ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಹೇಳು

ಕಣ್ತುಂಬಿದ ಕನಸುಗಳೇ ಕಣ್ ಚುಚ್ಚಿ
ಯಾರನು ಅಳಿಸಿಲ್ಲ ಹೇಳು?
ಹಗುರಾಗಿಸುವ ಭಾವನೆಗಳೇ ಒಮ್ಮೊಮ್ಮೆ
ಯಾರಿಗೆ ಹೊರೆಯೆನಿಸಿಲ್ಲ ಹೇಳು?

ಚಿಕ್ಕಂದಿನಿಂದಲೂ ಬರೀ
ಚೊಕ್ಕ ಬದುಕಿನ ಆಸೆಯೇ ನಿನಗೆ
ಆಕಾಂಕ್ಷೆಗಳ ಆಕಾಶವೇ ಕಳಚಿದಾಗ
ಯಾರ ಮನಸ್ಸು ಸತ್ತಿಲ್ಲ ಹೇಳು?

ಎಲ್ಲರೂ ನಂಬಿಕೆಗೆ ಅರ್ಹರಲ್ಲವೆಂಬುದು
ಸತ್ಯವೇ ಸರಿ
ಆದರೂ ನನ್ನವರೆಂದು ನಂಬಿ
ಯಾರು ನೊಂದಿಲ್ಲ ಹೇಳು?

ಬದುಕ ಪುಸ್ತಕವು ಸ್ಪುಟವಾಗಿ
ಬರೆದಾಗಿದೆ ಮರುಳೇ
ಹೊಸಪುಟವ ಸೇರಿಸಲು ಹೋಗಿ
ಯಾರು ಹತಾಶರಾಗಿಲ್ಲ ಹೇಳು?


About The Author

Leave a Reply

You cannot copy content of this page

Scroll to Top