ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ತಂತಿ ಹರಿದ ವೀಣೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ತಂತಿ ಹರಿದ ವೀಣೆ” ತಂತಿ ಹರಿದ ವೀಣೆ ನಾನು,ಮೌನದೊಳಗೇ ನಾದ ನಾನು;ಮುರಿದ ಕನಸ ದಾರಿ ನಾನು,ನಡೆಯುತಿರುವ ಜೀವ ನಾನು. ಕತ್ತಲ ರಾತ್ರಿ ಜೊತೆಯಾದರೂ,ನಕ್ಷತ್ರದಂತೆ ಬೆಳಕು ನಾನು;ಕಣ್ಣೀರ ಹನಿಯ ಮಣ್ಣಿನೊಳಗೆ,ಮೊಳೆಯುತಿರುವ ಬೀಜ ನಾನು. ಗಾಳಿ ತಾಕಿದ ಕ್ಷಣದಲ್ಲೇ,ಮೌನವೇ ಮಧುರ ರಾಗ;ನೋವು ತಾಕಿದ ಹೃದಯದಲ್ಲೇ,ಹುಟ್ಟುತ್ತದೆ ಹೊಸ ನಾದ. ಮುರಿದ ತಂತಿ ಎಂದರೇನು,ನಾದ ಮಡಿಯುವುದಿಲ್ಲ;ಮುರಿದ ಮನಸು ಎಂದರೇನು,ಆಸೆ ಸಾಯುವುದಿಲ್ಲ. ಒಂದು ಹೂವಿನಿಂದ ವಸಂತವಿಲ್ಲ,ಒಂದು ನೆರಳಿಂದ ದಾರಿಯಿಲ್ಲ;ನೂರ ಕನಸು ಸೇರಿದಾಗಲೇ,ಜೀವನಕ್ಕೆ ಸೋಲಿಲ್ಲ. ಮಣ್ಣು ಕಲಿಸಿದ ಸಹನೆ ನಾನು,ಆಕಾಶ ಕೊಟ್ಟ ಕನಸು ನಾನು;ಹೊಳೆ ಹೇಳಿದ ಹರಿವು ನಾನು,ಗಾಳಿಯ ಮಧುರ ಸ್ಪರ್ಶ ನಾನು. ಹಳೆಯ ನೋವು ದೂರವಾದರೂ,ನೆನಪು ಆಗಿ ಉಳಿಯುತ್ತದೆ;ಹೊಸ ಬೆಳಕು ಬಂದಾಗಲೇ,ಬದುಕು ಮತ್ತೆ ನಗುತ್ತದೆ. ನೀ ನಡೆದ ದಾರಿ ನೆರಳಾದರೂ,ನನ್ನ ದಾರಿ ಬೆಳಕು ಆಗಲಿ;ತಂತಿ ಹರಿದ ವೀಣೆ ಆದರೂ,ನನ್ನ ನಾದ ಉಳಿದು ಹೋಗಲಿ. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ತಂತಿ ಹರಿದ ವೀಣೆ” Read Post »

ಕಾವ್ಯಯಾನ

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್

ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಗಜಲ್ ನೋವಿನಲೂ ಸಹನೆಯ ವಹಿಸು ದಾಂಪತ್ಯಬಂಧವು ಮುರಿಯದಂತೆಜೀವನವ ಎದುರಿಸು ಕಷ್ಟ ಕಾರ್ಪಣ್ಯದಮಳೆಯು ಸುರಿಯದಂತೆ ಕವಿದಿಹ ಮೋಡಗಳು ಚದುರಿ ಓಡಲುಬಾನು ತಿಳಿಯಾಗದೇವಿವಾಹದ ಅರ್ಥವು ಪರಿಪಕ್ವವಾಗಿ ಬೆಸೆಯಲಿದೂರಕೆ ಸರಿಯದಂತೆ ಸವಿಯಲು ಬದುಕಿನ ಸಾರವ ಒಲುಮೆಉಕ್ಕಿ ಬರುವುದುಕೀವು ತುಂಬಿದ ಮನದ ಕೊಳೆಯನಿವಾರಿಸು ಉರಿಯದಂತೆ ಭಾವನೆಯ ಸಾಗರದಿ ಬೋರ್ಗರೆವ ಝರಿಯ  ಹತ್ತಿಕ್ಕುವ ಪ್ರಯತ್ನಜೀವನ್ಮುಖಿ ಮೌಲ್ಯದ ಬಗೆಗೆ ವಿವೇಚನೆವಾಸ್ತವ ಹರಿಯದಂತೆ ಅವಿನಾಭಾವ ಸಂಬಂಧ ಕಾಪಿಟ್ಟು ಕಾಯುವಜವಾಬ್ದಾರಿ ರಾಧೆಗೆಭವಿಷ್ಯದ ಚಿಂತನೆ ಮೂಡಲು ಮುನ್ನೆಚ್ಚರಿಕೆಸಂಘರ್ಷ ಬಿರಿಯದಂತೆ ಅನುರಾಧಾ ರಾಜೀವ್ ಸುರತ್ಕಲ್

ಅನುರಾಧಾ ರಾಜೀವ್ ಸುರತ್ಕಲ್ ಅವರ ಗಜಲ್ Read Post »

You cannot copy content of this page

Scroll to Top