ಅಂಕಣ ಸಂಗಾತಿ
ಸರಣಿ ಬರಹಗಳ
ಅರ್ಜುನ ಉವಾಚ
ಡಾ. ವಿಶ್ವನಾಥ ಎನ್ ನೇರಳಕಟ್ಟೆ
ಲಕ್ಷ್ಮೀಶನ ‘ಜೈಮಿನಿ ಭಾರತ’ ಕಾವ್ಯವು ಕುರುಕ್ಷೇತ್ರ ಯುದ್ಧಾನಂತರದಲ್ಲಿ ಉಂಟಾದ ಮನದ ವ್ಯಾಕುಲತೆಯನ್ನು ಹೋಗಲಾಡಿಸಲು ಭಕ್ತಿ- ಶಕ್ತಿಗಳ ಮೊರೆಹೋದವರ ಕಥಾನಕ. ಈ ಕಥೆಯನ್ನು ಅಕ್ಷರ ರೂಪದಲ್ಲಿ ಕಡೆದು ನಿಲ್ಲಿಸುವ ಘನ ಪ್ರಯತ್ನ ಈಗಾಗಲೇ ಹಲವು ಮಹನೀಯರಿಂದ, ವಿದ್ವಾಂಸರಿಂದ ಸಾಧಿತವಾಗಿದೆ. ಆದರೆ ಅಶ್ವಮೇಧ ಯಾಗದ ಬಹುಪ್ರಮುಖ ಭಾಗವಾಗಿದ್ದ ಅರ್ಜುನನ ದೃಷ್ಟಿಕೋನದಿಂದ ಸಂಪೂರ್ಣ ಕಥಾನಕವನ್ನು ಈಕ್ಷಿಸುವ ಪ್ರಯತ್ನ ಹೊಸತು. ಇದುವೇ ‘ಅರ್ಜುನ ಉವಾಚ’ ಸರಣಿ. ಇದು ಒಂದರ್ಥದಲ್ಲಿ ಅರ್ಜುನನೇ ಹೇಳಹೊರಟಿರುವ ಅರ್ಜುನನ ಕಥೆ. ಅವನ ಬದುಕಿನ ಒಂದು ಹಂತದ ಆತ್ಮವೃತ್ತಾಂತವಾಗಿಯೂ ಇದನ್ನು ಗಮನಿಸಿಕೊಳ್ಳುವುದಕ್ಕೆ ಅವಕಾಶವಿದೆ.