ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಟಂಕಾ

ಅನುವಾದಿತ ಟಂಕಾಗಳು

ಅನುವಾದಿತ ಟಂಕಾಗಳು ಮೂಲ ರಚನೆ – ವೈದೇಹಿ ಗಣೇಶ್ ಅನುವಾದ- ವಿಜಯ್ ಕುಮಾರ್ ಮಲೇಬೆನ್ನೂರು ವೃತ್ತಿ -ಪ್ರವೃತ್ತಿಜೀವನದ ಬಂಡಿಗೆಚಕ್ರಗಳಂತೆವೃತ್ತಿಗೊ ನಿವೃತ್ತತೆಪ್ರವೃತ್ತಿ ಸಾರ್ಥಕತೆ Profession – dispositionTwo wheels of chariotCalled the lifeRetirement ceases oneAccomplishment graces the other. ಬೇವು ಬಾಗಿತುಸಂಪಿಗೆಯಾಸರೆಗೆ,ಪ್ರಕೃತಿ ಸಾರಿಹೇಳಿತು, ಒಲವಿಗೆಗುಣ ಗಣತಿ ಬೇಕೇ? Bitter neem lentRecourse to fragrant magnoliaThe nature proclaimsFor the endearmentNot to census the virtues ಕರ್ಮದ ಆಟಕಾಲ ಕಲಿಸೋ ಪಾಠಸುಕರ್ಮಗಳಅರಿತು ನಡೆದರೆಗೆದ್ದೆ ಜೀವನದಾಟ Game of deeds areLessons taught by time;If persue the pathWith noble deedsVictory of life is there ಗಾಢದ ಮೌನನಿರಂತರ ಭಾವನಅಲೆ ಚಾಲನಸುಧೆಗಾಗಿ ಮಂಥನಇದೇ ಅನಂತ ಧ್ಯಾನ Intense silence,Incessant emotionsAdvances as waves ;Churn for gist sets ;That ‘s endless rumination ಹೆಪ್ಪು ಗಟ್ಟಿದತುಮುಲ ಗಳೆಲ್ಲವುನೋವ ಬೇಗೆಗೆಹನಿ ಹನಿ ಸುತ್ತಿವೆಕಣ್ಣೀರಧಾರೆಯಾಗಿ Deep frozen,Turmoils of the beingSpout tears;Drop by drop ,For the sultry agony **********

ಅನುವಾದಿತ ಟಂಕಾಗಳು Read Post »

ಕಾವ್ಯಯಾನ

ಬುದ್ಧ ಬುರಡಿ

ಬುದ್ಧ ಬುರಡಿ ಎ.ಎಸ್. ಮಕಾನದಾರ ನನ್ನ ಮೊಹಲ್ಲಾದಮನೆ ಮನಗಳಲ್ಲೂಬುದ್ಧ ಬೆಳಕಿನ ಬುರಡಿ ಅಂಗಾತ ಬಿದ್ದಿದೆ ನನ್ನ ಮೊಹಲ್ಲಾದಮನೆ ಮನಗಳಲ್ಲೂಅಲ್ಲಾಹನಿಗೆ ಸ್ಮರಿಸಲೂಉದ್ದಾಣಿನ ಬೆOಕಿ ನಂದಿದೆ ನನ್ನ ಮೊಹಲ್ಲಾದಮನೆ ಮನಗಳಲ್ಲೂವಚನ ಸಾರಕೆ ಗೆದ್ದಿಲು ಹಿಡಿದಿದೆ ನನ್ನ ಮೊಹಲ್ಲಾದಮನೆ ಮನಗಳಲ್ಲಿಬೇವರಘಾಟು ನಾಶವಾಗಿಅತ್ತರಿನ ಘಮಲು ಸುತ್ತಲೂ ಹರಡಿದೆ ನನ್ನ ಮೊಹಲ್ಲಾದಲ್ಲಿತುoಬಿರುವ ನೆತ್ತರಗೇರಿಹೂಳೆತ್ತಲು ಪಂಚವಾರ್ಷಿಕ ಯೋಜನೆ ರೂಪುಗೊOಡಿದೆ *********

ಬುದ್ಧ ಬುರಡಿ Read Post »

ಕಾವ್ಯಯಾನ

ಕಾವ್ಯಯಾನ

ಸೋಂಕು ವೀಣಾ ರಮೇಶ್ ನಾ ನಡೆದ ಹೂಗಳಹಾದಿಯಲಿ ಯಾಕೋಚುಚ್ಚುತ್ತಿದೆನೋವಿನ ಮುಳ್ಳುಗಳುನನಗೊಂದು ಶಂಕೆಕಾಡಿದೆ ಹಪಹಪಿಸುವ ಪ್ರೀತಿಗೆನನ್ನದೇ ದೃಷ್ಟಿಯ ಸೋಂಕುತಗಲಿರಬಹುದುನನ್ನ ಭಾವನೆಗಳು ಸುರಿಸುವ ನಿಟ್ಟುಸಿರಿಗೆನೆಮ್ಮದಿಯಮುಖ ಗವಸುಬೇಕಿರಬಹುದು ಹೃದಯಕ್ಕೂ ಮನಸಿನಯೋಚನೆಗಳಿಗೂಅಂತರ ಕಾಯುವುದುಬೇಕಿದೆ. ಈಗಒಂದಷ್ಟು ದಿನಗಳುಮೌನದೊಳಗೆ ಕಾಮನೆಗಳ ಬಂಧಿಸಿಎದೆಯ ಗೂಡೊಳಗೆಕಾವಲಿರಿಸಿ ಒಂದಷ್ಟು ಕಾಲಮನಸ್ಸು ಕ್ವಾರಂಟೈನ್ಆದರೆ ಸಾಕಿತ್ತುಆಗಲಾದ್ರೂ ಕಾಡುವವೈರಸ್ಗಳುಕಡಿಮೆಯಾಗಿಸೋಂಕು ಬಾರದೆ ಇರಬಹುದು ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಮ್ಮೂರ ಮಣ್ಣಿನಲಿ ವಿನುತಾ ಹಂಚಿನಮನಿ ನಮ್ಮೂರ ಬೀಸು ಗಾಳಿಯಲಿಮಾಸದ ಸಂಸ್ಕೃತಿಯ ಸುಗಂಧನನ್ನ ಉಸಿರ ಪರಿಮಳದಲಿಇಂದಿಗೂ ಸೂಸತಾವ ಘಮಘಮ ನಮ್ಮೂರ ಕಾಡ ಹಾದಿಯಲಿನಾ ಮೂಡಿಸಿದ ಹೆಜ್ಜೆ ಗುರುತುನಡೆದ ದಾರಿಯ ತೋರಿಸುತಲಿಇಂದಿಗೂ ಬೆನ್ಹತ್ತತಾವ ಎಡಬಲ ನಮ್ಮೂರ ಕೆರೆಯ ನೀರಿನಲಿನಾ ಒಗೆದ ಕಲ್ಲು ಹರಳುಅಲೆಗಳ ಮಾಲೆ ಹೆಣೆಯುತಲಿಇಂದಿಗೂ ನಗತಾವ ಕಿಲಕಿಲ ನಮ್ಮೂರ ನಿಷ್ಠ ಮಣ್ಣಿನಲಿಕಷ್ಟ ಎದುರಿಸುವ ಕೆಚ್ಚುಕನಸಿಗೆ ಎಣ್ಣಿ ಹೊಯ್ಯತಲಿಇಂದಿಗೂ ಮಿನಗತಾವ ಮಿಣಮಿಣ ********** ನಮ್ಮೂರ ಚಿಕ್ಕ ಆಗಸದಲಿಅಕ್ಕರೆಯ ಚೊಕ್ಕ ಚುಕ್ಕೆಗಳುಸಕ್ಕರೆಯ ಕಥೆ ಹೇಳುತಲಿಇಂದಿಗೂ ನೀತಿ ಹೇಳತಾವ ಚಕಚಕ ನಮ್ಮೂರ ಜನರ ಮನಸಿನಲಿಕರುಣೆಯ ಮಹಾಪೂರಸವಿ ನೆನಪುಗಳ ಸುರಿಯುತಲಿಇಂದಿಗೂ ಹರಸತಾವ ಭರಪೂರ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶರಧಿಗೆ ದೀಪ್ತಿ ಭದ್ರಾವತಿ ಶರಧಿಗೆ.. ನಿನ್ನ ತೀರದಲಿ ಹೆಜ್ಜೆ ಊರಿ ಕೂತಿದ್ದೇನೆಅಳಿಸದಿರುಬಲ್ಲೆ ನಾನುನಿನ್ನ ಉನ್ಮತ್ತ ಅಗಾಧ ಕರುಣೆಯಅಂತರಾಳವನ್ನುನೂರೆಂಟು ನದಿಗಳ ಲೀನದಲ್ಲಿಯುಸಾಧಿಸುವ ನಿಶ್ಚಲತೆಯನ್ನುಮೌನದ ಕಡು ಮೋಹಿಯೇಜಗದ ನೋವುಗಳ ಹೆಕ್ಕಿ ನೀನು ಮೊರೆವಾಗಲೆಲ್ಲ’ಇಟ್ಟ ಅದೆಷ್ಟೋ ಗುರುತುಗಳುಆವಿಯಾಗುತ್ತವೆಹುಟ್ಟಿದ ಮೋಹಗಳುಕಬಂಧ ಬಾಹುಗಳಲಿಇಲ್ಲವಾಗುತ್ತವೆಆದರೂ,ನಿನ್ನೆದೆಯ ರೇವೆಯಲಿ ಹೆಸರು ಗೀಚುವಹುಚ್ಚು ಹಂಬಲಕೆ ಬಿದ್ದಿದ್ದೇನೆಅಲೆದು ದಣಿದ ಕಾವುಗಳಲಿತೇವ ಹೀರಿಕೊಳ್ಳಲು ಕಾಯುತ್ತಿದ್ದೇನೆ..ಇಲ್ಲವೆನ್ನಬೇಡಕಟ್ಟಿದ ಒದ್ದೆ ನೆನೆಹಿಕೆಗಳ ಹಾಗೆಯೇ ಇರಿಸುಉಕ್ಕಿ ಬಾ ಒಮ್ಮೆ ತೋಳ ಚಾಚಿಆಲಂಗಿಸುನಿನ್ನಂತೆಯೇ ನನ್ನ ಉಳಿಸು *******

ಕಾವ್ಯಯಾನ Read Post »

ಕಾವ್ಯಯಾನ

ದಡ

ಫಾಲ್ಗುಣ ಗೌಡ ಅಚವೆ ಮತ್ತೆ ಅದೇ ಏಕಾಂಗಿತನಮರಿ ಮಾಡುತ್ತಲೇ ಇದೆಕಾವು ಕೊಡದಿದ್ದರೂ ಮೊನ್ನೆ ನಡೆದ ಅಸಂಗತ ನಾಟಕದನಾಯಕ ಅವನ ಪಾತ್ರದಲ್ಲಿಯೇನೆಲೆಗೊಂಡಂತಿದೆ ಇನ್ನೂಧಾವಂತಗಳ ದಾಟದೇದಗದಿ ದಳ್ಳುರಿಯ ಎದುರಿಸಲಾಗದೇಹೊಸ ಹುಡುಕಾಟಗಳ ಲೆಕ್ಕಿಸದೇತಡಕಾಡಿಸುತ್ತಲೇ ಇದೆಚುಕ್ತಾ ಮಾಡಲಾಗದಬಡತನದ ಕನಸುಗಾರಿಕೆ ಇಲ್ಲಿಯೇ ಇದ್ದು ಅಲ್ಲಿ ಹೊರಟಂತೆದಾಪುಗಾಲಿಟ್ಟವರುಮನವಿ ಕೊಟ್ಟಂತಿದೆಗೈರು ಹಾಜರಾದ ಕುರಿತು ಸಾವು ಸಮನಿಸುವಂತಸವಾಲುಗಳಿವೆ ಇನ್ನೂಅಂಟಿಕೊಂಡಿವೆ ಅರವತ್ತರನಂತರದ ಆಹ್ವಾನಗಳು ಕಾಲದ ಹೆಜ್ಜೆಗಳಿಗೆ ಒಂದಷ್ಟುಬಣ್ಣ ಬಳಿದರೂಹಿಂದೆ ಬಳಿದ ಸುಣ್ಣವೇಇಣುಕುತ್ತಿದೆ ಅಲ್ಲಲ್ಲಿ ಸಹಜ ನಿಯಮವೇ ಬದಲಾವಣೆಸ್ತಬ್ಧಗೊಂಡಿದೆ ಹರಿವುನಿದ್ದೆಯ ಮಂಪರಿದೆಅಲೆಯದ ಕಡಲಿಗೆಹೊಸ ಅಲೆಯುಕ್ಕಿಸೋಸುನಾಮಿ ಅದೆಲ್ಲಿದೆಯೋ? ಆಧುನಿಕ ಅವಾಂತರಗಳುಮತ್ತೆ ಮತ್ತೆ ಆವರಿಸಿಗುಂಗೆ ಹುಳವಾಗಿ ಗಿರಕಿ ಹೊಡೆದನೂರೆಂಟು ನರಳಿಕೆಗಳುಜಗ್ಗಿದಂತೆನಿಸಿವೆ ಅಚ್ಚರಿಯೆಂದರೆಹೊರಟ ಹೈದರಿಗೆಇನ್ನೂ ಆಚೆ ದಡನಿಲುಕಿಲ್ಲ! **********

ದಡ Read Post »

ಕಾವ್ಯಯಾನ

ಖಾದಿ ಮತ್ತು ಕಾವಿ

ಎಮ್. ಟಿ. ನಾಯ್ಕ.                         ಜನ ಸೇವಕನೆಂದಿತು ಖಾದಿ ಧರ್ಮ ರಕ್ಷಕನೆಂದಿತು ಕಾವಿ ಇಂಚಿಂಚಾಗಿ ಮಾನವ ಕುಲವ ನುಂಗಿ, ನೀರು ಕುಡಿಯುತ್ತಿರುವ ಗೋಮುಖ ವ್ಯಾಘ್ರಗಳು     ವಿಷಯ ಲಂಪಟತೆಗೆ     ಇನ್ನೊಂದು ಹೆಸರು     ಖಾದಿ ಮತ್ತು  ಕಾವಿ ಇವುಗಳ ಹೆಸರೆತ್ತಿದರೆ ಸಾಕು ಬೀದಿ ನಾಯಿಗಳೂ ಕೂಡ ಮೂಗು ಮುಚ್ಚುತ್ತವೆ ಹಸಿ ಹಾದರದ ಕತೆಗೆ ನಸು  ನಾಚುತ್ತವೆ! ಹೊನ್ನು ಹೆಣ್ಣು ಮಣ್ಣಿನ ವಾಸನೆ ಗರ್ಭಗುಡಿಯೊಳಗೆ……! ಎಷ್ಟೆಲ್ಲಾ  ಸತ್ಯಗಳು ಕತ್ತಲೆಯ  ಗರ್ಭದೊಳು ….. !? ಖಾದಿಯದೋ……ರಾಜಕುಲ ಕಾವಿಯದೋ ……ದೇವಕುಲ ಇಬ್ಬರಿಗೂ ಬೇಕಂತೆ ಝಡ್ ಪ್ಲಸ್ ರಕ್ಷಣೆ ಇಬ್ಬರದೂ ಒಂದೇ ಮುಖ ಸದಾ ನಗುಮುಖ ಆದರೆ .. ಅನಾವರಣಗೊಳ್ಳುವುದೊಮ್ಮೊಮ್ಮೆ ಇವರ  ಬಹುಮುಖ! *************

ಖಾದಿ ಮತ್ತು ಕಾವಿ Read Post »

ಕಾವ್ಯಯಾನ

ಮತ್ತೆ ಮತ್ತೆ ಹೇಗೆ ಹಾಡಲಿ

ಸಂತೆಬೆನ್ನೂರು ಫೈಜ್ನಟ್ರಾಜ್ ಹಾಡಿದ ಹಾಡನೆ ಮರಳಿ ನಾನುಮತ್ತೆ ಮತ್ತೆ ಹೇಗೆ ಹಾಡಲಿಕಡಲೊಳಗೆ ಬೆರೆತ ಆ ನದಿಯಯಾವ ಕಣ್ಣಿನಿಂದ ನಾನು ನೋಡಲಿ೧ ಬಂದವರು ಹೋದವರು ಇದನೆ ತಾನೆಹಾಡಿ ಹೋದರು ಬಿದಿರ ಸೀಳಿದಂತೆತೂತ ಕೊರೆದು ಎದೆಯ ತೆರೆದುಹಾಡಿದರೂ ನಾ ಹೋದರು ಕೇಳದಂತೆ೨ ಕಾಡ ಕರುಣೆ ಹೂವ ಪ್ರೀತಿಜೋಲಿಯ ಲಾಲಿ ಪಿಸ ಮಾತಿನೊಲುಮೆಒಲ್ಲೆನೆಂದರು ಮತ್ತೆ ಮನಕಿಳಿದುತಿದಿಯೊತ್ತೆ ರಾಗ ಚಿಮ್ಮಿ ಭಾವ ಕುಲುಮೆ೩ ನಮ್ಮವರು ನಿಮ್ಮವರು ಎಂದಿಗೂಹಾಡಿದುದನೆ  ಹಾಡಿ ದಣಿದ ಕಥೆಯೂಹಾಡೊಂದೆ ಇಲ್ಲಿ ಭಾವ ಬೇರೆಇರಲಿ ಮನುಜ ಪ್ರೀತಿ ಬೇಡ ದುಗುಡ ವ್ಯಥೆಯೂ! **************

ಮತ್ತೆ ಮತ್ತೆ ಹೇಗೆ ಹಾಡಲಿ Read Post »

ಕಾವ್ಯಯಾನ

ರುಬಾಯಿ

ಶಾಲಿನಿ ಆರ್. ೧.  ಮುಂಗಾರಿನ ಮಳೆಹನಿ      ಇಳೆಗೆ ಇಳಿದ ದನಿ      ನನ್ನ ರಮಿಸುವ ಪ್ರೀತಿ,      ಒಡಲ ಸೋಕಿ ಜೇನ್ಹನಿ… ೨.   ಮಳೆ ಬಂತು ನಾಡಿಗೆ       ತೆನೆ ತಂತು ಬೀಡಿಗೆ       ಅಚ್ಚ ಪಚ್ಚ ಪಯರು,       ಹೊನ್ನೂತ್ತಿ ಸೊಬಗಿಗೆ… ೩.   ಮಳೆಯಿದು ಮಮತೆ ಸೆರಗು       ಭುವಿಯಲೆಲ್ಲ ಹಾಸಿ ಬೆರಗು       ಧಾತ್ರಿ ತಂದಿತು ಒಸೆದು ಪ್ರೀತಿ,       ಮೊಗೆದು ತುಂಬಿ ಸಿರಿ ಸೊಬಗು… ೪.   ಮುಂಗಾರು ಮಳೆ ತಂದ ಒಲವ       ಭಾವ       ಒಡಮೂಡಿದೆ ಇಳೆಯಲೆಲ್ಲ ಜೀವ       ಸುತ್ತಮುತ್ತ ಹಸಿರ ಹೊನಲ ಗಾಳಿ,       ಮೂಡಿತಲ್ಲಿ ನಾಳಿನ ನಂಬಿಕೆ ದೈವ… ೫.   ಮುಂಗಾರಿನ ಕರಿಮುಗಿಲ ಕಾನನ       ಸುರಿಯುತಿದೆ ಜೀವಹನಿ ತಾನನ       ಚೆಂದದೊಡಲ ಇಳೆಗದು ಸಂಭ್ರಮ       ಬಾಳಿನಂದದಲಿ ಉಸಿರ ನರ್ತನ… ***********

ರುಬಾಯಿ Read Post »

ಕಾವ್ಯಯಾನ

ಅವನು ಗಂಡು

ಚೇತನಾ ಕುಂಬ್ಳೆ ಬೆಳಕು ಹರಿದೊಡನೆ ಹೊಸ್ತಿಲ ದಾಟುವನುಕತ್ತಲಾವರಿಸಿದೊಡನೆ ಮನೆಯ ಕದವ ತಟ್ಟುವನುಉರಿವ ಬಿಸಿಲು, ಕೊರೆವ ಚಳಿ, ಸುರಿವ ಮಳೆಯನ್ನದೆಹಗಲಿರುಳೂ ದುಡಿಯುವನುಯಾಕೆಂದರೆ, ಅವನು ಗಂಡು…ಜವಾಬ್ದಾರಿಗಳ ಭಾರವನ್ನು ಹೆಗಲಲ್ಲಿ ಹೊತ್ತವನು ಮಡದಿಯ ಪ್ರೀತಿಯಲ್ಲಿ ಅಮ್ಮನ ವಾತ್ಸಲ್ಯವನ್ನರಸುವನುಮಕ್ಕಳ ತುಂಟಾಟಗಳಲ್ಲಿ ಕಳೆದ ಬಾಲ್ಯವನ್ನು ಕಂಡು ಸಂಭ್ರಮಿಸುವನುಮುಗಿಯದ ಹಾದಿಯುದ್ಧಕ್ಕೂ ಕನಸ ಬಿತ್ತುತ್ತಾ ನಡೆಯುವನುಹರಿದ ಚಪ್ಪಲಿಗೆ ಹೊಲಿಗೆ ಹಾಕುತ್ತಾಯಾಕೆಂದರೆ,ಅವನು ಗಂಡುಬೆವರ ಹನಿಯ ಬೆಲೆ ಎಷ್ಟೆಂದುಅರಿತವನು ಸ್ವಭಾವ ಸ್ವಲ್ಪ ಒರಟು,ಆದರೂ ಮೃದು ಹೃದಯಮಾತು ಬಲ್ಲವನೇ ಆದರೂ ಮಿತಭಾಷಿಎದೆಯೊಳಗೆ ಹರಿವ ಒಲವ ಝರಿಕೋಪದೊಳಗೆ ಪ್ರೀತಿಯ ಬಚ್ಚಿಟ್ಟವನುಮನದೊಳಗೆ ಮಧುರ ಭಾವನೆಗಳಿದ್ದರೂಮೌನದಲ್ಲಿಯೇ ಎಲ್ಲವನ್ನೂ ಅರ್ಥಮಾಡಿಸುವನುಯಾಕೆಂದರೆ , ಅವನು ಗಂಡುಮನದ ತುಡಿತಗಳೆಲ್ಲವನ್ನು ಅಕ್ಷರಗಳಲ್ಲಿ ಹಿಡಿದಿಡಲರಿಯದವನು ಅನುಭವದ ಬೆಳಕಿನಲ್ಲಿಸರಿತಪ್ಪುಗಳನ್ನು ಹೇಳಿಕೊಟ್ಟುಬಾಳಿನುದ್ಧಕ್ಕೂ ದಾರಿದೀಪವಾದವನುಕಷ್ಟ ಸುಖಗಳಲ್ಲಿ ಹೆಗಲಾದವನುಎದೆ ಹೊತ್ತಿ ಉರಿಯುತ್ತಿದ್ದರೂತುಟಿಗಳಿಗೆ ನಗುವ ಲೇಪಿಸಿಕೊಂಡವನುನೋವಿನಲ್ಲೂ ಅಳಲು ಮರೆತವನುಯಾಕೆಂದರೆ, ಅವನು ಗಂಡುಭಾವನೆಗಳನ್ನು ತೋರ್ಪಡಿಸಲರಿಯದೆ ಎಲ್ಲವನ್ನೂ ಒಳಗೊಳಗೇ ಅದುಮಿಟ್ಟುಕೊಂಡವನು. ********

ಅವನು ಗಂಡು Read Post »

You cannot copy content of this page

Scroll to Top