ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎಂಥಾ ಮಳೆ

ಕವಿತೆ ವಸುಂಧರಾ ಕದಲೂರು ಅಬ್ಬಾ..ಎಂಥಾ ಮಳೆಸುರಿದೂ ಸುರಿದೂಸುರಿದೂ ಸುರಿದೂತಟಕ್ಕನೆ ನಿಂತರೂತೊಟಕ್ ತೊಟಕ್ ಎಂದುತೊಟ್ಟಿಕ್ಕುತಾಮಲೆ ಕಾಡು ಮನೆ ಮಾಡುಮರದ ನೆತ್ತಿ ಗಿಡದ ಬೇರುಎಲ್ಲಾ ನೆನೆಸಿತು ಅಬ್ಬಾ…ಎಂಥಾ ಮಳೆಸುರಿದೂ ಸುರಿದೂಸುರಿದೂ ಸುರಿದೂನದಿ ತೊರೆ ಕೆರೆ ಝರಿಹಳ್ಳ ಕೊರಲು ಕೊಳ್ಳತುಂಬಿಸಿ ಚೆಲ್ಲಿ ತುಳುಕಿಸಿಹರಿದು ಹರಿದು ಹಾರಿತುಅಬ್ಬಾ… ಎಂಥಾ ಮಳೆಅಂಚಲಿ ಕೊರೆದು ಕೊಚ್ಚಿಆಳಕೆ ಸುರಿದು ಚಚ್ಚಿಒಂದೇ ಸಮನೆ ಹೊಡೆದುಹಾಸಿ ಬೀಸಿ ಬೆಚ್ಚಿ ಬೀಳಿಸಿತು.ಅಬ್ಬಾ…ಎಂಥಾ ಮಳೆಅಳತೆ ಮೀರಿ ಸುರಿದುಎಲ್ಲೆ ತೂರಿ ಹರಿದುದಿಕ್ಕು ತಪ್ಪಿಸಿ ಲೆಕ್ಕ ಒಪ್ಪಿಸಿದಿಢೀರನೆ ಧಡಾರನೆಮಿಂಚು ಗುಡುಗುಸಿಡಿಲು ನಡುಗುಬಡಿದೆಬ್ಬಿಸಿ ಮಗ್ಗಲು ಮುರಿಸಿಒಳ್ಳೆ ಪಾಠ ಕಲಿಸಿತುಅಬ್ಬಾ… ಎಂಥಾ ಮಳೆಭುವಿಯ ಕೋಪ ತೋರಿತುಕಡಲ ಅಲೆಯ ಕಂಗೆಡಿಸಿತುಸುಖದ ಕನಸು ಕೆಡಿಸಿತುನಗರ ಬದುಕು ಗುಡಿಸಿತುಅಬ್ಬಾ…ಎಂಥಾ ಮರುಳು ಮಳೆ. *******************************************************

ಎಂಥಾ ಮಳೆ Read Post »

ಕಾವ್ಯಯಾನ

ಬೆಳೆಯೋಣ ಬನ್ನಿ..

ಕವಿತೆ ಸುಜಾತ ಲಕ್ಷ್ಮೀಪುರ. ಮನುಜ ಮನುಜನೆದೆಯಲಿಪ್ರೀತಿ ನೀತಿಯ ಸಸಿ ನೆಟ್ಟುಸಹಕಾರ ಸಮಾನತೆ ನೀರೆರೆದುಮನುಷ್ಯತ್ವದ ಹೂ ಹಣ್ಣು ಕಾಯಿ ಬೆಳೆದುಬಯಲ ಮಕ್ಕಳೆಲ್ಲಾ ಸೇರಿ ಸವಿಯೋಣ ಬನ್ನಿ. ನಿತ್ಯ ನಡೆ ನುಡಿ ಆಚಾರದಲಿಸದ್ಭಾವನೆಯ ಸಿಂಪಡಿಸಿಸರ್ವೋದಯದ ಸಕಾರವನೆ ಉಸಿರಾಡುತ್ತಾಸಕಲ ಜೀವರಾಶಿಯ ಲೇಸು ಬಯಸೋಣ ಬನ್ನಿ ಕಟ್ಟೋಣ ನಾವುಎಲ್ಲರ ಹೃದಯಗಳಿಗೂಅಂತಃಕರಣದ ಸ್ನೇಹ ಸೇತುವೆನಾನು ನೀನಳಿದು ನಾವು ಆದಸಮಷ್ಟಿಯ ಸರ್ವಹಿತದಲಿ. ಸದಾ ಜೀಕೋಣ ಬನ್ನಿಒಬ್ಬರಿಗೊಬ್ಬರು ಕೈ ಕೈಯಿಡಿದು.ನಾವೆಲ್ಲಾ ಒಂದೇ ನಾವು ಜೀವ ಚೈತನ್ಯರು.ಸಾರಿ ಸಾರಿ ಘೋಷಿಸುತ್ತಾಸುತ್ತೋಣ ಬನ್ನಿಮಾನವಪ್ರೇಮದ ನಂದನವನ. *****************************

ಬೆಳೆಯೋಣ ಬನ್ನಿ.. Read Post »

ಕಾವ್ಯಯಾನ

ನಮಗೊಂದು ಪ್ರಕೃತಿಯು..!

ಕವಿತೆ –ರಮಣ ಶೆಟ್ಟಿ ರೆಂಜಾಳ. ನಮಗೊಂದು ದೇಹವಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ಪರಿ ಪರಿಯ ನೋವ !ನಮಗೊಂದು ಮನವಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ನಾನಾ ಪರಿ ಚಿಂತೆಯ !ನಮಗೊಂದು ಜಿಹ್ವೆಯಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ವಿಧ ವಿಧ ರುಚಿಯ !ನಮಗೊಂದು ನಾಸಿಕವಕೊಟ್ಟನು ಆ ದೇವ,ಆಘ್ರಾಣಿಸಬಿಟ್ಟನು ಇಹಪರದ ವಾಸನೆಯ !ನಮಗೆರಡು ಕಂಗಳಕೊಟ್ಟನು ಆ ದೇವ,ಕೊಟ್ಟದರಲ್ಲಿಟ್ಟನು ಚಂಚಲ ನೋಟವ !ನಮಗೆರಡು ಕಿವಿಗಳಕೊಟ್ಟನು ಆ ದೇವ,ಕೇಳಲೆಂದನವ ತರಹಾವರಿ ಶಬ್ಧವ !ನಮಗೆರಡು ಕೈ ಕಾಲುಗಳಕೊಟ್ಟನು ಆ ದೇವ,ಗಂಟುಗಳಲಿಟ್ಟು ವೃದ್ಧಾಪ್ಯಕೆನೋವ ನಿರಖು ಠೇವಣಿಯ !ನಮಗೊಂದು ಜೀವನವಕೊಟ್ಟನು ಆ ದೇವ,ಅನುಭವಿಸಲೆಂದು ಈ ಪರಿಯೊಳುಸಕಲ ಸುಖದುಃಖವ !ಆದರೇನು?ನಮಗೊಂದು ಪ್ರಕೃತಿಯಕೊಟ್ಟನು ಆ ದೇವ ,ಹಾಳುಗೈಯದೆ ಅದನುಹಾಳಾಗಗೊಡದಿರಿಯೆಂದ ನಿಮ್ಮ ತನುಮನವ!

ನಮಗೊಂದು ಪ್ರಕೃತಿಯು..! Read Post »

ಕಾವ್ಯಯಾನ

ಮನೋ ಇಂಧನ

ಕವಿತೆ ವಿದ್ಯಾ ಶ್ರೀ ಎಸ್ ಅಡೂರ್ ಸೀಟಿ ಹೊಡೆಯುತ್ತದೆ ಕುಕ್ಕರ್…ತಾಳದೇತನ್ನ ಅಡಿಯಲ್ಲಿ ಉರಿಯುತ್ತಿಯುವ ಬೆಂಕಿ.ನಾನೂಹೊರಹಾಕುತ್ತೇನೆ ನೋವು ನಲಿವುಗಳಪೆನ್ನು ಕಾಗದ ಹಿಡಿದು ,ಮನವನ್ನು ಕೆದಕಿ ಕೆದಕಿ . ಹಣೆಮೇಲಿನ ನೆರಿಗೆ, ಕಣ್ಣಂಚಿನ ಹನಿತುಟಿಯ ಮೇಲ್ಮುಖ ….ಕೆಳಮುಖ ಬಾಗುವಿಕೆಯಾವುದೂ ಅರ್ಥವಿಲ್ಲದ್ದಲ್ಲ….ಆಕಸ್ಮಿಕವಲ್ಲಪ್ರತಿಯೊಂದಕ್ಕೂ ಇದೆ ಬೇರೆ ಬೇರೆಯೇ ಪೀಠಿಕೆ. ಮನದ ಮ್ಲಾನತೆಯೋ, ಆಹ್ಲಾದಕತೆಯೋಮುಖದ ಮೇಲೆ ಕಾಣಬೇಕಾದರೆ…ಬೇಕುಏನಾದರೂ ಒಂದು ಇಂಧನ….ಅದಕ್ಕೇ..ಕುಕ್ಕರ್ ನ ಉದಾಹರಣೆ ಒಂದೇ..ಸಾಕು. ಮನವೆಂಬುದು ಒಂದು ಕುಲುಮೆಯೇ ಸರಿ..ಬೇಯುತ್ತಿರುತ್ತದೆ ಅಲ್ಲಿ ಬೇರೆ ಬೇರೆ ವಿಷಯಯಾವುದು ಮೊದಲು, ಯಾವುದು ಮತ್ತು, ಹೇಳುವಹಾಗಿಲ್ಲ,ಹೊರಹಾಕುತ್ತದೆ ನೋಡಿಕೊಂಡು ಸಮಯ…. ಅಲ್ಲಿ ಬೇಯುತ್ತಿರುವುದು ಖುಷಿಯೋ…ತ್ರಾಸವೋಯಾವುದೇ ಆದರೂ ಆ ಕ್ಷಣಕ್ಕೆ ಅದು ಮನಸಿಗೆ ಇಂಧನವಿಷಯವಿಲ್ಲದ ಮನಸು ದೆವ್ವದ ಮನೆಯಂತೆಅದಕ್ಕೇ…ಗಿಜಿಗುಡುತ್ತಲೇ ಇರಬೇಕು ಮನಸು, ಪ್ರತೀಕ್ಷಣ. *********************

ಮನೋ ಇಂಧನ Read Post »

ಕಾವ್ಯಯಾನ

ಮೌಢ್ಯ

ಕವಿತೆ ವೀಣಾ ರಮೇಶ್ ಮಾನದಂಡವಿಲ್ಲದ ಮೂಢ ಸಂತೆಯೊಳಗೆಬದುಕು ವ್ಯಾಪಾರ ವಾಗುತ್ತಿದೆ .ನಂಬಿಕೆಯ ನಡುವೆ ಮೂಢತ್ವ ಬಿತ್ತಿಮೊಳಕೆಯೊಡೆದುಬೇರು ಚಾಚಿಮೌಢ್ಯ ಹೆಮ್ಮರವಾಗಿದೆ ಬೆತ್ತಲಾಗಬೇಡ ಬತ್ತಿದಕನಸುಗಳಿಗೆಪೊಳ್ಳು ಕಟ್ಟು ಪಾಡುಗಳಹೆಗಲೇರಿ ಶವವಾಗಬೇಡ. ನಿನ್ನ ಕನಸುಗಳ ಚಲುವಿಗೆಸುಜ್ಞಾನ ತೊಡಿಸಿಜ್ಞಾನ ದಾರದಿಂದ ಬಿಗಿದುಅಭಿಜ್ಞಾನದೆಡೆಗೆ ಹರಿಸಿ ಅಹಂಕಾರದ ಕತ್ತಲೆಯಮರೆಸಿ ಆತ್ಮದ ಹಣತೆಯಲಿಅಂತರಾತ್ಮದ ನವಿರು ಸ್ಪರ್ಶ ಬೆಳಕು ನೀಡಲಿ **********************************

ಮೌಢ್ಯ Read Post »

ಕಾವ್ಯಯಾನ

ಕಣ್ಣುಗಳು ನನ್ನದಲ್ಲ

ಕವಿತೆ ಜಹಾನ್ ಆರಾ ಎಚ್. ಕೋಳೂರು ನಾನು ನಿನ್ನನ್ನು ನೋಡಿದ್ದೇನೆಆದ್ರೆ ಕಣ್ಣುಗಳು ನನ್ನದಲ್ಲ ದಶರಥನ ಮಹೋನ್ನತ ಯೋಚನೆಯಲ್ಲಿಮಂಥರೆಯ ಮೋಸದಲಿಊರ್ಮಿಳೆಯ ಉದಾಸೀನತೆ ಯಲ್ಲಿಲಕ್ಷ್ಮಣನ ನೆರಳಿನಲ್ಲಿಹನುಮಾನನ ಸೇವೆಯಲಿರಾವಣನ ಶೌರ್ಯದಲ್ಲಿಹೌದು ಅದೇ ಸೀತೆಯ ಕಂಬನಿಯಲ್ಲಿ ನಿನ್ನನ್ನು ಮತ್ತೆ ನೋಡುತಿದ್ದೇನೆಮತ್ತೆ ಮತ್ತೆ ಕಣ್ಣುಗಳು ನನ್ನದಲ್ಲ ಧರ್ಮದ ಚದರಿನಲ್ಲಿಜನ್ಮ ಭೂಮಿಯ ಹಂಗಿನಲಿರಾಜಕೀಯದ ದಾಳದಲಿಕೋರ್ಟುಗಳ ವಿವಾದಗಳಲಿದಾನಿಗಳ ದಾನದಲಿಮೌಢ್ಯದ ಹಾದಿಯಲ್ಲಿಮಾಧ್ಯಮದ ಗದ್ದಲದಲ್ಲಿ ನಿನ್ನ ಸೃಷ್ಟಿದ ವಾಲ್ಮೀಕಿಕಡತಗಳ ಹಿಡಿದುಇನ್ನೂ ಹೊರಗೆ ನಿಂತಿದ್ದಾನೆಅವನ್ನು ವಿಚಾರಿಸುನೀ ಮತ್ತೆ ಬರುವ ಅಗತ್ಯ ಇತ್ತೆ ಎಂದು? ಸಾವು ನೋವುಗಳ ಮೇಲೆ ಹಿಡಿತತಪ್ಪಿರುವಾಗ ದೇವರಾಗುವಬದಲು ವೈದ್ಯನಾಗುಮಂದಿರ ಮಂದಿರವಾಗಿಯೋ ಉಳಿಯುತ್ತದೆ ಆಗ ಮಾತ್ರ ನೀನು ನನ್ನಅವನ ಇವನ ಮತ್ತೊಬ್ಬನಕಣ್ಣಿಗೆ ಕಾಣುವೆಕ್ಷಮಿಸುನಿನಗೆ ಸಾದ್ಯವಾದರೆರಾಮರಾಜ್ಯ ಬೇಕಿದೆ ನಮಗೆಕೊಟ್ಟು ಬಿಡು ***********************

ಕಣ್ಣುಗಳು ನನ್ನದಲ್ಲ Read Post »

ಕಾವ್ಯಯಾನ

ಪಯಣ

ಕವಿತೆ ಪಾರ್ವತಿ ಸಪ್ನ ಹೊಗಳಿದರೆ ಹಿಗ್ಗದೆತೆಗಳಿದರೆ ಕುಗ್ಗದೆಅಪ್ಪಳಿಸುವ ಮಾತಿನಅಲೆಗಳಿಗೆ ಜಗ್ಗದೆನಿನ್ನ ಹಾದಿಯಲ್ಲೇನಿಲ್ಲದೆ..ನೀ ಸಾಗಿಬಿಡು..!! ಕಾಲಿಗೊಂದು ಮುಳ್ಳುಕೈಯಿಗೊಂದು ಕಲ್ಲುನಾಲಿಗೆಯಲ್ಲಿ ಸುಳ್ಳುಅಚ್ಚರಿಯೇನಿಲ್ಲ..ಲೋಕವೇ ಡೊಂಕುಮಾತೆಲ್ಲಾ ಕೊಂಕುಇರಲಿಬಿಡು.. ನಿನ್ನಷ್ಟಕ್ಕೇನೀ….ಸಾಗಿಬಿಡು…!! ತಪ್ಪು ಹುಡುಕುವಬೆಪ್ಪನಿಗೆ..ತುಪ್ಪ ಸವರಿದರೂಮೊಸರಲ್ಲೂ ಕಲ್ಲಂತೆ,,ಕಾಣದ ಗಾಳಿಯದುಬೊಗಸೆಯಲ್ಲಿ ಹಿಡಿದಂತೆ,,ಸುಮ್ಮನೆ ನಡೆದುಬಿಡುನಿನ್ನ ಹಾದಿಯಲ್ಲಿ ಸಾಗಿಬಿಡು…!! ಎಲ್ಲವೂ ಜಂಜಾಟಪ್ರತಿಕ್ಷಣ ಒಂದು ಪಾಠಸಮಯ ಗುರುವುಕಲಿಸುವುದು ನೋಡುಅವನ ಆಟಕ್ಕೆ ನೀ ಕುಣಿದುಬಿಡುತಿರುಗಿ ಮತ್ತೆ ನೋಡದಿರುವ್ಯಥೆಯನ್ನೆಲ್ಲಾ ತೂರಿಬಿಡುನಿನ್ನ ಗುರಿಯ ಸೇರಿಬಿಡು…!! ********************

ಪಯಣ Read Post »

ಕಾವ್ಯಯಾನ

ಇಲ್ಲದೆಯೂ ಎಲ್ಲವನ್ನೂ ಬಯಸುತ್ತೇನೆ

ಕವಿತೆ ಸ್ಮಿತಾ ಭಟ್ ಅಬ್ಬರಿಸಿ ಬರುವ ನಿನ್ನ ಮಾತಿನಹೊಡೆತಕ್ಕೆ ಸಿಲುಕಿದ ಒಂಟಿ ದೋಣಿಮತ್ತೊಂದು ಪ್ರಶಾಂತ ನಿಲುವಿಗಾಗಿಯಾಕೋ ಕಾಯಬೇಕೆನಿಸುತ್ತಿಲ್ಲಕೊಚ್ಚಿ ಕಾಣದಾಗಲೆಂದು ಬಯಸುತ್ತೇನೆ ಬುಡಮೇಲಾದ ನಂಬಿಕೆಯಮತ್ತೆ ಊರಿ ಅದಕ್ಕೇ ಚಿಗುರೊಡೆವಸಮಯಕ್ಕಾಗಿಯಾಕೋ ಕಾಯಬೇಕೆನಿಸುತ್ತಿಲ್ಲಕುರುಹೂ ಇಲ್ಲದಂತೆ ನಶಿಸಿ ಹೋಗಲು ಬಯಸುತ್ತೇನೆ. ಹೊಸದೇನೋ ಘಟಿಸುತ್ತದೆ ಎಂಬ ಬಯಕೆಯಲಿಹಳೆಯ ಪೋಷಾಕುಗಳನೇ ಮತ್ತೆ ಮತ್ತೆ ಹೊದ್ದುಅಸತ್ಯದ ನಗುವಿನಲಿ ಯಾಕೋ ಕಾಯಬೇಕೆನಿಸುತ್ತಿಲ್ಲಸಕಲವನೂ ತೊರೆದು ನಿರಾಳವಾಗಲು ಬಯಸುತ್ತೇನೆ. ಯಾವ ಕಿಂಡಿಯೂ ಉಳಿದಿಲ್ಲಕಿರಣದ ಸ್ಪರ್ಶವ ಅನುಭವಿಸಲುಹೊರದಾರಿಗೆ ಯಾರೋ ಬಾಗಿಲು ತರೆಯುವುದಕ್ಕಾಗಿ ಯಾಕೋ ಕಾಯಬೇಕೆನಿಸುತ್ತಿಲ್ಲಗೂಡಿನ ಮಾಡು ಸರಿಸಿ ದಿಗಂತದಲಿಹಂಗು ತೊರೆದು ಹಾರಲು ಬಯಸುತ್ತೇನೆ ಆಶಾವಾದಿತನದ ಬದುಕಿಗೆಚೆಲ್ಲಿದ ಬೊಗಸೆಗಳೆಲ್ಲ ಚಪ್ಪಾಳೆ ತಟ್ಟಿ ನಕ್ಕಿದೆಹೊಸ ಬಯಕೆಗಳ ಹೂವು ಅರಳಲುಯಾಕೋ ಕಾಯಬೇಕೆನಿಸುತ್ತಿಲ್ಲ.ಚುಕ್ಕಿಯ ದಂಡಿನಲಿ ಸೇರಿ ಸಕಲವನೂನೋಡಿ ನಗಲು ಬಯಸುತ್ತೇನೆ. ********************

ಇಲ್ಲದೆಯೂ ಎಲ್ಲವನ್ನೂ ಬಯಸುತ್ತೇನೆ Read Post »

ಕಾವ್ಯಯಾನ

ಊರುಗೋಲು ಕಾಫಿ ಮತ್ತು ಅಪ್ಪ

ಕವಿತೆ ವಿಭಾ ಪುರೋಹಿತ್ ಚತುರ್ಮುಖ ಬ್ರಹ್ಮಅವನೊಳಗೊಂದು ಕಾಣ್ದಅಗೋಚರ ಮೈವೆತ್ತ ಹಾಗೆಅವನಿಯೊಳಗಿನ ಜ್ಞಾನಕಣ್ತೆರೆದಂತೆಸುಡುವ ನೋವಿದ್ದರೂ ಎದೆಯೊಳಗೆಉತ್ಸಾಹ ಉತ್ತುವದು ನಗೆಯ ಬಿತ್ತುವುದುಮಹಾತ್ಮ ನ ಲೀಲೆನಾರಾಯಣನಿಲ್ಲದೇ ಅವನಿಯುಂಟೇ?ಅದೃಶ್ಯದಲ್ಲಿ ಸದೃಶನಾಗಿಸೋಫಾಮೇಲೆ ಕುಳಿತಿದ್ದಾನೆರೇಡಿಯೋ ಕೇಳುತ್ತಿದ್ದಾನೆಎರಡುತಾಸಿಗೊಮ್ಮೆ ಕಪ್ಪು ಕಾಫಿಸೋಮರಸ ಸದಾ ಥರ್ಮಾಸಿನೊಳಗೆಕಾಲುಮೇಲೆಕಾಲಿಟ್ಟುಅನುಭವದ ರೇಖೆಗಳನ್ನೆಲ್ಲ ಒತ್ತಿಹಿಡಿದ ಹಸ್ತ ಊರುಗೋಲಿನ ಮೇಲೆಊರಿನ ತಗಾದೆಗೆಲ್ಲ ಕಿವಿಗೊಟ್ಟುಎದೆಗವುಚಿ ಎಲ್ಲರಿಗೂಬೀರಬಲ್ಲನ ಪರಿಹಾರ ಮಂತ್ರರೆಡಿಯಾಗುತಿತ್ತು.ಊರುಗೋಲಿನ ಸುತ್ತ ಫಿರ್ಯಾದಿಗಳುವಿನಂತಿಗಳು ಅಹವಾಲುಗಳಿಗೆಹೊಸದಾಗಿ ತಂದ ಕಂಪ್ಯೂಟರ್ಕೀಲಿಮಣೆ ಕಿಲಕಿಲನೆ ಬಡಿದುಬರೆದುಕೊಂಡೇ ಮತ್ತೆ ಕಾಫಿಗೆಕೈಚಾಚುತ್ತಿತ್ತುಯಾರೇ ಬಂದರೂ ಯಾವಾಗ ಬಂದರೂಬಿಸಿಕಾಫಿ ಜೊತೆ ಆತ್ಮೀಯತೆ ಬಿಸ್ಕತ್ತು ಗಳುಮನದಾಳದಿಂದ ಸಮಸ್ಯೆಗಳನುಹೊತ್ತು ತಂದವರ ಪಾತಾಳಗರಡಿಯಾಗುತ್ತಿತ್ತುನೆನಪಿನಲ್ಲಿ ಮುಳುಗಿದರೆಏನೋ ಗೊತ್ತಿರದ ಕೊರಗುಪ್ರವರದ ಪರಿವೆಯಿಲ್ಲದಿದ್ದರೂಪೂರ್ವಜನ್ಮದ ಪ್ರಪಿತಾಮಹನಂತೆಧರ್ಮಕೋವಿ ಹಿಡಿದವರೂ ಬೆರಗಾಗುವಂತೆಅವರ ಜನಸೇವೆಸದ್ದಿಲ್ಲದೆ ಸುಮ್ಮನಾಗಿದ್ದವುಅವರೊಂದು ಪೂರ್ಣ ಕುಂಭಜ್ಞಾನ ಗಂಗೆಯ ಅವತಾರ ಪುರುಷ (ಧಾರವಾಡದವರೆಲ್ಲರಿಗೂ ಅಪ್ಪನೆಂದೇ ಆಪ್ತನಾಗಿದ್ದ ದಿವಂಗತ ಎನ್.ಪಿ.ಭಟ್ಟ ಅವರ ಕುರಿತು ಬರೆದಿದ್ದು)

ಊರುಗೋಲು ಕಾಫಿ ಮತ್ತು ಅಪ್ಪ Read Post »

ಕಾವ್ಯಯಾನ

ಪ್ರೀತಿಯ ಸಾಲುಗಳು

ಕವಿತೆ ಬಾಲಕೃಷ್ಣ ದೇವನಮನೆ ಮುಗುಳು ನಗೆಯಲ್ಲಿಹದಗೊಳಿಸಿದಎದೆಯ ಹೊಲದಲ್ಲಿಒಂದೊಂದೇವಾರೆ ನೋಟದಲಿನಾಟಿ ಮಾಡಿದ ಪೈರುತೊನೆದಾಡಿದ ಮಧುರ ಕ್ಷಣ..! ಪ್ರೀತಿಯನ್ನುಮುಲಾಜಿಲ್ಲದ ಹಾಗೆಅವಳು ಒದ್ದು-ಹೋದ ಎದೆಯ ದಾರಿಯಲ್ಲಿಮೂಡಿದ ನೋವಿನ ಹೆಜ್ಜೆಗಳುಯಾವ ಮುಲಾಮಿಗೂಅಳಿಸಲಾಗದೇ ಸೋತರೂಮತ್ತೆ ಮತ್ತೆ ನೆನಪ ಲೇಪಿಸಿಕೊಂಡುಸುಖಿಸುವ ವ್ಯಸನಿ ನಾನು. ಮನಸ್ಸುಗಳು ಉರಿಯುವಈ ರಾತ್ರಿಯಲ್ಲಿಬೀಸುವ ಗಾಳಿಯೂಬೆಂಕಿ ನಾಲಿಗೆ ಸವರುವಾಗಇಷ್ಟಿಷ್ಟೇ… ಇಷ್ಟಿಷ್ಟೇ…ಜಾರಿದ ಗಳಿಗೆಸುಟ್ಟ ನಿದಿರೆಯನ್ನೆಲ್ಲಾಹಗಲಿಗೆ ಗುಡ್ಡೆ ಹಾಕಿದಎಚ್ಚರದ ಬೂದಿಯಲ್ಲಿರೆಪ್ಪೆ ಮುಚ್ಚದ ಇರುಳುಉದುರಿಸಿದ ಕಂಬನಿಒದ್ದೆ ಮಾಡಿದಎದೆಯ ರಂಗಸ್ಥಳದಲ್ಲಿನಿನ್ನ ನೆನಪುಗಳ ಹೆಜ್ಜೆ ಹೂತುಚುಚ್ಚಿ ಚುಚ್ಚಿ ಕೊಲ್ಲುವ ಸಂತಾಪ…!! ನೀನುಹುಕ್ಕುಂ ಕೊಟ್ಟ ಮೇಲೇನಾನುನಿನ್ನೊಲವ ಗದ್ದೆಯಲಿ ಹೆಜ್ಜೆ ಊರಿದ್ದುಮತ್ಯಾಕೆ ಸುಳ್ಳು ಪ್ರಕರಣನನ್ನ ಮೇಲೆನಾನೇ ಅತಿಕ್ರಮಣ ಮಾಡಿದೆನೆಂದು? ******************************

ಪ್ರೀತಿಯ ಸಾಲುಗಳು Read Post »

You cannot copy content of this page

Scroll to Top