ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಿಶಾಲಾ ಆರಾಧ್ಯ

ಕೃಷ್ಣ ಅಂದರೆ ಕೃಷ್ಣ

ರಾಧೆಯೊಡನೆ ಹೋಲಿಯಾಟ
ರಂಗು ರಂಗು ನೀಡಿದ
ಮೋಹದಿಂದ ಕೊಳಲ ನುಡಿಸಿ
ವಸಂತ ರಾಗ ಹಾಡಿದ

ಯಮುನ ತೀರದಲ್ಲಿ ನಡೆದು
ನವಿಲುಗರಿಯ ತೋರಿದ
ಸಮಾಸಾಟಿಯಾಗಿ ರಾಧೆಗೆ
ನವಿರು ಭಾವ ತುಂಬಿದ

ಜಲದೆ ನಲಿದ ಗೋಪಿಕೆಯರೆಡೆಗೆ
ಓರೆನೋಟ ಬೀರಿದ
ರಾಧೆಯಿಂದ ದೂರವಾಗುವ
ನೆಪವನವನು ಹುಡುಕಿದ

ರಾಧೆ ಕರೆದು ಆಟವಾಡುತ
ಅವಳ ಕಣ್ಣು ಮುಚ್ಚಿದ
ಬಳಿ ಸರಿದ ಗೋಪಿಕೆಯ
ನಯದಿ ಕೆನ್ನೆ ಕಚ್ಚಿದ!


About The Author

Leave a Reply

You cannot copy content of this page

Scroll to Top