ಯುಗಾದಿ ಕಾವ್ಯ
ಬಾರೆ ಶಾರ್ವರಿ ಡಾ.ಗೋವಿಂದ ಹೆಗಡೆ ಬಂದೆಯಾ ಬಾ ಬಾರೆ ಶಾರ್ವರಿ ನಲವಿನೂಟೆ ತಾರೆ | ಕಾಲನ ಕಾಲಲಿ ಕುಸಿದಿದೆ ಜನಪದ ಬದುಕನುಣಿಸು ಬಾರೆ|| ಕಿರೀಟಿ ಕ್ರಿಮಿಯ ಬಾಧೆಯ ಬೇಗೆಗೆ ನಲುಗಿದೆಯೇ ಜೀವ | ನೆಲೆಗಾಣದೆ ಗೋಳಿಟ್ಟಿದೆ ಮನುಕುಲ ತಾರೆ ಕರುಣೆ ತೇವ || ನಿನ್ನಯ ಹೆಸರೇ ಇರುಳೆಂದರಿತೆ ಶಕ್ತಿಯೂ ಹೌದು ನೀನು | ಕತ್ತಲ ಮಣ್ಣಲಿ ಬೆಳಕನು ಬೆಳೆವ ವರವನು ನೀ ತಾರೆ || ಬಾಳಲಿ ಶ್ರದ್ಧೆಯ ನೀ ಮರುಕಳಿಸು ಬೆಳೆಯಲಿ ನಿನ್ನೊಲುಮೆ | ದುರಿತವ ದೂರಾಗಿಸಿ ನೀ ಹರಸು ಎರೆ ನೆಮ್ಮದಿ ನಲುಮೆ || ********









