ಶಾಲೆ ಮಾಸ್ತರ್ರು
ಕವಿತೆ ಶಾಲೆ ಮಾಸ್ತರ್ರು ಫಾಲ್ಗುಣ ಗೌಡ ಅಚವೆ ಗೆರೆ ಗೆರೆಗಳ ಪಾಯಜಾಮಗದ್ದೆ ಹಾಳಿಯ ಮೇಲೆ ನಡೆದು ಬಂದರೆಎದುರುಗೊಳ್ಳುತ್ತದೆ ಬೆತ್ತ ವರಾಂಡಾದಲ್ಲಿಟೇಬಲ್ಲು ಚೊಕ್ ಪೀಸು ಕರಿ ಹಲಗೆಎಲ್ಲವೂ ಒಮ್ಮೆ ಎದ್ದು ನಿಲ್ಲುತ್ತವೆ ಪ್ರಾರ್ಥನಾ ಬೆಲ್ಲಿಗೆ ಎಚ್ಚರಗೊಂಡ ಗಾಂಧಿ,ಬೋಸ್,ರಾಧಾಕೃಷ್ಣನ್ ಎಲ್ಲ ಮಕ್ಕಳೊಂದಿಗೆ ಎದೆಗೆ ಕೈಯಿಟ್ಟು ನಿಂತಂತೆ ಮಕ್ಕಳಿಗೆ ಭಾಸವಾಗುತ್ತದೆ ಮಗ್ಗಿ ಬರೆದ ಪಾಟಿ ಅದ್ದು ಹೋಗಿದೆ ಜೋರುಮಳೆಗೆಮತ್ತೆ ತೋರಿಸಬೇಕು ಬರೆದುಇಲ್ಲದಿರೆ ಗದ್ದೆಯಲಿ ಸಗಣಿ ಹೆಕ್ಕಬೇಕು ಆಗಾಗ ಅಂಗಿಯನು ಉಲ್ಟಾ ಹಾಕಿ ಬಂದರೂನೋಡಿಯೂ ನೋಡದಂತೆಕಿಟಕಿಗಳೂ ಗಪ್ ಚಿಪ್ಹೆದರಿ ಕೂತ ಮಕ್ಕಳಂತೆ ಏಕೋಪಾದ್ಯಾಯ ಶಾಲೆಯ ಮಾಸ್ತರರು ಇರುವುದೇ ಒಂದು ಖೋಲಿಟೇಬಲ್ಲೇದುರೇ ಪಾಠ ಹೇಳುವರುಕರಿ ಹಲಗೆ ಇದ್ದೂ ಇಲ್ಲದಂತೆಸದಾ ಎದುರಿಗಿರುತ್ತದೆ ಸೋರುವ ಹಂಚಿನಂತೆ ಶನಿವಾರ ಬಂದರೆ ಹಬ್ಬವೋ ಹಬ್ಬಹುಡುಗರೇ ನಾವೆಲ್ಲಾ ಗದ್ದೆ ಬಯಲಲ್ಲೇಹೋಮ್ ವರ್ಕ ಮಾಡದಿರೆ ಬಾಯ್ ಹಾರ್ಟ್ ಹಾಕದಿರೆಗಾಳ ಹಾಕುವ ಶಿಕ್ಷೆಛಡಿ ಚಮ್ ಚಮ್ ವಿದ್ಯಾ ಗಮ್ ಗಮ್ ಒಮ್ಮೆ ಏನಾಯಿತೆಂದರೆ,ಒದೆ ತಿಂದ ಮಕ್ಕಳು ಬಯಲ ದೇವರೆದುರು ನಿಂತು ಕಾಯಿಟ್ಟುಹರಕೆ ಮಾಡಿಕೊಂಡರು‘ ಶನಿವಾರ ಊರಿಗೆ ಹೋದ ಮಾಸ್ತರುತಿರುಗಿ ಬರಬಾರದು! ‘ಬಂತು ಸೋಮವಾರ ಯಥಾಸ್ಥಿತಿಒದೆ ತಿಂದರು!! ********************************









