Category: ಇತರೆ

ಇತರೆ

ನೆನಪು

ವಿ.ಕೆ.ಮೂರ್ತಿ ದಾದಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ   ಬೆಳಕು ನೆರಳುಗಳ ಚಮತ್ಕಾರಕ್ಕಾಗಿ ದಾದಸಾಹೇಬ್ ಫಾಲ್ಕೆ ಪ್ರಶಸ್ತಿ  _   ವಿ.ಕೆ.ಮೂರ್ತಿ         ಪ್ಯಾಸಾ, ಕಾಗಜ್ ಕೆ ಫೂಲ್, ಸಾಹಿಬ್ ಬೀಬಿ ಔರ್ ಗುಲಾಮ್, ಜುಗ್ನು, ಸೂರಜ್, ಲವ್ ಇನ್ ಟೋಕಿಯೊ, ಜಿದ್ದಿ, ಇನ್ನೂ ಅನೇಕ ಹಿಂದಿ ಚಲನಚಿತ್ರಗಳ ಛಾಯಾ ಗ್ರಾಹಕ ವಿ.ಕೆ ಮೂರ್ತಿಯವರ ಹೆಸರನ್ನು ಕೇಳದೆ ಇರುವವರು ಯಾರು ಇಲ್ಲ ಎಂದು ಖಂಡಿತವಾಗಿ ಹೇಳಬಹುದು. ಬಹಾರೋ ಫೂಲ್ ಬರ್ಸಾವೊ, ಚೌದವೀಂ ಕಾ ಚಾಂದ್  ಹೊ, ವಕ್ತ್ ನೇ ಕಿಯಾ,  ಸಾಯೊನಾರ, ಹಾಡುಗಳ ರಮ್ಯ ದೃಶ್ಯಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಮತ್ತೆ ಮತ್ತೆ ನೋಡಿದಷ್ಟೂ ಇನ್ನೂ ನೋಡಬೇಕೆಂಬ ಹಂಬಲ, ಇದರ ರಹಸ್ಯ ಗುರುದತ್ ಫಿಲಮ್ಸ್ .ವಿ.ಕೆ ಮೂರ್ತಿ ಯವರ ಅಧ್ಭುತ ಛಾಯಾಗ್ರಹಣ ಚಮತ್ಕಾರ.      ಇತ್ತೀಚೆಗೆ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಪಡೆದ ವಿ.ಕೆ. ಮೂರ್ತಿಯವರ ಪರಿಚಯ ಎಲ್ಲರಿಗೂ ಇರುವ ಸಂಗತಿ. ಇಷ್ಟು ಪ್ರಸಿದ್ದವಾದ ದೊಡ್ಡ ಪುರಸ್ಕಾರವನ್ನು ಗಳಿಸಿರುವ ಇವರಿಗೆ  ಸಿಂಗಾರಿ ಪರವಾಗಿ ನಮ್ಮ ಅಭಿನಂದನೆಗಳನ್ನು ಸಲ್ಲಿಸೋಣ.  ಈ ಸಣ್ಣ ಲೇಖನವನ್ನು ಬರೆಯುವ ಮುನ್ನ ವಿ.ಕೆ. ಮೂರ್ತಿಯವರ ಮನೋರಂಜಕ, ಸರಳ,  ಆದರ್ಶ ಜೀವನ ಚರಿತ್ರೆಯನ್ನು ಪುಸ್ತಕದ ರೂಪದಲ್ಲಿ ಕನ್ನಡಿಗರಿಗೆ ನೀಡಿರುವ ಶ್ರೀಮತಿ ಉಮಾರಾವ್ ಅವರಿಗೆ ವಂದನೆಗಳನ್ನು ಅರ್ಪಿಸೋಣ.  –ಬಿಸಿಲು ಕೋಲು– ಎಂಬ ಹೆಸರಿನಲ್ಲಿ ಪ್ರಕಟವಾಗಿರುವ ಈ ಪುಸ್ತಕವನ್ನು ವಿ.ಕೆ.ಮೂರ್ತಿಯವರ ಕೈನಿಂದಲೇ ಪಡೆದದ್ದು ನನ್ನ ಭಾಗ್ಯ.  “ಕುಟ್ಟಿ ” ಇದು ಬಂಧು ಮಿತ್ರರು ಇವರನ್ನು ಪ್ರೀತಿಯಿಂದ ಕರೆಯುವ ಹೆಸರು.  ಪಾರ್ಥನಾರಾಯಣ ಪಂಡಿತರ ಮಗಳಾದ ಸಂಧ್ಯ ಇವರ ಪತ್ನಿ, ನನ್ನ ಸೋದರತ್ತೆಯ ಮಗಳೆಂದು ಹೇಳಲು ಹೆಮ್ಮೆಯಾಗುತ್ತದೆ. ಇವರ ಏಕಮಾತ್ರ ಪುತ್ರಿ ಛಾಯಾ.    ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ವಿ.ಕೆ. ಮೂರ್ತಿಯವರ ವ್ಯಕ್ತಿತ್ವ.  ಈ ಕೆಳಗಿನ ಸಾಲುಗಳು ಅವರ ಲೇಖನ ದಿಂದ ಸೃಷ್ಠಿಯಾಗಿರುವ  ಸರ್ವಜ್ಞನ ಶೈಲಿ ಯಲ್ಲಿ ಬರೆದಿರುವ ಪದ್ಯ, ಇದೇ ಅವರ ಜೀವನದ ಶೈಲಿ. ಈ ಅರ್ಥ ತುಂಬಿದ ಪದ್ಯ  ಅವರು ಕವಿಗಳೂ ಹೌದು ಎಂದು ಸಾರುತ್ತದೆ.           ಸಾರು ಸಾರೆಂದೇಕೆ ಸೊರಗುವೆ         ಸಾರಿದರೆ ಸಿರಿ ಸೊರಗುವುದೇ ಸರಿ         ಸಾರದೆಯೆ ಸಲ್ಲಿಸೊ ಸೇವೆ ಸರ್ವಗ್ನ    ನನಗೆ ಕುಟ್ಟಿಯವರ ಪರಿಚಯ ನಾನು ಮದುವೆ ಯಾದ ಮೇಲೆ ಮುಂಬಯಿಗೆ ಬಂದಾಗಿಂದ,  “ಸಿಂಪಲ್ ಲಿವಿಂಗ್ ಅಂಡ್  ಹೈ ಥಿಂಕಿಂಗ್” ,  ತತ್ವದ ನನ್ನ ಪತಿ ವೆಂಕಟೇಶ್ ಅವರು ಮುಂಬೈ ನಲ್ಲಿ ಕೆಲಸಕ್ಕೆ ಸೇರಿದಾಗಿನಿಂದ ಅಂದರೆ ೩೦ ವರ್ಷಗಳಿಂದ ಇವರ ಸಂಗದಲ್ಲೆ ಬೆಳೆದವರು. ಏಕೆಂದರೆ ಇಬ್ಬರೂ  ಒಂದೆ  ನಾವೆಯ ಪಯಣಿಕರು, ಹೆಚ್ಚು ಮಾತಿಲ್ಲದ, ಬೂದಿ ಮುಚ್ಚಿದ ಕೆಂಡದಂತಹ ಸ್ವಭಾವದವರು.  ಹೆಸರಾಂತ ನಟ ನಟಿಯರ, ಚಲನಚಿತ್ರ ರಂಗದ ಮಿತ್ರರ ಹುಟ್ಟಿದ ಹಬ್ಬಕ್ಕೆ ಕೊಡಬೇಕಾಗಿದ್ದ ಗಿಫ್ಟ್ ಪ್ಯಾಕೆಟ್ಗಳನ್ನು  ವೆಂಕಟೇಶ್ ಅವರು ತಯಾರಿಸಿದಾಗಲೆ ಕುಟ್ಟಿಗೆ ಸಮಾಧಾನವಾಗುತ್ತಿತ್ತಂತೆ!        ‘ದೇವಿನಿವಾಸ’ ಇವರ ಮುಂಬಯಿ ಮನೆ ಅತಿಥಿ ಸತ್ಕಾರ ಗಳ ದೇಗುಲವಾಗಿತ್ತೆಂದರೆ ಅತಿಶಯೋಕ್ತಿಯಲ್ಲ.  ೧೯೬೮ ರಲ್ಲಿ ನಾವು ಮದುವೆಯಾಗಿ ಮುಂಬಯಿಗೆ ಬಂದಾಗ ಮೈಸೂರಿನಲ್ಲಿ ಹುಟ್ಟಿ ಬೆಳೆದ  ನನಗಂತೂ ಎರಡು ಊರುಗಳ ಅಂತರ ಅಜಗಜಾಂತರವಾಗಿತ್ತು. ಮುಂಬಯಿಗೆ ಬಂದ ದಿನ ಮೊದಲು ನಾವು ಹೋಗಿದ್ದು ಸಂಧ್ಯ ಕುಟ್ಟಿ ಯವರ ಮನೆಗೆ . ಆಲ್ಲಿ ನಮಗೆ ದೊರಕಿದ ಅತಿಥಿ ಸತ್ಕಾರ ಇಂದಿಗೂ ಮರೆತಿಲ್ಲ.                               ಮುಂದೆ ಕೊಲಾಬ ಮನೆಯಲ್ಲಿ ಇದ್ದಾಗಲೂ ವಾರಕ್ಕೊಮ್ಮೆ ಕುಟ್ಟಿ, ಸಂಧ್ಯಾ ಅವರನ್ನು ನೋಡಲು ತಪ್ಪದೆ ಹೋಗುತ್ತಿದ್ದೆವು. ಕುಟ್ಟಿಯವರು ಸಂಗೀತ ಪ್ರಿಯರು,  ವಯಲಿನ್, ಸಿತಾರ್ ವಾದ್ಯಗಳನ್ನು ಲೀಲಾಜಾಲವಾಗಿ  ನುಡಿಸುತ್ತಾರೆ. ಸಂಗೀತ ಪ್ರೇಮಿ ಯಾದ ವೆಂಕಟೇಶ್, ಇವರು ನುಡಿಸುತ್ತಿದ್ದ ಸಿತಾರ್ ವಾದ್ಯದಿಂದ ಅಲೆಗಳಂತೆ  ಹೊರಬರುತ್ತಿದ್ದ  ಸ್ವರ, ಸಾಹಿತ್ಯವನ್ನು ಅವರ ಜೊತೆ ಆನಂದವಾಗಿ ಕೇಳುತ್ತಿದ್ದರು. ಛಾಯ, ಆಶ್ವಿನಿ, ಭಾರತಿ, ರಾಘು, ಮಾನಸ ಅವರ ವಿಶ್ವಾಸ ಪೂರ್ವಕ, ಹಾಸ್ಯದ ಹೊನಲ  ಮಾತುಕತೆಗಳೊಂದಿಗೆ, ಸಂಧ್ಯಾರವರ ರಸದೌತಣದ ಸವಿ ನೋಡುತ್ತಾ ಕಳೆದ ಗಳಿಗೆಗಳು ಇಂದಿಗೂ ಅಚ್ಚಿನಂತಿದೆ.                                 ಒಂದು ಸಾರಿ  ನಾನು ಶೂಟಿಂಗ್ ನೋಡಬೇಕೆಂದು ಆಸೆಪಟ್ಟಾಗ ಕುಟ್ಟಿ ನಮ್ಮನ್ನು ಸ್ಟುಡಿಯೊ ಗೆ ಕರೆದುಕೊಂಡು ಹೋದರು. ಶಿಕಾರ್ ಹಿಂದಿ ಚಿತ್ರಕ್ಕಾಗಿ ಇಡೀ ರಾತ್ರಿ ಚಿತ್ರೀಕರಣ. ಪ್ರಸಿದ್ಧ ನಟ ಧರ್ಮೇಂದ್ರ, ಪ್ರಸಿದ್ಧ ನಟಿ ಆಶಾಪರೇಖ್ ಅವರನ್ನು ನೋಡಿದ ನಾವೇ ಧನ್ಯರು. ಆಗಿನ ಕಾಲದಲ್ಲಿ ಧರ್ಮೇಂದ್ರ ಎಂದರೆ ನಮ್ಮ ಅಚ್ಚುಮೆಚ್ಚಿನ ನಟ.. ಅವರ ಸಿನಿಮಾ ಬಿಡುಗಡೆಯಾದ ಮೊದಲನೆ ದಿನ ನೋಡುವುದೆಂದರೆ ಜೇವನದಲ್ಲಿ ಏನನ್ನೊ ಸಾಧಿಸಿದಷ್ಟು ಸಂತೋಷ.  ಕಾಲೇಜ್ ತಪ್ಪಿಸಿ ಮಾರ್ನಿಂಗ್ ಶೋ ಗೆ ಓಡುತ್ತಿದ್ದುದು ಇಂದಿಗೂ ನೆನಪು.   ಶೂಟಿಂಗ್ ನೋಡಿದ ಮೇಲೆ  ಹತ್ತಿರ ನಟ ನಟಿಯರನ್ನು ನೋಡಿದ ಅವಕಾಶ, ಅಬ್ಬಾ ಯಾರಿಗುಂಟು ಯಾರಿಗಿಲ್ಲ, ಈ ಸುವರ್ಣಾವಕಾಶ  ಕಲ್ಪಿಸಿದ  ಕುಟ್ಟಿಯವರಿಗೆ ಇಂದಿಗೂ ಚಿರಋಣಿ.   ನನ್ನ ಅಭಿಮಾನ  ಕುಟ್ಟಿಯವರ ಜೀವನದ ಬಗ್ಗೆ, ಅವರ ಚಿತ್ರ ರಂಗದ ಪ್ರವೇಶ, ಕಡಲ ಉಬ್ಬರವಿಳಿತಗಳಂತೆ ಹಾಸು ಹೊಕ್ಕಾಗಿ ಬಂದ ಇವರ ಪ್ರವೃತ್ತಿಯ ಬಗ್ಗೆ ಬರೆಯಲು ಆಶಿಸುತ್ತಿದೆ. ಈ ಕೆಳಗಿನ ಸಾಲುಗಳನ್ನು ಬರೆಯಲು ಆಧಾರ ಉಮಾರಾವ್ ಅವರ ಬಿಸಿಲು ಕೋಲು ಪುಸ್ತಕ. ಶ್ರೀ ವೆಂಕಟರಾಮ್ ಪಂಡಿತ್ ಕೃಷ್ಣ ಮೂರ್ತಿಯವರ ಜನನ ೧೯೨೨ ನೇ ಇಸವಿ ನವೆಂಬರ್ ೨೬ ನೇ ತೇದಿ. ಹುಟ್ಟಿದ ಊರು ಗಂಧದ ಗುಡಿ ಮೈಸೂರು. ತಂದೆ ವೆಂಕಟರಾಮ ಪಂಡಿತ್ ಆಯುರ್ವೇದ ದ ವೈದ್ಯರಾಗಿದ್ದರು. ತಾಯಿಯವರ ಹೆಸರು ನಾಗಮ್ಮ.  ಐದು ಜನ ಮಕ್ಕಳ ಈ  ದಂಪತಿಗಳಿಗೆ ವಿ.ಕೆ. ಮೂರ್ತಿ ಯವರು ಮೂರನೆ ಮಗ. ಇವರ ಬಾಲ್ಯ ಸಂಪಿಗೆ ಮರಗಳ ನಡುವೆ ಇದ್ದ ಒಂದು ಸುಂದರ ಮನೆಯ ವಾತಾವರಣದಲ್ಲಿ. ಒಬ್ಬರು ಆಣ್ಣ ಮೂರು ಜನ ತಂಗಿಯರ ಜೊತೆ ತಂದೆ ತಾಯಿಯ ಅಕ್ಕರೆಯಲ್ಲಿ. ಬೆಳೆಯುತ್ತಿದ್ದಂತೆ ಬರಸಿಡಿಲು ಬಡಿದಂತೆ ಇವರ ತಾಯಿ ಚಿಕ್ಕವಯಸ್ಸಿನಲ್ಲೆ ಸಾವನ್ನೊಪ್ಪಿದರು. ಅವರ ತಂಗಿಯರು ದೊಡ್ಡಮ್ಮನ ಮನೆ ಸೇರಿದರು.  ಹೀಗಾಗಿ ಕುಟ್ಟಿ ತಂದೆಯ ಆಸರೆಯಲ್ಲೆ ಬೆಳೆದವರು. ಪುಟ್ಟ ಮೂರ್ತಿಯವರಿಗೆ ಮನೆಯಲ್ಲಿ ಹೆಂಗಸರಿಲ್ಲದಿದ್ದ ಕಾರಣ ದೊಡ್ಡ ಅಡುಗೆ ಜವಾಬ್ದಾರಿ. ಬೆಳೆಯುವ ಸಸಿ ಮೊಳಕೆಯಲ್ಲೆ ಎಂಬಂತೆ ತಾವೆ ಪ್ರೆಶರ್ ಕುಕರ್ ತಯಾರಿಸಿ ಕೊಂಡಿದ್ದರಂತೆ!   ಚಿತ್ರರಂಗದ ಕಡೆ ಮನಸ್ಸು ಹರಿಯಲು ಕಾರಣ ಅವರ ನೆಂಟರೊಬ್ಬರಾದ ಸುಬ್ಬರಾಮಯ್ಯ ಅನ್ನುವವರಿಂದ. ಆಗಿನ ಕಾಲದಲ್ಲಿ ಮೂಕಿ ಚಿತ್ರಗಳು ಇದ್ದಿದ್ದರಿಂದ ಸಿನಿಮ ಸನ್ನಿವೇಶಗಳಿಗೆ ಕಳೆ ತುಂಬಲು ತೆರೆಯ ಹಿಂದೆ ವಾದ್ಯ ಸಂಗೀತ ನುಡಿಸುತ್ತಿದ್ದರಂತೆ.  ಇದರಲ್ಲಿ ಸುಬ್ಬ ರಾಮಯ್ಯ ವಾದ್ಯಗಳನ್ನು ನುಡಿಸುತ್ತಿದ್ದವರು.  ಚಿತ್ರ ನೋಡಲು ಇವರ ಆಹ್ವಾನ ಕುಟ್ಟಿಯವರಿಗೆ ಬಹಳ ಸಂತಸದ ಸುದ್ದಿ. ಈ ಆಹ್ವಾನವೆ ಇವರ ಜೀವನದ ಹಾದಿಗೆ ನಾಂದಿಯಾಯಿತೇನೊ!  ಚಿತ್ರರಂಗ, ಮೂಕಿಯಿಂದ ಟಾಕಿಗೆ ಬದಲಾಯಿಸಿದಾಗ ರಾಜಕೀಯ, ಸಾಮಾಜಿಕ, ಆಕ್ಶನ್ ಸಿನಿಮಾಗಳನ್ನು ನೋಡುವ ಅವಕಾಶ ಬಾಲಕ ಕುಟ್ಟಿಯವರಿಗೆ ಲಭಿಸುತ್ತಿತ್ತಂತೆ.     ಇವರ ವಿದ್ಯಾಭ್ಯಾಸ ಬನುಮಯ್ಯ ಮಾಧ್ಯಮಿಕ ಶಾಲೆ ಮತ್ತೆ ಶಾರದಾವಿಲಾಸ ಹೈಸ್ಕೂಲಿನಲ್ಲಿ. ಕ್ರಿಕೆಟ್, ಫುಟ್ ಬಾಲ್, ಚಿಣ್ಣೀ ದಾಂಡು ಇವರ ಮೆಚ್ಚಿನ ಆಟಗಳು. ಜೊತೆಗೆ ಈಜು ಕೂಡ ಇವರಿಗೆ ಪ್ರಿಯ. ಹೆಂಗಸರ ಜೊತೆ ಮಾತಾಡುವುದಕ್ಕೆ ನಾಚುತ್ತಿದ್ದ ಮೂರ್ತಿ ಯವರು ಮುಂದೆ ಪ್ರಸಿದ್ಧ ಹೆಸರಾದ ನಟಿಯರ ಜೊತೆ ಕೆಲಸ, ಅಬ್ಬ ಇದಕ್ಕೆ ಹೇಳುವುದು –ಲೈಫ್ ಈಸ್ ಎ ಮಿಸ್ಟರಿ– ಅಂತ.   ಕಲಾವಿದ ಮೂರ್ತಿಯವರಿಗೆ ಸಂಗೀತ ಕಲಿಯಲು ಆಸೆ ಮೂಡಿದ್ದರಿಂದ ಪಿಟೀಲು ವಾದ್ಯ ಕಲಿಯಲು ಆರಂಭ, ಮತ್ತೆ ಸ್ನೇಹಿತರನ್ನೆಲ್ಲ ಕೂಡಿಸಿ ಆರ್ಕೆಸ್ಟ್ರಾ ಆರಂಭ ಮಾಡಿದರಂತೆ. ಒಂದು ಸಾರಿ ಪ್ರಸಿದ್ಧ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರ ಇರುವಿನಲ್ಲಿ ವಾದ್ಯ ಸಂಗೀತ ನುಡಿಸುವ ಅವಕಾಶ, ರಾಮನ್ ಅವರ ಹೊಗಳಿಕೆ ಇವರ ಸಂಗೀತದ ಆಸಕ್ತಿಯನ್ನು ಇಮ್ಮಡಿಸಿತ್ತು.   ಮುಂದೆ ಒಂದು ಪತ್ರಿಕೆಯ ಸಣ್ಣ ಜಾಹೀರಾತು ಇವರನ್ನು ಮುಂಬಯಿ ಕಡೆಗೆ ಸೆಳೆಯಿತಂತೆ.  ಆ ಜಾಹಿರಾತು ಅಲ್ಲಿ ಮೂವೀ ಟೋನ್ ಕಾಲೇಜಿನವರು ಛಾಯಾ ಗ್ರಹಣದಲ್ಲಿ ತರಬೇತು ನೀಡುತ್ತೇವೆ  ಎಂದು  ಸಾರಿದ್ದರಂತೆ. ಚಿತ್ರರಂಗದ ಆಕರ್ಷಣೆ  ಮುಂಚಿಂದಲೆ ಇದ್ದ ಕುಟ್ಟಿ ಯವರಿಗೆ ಇದು ಕಬ್ಬಿಣ ಅಯಸ್ಕಾಂತವನ್ನು ಆಕರ್ಷಿಸಿದಂತೆ  ಎಂದು ಬೇರೆ ಹೇಳಬೇಕಿಲ್ಲ. ಮುಂಬಯಿಗೆ ಅಣ್ಣಾ ಅತ್ತಿಗೆಯವರ ಉತ್ತೇಜನದಿಂದ ಹೊರಟರೆ ಅಲ್ಲಿ ಮುಂದೆ ಆಗಿದ್ದು ದೊಡ್ಡ ನಿರಾಸೆ, ಅದು ಒಂದು ಮೋಸದ ಜಾಹೀರಾತು. ಮುಂಬಯಿನಲ್ಲಿ ನೆಂಟರ ಮನೆಯಲ್ಲಿ ಮೂರು ತಿಂಗಳು ವಾಸದ ನಂತರ ಮೈಸೂರಿಗೆ ವಾಪಸ್ಸು ಬಂದಾಗ ಆಗಲೆ ಕ್ವಿಟ್ ಇಂಡಿಯ ಚಳುವಳಿ ಆರಂಭ. ದೇಶಪ್ರೇಮದಿಂದ ಚಳುವಳಿಯಲ್ಲಿ ಭಾಗವಹಿಸಿದಾಗ ಮೂರು ತಿಂಗಳು ಜೈಲು ವಾಸದ ಅನುಭವ. ಅಲ್ಲೂ ಕೂಡ ಲೀಡರ್ ಆಗಿ ಎಷ್ಥೋ ಖೈದಿಗಳಿಗೆ ಸಹಾಯ ಮಾಡುತ್ತಿದ್ದರಂತೆ.   ಇವರ ಮುಂದಿನ ಹೆಜ್ಜೆ ಜಯಚಾಮರಾಜೇಂದ್ರ ಆಕ್ಯುಪೇಷನಲ್ ಇನ್ಸ್ಟಿಟ್ಯೂಟ್ ಗೆ ಮೈಸೂರಿಂದ ಬೆಂಗಳೂರಿಗೆ ಪಯಣ, ಕಾರಣ ಅಲ್ಲಿ ಇವರಿಗೆ ಪ್ರಿಯವಾದ ಸಿನಿಮಟೋಗ್ರಫಿಯಲ್ಲಿ ತರಬೇತು ನೀಡುತ್ತಿದ್ದರು. ಒಂದು ಸಣ್ಣ ಕ್ಯಾಮರ ಮೂಲಕ ಪಾಠ ಹೇಳುತ್ತಿದ್ದರಂತೆ. ಆ ಕ್ಯಾಮರಾನ ವಿದ್ಯಾರ್ಥಿಗಳು ದೂರದಿಂದಲೆ ನೋಡಬೇಕಾಗಿತ್ತು ಅನ್ನುತ್ತಾರೆ  ಕುಟ್ಟಿಯವರು, ಆದರೆ ಮುಂದೆ ದೊಡ್ಡ ದೊಡ್ಡ ಕ್ಯಾಮರಾ ಗಳು ಕಪ್ಪು ಬಿಳುಪು ಗಳಿಂದ ಮುಂದೆ ಸೌಂದರ್ಯ ಬಣ್ಣ ಗಳಿಂದ ಅವರ ಕೈಚಳಕದಿಂದಲೇ ಮೆರೆದವು. ಆಬ್ಬ ಆ ಕ್ಯಾಮರಗಳ ಅದೃಷ್ಟ ಯಾರಿಗಿದೆ!.   ಇಲ್ಲಿಯ ಕೋರ್ಸ್ ಮುಗಿಯುತ್ತಿದ್ದಂತೆ ಸರ್ಟಿಫಿಕೇಟ್ ಪಡೆಯಲು ಟ್ರೈನಿಂಗ್ ಗಾಗಿ ಮುಂಬಯಿಗೆ ಪ್ರಯಾಣ. ಅಲ್ಲಿ ಕೆಲಸ ಕಲಿಯಲು ಸೇರಿದ್ದು  ಪ್ರಕಾಶ್ ಸ್ಟುಡಿಯೊ. ಅಲ್ಲಿಂದ ಮುಂದಿನ ಹೆಜ್ಜೆ ಫಲಿಮಿಸ್ತ್ರಿ ಗೆ ಸಹಾಯಕರಾಗಿ ಕೆಲಸ ಮಾಡಿದ್ದು.   ಚಿತ್ರರಂಗದ ಜೊತೆಯಲ್ಲಿ ರಂಗ ಭೂಮಿ ಆಕರ್ಷಣೆ ಕೂಡ! ಇದಕ್ಕೆ ನಾಂದಿ ಮೈಸೂರ್ ಅಸೊಸಿಯೇಶನ್ ನಲ್ಲಿ ಗಗ್ಗಯ್ಯನ ಗಡಿಬಿಡಿ ನಾಟಕ ನಿರ್ದೇಶಿಸಿದ್ದು. ಹಾಗೆಯೆ ಕನ್ನಡ ಗೀತೆಗಳನ್ನು ಹಾಡುವ ಆಸಕ್ತಿ. ಒಂದು ಸಾರಿ ದ.ರ. ಬೇಂದ್ರೆ ಯವರ ಸನ್ನಿಹದಲ್ಲಿ ಮುಂಬಯಿ ಪೋದಾರ್ ಕಾಲೇಜಿನಲ್ಲಿ, ಆ ಕವಿಯೇ ಬರೆದ ಕವಿತೆ ಮೂಡಲ ಮನೆಯ ಮುತ್ತಿನ ನೀರಿನ, ಹಾಡುವ ಅವಕಾಶ. ನಿಜಕ್ಕು ಕುಟ್ಟಿಯವರು ಜಾಕ್ ಆಫ್ ಆಲ್ ಟ್ರೇಡ್ಸ್ಲ್!   ನವೆಂಬರ್ ೨೬, ೧೯೬೧ ಇಸವಿಯಲ್ಲಿ ಪಾರ್ಥನಾರಾಯಣ ಪಂಡಿತ್, ನಮ್ಮ ತಂದೆಯವರ ಸಹೋದರಿ ರತ್ನಮ್ಮ ಅವರ ಮಗಳಾದ ಸಂಧ್ಯ ಅವರೊಡನೆ ತಿರುಪತಿಯಲ್ಲಿ ವಿವಾಹ, ಮತ್ತೆ ಮುಂಬಯಿ ಯ ಗಡಿ ಬಿಡಿ ಜೀವನ. ಕುಟ್ಟಿಯವರಷ್ಟೇ ಕಲೆಯಲ್ಲಿ ಆಸಕ್ತಿ ಇದ್ದ ಸಂಧ್ಯಾಗೆ ಅವರೇ ಹೇಳಿರುವಂತೆ ಯಾವ ತರಹ ಲಕ್ಶ್ಮಣ ರೇಖೆಗಳಿಲ್ಲದ ಕಲಾಜೀವನಕ್ಕೆ ಕುಟ್ಟಿಯವರ ಉತ್ತೇಜನ ಇತ್ತಂತೆ. ಬಂಧು ಮಿತ್ರರಿಗೆಲ್ಲಾ ಸಂಧ್ಯಾ  ಎಂದರೆ ಬಹಳ ಗೌರವ ಹಾಗೂ ಪ್ರೀತಿ, ನನ್ನ ಪತಿ ವೆಂಕಟೇಶ್ ಇವರನ್ನು ಪ್ರೀತಿ ಇಂದ ದೀದಿ ಎಂದೆ ಕರೆಯುತ್ತಿದ್ದರು. ಇಬ್ಬರೂ ಕಣ್ಮರೆಯಾಗಿದ್ದು  ನಮ್ಮ ದುರಾದೃಷ್ಟ.   ೧೯೫೦ ನೆ ಇಸವಿಯಲ್ಲಿ ಗುರುದತ್ ಮತ್ತು ಕುಟ್ಟಿ ಯವರ ಮೊದಲ ಭೇಟಿ, ಅದು ಅವರು ಅಫ್ಸರ್ ಅನ್ನುವ ಚಿತ್ರದಲ್ಲಿ ಕ್ಯಾಮರಾಮನ್ ಆಗಿ ಕೆಲಸ ಮಾಡುತ್ತಿದ್ದಾಗ, ಇವರಿಬ್ಬರ ಪರಿಚಯ ಮಾಡಿಸಿದವರು ಪ್ರಸಿದ್ಧ ನಟ ದೇವಾನಂದ್ ಅವರು, ಗುರುದತ್ ಮತ್ತು  ದೇವಾನಂದ್ ಮೆಚ್ಚಿನ ಗೆಳೆಯರಾಗಿದ್ದರಂತೆ. ಕುಟ್ಟಿಯವರ ಕೆಲಸ ಗಮನಿಸುತ್ತಿದ್ದ ಹಾಗೆ ಗುರುದತ್ ಹೇಳಿದರಂತೆ, -“ಮೂರ್ತಿ ನನ್ನ ಮುಂದಿನ ಚಿತ್ರದಲ್ಲಿ ನಾವಿಬ್ಬರೂ ಸೇರಿ ಒಟ್ಟಿಗೆ ಕೆಲಸ ಮಾಡೋಣ” ಎಂದು,  ಗುರುದತ್

ಪ್ರಸ್ತುತ

ಕೆಲ ಪುರುಷರಿಗೆ ಕಪ್ಪು ಇರುವೆ ತುಂಬಾ ಇಷ್ಟ… ಇಂಗ್ಲೀಷ್ ಮೂಲ: ಅಜಿತ ಘೋರ್ಪಡೆ   ಕನ್ನಡಕ್ಕೆ: ಚಂದ್ರಪ್ರಭ ಬಿ. ಕೆಲ ಪುರುಷರಿಗೆ ಕಪ್ಪು ಇರುವೆ ತುಂಬಾ ಇಷ್ಟ… ಹೆಣ್ಣು ಮಕ್ಕಳನ್ನು ಕೆಂಪು ಇರುವೆಗೆ ಹೋಲಿಸುವ ಕೆಲವೇ ಕೆಲವು ಜನ ನಮ್ಮ ನಡುವಿದ್ದಾರೆ ಈ ವ್ಯಕ್ತಿಯಿಂದ ತನಗೆ ಅಪಾಯವಿದೆಯೆಂದು ಅರಿತಾಕ್ಷಣ ಆ ವ್ಯಕ್ತಿ ಯಾರೆಂಬುದನ್ನು ನೋಡದೆ ಅವರನ್ನು ಕೆಂಪು ಇರುವೆ ಕಚ್ಚಿಬಿಡುತ್ತದೆ. ಜನರೂ ಅಷ್ಟೇ, ಕೆಂಪು ಇರುವೆಯನ್ನು ಕಂಡೊಡನೆ ವ್ಯಗ್ರರಾಗಿ ಅದನ್ನು ಮುಗಿಸಿ ಬಿಡಲು ಹಾತೊರೆಯುತ್ತಾರೆ. ಅಷ್ಟೇ ಅಲ್ಲ ಅಕ್ಷರಶಃ ಅದನ್ನು ಹೊಸಕುವ ಮೂಲಕ ತಮ್ಮ ಶಕ್ತಿ, ಸಾಮರ್ಥ್ಯ ತೋರಿಸುವ ಪ್ರಯತ್ನ ಮಾಡುತ್ತಾರೆ. ಕೆಲವು ಪುರುಷರು ಹೀಗೂ ಇರುತ್ತಾರೆ, ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ,ಪ್ರತಿಕ್ರಿಯಿಸುವ ದಿಟ್ಟತನದಿಂದ ಎದೆಯೊಡ್ಡಿ ನಿಲ್ಲುವ ಹೆಣ್ಣು ಮಕ್ಕಳು ಅವರಿಗೆ ಇಷ್ಟವಾಗುವುದಿಲ್ಲ. ಇಂಥವರನ್ನು  ಅವರು ವ್ಯವಸ್ಥಿತವಾಗಿ ಹತ್ತಿಕ್ಕುವ ಪೂರ್ಣ ಪ್ರಯತ್ನ ಮಾಡುತ್ತಾರೆ. ಅದಕ್ಕಾಗಿ ಅವರು ಹೆಣ್ಣು ಮಕ್ಕಳೆಡೆಗಿನ ತಮ್ಮ ಪೂರ್ವಾಗ್ರಹ ಹಾಗೂ ತಿರಸ್ಕಾರಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ. ಥೇಟ್ ಕೆಂಪಿರುವೆಗಳನ್ನು ಹೊಸಕುವ ರೀತಿಯಲ್ಲೇ ಇವರನ್ನೂ ಹೊಸಕಬಯಸುತ್ತಾರೆ.  ಹಾಗಂತ ನಾನು ಹೆಣ್ಣು ಮಕ್ಕಳು ಅಶಕ್ತರು ಅಂತ ಹೇಳುತ್ತಿರುವೆ ಅಂದುಕೊಳ್ಳದಿರಿ. ಇದು ದೈಹಿಕ ಬಲಿಷ್ಠತನದ ಪ್ರಶ್ನೆಯೇ ಅಲ್ಲ‌. ಹೆಣ್ಣು – ಗಂಡು ಹುಟ್ಟುತ್ತಲೇ ದೈಹಿಕವಾಗಿ ವಿಭಿನ್ನತೆ ಪಡೆದು ಬಂದವರು. ಅದರಾಚೆಗಿನ ಕೌಶಲಗಳನ್ನೆಲ್ಲ ನಾವು ಹೇಗೆ ಗ್ರಹಿಸುತ್ತೇವೆ, ಅಳವಡಿಸಿಕೊಳ್ತೇವೆ ಎಂಬುದರ ಮೇಲೆ ಅವು ನಮಗೆ ಪ್ರಾಪ್ತವಾಗುತ್ತವೆ.. ಆದರೆ ಕೆಲವು ಗಂಡಸರು ಹೆಣ್ಣು ಮಕ್ಕಳು ಕಪ್ಪು ಇರುವೆಗಳಂತೆ ತಮ್ಮ ಅಧೀನತೆಗೆ ಒಳಗಾಗಿರಬೇಕೆಂದು ಬಯಸುತ್ತಾರೆ.‌ ತಮ್ಮನ್ನು ಹೊಸಕುವ ಪ್ರಯತ್ನ ನಡೆದಾಗಲೂ ಸಹ ಅವರು ಗಂಡಸರಿಗೆ ವಿಧೇಯರಾಗಿ ವಿನಮ್ರತೆಯಿಂದ ನಡೆದುಕೊಳ್ಳಬೇಕು ಎಂದು ಬಯಸುತ್ತಾರೆ. ನನಗೆ ಅತ್ಯಂತ ಆತ್ಮೀಯರಾಗಿರುವ ಒಬ್ಬರ ಉದಾಹರಣೆ ಮೂಲಕ ಇದನ್ನು ಹೇಳಬಯಸುವೆ. ನನ್ನ ಒಬ್ಬ ಗೆಳತಿಗೆ ಒಬ್ಬ ಆಪ್ತ ಮಿತ್ರನಿದ್ದ. ಅವ ತನಗೆ ಮೋಸ ಮಾಡುತ್ತಿದ್ದಾನೆ ಅಂತ ಅನ್ನಿಸಿದಾಗ ಆಕೆ ಅದನ್ನು ಪ್ರಶ್ನಿಸಿದಳು. ಅದಕ್ಕೆ ಆತ ತಪ್ಪೊಪ್ಪಿಕೊಂಡು ತಿದ್ದಿಕೊಳ್ಳಲು ಒಂದು ಅವಕಾಶ ಕೊಡಲು ಕೇಳಿದ. ಈಕೆ ಒಪ್ಪಿದಳು. ಆದರೆ ಅದಕ್ಕೆ ಮುನ್ನ ಆತ, ಆಕೆ ಸಕ್ರಿಯವಾಗಿದ್ದ ಎಲ್ಲಾ ಸಾಮಾಜಿಕ, ಜಾಲತಾಣಗಳ ಚಾಟ್ ಮಾಡುವ ಇನ್ ಬಾಕ್ಸುಗಳನ್ನು ಜಾಲಾಡಿ ನೋಡಿದ ಆಕೆ ತನಗೆ ‌ಮೋಸ ಮಾಡುತ್ತಿಲ್ಲವಷ್ಟೇ ಎಂದು ಖಾತ್ರಿ ಪಡಿಸಿಕೊಳ್ಳಲು. ಎಲ್ಲೂ ಅಂಥದು ಅವನಿಗೆ ಸಿಗಲಿಲ್ಲ. ಆದರೆ ಇನ್ನೊಬ್ಬ ಆಕೆಯ ಆಪ್ತ ಗೆಳೆಯ ಒಂದೆಡೆ ಆಕೆಯನ್ನು ಡಿಯರ್ ಅಂತ ಸಂಭೋಧಿಸಿದ್ದ. ಹಾಗೆ ಸಂಭೋಧಿಸಲು ಆಕೆ ಆ ಇನ್ನೊಬ್ಬನಿಗೆ ಅದ್ಹೇಗೆ ಅವಕಾಶ ಕೊಟ್ಟಳೆಂದು ಕೇಳಿದ. ಅಷ್ಟೇ ಅಲ್ಲ ಮತ್ತೆ ಮತ್ತೆ ಆಕೆಗೆ ವಿಶ್ವಾಸದ್ರೋಹ ಮಾಡಿದ. ಇಷ್ಟೆಲ್ಲಾ ಆದ ಬಳಿಕ ಆಕೆ ಇವನನ್ನು ತೊರೆದು ಇನ್ನೊಬ್ಬ ಗೆಳೆಯನೊಂದಿಗೆ ಆಪ್ತವಾದಳು. ಆದರೆ ಆಕೆಯ ಮಾಜಿ ಗೆಳೆಯನಿಗೆ ಇದನ್ನು ಸಹಿಸಿಕೊಳ್ಳಲಾಗಲಿಲ್ಲ. ಅವನೊಬ್ಬ ವಿಕೃತ ಮನಸ್ಸಿನವನಾಗಿದ್ದ. ಆಕೆಯ ಹೊಸ ಗೆಳೆಯನಿಗೆ ಅನಾಮಧೇಯವಾಗಿ ಬೇರೆ ಬೇರೆ ಮಾಧ್ಯಮಗಳ ಮೂಲಕ ಅವಳನ್ನು ಕುರಿತು ಸಂದೇಶ ಕಳಿಸಿದ. ಆಕೆ ಕನ್ಯತ್ವ ಕಳೆದುಕೊಂಡವಳೆಂಬ ಕೀಳು ಮಾತನ್ನು ಬರೆದ. ಆಕೆ ಕಳಂಕಿನಿ ಅಂದ. ಸಿಕ್ಕ ಸಿಕ್ಕ ಸಾರ್ವಜನಿಕ ಶೌಚಾಲಯಗಳ ಗೋಡೆಗಳ ಮೇಲೆ ಆಕೆಯ ಫೋನ್ ನಂಬರ್ ಬರೆಯುತ್ತೇನೆಂದು ಬೆದರಿಸಿದ. ಅವಳನ್ನು ಹೀನಾಯಗೊಳಿಸುವ ಎಲ್ಲ ಅವಕಾಶಗಳನ್ನೂ ಬಳಸಿಕೊಂಡ. ಇದಾವುದಕ್ಕೂ ಸೊಪ್ಪು ಹಾಕದ ಹುಡುಗಿ ತನ್ನ ದಾರಿಯಲ್ಲಿ ತಾ ಮುಂದೆ ಸಾಗಿದಳು. ಇಲ್ಲಿ ಹುಟ್ಟುವ ಪ್ರಶ್ನೆ ಏನೆಂದರೆ ತಾನು ಇನ್ನೊಬ್ಬ ಹುಡುಗಿ ಜೊತೆ ಹೋದ ಬಳಿಕ ಮೊದಲಿನ ತನ್ನ ಗೆಳತಿ ಯಾರೊಂದಿಗೆ ಹೋದರೆ ಇವನಿಗೆ ಏನಾಗಬೇಕು? ಅದನ್ನು ನೋಡಿ ಸಹಿಸುವುದು ಅವನಿಗೆ ಸಾಧ್ಯವಿರಲಿಲ್ಲ ಎಂಬುದು ಬಹು ಮುಖ್ಯ ಸಂಗತಿ.  ತನ್ನ ಗೆಳತಿ ಕೈಯಲ್ಲಿ ತಾನೇ ಪುರಾವೆ ಸಹಿತ ಸಿಕ್ಕಿ ಹಾಕಿಕೊಂಡ ಮೇಲೂ ಆತನ ವರ್ತನೆಯೇಕೆ ಹೀಗಿತ್ತು ಎಂಬುದು ಗಮನಿಸಬೇಕಾದ ಅಂಶ. ಹೆಣ್ಣಿರಲಿ ಗಂಡಿರಲಿ ಕೆಲವು ಸೂಕ್ಷ್ಮ ನಿಷೇಧ, ಬಹಿಷ್ಕಾರಗಳನ್ನು,ಲಿಂಗ ಸಮಾನತೆಯನ್ನು ಕುರಿತು ಅವರಿಗೆ ಕಡ್ಡಾಯವಾಗಿ ಒಂದಿಷ್ಟು ಶಿಕ್ಷಣವನ್ನು ಪಾಲಕರು, ಪೋಷಕರು, ಶಿಕ್ಷಕರು ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮಗಳು, ಪುಸ್ತಕಗಳ ಮೂಲಕ ದೊರಕುವಂತಾಗಬೇಕು.  ಆ ಗೆಳೆಯನ ವಿಷಯದಲ್ಲಿ ಬಹುಶಃ ತಂದೆ ತಾಯಿ, ‌ಶಿಕ್ಷಕರು, ಸ್ನೇಹಿತರು, ಮಾಧ್ಯಮ, ಪುಸ್ತಕಗಳು ಯಾರೊಬ್ಬರಿಂದಲೂ ಆತನಿಗೆ ಇಂಥದೊಂದು ಶಿಕ್ಷಣ ಸಿಕ್ಕಿರಲಿಕ್ಕಿಲ್ಲ. ಅಂತೆಯೇ ಆತನ ವರ್ತನೆ‌ ದೋಷಪೂರಿತವಾಗಿದೆ. ಕೆಲವು ಗಂಡಸರು ಬಳಸುವ ದೈಹಿಕ ಬಲ ಪ್ರದರ್ಶನದ ಕುರಿತು ನಾನಿಲ್ಲಿ ಹೇಳುತ್ತಿಲ್ಲ. ಬದಲಾಗಿ ಮಾಧ್ಯಮಗಳಲ್ಲಿ ದಿನವೂ ಇಂಥ ಮೋಸ, ತಟವಟಗಳ ಕತೆಯನ್ನು ಪುಂಖಾನುಪುಂಖವಾಗಿ ನೋಡುತ್ತಲೇ ಇರುತ್ತೇವೆ. ಇವನಿಂದ ಮೋಸ ಹೋದಳು.. ಅವನಿಂದ ಮೋಸವಾಯಿತು ಇತ್ಯಾದಿ ಇತ್ಯಾದಿ. ಇಂತಹ ಸುದ್ದಿ ಬಿತ್ತರಗಳು ಸಾಧಿಸುವುದು ಏನನ್ನು!! ಮುಗಿಸುವ ಮುನ್ನ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಈ ಬರಹಕ್ಕೆ ಕೊಡುವ ಶೀರ್ಷಿಕೆ ಹೀಗಿರಲಿ ಎಂದು ಬಯಸುತ್ತೇನೆ ಅಷ್ಟೇ : ಕೆಲ ಪುರುಷರಿಗೆ ಕಪ್ಪು  ಇರುವೆ ಎಂದರೆ ತುಂಬಾ ಇಷ್ಟ ******************* .

ಬದುಕು-ಬರಹ

ಅಮೃತಾ ಪ್ರೀತಮ್ ಜ್ಞಾನಪೀಠ ಪ್ರಶಸ್ತಿ ವಿಜೇತೆ, ಹೆಸರಾಂತ ಪಂಜಾಬಿ ಲೇಖಕಿ ಅಮೃತಾ ಪ್ರೀತಮ್..! ಅಮೃತಾ ಪ್ರೀತಮ್ ಹೆಸರಾಂತ ಪಂಜಾಬಿ ಲೇಖಕಿ, ಕವಯಿತ್ರಿ, ಕತೆಗಾರ್ತಿ, ಕಾದಂಬರಿಗಾರ್ತಿ. ಜ್ಞಾನಪೀಠ ಪ್ರಶಸ್ತಿ ವಿಜೇತೆ. ಅವಿಭಕ್ತ ಪಂಜಾಬಿನ ಲಾಹೋರಿನ ಬಳಿಯ ಗುಜರಾವಾಲೆಯಲ್ಲಿ 31ನೆಯ ಆಗಸ್ಟ್ 1919ರಂದು ಜನಿಸಿದರು. ಇವರ ತಂದೆ ಕರ್ತಾರಸಿಂಹ ‘ಹಿತಕಾರಿ’ ಸಹ ಅಂದಿನ ಪ್ರಸಿದ್ದ ಲೇಖಕರಲ್ಲೊಬ್ಬರು. ಪ್ರೀತಮ್ ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ತಾಯಿ ರಾಜಕೌರ್ ಅವರನ್ನು ಕಳೆದುಕೊಂಡರು. ಅನಂತರ ತಂದೆಯ ಪೋಷಣೆಯಲ್ಲಿ ಬೆಳೆದು ಅವರ ಪ್ರೇರಣೆಯಿಂದಲೇ ಸಾಹಿತ್ಯ ರಚನೆಗೆ ತೊಡಗಿದವರು… ಇಪ್ಪತ್ತನೆಯ ವಯಸ್ಸಿನಲ್ಲಿ (ಡಿಸೆಂಬರ್ 1939) ಪ್ರೀತಮ್‍ಸಿಂಗ್ ಕವಾತಡಾ ಅವರೊಡನೆ ಇವರ ಮದುವೆಯಾಯಿತು. ನೂರಕ್ಕೂ ಹೆಚ್ಚು ಕವನಗಳನ್ನುಳ್ಳ ಇವರ ಮೊದಲ ಕೃತಿ ಅಮೃತಾ ಲಹರಾರಿ 1936ರಲ್ಲಿ ಹೊರಬಂತು. 1938ರಲ್ಲಿ ಇವರು ನವೀದುನಿಯಾ ಎಂಬ ಸಾಹಿತ್ಯ ಪತ್ರಿಕೆಯನ್ನು ನಡೆಸತೊಡಗಿದರು. ಲಾಹೋರಿನ ಆಕಾಶವಾಣಿಗೆ ಕವನಗಳನ್ನು ಬರೆಯಲಾರಂಭಿಸಿದರು. ಇವರ ಆರಂಭದ ಬರೆವಣಿಗೆಯ ಮೇಲೆ ಪಂಜಾಬಿನ ಖ್ಯಾತ ಕವಿ ಮೋಹಸಿಂಗ್ ಮತ್ತು ಪ್ರಸಿದ್ಧ ಲೇಖಕ ಗುರುಬಕ್ಷ್‍ಸಿಂಗ್ ಅವರ ಪ್ರಭಾವ ಸಾಕಷ್ಟು ಬಿದ್ದಿರುವುದಾಗಿ ತೋರುತ್ತದೆ… 1947ರಲ್ಲಿ ಭಾರತದ ವಿಭಜನೆಯಾದ ಅನಂತರ ಇವರು ಲಾಹೋರನ್ನು ತೊರೆದು ದೆಹಲಿಗೆ ಬಂದು ನೆಲೆಸಿದರು. ವಿಭಜನೆಯ ಸಮಯದಲ್ಲಿ ಅಲ್ಲಿಯ ಪ್ರಜೆಗಳಿಗೆ ಉಂಟಾದ ಆರ್ಥಿಕ ಹಾಗೂ ಮಾನಸಿಕ ಕಷ್ಟನಷ್ಟಗಳು ಇವರ ಮೇಲೆ ತುಂಬಾ ಪರಿಣಾಮ ಬೀರಿ ಇವರ ಅನೇಕ ಕೃತಿಗಳಲ್ಲಿ ಮಾರ್ದನಿ ಪಡೆದವು… ವಾರಸ್‍ಶಾಹ್ ಎಂಬ ಇವರ ಕವನ ಈ ನಿಟ್ಟಿನಲ್ಲಿ ತುಂಬಾ ಪ್ರಸಿದ್ಧವಾಗಿರುವ ಕೃತಿ. ಇವರ ಕೃತಿಗಳಲ್ಲಿ ಪಂಜಾಬಿನ ಜನಜೀವನದ ಹಲವಾರು ಮುಖಗಳ ಪರಿಚಯವಾಗುತ್ತದೆ. ಹಿಂದಿ ಸಾಹಿತ್ಯ ಕ್ಷೇತ್ರದಲ್ಲೂ ಇವರು ಜನಪ್ರಿಯ ಕಾದಂಬರಿಕಾರ್ತಿಯೆಂದು ಹೆಸರುವಾಸಿಯಾಗಿದ್ದಾರೆ. ಹೆಣ್ಣಿನ ಅಸಹಾಯಕತೆ, ಅವಳ ಮೇಲೆ ಸಮಾಜ ನಡೆಸುವ ದೌರ್ಜನ್ಯ, ಸಾಮಾಜಿಕ ಕಟ್ಟುಪಾಡುಗಳು ಇವರ ಆರಂಭಿಕ ಕಾದಂಬರಿಗಳ ತಿರುಳು. ಈಚಿನ ರಚನೆಗಳಲ್ಲಿ ಸಾಮಾಜಿಕ ಹಾಗೂ ಮನೋವೈಜ್ಞಾನಿಕ ಸಮಸ್ಯೆಗಳನ್ನು ಎತ್ತಿಕೊಂಡಿದ್ದಾರೆ… ಇವರ ಕೆಲವು ಕೃತಿಗಳು ಹೀಗಿವೆ– ಲಾಮಿಯಾವತನ್ (1948); ಸುನಹರ್ (1956) ಕವನ ಸಂಗ್ರಹಗಳು… ಪಿಂಜರ್ (1950), ಆಲನಾ (1952), ಬಂದ್ ದರ್‍ವಾಜಾ (1962), ರಂಗ್ ಕಾ ಪತ್ತಾ (1962), ವಾಕ್ ಥೀ ಅನೀತಾ (1963), ಧರತೀ, ಸಾಗರ್ ಔರ್ ಸೀಪಿಯಾಂ (1966), ದಿಲ್ಲೀ ಕಿ ಗಲಿಯಾಂ (1967), ಎಸ್ಕಿಮೋ ಸ್ಟೈಲ್ ತಥಾ ಏರಿಯಲ್ (1967), ಜಲಾವತನ್ (1969), ಜೇಬ್ ಕತರೇ (1970) ಕಾದಂಬರಿಗಳು… ಅಖರೀಖತ್ (1956). ಏಕ್ ಲಡಕೀ ಏಕ್ ಶಾಪ್ (1967) ಸಣ್ಣಕತೆಗಳ ಸಂಗ್ರಹ… ಇಕ್ಕೀಸ್ ಪತ್ತಿಯೋಂಕಾ ಗುಲಾಬ್ (1968) ಎಂಬುದು ಇವರ ಬಲ್ಗೇರಿಯ, ಸೋವಿಯತ್ ರಷ್ಯ, ಯುಗೋಸ್ಲಾವಿಯ, ಹಂಗೇರಿ, ರುಮೇನಿಯ ಮತ್ತು ಜರ್ಮನಿ ಪ್ರವಾಸದ ದಿನಚರಿ ಅತೀತ್ ಕೀ ಪರಛಾಯಿಯಾಂ (1962) ಕೃತಿಯಲ್ಲಿ ತಮ್ಮ ಬದುಕು ಹಾಗೂ ಸಾಹಿತ್ಯ, ದೇಶವಿದೇಶಗಳ ಬರಹಗಾರರ ಬದುಕು ಮತ್ತು ಸಾಹಿತ್ಯವನ್ನು ಕುರಿತಂತೆ ನೆನಪಿನ ಚಿತ್ರಗಳನ್ನು ಬಿಡಿಸಿದ್ದಾರೆ. ‘ರಸೀದಿ ಟಿಕೆಟ್’ ಇವರ ಆತ್ಮಕಥಾನಾತ್ಮಕ ಕೃತಿಯಾಗಿದೆ… ದೆಹಲಿಯ ಆಕಾಶವಾಣಿಯಲ್ಲಿ ಇವರು ಅನೇಕ ವರ್ಷ ಕೆಲಸ ಮಾಡಿದರು. ಮುಂಬಯಿಯ ಚಲನಚಿತ್ರ ಪ್ರಪಂಚಕ್ಕೂ ಹೆಜ್ಜೆಯಿಟ್ಟ ಇವರು ಆ ಕ್ಷೇತ್ರ ಒಗ್ಗದೇ ಮರಳಿದರು. ಇವರ ಅನೇಕ ಕೃತಿಗಳು ಭಾರತೀಯ ಭಾಷೆಗಳಲ್ಲೇ ಅಲ್ಲದೆ ಇಂಗ್ಲಿಷ್, ರಷ್ಯನ್, ಬಲ್ಗೇರಿಯನ್. ಹಂಗೇರಿಯನ್, ಜಪಾನಿ ಭಾಷೆಗಳಿಗೆ ಅನುವಾದಗೊಂಡಿವೆ… ಇವರ ಸಾಹಿತ್ಯ ಸೇವೆಯನ್ನು ಗಮನಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ 1956ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು. ಅದನ್ನು ಪಡೆದ ಮಹಿಳೆಯರಲ್ಲಿ ಇವರೇ ಮೊದಲಿಗರು. 1969ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತು. ದೆಹಲಿ ವಿಶ್ವವಿದ್ಯಾಲಯ 1973ರಲ್ಲಿ ಗೌರವ ಡಿ.ಲಿಟ್ ಪ್ರಶಸ್ತಿ ನೀಡಿ ಗೌರವಿಸಿತು. ಬಲ್ಗೇರಿಯಾದ ಪ್ರಶಸ್ತಿಗೂ ಪಾತ್ರರಾದರು. 1966ರಿಂದೀಚೆಗೆ ಅಮೃತಾ ಪ್ರೀತಮ್ ಅವರು ನಾಗಮಣಿ ಎಂಬ ಪಂಜಾಬಿ ಪತ್ರಿಕೆಯ ಸಂಪಾದಕ ಪ್ರಕಾಶಕರಾಗಿದ್ದಾರೆ. ಇತ್ತೀಚೆಗೆ ಅಮೆರಿಕೆಯ ಮಿಚಿಗನ್ ವಿಶ್ವವಿದ್ಯಾಲಯದ ನಿಯತಕಾಲಿಕ ಮೆಹಫಿಲ್ ಇವರ ಕೃತಿಗಳನ್ನು ಕುರಿತಂತೆ ಒಂದು ಸಂಚಿಕೆಯನ್ನೂ ಹೊರತಂದಿದೆ… ಜ್ಞಾನಪೀಠ ಪ್ರಶಸ್ತಿ ಪಡೆದ ಇವರ ಕಾಗದ ಮತ್ತು ಕ್ಯಾನ್‍ವಾಸ್ ಕವನ ಸಂಗ್ರಹದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ. ಜನಪದ ಛಂದಸ್ಸು, ಲಾವಣೆಮಟ್ಟು, ಮುಕ್ತಛಂದಸ್ಸು ಇವುಗಳನ್ನು ವಿಧವಿಧವಾಗಿ ಬಳಸಿದ್ದಾರೆ. ಇವರ ಮೂಲಕ ಈ ಪ್ರಶಸ್ತಿ ಪಂಜಾಬಿಗೆ ಮೊದಲ ಸಲಕ್ಕೆ ಲಭಿಸಿದೆ. ಉನ್ನತ ಪ್ರಶಸ್ತಿ ಪಡೆದ ಮಹಿಳೆಯರಲ್ಲಿ ಈಕೆ ಎರಡನೆಯವರಾಗಿದ್ದಾರೆ. ಇಂತಹ ಅಮೃತಾ ಪ್ರೀತಮ್ ಅವರು ಅಕ್ಟೋಬರ್ 31, 2005ರಂದು ನಿಧನರಾದರು… ‌‌ ‌‌‌‌‌‌ ‌ ************* ಕೆ.ಶಿವು ಲಕ್ಕಣ್ಣವರ

ಲಹರಿ

ಹೀಗೊಂದು ಕಾಲಕ್ಷೇಪ ರಾಮಸ್ವಾಮಿ ಡಿ.ಎಸ್. ಹೀಗೊಂದು ಕಾಲಕ್ಷೇಪ ಕಾಲ ಚಲಿಸುತ್ತಲೇ ಇದೆ. ಭೂಮಿ ಚಪ್ಪಟೆಯಾಗಿರದೆ ದುಂಡಗಿರುವ ಕಾರಣ, ಸಮಯ ಅನ್ನೋದು ಪೂರ್ವದಿಂದ ಸುರುವಾಗಿ ಪಶ್ಚಿಮಕ್ಕೆ ಹೋದ ಹಾಗೆ ಸೂರ್ಯನ ಚಲನೆಗೆ ತಕ್ಕಂತೆ ವ್ಯತ್ಯಾಸವಾಗುವುದು ಸಹಜ. ಪೂರ್ವದ ದೇಶಗಳನ್ನು ಬೆಳಗಿದ ಬೆಳಕಿನ ಎಂಜಲು ನಿಧಾನವಾಗಿ ಪಶ್ಚಿಮದ ದೇಶಗಳಿಗೆ ಬೀಳುತ್ತೆ. ಆದರೆ ಪಾಶ್ಚಿಮಾತ್ಯರ ಪ್ರಭಾವ ಅದ್ಯಾಕೋ ಪೂರ್ವದ ದೇಶಗಳ ಮೇಲೆ ಹೆಚ್ಚಾಗುತ್ತಿರುವ ಕಾರಣ ಪೂರ್ವದ ಕಾಲದಲ್ಲೇ ಹೊಳೆದ ಜ್ಞಾನವನ್ನು ಪೂರ್ವ ದೇಶದ ಜನ ಮರೆತು ಪಾಶ್ಚಿಮಾತ್ಯರ ರೀತಿ ರಿವಾಜು ಅನುಕರಿಸಿದ ಕಾರಣ ಅಪ್ಪ ಅಮ್ಮ ಬದುಕು ಜೀವನ ಮೌಲ್ಯ ಎಲ್ಲವೂ ಅರ್ಥಾಂತರ ಪಡೆಯುತ್ತಿವೆ. ಅಪ್ಪನನ್ನು ಕಳೆದುಕೊಂಡ ನಾನು, ಚಿಕ್ಕಂದಿನಲ್ಲೇ ಅಮ್ಮನನ್ನು ಕಳೆದುಕೊಂಡ ಶಶಾಂಕ ಆಗೀಗ ಜೊತೆ ಸೇರಿಕೊಂಡು ಜೀವನದ ಅರ್ಥ, ಪೂರ್ವ ಸೂರಿಗಳ ಬದುಕಿನ ರೀತಿ, ಆಧುನಿಕರ ಮನೋಭಾವ ಕುರಿತು ವಿಷಾದ ಪಡುತ್ತಲೇ ಇರುತ್ತೇವೆ. ನಮ್ಮ ಮಾತಿನ ನಡುವೆ ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್, ಅಕ್ಕ ಮಹದೇವಿ, ಕುಂತಿ, ಸೀತೆ, ಅನಸೂಯೆ, ಅಹಲ್ಯೆಯರೂ ಹಾಜರಿ ಹಾಕುತ್ತಲೇ ಇರುತ್ತಾರೆ. ಮಾತಿನ ರೀತಿಯೂ ಅವತ್ತವತ್ತಿನ ರಾಜಕೀಯ, ಸಾಮಾಜಿಕ ಸನ್ನಿವೇಶಗಳ ಕಾರಣದಿಂದ ಬದಲಾಗುತ್ತಲೇ ಇರುತ್ತದೆ. ಈಗಂತೂ ಕೋವಿಡ್ ಕಾರಣ ಕಂಪ್ಲೀಟ್ ಲಾಕ್ ಡೌನ್. ಇದರ ಪರಿಣಾಮ ಮನೆ ಮನೆಯಲ್ಲೂ ಓದುವ, ಸಿನಿಮಾ ನೋಡುವ, ಹಳೆಯದನ್ನು ನೆನೆದು ಹೊಸದನ್ನು ತೂಕಕ್ಕೆ ಹಾಕುವ ಕೆಲಸ ನಡೆಯುತ್ತಲೇ ಇದೆ. ಬುದ್ಧನ ಮಗ ರಾಹುಲ, ಮತ್ತು ಹಿರಣ್ಯ ಕಶ್ಯಪುವಿನ ಮಗ ಪ್ರಹ್ಲಾದ ಇವತ್ತು ನಮ್ಮ ಮಾತಿನ ಮಧ್ಯೆ ಹೇಗೋ ಬಂದು ತೂರಿಕೊಂಡರು. ಪರಸ್ಪರ ಮಾತಿಗೆ ಕೂತರು. ಅವರವರ ಮನದಾಳದ ಸಮಸ್ಯೆಯನ್ನು ಹಂಚಿಕೊಂಡರು. *******************”********************** ಹರಿಯ ಧ್ಯಾನಕ್ಕೆ ಮನಸೋತು ಅಪ್ಪನನ್ನು ಅವನ ಹರನನ್ನೂ ವಿರೋಧಿಸಿ ಕಡೆಗೆ ಆ ಅಪ್ಪನನ್ನೇ ತಾನೇ ಸ್ವತಃ ಕೊಲ್ಲಿಸಿದ ಪ್ರಹ್ಲಾದ ಹಿರಣ್ಯಕಷಿಪುವಿನ ರಾಜ್ಯವನ್ನು ಆಳತೊಡಗಿದ ಮೇಲೂ ತನ್ನ ಹರಿಯ ಧ್ಯಾನದಲ್ಲೇ ಇದ್ದುಬಿಡುತ್ತಿದ್ದ. ಆಗೀಗ ಅಪರೂಪಕ್ಕೆ ರಾಜ್ಯದ ಜನತೆಯ ಕಷ್ಟ ಸುಖ ವಿಚಾರಿಸಿಕೊಳ್ಳಲು ತಾನೇ ಸ್ವತಃ ರಥ ಹತ್ತಿ ಊರೂರಿಗೆ ಹೋಗಿ ಜನರ ದೂರು ದುಮ್ಮಾನ ಕೇಳುತ್ತಿದ್ದ. ಹಾಗೆ ಒಮ್ಮೆ ದೂರದೂರಿಗೆ ಹೋಗಿ ಹಿಂತಿರುಗುತ್ತಿದ್ದಾಗ ರಥದ ಕುಲುಕಾಟದ ನಡುವೆಯೂ ನಿದ್ದೆಯ ಜೊಂಪಿನಲ್ಲಿದ್ದ ಪ್ರಹ್ಲಾದನನ್ನು ಕರೆದ ಸಾರಥಿ, “ಸ್ವಾಮಿ ಆಗಿನಿಂದ ಯಾರೋ ನಮ್ಮ ರಥವನ್ನು ಹಿಂಬಾಲಿಸುತ್ತಿದ್ದಾರೆ” ಎಂದ. ಪುರುಷ ಸಹಜ ಶೌರ್ಯದಿಂದ ಸಿಟ್ಟಾದ ಪ್ರಹ್ಲಾದ ರಥವನ್ನು ನಿಲ್ಲಿಸಲು ಹೇಳಿ, ತನ್ನ ಮೇಲೆ ದಾಳಿಗೆ ಬರುತ್ತಿರುವವನ ಮೇಲೆ ಪ್ರತಿ ದಾಳಿ ಮಾಡಲು ಸಿದ್ಧನಾದ. ರಥ ಹತ್ತಿರ ಬರುತ್ತಾ ಬರುತ್ತಾ ಇದು ಬುದ್ಧನ ಮಗ ರಾಹುಲ ಎನ್ನುವುದು ಅವನಿಗೆ ಖಾತ್ರಿಯಾಯಿತು. ತನ್ನ ಶಸ್ತ್ರಾಸ್ತ್ರಗಳನ್ನು ಸಡಿಲ ಮಾಡಿ ಆರಾಮದಲ್ಲಿ ಕೂತ ಪ್ರಹ್ಲಾದ.ಪ್ರಹ್ಲಾದನ ಬಳಿಗೆ ಬಂದ ರಾಹುಲ ” ನಿನ್ನ ರಥದಲ್ಲಿ ನಾನೂ ಬರಲಾ?” ಎಂದು ಕೇಳಿದ ತಕ್ಷಣ ಪ್ರಹ್ಲಾದನಿಗೆ ಏನು ಹೇಳಬೇಕೆಂಬುದೇ ತಿಳಿಯಲಿಲ್ಲ, ಇವನ ಈ ನಡೆಯಲ್ಲಿ ಯಾವುದಾದರೂ ಕುಟಿಲ ತಂತ್ರ ಇರಬಹುದೇನೋ ಎಂದು ಅನುಮಾನವಾಯಿತು. ಹುಬ್ಬು ಗಂಟಿಕ್ಕಿ ಯೋಚಿಸುವ ಹೊತ್ತಲ್ಲ. ರಾಹುಲನೇ ಮಾತು ಮುಂದುವರಿಸಿ “ಆಸೆಯೇ ದುಃಖಕ್ಕೆ ಮೂಲ ಎಂದವನ ಮಗ ನಾನು, ನಿನ್ನ ರಾಜ್ಯವನ್ನು ಪಡೆದುಕೊಂಡು ಏನು ಮಾಡಲಿ…….” ಎಂದು ಹೇಳುತ್ತಿದ್ದಾಗಲೇ ರಥದ ಬಾಗಿಲು ತೆರೆದ ಪ್ರಹ್ಲಾದ. ರಾಹುಲ ಕುಳಿತ ಪ್ರಹ್ಲಾದನ ರಥ ಮುಂದೆ ಹೋಗುತ್ತಿದ್ದರೆ, ರಾಹುಲ ಬಂದ ಅವನ ಸ್ವಂತದ ರಥ ಅದನ್ನು ಹಿಂಬಾಲಿಸುತ್ತಿತ್ತು. “ಹೇಗಿದ್ದೀಯಾ? , ಪ್ರಜೆಗಳು ಸೌಖ್ಯವೇ? ” ಎಂದಾಗ, ಹೌದು ಎನ್ನುವಂತೆ ತಲೆಯಾಡಿಸಿ, “ನಿನ್ನ ರಾಜ್ಯದ ಕಥೆ ಏನು ?” ಎಂದು ಕಣ್ಣಲ್ಲೇ ಪ್ರಶ್ನಿಸಿದ ಪ್ರಹ್ಲಾದ. “ಎಲ್ಲವೂ ಕ್ಷೇಮ” ಎಂದು ಕಣ್ಣಲೇ ಹೇಳಿದ ರಾಹುಲ ಒಂದೆರಡು ನಿಮಿಷದ ಮೌನದ ನಂತರ ” ಪ್ರಹ್ಲಾದ ನಿನಗೆ ಯಾವತ್ತೂ ಅನಾಥ ಪ್ರಜ್ಞೆ ಕಾಡಲಿಲ್ಲವಾ?” ಎಂದು ಕೇಳಿದ ರಾಹುಲ. ಇದಕ್ಕೆ ಏನು ಉತ್ತರ ನೀಡಬೇಕೆಂದೇ ಪ್ರಹ್ಲಾದನಿಗೆ ತಕ್ಷಣಕ್ಕೆ ಅರ್ಥವಾಗಲಿಲ್ಲ. ಒಂದೆರಡು ಕ್ಷಣದ ನಂತರ ಯೋಚಿಸಲು ಆರಂಭಿಸಿದ. ಅಪ್ಪ ಈಗ ಇಲ್ಲ, ನರಸಿಂಹ ಪ್ರತ್ಯಕ್ಷನಾಗಿ ಅಪ್ಪನನ್ನು ಕೊಲ್ಲುವುದಕ್ಕೆ ಮುನ್ನವೇ ಅಮ್ಮ ಪ್ರಾಣ ಬಿಟ್ಟಿದ್ದಳು. ಆದರೂ ತನಗೆ ಒಂದು ದಿನಕ್ಕೂ ಅನಾಥ ಪ್ರಜ್ಞೆ ಕಾಡಿರಲಿಲ್ಲ. ಸ್ವತಃ ಆತನ ಪತ್ನಿ ಲಕ್ಷ್ಮಿಯ ಮಾತಿನಿಂದಲೂ ಶಾಂತನಾಗದ ನರಸಿಂಹ, ನಾನು ಹೋಗಿ ಪ್ರಾರ್ಥಿಸಿದಾಗ ಶಾಂತ ಸ್ವರೂಪನಾದ. ಅದೇ ಕ್ಷಣಕ್ಕೆ ದೇವಾನು ದೇವತೆಗಳು ಹೂಮಳೆ ಸುರಿಸಿದ್ದರು. ಆ ಕ್ಷಣವನ್ನು ನೆನೆದಾಗಲೆಲ್ಲಾ ಪ್ರಹ್ಲಾದನಿಗೆ ಒಂಥರಾ ರೋಮಾಂಚನ. ಲಕ್ಷ ಲಕ್ಷ ವರ್ಷ ಜಪ ತಪಗಳನ್ನು ಮಾಡಿದವರಿಗೂ ದರ್ಶನ ನೀಡದ ಆ ಸ್ವಾಮಿ ತನ್ನ ಮುಂದೆ ಪ್ರತ್ಯಕ್ಷನಾದ ಕ್ಷಣವನ್ನು ಅವನ ನೆನಪಿನಲ್ಲಿ ಇಂದಿಗೂ ಹಸಿರಾಗಿತ್ತು. ಆದರೆ ಅಪ್ಪ ಅಮ್ಮ ಇಲ್ಲ ಎಂಬ ಅನಾಥ ಪ್ರಜ್ಞೆ ಯಾವತ್ತಿಗೂ ಕಾಡಿರಲಿಲ್ಲ. ಹರಿಯೇ ಅವನ ಪಾಲಿಗೆ ಸರ್ವಸ್ವವೂ ಆಗಿದ್ದ. ಹೀಗಿದ್ದೂ ರಾಹುಲ ಈ ಪ್ರಶ್ನೆ ಕೇಳಿದ ತಕ್ಷಣ ಅವನೊಳಗೆ ಸಾವಿರ ಪ್ರಶ್ನೆಗಳ ಅಲೆ ಒಮ್ಮೆಲೇ ಎದ್ದಿತು. ರಾಹುಲ ಮತ್ತೆ ಕೇಳಿದ ” ಪ್ರಹ್ಲಾದ ನಿನಗೆ ಅನಾಥ ಪ್ರಜ್ಞೆ ಯಾವತ್ತಿಗೂ ಕಾಡಲಿಲ್ಲವಾ ?” ಪ್ರಹ್ಲಾದ ಹೌದು ಇಲ್ಲ ಎಂಬ ಯಾವ ಉತ್ತರ ಕೊಡುವುದುಕ್ಕೂ ಸಾಧ್ಯವಾಗಲಿಲ್ಲ. ಆದರೆ ಪ್ರಹ್ಲಾದನ ಅಂತರಂಗಕ್ಕೆ ಮೊದಲಬಾರಿಗೆ ಗದೆಯಲ್ಲಿ ಬಲವಾಗಿ ಹೊಡೆದಂತೆ ಆಯಿತು. ” ನನ್ನಪ್ಪನಿಗೆ ನಡುರಾತ್ರಿಯಲ್ಲಿ ಜ್ಞಾನೋದಯವಾಗಿತ್ತು. ಹೆಂಡತಿ ಮಕ್ಕಳು ರಾಜ್ಯ ರತ್ನ ಎಲ್ಲವೂ ನಶ್ವರ ಎಂದು ಅರಿವಾಗಿತ್ತು. ಎಲ್ಲವನ್ನೂ ಬಿಟ್ಟು ಹೊರಟ. ಅವನಿಗೆ ಯಾರೂ ಬೇಡವಾಗಿತ್ತು. ನನಗೆ ಅಪ್ಪ ಬೇಕೆಂಬ ಆಸೆ, ಆದರೆ ಅಪ್ಪ ಆ ಆಸೆಯೇ ದುಃಖಕ್ಕೆ ಮೂಲ ಎನ್ನುತ್ತಾನೆ. ಅವನ ಎಲ್ಲ ಮಾತುಗಳು ನನಗೆ ಒಪ್ಪಿಗೆಯಾಗುವುದಿಲ್ಲ. ನಾನು ಯೋಚಿಸುವುದಕ್ಕೂ, ಅವನು ಯೋಚಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಅವನ ಅನುಭವ ನನಗಿಂತ ದೊಡ್ಡದು. ನಿಜ ಆದರೆ ಅವನ ವೈರಾಗ್ಯ ನನಗಿಲ್ಲ. ನನಗೆ ಎಲ್ಲವೂ ಬೇಕು. ಎಲ್ಲದೂ ಬೇಕು. ಆದರೆ ಅಪ್ಪ ಹೇಳುತ್ತಾನೆ ಆಸೆಯೇ ದುಃಖಕ್ಕೆ ಮೂಲ. ಎಲ್ಲ ಇದ್ದೂ ಏನೂ ಇಲ್ಲದ ಅನಾಥ ಪ್ರಜ್ಞೆ. ಬದುಕಿನ, ರಾಜ್ಯಾಡಳಿತದ ಕಠಿಣ ಸಮಸ್ಯೆ ಬಂದಾಗಲೆಲ್ಲಾ ಅಪ್ಪ ನೆನಪಾಗುತ್ತಾನೆ. ನನ್ನ ಬೆನ್ನಿಗೆ ನಿಂತು ಸಲಹೆ ನೀಡಿದರೆ ಹೇಗಿರುತ್ತಿತ್ತು ಎನಿಸುತ್ತದೆ. ಆದರೆ ಒಂದು ದಿನಕ್ಕೂ ನಾನು ಅಪ್ಪನೊಡನೆ ಹೀಗೆ ಕಾಲ ಕಳೆಯಲೇ ಇಲ್ಲ. ಅಪ್ಪ ಎಂದರೆ ಅದೇ ಪುರಾಣ, ಅದೇ ಗೊಡ್ಡು ವೇದಾಂತ” ಪ್ರಹ್ಲಾದ ಸುಮ್ಮನೆ ಕೇಳುತ್ತಿದ್ದ ” ನಿನಗೆ ಈ ಗಣಪತಿ ಕಥೆ ಗೊತ್ತಾ ?” ” ಯಾವುದು ?” ” ಅದೇ ನಾರದ ಮಹರ್ಷಿ ಪ್ರಪಂಚವನ್ನು ಸುತ್ತಿ ಬರಲು ಸ್ಪರ್ಧೆ ಇಟ್ಟಾಗ ಗಣೇಶ ಅಪ್ಪ , ಅಮ್ಮನ್ನನ್ನೇ ಸುತ್ತಿದ ಕಥೆ” ” ಗೊತ್ತು “ ” ನೀನ್ಯಾಕೆ ನಿಮ್ಮಪ್ಪನಲ್ಲೇ ದೇವರನ್ನು ಕಾಣಲಿಲ್ಲ “ ” ಅಪ್ಪ ನಾನೇ ದೇವರು ಎನ್ನುತ್ತಿದ್ದ, ಹರಿ ನನ್ನ ವೈರಿ ಎನ್ನುತ್ತಿದ್ದ. ಹರಿ ಧ್ಯಾನ ಮಾಡಿದಕ್ಕೆ ನನ್ನನ್ನು ಕೊಲ್ಲಲು ಹೊರಟಿದ್ದ” ” ಅದೆಲ್ಲವನ್ನೂ ಒಪ್ಪಿದೆ, ನೀನು ನಿನ್ನಪ್ಪನಲ್ಲಿ ಎಂದಾದರೂ ದೇವರನ್ನು ನೋಡಿದೆಯಾ ?” ” ನಾನು ನಮ್ಮಪ್ಪನಿಗೆ ಹರಿ ಧ್ಯಾನ ಮಾಡಲು ಹೇಳಿದೆ “ ” ನೀನು ನಿಮ್ಮಪ್ಪನಲ್ಲಿ ದೇವರನ್ನು ಕಂಡೆಯಾ ? ” ನನ್ನ ಪಾಲಿಗೆ ಹರಿಯೇ ಸಕಲವೂ ಆಗಿದ್ದ “ ” ನೀನು ನಿಮ್ಮಪ್ಪನಲ್ಲಿ ದೇವರನ್ನು ಕಂಡೆಯಾ ?” ಪ್ರಹ್ಲಾದನಿಗೆ ಇದಕ್ಕಿಂದಂತೆ ಸಿಟ್ಟು ಉಕ್ಕಿ ಬಂತು. ” ಇಲ್ಲ ನಾನು ಅಪ್ಪನನ್ನು ಎಂದೂ ದೇವರಂತೆ ಕಂಡಿಲ್ಲ, ಹರಿಯ ಸ್ಥಾನದಲ್ಲಿ ಅವನನ್ನಿಟ್ಟು ನೋಡುವುದು ನನಗೆ ಎಂದಿಗೂ ಸಾಧ್ಯವಿಲ್ಲಾ, ಹರಿಯನ್ನಷ್ಟೇ ನಾನು ದೇವರಾಗಿ ಕಂಡಿದ್ದು, ಬೇರೆಯವರು ಯಾರೂ ನನಗೆ ದೇವರಾಗಿ ಕಾಣಲಿಲ್ಲ “ ” ನಾನು ನಿನ್ನನ್ನು ಹುಡುಕಿ ಬಂದ ಕಾರಣ ಗೊತ್ತಾ?” ಪ್ರಶ್ನಿಸಿದ ರಾಹುಲ. ತನ್ನೊಳಗೆ ನೆಡೆಯುತ್ತಿದ್ದ ಕೋಲಾಹಲವನ್ನು ತಡೆದು “ಏಕೆ ?” ಎಂದು ಕಣ್ಣಿನಲ್ಲಿಯೇ ಪ್ರಶ್ನಿಸಿದ ಪ್ರಹ್ಲಾದ, ರಾಹುಲನನ್ನು. ” ನಿನ್ನ ಬಗ್ಗೆ ನನಗೆ ತಿಳಿದಾಗಿನಿಂದ ಒಂದು ರೀತಿಯ ವಿಚಿತ್ರ ಕುತೂಹಲ. ನಿನ್ನ ಹರಿ ನರಸಿಂಹನ ರೂಪದಲ್ಲಿ ಬಂದು ನಿನ್ನಪ್ಪನನ್ನು ಕೊಲ್ಲುತ್ತಿದ್ದಾಗ ಕೂಡಾ ಅಪ್ಪನನ್ನು ರಕ್ಷಿಸಿಕೊಳ್ಳುವ ಬದಲಿಗೆ ಹರಿ ಧ್ಯಾನವನ್ನೇ ಮಾಡುತ್ತಿದ್ದೆಯಂತೆ. ಅಂಥ ಗಟ್ಟಿ ಮನಸ್ಸು ನಿನಗೆ ಹೇಗೆ ಬಂದಿದ್ದು. ಸಾಕಷ್ಟು ಭಿನ್ನಾಭಿಪ್ರಾಯದ ನಡುವೆ, ಆಸೆಯೇ ದುಃಖಕ್ಕೆ ಮೂಲ ಎಂದು ಅಪ್ಪನೇ ಹೇಳಿದ ಬಳಿಕ ಕೂಡಾ ಅವನ ಆಸರೆಯ ಬಯಕೆಯಾಗುತ್ತದೆ. ಈ ಬಯಕೆ ಬಾಲ್ಯದಿಂದ ಇಂದಿನವರೆಗೂ ಬೆನ್ನು ಬಿಡದೇ ಕಾಡುತ್ತಿದೆ. ಅಪ್ಪನನ್ನು ಹರಿ ಕೊಲ್ಲುತ್ತಿದ್ದಾಗಲೂ ನೀನು ಅವನದೇ ಧ್ಯಾನ ಮಾಡುತ್ತಾ ನಿಂತಿದ್ದೆಯಲ್ಲ. ಇದು ಸಾಧ್ಯವಾಗಿದ್ದು ಹೇಗೆ ?. ಹೃದಯವನ್ನು ಆ ಮಟ್ಟಕ್ಕೆ ಗಟ್ಟಿ ಮಾಡಿಕೊಳ್ಳುವ ಬಗೆಯನ್ನು ನನಗೂ ಹೇಳಿಕೊಡು “, ಪ್ರಹ್ಲಾದನಿಗೆ ರಾಹುಲ ಕೇಳಿದ. ಪ್ರಹ್ಲಾದನ ಬಳಿ ಈ ಮಾತಿಗೆ ಉತ್ತರವೇ ಇರಲಿಲ್ಲ. ಕುದುರೆಯ ಖುರಪುಟದ ಸದ್ದಿನ ಹೊರತಾಗಿ ಉಳಿದೆಲ್ಲ ಕಡೆ ಬರೀ ನಿಶಬ್ದವೇ ತುಂಬಿತ್ತು. “ನಿನಗೆ ಅಪ್ಪನ ಮಾತಿನಂತೆ ತಾಯಿಯ ತಲೆ ಕಡಿದ ಪರುಶುರಾಮನ ಕಥೆ ಗೊತ್ತಾ ?” ಹೌದೆಂದು ತಲೆಯಾಡಿಸಿದ ಪ್ರಹ್ಲಾದ. ” ನಿನಗೆ ಏನು ಬೇಕು ಎಂದು ನಿನ್ನ ಹರಿ ಕೇಳಿದಾಗ ಏನು ವರ ಬೇಡಿದೆ ? “ ” ಈ ನಶ್ವರ ಜಗತ್ತಿನಲ್ಲಿ ಭಗವಂತನನ್ನು ಏನು ಕೇಳುವುದು, ನನಗೆ ಏನೂ ಕೇಳಬೇಕೆಂದೇ ಅನ್ನಿಸಲಿಲ್ಲ. ಅದಕ್ಕೆ ನನಗೆ ಏನೂ ಬೇಡ, ಆದರೆ ನಿನ್ನನ್ನು ಎಂದೂ ಏನನ್ನೂ ಕೇಳದಂಥ ಸ್ಥಿತಿಯಲ್ಲಿಡು” ಎಂದು ಕೇಳಿದೆ. ” ಪರುಶುರಾಮ ತನ್ನ ತಾಯಿಯನ್ನು ಬದುಕಿಸಿಕೊಡುವಂತೆ ಕೇಳಿದ ಹಾಗೆ ನೀನು ನಿನ್ನ ಹರಿ ಬಳಿ ನಿನ್ನ ತಂದೆಯನ್ನು ಬದುಕಿಸಿ ಕೊಡುವಂತೆ ಕೇಳಬಹುದಿತ್ತು. ನೀನೇಕೆ ಕೇಳಲಿಲ್ಲ ? “ ಪ್ರಹ್ಲಾದ ಏನೋ ಹೇಳಲು ಪ್ರಯತ್ನಿಸಿದ. ಏನೂ ಹೊಳೆಯದೇ ಸುಮ್ಮನಾದ. ************************************ ದಶಾವತಾರದ ಎಲ್ಲ ಕತೆಗಳೂ ಗೊತ್ತಿರುವ ನಿಮಗೆ ನರಸಿಂಹಾವತಾರದಲ್ಲಿ ಬರುವ ಪ್ರಹ್ಲಾದ , ಬೌದ್ಧಾವತಾರದಲ್ಲಿ ಬರುವ ಬುದ್ಧನ ಮಗ ರಾಹುಲ ಪರಿಚಿತರೇ. ಕತೆಗಳ ಮೂಲಕ ಪುರಾಣದ ಮೂಲಕ ಬದುಕಿನ ಹಲವು ಮಗ್ಗಲುಗಳನ್ನು ಶೋಧಿಸಿದ ಕಾಲಕ್ಕೆ ತಕ್ಕ ಉತ್ತರವನ್ನೂ ಕೊಟ್ಟ ನಮ್ಮ ಪೂರ್ವ ಸೂರಿಗಳ ಜ್ಞಾನ ಅರಿವು ಮತ್ತು ಬದುಕನ್ನು ಹೇಗೆ ಸ್ವೀಕರಿಸಬೇಕು ಎಂದು ತಿಳಿ ಹೇಳಿದ ಅವರನ್ನು ಮರೆತ ನಾವು ಈ ಕೋವಿಡ್ ಕೊಟ್ಟ ಬಿಗ್ ಬ್ರೇಕಲ್ಲಿ ಯುಟ್ಯೂಬಲ್ಲಿ ಅಥವ ಅಮೆಜಾನ್ ಪ್ರೈಮಲ್ಲಿ ಸಿನಿಮಾ ನೋಡುತ್ತ ಸೀರೆ ಉಟ್ಟು ಪಂಚೆ ಕಟ್ಟಿ ಪಟ ತೆಗೆದು ಫೇಸ್ಬುಕ್ಕಲ್ಲಿ ಹಾಕುತ್ತ ಇದ್ದೇವಲ್ಲ, ನಾವೆಲ್ಲ ನಮ್ಮ ಹಿರೀಕರು ಹೊತ್ತು ಹೊತ್ತಿನ ಹಿಟ್ಟಿಗೆ ಎಷ್ಟೆಲ್ಲ ಕಷ್ಟ ಪಡುತ್ತಿದ್ದರು ಅನ್ನೋದನ್ನು ಮರೆತಿದ್ದೇವೆ. ಎಷ್ಟೋ ಬಾರಿ ಅಡುಗೆ ಮನೆಯಲ್ಲಿ ಸಾರಿಸಿ ಇಟ್ಟ ಒಲೆಯ ರಂಗೋಲಿ ಅಳಿಸಿಲ್ಲ ಹೊಸ ಬೂದಿ ಆಗಿಲ್ಲ ಅಂದರೆ ಅವತ್ತು ಆ ಮನೆಯಲ್ಲಿ ಉಪವಾಸ ಇದ್ದಾರೆ ಅನ್ನೋದು ಗೊತ್ತಾಗುತ್ತಿತ್ತು. ಈ ಕಾಲದ ಮೈಕ್ರೋ ಓವನ್ ಗ್ಯಾಸ್ ಒಲೆ ಕಾಯಿಲ್ ಒಲೆಗಳಲ್ಲಿ ಬೇಯಿಸಿದ್ದು ಬೇಯಿಸದೇ ಇದ್ದದ್ದೂ ಗೊತ್ತಾಗಲ್ಲ. ಬೀದಿಯಲ್ಲಿ ಹೆಣ ಬಿದ್ದರೆ ಆ ಬೀದಿಯ ಯಾರ ಮನೇಲೂ ಊಟ ತಿಂಡಿ ಎಲ್ಲ ಬಂದ್ ಆಗ್ತಿತ್ತು. ಈಗ ಬಿಡಿ ಕೆಳಗಿನ ಮನೆಯಲ್ಲಿ ಹೆಣ ತಂದ ಅಂಬ್ಯುಲೆನ್ಸ್ ನಿಂತಿದ್ದರೆ ಮೇಲಿನ ಮನೆಯಲ್ಲಿ

ಮಕ್ಕಳ ಹಾಡು

ನಮ್ಮಯ ಬದುಕು ಮಲಿಕಜಾನ ಶೇಖ ಹಂಸಮ್ಮಾ ಬಂದಳು ಹಂಸಮ್ಮಾ ಕ್ವ್ಯಾಕ್ -ಕ್ವ್ಯಾಕ್ ಕ್ವ್ಯಾಕ್-ಕ್ವ್ಯಾಕ್ ನುಡಿಯುತ್ತಾ ಶ್ವೇತ ಬಣ್ಣ ನನ್ನದು ಹಾಲು-ಮೀನು ಕಂಡರೆ ನಾನು ಕರಿವೆ ಎಂದಳು ಮಕ್ಕಳ-ಮರಿಯನ್ನು. ಹುಂಜಪ್ಪಾ ಬಂದನು ಹುಂಜಪ್ಪಾ ಕುಕ್ಕು-ಕೂ ಕುಕ್ಕು- ಕೂ ಕೂಗುತ್ತಾ ತೆಲೆಯಲಿ ಫುಂಜ ನನ್ನದು ಹುಳವ-ಗಿಳವ ಕಂಡರೆ ನಾನು ಕರಿವೆ ಎಂದನು, ಹೆಂಡತಿ ಮಕ್ಕಳನು. ಕಾಗಣ್ಣ ಬಂದ ಕಾಗಣ್ಣ ಕಾವ್-ಕಾವ್ ಕಾವ್-ಕಾವ್ ಕಿರಚುತ್ತಾ ಕಪ್ಪು ಬಣ್ಣದು ನನ್ನದು ಅನ್ನದ ಅಗಳ ಕಂಡರೆ ನಾನು ಕರಿವೆ ಎಂದನು, ಬಂಧು-ಬಳಗವನು. ಗುಬ್ಬಕ್ಕಾ ಬಂದಳು ಗುಬ್ಬಕ್ಕಾ ಚಿಂವ್-ಚಿಂವ್ ಚಿಂವ್-ಚಿಂವ್ ಎನ್ನುತ್ತಾ ಗುಬ್ಬಿ ಗೂಡು ನನ್ನದು ವೈರಿ-ಗಿರಿಯ ಕಂಡರೆ ನಾನು ಕರಿವೆ ಎಂದಳು ಎಲ್ಲರನು. ಬೇಡಣ್ಣಾ ಬಂದಾ ಬೇಡಣ್ಣಾ ಕೂಗುತ್ತಾ ಬೈಯುತ್ತಾ ಹೊಡೆಯುತ್ತಾ ಮೋಸದ ಬಲೆಯು ನನ್ನದು ಕಾಳನು ತಿನ್ನುತ್ತಾ ಕಂಡರೆ ನಾನು ತಿನ್ನುವೆ ಬೇಯಿಸಿ ನಿಮ್ಮನ್ನು. ಹಾರುತ ಬಂದವು ಹಕ್ಕಿಗಳು ಕರಕರ ಕೊಕ್ಕನ್ನು ಕೆರೆಯುತ್ತಾ ನಮ್ಮಯ ಬದುಕು ನಮಗೆ ಬೀಡು ಸುಮ್ಮನೆ ಹೋಗೊ ಬೇಡಣ್ಣಾ ಇಲ್ಲದಿರೆ…..? ಕರಿವೆವು ನಾವು ಕೊರೋನಾ .. ಕೊರೋನಾ… *******

ಅಂತಿಮ ನಮನ

ಟಿ.ಎಲ್.ರಾಮಸ್ವಾಮಿ ಅಪರೂಪದ ಕ್ರಿಯಾಶೀಲ, ಸೃಜನಶೀಲ ಪತ್ರಿಕಾ ಛಾಯಾಗ್ರಾಹಕ ಟಿ.ಎಲ್‌.ರಾಮಸ್ವಾಮಿಯವರು..! ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎಂಬ ಮಾತಿದೆ. ಅದರಂತೆ ಕ್ರಿಯಾಶೀಲ ಮತ್ತು ಸೃಜನಶೀಲ ಪತ್ರಿಕಾ ಛಾಯಾಚಿತ್ರ ಗ್ರಾಹಕ ಟಿ.ಎಲ್. ರಾಮಸ್ವಾಮಿಯವರು ತೀರಿದ್ದಾರೆ. ಅವರು ಆರು ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಿಕಾ ಛಾಯಾಗ್ರಾಹಕರಾಗಿ ಸಾವಿರಾರು ಚಿತ್ರಗಳ ಮೂಲಕ ಕರ್ನಾಟಕದ ಆಗುಹೋಗುಗಳನ್ನು ಸೆರೆಹಿಡಿದವರು. ಅವರು ಪತ್ರಿಕಾ ಛಾಯಾಚಿತ್ರ ಕಲೆಯಲ್ಲಿ ವಿಶಿಷ್ಟ ಪ್ರತಿಭೆಯನ್ನೂ ತೋರಿ ದೇಶ ವಿದೇಶಗಳ ಪತ್ರಿಕೆಗಳ ಗೌರವಾದರ ಪಡೆದವರು… 1950 ರಿಂದ 1985 ರವರೆಗೆ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ ಪತ್ರಿಕಾ ಬಳಗದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿ ಅನುಭವ ಗಳಿಸಿದವರು. ನಂತರ ಮುಕ್ತ ಪತ್ರಿಕಾ ಛಾಯಾಚಿತ್ರ ವರದಿಗಾರರಾದರೂ ಆದವರು… ಭಾರತದ ಪ್ರಮುಖ ಪತ್ರಿಕೆಗಳ ಸಂಪರ್ಕ ಪಡೆದಿದವರು. ಫೈನಾನ್ಶಿಯಲ್ ಟೈಮ್ಸ್ ಆಫ್ ಲಂಡನ್ ಸಹ ಇವರು ತೆಗೆದಿರುವ ಛಾಯಾಚಿತ್ರಗಳನ್ನು ಪ್ರಕಟಿಸಿದೆ… ಪ್ರಜಾವಾಣಿ, ಮಯೂರ, ಟೈಮ್ಸ್‌ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆ– ನಿಯತಕಾಲಿಕೆಗಳಲ್ಲಿ ಛಾಯಾಚಿತ್ರ ಅಂಕಣಕಾರರಾಗಿ ಜನಪ್ರಿಯತೆ ಗಳಿಸಿದವರು… ಜಪಾನ್‌ ನ ನಿಹಾನ್ ಸಿನ್ಬುನ್ ಕ್ಯೊಕಾಯಿ ಸಂಸ್ಥೆ ಮತ್ತು ಲಂಡನ್‌ ನ ಥಾಮ್ಸನ್ ಪ್ರತಿಷ್ಠಾನದಿಂದ ಪತ್ರಿಕಾ ಛಾಯಾಚಿತ್ರ ಕಲೆಯಲ್ಲಿ ಡಿಪ್ಲೊಮಾ ಪಡೆದಿದವರು. ಜಪಾನ್‌ ನ ಅಸಾಹಿ ಶಿನ್‍ಬುನ್, ಮೈನಿಚಿ ಶಿನ್‍ಬುನ್, ಯೊಮಿಯುರಿ ಮತ್ತು ಕ್ಯೋಟೋ ಶಿನ್‍ಬುನ್ ಪತ್ರಿಕೆಗಳಲ್ಲಿ ದುಡಿದು ಅನುಭವ ಪಡೆದವರು. ಫ್ಲೀಟ್ ಸ್ಟ್ರೀಟ್‌ ನ ಲಂಡನ್ ಟೈಮ್ಸ್, ಡೈಲಿ ಮಿರರ್ ಪತ್ರಿಕೆಗಳಲ್ಲೂ ಅನುಭವ ಗಳಿಸಿದ ಹೆಗ್ಗಳಿಕೆ ಟಿ.ಎಲ್‌. ರಾಮಸ್ವಾಮಿಯರದು… ಟಿ.ಎಲ್. ರಾಮಸ್ವಾಮಿ ಅವರು ಜಮ್ಮು ಮತ್ತು ಪಂಜಾಬ್ ಗಡಿಗಳಲ್ಲಿ ಸಮವಸ್ತ್ರ ಧರಿಸಿ ಯುದ್ಧ ವರದಿಯ ತರಬೇತಿ ಪಡೆದಿದ್ದವರು. ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ. ರೋಟರಿ, ಲಯನ್ಸ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ ಗೌರವಗಳೂ ಅವರಿಗೆ ಸಂದಿವೆ… ಕ್ರೀಡಾ ಕ್ಷೇತ್ರದ ಅವರ ಸೇವೆ ಮತ್ತು ಸಾಧನೆಯನ್ನು ಗೌರವಿಸಿ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆಜೀವ ಸದಸ್ಯತ್ವ ನೀಡಿ ಗೌರವಿಸಿದೆ. ಈ ಎಂಭತ್ತರ ಹರೆಯದಲ್ಲಿಯೂ ಯಾವುದೇ ಕಾರ್ಯಕ್ರಮಕ್ಕೆ ಹಾಜರಾದರೂ ಹೆಗಲ ಮೇಲೆ ಕ್ಯಾಮೆರಾ ಹೊತ್ತು ಹಾಜರಾಗುವ ಪರಿಪಾಠವನ್ನು ಮುಂದುವರೆಸಿದ್ದರು. ಅಪರೂಪದ ಚಿತ್ರಗಳ ಮೂಲಕ ಈಗಲೂ ಇತಿಹಾಸದ ಪುಟಗಳನ್ನು ಸಂಪದ್ಭರಿತವಾಗಿಸುತ್ತಿದ್ದವರು ಟಿ.ಎಲ್.ರಾಮಸ್ವಾಮಿವರು… ಇಂತಹ ಟಿ.ಎಲ್. ರಾಮಸ್ವಾಮಿಯವರು ಈಗ ತೀರಿಕೊಂಡಿದ್ದಾರೆ. ಅವರಿಗಿದೋ ನಮನಗಳು… *************************************************************** ಕೆ.ಶಿವು.ಲಕ್ಕಣ್ಣವರ ‌

ಪ್ರಸ್ತುತ

ಪರೀಕ್ಷೆಗಳತ್ತ ಚಿತ್ತ ವನಜಾ ಸುರೇಶ್ ಪರೀಕ್ಷೆಗೆ  ದಿನಗಣನೆ  ಆರಂಭವಾಗಿದೆ  . ಕೆಲವು  ಮಕ್ಕಳಿಗೆ.  ಪರೀಕ್ಷೆ  ಮುಗಿದರೆ ಸಾಕೆಂಬ ಮನೋಭಾವವು ಇದೆ . ಕೆಲವರಲ್ಲಿ ಭಯವೂ ಇದೆ. 2019 ಜೂನ್ ನಿಂದು ಪ್ರಾರಂಬಿದ  ಪರೀಕ್ಷಾ ತಯಾರಿ  ಅಂತಿಮ ಹಂತಕ್ಕೆ ಬಂದು ನಿಂತಿದೆ.   ಡಿಸೆಂಬರ್ ಗೆ ಬೋದಿಸಬೇಕಾದ ಪಠ್ಯಭಾಗವನ್ನು  ಮುಗಿಸಿ  ಜನವರಿಯಿಂದ  ಪುನರಾವರ್ತನೆ ಮಾಡಲಾಗಿದೆ  ಫೆಬ್ರವರಿಯಿಂದ  ಸಾಕಷ್ಟು ಸರಣಿ ಪರೀಕ್ಷೆಗಳನ್ನು ಮಾಡಿ  ಬರವಣಿಗೆ ದೋಷವನ್ನು ಸರಿಪಡಿಸಿಕೊಳಲು ತಿಳುವಳಿಕೆ ಹೇಳಲಾಗಿದೆ ಕ್ಲಿಷ್ಟಕರಕರವೆನಿಸಿದ  ಪಠ್ಯಭಾಗವನ್ನು  ಪುನಃ ಪುನಃ ಬೋಧನೆ ಮಾಡಿ ಪರೀಕ್ಷೆ ಗಳನ್ನು ಮಾಡಿ  ತಿಳಿಸಲಾಗಿದೆ. ನಂತರ ವಿದ್ಯಾರ್ಥಿಗಳು ಕಲಿಕೆಯ ಹಾಗೂ ಅಭಿವ್ಯಕ್ತಿಯ  ಮಾನದಂಡದಂತೆ  ಎ  ಶ್ರೇಣಿ ಬಿ  ಶ್ರೇಣಿ  ಹಾಗೂ ಸಿ.  ಶ್ರೇಣಿಗಳಾಗಿ  ವಿಭಾಗಿಸಿ  ಕೊಂಡು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಬೋದಿಸಲಾಗಿದೆ . C ಶ್ರೇಣಿಯಲ್ಲಿ ಗೆ ಕೆಲವು ಆಯ್ದ ಪಠ್ಯಭಾಗಗಳನ್ನೇ ಬೋಧಿಸಿ ನಿತ್ಯ ಬರೆಸಿ  ಮೌಖಿಕವಾಗಿ  ಹೇಳಿಸಿ  ಡ್ರಿಲ್  ವರ್ಕ್     ಮಾಡಿಸಿ,  ಅವರಿಗೂ ನಾವು ಬರೆಯಬಲ್ಲೆ ವೆಂಬ  ವಿಶ್ವಾಸ  ಮೂಡಿಸಲಾಗಿದೆ. A. ಶ್ರೇಣಿ ಯ ವಿದ್ಯಾರ್ಥಿ ಗಳಿಗೆ ಇಡೀ  ಪಠ್ಯಭಾಗವನ್ನು  ಓದಿಕೊಂಡು  ಹೇಗೆ ಪ್ರಬುದ್ಧತೆ ಯಿಂದ ಉತ್ತರ ಬರೆಯಬೇಕೆಂಬ. ಬಗೆಗೆ ತಿಳುವಳಿಕೆ ಜೊತೆ ಜೊತೆಗೆ ಹಲವು ಸುತ್ತಿನ ಬರವಣಿಗೆ ಮೂಲಕ,   ಸರಣಿ ಪರೀಕ್ಷೆ ಗಳು ಮೂಲಕ ತಯಾರಿ  ಮಾಡಿಸಲಾಗಿದೆ . ನಿಮಗೆ ಸಾಮರ್ಥ್ಯವಿದೆ  ನೂರಕ್ಕೆ , ನೂರೂ ತಗೊಂಡು ಅಚೀವ್ ಮಾಡಿರೆಂದೂ ,  ಪ್ರೋತ್ಸಾಹಿಸಿದ್ದೇವೆ . ಮಕ್ಕಳೂ ಈ ನಿಟ್ಟಿನಲ್ಲಿ ಸಿದ್ಧತಾ ಪರೀಕ್ಷೆ ಬರೆದು , ಖಾತ್ರಿಮಾಡಿಕೊಂಡಿದ್ದಾರೆ.   ಇನ್ನು ಇಡೀ ವರ್ಷವವೆಲ್ಲ  ತರಬೇತಿಗೊಳಿಸಿದ  ಶಿಕ್ಷಕರು, ಕ್ರಿಕೆಟ್  ,ತರಬೇತುದಾರ,   ಗ್ಯಾಲರಿಯಲ್ಲಿ ಕುಳಿತು  ತಮ್ಮ ಶಿಷ್ಯರ  ಅದ್ಬುತ ಪ್ರದರ್ಶನಕ್ಕೆ  ,  ಕ್ರಿಕೆಟಿಗ ಚೆಂಡನ್ನು ಎದುರಿಸಿ , ಸಿಕ್ಸರ್ ಬಾರಿಸಿ ,  ನೆರೆದ ಸಭಿಕರಿಗೆ  , ಕೋಚ್ ಗಳಿಗೆ ಸಂತಸ  ತರುವನೋ,  ಎಂದು    ಆಸೆ  ಕಾತರದಿಂದ  ಕಾಯುವಂತೆ ,  ಶಿಕ್ಷಕರಾದ  ನಾವುಗಳೂ , ಆಸೆ , ಆತಂಕ , ಕುತೂಹಲದಿಂದ ಗಳಿಂದ ಎದುರು  ನೋಡುತ್ತಿದ್ದೇವೆ .     ಪ್ರತಿಯೊಬ್ಬ ವಿದ್ಯಾರ್ಥಿಯೂ  ಒಂದೊಂದು ಪ್ರಶ್ನೆ ಯನ್ನು  ಹೇಗೇಗೆ   ಉತ್ತರಿಸಬಲ್ಲ  ಎಷ್ಟು   ಉತ್ತರಿಸ ಬಲ್ಲ ಎಷ್ಟು ಜನ ವಿದ್ಯಾರ್ಥಿಗಳು  ಯಾವ ಯಾವ ಪ್ರಶ್ನೆ ಗಳಿಗೆ  ಉತ್ತರಿಸುತ್ತಾರೆಂಬ  ಅಂಕಿ ಅಂಶವೂ  ನಮಗೀಗ  ದೃಢವಾಗಿದೆ. , ಆದರೂ ಬದಲಾದ ಪರೀಕ್ಷಾ ಪದ್ಧತಿ  ಎಂಬ. ಮಾಹಿತಿ ಗೇ ಹಲವು ಮಕ್ಕಳು  ಅಧೀರರಾಗುವುದನ್ನು , ಗಮನಿಸಿ  ಸಾಕಷ್ಟು   ಆತ್ಮವಿಶ್ವಾಸ ದ. , ಮಾತುಗಳು ಮೂಲಕ ದೈರ್ಯ ತುಂಬಿದ್ದೇವೆ .   ಮಕ್ಕಳೇ  ಮುಂದಿನ  ಪರೀಕ್ಷೆಯು  ನಿಮ್ಮ ನಿಮ್ಮ ಶಾಲೆಗಳಲ್ಲಿ  ನಡೆಯುವುದಿಲ್ಲ. , ಹಾಗೇ. ನಿಮ್ಮ ಶಿಕ್ಷಕರಿರುವುದಿಲ್ಲಾ  ಎಂಬ ಬಗ್ಗೆ  ಗಾಬರಿ  ಬೇಡ . ಅಂಜಿಕೆಯೂ ಬೇಡ .    ಯಾರಾದರೂ ಎಲ್ಲರೂ ಶಿಕ್ಷಕರೇ. ಎಲ್ಲರಿಗೂ  ವಿದ್ಯಾರ್ಥಿಗಳ ಬಗ್ಗೆ  ಪ್ರೀತಿಪೂರ್ವಕ. ಕಾಳಜಿ  ಇದ್ದೇ  ಇರುತ್ತದೆ . ಆದ್ದರಿಂದ ಎಲ್ಲರೂ ದೈರ್ಯವಾಗಿ  ಪರೀಕ್ಷಾ ಕೇಂದ್ರಗಳಿಗೆ  ತೆರಳಿ ರಿ.  ನಿಮ್ಮ ಬರವಣಿಗೆಗೆ ಯಾರೂ ಅಡ್ಡಿ ಮಾಡುವುದಿಲ್ಲಾ. ಪರೀಕ್ಷಾ ದಿನದಂದು ಅರ್ಧ ಗಂಟೆ ಮೊದಲು ಕೇಂದ್ರಕ್ಕೆ ತೆರಳಿ ರಿ  , ನಿಮ್ಮ ಹಾಜರಿ ಸಂಖ್ಯೆಗಳನ್ನು ಖಾತ್ರಿ ಮಾಡಿಕೋಳ್ಳಿರಿ ,. ಶಾಂತ ಚಿತ್ತದಿಂದ  ಪ್ರಶ್ನೆ ಪತ್ರಿಕೆ ಪೂರ್ಣ ಓದೆಕೊಂಡು ನಂತರ  ಬರೆಯಲು ಪ್ರಾರಂಭಿಸಿ .  ನಿಮಗೆ ಚೆನ್ನಾಗಿ ಬರುವೆ ಪ್ರಶ್ನೆಗಳಿಗೆ  ಮೊದಲು ಉತ್ತರಿಸಿರಿ     ಪ್ರಶ್ನೆಗಳಿಗೆ ಎಷ್ಟು  ಉತ್ತರಿಸಬೇಕು , ಒಂದು ವಾಕ್ಯ, ಎರಡು ವಾಕ್ಯ ,  ಎಂಟು ಹತ್ತು ವಾಕ್ಯ , ಇದನ್ನು ಗಮನಿಸಿಕೊಂಡು , ಉತ್ತರಿಸಿರಿ .    ಉತ್ತರ ತಿಳಿದಿದೆ ಎಂಬ ಕಾರಣಕ್ಕೆ ,  ಅನವಶ್ಯಕವಾಗಿ  , ಹೆಚ್ಚು ಬರೆದು  ಸಮಯ ವ್ಯರ್ಥಮಾಡಿಕೊಳ್ಳದಿರಿ .      ಚನ್ನಾಗಿ ಗೊತ್ತಿರುವ ಪ್ರಶ್ನೆ ಗಳನ್ನು ಮೊದಲು ಬರೆಯಿರಿ. ಆಯಾಯ ಕ್ರಮಾಕ್ಷರ  ಪ್ರಶ್ನೆ ಸಂಖ್ಯೆ ಯನ್ನು  ಮರೆಯದೆ ಬರೆಯಿರಿ, ಹಾಗೂ ಬರೆದಾದ ಪ್ರಶ್ನೆ ಯನ್ನು  ರೈಟ್ ಮಾರ್ಕ್ ಮಾಡಿಕೊಳ್ಳಿ.   ಇದರಿಂದ  ನೀವು ಇನ್ನೂ ಉತ್ತರಿಸಬೇಕಾದ ಪ್ರಶ್ನೆ ಗಳೆಷ್ಟಿವೆ ಎಂದು  ತಿಳಿಯುತ್ತದೆ. ಸಮಯ ಹೊಂದಾಣಿಕೆ ಮಾಡಿಕೊಳಲೂ ಸಹಾಯಕವಾಗುತ್ತದೆ.      ಉತ್ತರ ಪತ್ರಿಕೆ ಕೊಟ್ಟಾಗ ಮೊದಲು ನಿಮ್ಮ ಹಾಜರಿ ಸಂಖ್ಯೆಯನ್ನು ಮೊದಲು ಬರೆಯಿರಿ ಹೆಚ್ಚುವರಿ ಹಾಳೆ ತೆಗೆದು ಕೊಂಡಾಗ ಲೂ ಹಾಜರಿ ಸಂಖ್ಯೆಹಾಕಲು  ಮರೆಯದಿರಿ. ಹೊಸಜಾಗ  ಜನಜಂಗುಳಿ , ಪೊಲೀಸ್ ವ್ಯವಸ್ಥೆ , ಪೋಷಕರು ದಂಡು  ನೋಡಿ ಗಾಬರಿಯಾಗಿ ದಿಲಿ.   ಪೋಷಕರೇ  ದಯಮಾಡಿ ಪರೀಕ್ಷಾ ಕೇಂದ್ರದ ವರೆಗೆ ಹೋಗಿ  ಅತಿ ಒತ್ತಡ ಹೇರುವುದು ಮೂಲಕ ಭಯಪಡಿಸದಿರಿ.  ಪರೀಕ್ಷಾ ಕೇಂದ್ರಗಳಿಗೆ ತೆರಳುವ   ಹಿಂದಿನ ದಿನವೇ  ಚೆನ್ನಾಗಿ ಬರೆಯುವ ಎರಡು, ಮೂರು ಪೆನ್ , ನಿಮ್ಮ ಪ್ರವೇಶಪತ್ರ, , ಪನೆಸಿಲ್ , ಎರಾಸರ್, ಇತ್ಯಾದಿಗಳನ್ನು  ರೆಡಿಯಾಗಿ ಇಟ್ಟುಕೊಂಡಿರಿ.    ಮಕ್ಕಳೇ ಯಾವುದೇ ರೀತಿಯ  ಕಾಪಿಗೆ ಮನಸ್ಸು ಮಾಡಿದಿರಿ, ನೀವು ಇದುವರೆಗೆ ಕಲಿತಿರುವುದು ನನ್ನು ಬರೆಯಿರಿ , ಬೇರೆಯವರು ಹೇಳುವ  ಉತ್ತರಗಳನ್ನು ನಂಬದಿರಿ.   ಯಾವುದೋ ಒಂದು ಪ್ರಶ್ನೆಗೆ  ಸರಿಯಾಗಿ  ಉತ್ತರಿಸಲಾಗಲಿಲ್ಲಾ , ಅಯ್ಯೋ ನನಗೆ , ಅಂಕ ಕಡಿಮೆಯಾಗುತ್ತದೆ ಎಂದು ಒತ್ತಡಕ್ಕೊಳಗಾಗಬೇಡಿ ಅಂಕ ಮುಖ್ಯವಲ್ಲಾ , ಜ್ನಾನಮುಖ್ಯ.  ಜೀವನ  ದೊಡ್ಡದಿದೆ.  ಮುಂದೆ  ಇನ್ನೂ ಉತ್ತಮವಾಗಿ ಮುಂದುವರಿಯಲು ಸಾಕಷ್ಟು ಅವಕಾಶಗಳಿವೆ .  ಒಂದು ವಿಷಯ ಮುಗಿದ ನಂತರ. ಮುಗಿದ ವಿಷಯದ. ಬಗೆಗೆ ಚಿಂತಿಸಿ  ಮುಂದಿನ ವಿಷಯಕ್ಕೆ   ತೊಂದರೆಮಾಡಿಕೊಳದಿರಿ ಮುಗಿದ ವಿಷಯದ ಬಗ್ಗೆ ಚರ್ಚಿಸಲು ಹೋಗದಿರಿ.   ಪೋಷಕರೇ  ನಮ್ಮ ಒತ್ತಡಗಳನ್ನು ಸಮಸ್ಯೆಗಳನ್ನು  ಮನೆಯಲ್ಲಿ , ಚರ್ಚೆ ಮಾಡುತ್ತಾ,  ಮಕ್ಕಳ ಮನಸಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳಿರಿ. ಮಕ್ಕಳೇ. ಮತ್ತೊಂದು ಮಹಾಮಾರಿ ಕೊರೋನಾ  ಎಂಬ ವೈರಾಣು ಆರೋಗ್ಯ ದ ಮೇಲೆ ದುಷ್ಪರಿಣಾಮ ಬೀರುತ್ತಿದೆ .  ಇದರಿಂದ ಸಾರ್ವಜನಿಕ ಸಂಪರ್ಕದಿಂದ ಇರಿ ಮನೆಯಲ್ಲಿಯೇ ಇರಿ , ಹಾಗೂ ಆಗಾಗ ಸಾಬೂನಿನಿಂದ ಕೈಕಾಲು ತೊಳೆಯುತ್ತಾ ಇರಿ, .ರೋಗಿ ಹರಡದಂತೆ ತಡೆಯಲು ನೀವೂ ಸಹಕರಿಸುವುದರೊಂದಿಗೆ , ನಿಮ್ಮ ಹಾಗೂ ಕುಟುಂಬ ಸದಸ್ಯರ ಆರೋಗ್ಯ ಕಾಪಾಡಲು ಉತ್ತಮ ಸಹಕಾರ ಕೊಡಿ  ಹಾಗೆಯೇ ವಿಚಲಿತರಾಗದೆ ಮುಂಬರುವ ಪರೀಕ್ಷೆ ಯನ್ನು ಧೈರ್ಯದಿಂದ  ಎದುರಿಸುವ ತಯಾರಿ ಮಾಡಿಕೊಳ್ಳಲು ಸದಾವಕಾಶವಿದೆಂದು  ಭಾವಿಸಿರಿ . ಬೇಜವಾಬ್ದಾರಿ ಬೇಡ . ಭಯವೂ ಬೇಡ ಇನ್ನು ಪೋಷಕರೇ ಮಕ್ಕಳೊಂದಿಗೆ  ಪ್ರೀತಿಯಿಂದ  ವರ್ತಿಸುತ್ತಾ,  ಅವರ,  ಆರೋಗ್ಯನೋಡಿಕೊಂಡು  ಅವರೊಂದಿಗೆ  ಇರಲು. ಪ್ರಯತ್ನಿಸಿ , ಮಕ್ಕಳನ್ನು ಒಂಟಿಯಾಗಿ ಬಿಡದಿರಿ. ನೀನು. ಓದಿದೀಯಾ  ಚೆನ್ನಾಗಿ ಬರೀತೀಯಾ  ಅನ್ನೋ ನಂಬಿಕೆ ಇದೆ . ಬರೀ ಗಾಬರಿಯಾಗಬೇಡಿ ಎಂಬ ವಿಶ್ವಾಸದ   ಮಾತುಗಳ  ಮೂಲಕ  ಪ್ರೋತ್ಸಾಹಿಸಿ.   ಎಲ್ಲರಿಗೂ  ಶುಭವಾಗಲಿ .ನೀವೆಲ್ಲರೂ ಶುಭತರುವಿರೆಂಬ  ನಂಬಿಕೆಯಿಂದ ನಮಸ್ಕಾರಗಳೊಂದಿಗೆ    ******

ಪ್ರಸ್ತುತ

ಹೊಸ ಮನ್ವಂತರ ಗಣೇಶಭಟ್ ಶಿರಸಿ ಹೊಸ ಮನ್ವಂತರ ದಾರಿ ತೋರಲಿರುವ ಕೊರೋನಾ ಪಿಡುಗು ಆಗಿದ್ದೆಲ್ಲ ಒಳ್ಳೆಯದಕ್ಕೇ, ಆಗುತ್ತಿರುವುದು ಒಳ್ಳೆಯದಕ್ಕೆ. ಮುಂದಾಗುವುದೂ ಒಳ್ಳೆಯದಕ್ಕೇ ಎಂಬುದು ಭಗವದ್ಗೀತೆಯ ಪಾಠ. ಕೊರೊನಾ ಪಿಡುಗಿನಿಂದ ಉಂಟಾಗಿರುವ ಆವಾಂತರವನ್ನು ಗಮನಸಿದಾಗ ಮುಂಬರುವ ದಿನಗಳಲ್ಲಿ ಆಗುವ ಒಳಿತನ್ನು ಸುಲಭದಲ್ಲಿ ಊಹಿಸಬಹುದು. ಕೊರೊನಾ ಕುರಿತು ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳು ಭೀತಿಯನ್ನು ಹುಟ್ಟಿಸುತ್ತಿವೆ. ಕೊರೊನಾ ವೈರಾಣುವಿನಿಂದ ಸತ್ತವರ ಸಂಖ್ಯೆ ಮೂವತ್ತು ಸಾವಿರ ಮೀರಿದೆ. ಸೋಂಕಿತರ ಸಂಖ್ಯೆ ಐದು ಲಕ್ಷ ಮೀರುತ್ತಿದೆ ಇತ್ಯಾದಿ. ಯಾವುದೇ ರೋಗ ಇಡೀ ಪ್ರಪಂಚವನ್ನು ಕಾಡುತ್ತಿರುವದು ಇದು ಮೊದಲನೇ ಬಾರಿಯಂತೂ ಅಲ್ಲ. ಜನವರಿ ೧೯೧೮ ರಿಂದ ಡಿಸೆಂಬರ್ ೧೯೨೦ ರವರೆಗೆ ಇಡೀ ಜಗತ್ತನ್ನು ಆವರಿಸಿ, ಅಂದಿನ ಜನಸಂಖ್ಯೆಯ ಕಾಲು ಭಾಗದಷ್ಟು ಜನರಿಗೆ ತಗಲಿ, ಸುಮಾರು ಐದು ಕೋಟಿ ಜನರ ಮರಣಕ್ಕೆ ಕಾರಣವಾದ ಸ್ಪೇನ್‌ನ ಪ್ಲೂ ಎಂದೇ ಕರೆಯಲ್ಪಡುವ , ಪ್ಲೂ ಇತಿಹಾಸದಲ್ಲಿ ದಾಖಲಾದ ಭೀಕರ ಸಾಂಕ್ರಾಮಿಕ ರೋಗವೆಂದು ಹೇಳಲಾಗುತ್ತದೆ. ಪ್ಲೂ ವೈರಾಣುವಿನ ಆಕ್ರಮಣ ಶೀಲತೆಗಿಂತ ಅಪೌಷ್ಠಿಕತೆ , ವೈದ್ಯಕೀಯ ಸೌಲಭ್ಯಗಳ ಕೊರತೆ, ನೈರ್ಮಲ್ಯದ ಅಭಾವ ಮುಂತಾದವುಗಳೇ ಸಾವಿಗೆ ಕಾರಣವೆಂದು ನಂತರ ನಡೆಸಿದ ಅಧ್ಯಯನದಿಂದ ಬಹಿರಂಗವಾಯಿತು. ಇನ್‌ಪ್ಲೂಯೆಂಜಾ ಹಾಗೂ ಅಂತಹುದೇ ಜ್ವರಕ್ಕೆ ಕಾರಣವಾದ ವೈರಾಣುಗಳ ವಿವಿಧ ಪ್ರಬೇಧಗಳು ಮಾನವನನ್ನು ಕಾಡುತ್ತಲೇ ಇವೆ. ಇತ್ತೀಚಿನ ದಶಕಗಳಲ್ಲಿ ಜನರನ್ನು ಕಂಗೆಡಿಸುತ್ತಿರುವ ಮಂಗನಕಾಯಿಲೆ, ಚಿಕನ್‌ಗುನ್ಯ, ಸಾರ್ಸ್, ಹಂದಿಜ್ವರ ಮುಂತಾದ ಹಲವು ವಿಧದ ಅನಾರೋಗ್ಯವನ್ನುಂಟು ಮಾಡುವ ವೈರಾಣುಗಳಿಂದಲೇ ರೋಗಿಗಳ ಸಾವುಂಟಾಗುತ್ತದೆ ಎನ್ನುವುದಕ್ಕಿಂತ ಹೆಚ್ಚಾಗಿ ಇತರ ರೋಗಗಳಿಂದ ಪೀಡಿತರಾಗಿರುವವರೇ ಈ ಸೋಂಕು ತಗಲಿದ ನಂತರ ಮರಣ ಹೊಂದುವದು ಕಂಡು ಬಂದಿದೆ. ಮಾಧ್ಯಮಗಳ ಅಬ್ಬರದ ಪ್ರಚಾರಕ್ಕೆ ಕಂಗೆಟ್ಟಿರುವ ಜನರನ್ನು ಇನ್ನಷ್ಟು ಬೆದರಿಸುವಂತೆ ಸರ್ಕಾರದ ನಡೆಯಿದೆ. ಕೊರೊನಾ ವೈರಸ್ ಇಂದು ಪ್ರಚಾರ ಪಡೆಯುತ್ತಿರುವಷ್ಟು ಆಕ್ರಮಣಕಾರಿಯೇ ಎಂಬುದನ್ನು ಅರಿಯಲು ವೆಬ್‌ಸೈಟ್ ಮೊರೆ ಹೋಗುವುದು ಉತ್ತಮ. ಹಲವು ದೇಶಗಳ ಆರೋಗ್ಯ ಇಲಾಖೆಯ ಅಧಿಕೃತ ವೆಬ್ ಸೈಟ್‌ಗಳು ತಮ್ಮ ದೇಶದಲ್ಲಿ ವಿವಿಧ ಕಾರಣಗಳಿಂದ ಮೃತರಾದವ ಅಂಕಿಅಂಶಗಳನ್ನು ಪ್ರಕಟಿಸುತ್ತವೆ. ಪ್ಲೂ ಸಂಬಂಧಿತ ವೈರಾಣು ಪೀಡೆಯಿಂದ ಮರಣ ಹೊಂದಿದವರು (Deaths Due to Flue Related Diseases)ಎಂದು ಅಂತರ್ಜಾಲದಲ್ಲಿ ದೇಶವಾರು ಹುಡುಕಿದರೆ ಕೆಳಗಿನ ಮಾಹಿತಿ ಲಭ್ಯವಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಶೀತಜ್ವರ ಸಂಬಂಧಿತ ರೋಗಗಳಿಂದ ಜಗತ್ತಿನಾದ್ಯಂತ ಪ್ರತಿ ವರ್ಷ ಆರರಿಂದ ಆರೂವರೆ ಲಕ್ಷ ಜನರು ಸಾಯುತ್ತಾರೆ. ಪೃಥ್ವಿಯ ಉತ್ತರ ಗೋಲಾಧದಲ್ಲಿ ಅಕ್ಟೋಬರ್ ಕೊನೆಯವಾರದಿಂದ ಎಪ್ರಿಲ್ ಕೊನೆಯವರೆಗೂ ಚಳಿಗಾಲ ಇರುವುದರಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿರುತ್ತದೆ.ಹೀಗಾಗಿ ಆ ಸಮಯದಲ್ಲಿ ಪಾಶ್ಚಾತ್ಯ ದೇಶದಲ್ಲಿ ಶೀತಜ್ವರ ಸಂಬಂಧಿತ ವೈರಾಣುಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತದೆ. ಅಮೇರಿಕಾ ಸರ್ಕಾರದ ಪ್ರಕಟಣೆಯಂತೆ ೨೦೧೭ ರಲ್ಲಿ ಆ ದೇಶದಲ್ಲಿ ಮರಣಹೊಂದಿರುವ ಒಟ್ಟು ೨೮ ಲಕ್ಷ ಜನರಲ್ಲಿ ಪ್ಲೂ ಸಂಬಂಧಿತ ವೈರಾಣುವಿನಿಂದ ಸತ್ತವರ ಸಂಖ್ಯೆ ೫೫೬೭೨. ಈ ವಿಧದ ರೋಗಗಳಿಂದ ೨೦೧೯-೨೦ ರ ಸಾಲಿನಲ್ಲಿ ಸುಮಾರು ಎಂಬತ್ತು ಸಾವಿರ ಜನರು ಮರಣ ಹೊಂದಬಹುದೆಂದು ಅಲ್ಲಿನ ಸರ್ಕಾರ ಅಂದಾಜಿಸಿತ್ತು. ಭಾರತ ಸರ್ಕಾರದ ರಾಷ್ಟ್ರೀಯ ರೋಗನಿಯಂತ್ರಣ ಕೇಂದ್ರ (National Center For Disease Control) ಪ್ರಕಟಿಸಿರುವ ಮಾಹಿತಿಯಂತೆ ಶೀತಜ್ವರ ಸಂಬಂಧಿ ವೈರಾಣುಗಳಿಂದ ೨೦೧೯ ರಲ್ಲಿ ೨೮೭೯೮ ಜನರಿಗೆ ಸೋಂಕು ತಗುಲಿದ್ದು ೧೨೧೮ ಜನ ಸತ್ತಿದ್ದಾರೆ. ಅದೇ ವರ್ಷ ಕರ್ನಾಟಕ ದಲ್ಲಿ ೨೦೩೦ ಜನರಿಗೆ ಸೋಂಕು ತಗುಲಿದ್ದು ೯೬ ಜನರು ಮೃತ ಪಟ್ಟಿದ್ದರು. ೨೦೧೫ ರಲ್ಲಿ ಇಡೀ ದೇಶದಲ್ಲಿ ೪೨೫೯೨ ಸೋಂಕಿತರಲ್ಲಿ ೨೯೯೧ ಜನರ ಮರಣ ಹೊಂದಿದ್ದರೆ, ಕರ್ನಾಟಕದಲ್ಲಿ ಸೋಂಕಿತರು ೩೫೬೫ ಹಾಗೂ ೯೪ ಸಾವಿನ ಸಂಖ್ಯೆ. ೨೦೧೭ ರಲ್ಲಿ ದೇಶ ಹಾಗೂ ಕರ್ನಾಟಕದಲ್ಲಿ ಅನುಕ್ರಮವಾಗಿ ಸೋಂಕಿತರು ೩೮೮೧೧ ಮತ್ತು ೩೨೬೦, ಸಾವು ೨೨೭೦ ಮತ್ತು ೧೫. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೀತಜ್ವರ ವೈರಾಣುವಿನ ಕುಟುಂಬಕ್ಕೆ ಸೇರಿದ ಕೊರೊನಾದಿಂದ ಆಗುತ್ತಿರುವ ಅನಾಹುತಕ್ಕಿಂತ ಅದರ ವೈಭವೀಕರಣವೇ ಹೆಚ್ಚು ಎಂಬುದು ವೇದ್ಯವಾಗುತ್ತದೆ. 24×7 ರ ಸುದ್ದಿ ವಾಹಿನಿಗಳು, ಜಾಗತಿಕ ಆರ್ಥಿಕ ಷಡ್ಯಂತ್ರ, ಮಾಧ್ಯಮ ಪ್ರತಿನಿಧಿಗಳಲ್ಲಿ ಅಧ್ಯಯನದ ಕೊರತೆಗಳೇ ಇವಕ್ಕೆ ಮುಖ್ಯ ಕಾರಣಗಳು. ಕಳೆದ ವಾರ ಅಂದರೆ ೧೯-೦೩-೨೦೨೦ ರಂದು ಬ್ರಿಟನ್ ಸರ್ಕಾರ ಕೊರೊನಾ ವೈರಾಣುವಿನ ತೀವ್ರತೆಯ ಕುರಿತಾದ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿತು. ಅಲ್ಲಿನ ತಜ್ಞರ ತಂಡವು ಕೆಲವು ತಿಂಗಳುಗಳ ಹಿಂದೆ ನೀಡಿದ ತಮ್ಮ ಅಭಿಪ್ರಾಯವನ್ನು ಪುನರ್ವಿಮರ್ಶಿಸಿ , ಕೊರೊನಾ ವೈರಸ್ ತಾವು ಊಹಿಸಿದಷ್ಟು ಆಕ್ರಮಣಕಾರಿ ಮತ್ತು ಅಪಾಯಕಾರಿಯಲ್ಲವೆಂದು ಘೋಷಿಸಿತು. ಬ್ರಿಟನ್ ಪ್ರಧಾನಿಗೆ ಸೋಂಕು ತಗಲಿರುವುದನ್ನೇ ವೈಭವೀಕರಿಸುತ್ತಿರುವ ಮಾಧ್ಯಮದವರಿಗೆ ಈ ವರದಿ ಕಾಣಲೇ ಇಲ್ಲ. ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದ ಅತಿ ಹೆಚ್ಚು ತೊಂದರೆಗೊಳಗಾದವರೆಂದರೆ ದೈನಂದಿನ ದುಡಿಮೆಯಿಂದ ಬದುಕು ಸಾಗಿಸುವವರು. ನಿಲ್ಲಲು ನೆಲೆ ಇಲ್ಲದೆ, ದುಡಿಮೆಯ ಅವಕಾಶ ಸಿಗದೇ, ಊಟ, ತಿಂಡಿಗಾಗಿ ಪರದಾಡುವ ಬದಲು ನಗರಗಳಿಂದ ತಮ್ಮ ಗ್ರಾಮಗಳಿಗೆ ಮರು ವಲಸೆ ಹೊರಟಿದ್ದಾರೆ. ಕೊರೊನಾ ರೋಗದ ಭಯಕ್ಕಿಂತ ಹೆಚ್ಚಾಗಿ ಹಸಿವು ಅವರನ್ನು ಕಾಡುತ್ತಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ನೂರಾರು ಕಿ.ಲೋ ಮೀಟರ್ ನಡೆದು ತಮ್ಮ ಊರಿನತ್ತ ಸಾಗುತ್ತಿದ್ದಾರೆ. ದುಡಿಯಲು ಬಂದಿರುವ ಊರಿನಲ್ಲಿ ಇದ್ದು, ಹಸಿವೆಯಿಂದ ಸಾಯುವ ಬದಲಿಗೆ ತಮ್ಮ ಊರಿಗೆ ತಲ್ಪಿ ರೋಗದಿಂದ ಸತ್ತರೂ ಚಿಂತೆಯಿಲ್ಲವೆಂದೂ ಗೋಳಾಡುತ್ತಿರುವ ಜನಸಾಮಾನ್ಯರ ಸಂಕಷ್ಟ ಮಾಧ್ಯಮ ಸರ್ವಜ್ಞರಿಗೆ, ರಾಜಕಾರಣಿಗಳಿಗೆ ಅರ್ಥವಾಗುವುದಿಲ್ಲ. ಮನೆಯಲ್ಲಿ ಅಗತ್ಯ ವಸ್ತುಗಳಿಲ್ಲದೇ , ಮಾರುಕಟ್ಟೆಯಲ್ಲಿ ಲಭ್ಯವಾಗದಿರುವ ಪರಿಸ್ಥಿತಿಯಲ್ಲಿ ಜನರು ನಿಸ್ಸಹಾಯಕರಾಗಿ ಬಾಗಿಲು ಮುಚ್ಚಿರುವ ಮಾರುಕಟ್ಟೆಯಲ್ಲಿ ಕಾಣುವುದನ್ನು ನಮ್ಮ ಜನಕ್ಕೆ ಬುದ್ದಿಯೇ ಇಲ್ಲ ವೆಂದು ಕೂಗಾಡುತ್ತಿರುವ ಮಾಧ್ಯಮ ಪ್ರಭೃತಿಗಳು ಮನುಷ್ಯತ್ವವನ್ನು ಮರೆತಿದ್ದಾರೆಯೇ ಎಂದು ಎನಿಸುತ್ತದೆ. ದೇಶದ ಲಾಕ್ ಡೌನ್‌ಗೆ ಜನರು ಸ್ಪಂದಿಸುತ್ತಿರುವುದಕ್ಕೆ ಮುಖ್ಯ ಕಾರಣವೆಂದರೆ ಕೊರೊನಾದಿಂದ ಉಂಟಾಗಬಹುದಾದ ಸಾವಿನ ಭೀತಿ (ಈ ಭೀತಿ ಹುಟ್ಟ್ಟಿಸಲು ಮಾಧ್ಯಮಗಳೇ ಕಾರಣ) ಹಾಗೂ ಪೋಲೀಸ್ ಲಾಠಿಯ ಹೆದರಿಕೆ. ಬೀದಿಯಲ್ಲಿ ಜನರ ಸಂಚಾರ ವಿರಳವಾಗಿರುವುದನ್ನೇ ಲಾಕ್ ಡೌನ್ ಯಶಸ್ಸು ಎಂದು ಬಣ್ಣಿಸುವವರಿಗೆ ಕಟಾವಿಗೆ ಬಂದಿರುವ ಬೆಳೆ ಹೊಲದಲ್ಲೇ ಕೊಳೆಯುತ್ತಿರುವುದನ್ನು ಮೌನವಾಗಿ ಕಾಣುವ ರೈತನ ಹತಾಶೆ, ಅಂಗಡಿ ಬಾಗಿಲು ತೆರೆಯಲಾರದೇ ಪರಿತಪಿಸುತ್ತಿರುವ ಸಣ್ಣ ಪುಟ್ಟ ಅಂಗಡಿಕಾರರು ಹಾಗೂ ಉದ್ಯಮಿಗಳ ಹತಾಶೆ ಅರ್ಥವಾಗುವುದಿಲ್ಲ.. ಅಮೇರಿಕಾ ಮತ್ತು ಪಾಶ್ವಾತ್ಯ ದೇಶಗಳನ್ನು ಆರ್ಥಿಕವಾಗಿ ಮಣಿಸಿದ ಚೀನಾ ತೋಡಿದ ಖೆಡ್ಡಾಕ್ಕೆ ಆ ದೇಶಗಳು ಬಿದ್ದಿವೆ. ಪಾಶ್ಚಾತ್ಯ ದೇಶಗಳ ಅಂಧಾನುಕರಣೆ ಮಾಡಲು ಹೋಗಿ ಭಾರತದ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಕಬ್ಬಿಣದ ಪರದೆಯ ಹಿಂದೆ ಕಾರ್ಯನಿರ್ವಹಿಸುತ್ತಾ, ತನ್ನದೇ ಆದ ಅಂತರ್ಜಾಲ ವ್ಯವಸ್ಥೆಯನ್ನು ಹೊಂದಿರುವ ಚೀನಾ ದೇಶವು , ತನ್ನ ದೇಶದಲ್ಲಿ ಕೊರೊನಾ ಪೀಡಿತವಾದ ಪ್ರದೇಶವನ್ನು ಇಡೀ ಜಗತ್ತಿಗೆ ತೆರೆದು ತೋರಿಸಿತು. ಸರ್ಕಾರದ ನಡೆ ವಿರೋಧಿಸುವ ಸಾವಿರಾರು ಜನರನ್ನು ಪ್ರತಿದಿನ ಮಟ್ಟ ಹಾಕುತ್ತಿದ್ದರೂ ಬಾಹ್ಯ ಜಗತ್ತಿಗೆ ಗುಟ್ಟು ಬಿಟ್ಟು ಕೊಡದ ಚೀನಾ , ರೋಗಗ್ರಸ್ಥರ ಕೆಲವರ ಸಾವನ್ನು ಇಡೀ ಜಗತ್ತಿಗೆ ಪ್ರದರ್ಶಿಸತೊಡಗಿತು. ಕೊರೊನಾ ನಿಯಂತ್ರಣಕ್ಕಾಗಿ ಬಲಾತ್ಕಾರದ ಲಾಕ್ ಡೌನ್ ಮಾಡುತ್ತಿದ್ದೇವೆಂದು ಮಾಧ್ಯಮಗಳೆದುರು ಚೀನಾ ಬಿಂಬಿಸಿತು. ಮನೆಮನೆಗಳಲ್ಲೂ ಸಾಮಾಜಿಕ – ಅಂತರ ಕಾದುಕೊಳ್ಳಲು ಕೆಲವೆಡೆ ಪೋಲೀಸ್ ಬಲದಿಂದ ಪ್ರಯತ್ನಿಸುತ್ತಿರುವುದಾಗಿಯೂ ತೋರಿಸಲಾಯಿತು. ಇದಾದ ಕೆಲವೇ ವಾರಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆಯೆಂದು ಘೋಷಿಸಲಾಯಿತು. ಸಾಕಷ್ಟು ಪೂರ್ವತಯಾರಿಯಿಂದ ಚೀನಾ ನಡೆಸಿದ ಈ ನಾಟಕದ ಖೆಡ್ಡಾಕ್ಕೆ ಪಾಶ್ಚಾತ್ಯ ದೇಶಗಳು ಸುಲಭವಾಗಿ ಬಿದ್ದವು. ಅಷ್ಟರಲ್ಲಾಗಲೇ ಕೊರೊನಾ ಪಾಶ್ಚಾತ್ಯ ದೇಶಗಳಲ್ಲಿ ಹಬ್ಬಿದ್ದರಿಂದ ( ಪ್ರತಿ ವರ್ಷ ಚಳಿಗಾಲದಲ್ಲಿ ವ್ಯಾಪಕವಾಗುವ ಶೀತಜ್ವರ ರೀತಿಯ ರೋಗಗಳಂತೆ) ಅವು ಕೂಡಾ ಚೀನಾದ ನಾಟಕವನ್ನು ನಂಬಿ ಲಾಕ್ ಡೌನ್ ಘೋಷಿಸಿಕೊಂಡವು. ಇದರ ಪರಿಣಾಮದಿಂದ ಆರ್ಥಿಕ ಹಿನ್ನೆಡೆಯಾಗಿ ಶೇರು ಮಾರುಕಟ್ಟೆ ಕುಸಿಯತೊಡಗಿತು. ಈ ಸನ್ನಿವೇಶವನ್ನು ನಿರೀಕ್ಷಿಸಿದ್ದ ಚೀನಾ ತನ್ನ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಬಹುರಾಷ್ಟ್ರಿಯ ಕಂಪನಿಗಳ ಶೇರನ್ನು ಖರೀದಿಸಿ ತನ್ನ ಹತೋಟಿಗೆ ತೆಗೆದುಕೊಂಡಿತು. ಸಾಮಾಜಿಕವಾಗಿ, ಆರ್ಥಿಕವಾಗಿ, ಪಾಶ್ಚಾತ್ಯ ದೇಶಗಳಿಂದ ತೀರಾ ಭಿನ್ನವಾಗಿರುವ ಭಾರತವೂ ಲಾಕ್ ಡೌನ್ ಘೋಷಿಸುವ ಪ್ರಮಾದ ಎಸಗಿ ಜನಸಾಮಾನ್ಯರನ್ನು ಹಾಗೂ ದೇಶದ ಅರ್ಥವ್ಯವಸ್ಥೆಯನ್ನು ಸಂಕಷ್ಟಕ್ಕೆ ದೂಡಿತು. ಇಲ್ಲಿ ಕೂಡಾ ಶೇರುಮಾರುಕಟ್ಟೆ ಕುಸಿತ ಕಂಡಿತು. ಬೆರಳೆಣಿಕೆಯ ಶ್ರೀಮಂತರು ಈ ಪರಿಸ್ಥಿತಿಯ ಲಾಭಪಡೆದು, ಸಾರ್ವಜನಿಕರ ಕೈ ಸೇರಿದ್ದ ತಮ್ಮದೇ ಕಂಪನಿಯ ಷೇರುಗಳನ್ನು ಅಗ್ಗದಲ್ಲಿ ಖರೀದಿ ಮಾಡಿ ತಮ್ಮ ಪಾರಮ್ಯ ಮತ್ತು ನಿಯಂತ್ರಣ ಹೆಚ್ಚಿಸಿಕೊಂಡಿದ್ದಾರೆ. ಕೊರೊನಾ ಭಯದಿಂದ ಹೊರಬಂದು ಪುನಃ ದೇಶದ ಹಾಗೂ ವೈಯಕ್ತಿಕ ಆರ್ಥಿಕತೆಯನ್ನು ಬಲಪಡಿಸುವುದು ಈಗ ಅನುಸರಿಸುತ್ತಿರುವ ಅಭಿವೃದ್ಧಿಯ ಮಾದರಿ ಎಂದರೆ ಬಂಡವಾಳವಾದ ಆಧಾರಿತ ಕೇಂದ್ರೀಕೃತ ಅರ್ಥನೀತಿಯನ್ವಯ ಸಾಧ್ಯವಾಗದ ಕೆಲಸ. ಈ ನಿರಾಶಾದಾಯಕ ಸ್ಥಿತಿಯಲ್ಲಿ ಅಭಿವ್ಯದ್ಧಿಯ ಪರ್ಯಾಯ ಮಾದರಿಗಳ ಕುರಿತು ಚಿಂತಿಸುವುದು ಅನಿವಾರ್ಯವಾಗಲಿದೆ. ಉದಾಹಣೆಗಾಗಿ ನಗರಗಳಿಂದ ಕಾರ್ಮಿಕರ ಮರು ವಲಸೆಯಿಂದಾಗಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗದ ಹೊಸ ಸಮಸ್ಯೆ ಎದುರಾಗಲಿದೆ. ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಗಳಿಂದ ಇದು ಪರಿಹಾರ ಕಾಣದು. ಪ್ರಾದೇಶಿಕ ಆರ್ಥಿಕ ಸ್ವಾವಲಂಬನೆ ಸೂತ್ರವೇ ಇದಕ್ಕೆ ಪರಿಹಾರ. ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಪ್ರದೇಶವನ್ನು ಗುರ್ತಿಸಿ ( ಇದು ಒಂದಿಡೀ ರಾಜ್ಯವಾಗಬಹುದು ಅಥವಾ ಒಂದೇ ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಘಟಕಗಳೂ ಆಗಬಹುದು) ಅಲ್ಲಿನ ಪ್ರತಿಯೋರ್ವ ವ್ಯಕ್ತಿಗೂ ಫಲಪ್ರದವಾದ ಉದ್ಯೋಗ ಸೃಷ್ಟಿಸುವ ಸಲುವಾಗಿ ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಉದ್ದಿಮೆ ಸ್ಥಾಪಿಸಲು ಪ್ರೋತ್ಸಾಹ ನೀಡುವ ಕಾರ್ಯವಾಗಬೇಕು. ದೆಹಲಿ, ಬೆಂಗಳೂರು, ಚೆನ್ನೈಗಳಲ್ಲಿ ಕೇಂದ್ರೀಕೃತವಾಗಿರುವ ಉದ್ದಿಮೆಗಳನ್ನು ದೇಶದ ಉದ್ದಗಲಕ್ಕೂ ವಿಸ್ತರಿಸುವ ಕುರಿತು ಯೋಚಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ದೊರಕುತ್ತದೆ. “ಕರ್ನಾಟಕದ ಉದ್ಯೋಗ ಕನ್ನಡಿಗರ ಹಕ್ಕು”, “ಕನ್ನಡಿಗರೆಲ್ಲರಿಗೂ ಕರ್ನಾಟಕದಲ್ಲೇ ಉದ್ಯೋಗ” ಎಂಬ ಈಗಾಗಲೇ ಪ್ರಾರಂಭವಾಗಿರುವ ಅಭಿಯಾನ ಇಡೀ ದೇಶವನ್ನು ವ್ಯಾಪಿಸಲಿದೆ. ಬಿಹಾರಿಗಳಿಗೆ ಬಿಹಾರದಲ್ಲೇ ಉದ್ಯೋಗ ಓಡಿಸ್ಸಿಗರಿಗೆ ಓಡಿಶಾದಲ್ಲೇ ಉದ್ಯೋಗ, ಮುಂತಾದ ಪ್ರಾದೇಶಿಕ ಆರ್ಥಿಕ ಸ್ವಾಯತ್ತತೆಯ ಚಳವಳಿಗಳು ಬಹುಬೇಗ ರೂಪುಗೊಳ್ಳಲಿವೆ. ಜಗತ್ತಿನ ಬಹಳಷ್ಟು ರಾಷ್ಟ್ರಗಳು ಲಾಕ್ ಡೌನ್ ಅನುಸರಸುತ್ತಿರುವುದರಿಂದಾಗಿ ಆಯಾತ ನಿರ್ಯಾತಗಳಿಗೆ ತಡೆ ಬಿದ್ದಿದೆ. ಉದಾಹರಣೆಗಾಗಿ ಭಾರತ ಮತ್ತು ವಿಯೇಟ್ನಾಂ ಅಕ್ಕಿಯ ನಿರ್ಯಾತಕ್ಕೆ ತಡೆ ಒಡ್ಡಿವೆ. ಆಹಾರ ಪದಾರ್ಥಗಳ ಆಯಾತವನ್ನೇ ಅವಲಂಬಿಸಿದ ದೇಶಗಳು ಇಂತಹ ಪರಿಸ್ಥಿತಿಯಲ್ಲಿ ಸಂಕಷ್ಟ ಎದುರಿಸಲಿವೆ. ಇದಕ್ಕೆ ಪರಿಹಾರವೆಂದರೆ , ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ವಸ್ತ್ರ, ವಸತಿ, ಶಿಕ್ಷಣ, ಔಷದೋಪಚಾರಗಳ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸುವುದು. ಚಿಕ್ಕಪುಟ್ಟ ದೇಶಗಳು, ದೇಶದ ಹಂತದಲ್ಲಿ ಸ್ವಾವಲಂಬಿ ಯಾಗುವ ರೀತಿಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತವೆ. ಆದರೆ ಭಾರತದಂತಹ ವೈವಿದ್ಯಮಯ ದೇಶದಲ್ಲಿ ಜೀವನದ ಕನಿಷ್ಠ ಅಗತ್ಯತೆಗಳ ಉತ್ಪಾದನೆಯ ಸ್ವಾವಲಂಬನೆಯನ್ನು ಪ್ರಾದೇಶಿಕ ಹಂತದಲ್ಲೇ ಸಾಧಿಸಬೇಕಾಗುತ್ತದೆ. ಪ್ರಕೃತಿ ಎಂದೂ ಪಕ್ಷಪಾತಿಯಲ್ಲ, ಪೃಥ್ವಿಯ ಎಲ್ಲೆಡೆಗೂ ಸಂಪನ್ಮೂಲಗಳನ್ನು ನೀಡಿದೆ ಹಾಗೂ ಅವುಗಳಲ್ಲಿ ವೈವಿಧತೆಯನ್ನು ತುಂಬಿದೆ. ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯನ್ನು ಗುರ್ತಿಸಿ, ಅವುಗಳನ್ನು ಸೂಕ್ತ ವಿಧಾನದಲ್ಲಿ ಬಳಸಿ, ಆ ಪ್ರದೇಶದ ವಾಸಿಗಳೆಲ್ಲರಿಗೂ ಉತ್ತಮವಾದ ಬದುಕು ಕಟ್ಟಿಕೊಳ್ಳುವ ರೀತಿಯನ್ನೂ ಕಂಡುಕೊಳ್ಳುವ ಬುದ್ಧಿಮತ್ತೆಯನ್ನು ಮಾನವನಿಗೆ ನೀಡಿದೆ. ನಿಸರ್ಗದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಮಾನವನ ಅಹಂಕಾರ ಚಿಕ್ಕ ಅಣು ಕೊರೊನಾ ವೈರಸ್ ಮುಖೇನ ಧೂಳೀಪಟವಾಗಿದೆ. ಇನ್ನು ಮುಂದಾದರೂ ಪರಿಸರ ಪೂರಕ ಅಭಿವೃದ್ಧಿ ಪಥದಲ್ಲಿ ನಡೆಯುವಂತೆ ಎಚ್ಚರಿಕೆಯನ್ನು ನೀಡಿದೆ. ಕೊರೊನಾ ವೈರಾಣು ಹರಡುವುದು ಸಂಪರ್ಕ, ಸ್ಪರ್ಶ, ಗಾಳಿಯ ಮೂಲಕ ಅಂದರೆ ಸ್ಥೂಲ ವಾಹಕಗಳ ಮೂಲಕ. ಇದಕ್ಕಿಂತ ಭಿನ್ನವಾದ, ಶಬ್ದಗಳ ಮೂಲಕ ಹರಡಬಲ್ಲ, ವಿಚಾರಗಳ ಮುಖೇನ ಪ್ರಸಾರಗೊಳ್ಳಬಲ್ಲ, ಅಣುಗಳ ಕುರಿತು

ಇತರೆ

ಸಂಸ್ಕೃತಿ ಉಳಿಸಿ  ಶೈಲಜಾ ಹಾಸನ ಮಕ್ಕಳಿಂದ ಸಂಸ್ಕೃತಿ ಉಳಿಸಿ ಬೆಳೆಸುವ ಪೋಷಕರ ಪಾತ್ರ        ಸಾಂಸ್ಕೃತಿಕವಾಗಿ ಶ್ರೀಮಂತವಾಗಿರೋ ಈ ದೇಶದಲ್ಲಿ  ಅದನ್ನು ಉಳಿಸಿ ಬೆಳೆಸುವ, ತಲೆಮಾರಿನಿಂದ ತಲೆಮಾರಿಗೆ ಅದನ್ನು ವರ್ಗಾಯಿಸುವ ಕಾರ್ಯಗಳು  ಇಂದು ಅಗತ್ಯ ವಾಗಿವೆ. ಇಂತಹ ಕಾರ್ಯಗಳನ್ನು ನಾವು ಮಕ್ಕಳಿಂದಲೇ ಪ್ರಾರಂಭ ಮಾಡುವದು ಸಂಸ್ಕೃತಿ ಯನ್ನು ಉಳಿಸುವ ದೃಷ್ಟಿಯಿಂದ ಹೆಚ್ಚು ಸೂಕ್ತ ಅನಿಸುತ್ತದೆ.ಆದರೆ ಅದು ಹೇಗೆ  ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಉದ್ಭವವಾಗುವುದು  ಸಹಜ.       ಮಕ್ಕಳು ತೋಟದಲ್ಲಿ ಅರಳಿ ನಗುತ್ತಿರುವ ಸುಂದರ ಹೂವುಗಳು .ಈ ಹೂಗಳು  ಸದಾ ನಳನಳಿಸುತ್ತಾ ಇರಬೇಕು .ಒಂದು ಪೀಳಿಗೆಯಿಂದ  ಮತ್ತೊಂದು ಪೀಳಿಗೆಗೆ ಸಂಸ್ಕೃತಿ ಯನ್ನು ಹೊತ್ತೊಯ್ಯ ಬೇಕು ಅನ್ನುವುದಾದರೆ   ಆ ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಅತ್ಯಂತ ಹೆಚ್ಚಿನ ಜವಾಬ್ದಾರಿ ತಗೊಬೇಕಾಗುತ್ತದೆ .ಪೋಷಕರು ಎಲ್ಲಾ ಜವಾಬ್ದಾರಿಯನ್ನು ಶಿಕ್ಷಕರ ಮೇಲೆಯೇ ಹೇರಿ ತಮ್ಮ ಜವಾಬ್ದಾರಿಯನ್ನು ಹಗುರ ಮಾಡಿಕೊಳ್ಳುತ್ತಿದ್ದಾರೆ . ಆದರೆ ಮಗು ಶಿಕ್ಷಕ ಹಾಗೂ ಪೋಷಕರನ್ನು ಅನುಕರಣೆ ಮಾಡುತ್ತವೆ . ಇಲ್ಲಿ ಇಬ್ಬರ ಪಾತ್ರವೂ ಅಪಾರ .            ಒಮ್ಮೆ ಒಬ್ಬಾತ ಸೈಕಲ್ ಅಂಗಡಿಯಲ್ಲಿ ಇರುವ ಸುಂದರ ಸೈಕಲ್‌ಗಳನ್ನು ಕಂಡು ಅಂಗಡಿಯಾತನನ್ನು ಕೇಳುತ್ತಾನೆ . “ಈ ಸೈಕಲ್ ಹೊಡೆಯಲು ಬರುತ್ತವೆ ಯೇ, ನನ್ನ ಮಗ ಈ ಸೈಕಲ್ ಮೇಲೆ ಕುಳಿತು ಸುಲಭವಾಗಿ ಚಲಿಸಬಲ್ಲವೇ” ಎಂದು ಕೇಳುತ್ತಾನೆ . “ಇದು ಉತ್ತಮ ಗುಣಮಟ್ಟದ ಸೈಕಲ್ ಯಾರೂ ಬೇಕಾದರೂ ಇದನ್ನು ಸುಲಭವಾಗಿ ಹೊಡೆಯಬಹುದು, ಯಾವುದೇ ಸಂಶಯವಿಲ್ಲದೆ ಕೊಂಡುಕೊಳ್ಳಿ “ಎಂದು ಹೇಳುತ್ತಾನೆ  ಅಂಗಡಿಯಾತ.        ಅತ್ಯಂತ ಆಸಕ್ತಿಯಿಂದ ಸೋಕಲ್ಕೊಂಡು ಕೊಂಡು ಹೋದ ವ್ಯಕ್ತಿ ಎರಡೇ ದಿನದಲ್ಲಿ ವಾಪಸ್ಸು ಬಂದು “ಏನಯ್ಯ  ಸೈಕಲ ಚೆನ್ನಾಗಿ ಹೊಡಿಬಹುದು ಅಂತ ಹೇಳಿ ಮೋಸ ಮಾಡಿಬಿಟ್ಟೆ . ನನ್ನ ಮಗ ಈ ಸೈಕಲಿನಿಂದ ಕೈಕಾಲು ಮುರಿದುಕೊಂಡಿದ್ದಾನೆ. ಎಂತಹ ಸೈಕಲನ್ನು ಕೊಟ್ಟು ಬಿಟ್ಟೆ. ನಿನ್ನ ಮಾತು ಕೇಳಿ ನಾನು ಕೆಟ್ಟೆ “ಎಂದು ಆ ವ್ಯಕ್ತಿ ಜೋರು ಮಾಡುತ್ತಾನೆ.   ಆಗ ಅಂಗಡಿಯ ಮಾಲಿಕ ” ಅಲ್ಲಾ  ಸ್ವಾಮಿ ನಾನು ಉತ್ತಮವಾದ  ಸೈಕಲನ್ನು ಕೊಟ್ಟಿದ್ದಿನಿ, ಒಳ್ಳೆಯ ಸೈಕಲ್ ಮಾರೋಕೆ ಸಾಧ್ಯವೇ ವಿನಃ ಸೈಕಲ್ ಹೊಡೆಯೋಕೆ ಬೇಕಾದ ಬ್ಯಾಲನ್ಸನ್ನು ಮಾರೋಕೆ ಸಾಧ್ಯ ಎನ್ರಿ. ಮೊದಲು ಸೈಕಲ್ ಬ್ಯಾಲನ್ಸನ್ನು ಕಲಿಸಿ ಕೊಡಿ ಅಂತ ದಬಾಯಿಸಿ ಕಳುಹಿಸಿ ಕೊಡುತ್ತಾನೆ .ಹೀಗೆ ಉತ್ತಮವಾದ ವಾಹನಗಳನ್ನು ಮಾರಬಹುದೇ ವಿನಾಃ ಕಲಿಯುವಿಕೆಗೆ ಬೇಕಾದ ಆಸಕ್ತಿ ಪ್ರಾವಿಣ್ಯತೆಯನ್ನು ಮಾರೋಕೆ ಸಾಧ್ಯವಿಲ್ಲ . ಅದೇ ರೀತಿ ಒಬ್ಬ ಶಿಕ್ಷಕ ಮಗುವಿಗೆ ಉತ್ತಮವಾಗಿ ಬೋಧಿಸ ಬಲ್ಲ . ಕಲಿಕೆಗೆ ಬೇಕಾದ ಎಲ್ಲಾ ಸಹಾಯವನ್ನು ಮಾಡಬಲ್ಲ. ಆದರೆ ಕಲಿಕೆ ಮಾತ್ರ ಮಗುವಿನಿಂದಲೇ ಆಗಬೇಕು , ಆ ಮಗು ಸ್ವತಃ ಕಲಿತಾಗ ಮಾತ್ರ ಅಕ್ಷರ , ಜ್ಞಾನ ವೃದ್ಧಿಯಾಗೋಕೆ ಸಾಧ್ಯ . ಇದನ್ನು ಪೋಷಕರು ಅರ್ಥ ಮಾಡಿಕೊಂಡು ತಮ್ಮ ಜವಾಾರಿಯನ್ನುಕೂಡ ಅರಿಯಬೇಕು .ಸುಂದರವಾಗಿ ಅರಳಿ ನಗುತ್ತಾ ಇರೊ ಹೂವುಗಳು , ಬಾಡೊಕ ಕಾರಣ ಇರುತ್ತೆ , ಗಿಡಕ್ಕೆ ಬೇಕಾದ ನೀರು , ಗೊಬ್ಬರ ಕಡಿಮೆ ಆದರೂ ಗಿಡ ಬಾಗುತ್ತದೆ, ಹೆಚ್ಚು ಆದರೂ ಗಿಡ ಬಾಗುತ್ತದೆ . ಇದಕ್ಕೆ ಕೂಡಬೇಕಾದಷ್ಟು ಪ್ರಮಾಣದ ನೀರು, ಗೊಬ್ಬರ ಕೊಡಬೇಕು . ಈಗಂತು ಎಲ್ಲಾ ಮನೆಗಳಲ್ಲೂ ಒಂದೊ , ಎರಡೋ ಮಕ್ಕಳಿರುತ್ತದೆ . ಮಗು ಕೇಂದ್ರೀಕೃತ ಸಂಸಾರಗಳೇ ಹೆಚ್ಚು . ಮಗುವಿನ ಬಗ್ಗೆ ವಿಪರೀತ ಕಾಳಜಿ, ಪ್ರೀತಿ , ವಾತ್ಸಲ್ಯ . ಅದು ಏನು ಹೇಳುತ್ತೊ ಅದನ್ನು ಕೊಡಿಸಿಬಿಡಬೇಕು.ಅದೆಷ್ಟೆ ದುಡ್ಡಾದ್ರು ಚಿಂತೆ ಇಲ್ಲ . ಅದರಿಂದ ಏನೇ ಹಾನಿಯಾದ್ರೂ ಪರವಾಗಿ ನಮ್ಮ ಮಗು ಬೇಸರ ಮಾಡ್ಕೊಬಾರದು ಅನ್ನೋ ಮನೋಭಾವ , ಇಂದಿನ ಹೆತ್ತವರಲ್ಲಿ ಹೆಚ್ಚು ಕಾಣ್ತಾ ಇದ್ದೇವೆ . ನಮಗಂತೂ ನಾವು ಬಯಸಿದ ಎಲ್ಲವನ್ನು ಈಡೇರಿಸಿ ಕೊಡೋ ಹೆತ್ತವರಿರಲಿಲ್ಲ . ಆಗೆಲ್ಲ ತಮಗೆಷ್ಟು ನಿರಾಶೆ ಆಗ್ತಾ ಇತ್ತು . ಬೇಸರ ಆಗ್ತ ಇತ್ತು . ಅಂತಹ ಬೇಸರ ತಮ್ಮ ಮುದ್ದು ಕಂದಮ್ಮಗಳಿಗಾಗಬಾರದು ಅನ್ನೋ ಆಲೋಚನೆ ಒಂದೆಡೆ ಆದರೆ , ತಾವು ಏನಾಗಬೇಕು ಅಂತ ಅಂದುಕೊಂಡಿದ್ದರೋ , ಅದು ತಮ್ಮ ಮಕ್ಕಳಾದ್ರೂ ಆಗಲಿ ಅನ್ನೋ ಒತ್ತಡ ತರೋದು , ಆ ಮಕ್ಕಳಿಗೆ ಆಸಕ್ತಿ ಇರಲಿ , ಬಿಡಲಿ , ತನ್ನಾಸೆಯನ್ನು ಮಗು ಈಡೇರಿಸಲೇಬೇಕು . ಉದಾಹರಣೆಗೆ ತಾನು ಡಾಕ್ಟರಾಗಲಿಲ್ಲ ಅಂತ ತನ್ನ ಮಗನಾದರೂ ಡಾಕ್ಟರಾಗಲಿ , ಮಗಳು ಇಂಜಿನಿಯರ್ ಆಗಲಿ , ನೃತ್ಯಗಾತಿ ಆಗಲಿ ಅನ್ನೋ ಒತ್ತಡ ಹೇರಿ , ಆ ಮಕ್ಕಳಿಗೆ ಅದರಲ್ಲಿ ಆಸಕ್ತಿ ಇಲ್ಲದಿದ್ದಾಗ ಅವು ಓದಿನಲ್ಲಿ ಬದುಕಿನಲ್ಲಿ ಆಸಕ್ತಿ ಕಳೊಂಡು ಏನೇನೋ ಅನಾಹುತ ಗಳಿಗೆ ಕಾರಣಕರ್ತರಾಗುತ್ತಾರೆ . ಇಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕು . ತಮ್ಮ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ, ಆಸೆ ಇದೆ ಅದನ್ನೆ ಓದಲು ಬಿಡಬೇಕು.ಎಲ್ಲಾ ಮಕ್ಕಳು ಡಾಕ್ಟರ್, ಇಂಜಿನಿಯರುಗಳೇ ಆಗಬೇಕೆ. ಜಾಗತಿಕರಣದಿಂದಾಗಿ ಇಂದು ನಮ್ಮ ದೇಶ ತೆರೆದ ಕೈ ಗಳಿಂದ ವಿದೇಶಿ ಸಂಸ್ಕೃತಿಯನ್ನು ಸ್ವಾಗತಿಸುತಿದೆ. ಇದರ ಪರಿಣಾಮ ಕೂಡ ನತಮ್ಮ ಪುಟಾಣಿಗಳ ಮೇಲೆ ಆಗ್ತಾ ಇದೆ . ಯಾವುದೊ ಪಾನಿಯಾ ಕುಡಿದ ಮಾತ್ರಕ್ಕೆ ತಾನು ಸಚಿನ್ ಅಂತೆ ದೊಡ್ಡ ಕ್ರಿಕೆಟಿಗವಾಗಬಹುದು ಅನ್ನೋ ಕನಸುಗಳನ್ನು ಇಂದಿನ ಟಿವಿ ಸಂಸ್ಕೃತಿ ಜಾಹೀರಾತು ನಮ್ಮ ಕಂದಮ್ಮಗಳಿಗೆ ಮಾಡ್ತಾ ಇದೆ. ರ ಯಾವುದೋ ಕ್ರೀಮ್ ಹಚ್ಚಿದರೆ ತಾನು ಐಶ್ವರ್ಯ ರೈ ಯಂತೆ ಸುಂದರ ಹುಡುಗಿಯಾಗ ಬಹುದು ಅನ್ನೋ ಕಲ್ಪನೆ ಹುಡುಗಿಯರಿಗೆ ಇರುತ್ತೆ.ಇಂತಹ ಪೊಳ್ಳು ಕನಸುಗಳಿಗೆ ನಾವು ಮಕ್ಕಳನ್ನು ಬಿಟ್ಟು ಕೊಡುತ್ತಾ ಇದ್ದೆವೆ. ಮಕ್ಕಳು ಆಸೆ ಪಟ್ಟು ಕುಡಿಯುವ ತಂಪು ಪಾನೀಯಗಳು, ಟಾಯ್ಲೆಟ್ ತೊಳೆಯುವ ಕ್ರಿಮಿ ನಾಶಕಗಳಿಗೆ ಸಮನಾಗಿರುತ್ತವೆ ಅನ್ನೋ ಸತ್ಯವನ್ನು ನಾವೇಕೆ ಮಕ್ಕಳಿಗೆ ತಿಳಿಸೊಲ್ಲ. ಸದಾ ಕುಡಿಯುವ ಆ ಪಾನೀಯಗಳಿಂದ ದಂತಗಳು ಕರಗಿ ಹೋಗುತ್ತವೆ ಅನ್ನೋ ನೈಜ ಚಿತ್ರಣಗಳನ್ನೆಕೆ ನಾವು ಮಕ್ಕಳಿಗೆ ಕೊಡುತ್ತಿಲ್ಲ . ಮಕ್ಕಳು ಕೇಳಿದ ಕೂಡಲೇ ಪಾನೀಗಳನ್ನು ಕೊಡಿಸಿಬಿಡುತ್ತೇವೆ . ಇವತ್ತು ಎಷ್ಟೋ ಮಕ್ಕಳಿಗೆ ಎಳನೀರು ಬೇಡದ ವಸ್ತು. ಮಜ್ಜಿಗೆ ಬೇಕಾಗಿಯೇ ಇಲ್ಲಾ ಮಕ್ಕಳಿಗೆಲ್ಲಾ ಟಿ ವಿಯಲ್ಲಿ ಬರುವ ಸಚಿನ್ ಕುಡಿಯುವ, ಐಶ್ವರ್ಯ ಋತ್ವಿಕ್ ರೋಷನ್ ಕುಡಿಯುವ ಪಾನೀಯಗಳೇ ಬೇಕು .ಇಂಥ ಹವ್ಯಾಸಗಳನ್ನು ಬೆಳಿಸುತ್ತಾ ನಾವು ವಿದೇಶಿ ಕಂಪನಿಗಳಿಗೆ ಮಣೆ ಹಾಕುತ್ತಾ ಸ್ವದೇಶಿ ಮೂಲಕ್ಕೆ ಕಂಠಕಪ್ರಾಯರಾಗಿ , ರೈತನ ಆತ್ಮಹತ್ಯೆಗೆ ಪರೋಕ್ಷವಾಗಿ ಕಾರಣವಾಗುತ್ತಾ ಇದ್ದೇವೆ . ಬೆಳಿಗ್ಗೆ ಎದ್ದ ಕೂಡಲೇ ಮಕ್ಕಳಿಗೆ ಕಾರನ್ ಪ್ಲೇಕ್ಸ್ ಬೇಕು. ರೊಟ್ಟಿ ಬೇಡ , ದೊಸೆ ಬೇಡ , ಫಿಜ್ಜಾ ಬೇಕು . ನಾವು ಕೂಡ ಯಾವುದೋ ಆಮಿಷಕ್ಕೆ ಬಲಿ ಬಿದ್ದು ಮಕ್ಕಳಿಗೆ ತಮ್ಮತನವನ್ನು ಬೆಳೆಸುವಲ್ಲಿ ,ಸ್ವದೇಶದ ಪ್ರೇಮ ಸಂಸ್ಕೃತಿಯಲ್ಲಿನ ಆಸಕ್ತಿಯನ್ನು ತುಂಬುವಲ್ಲಿ ಹಿಂಜರಿಯುತ್ತಿದ್ದೇವೆ .ಈಗಲಾದರೂ ನಾವು ಬದಲಾಗಬೇಕು . ವಿದೇಶಿಯರಿಗೆ ನಮ್ಮ ಸಂಸ್ಕೃತಿಯ ಆಸಕ್ತಿ ಬೆಳೆಯುತ್ತದೆ . ಅವರು ಆಸೆಯಿಂದ ಯೋಗವನ್ನು ಕಲಿಯುತ್ತಿದ್ದಾರೆ . ನಮ್ಮ ಆಯುರ್ವೇದಿಕವನ್ನು ಆಸಕ್ತಿಯಿಂದ ನೋಡ್ತಾ ಇದಾರೆ . ನಮ್ಮ ಭರತನಾಟ ಯಕ್ಷಗಾನ , ಆವರಿಗೂ ಪ್ರಿಯ ಅನಿಸುತ್ತದೆ . ಆದರೆ ಇದ್ಯಾವುದೂ ನಮಗೆ ಬೇಡವಾಗ್ತಾ ಇದೆ .ಇಂದಿನ ಮಕ್ಕಳಿಗೆ ಶಿವರಾಮ ಕಾರಂತ ಯಾರು ಅಂತ ಗೊತ್ತಿಲ್ಲ .ಬೇಂದ್ರೆಯವರಿಗೆ ಯಾವ ಪ್ರಶಸ್ತಿ ಬಂತು ಆನೋದು ತಿಳಿದಿಲ್ಲ. ಸಾಹಿತ್ಯದ ಯಾವ ಕೃತಿ ಇದೆ ಅಂತಲೇ ಗೊತ್ತಿಲ್ಲ . ಎಷ್ಟೋ ಮಕ್ಕಳಿಗೆ ಕಥೆ ಅಂದ್ರನೇ ಗೊತ್ತಿಲ್ಲ ಕವನ ಅಂದ್ರೆ ತಿಳಿದಿಲ್ಲ .ಆದ್ರೆ ಕಾರ್ಟೂನ್ ಅಂದರೆ ಬಹಳ ಇಷ್ಟ. ಈ ಪುಟಾಣಿಗಳಿಗೆ ಯಾಕೆ ಹೀಗಾಗುತ್ತಿದೆ. ನಾವ್ಯಾಕೆ ಸಾಹಿತ್ಯಕ ವಾತಾವರಣವನ್ನು ಮಕ್ಕಳಿಗೆ ಕೊಡ್ತಾ ಇಲ್ಲ.ದೂರದರ್ಶನದ ವ್ಯಾಮೋಹದಲ್ಲಿ ಮುಳುಗಿದ ಮಕ್ಕಳನ್ನು ಸೃಜನಾತ್ಮಕತೆಗೆ ಯಾಕೆ ನಾವು ಎಳೆಯುತ್ತಾ ಇಲ್ಲಾ .ಈ ಪುಟಾಣಿಗಳ ಸಾಹಿತ್ಯದ ವಾತಾವರಣ ಸೃಷ್ಟಿ ಮಾಡಿ , ಅವರಿಗೆ ಸಾಹಿತ್ಯದ ಕೃತಿಗಳನ್ನು ಓದುವಲ್ಲಿ ಆಸಕ್ತಿ ಬೆಳೆಸಿ , ಕವಿತೆ ಎಂದರೇನು , ಅದನ್ನು ಹೇಗೆ ಬರೆಯಬಹುದು ಅನ್ನೋ ತಿಳಿವಳಿಕೆ ಕೊಟ್ಟರೆ ,ಈ ಮಕ್ಕಳಿಂದ ಒಬ್ಬ ಕಾರಂತ, ಒಬ್ಬ ಭೈರಪ್ಪ , ಒಬ್ಬ ಅನುಪಮಾ ನಿರಂಜನ , ಒಬ್ಬ ಬೇಂದ್ರೆಯವರನ್ನು ಸೃಷ್ಟಿಸೋಕೆ ಸಾಧ್ಯ.ನಮ್ಮ ನಾಡಿನ ಬಗ್ಗೆ , ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿಸಿ,ಗೌರವ ಬೆಳೆಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಶಿಕ್ಷಕರ ಮತ್ತು ಪೋಷಕರ ಮೇಲಿದೆ.ಬದುಕಿನ ಮೌಲ್ಯಗಳು, ರೀತಿ ನೀತಿಗಳು, ಪರಂಪರೆ , ಆಚಾರ ವಿಚಾರಗಳು , ನಾಡ ಹಬ್ಬ . ರಾಷ್ಟ್ರೀಯ ಹಬ್ಬಗಳು , ಶಿಲ್ಪಕಲೆ ಮುಂತಾದ ವಿಚಾರಗಳನ್ನು ಮಕ್ಕಳ ಮನದಲ್ಲಿ ಬಿಂಬಿಸುತ್ತ ಬಂದಲ್ಲಿ ಸಂಸ್ಕೃತಿ ಯನ್ನು ಉಳಿಸಿ ಬೆಳೆಸಲು ಸಾಧ್ಯ . ********************************

ಲಹರಿ

ನಿನಗಾಗಿ ಶಾಲಿನಿ ಆರ್. ಹೌದು, ಬೆಳಗ್ಗೆ ಬೆಳಗ್ಗೆ ಆ ಪ್ರಾಥಃ ಸ್ಪರ್ಶ ಇರತ್ತಲ್ಲ ಅದನ್ನ ಆಸ್ವಾದಿಸೋದೆ ಒಂದು ಹಬ್ಬ ನನಗೆ.ಇದನ್ನ ಬರಿವಾಗ ಕೋಗಿಲೆ ಹಾಡ್ತಿದೆ. ಜಸ್ಟ ವಾಕಿಂಗ್ ಮುಗ್ಸಿ ಬಂದೆ. ಬಂದ್ ಕೂಡ್ಲೆ ಮನದಲ್ಲಿ ಒಂದು ಆಲಾಪನೆ ಶುರುವಾಯಿತು. ಅದಕ್ಕೆ ಈ ನೂರಾರು ಪದಗಳ ಹರವನ್ನ ,ಬದುಕಿನ‌ ಹದಗಳನ್ನ ಹರಡಿಕೊಂಡು ಕುಳಿತೆ.    ಐದುವರಿಯಿಂದ ಆರು ಇಪ್ಪತ್ತು ರವರೆಗೆ  ವಾಕಿಂಗ್  ಹೋಗಿದ್ದೆ.ದಾರಿಲಿ, ಪಾರಿಜಾತದ ಪರಿಮಳ ,ಮಲ್ಲಿಗೆ ಸುವಾಸನೆ, ದೂರದಲ್ಲಿ ಕೂಗೋ ನವಿಲು, ಕೋಗಿಲೆಯ ಆ ಪಂಚಮಸ್ವರ ಜೊತೆಗೆ ನನ್ನ ಪುಟ್ಟ ಜಗತ್ತಿನ ಒಲವು ನೀ ನಿನ್ನ ಜೋಡಿ ಅದನ್ನೆಲ್ಲ ಮನಸ್ಸಿನಲ್ಲಿ ಅನುಭವಿಸುತ್ತ ಮನೆಗೆ ಬಂದೆ .ನೆನ್ನೆ ರಾತ್ರಿ ಮಾಡಿದ ಈ ಹಲ್ವನ ಡೈಮಂಡ್ ಶೇಪಲ್ಲಿ ಕಟ್ ಮಾಡಿ ಪಿಕ್ ತೆಗೆದು ಇವತ್ತಿನ ಶುಭೋದಯ ಕಳ್ಸಿದೀನಿ ನೋಡು. ಇವತ್ತಿನ ಈ ಬರಹ ಕೂಡ ಹಲ್ವಾ ನೆಪಾನೆ. ಅಷ್ಟು ಚೆಂದದ ಹದಾ ಬಂದಿದೆ. ಪ್ರತಿಭಾರಿನು ಬರತ್ತೆ. ಹಲ್ವಾ , ನೆನಸಿದ ರಾಗಿನ ರುಬ್ಬಿ ಅದರ ಹಾಲು ತೆಗೆದು ಸೋಸಿ ಎಕ್ದಂ ಪೈನ್ ಹಾಲ ಬರಬೇಕು ಹಾಗೆ. ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲ ಬೆರೆಸಿ. ಅದನ್ನ ಕೈ ಬಿಡದ ಹಾಗೆ ಬೆರೆಸ್ತಾನೆ ಇರಬೇಕು ಸಣ್ಣ ಉರಿಯಲಿ. ಅದನ್ನ ಗುರಾಡ್ತಾನೆ ಇರಬೇಕು, ಕೈ ನೋವಾಗತ್ತೆ ಗೊತ್ತಾ. ಗುರಾಡ್ತಾ ಗುರಾಡ್ತ ಅದು ಗಟ್ಟಿಯಾಗ್ತಾ ಬೆಂದು ಬೆಂದು ಬರತ್ತೆ. ಆಗ ಒಂದು ಹದ ಬರತ್ತೆ. ಎಂಥ ಅನುಭವ ಗೊತ್ತಾ ಅದು. ಅದು ಜೀವನದ ಅನುಭಾವಾವೆ ಸರಿ. ಬದುಕು ಹೀಗೆ ಅಲ್ವ , ಶರಣಾಗತಿಯ ಸಮರ್ಪಣೆ. ಜೀವನದಲ್ಲಿ ಏನು ಅರಿದೇ ಇದ್ದಾಗ ಬೆಸೆವ ಸಂಬಂಧಗಳು ಒಂದು ಹದಕ್ಕೆ ನಿಲುಕಿ ಬೆಂದು ನೊಂದು ಗಟ್ಟಿಯಾಗಿ ನಮ್ಮನ್ನೆಲ್ಲ ಒಂದುಗೂಡಿಸೋದು.      ‌         ಒದ್ದಾಡ್ತ ಇರತ್ತೆ ಬೆಲ್ಲ ರಾಗಿ ಎರಡು ಬೆರೆಯೋಕೆ, ಆದರೆ ಬೆರೆತ ಮೇಲೆ ಅದಕ್ಕೆ ಒಂದು ಹಿಡಿತ ಸಿಕ್ಕತ್ತೆ. ಆಗ ನೋಡಬೇಕು ಅದರ ಬಣ್ಣ ಬದಲಾಗೋ ರೀತಿ,  ಅಲ್ಲಿ ಪ್ರೀತಿ ಮೇಳೈಸಿ ಒಂದು ಹೊಂಬಣ್ಣಬರತ್ತೆ. ನೋಡೋಕೆ ಚೆಂದ ಗೊತ್ತಾ. ರಾಗಿ, ಬೆಲ್ಲ ಎರಡೂ ಬೇರೆ ಬೇರೆ ಅಸ್ಮಿತೆ  ಹೊಂದಿದ್ದರು, ಎರಡು ಬೆರೆತು ಒಂದಾಗೋ ಪರಿನೆ ಅದ್ಭುತ. ಎರಡಕ್ಕೋ ಆದ ಬದಲಾವಣೆ ಈ ಹದ, ಚೆಲುವಿದ್ದರೇನು, ಸಿರಿಯಿದ್ದರೇನು ನಲವಿಲ್ಲದ ಬದುಕಿಗೆ . ಪ್ರೀತಿ ಅಂದರೇನೆ  ಬದಲಾವಣೆ , ಅದರಿಂದ ಸಿಗೋ ಈ ನಿರಾಳತೆ, ಸ್ವಭಾವಗಳ ರೂಪಾಂತರ, ಇದೇ ಅಲ್ವೆನೋ  ಮೂಲ ಖುಷಿಗೆ ಕಾರಣ. ನಿನ್ನ ಖುಷಿಗೆ ನಾ ಕಾರಣ , ನನ್ನ ಖುಷಿಗೆ ನೀ ಅನ್ನೋ ಮನೋಭಾವ ಸದ್ದಿಲ್ಲದೆ ಜಾಗ ಮಾಡಿ ಮನದ ಗುಡಿಸಲಲ್ಲಿ ಕೂರತ್ತಲ್ಲ. ಅದರ ಜೋಡಿ ತುಟಿಯಂಚಿನಲಿ ಕಂಡು ಕಾಣದ ಹಾಗೆ ಮೂಡಿ ಬರುವ ಈ ನಗು ಕೂಡ ಖುಷಿನೆ . ಇದೇ ಮುಂದೆ ಬರುವ ದಿನಗಳ ಭರವಸೆಗಳ ಬೆಳೆ.‌      ಈ ಹೊತ್ತಲ್ಲಿ  ಹಲ್ವಾ ಗಟ್ಟಿಯಾಗಿ ಮತ್ತಷ್ಟು ಗಟ್ಟಿಯಾಗತ್ತ ಹೋಗತ್ತೆ . ಈಗ ನಿಜವಾದ ಟೆನಷ್ಷನ್ , ಒಂದು ಕ್ಷಣ ಮೈಮರೆತರು.ಹಲ್ವ ಹಳ್ಳ ಹಿಡಿಯೋ ಹೊತ್ತು. ಗಂಟಾಗಿಲ್ಲ ಅನ್ನೋ ಮನದಟ್ಟು ಆಯ್ತಾ, ಆದರೂ, ಬಿಡದೆ ಕೈಯಾಡ್ಸತ್ತ , ಒಂದು ನೆಮ್ಮದಿಯ ನಿಟ್ಟುಸಿರು ಬಿಡ್ತಿನಿ. ಈಗ ಪರಿಪೂರ್ಣ ಬೆಂದಿದೆ ಅನ್ನೊ ಹೊತ್ತಿಗೆ ಅದನ್ನ ಮುಚ್ಚಿ ಮತ್ತಷ್ಟು ಹೊತ್ತು ಇಡೋದು. ನಂತರ ತಟ್ಟೆಗೆ ತುಪ್ಪ ಸವರಿ, ಬೆಂದ ಹಲ್ವಾ ಹಾಕಿ ಚೆನ್ನಾಗಿ ಸಮಮಾಡಿ ಇಡೋದು .ಆಗ್ಲೆ ಹಲ್ವಾ ಮಾಡಿದ ಅನುಭವ ಅನುಭಾವ ಆಗಿರುತ್ತೆ. ಹಲ್ವಾ ಮಸ್ತ ಬಂದಿದೆ.  ಆ ಖುಷಿ ನಿನ್ನೊಟ್ಟೊಗೆ  ಹಂಚ್ಕೋಬೇಕಿತ್ತು, ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ ಅನ್ನೋ ಹಾಡು ಕಿವಿಲಿ ಗುನುಗುಟ್ಟುತಿದೆ. ಅದೇ ಪ್ರೇಮ ಹಬ್ಬಿದ ಪರಿಲಿ ಈ ಬರಹ ನಿ‌ನಗಾಗಿ ಬರಿತಿದೀನಿ. ಮತ್ತೆ ಹಲ್ವಾ ನೋಡಿ ಮನಸ್ಸು  ಮತ್ತೆ ಜಪ ಮಾಡ್ತಿದೆ. ನಮ್ಮ ಪ್ರೀತಿ ಮತ್ತಷ್ಟು ಅದರ ಮೃದುತ್ವ ಪಡೆದು ಕೂಡಿ ಕೊಳ್ಳಲಿ ಅಂತ ಮನಸ್ಸು ಹೇಳ್ತಿದೆ. ಅನುಭವನೇ ಹಾಗೆ , ಅದು ಅಡಿಗೆ ಮನೆದಿರಲಿ ಅದರಾಚೆಗಿನ ಪ್ರಕೃತಿಯ ಎಲ್ಲ ಪ್ರಕಾರಗಳಲ್ಲೇ ಇರಲಿ, ಪ್ರತಿಯೊಂದರಲ್ಲೂ ನಾವು ಕಾಣೋ ಪ್ರೀತಿ , ಪ್ರೇಮದ ನಂಟು  ಹಬ್ಸೋ ರೀತಿಲಿ ನನ್ನ ನಾನು ನನ್ನತನ ಮಾತ್ರ ಉಳಿಸಿ ಮೆರೆಸೋ ತಂತ್ರ ಅದನ್ನ ಬಳಸೋ ಬಾಳು ಎಲ್ಲ ಸೋಜಿಗಾದ ಸೂಜುಮಲ್ಲಿಗೇನೆ ಅಲ್ವಾ…? *************

Back To Top