ಕಾವ್ಯಯಾನ

ಕವಿತೆ

Surface Level of Fallen Leaves on Tree Trunk

ವಿಜಯಶ್ರೀ ಹಾಲಾಡಿ

ಚಿತ್ರ ಬಿಡಿಸುವ ಮರ
ಚಳಿಗೆ ನರಳಿ ಇಬ್ಬನಿ
ಅಡರಿ ಹಿಮಗಾಳಿ
ಶೀತ ಹಿಡಿದುಕೊಂಡಿದೆ

ಗಳಿತ ಎಲೆಯೊಂದು
ಹಳದಿ ಉಸಿರಿನ ಕೂಡೆ
ಮಣ್ಣಿಗೆ ಸೋಕಿ ನಿಡಿದು
ನಿರಾಳ ಅಪ್ಪಿಕೊಂಡಿದೆ

ಧೂಳ ಹೆಜ್ಜೆಗಳಲ್ಲಿ
ಪಾದವೂರಿದ ಬೀಜ
ಮುಗಿಲೂರಿನ ಕನಸ
ರಂಗುಗಳ ಕವಿದುಕೊಂಡಿದೆ

ಮೈಮುರಿದು ಆಕಳಿಸುವ
ನಿಗೂಢ ಇರುಳು ಮಾತ್ರ
ಬಿಟ್ಟ ಕಣ್ಣು ಬಿಟ್ಟಹಾಗೆ
ಗೂಬೆದನಿಗೆ ಆಲಾಪಿಸಿದೆ.

*******

Leave a Reply

Back To Top