ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನೆನಪುಗಳ ಪಾಲೀಶ್ ಪಾಲಿಸಿ ಬಸವರಾಜ ಕಾಸೆ ಮರೆಯದ ನೆನಪುಗಳತೊಳೆಯುವೆ ಕೊಳೆಯಲು ಕಣ್ಣೀರಲ್ಲಿಅಚ್ಚಳಿಯದೆ ಸ್ವಚ್ಛ ಪಾಲಿಶ್ ಆಗಿಫಳಪಳವೆಂದು ಬೆನ್ನೆತ್ತವುದು ಕ್ಷಣದಲ್ಲಿ ಕಳಿಸಿ ಕೊಡಲು ಕಲಿಸಿದೆಕೇಳಿ ನಗುವಿನ ಆಮಂತ್ರಣಸಪ್ಪೆಯಾದರೂ ನಟಿಸಿದೆನಿರಾಳವಾಗಲು ನಿನ್ನ ಮೈಮನ ಹೇಳಿ ಹೋಗದ್ದಿದರೆಚೆಂದವಿತ್ತು ಏನೋ ಕಾರಣತಿಳಿ ಹೇಳಿ ರಮಿಸಿದ ಪರಿಬಿಗಿಗೊಳಿಸಿತು ಭಾವ ಬಂಧನ ಬಿಟ್ಟು ಕೊಡದ ಪ್ರೀತಿಪಡೆಯಲಾಗದ ಬದುಕುಧಿಕ್ಕಾರ ಕಿರುಚಲು ನನ್ನೊಳಗೆನನಗೆ ನಿರಂತರ ಕುಟುಕು ಇಡಿ ಸಾಗರದ ಉಪ್ಪುತೆವಳಿಯೇ ಹಿಂದಿಕ್ಕುತ್ತೆ ನೋವಿನಾಳದಲ್ಲಿತಡೆತಡೆದು ಬಿಕ್ಕಿ ಜಾರುವಹನಿ ಹನಿ ನೀರಲ್ಲಿ ಬಿಟ್ಟು ಹೋಗುವ ಮುನ್ನಪ್ರೇಮದ ನಿನಾದಗರಿಗೆದರಿ ತಬ್ಬಿ ಅಲವತ್ತಿತುನೆನೆದು ತವಕಿಸಿ ತಲ್ಲಣದ ಕದ ಮುದ್ದಿಸಿ ಸಮಾಧಾನಿಸುವಪರಿಪಕ್ವತೆಯಲ್ಲಿ ನೀನುಹಾಗೆ ಇರುವಂತೆ ತೋರಿಸುವಅನಿವಾರ್ಯತೆಯಲ್ಲಿ ನಾನು ತಟ್ಟಿ ಹೋದೆ ಯಾಕೆಆ ಕೊನೆಯ ಕ್ಷಣದಲ್ಲೂಇನ್ನಿಲ್ಲದಂತೆ ಹೃದಯ ಮೀಟಿಆವರಿಸಿದೆ ಭೀತಿ ಹಿಂದೆಂದಿಗಿಂತಲೂ =====================

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸೊಡರು ಚಂದ್ರಪ್ರಭ .ಬಿ. ಚೆಂಗುಲಾಬಿ ಮೊಗದವಳೆ ದಾಸವಾಳದ ವರ್ಣದಲಿ ಅದ್ದಿ ಬಂದವಳೆ…ಸಖಿ ಅನುಪಮ..ಅಪಾರ ನಿನ್ನ ಮಮತೆ..ಹೃದಯವಂತಿಕೆ..! ಹಲವು ಮೈಲುಗಲ್ಲುಗಳಿಗೆ ಸಾಕ್ಷಿ ನಿನ್ನ ನಿರ್ಗಮನ ಅಂಚಿನತ್ತ ದೌಡಾಯಿಸುತ್ತಿರುವ ವೃತ್ತಿ ಮೈಕೊಡವಿ ಮೇಲೇಳುತ್ತಿರುವ ಪ್ರವೃತ್ತಿ ಏನೆಲ್ಲಕೆ ತೆರೆದುಕೊಳುವಾಸೆಗೆ ಬಲಿತ ರೆಕ್ಕೆ ನೀ ಹೊತ್ತು ತರುತ್ತಿದ್ದ ವೇದನೆ ಈಗ ಕಾಡುತ್ತಿದೆ ಮಧುರ ನೆನಪಾಗಿ! ಅಜ್ಜಿ ಅವ್ವನ ಕಾಲದಲಿ ಅರವತ್ತರ ವರೆಗೂ ಜತೆಯಾದವಳು ನೀ ಅವರ ಹಿಂದೆ ಹಿಂದೆ ನಾ… ನನ್ನ ಹಿಂದಿನವರಿಗೆ ನಲವತ್ತಕ್ಕೇ ಕೈ ಬೀಸಿ ವಿದಾಯ ಹೇಳುತಿರುವೆಯಲ್ಲೇ? ಮೂವ್ವತ್ತರ ಬಳಿಕ ಗೃಹಸ್ಥಾಶ್ರಮ ಸೇರಿ ಕಳ್ಳುಬಳ್ಳಿಯಲಿ ಹೂಗಳ ನಿರೀಕ್ಷೆಯಲಿ ಇರುವವರ ಗತಿಯೇನೆ? ಕರುಳ ಕುಡಿಗಳಲಿ ನಿನಗದೆಷ್ಟು ಕಳಕಳಿ! ಒಡಲಲ್ಲಿ ನಿನ್ನ ಹೊತ್ತುಕೊಂಡೇ ಹುಟ್ಟುವ ಜೀವ ತನಗೆ ತಾನೇ ಒಂದು ಘನತೆ ಜಗವ ಲಾಲಿಸಿ ಪಾಲಿಸುವ ಜಗನ್ಮಾತೆ ಪ್ರಕೃತಿ ನಿನ್ನ ಸ್ರಾವ ನಿಂತು ತಾಯ ಮಡಿಲಿಗೆ ಬಂದವರು ಅವಳೆದೆಯ ಅಮೃತದ ಸವಿಯುಂಡು‌ ಬೆಳೆದವರು ಹಳಿಯುವರಲ್ಲೇ ನಿನ್ನ..! ಪಾಪ, ಅವರ ನೋಟ ಅಷ್ಟು ಕಿರಿದು… ನಿನಗದರ ಗೊಡವೆಯಿಲ್ಲ ಅನಂತ ಸೃಷ್ಟಿಯ ಪೊರೆವ ಜೀವದಾಯಿನಿ ಅತ್ತ ಗಮನಿಸಲೂ ಬಿಡುವಿಲ್ಲ ನಿನಗೆ ನಿನ್ನ ಮಮತೆಯು ಹಾಡಿ ತೂಗುತಿರುವ ತೊಟ್ಟಿಲು ಈ ಲೋಕ ನಿನ್ನ ಅಂತಃಕರಣ ಹಚ್ಚಿಟ್ಟ ಸೊಡರು ಈ ಭೂಮಿ ಅನುಗಾಲವೂ ಆಭಾರಿ ಜೀವ ಸಂಕುಲ ನಿನಗೆ ========================= –

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಿನುಗುವ ನಕ್ಷತ್ರ ಚೈತ್ರ ಶಿವಯೋಗಿಮಠ ಅಗೋ…. ಅಲ್ಲಿ ಮಿನುಗುವ ನಕ್ಷತ್ರ ನೀನೇ ಇರಬಹುದು ಅಪ್ಪ! ಪ್ರತಿ ಇರುಳು ಕಾಯುವೆ  ನಿನ್ನ ಬಾಂದಳದಲಿ ಕಾಣಲು! ಮಿಣುಗುವ ಚುಕ್ಕಿ ಸ್ಮೃತಿ  ಪಟಲವ ಕೆಣಕುವುದು! ನೀ ನನ್ನ ಆಡಿಸಿದ್ದು, ಟುವ್ವಿ ಟುವ್ವಿ ಎಂದು ಹಾಡಿದ್ದು ಕಣ್ಮರೆಯಾಗಿ ಕಾಡಿದ್ದು  ಮುಂಜಾನೆಯ ವಿಹಾರಕ್ಕೆ ಹೋಗಿದ್ದು ಸದ್ದು ಮಾಡುತ್ತಾ ಕಾಫಿ ಹೀರಿದ್ದು ಎಲ್ಲವೂ ಕಾಡುವುದು ಅಪ್ಪ! ಈ ನಕ್ಷತ್ರದಂತೆಯೇ ನೀನು ಕತ್ತಲು ಕವಿದಾಗ ದಾರಿ ತೋರುವೆ ಈ ಚುಕ್ಕಿಯಂತೆಯೇ ಆದೆ ನೀನು ಹಗಲೆಂಬ ಸಂತಸದಲಿ ಮಾಯವಾದೆ ಆದರೆ ಇರುಳೆಂಬ ಸಂಕಟದಲಿ ಆಸರೆಯಾಗುವೆ! ಹಗಲಲಿ ಮಾಯವಾದಂತೆನಿಸಿದರೂ  ನೀ ಇಲ್ಲೇ ಇರುವೆ ಕಣ್ಣಿಗೆ ಮಾತ್ರ ಕಾಣಲಾರೆ! ನಿನ್ನಿರುವ ನಾ ಮಾತ್ರ ಗ್ರಹಿಸುವೆ! ಅಪ್ಪ, ಈ ನಕ್ಷತ್ರದಂತೆಯೇ  ಸದಾ ಸಂತಸ ಕೊಡುವವ ನೀ!! =================================== ಪರಿಚಯ: ಮೂಲತಃ ಬಿಜಾಪುರ, ಬೆಂಗಳೂರಿನ ನಿವಾಸಿ.Mtech ಪದವಿಯನ್ನು VTU ವಿಶ್ವವಿದ್ಯಾಲಯದಿಂದ ಪಡೆದು, ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಕವಯಿತ್ರಿ.. ಕಾರ್ಯಕ್ರಮ ನಿರೂಪಣೆ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವರು. ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಕಾವ್ಯ ಪರೀಕ್ಷೆಯಲ್ಲಿ ಉತ್ತೀರ್ಣ. ಮುದ್ದೇಬಿಹಾಳ ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಹಾಗೂ ಇನ್ನಿತರ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿರುವರು. ಅವಧಿ  – ಡಿಜಿಟಲ್ ಮ್ಯಾಗಝಿನ್, ಸುಗಮ – ಬ್ಲಾಗ್ಸ್ಪಾಟ್, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಪ್ರಜಾಪ್ರಗತಿ, ವಾರ್ತಾಭಾರತಿ, ಕರ್ಮವೀರ ಹಾಗೂ ಜನತಾವಾಣಿ ಪತ್ರಿಕೆಗಳಲ್ಲಿ ಕವನಗಳು ಪ್ರಕಟವಾಗಿವೆ.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಾಯಗಳ ಎಣಿಸುತ್ತಲೇ! ದೀಪಾಜಿ ಮಾತಿಗೊಮ್ಮೆ ತುಟಿಕಚ್ಚಿ  ಹೀಗೆಂದರೆ ಎಲ್ಲಿ ಬಿಟ್ಟು ಹೋದಾನೊ ಹಾಗೆಂದರೆ ಎಲ್ಲಿ ಬಿಟ್ಟು ಹೋದಾನೊ ಎಂಬ ದುಗುಡದಲ್ಲೆ ಕಳೆದೆ ಅಷ್ಟು ದಿನಗಳನ್ನ.. ಹೆಜ್ಜೆ ಹೆಜ್ಜೆಗೊಮ್ಮೆ ಹೆಜ್ಜೇನು ಸುರಿದು ಬಾಯಿಗೆ ಸೆರಗ ಒತ್ತಿ ದುಃಖ ಉಮ್ಮಳಿಸಿದಾ -ಗೆಲ್ಲ ಹುಸಿ ನಗುವನ್ನೆ ಹೊರಚೆಲ್ಲಿ ನೋವೆಲ್ಲ ಪಕ್ಕಡಿಗೆ ಸರಿಸುತ್ತಲೆ ಕಳೆದೆ ಅಷ್ಟು ದಿನಗಳನ್ನ.. ಉಸಿರು ಬಿಟ್ಟುರು ಸಾಕು ಹೆಡೆಎತ್ತಿ ಬುಸುಗುಡುತ್ತೀ ಪ್ರೇಮ ಸರಸ ಸಮರಸ ಕಲ್ಪಸಿದವಳಿಗೆ ಸಿಕ್ಕಿದ್ದು ಬರಿಯ ಹಾಲಾಹಲ ನಿನ್ನ ಸಿಟ್ಟುರಿಯ ಹರಿವು ಅಸಮಾಧಾ -ನದ ಕೋಲಾಹಲ ಸಹಿಸುತ್ತಲೇ ಬಂದೆ ಅಷ್ಟು ದಿನಗಳನ್ನ ಅಕ್ಕರೆಯ ಸವಿಬೆಲ್ಲ ನೀ ಹರೆಸಲಿಲ್ಲ ಅನ್ನಕ್ಕೇನು ಕೊರತೆ ಮಾಡಲಿಲ್ಲ ಆದರೆ ನೀ ಹುಡುಕಿದ್ದು ಮೊಸರೊಳಗಿನ ಕಲ್ಲ, ಆ ಕಲ್ಲು ಇಲ್ಲವೆನ್ನುತ್ತಲೆ ಕಳೆದೆ ಅಷ್ಟು ದಿನಗಳನ್ನ ಕರುಣೆ ಕಕ್ಕಲಾತಿಗಳೇನು ಬೇಡ ಆದರೆ ಸಹಿಸುತ್ತ ಸವರುತ್ತ ಬಂದಿ -ರುವುದು ಬೆನ್ನ ಮೇಲಿನ ಬಾಸುಂಡೆಗಳನೆ ಗಾಯಗಳ ಎಣೆಸುತ್ತಲೆ ಕಳೆದೆ ಅಷ್ಟು ದಿನಗಳನ್ನ ಮಕ್ಕಳು ನಿನ್ನ ಹೋಲುವುದೆ ಇಲ್ಲವೆಂದು ಹೊಡೆದು ಬಡೆದು ಹಾಕುತ್ತೀ ,ನಶೆ ಎರುವ ಮುಂಚೆ ಮನೆಗೆ ಬಂದರೆ ತಿಳಿದೀತು ಹೋಲಿಕೆ,ಗರ್ತಿಯ ತಲೆಗೆ ಅಪಚಾರದ ಪಟ್ಟ  ಕಟ್ಟುತ್ತಲೆ ಬಂದಿ ಅದ ಕೇಳುತ್ತಲೆ ಉಳಿದೆ ಅಷ್ಟು ದಿನಗಳನ್ನ ಗಂಡಬಿಟ್ಟವಳೆಂದು ಅವರಿವರೆಂದಾರೆಂದು ನಿನ್ನ ಸಹಿಸುವುದು ದಂಡವೇ ಸರಿ ಗಂಡನಿಲ್ಲದಿದ್ದರು ಅದೆಂಥ ವೈನಾಗಿ ಬದುಕಿದಳೆನ್ನುವಂತೆ ಕಳೆಯುವೆ ಇನ್ನೂಳಿದ ಅಷ್ಟು ದಿನಗಳನ್ನ… ================= ಪರಿಚಯ: ಅಂಚೆಇಲಾಖೆಯಲ್ಲಿ ವೃತ್ತಿ, ಓದು, ಬರವಣಿಗೆ ಹವ್ಯಾಸ

ಕಾವ್ಯಯಾನ Read Post »

ಕಾವ್ಯಯಾನ

ತಂತಿಯೊಳಗಣ  ಶಬ್ದ !

ಕಾವ್ಯ ಸಂಗಾತಿ ತಂತಿಯೊಳಗಣ  ಶಬ್ದ ! ಬಿದಲೋಟಿ ರಂಗನಾಥ್ ನಾನು ಶರಾಬಿನ ದಾಸ ಘಟಶೋಧನೆಯಲ್ಲಿನ ಬಂಧವನ್ನು ಹುಡುಕುತ್ತಲೇ ಹೋದೆ ಅವನ ನೆರಳಿತ್ತು ಅವಳ ಒಲವಿತ್ತು ನಾನೇ ಇರಲಿಲ್ಲ. ಶೋಧಿಸಿಸಲು ಎದೆಗೂಡಲ್ಲಿದ್ದ ಹಂಸದ ನಡಿಗೆಯ ಹೆಜ್ಜೆಯ ಸುತ್ತಿ ಹೊಲೆದ ಪಾಪದ ಮೂಟೆಯ. ತಿರುಗಿದೆ ಕಾಡು –ಮೇಡು ಬೆಟ್ಟ ಕಣಿವೆ ಕಂದರ ನಾ ಬಯಸಿದ್ದು ಸಿಗಲಿಲ್ಲ ಧ್ಯಾನದ ಹೆಜ್ಜೆ ಮುಟ್ಟಿ ನೋಡಿದೆ ಸಕಲವೂ ನನ್ನೊಳಗೇ ಇತ್ತು ತಂತಿ ಮೀಟಿದ ಶಬ್ದ ನಿಜದ ನೆಲೆಯ ಬದುಕಿಗೆ ದಾರಿ ತೋರಿ ಬಯಲ ಪದಗಳು ಮುತ್ತಿದವು  ಎದೆಯ ತುಂಬಾ.. ಸಣ್ಣ ಬೆಳಕಿನ ದಾರಿ ಮೇಲೆ ಕಂಡು ಕಾಣದ ಹಂಸದ ನಡಿಗೆ ಬೆನ್ನ ಹಿಂದಿನ ಸತ್ಯ ನಿರಾಕಾರದಲಿ ಮಿಥ್ಯವ ಸುಟ್ಟು ನಡೆಯುತ್ತಲೇ ಹೋಯಿತು ಗೋಡೆಗಳಿಲ್ಲದ ಬಯಲ ಹರಸಿ ಯಾರೂ ಇರಲಿಲ್ಲ ನನ್ನೊಳಗೆ ನನ್ನವರು ಶರಾಬೇ ಸೌತಿ ಓಂಕಾರದೋಳಗಿನ ಗುಂಡಿಯ ಶೋಧಿಸುತ ಹಂಸ ಗೋರಿಯಾಯಿತು ತನ್ನೊಳಗೆ ಇಷ್ಟು ದಿನವಿದ್ದು ಒಂದು ಸುಳಿವೂ ಕೊಡದೆ. ತಂತಿಯೊಳಗಣ ಶಬ್ಧ ಮಾತ್ರ ಪಂಚಾಕ್ಷರಿಯ ನುಡಿಯುತ್ತಲೇ ಇತ್ತು ಗೂಡು ಬಯಲಾಗುತ್ತ… ===============

ತಂತಿಯೊಳಗಣ  ಶಬ್ದ ! Read Post »

ಕಾವ್ಯಯಾನ

ಕಾವ್ಯಯಾನ

ಹೊಸ ಹಾಡು ದೇವಯಾನಿ ನೆನಪಿಗೆಂದು ಕೊಳಲ ನಾನೆಂದೂ ಕೇಳಲೇ ಇಲ್ಲ ಚಕ್ರ ಹಿಡಿಯಲೆಂದೇ ಹೊರಟವನು ನೀನು , ಕೊಳಲು ಬೇಕಿರಲಿಲ್ಲ ಏನು ಮಾಡಲಿ ಈ ಕೊಳಲ ಗಾಳಿ ನುಸುಳಿದರೂ ರಾಧೆ ರಾಧೇ ಎಂದೇ ಉಲಿಯುತ್ತಿದ್ದ ಕೊಳಲೀಗ ಬರಿ ಬಿದಿರ ಕೊಳವೆಯಾಗಿ ಬಿದ್ದಿದೆ ನೀನು ಕೊಳಲೂದಲೆಂದೇ ಗೋಕುಲಕೆ ಈ ಜಗಕೆ ಬರಲಿಲ್ಲ ಬಿಡು ಆದರೂ ಚಕ್ರ ಹೊತ್ತ ಕೈ ಸೋತಾಗ ಕೊಳಲ ನೆನಪಾಗದ್ದೇ ನನಗೆ ವಿಸ್ಮಯ ಕೊಳಲೆಂದರೆ ರಾಧೆ ಎಂದುಕೊಂಡಿದ್ದೆ ಎಂದು ಹೆಮ್ಮೆ ಪಡುತ್ತಿದ್ದೆ ನಾನು ಕೊಳಲ ತೊರೆದಷ್ಟೇ ಸುಲಭವಾಗಿ ನನ್ನ ತೊರೆದೇ ಬಿಟ್ಟೆ ನೀನು ನಿನ್ನ ಕೊಳಲು ನಿನಗೇ ಇರಲಿ ನನ್ನ ಪಾಡು ನನಗಿರಲಿ ಕೊಳಲ ಗೀತವಿಲ್ಲದೆಯೂ ಈ ರಾಧೆ ಬದುಕುತ್ತಾಳೆ ತನ್ನದೇ ಹಾಡ ಹಾಡುತ್ತಾಳೆ ============== ದೇವಯಾನಿ ಪರಿಚಯ: ಶುಭಾ ಎ.ಆರ್, ಗಣಿತ – ವಿಜ್ಞಾನ ಶಿಕ್ಷಕಿ, ದೇವಯಾನಿ ಹೆಸರಿನಲ್ಲಿ ಕಾಲೇಜು ದಿನಗಳಿಂದಲೂ ಕಥೆ ,ಕವನ ಪ್ರಕಟವಾಗಿವೆ. ” ಧರೆಯನುಳಿಸುವ ಬನ್ನಿರಿ ” ಶಾಲಾ ಮಕ್ಕಳಿಗಾಗಿ ಮೂರು ವಿಜ್ಞಾನ ನಾಟಕಗಳು, ” ತುಂಡು ಭೂಮಿ – ತುಣುಕು ಆಕಾಶ ” ಕಥಾ ಸಂಕಲನ, ” ತುಟಿ ಬೇಲಿ ದಾಟಿದ ನಗು” ಎಂಬ ಕವನ ಸಂಕಲನ ಪ್ರಕಟವಾಗಿವೆ .6,5 ನೇ ತರಗತಿಯ ವಿಜ್ಞಾನ ಪಠ್ಯ ಪುಸ್ತಕ ಸಮಿತಿಯಲ್ಲಿ ಕಾರ್ಯ ನಿರ್ವಹಣೆ. ಈಗ ಬೆಂಗಳೂರಿನ ರಾಜಾಜಿನಗರ ಬಿ ಇ ಒ ಕಚೇರಿಯಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೇಳಿ ಹೋಗು ಕಾರಣ ಸಂಗೀತ ಶ್ರೀಕಾಂತ್ ನುಡಿವೊಮ್ಮೆ ನಲ್ಲ ನಿನ್ನ ಕೊಳಲ!! ಕೊರಳ ಮಧುರ ಭಾವ ಹೊರಬರಲಿ.. ಎದೆಯೊಳಗಿರುವ ನಂಜು- ನೋವುಗಳೆಲ್ಲಾ ಹಾಡಾಗಿ ಹೊರ ಬಂದು ಕೇಳುವಂತಾಗಲಿ…. ಭಾವಧ್ಯುಯ್ಯಲೆಯಲಿ ಬದುಕಾ ದುಡುತ್ತಿರುವಾಗ ಅದನ್ನು ಧಿಕ್ಕರಿಸುತ್ತೆನೆಂಬುದು ಎಂಥ ಮೂರ್ಖತನವಾದಿತು? ನಿರ್ಭಾವದಲಿ ನಿಜವ ಕೊಲ್ಲ ಹೊರಟಿರುವುದೇಕೆ? ಬೆರಗಾಗಿದ್ದೆ ಹಿಂದೊಮ್ಮೆ ಬಂಡೆಗಳ ಮೇಲೂ ಚಿಗುರೊಡೆಯಬಲ್ಲೆ ಎಂಬ ಅದಮ್ಯ ಉತ್ಸಾಹಕ್ಕೆ ಜಗತ್ತನ್ನೆದುರಿಸಿ ನೆಡೆಯುತ್ತಿದ್ದ ನಿರ್ಭಿತ ನೆಡೆಗೆ.. ವಿರಹದ ದಳ್ಳುರಿಯ ದಾವನಲದಲ್ಲಿ ನಾ ಬೆಂದು ಬಸವಳಿಯುತ್ತಿರುವಾಗ ಬಂಧನ- ಬಿಡುಗಡೆ, ವಿರಹ- ವಿದಾಯ ಎಂಬೆಲ್ಲ ಅರ್ಥವಿರದ ಆಲಾಪ ಬೇಕೆ? ನಿನ್ನೆಲ್ಲಾ ನೆನಪುಗಳ ವಿಲೇವಾರಿ ಮಾಡಿ ಜಾರಿ ಬಿಡೋಣವೆಂದರೆ ನನ್ನ ಪ್ರೀತಿಯೇನು ಪದ್ಮಪತ್ರದ ಮೇಲಿನ‌ ಜಲಬಿಂದುವಲ್ಲಾ, ಹೇಳುವಷ್ಟು ಸಲೀಸೆ ಕಾಡುವ ನೆನಪುಗಳ ತಾಳುವುದು/ ದೂಡುವುದು…?? ಸುಖದ ಸ್ವಪ್ನಗಳನ್ನೆಲ್ಲ ಬಚ್ಚಿಟ್ಟು ನನ್ನೆದೆಯ ಬಾಗಿಲಿನ ರಂಗೋಲಿ ಒದ್ದು ತುಟಿ ಬಿಚ್ಚದೆ, ನೂರು ಮಾತಿನ ಭಾವಗಳ ಕವಿತೆಯಾಗಿಸದೆ ಹೋಗಿದ್ದು ಏಕೆಂದು ಹೇಳಿಬಿಡು ನೀನು ಅಷ್ಟೇ ಸಾಕೆನಗೆ….. ===================== ಪರಿಚಯ: ಬಾಲ್ಯ/ ಓದು ಎಲ್ಲಾ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದಲ್ಲಿ. ಸದ್ಯ ಹಾಸನದಲ್ಲಿ ವಾಸ. ಓದು/ ಬರಹ ಹವ್ಯಾಸ.

ಕಾವ್ಯಯಾನ Read Post »

ಕಾವ್ಯಯಾನ

ಮುಖವಾಡ

ದಾಕ್ಷಾಯಣಿ ನಾಗರಾಜ್ ಮತ್ತೆ ಮುಸ್ಸಂಜೆಯಲಿ ಮುಸುಕಿನ ಗುದ್ದಾಟ ಆಗಷ್ಟೇ ಮುದ್ದೆಯಾದ ಹಾಸಿಗೆಯಲಿ ನಲುಗಿದ ಹೂಗಳ ಅಘ್ರಾಣಿಸಿ ತಡಕಾಡುತ್ತೇನೆ ಒಂದಷ್ಟಾದರೂ ನಿನ್ನ ಪ್ರೀತಿ ಘಮಲು ಉಳಿದಿದೆಯೇ ? ಪ್ರತಿಸಾರಿಯಂತೆಯೇ, ರವಷ್ಟು ಕೂಡ ಮುಲಾಜಿಲ್ಲದೆ ರಾಚುತ್ತದೆ ಮೂಗಿಗೆ ತುಸು ಕಾಮ ಮತ್ತಷ್ಟು ಗೆದ್ದೆನೆಂಬ ನಿನ್ನ ಅಹಂ,, ಜಾರಿದ ಕಣ್ಣಹನಿಗೆ ಜತನದಿಂದ ನಗುವಿನ ಮುಖವಾಡ ತೊಡಿಸಿಬಿಡುತ್ತೇನೆ ನೀನಿಲ್ಲದ ಮತ್ತೊಂದು ಮುಸ್ಸಂಜೆಯಲಿ ಮುಖವಾಡ ಕಳಚಿಟ್ಟು ನಿಂದಿಸುತ್ತೇನೆ ಹೇ ನಿರ್ದಯಿ ಬದುಕೇ ಅದೆಷ್ಟು ಮುಖವಾಡಗಳ ತೊಡಿಸುವೆ? ಜಾರಿಸುತ್ತಾ ಕಂಬನಿಗಳ ,,,, ದಾಕ್ಷಾಯಣಿ ನಾಗರಾಜ್ ಕವಿ ಪರಿಚಯ: ಶಿಕ್ಷಕಿ-ಕುರುಗೋಡು, ಬರೆಯುವುದು ಓದುವುದು ಹವ್ಯಾಸ

ಮುಖವಾಡ Read Post »

ಕಾವ್ಯಯಾನ

ಮಕ್ಕಳ ವಿಭಾಗ

ಕೆಂಚಬೆಕ್ಕಿಗೆ ಏನಾಯ್ತು? ವಿಜಯಶ್ರೀ ಹಾಲಾಡಿ ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡಗಡ ಚಳಿಗೆ ಬಿಸಿಬಿಸಿ ಬೋಂಡಾ ಪಾಕಂಪಪ್ಪನು ತಿಂದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಮೀನಿನ ಮುಳ್ಳು ದೊಂಡೆಗೆ ಸಿಕ್ಕಿ ಕೆಮ್ಮಿ ಕೆಮ್ಮಿ ಸುಸ್ತಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಗಡವ ಬೆಕ್ಕು ಹೊಯ್ ಕಯ್ ಮಾಡಿ ಕಾಲಿನ ಮೂಳೆ ಮುರಿದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ಟ್ರಾಫಿಕ್ ಜಾಮಲಿ ರಸ್ತೆಯ ಕಾದು ಬೋರು ಬೋರು ಹೊಡೆದಾಯ್ತು ಕೆಂಚಬೆಕ್ಕಿಗೆ ಏನಾಯ್ತು ಬಾಲವು ಪೂರಾ ಮಣ್ಣಾಯ್ತು ನೆತ್ತಿಗೆ ಸಿಟ್ಟು ಸರ್ರನೆ ಏರಿ ಬಾಗಿಲು ಜಡಿದು ಮಲಗಾಯ್ತು!! ವಿಜಯಶ್ರೀ ಹಾಲಾಡಿ ಕವಿ ಪರಿಚಯ: ಆರು ಕೃತಿಗಳು ಪ್ರಕಟವಾಗಿವೆ.ಮಕ್ಕಳ ಸಾಹಿತ್ಯ ಕೃತಿ ‘ ಪಪ್ಪು ನಾಯಿಯ ಪೀಪಿ’ ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.ಸದ್ಯ ಪ್ರೌಢಶಾಲಾಶಿಕ್ಷಕರಾಗಿದ್ದಾರೆ

ಮಕ್ಕಳ ವಿಭಾಗ Read Post »

ಕಾವ್ಯಯಾನ

ಕಾವ್ಯಯಾನ

ಹೂ ಕವಿತೆಗಳು. ರಂಗಮ್ಮ ಹೊದೇಕಲ್ ಗಂಧವಾಗಲು ಬೇರು ಎಷ್ಟು ನೋಯಬೇಕೋ.. ಘಮ ವಾಗಲು ದಾರಿ ಎಷ್ಟು ಸವೆಯಬೇಕೋ.. ನೆಲದಲ್ಲಿ ಭದ್ರ ಬೇರೂರಿ ಆಕಾಶಕ್ಕೆ ಕಣ್ಣು ನೆಟ್ಟು ಪರಿಮಳದ ಬೆಡಗ ಹಾಡುವ ಸೋಜಿಗವ ಹೂಗಳೇ ತೆರೆದಾವು ನೋಡಾ…….!! ಸೋತ ಮಾತು ಹುಗಿದು ಗಿಡ ನೆಡಬೇಕು ಅರಳಿದ ಹೂವಾದರೂ ಮಾತ ಕಲಿಸಿಯಾತು!! ಒಲವೂ ವಿಷವಾಗುವ ಕಾಲದಲ್ಲಿ ಹೂವೂ ಕೆರಳುವುದು ಅಚ್ಚರಿಯೇನಲ್ಲ!! ಬೇರಿನ ನೋವು..ಹೂವಿನ ನಗೆಯು! ನೊಂದೆನೆಂದು ಡಂಗೂರ ಸಾರದ ಬೇರು ಹೂ ನಗೆಯಲ್ಲಿ  ಲೋಕ ಸೆಳೆಯುತ್ತದೆ! ಬೇರಿನ ಕಣ್ಣೀರು ಗುರುತಾದವರು ಹೂವಿನ ಘಮಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ-ಮೌನದಲ್ಲಿ! ಹೂವಿನ ಸೌಂದರ್ಯ ಬೇರಿನ ಕಣ್ಣಲ್ಲಿದೆ ಬೇರಿನ ನಗು ಅರಳಿದ ಹೂವಿನಲ್ಲಿ!! ತುಳಿಯುತ್ತಾರೆಂದು ಗೊತ್ತಿದ್ದೂ ನೆಲಕೆ ಹೂ ಚಲ್ಲುವ ಮರ ನಮಗೆ ಮಾದರಿಯಾಗುವುದೇ ಇಲ್ಲ!! ಮತ್ತೇನಿಲ್ಲ… ನನ್ನ ಶಕ್ತಿಯ ಗುಟ್ಟು ನನ್ನನ್ನೆತ್ತಿ ನಿಲ್ಲಿಸಿದ ಅದೃಶ್ಯ ಬೇರಿನದು! ಈ ಹೂ ನಗು ಬೇರಿನ ಅಂತಃಕರಣಕ್ಕೆ ಕೃತಜ್ಞತೆಯು..! ನೆಲದಲ್ಲಿ ಭದ್ರ ಬೇರೂರಿ ಆಕಾಶಕ್ಕೆ ಕಣ್ಣು ನೆಟ್ಟು ಪರಿಮಳದ ಬೆಡಗ ಹಾಡುವ ಸೋಜಿಗವ ಹೂಗಳೇ ತೆರೆದಾವು ನೋಡಾ…….!! ಮತ್ತೇನು? ಹೂ ಅರಳುತ್ತದೆ ಉರುಳುತ್ತದೆ..!! ಅಷ್ಟರಲ್ಲೇ ಬದುಕೂ ಇದೆ!! ಹೂ ಬೆಡಗ ಹಾಡುತ್ತಾ ನಿಲ್ಲಬೇಡ! ಬೆನ್ನ ಹಿಂದೆ ಚೂರಿ ಇದ್ದಾತು! ಹೂ ಗಂಧದ ಹಾಗೆ ಮೌನ ತೇಲಿಬರುತ್ತದೆ ಎಲ್ಲರಿಗೂ ತಲುಪಲಾಗದು! ರಂಗಮ್ಮ ಹೊದೇಕಲ್ ಕವಿಪರಿಚಯ: ಶಾಲಾ ಶಿಕ್ಷಕಿಯಾದ ಇವರು ಶೈನಾ ಕೈಬರಹದ ಪತ್ರಿಕೆಯ ಕೈಬರಹಗಾರ್ತಿ.ಒಳದನಿ,ಜೀವಪ್ರೀತಿಯ ಹಾಡು ಇವರ ಕವನಸಂಕಲನಗಳು.

ಕಾವ್ಯಯಾನ Read Post »

You cannot copy content of this page

Scroll to Top