ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕ್ಷಮಿಸಿ ಬಿಡು ಬಸವಣ್ಣ

ಕವಿತೆ ಕ್ಷಮಿಸಿ ಬಿಡು ಬಸವಣ್ಣ ಡಾ.ಶಿವಕುಮಾರ್ ಮಾಲಿಪಾಟೀಲ ನೀ ಹಾಕಿದ ಸಮಾನತೆಯಭದ್ರ ಬುನಾದಿ ಮೇಲೊಂದುಅಸಮಾನತೆಯ ಸೋರುವ ಗುಡಿಸಲು ಹಾಕಿದ್ದೇವೆ— ಕ್ಷಮಿಸಿಬಿಡು ಬಸವಣ್ಣ. ನೀನು ಗಳಿಸಿದ ನೈತಿಕಆಸ್ತಿಯ ಮಾರಿಮಹಾಮನೆಯ ಜಂತಿಮುರಿದು ಉರುವಲಾಗಿಬಳಸುತ್ತಿದ್ದೇವೆ— ಕ್ಷಮಿಸಿಬಿಡು ಬಸವಣ್ಣ. ನಿನ್ನ ಜನ್ಮದಿನದಂದೆಆಸ್ತಿ, ಬಂಗಾರ ಖರೀದಿಸಿಅಕ್ಷಯ ನಿಧಿ ತುಂಬಿಸಿಕೃತಕ ಜಗತ್ತು ಕಟ್ಟುತ್ತಿದ್ದೇವೆ–ಕ್ಷಮಿಸಿಬಿಡು ಬಸವಣ್ಣ ದೇಶ ವಿದೇಶಗಳಲಿ ನಿನ್ನ ಮೂರುತಿ ಸ್ಥಾಪಿಸಿ,ನಿನ್ನ ವಚನಗಳನ್ನುಎಲ್ಲಾ ಭಾಷೆಗಿಳಿಸಿ,ಕಲ್ಯಾಣ ನಾಡನ್ನೆಕಟ್ಟುವುದ ಮರೆತಿದ್ದೇವೆ— ಕ್ಷಮಿಸಿಬಿಡು ಬಸವಣ್ಣ ನಿನ್ನ ವಚನಗಳನ್ನು ಹೇಳುತ್ತ ಕೇಳುತ್ತ ವಚನ ಭ್ರಷ್ಟರಾಗಿ,ಕಾಯಕವೇ ಕಷ್ಟವೆಂದುನಿನ್ನನ್ನು ಕೂಡಲಸಂಗಮದಲ್ಲಿ ದಿನವೂ ಮುಳುಗಿಸುತ್ತಿದ್ದೇವೆ–ಕ್ಷಮಿಸಿಬಿಡು ಬಸವಣ್ಣ ಜಾತಿ ಅಳಿಸಲು ನೀನು ಚಳುವಳಿ ರೂಪಿಸಿದಿಜಾತಿ ಉಳಿಸಲು ನಾವು ಪೀಠಗಳನ್ನು ಸ್ಥಾಪಿಸಿಜಾತಿ ಸಮಾವೇಶಗಳ ಧೂಳಿನಲ್ಲಿ ನಿನ್ನನ್ನುಹುಡುಕಲು ಹೊರಟಿದ್ದೇವೆ— ಕ್ಷಮಿಸಿಬಿಡು ಬಸವಣ್ಣ ನಿನ್ನ ಕ್ರಾಂತಿಯ ಕಣಗಳುನಮ್ಮ ರಕ್ತದಲ್ಲಿಂದು ಮಾಯವಾಗಿವೆ“ಬಸವಾ ಮತ್ತೆ ಹುಟ್ಟಿ ಬಾ” ಎಂದ್ಹೇಳಲು ನಾವು ಅರ್ಹತೆ ಕಳೆದುಕೊಂಡಿದ್ದೇವೆ–ಕ್ಷಮಿಸಿಬಿಡು ಬಸವಣ್ಣ.ಕ್ಷಮಿಸಿ ಬಿಡು ….************************

ಕ್ಷಮಿಸಿ ಬಿಡು ಬಸವಣ್ಣ Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ 1) ವಾತ್ಸಲ್ಯ ತಾಯಿ ಸೆರಗುಅಂಬರವು ನಾಚಿತುವಾತ್ಸಲ್ಯ ಸಿರಿ. 2) ವಿಸ್ಮಿತ ಸುಖ ಕನಸು :ಕಂದಮ್ಮನ ಮೊಗದಿ :ದೇವ ವಿಸ್ಮಿತ. 3) ಚೆಲವು ಇಳೆ ಚೆಲವು :ಹಸಿರಿನ ಸಿರಿಯು,ನೆಮ್ಮದಿ ಬಿಡು. 4) ಮಧು ಮುತ್ತಿನ ಮಧು :ಮತ್ತೇರಿತು ದುಂಬಿಗೆ,ಶೃಂಗಾರ ಮಾಸ 5) ಹೃದಯ ಖಾಲಿ ಆಗಿತ್ತು :ಕನಸಿಲ್ಲದ ಮನ,ಬೆಂದ ಹೃದಯ. 6) ಸೀಮಂತ ಧರೆ ಸೀಮಂತ :ಹಕ್ಕಿಯ ಗಾನ ಸಭೆ,ನಾಚಿದ ಪ್ರಭೆ. 7) ಹೊಂಬಿಸಿಲು ಕಿರುನಗೆಯು :ಹೊಂಬಿಸಿಲು ಬಾಳಿಗೆ,ಸ್ವರ್ಗವು ಇಲ್ಲೇ. 8) ಹೂ ಬನ ಕಾವ್ಯದ ಬೀಜ :ಕವಿ ಬಿತ್ತಿ ಮನದಿ,ಹೂ ಬನ ಹಾಗೆ. 9) ಪ್ರೇಮದ ರಾಗ ಒಲವ ರಂಗು :ಮೊಗ್ಗೊಂದು ಅರಳಿತುಪ್ರೇಮದ ರಾಗ. 10) ಬಂಗಾರ ಜೀವನ ಪಾಠ :ಅರಿತು ನಡೆದಲ್ಲಿಬಾಳು ಬಂಗಾರ. *********************************

ಹಾಯ್ಕುಗಳು Read Post »

ಕಾವ್ಯಯಾನ

ಕಾಡುವ ಹಕ್ಕಿ.

ಕಾಡುವ ಹಕ್ಕಿ ಅಬ್ಳಿ,ಹೆಗಡೆ ಹಾಡು ಹಕ್ಕಿಯೊಂದು  ನಿತ್ಯಕಾಡುತಿದೆ  ‘ಹಾಡು ನೀನು’ಎಂದು.          ಗಂಟಲೊಣಗಿದರೆ         ಕಂಠನುಲಿಯದದು         ಹಾಡಲೇಗೆ ಇಂದು..?    ಮರ್ಮವರಿಯದೆ   ಧರ್ಮ,ಕರ್ಮಗಳ   ನಡುವೆ ಬಂಧಿ ನಾನು.          ಹಾರಲಾಗದಿದೆ         ಭಾರ ರೆಕ್ಕೆಯಿದೆ         ಹೊರಗೆ ಬಂದರೂನು.    ನೋವು,ಹಿಂಸೆಗಳು   ಸುತ್ತ ಕುಣಿಯುತಿವೆ   ಕೊಳ್ಳಿ ದೆವ್ವದಂತೆ.           ಹಸಿರು ಪ್ರಕ್ರತಿಯಾ          ತಂಪು,ಸೊಂಪುಗಳು          ಒಡಲ ಬೆಂಕಿಯಂತೆ.    ಹರಿವನದಿಯಂತೆ   ಬದುಕು ಸರಿಯುತಿದೆ   ಸೆಳವು ಈಜಲಾರೆ.            ಖುಷಿಯ ಬಾನಿನಲಿ           ಹಾಡಿ,ತೇಲುವದು           ಎಂತೋ…?ಹೇಳಲಾರೆ.    ಭಾವ ಬತ್ತಿಹುದುಖುಷಿಯು ಸತ್ತಿಹುದು   ಬರದು ಮಧುರಗೀತೆ.            ದುಃಖ ಉಮ್ಮಳಿಸಿ           ಬಿಕ್ಕುತ್ತ ಹಾಡಿದರೆ           ಅದುವೆ ಚರಮಗೀತೆ.     ಹಾಡುಹಕ್ಕಿಯೆ ನಿನ್ನ    ಸ್ವಚ್ಛಂಧ ಬಂಧ    ನನ್ನ ಬದುಕಿಗಿಲ್ಲ.            ಬುವಿಯಂದ ಹೀರಿ           ಬಾನಗಲ ಹಾರಿ      .    ಹಾಡೆ ಖುಷಿಯ ಸೊಲ್ಲ. ***********   

ಕಾಡುವ ಹಕ್ಕಿ. Read Post »

ಕಾವ್ಯಯಾನ

ಕನ್ನಡಾಂಬೆ

ಕವಿತೆ ಕನ್ನಡಾಂಬೆ ಚಂದ್ರಮತಿ ಪುರುಷೋತ್ತಮ್ ಭಟ್ ಕರುನಾಡ ತಾಯೆ ಭುವನೇಶ್ವರೀ ಅಮ್ಮಾ ಕರುಣೇಶ್ವರೀಕರವ ಮುಗಿದು ಕೇಳುವೆನು ಕರುಣಿಸು ಬಾ ಕರುಣಾಮಯೀ ಬಲಗೈಯಲ್ಲಿ ದೀಪ ಹಿಡಿದ ಜ್ಞಾನದಾತೆ ಅಮ್ಮಾ ನೀನುಎಡಗೈಯಲ್ಲಿ ಪತಾಕೆ ಹಿಡಿದ ನ್ಯಾಯದೇವಿ ಅಮ್ಮಾ ನೀನು ಫಲಪುಷ್ಪ ಭರಿತಳಾಗಿ ಗಿರಿಯನೇರಿ ನಿಂತ ಅಮ್ಮಾ ನೀನುನಮ್ಮೆಲ್ಲರ ಪೊರೆಯುತಿರುವ ಅನ್ನದಾತೆ ಅಮ್ಮಾ ನೀನು ಅದೆಂಥ ಸ್ವರ್ಗ ಸುಖವು ಅಮ್ಮಾ ಜನ್ಮ ಕೊಟ್ಟ ನಿನ್ನ ಮಡಿಲುಮೇಲುಕೀಳು ಎಣಿಸದೆ ದಯಾಮಯಿಯಾದ ಅಮ್ಮಾ ನೀನು ಅದೆಷ್ಟು ಅಂದ ಚೆಂದ ನನಗೆ ನಿನ್ನ ಅಮ್ಮಾ ಎಂದು ಕೂಗಲುತನು ಮನದಲ್ಲೂ ಕನ್ನಡ ಮಿಡಿಸಿದ ಕನ್ನಡಾಂಬೆ ಅಮ್ಮಾನೀನು ದುಷ್ಟರಿಗೆ ಶಿಕ್ಷಿಸಿ ಶಿಷ್ಟರಿಗೆ ರಕ್ಷಿಸುವ ಮಹಾಮಾಯೆ ಅಮ್ಮಾ ನೀನುಹಸಿರು ಸಿರಿಯ ಸುಧೆಯ ಕೊಟ್ಪ ಶಾಂತಿದೂತೆ ಅಮ್ಮಾ ನೀನು ಮಕ್ಕಳಿಗೆ ಅಕ್ಷರದಾಹ ನೀಗಿಸುವ ಶಾರದಾಂಬೆ ಅಮ್ಮಾ ನೀನುಜಾತಿ ಕುಲ ತೊಲಗಿಸಿ ಕಣ್ತಣಿಸಿದ ಕಣ್ಮಣಿ ಕನ್ನಡಮ್ಮಾ ನೀನು ದೂಷಣೆಗೂ ಮೌನವಾಗಿ ಸಹನಶೀಲಳಾಗಿರುವೆ ಅಮ್ಮಾನೀನುಎಲ್ಲೆಡೆ ಏಕತೆಯ ಮಂತ್ರ ಬೀರಿ ಜಗನ್ಮಾತೆಯಾದೆ ಅಮ್ಮಾ ನೀನು *****************************

ಕನ್ನಡಾಂಬೆ Read Post »

ಕಾವ್ಯಯಾನ, ಗಝಲ್

ಗಜಲ್‌

ಗಜಲ್ ಪ್ರಭಾವತಿ ಎಸ್ ದೇಸಾಯಿ ಪ್ರೀತಿ ಧಿಕ್ಕರಿಸಿದವನಿಗಾಗಿ‌ ನೆನೆಯುತ್ತಿರುವೆ ನಾನೇಕೆ ಹೀಗೆಒಂದು ನುಡಿ ಆಡದವನಿಗಾಗಿ ಕೂಗುತ್ತಿರುವೆ ನಾನೇಕೆ ಹೀಗೆ ಬರುವನೆಂದು ಪಾರಿಜಾತ ಹೂಗಳನ್ನು ಹಾಸಿದ್ದೆ ಹಾದಿಗುಂಟಒಳಗೆ ಹೆಜ್ಜೆ ಇಡದವನಿಗಾಗಿ ಕಾಯುತ್ತಿರುವೆ ನಾನೇಕೆ ಹೀಗೆ ಹೊಂಗೆ ಮರದಲ್ಲಿ ದುಂಬಿಗಳ ಚಲ್ಲಾಟ ಕಂಡು ಉದ್ವೇಗಗೊಂಡೆಇರುಳೆಲ್ಲಾ ಅವನಿಗಾಗಿ ಕನವರಿಸುತ್ತಿರುವೆ ನಾನೇಕೆ ಹೀಗೆ ಹಂದರದ ಬಳ್ಳಿಯಲಿ ತುಂಬಿ ನಲಿಯುತಿದೆ ಸಿಹಿ ಬಂಡು ಹೀರುತ್ತಾತುಟಿಗೆ ಮಧು ಹಚ್ಚದವನಿಗಾಗಿ ಭಜಿಸುತ್ತಿರುವೆ ನಾನೇಕೆ ಹೀಗೆ ಒಂಟಿ ಕೋಗಿಲೆ ವಸಂತಾಗಮಕೆ ಸಂತಸದಲಿ ಹಾಡುತಿದೆ” ಪ್ರಭೆ “ಮಿಡಿಯದ ಹೃದಯ ಮಿಲನಕ್ಕಾಗಿ ಬಯಸುತ್ತಿರುವೆ ನಾನೇಕೆ ಹೀಗೆ *************************************

ಗಜಲ್‌ Read Post »

ಕಾವ್ಯಯಾನ

ಕೊನೆ ಆಗುವ ಮೊದಲು

ಕವಿತೆ ಕೊನೆ ಆಗುವ ಮೊದಲು ಅಕ್ಷತಾ‌ ಜಗದೀಶ ಬಿಸಿಲು‌‌ ಕುದುರೆ ಬೆನ್ನತ್ತಿಓಡಿದೆ ಮನವು ಕಾಲ್ಕಿತ್ತಿಬಯಸಿದ್ದು‌ ಎಲ್ಲಿಯು ಸಿಗದೆ ಹೋಯ್ತುಕಾದ ಜೀವಕೆ ಈಗ ಸುಸ್ತಾಯ್ತು… ಕಾಲವದು‌ ಕಣ್ಮುಂದೆ ಕರಗುತಿದೆಕೈಗೆ ಸಿಲುಕದೆ ಮರೆಯಾಗುತಿದೆಎಲ್ಲವೂ ‌ಬಹುಬೇಗ ಸಾಗುತಿದೆನಾನೇಕೋ ನಿಧಾನವಾದೆನೋ ಎನಿಸುತಿದೆ……. ಎಲ್ಲೋ ಒಂದು ಸಣ್ಣ ‌ಹೊಳಪುಪದೇ ಪದೇ ಅದೇ ಹಳೆ ನೆನಪುಬಾಡಿ ಹೊಗುವ ಮೊದಲೆ ಹೂ..ಮುಡಿ ಸೇರಲಾರದ ನೋವು.. ಮರುಭೂಮಿಯಲ್ಲಿ ಕಾಣಬಹುದೇ ಒರತೆ…ಸಣ್ಣ ಆಸೆ ಇಟ್ಟು‌ ಬರೆದೆ ಈ ಕವಿತೆಕಳಿಸಿ‌ಕೊಡುವೆ ದೇವ ಈ ಬರಹ‌ ನಿನಗೆಹೊಸ‌ ಚಿಲುಮೆ ‌ಉಕ್ಕಲಿ‌ಬಾಳಿಗೆ‌ ಪೂರ್ಣವಿರಾಮ ಇಡುವ ಮೊದಲು……… *********************************************

ಕೊನೆ ಆಗುವ ಮೊದಲು Read Post »

ಕಾವ್ಯಯಾನ

ನಾನು ದೀಪ ಹಚ್ಚುತ್ತೇನೆ

ಕವಿತೆ ನಾನು ದೀಪ ಹಚ್ಚುತ್ತೇನೆ ಕಾಡಜ್ಜಿ ಮಂಜುನಾಥ ನಾನು ದೀಪ ಹಚ್ಚುತ್ತೇನೆಮನದ ಕಹಿಗಳು ದಹಿಸಿಹೋಗಲೆಂದು ನಾನು ದೀಪ ಹಚ್ಚುತ್ತೇನೆದ್ವೇಷದ ಯೋಚನೆಗಳುಸುಟ್ಟು ಹೋಗಲೆಂದು ನಾನು ದೀಪ ಹಚ್ಚುತ್ತೇನೆಪ್ರೀತಿಸುವ ಮನಗಳುಹೆಚ್ಚಾಗಲೆಂದು ನಾನು ದೀಪ ಹಚ್ಚುತ್ತೇನೆಜಾತೀಯತೆಯ ಬೀಜಗಳುನಾಶವಾಗಲೆಂದು ನಾನು ದೀಪ ಹಚ್ಚುತ್ತೇನೆಧರ್ಮದ ಹೆಸರಿನಲ್ಲಿ ನಡೆಯುವದೌರ್ಜನ್ಯ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆಬಡವರ ಮನೆಮಗಳ ಮೇಲೆ‌ಅತ್ಯಾಚಾರ ನಿಲ್ಲಲೆಂದು‌ ನಾನು ದೀಪ ಹಚ್ಚುತ್ತೇನೆಧನಿಕರ ದುಡ್ಡಿನ ದರ್ಪಹೊಗೆಯಾಗಿ ಕರಗಲೆಂದು ನಾನು ದೀಪ ಹಚ್ಚುತ್ತೇನೆಉನ್ನತ ಶಿಕ್ಷಣ ಪಡೆದವರು ಮಾಡುವಗುಲಾಮಗಿರಿಯ ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆನೊಂದವರಿಗೆ ನ್ಯಾಯಸಿಗಲೆಂದು ನಾನು ದೀಪ ಹಚ್ಚುತ್ತೇನೆಅತ್ಯಾಚಾರಿಗಳಿಗೆ ‌ ಶೀಘ್ರಶಿಕ್ಷೆಯಾಗಲೆಂದು ನಾನು ದೀಪ ಹಚ್ಚುತ್ತೇನೆವಿಶ್ವವಿದ್ಯಾಲಯಗಳಲ್ಲಿ ಜಾತಿಬೇರುಗಳು ನಶಿಸಿ ಹೋಗಲೆಂದು ನಾನು ದೀಪ ಹಚ್ಚುತ್ತೇನೆಶಿಕ್ಷಣವಂತರ ಭ್ರಷ್ಟಾಚಾರನಿರ್ಮೂಲನೆಯಾಗಲೆಂದು ನಾನು ದೀಪ ಹಚ್ಚುತ್ತೇನೆಧ್ವನಿ ಇಲ್ಲದವರಿಗೆಧ್ವನಿಯಾಗಲೆಂದು ನಾನು ದೀಪ ಹಚ್ಚುತ್ತೇನೆತಾಯ್ನಾಡಿಗೆ ದ್ರೋಹಬಗೆದವರುಅನಲನಿಗೆ ಆಹಾರವಾಗಲೆಂದು ನಾನು ದೀಪ ಹಚ್ಚುತ್ತೇನೆದೇಶದ ಸಂವಿಧಾನವನ್ನುಗೌರವಿಸುವವರು ಹೆಚ್ಚಾಗಲೆಂದು ನಾನು ದೀಪ ಹಚ್ಚುತ್ತೇನೆಅಜ್ಞಾನದ ಕತ್ತಲಲ್ಲಿರುವ ಜನರುಜ್ಞಾನದ ಬೆಳಕಿಗೆ ಬರಲೆಂದು ನಾನು ದೀಪ ಹಚ್ಚುತ್ತೇನೆದೀಪದ ಹೆಸರಲಿ ಮೋಸಗೈವಭ್ರಷ್ಟಾಚಾರಿಗಳು ಮಣ್ಣಾಗಲೆಂದು ನಾನು ದೀಪ ಹಚ್ಚುತ್ತೇನೆಕಾಯದ ನೋವಿನ ಗಾಯಕೆಉಪ್ಪು ಹಾಕುವರು ನಿಲ್ಲಲೆಂದು ನಾನು ದೀಪ ಹಚ್ಚುತ್ತೇನೆಹೆಣ್ಣನ್ನು ಗೌರವಿಸುವಮನೆಗಳು ಮನಗಳು ಬೆಳಗಲೆಂದು ನಾನು ದೀಪ ಹಚ್ಚುತ್ತೇನೆಕರೋನಾ ವೈರಸ್ಜಗತ್ತಿನಿಂದ ದಹನವಾಗಲೆಂದು ********************************** .

ನಾನು ದೀಪ ಹಚ್ಚುತ್ತೇನೆ Read Post »

ಕಾವ್ಯಯಾನ

ಯಾತ್ರೆ

ಕವಿತೆ ಯಾತ್ರೆ ರಾಜೇಶ್ವರಿ ಚನ್ನಂಗೋಡು ಮುಗಿವಾಗ ನೀನುನನ್ನೆದೆ ಧುತ್ತಂದುನಿಂದುಮುನ್ನಡೆದಿದೆ.ಎದೆಗಿನ್ನೇನು ದಾರಿ?ಇನ್ನೆಷ್ಟು ಮಂದಿ ನನ್ನವರುನನ್ನ ನಾನಾಗಿಸಿದವರುಹೋದಾಗಲೂ ಹೀಗೇ ಮುನ್ನಡೆಯುತಿರುವುದು…ಅರ್ಥಹೀನವೀ ಯಾತ್ರೆಹಿಂದಿದ್ದ ಸುಖವನೆಲ್ಲ ಬಿಟ್ಟು ಮುನ್ನಡೆಯಲೇ ಬೇಕಾದ ಯಾತ್ರೆಅಂದವ ಹುಡುಕಿ ಚಂದವ ಹುಡುಕಿನಡೆದಷ್ಟೂ ಹಿಂದಿನಂದುಗಳೇನೀನಿದ್ದಾಗಿನ ಅವರಿದ್ದಾಗಿನಂದುಗಳೇಸೊಗಸೆಂದರಿತೂಮುಂದಡಿಯಿಡುವ ಯಾತ್ರೆನಾಳೆ ಇವನೂ ಅವಳೂ ಇಲ್ಲದಕಂದರಗಳಿಹವೆಂದರಿತೂನಿಲ್ಲಿಸಲಾಗದ ಯಾತ್ರೆಬೆಳಕಿತ್ತ ನೀನಾರಿದಾಗಇನ್ನಾರೂ ಆರುವ ಮುನ್ನನಾನಾರಿದರೇ ಚೆನ್ನವೆಂದನಿಸುವ ಯಾತ್ರೆಹೇಗೆ ಕಲ್ಪಿಸಿಕೊಳಬೇಕು?ಯಾಕೆ ನಡೆಯಲೆ ಬೇಕೀ ಯಾತ್ರೆ?

ಯಾತ್ರೆ Read Post »

ಕಾವ್ಯಯಾನ

“ಬೆಳಕಾಗಲಿ ಬದುಕು”

ಕವಿತೆ ಬೆಳಕಾಗಲಿ ಬದುಕು ಪ್ರೊ.  ಚಂದ್ರಶೇಖರ ಹೆಗಡೆ ಪಲವಿನ್ನೂ ಹಸಿ ಹಸಿಯಾಗಿದೆ ಬನ್ನಿ ಗಿರಾಕಿಗಳೇ ಮುಖವಿಟ್ಟು ಆಸ್ವಾದಿಸಿಬಿಡಿ ಖಾಲಿಯಾಗಿರುವ ಎದೆಯ ಗೂಡಿನೊಳಗೊಮ್ಮೆ ಮಸಾಲೆಯ ಒಗ್ಗರಣೆಯೊಳಗೆ ಬೇಯಿಸಿ ಘಮಘಮಿಸಿಬಿಡಿ ಕಮಟಾಗಿ  ಹಳಸಿಹೋಗುವ ಮುನ್ನ ಯಾರ ಹೆಸರಿನ ಷರಾ ಬರೆದಿದೆಯೋ  ಕತ್ತಿಯಂಚಿನಲಿ ಕತ್ತರಿಸಿಕೊಂಡು  ಹೆಣವಾಗಿರುವ ಜೀವಕೋಶಗಳ ಮೇಲೆ  ಸಾವೊಂದು ಬದುಕಾಗಿದೆ ನನಗೆ ಬದುಕೊಂದು ಸಾವಾಗಿದೆ ಕೊನೆಗೆ ಪಯಣವಿನ್ನು ಯಾರದೋ ಮನೆಗೆ ನೇತುಹಾಕಿರುವ ಅಂಗಡಿಯೊಳಗೆ  ಒಡಲುಗೊಂಡದ್ದೆಲ್ಲವೂ ಬಿಕರಿಗೆ ಕಾಲು ಕೈ ಕಣ್ಣು ತೊಡೆಗಳೆಲ್ಲ ಮಾಗಿದ ಹಣ್ಣುಗಳ ಬನದ ಬೆಲ್ಲ ತನುವ ತುಂಬಿಕೊಳ್ಳಿ ಬಾಯಿ ಚಪ್ಪರಿಸಿ ಮುತ್ತಿಟ್ಟು ನಾಲಿಗೆಯ ಸುಲಿದ ರಸಗಲ್ಲದಲಿರಿಸಿ ಮುಗಿದು ಹೋಯಿತು ಕತೆಯೆಂದುಕೊಂಡೆ ಆರಂಭವಿದೆಂದು ಅಂತರಂಗ ತುಂಬಿಕೊಂಡೆ ಉಸಿರೆಳೆದುಕೊಂಡು ರಸಾಯನ ಕುದಿಸಿ ಶಾಶ್ವತವಾಗಿರುವಂತೆ ನೆನಹು ಹಸಿ ಹಸಿ ತುಂಡು ತುಂಡು ದಿಂಡು ಸುಖದ ಗೀರು ಏರಬೇಡಿ ಇಮ್ಮನದಿ ನಿಂತ ತೇರು ಮಿಗೆಯಾಗಲಿ ಆಯಸ್ಸು ಉಂಡು ಮರೆತ ಒಡಲ ಕನಸು ಅಳುವ ಕಂಡಿಲ್ಲ ಕೊಂದಹರೆಂದು ನಂಬಿಲ್ಲ ತಕ್ಕುದ ಮಾಡುವನೆಂದು ಬಯಲಾಗುವುದರಲ್ಲಿಯೇ ಬದಲು ಬೆಳಕಾಗಲಿ ಬದುಕೆನ್ನುವುದೇ ಮೊದಲು *********************************

“ಬೆಳಕಾಗಲಿ ಬದುಕು” Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರವಿ.ವಿಠ್ಠಲ. ಆಲಬಾಳ. ತುಸು ಹೊತ್ತು ಕಳೆದೆ ,ತುಸು ದೂರ ನಡೆದೆ ,ಸಾಕಿಂದಿಗೆ ಈ ಪ್ರೀತಿಮೋಹಕ ನಗುವಿನಲಿ ಚೆಲುವೆಲ್ಲ ನೋಡಿದೆ ,ಸಾಕಿಂದಿಗೆ ಈ ಪ್ರೀತಿ. ಭಣಗುಡುವ ಎದೆಯಿಂದು ಉಲ್ಲಾಸವನು ತುಂಬಿ ತುಳುಕಿಸಿದೆತುಟಿಕೆಂಪಿನಲಿ ಹೊಸ ಮಿಂಚು ಕಾಣುತಿದೆ ,ಸಾಕಿಂದಿಗೆ ಈ ಪ್ರೀತಿ. ಕಳೆಕಟ್ಟಿಕೊಂಡು ಕಾಣುವ ಕನಸುಗಳಿಗೆ ಸಾವಿರದ ನೆನಕೆ ತಿಳಿಸುವೆಸವಿ ದಿನಗಳ ಕ್ಷಣವನು ತಿರುವಿ ಹಾಕುತಿದೆ ಸಾಕಿಂದಿಗೆ ಈ ಪ್ರೀತಿ . ಏನೆಲ್ಲ ಹೇಳಿದೆ,ಏನೆಲ್ಲ ಕೇಳಿದೆ ,ಬರೀ ಮಾತುಗಳಾಗೇ ಉಳಿದಿವೆದೂರವಿದ್ದರೂ ಸರಿಯೇ ,ನಿನ್ನ ಬಿಂಬ ಇಲ್ಲಿದೆ ಸಾಕಿಂದಿಗೆ ಈ ಪ್ರೀತಿ. ನೀ ಹೊರಟು ಹೋಗುವಾಗ ಕಣ್ಣೀರಲಿ ಎಷ್ಟೋ ಮಾತುಗಳಿದ್ದವುಧ್ವನಿಯಿಲ್ಲದ ಪದಗಳಲ್ಲಿ ಪ್ರೇಮವನೇ ಸುರಿದೆ ಸಾಕಿಂದಿಗೆ ಈ ಪ್ರೀತಿ. ಮರೆತುಬಿಡಲು ಹೃದಯವಿಲ್ಲದ ದೇಹ ನನ್ನದಲ್ಲ ಕೇಳು ಪ್ರಿಯತಮೆರವಿ ಹುಟ್ಟಿ ಮುಳುಗುವವರೆಗೆ ನಿನ್ನ ಗುಂಗಿದೆ ಸಾಕಿಂದಿಗೆ ಈ ಪ್ರೀತಿ. *********************

ಗಜಲ್ Read Post »

You cannot copy content of this page

Scroll to Top