ರಮೇಶ್ ನೆಲ್ಲಿಸರ ಕವಿತೆ-ಸ್ಮಶಾನ

ಕಾವ್ಯ ಸಂಗಾತಿ

ರಮೇಶ್ ನೆಲ್ಲಿಸರ

ಸ್ಮಶಾನ

ನಿಯಮಗಳನ್ನಿಲ್ಲಿ ಯಾರೂ
ಪಾಲಿಸಿಲ್ಲ
ಬಿದ್ದುಕೊಂಡಿದ್ದಾರೆ ಅಡ್ಡಾದಿಡ್ಡಿ
ಗೋರಿಗಳ ಮೇಲೆ ಕಲ್ಲುಗಳೇ ಇಲ್ಲ
ಇನ್ನೂ ಉದ್ದುದ್ದ ಸಾಲುಗಳನು ಎಲ್ಲಿ ಕೆತ್ತುವುದು?
ವಿಳಾಸವಿಲ್ಲದ ಶಾಂತ ಶವಗಳು

ಆಗಾಗ ಮೇಣದ ಬತ್ತಿಗಳ ಬೆಳಕು,
ಪ್ರಾರ್ಥನೆ ಹವನಗಳಿಲ್ಲಿ ಕಾಣಸಿಗದು
ಹರಕು ಚಾಪೆಗಳಡಿ ಭಾವನೆಗಳು
ಬೆರೆತುಹೋಗಿವೆ


ರಮೇಶ್ ನೆಲ್ಲಿಸರ

ಕವಿ ಪರಿಚಯ:

ಮೂಲತಃ ತೀರ್ಥಹಳ್ಳಿಯ ಮಂಡಗದ್ದೆ ಊರು, ಪ್ರಸ್ತುತ ಹೊಸನಗರ ತಾಲ್ಲೂಕಿನ ಯಡೂರು ಪ್ರೌಢಶಲೆಯಲ್ಲಿ ಆಂಗ್ಲಭಾಷಾ ಸಹಶಿಕ್ಷಕ. ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ಕಥೆ- ಕವನಗಳು ಪ್ರಕಟವಾಗಿವೆ, ಹಲವು ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ ಬಂದಿರುತ್ತದೆ.

Leave a Reply

Back To Top