ಕಾವ್ಯಯಾನ

ಆಯುಧಕ್ಕಿಂತ ಹರಿತ

ರಾಜು ದರ್ಗಾದವರ

ಮೊನ್ನೆತಾನೆ ಗೊತ್ತಾಯ್ತು
ಕವಿತೆಗಳು ಆಯುಧಕ್ಕಿಂತ ಹರಿತವೆಂದು!


ಸಮಾಜಕ್ಕೆ ಅಪಾಯಕಾರಿಯೆಂದೀಗ
ಘೋಷಿಸಿ ಜೈಲಿಗಟ್ಟಿದ್ದಾರೆ
ಕವಿತೆಗಳನ್ನು ಬರೆದವನ.

ಕವಿ ಸಿಕ್ಕಿರಬಹುದು
ಆದರೆ ಆ ಕವಿತೆ ಅದೆಲ್ಲಿಯವರೆಗೂ
ತಲುಪಿದಿಯೋ?
ನಿಮ್ಮಲ್ಲಿಯೂ ಅಂತ ಕವಿತೆಯಿದ್ದರೆ
ಪಸರಿಸಬೇಡಿ.
ಸುಟ್ಟುಬಿಡಿ…!

ಅವರಿಗೂ ಬೇಕಾಗಿದ್ದು ಅದೇ..!!

************

Leave a Reply

Back To Top