ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಗಜಲ್

ಉಷಾಜ್ಯೋತಿ

.

ಗೋಕುಲದ ಒಡೆಯನೇ ಒಲವ ಬಯಸಿ ರಾಧೆಯ ಕರೆಸಿದೆಯಲ್ಲ ನೀನು
ಓಕುಳಿಯ ಚೆಲ್ಲಿದಂತೆ ಚೆಲುವ ಎರೆಸಿ ವ್ಯಥೆಯ ಮರೆಸಿದೆಯಲ್ಲ ನೀನು

ವಿರಹದುರಿಯಲಿ ಬೇಯಲು ಇನಿಯಳ ನೆನಪಾಯಿತಲ್ಲವೇ
ಕೋಪ-ತಾಪ ಬದಿಗಿರಿಸಿ ಅನುರಾಗದ ಮಳೆಯ ಸುರಿಸಿದೆಯಲ್ಲ ನೀನು

ಕೊಳಲ ನಾದಕ್ಕೆ ಹೃದಯ ಕಮಲ ಬಿರಿಯದಿರುವುದೇ ಹೇಳು
ಮೆಲು ಮಾತಿನಲಿ ಅಮೃತದ ಸವಿಯ ಬೆರೆಸಿದೆಯಲ್ಲ ನೀನು

ಬರಡು ಎದೆಯಲಿ ಭಾವ ಪಲ್ಲವಿಸದೆ ಹಟಮಾಡಿ ಕುಳಿತಿದೆ
ತಂಗಾಳಿಯಾಗಿ ಸನಿಹ ಸುಳಿದು ರಸ ಗಂಗೆಯ ಹರಿಸಿದೆಯಲ್ಲ ನೀನು

ನಲುಮೆ ಸಿರಿಗಂಧ ಪಸರಿಸುತ ಜಗಕೆಲ್ಲ ಮಾದರಿಯಾದೆ
ಉಷೆಯ ಮುದುಡಿದ ಮೊಗದಲಿ ಮಂದಹಾಸ ಬರಿಸಿದೆಯಲ್ಲ ನೀನು


About The Author

Leave a Reply

You cannot copy content of this page

Scroll to Top