ಕಾವ್ಯಯಾನ

ಸಾವಿರದ ಸಾವಿರ ಕವಿತೆ

Image result for images of absurd paintings

ರವಿ ರಾಯಚೂರಕರ್

ಬಳಲಿ ಬೇಕೆಂದು
ಬಿಕ್ಕಳಿಸಿ ಅತ್ತವನು
ಎದೆಗಂಟಿ ನುಡಿ ನುಡಿದು
ಆಸೆಯ ಗೋಪುರಕೆ
ಹೊಸ ಕನಸುಗಳ ತುಂಬಿ
ನೆಲಕಳಚಿ ಬಿದ್ದವನು ನೀನಲ್ಲವೇ

ಹಸಿದು ಕುಳಿತಾಗ
ಕುಟುಕಿ ಕಾಳನಿಟ್ಟು
ನಿಟ್ಟುಸುರ ಹೆಜ್ಜೆಯಲಿ
ಊರ ತಿರುಗಿದ ಬಿಕ್ಕು
ಪ್ರಾಯದ ಪೊರೆ ಹರಿದು
ಹದಿಹರೆಯದ ಒಲವನೆರದವನು
ನೀನಲ್ಲವೇ

ಬರಿ ಅರ್ಥಗಳನೆ ಈ ಮೌನಕೆ
ತುಂಬಿ
ಹಾಗೆ ತುಳುಕುವ
ಸಾವಿರದ ಸಾವಿರ ಕವಿತೆಗಳ ಹಣತೆ ಹಚ್ಚಿ
ಬೆಳಗಾಗುವವರೆಗೆ
ಉರಿದು,ಸುಟ್ಟು, ಬೂದಿಯಾಗಿ
ಈ ಕಣ್ಣ ಕಾಡಿಗೆಯಾದವನು ನೀನಲ್ಲವೇ

ಶತಮಾನದ ನೋವಿಗೆ
ಪ್ರೀತಿ ಒಂದೇ ಮದ್ದೆಂದು
ಬಂಡಾಯವ ನನ್ನಲಿ ಬಿತ್ತಿ
ದುಡಿದು,ತಡೆದು,ಮಣಿದು
ರಮಿಸಿ,ಕ್ಷಮಿಸಿ,ಮುದ್ದಿಸಿ
ಮುತ್ತಿನ ಮುದ್ರೆ ಹೊತ್ತಿ
ಬೆಳಕಿಲ್ಲದೆ ದಾರಿಗೆ ಕೈ ಹಿಡಿದು
ನಡೆಸಿಕೊಂಡೊದವರು ನೀನಲ್ಲವೇ


ಕಿರು ಪರಿಚಯ:

ಕನ್ನಡ ಉಪನ್ಯಾಸಕರು.’ಬಸವಮ ಕಾಲಿನ ಜೋಡಿ ಮೆಟ್ಟು’ಕವನಸಂಕಲನ

Leave a Reply

Back To Top