ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಬದುಕು

ಕಾಂತರಾಜು ಕನಕಪುರ

ಒಟ್ಟಿಗೆ
ಮಿಡಿಯುತ್ತಿದ್ದ
ಹೃದಯಗಳು
ಲಯ ತಪ್ಪುತ್ತವೆ…!

ಒಟ್ಟಿಗೆ
ಪಲುಕುತಿದ್ದ
ಸ್ವರಗಳು
ಶೃತಿ ತಪ್ಪುತ್ತವೆ..!

ಒಟ್ಟಿಗೆ
ಸಾಗುವೆವೆಂದ
ಗಾಲಿಗಳು
ಹಳಿ ತಪ್ಪುತ್ತವೆ…!

ಬಿದ್ದ ಚಿಕ್ಕ ಗೀರುಗಳೂ
ನೀರು ತುಂಬಿ ಕೀವು ಒಸರಿ
ಅಸಹ್ಯ ವ್ರಣಗಳಾಗುತ್ತವೆ…!

ಕಾಲ ಕಳೆದಂತೆ
ಅಗತ್ಯವೋ
ಅನಿವಾರ್ಯವೋ
ಒತ್ತಡವೋ
ಹೃದಯಗಳು ಮತ್ತೆ ಮಿಡಿಯುತ್ತವೆ,
ಹಾಡು ಲಯಕ್ಕೆ ಮರಳುತ್ತದೆ,
ಬಂಡಿ ಹಳಿಗೆ ಹಿಂದಿರುಗುತ್ತದೆ
ಗಾಲಿ ಉರುಳತೊಡಗುತ್ತವೆ…!

ಗಾಯಗಳು ಗುರುತಾಗಿ
ನೆನಪುಗಳು ನೇಪಥ್ಯಕ್ಕೆ ಸರಿದು
ಲಯ ತಪ್ಪಿದ ಹಾಡು
ಶೃತಿ ಸಿಕ್ಕ ಸಂತಸದಿಂದ
ಬಾಳ ಪಥ ಸವೆಯತೊಡಗುತ್ತದೆ…!

*************************

About The Author

Leave a Reply

You cannot copy content of this page

Scroll to Top