ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ವಲ್ಲಭನು ಜೊತೆಗಿರಲು ಅಳುವೆಯೇಕೆ
ಕಂಬನಿ ಮಿಡಿದು
ನಲ್ಲನ ನುಡಿಯಿರಲು ಕೊರಗುವೆಯೇಕೆ
ಮಲ್ಲಿಗೆ ಮುಡಿದು

ಸುಮದಂತೆ ಬಾಡಿಹೋಗುವ ಮುನ್ನ
ಸೇರಿಬಿಡು ಪ್ರಾಣಕಾಂತ
ತಮಕಳೆವ ಬೆಳಕಿರಲು ಕಾಯುವೆಯೇಕೆ
ಜೀವವ ಹಿಡಿದು

ಭಾವಗಳು ಆಶ್ವದಂತೆ ಓಡುತ್ತಿವೆಯಲ್ಲ
ಶರವೇಗದಿ ಇಂದು
ನೋವುಗಳು ಕಾಡುತಿರಲು ಬೇಡುವೆಯೇಕೆ
ಮೌನವ ಕುಡಿದು

ಹೃದಯ ದರ್ಪಣದಲ್ಲಿ ಮೂಡಿರುವ
ಬಿಂಬವದು ಮಸುಕಾಗಿದೆ
ವದನದಿ ದುಗುಡವಿರಲು ಕೂಡುವೆಯೇಕೆ
ಗರವ ಬಡಿದು

ಅಭಿನವನ ಸಮಾಧಾನದ ನುಡಿಗಳು
ಹಿತವ ನೀಡುತ್ತಿವೆ
ನಭದಿ ಚಂದ್ರನಿರಲು ಮರುಗುವೆಯೇಕೆ
ಸತ್ಯವ ನುಡಿದು


About The Author

Leave a Reply

You cannot copy content of this page

Scroll to Top