ನಾಗರೇಖಾ ಕಾವ್ಯಗುಚ್ಚ
ನಾಗರೇಖಾ ಗಾಂವಕರ್ ಕಾವ್ಯಗುಚ್ಚ ಅಸ್ವಸ್ಥ ಮಂಚದ ಮೇಲೆ ಬೆಳದಿಂಗಳ ರಾತ್ರಿಯಲ್ಲಿಕೊಳ್ಳಿ ದೆವ್ವವೊಂದುಮನೆಯ ಮೂಲೆಯೊಳಗೆ ನುಸುಳಿಬಂದಂತೆತಬ್ಬಿದ ಜಾಡ್ಯ.ಆಸ್ಪತ್ರೆಯ ಮಂಚದ ಮೇಲೆಸೂರು ನೋಡುತ್ತಾ ಬೆದರಿ ಮಲಗಿದಾಗ,ಮೊಣಕೈಗೆ ದಪ್ಪ ಬೆಲ್ಟೊಂದನ್ನುಸುತ್ತಿ, ನರ ಹುಡುಕಲು ಬೆರಳಿಂದಮೊಟಕುವ ದಪ್ಪ ಕನ್ನಡಕದ ನರ್ಸಮ್ಮತತ್ತರಿಸಿ ಬಿದ್ದ ರಕ್ತನಾಳಗಳು ಜಪ್ಪಯ್ಯ ಎನ್ನದೇಅಂಟಿಕೊಂಡು ಸೀರಿಂಜಿಗೂರಕ್ತ ನೀಡಲು ಒಲ್ಲೆ,ಎನ್ನುವಾಗಲೇಕಂಬನಿಯ ತುಟಿಯಲ್ಲಿನುಡಿಯುವ ಕಣ್ಣುಗಳುಒಸರಿದ ರಕ್ತದ ಅಂಟಿದ ಕಲೆಗಳು ಆಯಾಸದ ಬೆನ್ನೇರಿ ಬಂದಗಕ್ಕನೇ ಕಕ್ಕಬೇಕೆನ್ನುವ ಇರಾದೆತರಗುಡುತ್ತಿದ್ದ ದೇಹವನ್ನುಸಂಭಾಳಿಸಲಾಗದೇ ಇರುವಾಗಲೇಮುಲುಗುಡುವ ದೇಹಗಳು ಖಾನೆ ಖಾನೆಗಳಲ್ಲಿಬೇನೆ ತಿನ್ನುವ ವೇದನೆಯ ನರಳಾಟನೋವು ತಿಳಿಯದಂತೆ ಬರಲಿನಿರಾಳ ಸಾವು. ಸಾವೆಂದರೆ ಸಂಭ್ರಮದ ಹಾದಿಎಂದವರೇಕೆ ಅಂಜುತ್ತಲೇಇದಿರುಗೊಳ್ಳುವರೋ? ನಿನ್ನ ಹೆಗಲಮುಟ್ಟಲೇಕೆ ಹಿಂಜರಿಯುವರೋ? ಮನದ ಅಸ್ವಸ್ಥ ಮಂಚದ ಮೇಲೂ ಪ್ರೀತಿಯನಿರಾಕರಣೆಗೆ, ನಿರ್ಲಕ್ಷ್ಯಕ್ಕೆ ತುಟಿ ತೆರೆಯದೇಉಗುಳು ನುಂಗಿ ಸಹಿಸುವುದೆಂದರೆಸಾವಲ್ಲವೇ?ಕಣ್ಣಲ್ಲಿ ಮೂಡಿದ ಚಿತ್ರವನ್ನುಸತ್ಯವಾಗಿಸಲಾಗದ ಅಸಹಾಯಕತೆಸಾವಲ್ಲವೇ? ಬದುಕೆಂದರೆ ಹೀಗೆಹುಚ್ಚಾಗಿ ಹಲಬುವಿಕೆ ಪ್ರೀತಿಗೂಪ್ರೇಮಕ್ಕೂ ಮತ್ತು ಸಾವಿಗೂ. ಇಕೋ, ಗಿರಿಗವ್ವರದ ಹಸಿರೆಲೆಗಳಸಂದಿ ಸಂದಿನಲ್ಲೂ ತೊಟ್ಟ,ನಿತ್ಯ ಸುತ್ತಾಟದಲ್ಲೂ ಹೂವರಳಿಸುವಕಲೆಯಲ್ಲೂ ಬೆರೆತುಹೋದ ಚೆಂದುಳ್ಳಿ ನೀ.ಮೆಲುನಡೆಯ ನಲ್ನುಡಿಯ ಸೊಗಸೇನರಳುತ್ತಲೇ ಇರುವೆತಿರಸ್ಕಾರದ ತೇರು ಹೂಮುಡಿಯಲ್ಲಿ ಹೊತ್ತುಆಯಾಸ ಬಳಲಿಕೆಗಳಮೈ ತುಂಬಾ ಹೊದ್ದು ಹೆಣ್ಣ ಸೌಂದರ್ಯ,ಸಂಗವನ್ನೇ ದ್ವೇಷಿಸಿದವನಪ್ರೀತಿಯ ಆಳದಲ್ಲಿ ಬಿದ್ದುಯುಗಯುಗಗಳಿಂದ ಪರಿತಪಿತೆ, ಪ್ರಲಾಪಿತೆಸ್ವ ಸಂಗತಗಳ ಅಸಂಗತಗಳಲ್ಲಿ ಮರುಳಾದವನಮೋಹದ ಸದ್ದುಸದ್ದಾಗಿಯೇ ಉಳಿದುಹೋದೆ. ನೆಮಿಸೆಸ್ ನಿನ್ನ ನೋವಿಗೆ ಮಿಡಿದಳುನಾರ್ಸಿಸಿಸ್ ತನ್ನ ಪ್ರತಿಬಿಂಬ ಕಂಡುಮರುಳಾಗುವಂತೆ ಮಾಡಿದಳು.ಆತನೋ ಮುದ್ದುಕ್ಕಿ ತನ್ನನ್ನೇ ಮೋಹಿಸಿದಸ್ವಮೋಹಿತ ಮರುಳುತನಕ್ಕೆ ಮದ್ದುಂಟೇ?ಅದೊಂದು ವಿಚಿತ್ರ ಸಮ್ಮೋಹನ ಜಾಲದಂತೆ.ಈಗ ಜಗದ ತುಂಬಾ ಅವನಂತೆಸುರ ಸುಂದರಾಂಗರು,ಪ್ರೀತಿಯ ನೆಪದಲ್ಲಿ ತಮ್ಮ ಹೊರತುಯಾರನ್ನೂ ಪ್ರೀತಿಸರುತಮ್ಮದೇ ಸಾಮ್ರಾಜ್ಯದ ಸುಖದಲ್ಲಿಇತರರ ಸುಖಕಾಣದವರು.ಇಕೋ, ಅಪಾತ್ರನ ಪಾಲಾದ ಪ್ರೀತಿಪಲ್ಲವಿಸಿಸುವುದೆಂತು,ಕಾದಿರುಳು ಕಣ್ಣು ಮುಚ್ಚದೇನಿನ್ನಂತೆ ಬೇಗೆಯಲ್ಲಿ ಬೇಯುವುದೇ ಬಂತು. ಎದೆ ಬೆಳಕು ಮತ್ತು ಕಣ್ಣ ಕಾಡಿಗೆ ನಿನ್ನ ಉತ್ತರೀಯಕ್ಕೆಅರಿವಿಲ್ಲದೇ ಬಳಿದ ನನ್ನ ಕೆಂಪುತುಟಿರಂಗು ಇನ್ನೂ ಹಸಿಹಸಿಆಗಿಯೇ ಇದೆಇಳಿಸಂಜೆಗೆ ಹಬ್ಬಿದ ತೆಳುಮಂಜಿನಂತಹ ಹುಡುಗಮಸುಕಾಗದ ಕನಸೊಂದುಕಣ್ಣಲ್ಲೇ ಕಾದು ಕೂತಿದೆ ನೀನೊಲಿದ ಮರುಗಳಿಗೆಭವದ ಹಂಗು ತೊರೆದೆಮುಖ ನೋಡದೇಮಧುರಭಾವಕ್ಕೆ ಮನನೆಟ್ಟುಒಳಹೃದಯದ ಕವಾಟವಒಪ್ಪಗೊಳಿಸಿ ಮುಗ್ಧಳಾದೆಈಗ ನೆನಪುಗಳ ಮುದ್ದಾಡುತ್ತಿರುವೆ ಮುದ್ದು ಹುಡುಗ, ನಿನ್ನ ಒಲವಿಂದಬರಡಾದ ಒರತೆಗೂ ಹಸಿಹಸಿ ಬಯಕೆಒಣಗಿದ ಎದೆಗೂ ಲಗ್ಗೆ ಇಡುವಹನಿ ಜಿನುಗಿನ ಕುಪ್ಪಳಿಸುವಿಕೆ ಗೊತ್ತೇ ನಿನಗೆ?ಈ ತಂಗಾಳಿಯೂ ತೀರದ ದಿಗಿಲುಹತ್ತಿಸಿಕೊಂಡ ಏಕಾಂಗಿ ಮೃಗದಂತೆಸುಂಯ್ಯನೇ ಹಾಗೇ ಬಂದುಹೀಗೆ ಹೊರಟುಹೋಗುತ್ತದೆಮರೆತ ಕನಸುಗಳಿಗೆ ಕಡಒದಗಿಸಿ ಬೆನ್ನು ಹತ್ತುತ್ತದೆ ಈ ಮಳೆಗೂ ಕರುಣೆಯಿಲ್ಲಹಸಿಮನಗಳಲಿಹುಸಿ ಬಯಕೆಗಳಕುದುರಿಸಿ ಕಾಡುತ್ತದೆ ಇದೆಲ್ಲವನೂ ಹೇಗೆ ಉಲಿಯಲಿ?ಕಂಪು ಹೆಚ್ಚಾಗಿ ಜೋಂಪುಹತ್ತಿದೆ, ಕಣ್ಣುಗಳು ಮತ್ತೇರಿಪಾಪೆಯೊಳಗೆ ಮುದುರಿದೆಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕುಹಚ್ಚುವ ನಿನ್ನ ಬಿಂಬವಹೇಗೆ ಮರೆಮಾಚಲಿ ಹುಡುಗ? ನೀನಾದರೋ ಭೂವ್ಯೋಮಗಳ ತಬ್ಬಿನಿಂತ ಬೆಳಕ ಕಿರಣಕಣ್ಣ ಕಾಡಿಗೆಯ ಕಪ್ಪು,ಅದಕ್ಕೆ ಎದೆಯೊಳಗೆ ಬೆಳಕ ಹಚ್ಚಿದೆ,ಕಣ್ಣ ಮುಂದೆ ಇಲ್ಲದೆಯೂ ಕಣ್ಣ ಕಾಡಿಗೆಗೆಬಣ್ಣ ಬಳಿದೆ. ಮುದ್ದು ಹುಡುಗ,ಹೀಗಾಗೇ ದಿನಗಳೆದಂತೆನನ್ನ ಕಣ್ಣ ಕೆಳಗಡೆ ಕಪ್ಪು ಬರೀ ಕಪ್ಪು *************************************
ನಾಗರೇಖಾ ಕಾವ್ಯಗುಚ್ಚ Read Post »









