕುತ್ತಿದೆ ನನ್ನೆದೆಗೆನಿನ್ನುಸಿರ ಬಿಸಿನಿನ್ನೆದೆಬಡಿತದ ಸದ್ದುನೀ ತೊಟ್ಟ ಕೈ ಬಳೆಯ ಘಲುಗುಮುಡಿದ ಮಲ್ಲಿಗೆಯ ಘಮಲು ಹೊತ್ತು ಉರುಳುತ್ತಿದೆಅರಿವೇ ಇಲ್ಲಏನೋ ಹೇಳುವ ಬಯಕೆತುಟಿ ಎರಡಾಗಿಸುವ ಧೈರ್ಯ ಸಾಲದುಕೈ ನಡುಗುತ್ತಿವೆಮೈ ಬೆವರುತ್ತಿದೆಎದೆಯೊಳಗೆ ಅಸ್ಪಷ್ಟ ಆತಂಕ ನೆನಪಿರಬಹುದು ನಿನಗೆನಾ ನಿನ್ನ ಮೊದಮೊದಲು ಕಂಡಾಗನೀ ನನ್ನ ಕಂಡೂ ಕಾಣದಂತೆನೋಡಿಯೂ ನೋಡದಂತೆಕಣ್ಣು ಹಾಯಸಿದಷ್ಟೂದೂರ ಕಾಣುವ ಮರೀಚಿಕೆಯಂತೆಕಣ್ಣಿಗೆ ಬಿದ್ದುಕೈಗೆ ಸಿಗದ ಮಾಯಾಜಿಂಕೆಯಂತೆಮರೆಯಾದದ್ದು ಮತ್ತೆಲ್ಲೋ ನಿನ್ನ ಹುಡುಕಿದಾಗಪಿಸುಗುಡುವ ರಾತ್ರಿಗಳಲಿತೆರೆದ ಕಿಟಕಿಯಾಚೆ ಮೊರೆವ ಕನಸುಗಳಂತೆಕರಿಮಲೆಯ ಬೆನ್ನಲ್ಲಿನ ನಿಚ್ಛಳ ನೀಲಾಕಾಶದಂತೆನಿನ್ನೊಲುಮೆಯ ಕುರುಹು ಸಿಕ್ಕಿದ್ದು ಈಗೀಗ ನನ್ನ ಪಾಲಿಗೆನಿನ್ನೊಲವಿನ ಜಲಪಾತದಲ್ಲಿಎಳೆ ಮೀನಾಗಿ ಈಜುವ ತವಕನಿನ್ನ ಸಾನಿಧ್ಯದಲಿನಾ ನನ್ನ ಸಂಪೂರ್ಣ ಕಳೆದುಕೊಂಡುಮತ್ತೊಮ್ಮೆ ಪಡೆದುಕೊಂಡುನಿನ್ನರ್ಧವೇ ಆಗಿ ಪರಿಪೂರ್ಣನಾಗುವ ತಹತಹಿಕೆಜ್ವರದುರಿಯಲ್ಲಿ ಕುದಿವ ಮಗುತಾಯ್ಮೊಲೆಗೆ ಕನವರಿಸುವಂತೆನಿನ್ನ ಹೆಸರ ಕರೆವಾಸೆಹೊಸಮಳೆಗೆ ಹದಗೊಂಡ ಮಣ್ಣಿನೆದೆಯ ಮೇಲೆಬಿದ್ದು ಬೇರೂರಿದ ಈ ಉಳಿಜಾಲಿಜಡಗೊಂಡು ಮುದಿ ಕೊರಡಾಗುವವರಗೆನಿನ್ನ ಸಾಂಗತ್ಯದಲಿನಿನ್ನ ನಿಷ್ಕಲ್ಮಶ ಪ್ರೇಮದುರಿಯಲಿದಹಿಸುವ ಬಯಕೆನಿನ್ನ ಮಡಿಲ ತೆಕ್ಕೆಯಲಿ ಬೆಚ್ಚಗೆ ಒರಗಿಕಣ್ಮುಚ್ಚುವ ಹಂಬಲ ******

ನಿವೇದನೆ… Read Post »

ಕಾವ್ಯಯಾನ

ನಡುಗಡ್ಡೆಯ ಹುಡುಗಿ

ಕವಿತೆ ಎಂ.ಜಿ .ತಿಲೋತ್ತಮೆ ನಾನು ಹರವಿನ ಜಲವ ಈಜಿ,ದಾಟಿಆ ದಡವ ಸೇರುವ ಬಯಕೆಕೋಟೆಯೊಳಗೊಂದು ಕೋಟೆಕಟ್ಟಿಕೊಂಡು ಕರೆದರೂ ನೀನು ಕೇಳುತ್ತಿಲ್ಲಸೇರಲಾಗುತ್ತಿಲ್ಲ… ದಿನಕ್ಕೆ ದೃಷ್ಟಿ ತಗುಲುವಅನಂತ ಕಣ್ಣು ,ಹುಚ್ಚು ಮನಸ್ಸುಗಳಲ್ಲಿನನ್ನದು ಒಂದುಅವಳ ಮೈಸಿರಿ,ಸೊಬುಗು ವರ್ಣನೆಗೆಸುತ್ತ ಹರಿಯುವ ಉದಕಕ್ಕೂ ಎಟಕದು ಈ ದಡಕ್ಕೂ ಆ ದಡಕ್ಕೂ ಅಂತರಅಳತೆಯಮಾಪನದಲ್ಲಿ ಅಗಮ್ಯಈ ಮನಕ್ಕೂ ಆ ಮನಕ್ಕೂ ಅಂತರವಿಲ್ಲಹಾಲಿನೊಳಗೆ ಸೇರಿಕೊಂಡ ಜೇನಂತೆಅಷ್ಟೇ ಹತ್ತಿರ ಇರಬಹುದು ಯಾವ ದಾರಿ ಹಿಡಿದು ಬರಲಿದಿನ ನಿತ್ಯ ಅರಳುವ ಪ್ರೀತಿಗೆಕಟ್ಟೆ ಕಟ್ಟಿದ್ದರೆ ಜೀವ ಹೇಗೆ ಉಳಿಯುವುದು ನೀನು ನಾನಾಗಿ ನಾನು ನೀನೇ ಎಂದುಹೀಗೆ ಬರೆದಿಟ್ಟ ಪ್ರೀತಿ ಭಾಷೆಯ ನುಡಿಗಳಹಾಳೆಗಳು ತೂರಿ ಬಿಟ್ಟರೆ ಓಡೋಡಿ ಬರುವೆಯಾ? ವಿನಾಕಾರಣ ಕಾಯಿಸಿ,ಬೇಯಿಸಿ,ನಿಂದಿಸಿಕೊನೆಗೆ ಸೋಲಬೇಕೆನ್ನುವ ಹಟಬೇಕೆಮೊದಲ ಬೇಟೆಗೆ ಒಪ್ಪಬಹುದಲ್ಲವೇ ಮತ್ತೆ ಅದನ್ನೇ ಹೇಳುವೆಎಷ್ಟು ದೂರ ನಿನ್ನ ನನ್ನ ನಡುವೆಮಧ್ಯ ಮುಳುಗಿಸುವವಿರೋಧ ಭಾವ ವಿಲ್ಲವಾದರೆಅಂತದೇನು ಭಿನ್ನತೆ ಇಲ್ಲ ***************

ನಡುಗಡ್ಡೆಯ ಹುಡುಗಿ Read Post »

ಕಾವ್ಯಯಾನ

ಒಲವಿನ ಪಹರೆ

ಕವಿತೆ ರೇಶ್ಮಾಗುಳೇದಗುಡ್ಡಾಕರ್ ಅರಳುತ್ತಿದೆ ಹೃದಯದಹೂ ಬನ ನಿನ್ನನೆನೆನಾದಕ್ಷಣ ….. ಎಣಿಸಲಾಗದ ಕನಸುಗಳದಿಬ್ಬಣ ಹೊರಟಿದೆಮನದೂರಿನ ಹೆದ್ದಾರಿಯಲಿನೆನಪಿನ ಬಿಡಿ ಹೂಗಳಸ್ವಾಗತದೊಂದಿಗೆ …. ನಿನ್ನ ಎದೆಯ ಗೂಡಿನಲ್ಲಿಬಚ್ಚಿಟ್ಟ ನನ್ನ ಚಹರೆಯಪಟವ ಮತ್ತೆ ನೋಡುವಾಸೆಈ ಸಂಜೆಯ ತಂಪು ಕಂಪಿನಸುಸಮಯದಲ್ಲಿ ….. ಬಯಕೆಯ ಕುಡಿನೋಟವೊಂದುಸದ್ದಿಲ್ಲದೆ ನಿನ್ನ ಬಳಿಸಾರಿದೆಸ್ವೀಕರಿಸಿ ಒಪ್ಪಿಗೆಯ ಮುದ್ರೆಯಾರವಾನಿಸುವೆಯಾ ನಿನ್ನ ಬೊಗಸೆಕಂಗಳ ಬೆಳಕಿನಲ್ಲಿ…‌‌‌‌.. ***********

ಒಲವಿನ ಪಹರೆ Read Post »

ಕಾವ್ಯಯಾನ

ಮಾನವೀಯತೆ ಮಾತನಾಡಲಿ

ಕವಿತೆ ಪ್ಯಾರಿ ಸುತ ಮುಂದೊಂದು ದಿನ ನಾವಿಬ್ಬರು ಹೀಗೆ ಸತ್ತುಬಿಡೋಣಅಲ್ಲಿಗೆ ಬರುವವರು ಹೂವಿನ ಹಾರ,ಕನಿಕರದ ಮಾತುಗಳು,ಕೆಲವಂದಿಷ್ಟು ಬಿಡಿಬಿಡಿ ಹೊಗಳಿಕೆಗಳು,ಅಲ್ಲೊಂದಿಲ್ಲೊಂದು ತೆಗಳಿಕೆಗಳು,ತಂದು ಅಳುವ ಮುನ್ನಇಲ್ಲವೇ ;ಸಪ್ಪಳ ಮಾಡುವ ಕಣ್ಣೀರು ಅಳುವೆಂಬಪದವಾಗಿ ಸತ್ತ ಕಿವಿಯನ್ನುಸೇರೋ ಮುನ್ನಹಾಗೆ ಮಣ್ಣು ಸೇರಿಬಿಡೋಣಅಲ್ಲಿ ನಾವಿಬ್ಬರು ತಬ್ಬಿಕೊಂಡು ಒಬ್ಬರ ಮುಖವಇನ್ನೊಬ್ಬರುಹೊಂದಿಸಿಕೊಂಡು ಬೆತ್ತಲಾಗಿ ಮಲಗೋಣ ಅಲ್ಲಿ ಉಸಿರಾಡುವ,ಹೆಸರು ಮಾಡುವ ,ಸಮಸ್ಯೆಗಳೇ ಸವಾಲಾಗುವ ಯಾವ ಪ್ರಮೇಯವೇ ಇಲ್ಲವಂತೆಹೆಚ್ಚುಕಡಿಮೆ,ಬಡವ ಧನಿಕ,ಮುಟ್ಟಿಸಿಕೊಳ್ಳದವಎಲ್ಲರೂ ಹೀಗೆ ಸಮಾನವಾಗಿ ಮಲಗಿ ಸುಖಿಸುತ್ತಿದ್ದಾರೆ.ಲಾಭ-ನಷ್ಟ ,ದುಃಖ-ದುಮ್ಮಾನ ಎಲ್ಲವೂ ಕೆಲಸಕ್ಕೆ ಬಾರದವುಗಳಲ್ಲಿತೇವಳುವ,ತೇಲುವ ದುಡಿಯುವ,ಹೊಡೆಯುವಅದೆಷ್ಟು ಜೀವಗಳು ಸುಮ್ಮನೆ ಮಲಗಿಕೊಂಡಿವೆ ಅಂತರ, ಜನ್ಮಾಂತರ ಎಲ್ಲವೂ ಇಲ್ಲಿಗೆ ಸಾಕು ಮಾಡಿಬಿಡೋಣಮಾತುಗಳಿಗೆ ಬಿಗಿಯಾದ ಕೊಂಡೆಯೊಂದನ್ನು ಬಿಗಿದುಅಲ್ಲಿಯೇ ನಿಲ್ಲಿಸಿಬಿಡೋಣಪ್ರೀತಿಯು ಮಾತನಾಡಲಿ,ಅದಕ್ಕೆ ಯಾವ ಸಣ್ಣ ಬಿಂದುಗಳನ್ನು ಕೊಟ್ಟು ನಿಲ್ಲಸದಿರೋಣಬೆನ್ನು ಹಿಂದೆ ಅವಿತು ಕುಳಿತ, ತನ್ನತಾನು ಮರೆತಮಾನವೀಯತೆಯೂ ಮೊದಲು ಬಂದು ನಿಲ್ಲಲಿಅದಕ್ಕೊಂದಿಷ್ಟು ಪದಗಳಾದರೂ ದಕ್ಕಲಿ ಮುಂದೊಂದು ದಿನ ನಾವಿಬ್ಬರು ಹೀಗೆ ಸಾಯುವ ಕಲ್ಪನೆತಟ್ಟನೆ ಕಣ್ಣುಮುಂದೆ ತಂದು ನಿಲ್ಲಿಸಿದೊಡನೆಮತ್ತಷ್ಟು ಪ್ರೀತಿ ನಮ್ಮಿಬ್ಬರಲ್ಲಿ ಗಟ್ಟಿಗೊಳ್ಳಬಹುದು ***************

ಮಾನವೀಯತೆ ಮಾತನಾಡಲಿ Read Post »

ಕಾವ್ಯಯಾನ

ಕುರ್ಚಿಗಳು ಅಂಗಿ ತೊಟ್ಟು..

ಕವಿತೆ ನೂತನ ದೋಶೆಟ್ಟಿ ಈ ಅಂಗಿಯ ದರ ಸಾವಿರದ ಐದು ನೂರುಕೇಳಿ ನೀನು ಕಣ್ಣರಳಿಸುತ್ತಿಬೆಲೆಯಿಂದೇನಾಗಬೇಕುತೊಟ್ಟವನು ನೀನಲ್ಲವೇ?ಕುರ್ಚಿಯ ಲೆಕ್ಕಾಚಾರ ಅದಲ್ಲ.ನಿನ್ನ ಓಡಾಟದ ಚುರುಕುಮುಟ್ಟಿರುತ್ತದೆ ಆ ಅಂಗಿಗೆಹಕ್ಕನ್ನು ಕೊಡಲಾರೆನಡೆ ನಿಧಾನವಿರಲಿಕುರ್ಚಿಯ ಡೊಳ್ಳು ಹೊಟ್ಟೆ ಕನಲುತ್ತದೆ.ನಿನ್ನದೋ ಯೋಗನಡೆದೀರ್ಘ ಉಸಿರೆಳೆದುತುಂಬಿಕೊಂಡ ಕಸರನ್ನುಹೊರಹಾಕುತ್ತ ನಿಶ್ವಾಸದಲಿಹಗುರವಾಗುವುದ ಕಲಿತಿದ್ದಿ.ಕುರ್ಚಿಗೆ ಧಗೆ ಹತ್ತಿದೆ.ಕುಂತಲ್ಲಿ ಇರುವ ಕುರ್ಚಿಯಬತ್ತಳಿಕೆಯ ತುಂಬಹಸಿರು ಶರಾದ ಬಾಣಗಳುನಿನ್ನೆಡೆಗೆ ತೂರಿ ಬಿಡಲುಕುರ್ಚಿಯೀಗ ಪಣ ತೊಟ್ಟಿದೆ.ಮತ್ತೀಗ ಉಚ್ಛ್ವಾಸದಲಿಎದೆಯ ಹುರಿ ಮಾಡುತ್ತಿನಾಟುವುದು ಅಲ್ಲಿಗೇ ತಾನೇ?ಜಯದ ಬೆನ್ನು ಹತ್ತಿದರೆಅಪಜಯದ ಭಯಕುರ್ಚಿಗೇನು ಗೊತ್ತು ನಿನಗೆ ಸೋಲಿಲ್ಲ.ತಳವೂರಿ ನಿಂತು ಜಯದ ಅಹಂಕಾರತನ್ನ ಸೋಲಿನ ಭಯಕುರ್ಚಿಯ ಉರುಟು ಮೈ ತುಂಬಹೊಳಪ ಲೇಪನಬಿಂಬ ಕಾಣಿಸುವಷ್ಟು ನೀನು ದೂರವಾಗುತ್ತಿನಿನಗೆ ಹತ್ತಿರವಾಗುತ್ತಿನಿನ್ನ ಸಾಂತ್ವನಕ್ಕೆಕುರ್ಚಿ ಗುಡುಗುತ್ತದೆ. ನೀನು ಬಾಗಬೇಕು, ಬೀಗುವುದಲ್ಲನಿನ್ನ ಜಾಗ ಅಲ್ಲಿನೆಲದ ಹಾಸಿರುವಲ್ಲಿ ನಿನಗೋ ಜಾಗದ ಗರಜಿಲ್ಲನಿನ್ನದು ಬಾನವಿಸ್ತಾರದ ಹಾದಿಪಚ್ಚೆ, ಪೈರುಗಳ ದಾರಿಜಲಪಾತದ ನಡೆಕಾಡತೊರೆಯ ನಿರುಮ್ಮಳತೆ ಕುರ್ಚಿಗಳೇ ಅಂಗಿ ತೊಟ್ಟುಎತ್ತರದ ಪೀಠದಲ್ಲಿರಿನಡೆದಷ್ಟೂ ಇರುವ ದಾರಿ ನನಗಿರಲಿಹಸಿರ ಕೈಯಾಡಿಸುತ್ತಹೂವ ಆಘ್ರಾಣಿಸುತ್ತಬದುಕ ಆಸ್ವಾದಿಸುತ್ತೇನೆನಿಮ್ಮ ಚೌಕಾಸಿನನಗೆ ಒಗ್ಗುವುದಿಲ್ಲ. **********

ಕುರ್ಚಿಗಳು ಅಂಗಿ ತೊಟ್ಟು.. Read Post »

ಕಾವ್ಯಯಾನ

ಆಹ್ಲಾದಕರ ಭಾವನೆಯಲಿ ನಾವು

ಕವಿತೆ ರಾಘವೇಂದ್ರ ದೇಶಪಾಂಡೆ ಗುನುಗುತಿದೆ ಹೆಸರೊಂದು ಹೃದಯ ಶಹನಾಯಿಯೊಳಗೆಬೆಸೆದಾಗಿದೆ ಆ ಹೆಸರಲ್ಲಿ ನನ್ನ ಬಾಳಉಸಿರುರೂಪಿಸಿಹನು ಭಗವಂತ ಪ್ರೀತಿ ಭರಿತ ಸಂಬಂಧವನುಒಳಗೊಂಡಿದೆ ನಮ್ಮೀ ಸಂಬಂಧವುಸೃಷ್ಟಿಕರ್ತನ ಫಲದೊಳಗೆ… ಹೇಳಿಕೊಳ್ಳಲಾಗದ ಏಕಾಂಗಿತನವಿದೆ ಪ್ರೀತಿ ತಿರುವಿನಲಿಒಂಟಿಯಾಗುವೆ…ಕೆಲವೊಮ್ಮೆ ನಾನು ಒಂಟಿತನದಲಿಇಚ್ಛೆಪಟ್ಟಿರುವನೊ ಕರ್ತೃ ಹೀಗೆಯೇ ಇರಬೇಕೆಂದುಆಗುವುದೊಮ್ಮೆ ನಿರ್ಜನ…ಮತ್ತೊಮ್ಮೆ ಸ್ವರ್ಗಲೋಕಆಳವಾದ ಪ್ರೀತಿ ಇದೆಯೆನೋ… ದುಖಃದಲಿ ದುಖಿಃಯಾಗಿರುವೆ ಸುಖಃದಲಿ ಸುಖಿಃನೀಗಿಸಿಕೊಂಡಿರುವೆ ಸಂತಸದ ಹಸಿವನು ನಿನ್ನ ಹಸನ್ಮುಖತೆಯಲಿಎದೆಬಡಿತ ನಿಲ್ಲುವುದು ವ್ಯಾಕುಲತೆಯಲಿ ನೀನಿರುವಾಗಹಂಚಿಕೊಳ್ಳುವ ಪ್ರಣಯಾಮೃತವನು ಜುಮ್ಮೆನ್ನುವ ಮಿಂಚಿನಲಿದಾಂಪತ್ಯ ದೀವಿಗೆಯ ಬೆಳಕಿನಲಿ… ಸುವರ್ಣ ಲೇಖನಗಳಾಗಿವೆ ಚೈತನ್ಯಭರಿತ ಹೆಜ್ಜೆಗಳುಕಥೆಯಾಗಿರುವೆವು ಬದುಕೆಂಬ ಲೇಖನದ ಹೊಳಪಿನಲಿವಿರಹಿಸೋಣ ಭರವಸೆಯ ಭಾವಲೋಕದಲಿಸಾಗೋಣ ಒಲವಿನ ಅಲೆಯಲಿ ನಾಳೆಂಬ ನಿರೀಕ್ಷೆಯಲಿಚುಂಬಿಸೋಣ ಆಗಸವ ಸ್ವಚ್ಛಂದದಿ ಹಾರಾಡುವ ಹಕ್ಕಿಗಳಾಗಿ ಹೆಸರೊಂದು ಕೊರೆದಾಗಿದೆ ಹೃದಯಾಂತರಾಳದಲಿತಳುಕುಹಾಕಿಕೊಂಡಿದೆ ಮೈ ಮನಸುಗಳಲಿ ನನ್ನ ಹೆಸರುಸೃಷ್ಟಿಯಾಗಿದೆ ಸಂಬಂಧವೊಂದು ಅದ್ಭುತ ಪರಿಕಲ್ಪನೆಯಲಿಜೊತೆಯಾಗಿರೋಣ ಜೀವಂತಿಕೆಯ ಕಾಲಚಕ್ರದೊಳಗೆಸಾಧಿಸಿ ತೋರಿಸೋಣ ಹೌದೆನ್ನುವ ಹಾಗೆ… **************

ಆಹ್ಲಾದಕರ ಭಾವನೆಯಲಿ ನಾವು Read Post »

ಕಾವ್ಯಯಾನ

ಕರುಣಾಮಯಿ

ಕವಿತೆ ಪೂಜಾ ನಾರಾಯಣ ನಾಯಕ ಆಸುಪಾಸಿನ ಬೇಲಿಯಲಿದ್ದಕಾಷ್ಟದ ತುಂಡಾಯ್ದುಕಲಬೆರಕೆ ಅಕ್ಕಿಯಲಿ ಬೆರೆತಿರುವ ಕಲ್ಲಾಯ್ದುಹೊಲದಲ್ಲಿ ಬೆಳೆದ ಕಾಯಿಪಲ್ಲೆಯ ಕೊಯ್ದುಹೊತ್ತಿಗೆ ಸರಿಯಾಗಿ ಕೈತುತ್ತು ಉಣಿಸಿದವಳುಕರುಣಾಮಯಿ ನನ್ನಮ್ಮ… ಕಡು ಬಡತನದ ಸಂಕಟದಲ್ಲೂಆಶಾ-ಭರವಸೆಯ ನುಡಿಯಾಡಿಸಾವಿರ ಕಷ್ಟ – ಕಾರ್ಪಣ್ಯಗಳ ನಡುವೆತಾನೊಬ್ಬಳೇ ಹೋರಾಡಿಹರಿದಿರುವ ಹರುಕು ಅಂಗಿಯ ತುಂಡಿಗೂಮೊಂಡಾದ ಸೂಜಿಗೂಮಧುರವಾದ ಬಾಂಧವ್ಯ ಬೆಸೆದವಳುಕರುಣಾಮಯಿ ನನ್ನಮ್ಮ.. ನಾ ಸೋತು ಕೂತಾಗಕರುಳಬಳ್ಳಿಯ ಅಳಲು ತಾ ಮನದಲ್ಲೆ ಅರಿತುನನ್ನಲ್ಲಿ ಕೂಡ ಛಲದ ಬೀಜವನು ಬಿತ್ತಿನನ್ನ ಸಾವಿರ ಕನಸುಗಳನ್ನುನನಸು ಮಾಡಲು ಹೊರಟು ನಿಂತವಳುಕರುಣಾಮಯಿ ನನ್ನಮ್ಮ.. ಕೂಡಿಟ್ಟ ಕಾಸಿನಲಿಶಾಲೆಗೆ ಪೀಜು ತುಂಬಿತನ್ನ ಹರುಕು ಸೀರೆಯ ಲೆಕ್ಕಿಸದೆನನಗೊಂದು ಹೊಸ ಅಂಗಿಯ ಕೊಡಿಸಿದೊಡ್ಡ ಅಧಿಕಾರಿಯ ಸ್ಥಾನದಲಿತಾ ಕೂಸ ನೋಡಬೇಕೆಂದುಆಸೆಯಿಂದ ಕಾಯುತ್ತ ಕುಳಿತವಳುಕರುಣಾಮಯಿ ನನ್ನಮ್ಮ…. ತನ್ನ ಜೀವದ ಕೊನೆಯ ಉಸಿರಿನ ತನಕತನ್ನ ಮಗುವಿನ ಸುಖಕ್ಕಾಗಿ, ಉದ್ಧಾರಕ್ಕಾಗಿ ದುಡಿಯುವಆ ತಾಯಿಯ ಪ್ರೀತಿಗೆ ಎಣೆ ಎಂಬುದಿಹುದೇನು?….ಅವಳ ಋಣ ತೀರಿಸಲು ಸಾಧ್ಯವಿಹುದೇನು?…ಅವಳ ಸ್ಥಾನವನ್ನು ಬೇರೆಯವರು ತುಂಬಲು ಅರ್ಹರೇನು?…ಅವಳಿಲ್ಲದ ಒಂದು ಕ್ಷಣ ಈ ಭೂವಿಯು ಬರೀ ಶೂನ್ಯವಲ್ಲವೇನು?…. ******

ಕರುಣಾಮಯಿ Read Post »

ಕಾವ್ಯಯಾನ

ಒಮ್ಮೆ ಪೌರ್ಣಿಮೆಯಾಗಬೇಕಿದೆ ನನಗೆ

ಕವಿತೆ ವಿದ್ಯಾ ಕುಂದರಗಿ ನಿರ್ಬಂಧಗಳ ಜಡಿದು ಬಂಧಿಸಲಾಗಿದೆ ಇಲ್ಲಿರೆಕ್ಕೆ ಬಡಿದು ಬಾನಿಗೆ ಹಾರಬೇಕಿದೆ ನನಗೆ ಕಣ್ಕಟ್ಟಿದ ಖುರಪುಟಕೆ ಒಂದೇ ಗುರಿಯುದೆಸೆದೆಸೆಗೆ ಕಣ್ಣಗಲಿಸಿ ನೋಡಬೇಕಿದೆ ನನಗೆ ಗೊರಕೆಯ ಸದ್ದಿಗೆ ಗೋಡೆಯಾಗುತ್ತಿದೆ ಪಟಲಗಾಳಿಪಟವಾಗಿ ಆಕಾಶ ಚುಂಬಿಸಬೇಕಿದೆ ನನಗೆ ರಾತ್ರಿಕನಸು, ಭಾವಗಳಿಗೆ ಕೊಡಲಾಗದ ಕಾವುಸಂಜೆ ಮುಂಜಾವಿಗೆ ಚಿಂವ್‌ಗುಟ್ಟಬೇಕಿದೆ ನನಗೆ ಚಿವುಟಿ ಚಿಮ್ಮಿದರೂ ಟಿಸಿಲೊಡೆಯುವ ಪಸೆಹಬ್ಬಿ ಆಕಾಶದೆತ್ತರಕೆ ಕೈ ಚಾಚಬೇಕಿದೆ ನನಗೆ ‘ಸಖಿ’ ನಿಸ್ಸಂಗವಾಗಿ ಕಳೆದ ಮಾಸಗಳೇಷ್ಟೋಒಮ್ಮೆ ಚಿತ್ತಪೌರ್ಣಿಮೆ ಆಗಬೇಕಿದೆ ನನಗೆ *******************

ಒಮ್ಮೆ ಪೌರ್ಣಿಮೆಯಾಗಬೇಕಿದೆ ನನಗೆ Read Post »

ಕಾವ್ಯಯಾನ

ಆಯ್ಕೆ

ಕವಿತೆ ಮಾಲತಿಹೆಗಡೆ ಹೆತ್ತವರ ಹುಟ್ಟೂರವ್ಯಾಮೋಹ ಬಿಟ್ಟವರು..ಕತ್ತರಿಸಿ ನೆಟ್ಟ ಗಿಡದಂಥವರುನಗರವಾಸಿಗಳಿಗೊಲಿದವರುಹೋದೆಡೆಯೆಲ್ಲ ಚಿಗುರುವಹಟದಲ್ಲಿ ಬೇರು ಬೆಳೆಸಿಕೊಂಡವರಲ್ಲವೇ ನಾವು ? ಅಂಗೈ ಗೆರೆ ಮಾಸುವಷ್ಟುಪಾತ್ರೆ ಬಟ್ಟೆ ಉಜ್ಜಿ ಉಜ್ಜಿಮುಂಬಾಗಿಲು ತೊಳೆದುರಂಗೋಲಿಯಿಕ್ಕಿಕಟ್ಟಡವನ್ನುಮನೆಯಾಗಿಸಿಯೂತವರು ಮನೆ ಯಾವೂರು?ಗಂಡನ ಮನಿ ಯಾವೂರು?ಪ್ರಶ್ನೆ ಎದುರಿಸುತ್ತಅಡುಗೆಮನೆ ಸಾಮ್ರಾಜ್ಯದಲಿಹೊಗೆಯಾಡುವ ಮನಕ್ಕೆತಣ್ಣೀರೆರೆಚಿ ಹೂನಗೆ ಬೀರುವವರಲ್ಲವೇನಾವು? ತೊಟ್ಟಿಲು ತೂಗಿ,ಹೆಮ್ಮೆಯಲಿ ಬೀಗಿವಿರಮಿಸಲೂ ಬಿಡುವಿರದೇಸಂಸಾರ ಸಾವರಿಸಿಹೀಗೆಯೇ ಸಾಗುವುದುಹಣೆಬರಹ ಎನ್ನುತ್ತಬದುಕುವ‌ ನಗರವಾಸಿ ನಾರಿಯರಲ್ಲವೇ ನಾವು? *************

ಆಯ್ಕೆ Read Post »

ಕಾವ್ಯಯಾನ

ಹೇಳಲೇನಿದೆ

ಕವಿತೆ ಡಾ.ಗೋವಿಂದಹೆಗಡೆ ಇಲ್ಲ, ನಿಮ್ಮೆದುರು ಏನನ್ನೂಹೇಳುವುದಿಲ್ಲ ಹೇಳಿದಷ್ಟೂ ಬೆತ್ತಲಾಗುತ್ತೇನೆಮತ್ತೆ ಬಿತ್ತಿಕೊಳ್ಳಲು ಏನುಉಳಿಯುತ್ತದೆಹೇಳಿದಷ್ಟು ಜೊಳ್ಳಾಗುತ್ತೇನೆಮೊಳೆಯಲು ಮತ್ತೆಉಳಿಯುವುದೇನು ಖರೇ ಅಂದರೆನಿಮಗೆ ಏನನ್ನೂ ಹೇಳುವಅಗತ್ಯವೇ ಇಲ್ಲ ಕಣ್ಣುಗಳಲ್ಲೇ ಸೆರೆಹಿಡಿದುದೋಷಾರೋಪಪಟ್ಟಿ ಸಲ್ಲಿಸಿಯಾವ ಪಾಟೀಸವಾಲೂಇಲ್ಲದೇಶಿಕ್ಷೆ ವಿಧಿಸಿ… ಹೇಳಲೇನಿದೆ? ***********

ಹೇಳಲೇನಿದೆ Read Post »

You cannot copy content of this page

Scroll to Top