ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪ್ರಬಂಧ

ಕರೊನ-ನೆಗಡಿ ಜ್ಯೋತಿ ಡಿ.ಬೊಮ್ಮಾ ಈಗ ಎಲ್ಲರೂ ಅಸ್ಪೃಶ್ಯರೆ ,ಒಬ್ಬರಿಂದ ಒಬ್ಬರು ದೂರ ಇರುವ ಅಸಹಾಯಕತೆ ತಂದೊಡ್ಡಿದ ಆ ಒಂದು ಚಿಕ್ಕ ವೈರಾಣುವಿಗೆ ಇಡೀ ಮನುಕುಲವೇ ಅಂಜಿ ನಡುಗುತ್ತಿದೆ. ಆಪ್ತವಾಗಬೇಕಿದ್ದ ಬಾಂಧವ್ಯಗಳು ಸಂಬಂಧಗಳು ಕರಗುತ್ತಿವೆ.ದೈಹಿಕ ಅಂತರ ಮನದಂತರವನ್ನು ದೂರಗೊಳಿಸುತ್ತಿದೆ ಒಬ್ಬರನ್ನೊಬ್ಬರು ಅನುಮಾನದಿಂದ ನೋಡಿಕೊಳ್ಳುತ್ತ ,ತಮ್ಮವರೊಡನೆಯೂ ಆಗಂತುಕರಂತೆ ಬದುಕುವಂತೆ ಮಾಡಿದ ಈ ಸಂದರ್ಭ ಯಾತಾನಾಮಯವಾಗಿದೆ. ಮನೆಯಲ್ಲಿ ಎಲ್ಲರೊಡನೆ ಬೆರೆತು ಊಟ ತಿಂಡಿ ಮಾಡುತಿದ್ದರೂ ಒಳಗೆಲ್ಲ ಎಕಾಂಗಿ ಭಾವ ,ಎನೋ ತಳಮಳ ಹೇಳಿಕೊಳ್ಳಲಾಗದ ಅಸಹಾಯಕತೆ ,ಹಿಂದೆಂದೂ ಕಾಡಿರದ ಅನಿಶ್ಚಿತತೆ ಮನ ಕೊರೆಯುವಂತೆ ಮಾಡುತ್ತಿದೆ. ಇಡೀ ದೇಶವೆ ಒಂದು ಕಾರಾಗೃಹವಾಗಿ ಎಲ್ಲರ ಸ್ವಾತಂತ್ರ್ಯ ಹರಣವಾಗಿ ಈಗ ಅಕ್ಷರಶಃ ಎಲ್ಲರೂ ಕೈದಿಗಳೆ. ಆಪತ್ತು ತಮ್ಮ ಮೇಲೆ ಯಾವಾಗ ಎರಗುವದೋ ಎಂಬ ಭಿತಿಯಲ್ಲಿ ದಿನಗಳನ್ನು ದೂಡುತ್ತ ಮತ್ತೆ ಮೊದಲಿನಂತೆ ಬದುಕು ಬಂಡಿ ಸಾಗಿಸುವ ದಿನಗಳ ಕನಸು ಕಾಣುತ್ತ ,ಕ್ಷಣಕೊಮ್ಮೆ ಬಣ್ಣ ಬದಲಾಯಿಸುವ ಭಾವನೆಗಳೊಂದಿಗೆ ಬೆರೆಯುತ್ತ ಇನ್ನೆಷ್ಟು ದಿನ ಹೀಗೆ ಎಂದು ಉತ್ತರವಿರದ ಪ್ರಶ್ನೆಗಳನ್ನು ಒಬ್ಬರಿಗೊಬ್ಬರು ಕೇಳುತ್ತ ದಿನ ದೂಡುವಂತಾಗಿದೆ.ಹಾಗೆ ನೋಡಿದರೆ ರೋಗ ಯಾರಿಗೂ ಹೊಸದಲ್ಲ .ರೋಗ ಇರದ ಮನುಷ್ಯ ನಿರಲು ಸಾಧ್ಯವೇ ,! ಕೆಮ್ಮು ನೆಗಡಿಯಂತ ಸಾಮಾನ್ಯ ರೋಗವೆ ರೋಕ್ಷವಾಗಿ ಬೆಳೆದು ಕಂಗೆಡುವಂತಾಗಿದೆ. ನನಗೂ ನೆಗಡಿಗೂ ಅವಿನಾಭಾವ ಸಂಬಂಧ.ವರ್ಷದ ಎಲ್ಲಾ ದಿನಗಳು ಅದು ನನಗೆ ಆಪ್ತ.ಇಷ್ಟು ವರ್ಷಗಳ ಸಂಗಾತಿಯಾದ ಅದರ ಮೇಲಿನ ಮುನಿಸು ಮಾಯವಾಗಿ ಅದರ ಉಪದ್ರವ ಸಹಿಸಿಕೊಳ್ಳುವದು ಕಲಿತಿದ್ದೆನೆ.ಹತ್ತು ಹದಿನಾರು ವಸ್ತುಗಳ ಅಲರ್ಜಿ ಇರುವ ನನ್ನ ಶರಿರಕ್ಕೆ ಆ ವಸ್ತುವಿನ ಸಂಪರ್ಕಕ್ಕೆ ಬಂದ ತಕ್ಷಣ ಸೀನುಗಳು ಜ್ಞಾಪಿಸುತ್ತವೆ .ತಕ್ಷಣವೇ ಎಚ್ಚೆತ್ತುಕೊಂಡು ಆ ವಸ್ತುವಿನಿಂದ ದೂರವಿರುತ್ತೆನೆ .ಆದರೂ ನನ್ನ ಸೀನುಗಳು ಮುನಿದು ಆ ಮುನಿಸು ಹೊರಹಾಕದೆ ಬಿಡವು . ಮೊದಮೊದಲು ನನ್ನ ಅಲರ್ಜಿ ಸೀನುಗಳನ್ನು ಗಂಭಿರವಾಗಿ ಪರಿಗಣಿಸುತ್ತಿದ್ದ ಮನೆಯವರು ಈಗೀಗ ಅದೊಂದು ಸಾಮಾನ್ಯ ಪ್ರಕ್ರಿಯೆ ಎಂಬಂತೆ ಕಾಣತೊಡಗಿದ್ದಾರೆ ಹೀಗಾಗಿ ಸೀನುಗಳು ನನ್ನ ಉಸಿರಾಟದಷ್ಟೆ ಸಾಮಾನ್ಯವಾಗಿರುವವು ನನಗೆ. ಆದರೆ ನಮ್ಮೆಜಮಾನರು ಇದಕ್ಕೆ ತದ್ವಿರುದ್ಧ ,ಒಂದೇ ಒಂದು ಸೀನು ಬಂದರು ಆಕಾಶವೆ ತಲೆ ಮೇಲೆ ಬಿದ್ದಂತೆ ಮೈ ಮುಖಕ್ಕೆಲ್ಲ ವಿಕ್ಸ ಬಳಿದುಕೊಂಡು ಮುಸುಕೆಳೆದು ಮಲಗಿಬೀಡೋರು. ಆ ರಂಪಾಟ ಮುಲುಗಾಟ ,ಮಾತ್ರೆಗಳು ಸಿರಪ್ ಗಳು, ಬಂದ ನೆಗಡಿಯನ್ನು ಆದಷ್ಟೂ ಬೇಗ ಓಡಿಸುವ ಧಾವಂತ ಆದರೂ ಜಪ್ಪಯ್ಯ ಎಂದರೂ ಜಗ್ಗದ ನೆಗಡಿ ಬಂದು ನಾಲ್ಕೈದು ದಿನ ಇದ್ದು ಆತಿಥ್ಯ ಸ್ವೀಕರಿಸಿಯೇ ಹೊಗುವದು.ಅದು ಇರುವವರೆಗೂ ಮನೆ ಒಂದು ಜಾತ್ರಯೇ ,ಬಿಸಿ ನೀರು ಕುಡಿಯುವದು ,ವಿಕ್ಸ ಹಾಕಿ ಹಬೆ ತೆಗೆದುಕೊಂಡು ಮುಖವೆಲ್ಲ ಕೆಂಪಗೆ ಮಾಡಿಕೊಂಡು ಹೋಂಕರಿಸುತ್ತ ,ಸೂರು ಹಾರಿಹೋಗುವಂತೆ ಸೀನುತ್ತ ಪರದಾಡುವದು ನೋಡಿದರೆ ನನಗೆ ಬರುವ ಸೀನುಗಳು ನಿರುಪದ್ರವಿಗಳೊ ಅಥವಾ ನಾನೇ ಅವುಗಳಿಗೆ ಒಗ್ಗಿಕೊಂಡಿರುವೆನೊ ತಿಳಿಯದು. ನೆಗಡಿ ಯಾವಾಗಲೂ ಆಪ್ತ ಕಾಯಿಲೆ ,ಒಬ್ಬರಿಗೆ ಬಂದರೆ ಮತ್ತೊಬ್ಬರನ್ನು ಸೆಳೆಯುತ್ತದೆ.ಕಣ್ಣು ಮೂಗಿನಲ್ಲಿ ಸುರಿಯುವ ನೀರನ್ನು ಸೊರ್ ಸಿರ್ ಎಂದೆನಿಸುತ್ತ ಕೆಂಪೇರಿದ ಮುಖವನ್ನು ನೋಡಿದವರು ಅಯ್ಯೊ ಎಂದು ಅನುಕಂಪ ತೊರಿಸಿ ನಮಗಾಗಿ ಮರಗುವರು ,ಅಂತಹ ಸಂದರ್ಭದಲ್ಲಿ ನಮ್ಮ ಕೆಲಸ ಕಾರ್ಯ ಗಳಿಗೂ ವಿನಾಯ್ತಿ ದೊರಕಿಸಿ ಕೊಡುವರು.ಎದುರಿನವರ ಪ್ರೀತಿಯ ಸ್ಪಂದನೆಗೆ ಮುದವಾದ ಮನ ನೆಗಡಿಯನ್ನು ಅಪಾಯ್ಯಮಾನವಾಗಿ ಅಪ್ಪಿಕೊಳ್ಳುವದು. ಕೆಲವರು ನೆಗಡಿ ಬಂದರೆ ಊಟ ತಿಂಡಿ ಬಿಟ್ಟು ಮುಷ್ಕರ ಹೂಡಿದಂತೆ ಇದ್ದು ಬಿಡುವರು.ನನಗೋ ನೆಗಡಿ ಬಂದರೆ ಬೇರೆ ದಿನಗಳಿಗಿಂತ ಹೆಚ್ಚಾಗಿ ತಿನ್ನುವ ಚಪಲವಾಗುತ್ತದೆ.ನೆಗಡಿಯಿಂದ ರುಚಿ ವಾಸನೆ ಕಳೆದುಕೊಂಡ ಗ್ರಂಥಿಗಳ ಚಿಗುರುವಿಕೆಗೆ ಹೊಸ ಬಗೆಯ ಖಾದ್ಯಗಳ ಸಮಾರಾಧನೆಯಾಗಲೆಬೇಕು .ಬೇರೆಲ್ಲಾ ರೋಗಗಳಿಗೆ ಉಟದಲ್ಲಿ ಪಥ್ಯ ಅನುಸರಿಸಿದರೆ ನೆಗಡಿಗೆ ಪಥ್ಯವೆ ಇಲ್ಲ.ಬಾಯಿ ರುಚಿ ಕೆಟ್ಟಿದೆಯೆಂದು ಹೇರಳವಾಗಿ ಉಪ್ಪು ಹುಳಿ ಖಾರದ ಅಡುಗೆಗಳು ಸಿಹಿ ಪದಾರ್ಥಗಳು ಎಗ್ಗಿಲ್ಲದೆ ಸೇವಿಸುತ್ತ ಹಾಗೆ ಸೀನುತ್ತ ,ಎಲ್ಲರಿಗೂ ನೆಗಡಿಯಾಗಿದೆ ಆರಾಮಿಲ್ಲ ಎಂದು ಹೇಳುತ್ತಲೆ ನೆಗಡಿಯನ್ನು ಪ್ರೀತಿಸುವ ಪ್ರತಿಯೊಬ್ಬರು ಇಲ್ಲಿವರೆಗೆ ನೆಗಡಿ ಒಂದು ರೋಗ ಎಂದು ಪರಿಗಣಿಸಿದ್ದೆ ಇಲ್ಲ. ಯಾವಾಗಾ ಈ ಕರೋನ ಮಾರಿ ಕಾಲಿಟ್ಟಿತ್ತೊ ನನ್ನ ಪ್ರೀತಿ ಪಾತ್ರ ನೆಗಡಿ ಎಲ್ಲರ ಕಂಗೆಣ್ಣಿಗೆ ಗುರಿಯಾಯಿತು.ಈಗ ಪ್ರತಿಯೊಬ್ಬರ ಕೆಮ್ಮು ಸೀನುಗಳು ಅನುಮಾನದಿಂದ ನೋಡುವಂತಾಗಿದೆ.ಕೆಲವೊಮ್ಮೆ ಒಗ್ಗರಣೆಯಿಂದ ಬರುವ ಸೀನುಗಳನ್ನು ಪ್ರಯತ್ನ ಪೂರ್ವ ಕವಾಗಿ ತಡೆಹಿಡಿಯುವ ಮನಸ್ಸಾಗುತ್ತಿದೆ. ಯಾರಾದರೂ ಕೇಳಿದರೆ ಅನುಮಾನ ಪಟ್ಟುಕೊಳ್ಳುವರು ಎಂಬ ಭಯದಿಂದ. ಮೊದಲೆಲ್ಲ ನೆಗಡಿಯಾದರೆ ಮನೆಯವರ ಅನುಕಂಪಕ್ಕೆ ಪಾತ್ರಳಾಗುತಿದ್ದ ನಾನು ,ಈಗ ಒಂದೇ ಒಂದು ಸೀನಿದರು ಎದುರಿನವರ ಕಣ್ಣಲ್ಲಿ ನೂರೆಂಟು ಪ್ರಶ್ನೆಗಳು ! ಅಂತಹುದರಲ್ಲಿ ಉಪದೇಶ ಬೇರೆ ,ಜಾಸ್ತಿ ಸೀನಬೇಡ ,ಯಾರಾದರು ಅಕ್ಕ ಪಕ್ಕದವರು ಕಂಪ್ಲೆಂಟ ಮಾಡಿದರೆ ಹೋಂ ಕಾರೈಂಟೈನ ನಲ್ಲಿ ಇರಬೇಕಾಗುತ್ತೆ ಎಂಬ ಅನುಮಾನ ಬೇರೆ.ಜೀವನವೆಲ್ಲ ಮನೆಯಲ್ಲೇ ಕಳೆಯುವ ನಾವು ಗೃಹಿಣಿ ಯರಿಗೆ ಮನೆ ಎಂದೂ ಬಂಧನ ಎನಿಸಿದ್ದೆ ಇಲ್ಲ. ಈಗ ಗೃಹಬಂಧನದಲ್ಲಿರುವ ಪುರುಷರಿಗೆ ಸ್ವಲ್ಪ ವಾದರೂ ಅರ್ಥ ವಾಗಿರಬೇಕು ,ದಿನವೆಲ್ಲ ಮನೆಯಲ್ಲಿ ಏನು ಮಾಡುತ್ತಿ ಎಂಬ ಪ್ರಶ್ನೆಯ ಉತ್ತರ. ಇಲ್ಲಿಯವರೆಗ ನೆಗಡಿ ಕೆಮ್ಮಿಗೆ ಪ್ರತ್ಯಕವಾದ ಔಷಧ ಲಭ್ಯವಿಲ್ಲ.ಅದು ಸರದಿಯಂತೆ ಬರುತ್ತದೆ ನಿರ್ಗಮಿಸುತ್ತದೆ. ಸಭೆ ಸಮಾರಂಭ ಜಾತ್ರಗಳಲ್ಲಿ ಹಿಂಡು ಹಿಂಡಾಗಿ ಓಡಾಡುತ್ತ ಒಬ್ಬರ ಬೆನ್ನಿಂದ ಒಬ್ಬರು ಸೀನುತ್ತ ಸಂಚರಿಸುವ ನಾವು ,ಮತ್ತೊಬ್ಬರು ಸಮೀಪವಾಗಿರುವಾಗಲೂ ದೂರ ನಿಂತು ಸೀನಬೇಕೆಂಬ ಕಲ್ಪನೆಯು ಇರದೆ ಆಕ್ಷಿಇ ..ಎಂದು ಸೀನಿದಾಗಲೂ ಇದೊಂದು ಸಾಮನ್ಯ ಪ್ರಕ್ರಿಯೆ ಎಂಬಂತೆ ನೋಡಿದ ನಮಗೆ ಈಗಿನ ಸಾಮಾಜಿಕ ಅಂತರ ಅರಗಿಸಿಕೊಳ್ಳಲು ಹಿಂಸೆಯಾಗುತ್ತಿದೆ. ಅದರೂ ಈ ಮಹಾಮಾರಿಯನ್ನು ನಿರ್ಮೂಲನೆ ಮಾಡಲು ಇವುಗಳನ್ನು ಅನುಸರಿಸದೆ ಬೇರೆ ದಾರಿಯಿಲ್ಲ. ಮತ್ತೊಬ್ಬರಿಂದ ನಮಗೆ ರೋಗ ಅಂಟಬಾರದು ಎಂದು ತಗೆದುಕೊಳ್ಳುವ ಮುಂಜಾಗ್ರತೆಯೊಂದಿಗೆ ನಮಗೆ ಬಂದಿದ್ದನ್ನು ಮತ್ತೊಬ್ಬರಿಗೆ ಹರಡದಂತೆ ಎಚ್ಚರವಹಿಸುವದು ತುಂಬಾ ಮುಖ್ಯವಾಗಿದೆ. **********************

ಪ್ರಬಂಧ Read Post »

ಇತರೆ

ಭಯವೇ ಅಪಾಯಕಾರಿ

ಕೊರೋನಾ ಮತ್ತು ಭಯ ಗಣೇಶಭಟ್,ಶಿರಸಿ ಕೊರೊನಾಕ್ಕಿಂತ ಅದರ ಕುರಿತಾದ ಭಯವೇ ಅಪಾಯಕಾರಿ ಕೊರೊನಾ ವೈರಸ್ ಸೋಂಕಿನ ಅಪಾಯದಿಂದ ಪಾರಾಗುವ ಅತ್ಯುತ್ತಮ ವಿಧಾನವೆಂದರೆ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಬೆಳೆಸುವುದು. ಅನಾರೋಗ್ಯದಿಂದ ಬಳಲುತ್ತಿರುವವರು ಈ ಸೋಂಕಿಗೆ ಬಹುಬೇಗ ಬಲಿಯಾಗುತ್ತಾರೆ. ಕೊರೊನಾದಿಂದಾಗಿ ಮೃತಪಟ್ಟವರಲ್ಲಿ ಹೆಚ್ಚಿನವರಿಗೆ ಒಂದಿಲ್ಲೊಂದು ವಿಧದ ಅನಾರೋಗ್ಯ ಇದ್ದುದು ಕಂಡು ಬಂದಿದೆ ಹಾಗೂ ಅವರಲ್ಲಿ ಹೆಚ್ಚಿನವರು ಅರವತ್ತಕ್ಕಿಂತ ಹೆಚ್ಚಿನ ವಯಸ್ಸಾದವರು. ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಪೌಷ್ಠಿಕ ಆಹಾರ, ವ್ಯಾಯಾಮ, ಕಾಲಕಾಲಕ್ಕೆ ನೀರು ಸೇವನೆ, ಒಳ್ಳೆಯ ನಿದ್ದೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಒತ್ತಡರಹಿತವಾಗಿರಬೇಕು. ಸಸ್ಯಾಹಾರಿಗಳಲ್ಲಿ ಮಾಂಸಾಹಾರಿಗಳಿಗಿಂತ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆಂದು ವೈದ್ಯ ವಿಜ್ಞಾನ ಹೇಳುತ್ತದೆ. ಭಯ, ಆತಂಕಗಳಿಂದ ಬಳಲುತ್ತಿರುವ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ವಿವಿಧ ಗ್ರಂಥಿರಸ ( ಹಾರ್ಮೋನ್) ಗಳ ಸ್ರವಿಸುವಿಕೆಯ ಪ್ರಮಾಣ ಹೆಚ್ಚುತ್ತದೆ. ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಉದ್ದಿಗ್ನತೆಯಿಂದಾಗಿ ಉಸಿರಾಟದ ವೇಗ ಹೆಚ್ಚಿ ಆಳವಾದ ಶ್ವಾಸೋಚ್ಛಾಸ ಕ್ರಿಯೆ ನಡೆಯದೇ ಪುಪ್ಪುಸದಲ್ಲಿ ತುಂಬಿಕೊಂಡ ಮಲಿನ ವಾಯು ಹೊರಹೋಗದೇ ಅಲ್ಲಿಯೇ ಉಳಿದು ವಿವಿಧ ಸೋಂಕುಗಳಿಗೆ ಅವಕಾಶ ಮಾಡಿಕೊಡುತ್ತದೆ. ಆಹಾರಕ್ಕಾಗಿ ಕೊಲ್ಲಲ್ಪಡುವಾಗ ಪ್ರಾಣಿಗೆ ಆಗುವ ಆತಂಕ, ಭಯಗಳಿಂದ ಅದರ ದೇಹದಲ್ಲಾಗುವ ರಾಸಾಯನಿಕ ಬದಲಾವಣೆಯೇ ಮಾಂಸಾಹಾರಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವ ಪ್ರಮುಖ ಕಾರಣಗಳಲ್ಲಿ ಒಂದು. ಅದರ ದೇಹದಲ್ಲಿ ಕೂಡಾ ವಿವಿಧ ಗ್ರಂಥಿರಸ ಹಾಗೂ ರಾಸಾಯನಿಕಗಳ ಸ್ರವಿಸುವಿಕೆಯಾಗಿ ಅವು ರಕ್ತ ಮತ್ತು ಮಾಂಸದಲ್ಲಿ ಸೇರಿಕೊಳ್ಳುತ್ತವೆ. ಮನುಷ್ಯ ಇಂತಹ ಮಾಂಸವನ್ನು ತಿಂದಾಗ ಈ ರಾಸಾಯನಿಕಗಳು ಅವನ ದೇಹವನ್ನು ಸೇರಿ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತವೆ. ಹಲ್ಲಿನ ರಚನೆ, ಬಾಯಿಯ ಲಾಲಾರಸ, ಜಠರದಲ್ಲಿ ಸ್ರವಿಸುವ ಆಮ್ಲ, ಕರುಳಿನ ಉದ್ದ ಮುಂತಾಗಿ ಮಾನವನ ಇಡೀ ಜೀರ್ಣಾಂಗ ವ್ಯವಸ್ಥೆ ಸಸ್ಯಾಹಾರ ಅದರಲ್ಲೂ ವಿಶೇಷವಾಗಿ ಹಣ್ಣು- ಹಂಪಲು – ತರಕಾರಿಗಳ ಸೇವನೆ ಮತ್ತು ಜೀರ್ಣಿಸಿಕೊಳ್ಳುವ ಸಲುವಾಗಿ ರೂಪುಗೊಂಡಿವೆ. ಇವ್ಯಾವವೂ ಮಾಂಸಾಹಾರವನ್ನು ಜೀರ್ಣಿಸಿಕೊಳ್ಳಲು ಪೂರಕವಾಗಿಲ್ಲ. ಆದರೂ ನಾಲಿಗೆಯ ಚಪಲದಿಂದ ಮಾಂಸಾಹಾರ ಸೇವಿಸುವ ಮಾನವರ ನಿಸರ್ಗ ವಿರೋಧಿ ಕ್ರಮವು ರೋಗನಿರೋಧಕ ಶಕ್ತಿ ಕುಗ್ಗಲು ಇನ್ನೊಂದು ಪ್ರಮುಖ ಕಾರಣ. ಜನರ ನಡುವೆ ಅಂತರವಿದ್ದಾಗ ಕೊರೊನಾ ವೈರಸ್ ಹರಡುವಿಕೆಗೆ ತಡೆ ಉಂಟಾಗುತ್ತದೆಂಬ ಕಾರಣದಿಂದಾಗಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಇದೊಂದು ಕ್ರಮದಿಂದಲೇ ಕೊರೊನಾ ಪ್ರಸರಣ ತಡೆಗಟ್ಟಲು ಸಾಧ್ಯವಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹೇಳುತ್ತಿದ್ದಾರೆ. ಆದರೂ ಪಾಶ್ವಾತ್ಯ ದೇಶಗಳಲ್ಲಿ ಈ ರೀತಿ ಮಾಡುತ್ತಿದ್ದಾರೆಂಬ ಕಾರಣಕ್ಕಾಗಿ ಭಾರತದಲ್ಲೂ ಸಾಮಾಜಿಕ ಅಂತರ ಕಾಪಾಡುವದಕ್ಕಾಗಿ ಸಾರ್ವಜನಿಕ ಬದುಕನ್ನು ಸ್ಥಬ್ಧಗೊಳಿಸುವ ಯತ್ನ ನಡೆದಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ವಿಮಾನ, ರೈಲು, ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲಾಗಿದೆ. ವ್ಯಾಪಾರ- ವಹಿವಾಟು , ಉದ್ಯಮ ಕಾರ್ಖಾನೆಗಳನ್ನು ಮುಚ್ಚಿಸಲಾಗಿದೆ. ಸಮೂಹ ಮತ್ತು ದೃಶ್ಯ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿರುವ ವಿಧಾನಗಳಿಂದಾಗಿ ಸಾಮಾಜಿಕ ಅಂತರವನ್ನು ಕಾದುಕೊಳ್ಳಲು ಕೈಗೊಂಡ ಕ್ರಮಗಳಿಂದ ಸಿಗಬಹುದಾದ ಅಲ್ಪಸ್ವಲ್ಪ ಪ್ರಯೋಜನವೂ ನಿರರ್ಥಕವಾಗುತ್ತಿದೆ. ಯಾಕೆಂದರೆ ಕನ್ನಡದ ಸುದ್ದಿ ವಾಹಿನಿಗಳು ಜನರಲ್ಲಿ ಭಯಭೀತಿ ಬಿತ್ತುವ ಕಾರ್ಯ ಮಾಡುತ್ತಿವೆ. ಇಂತಹ ಸಂದರ್ಭಗಳಲ್ಲಿ ಧನಾತ್ಮಕವಾದ ಸುದ್ದಿಗಳಿಗೆ ಮಹತ್ವ ನೀಡುವ ಬದಲು ನಕಾರಾತ್ಮಕ ಸುದ್ದಿಗಳಿಗೇ ಮಹತ್ವ ನೀಡಲಾಗುತ್ತಿದೆ. ಲಾಕ್‍ಡೌನ್ ಮಾಡುವುದರಿಂದಲೇ ಕೊರೊನಾ ವೈರಸ್‍ನ್ನು ನಿಯಂತ್ರಿಸಲು ಸಾಧ್ಯವೆಂಬುದಾಗಿ ಕನ್ನಡ ಸುದ್ದಿ ವಾಹಿನಿಗಳು ಎರಡು ದಿನಗಳಿಡೀ ಪ್ರಚಾರ ಮಾಡಿದವು. ಸರ್ಕಾರಕ್ಕೆ ಸಲಹೆ ನೀಡಲು ಪೈಪೋಟಿ ನಡೆಸಿ, ಬೆಳಿಗ್ಗೆಯಿಂದ ಸಂಜೆಯವರೆಗೂ ಕೂಗಾಡಿ ಮುಖ್ಯಮಂತ್ರಿಯವರು ಅನಿವಾರ್ಯವಾಗಿ ಲಾಕ್‍ಡೌನ್ ಘೋಷಿಸುವಂತೆ ಮಾಡಲಾಗಿದೆ. ಈ ಸುದ್ದಿವಾಹಿನಿಗಳು ನಡೆಸಿದ ಚರ್ಚೆಗಳಲ್ಲಿ ನಿರ್ವಹಣಾಕಾರರು ತಮ್ಮ ಅಭಿಪ್ರಾಯಗಳನ್ನು ಹೇರುತ್ತಿದ್ದ ರೀತಿ, ಅವರು ಕೂಗಾಡುತ್ತಿದ್ದ ಪರಿ ಅಸಹ್ಯ ಹುಟ್ಟಿಸುತ್ತಿದ್ದವು. ಇವರೆಲ್ಲರೂ ಹಿಂದಿ ವಾಹಿನಿಯ ನಿರ್ವಹಣಾಕಾರರೊಬ್ಬರಿಂದ ಪ್ರೇರಿತವಾಗಿದ್ದುದು ಸ್ಪಷ್ಟವಾಗಿ ಗೋಚÀರಿಸುತ್ತಿತ್ತು. ತಮ್ಮ ಟಿಆರ್‍ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಹಲವು ಸಕಾರಾತ್ಮಕ ಸಂಗತಿಗಳನ್ನು ಇವರು ಉಪೇಕ್ಷಿಸಿದ್ದು ಎದ್ದು ಕಾಣುತ್ತಿತ್ತು. ಕನ್ನಡ ಸುದ್ದಿವಾಹಿನಿಗಳ ಅಧ್ವಾನದಿಂದಾಗಿ ತಾವು ಮನೆಯಲ್ಲೇ ಕೂಡಿ ಹಾಕಿಕೊಂಡಿರಬೇಕಾಗುತ್ತದೆ. ಅಗತ್ಯದ ವಸ್ತುಗಳು ಸಿಗುವಂತೆ ಇಲ್ಲವೇನೋ ಎಂಬ ಆತಂಕ ಜನರಲ್ಲಿ ಸೃಷ್ಟಿಯಾಗಿ 23 ರ ಸಾಯಂಕಾಲ ದಿನಸಿ, ತರಕಾರಿ ಮುಂತಾದ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಅಂಗಡಿಗಳೆದುರು ಮುಗಿ ಬೀಳುವ ಪರಿಸ್ಥಿತಿ ಕರ್ನಾಟಕದ ತುಂಬ ಕಂಡು ಬಂದಿತು. ಅನಗತ್ಯವಾಗಿ ಸೃಷ್ಟಿಯಾದ, ತಪ್ಪಿಸಬಹುದಾಗಿದ್ದ ಇಂತಹ ಜನದಟ್ಟಣೆಯಿಂದಾಗಿ ಸಾಮಾಜಿಕ ಅಂತರ ಕಾದುಕೊಳ್ಳುವ ಉದ್ದೇಶವೇ ವಿಫಲಗೊಂಡಿತ್ತು. ಕೊರೊನಾ ಸೋಂಕಿತರೆಲ್ಲರೂ ಸತ್ತೇ ಹೋಗುತ್ತಾರೆಂಬ ರೀತಿಯಲ್ಲಿ ಕನ್ನಡ ಸುದ್ದಿವಾಹಿನಿಗಳು ಪ್ರಸ್ತುತಪಡಿಸುತ್ತಿದ್ದಾರೆ. ಅತಿ ಹೆಚ್ಚು ಸಾವು ಸಂಭವಿಸಿದ ಇಟಲಿ ಮತ್ತು ಚೀನಾಗಳಲ್ಲಿ ಕೂಡಾ ಮರಣ ಹೊಂದಿದ ಸೋಂಕಿತರ ಪ್ರಮಾಣ ಶೇಕಡಾ 4 ನ್ನು ಮೀರಿಲ್ಲ. ಭಾರತದಲ್ಲಿ ಕೊರೊನಾದಿಂದ ಸಂಭವಿಸಿದ ಮರಣಗಳ ಸಂಖ್ಯೆಯನ್ನು ಬಿತ್ತರಿಸುವುದರ ಜೊತೆಗೇ ಗುಣಮುಖರಾದವರ ಸಂಖ್ಯೆ ಎಷ್ಟೊ ಪಟ್ಟು ಹೆಚ್ಚಿಗೆ ಇದ್ದರೂ ಕೂಡಾ ಅದನ್ನು ಹೇಳುವುದಿಲ್ಲ. ಮರಣ ಹೊಂದಿದವರಿಗೆ ತೀವ್ರ ಸ್ವರೂಪದ ಬೇರೆ ಯಾವುದಾದರೂ ಕಾಯಿಲೆ ಇತ್ತೇ ಎಂಬ ಕುರಿತಾಗಿ ಕೂಡಾ ಇವರು ಮಾಹಿತಿ ನೀಡದೇ ಜನರಲ್ಲಿ ಅನಗತ್ಯ ಭಯ ಹುಟ್ಟಿಸುತ್ತಿದ್ದಾರೆ. ವೈರಸ್ ಸೋಂಕಿತ ದೇಶಗಳ ಮಾಹಿತಿ ನೀಡುವಾಗ ಈ ಪೀಡೆ ನಿಯಂತ್ರಿಸಿರುವ ರಷಿಯಾ, ಉತ್ತರಕೋರಿಯಾ ಮುಂತಾದ ದೇಶಗಳ ಸಕಾರಾತ್ಮಕ ವಿಷಯಗಳನ್ನು ಉಲ್ಲೇಖಿಸುವ ಬದ್ಧತೆ ಈ ವಾಹಿನಿಗಳಿಗೆ ಇಲ್ಲವಾಗಿದೆ. ಇಡೀ ರಾಜ್ಯದ ಲಾಕ್‍ಡೌನ್‍ಗಾಗಿ ಪ್ರತಿಪಾದಿಸುವ ಟಿವಿ ವಾಹಿನಿಗಳಿಗೆ, ದಿನನಿತ್ಯ ದುಡಿದು ಉಣ್ಣ ಬೇಕಾದವರ ಸಂಕಷ್ಟದ ಕುರಿತು ಯೋಚಿಸಲೂ ಪುರುಷೊತ್ತಿಲ್ಲ. ಬೆಳೆದ ತರಕಾರಿ, ಹಣ್ಣು- ಹಂಪಲು, ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ಹಾನಿ ಅನುಭವಿಸುತ್ತಿರುವ ರೈತರ ಭವಣೆ ಕಾಣುವುದಿಲ್ಲ. ಅನಿವಾರ್ಯವಾಗಿ ವ್ಯವಹಾರ– ವಹಿವಾಟುಗಳನ್ನು ಬಂದ್ ಮಾಡುವ ಚಿಕ್ಕಪುಟ್ಟ ವ್ಯಾಪಾರಿಗಳು, ರಸ್ತೆ ಬದಿ ವ್ಯಾಪಾರಿಗಳು, ಚಿಲ್ಲರೆ ಮಾರುಕಟ್ಟೆಯ ವರ್ತಕರು, ಸಣ್ಣ ಉದ್ದಿಮೆಗಳ ಮಾಲೀಕರ ಸಂಕಷ್ಟ ಇವರಿಗೆ ಅರ್ಥವಾಗುವುದಿಲ್ಲ. ಪ್ರತಿ ತಿಂಗಳು ಸಂಬಳ ಪಡೆಯುವ ಅಥವಾ ನಿಶ್ಚಿತ ಆದಾಯವಿರುವ ವರ್ಗದವರನ್ನು ಮನೆಯಲ್ಲೇ ಕೂಡಿ ಹಾಕುವುದರಿಂದ ಅವರಿಗೆ ಆರ್ಥಿಕ ತಲೆಬಿಸಿ ಇರದು.. ಈ ಸೌಲಭ್ಯ ಭಾರತದ 80% ಗೂ ಹೆಚ್ಚಿನ ಜನರಿಗೆ ಇಲ್ಲ. ಆದರೆ ಸಾಲದ ಕಂತು ಕಟ್ಟಲೇಬೇಕಾದ ರಿಕ್ಷಾ, ಟ್ಯಾಕ್ಸಿ ಮಾಲಿಕರಿಗೆ ದುಡಿಮೆಯ ಅವಕಾಶವನ್ನೇ ರದ್ದುಪಡಿಸಿದರೆ ಅವರ ಸಂಕಷ್ಟಕ್ಕೆ ಯಾವ ರೀತಿಯ ಪರಿಹಾರ ಸಿಗುವಂತೆ ಮಾಡಬಹುದೆಂಬ ಕುರಿತು ಈ ಸುದ್ದಿವಾಹಿನಿಗಳು ಚಿಂತನೆ ನಡೆಸುವುದಿಲ್ಲ. ಮಾರ್ಚ್ 31 ರೊಳಗೆ ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುತ್ತೇವೆಂಬ ಸರ್ಕಾರದ ಘೋಷಣೆಯ ಲಾಭ ಕೃಷಿಕರಿಗೆ ದೊರಕಬೇಕೆಂದರೆ, ಅವರು ಬೆಳೆದ ಮಹಸೂಲು ಮಾರಾಟವಾಗಬೇಕು. ಇಡೀ ದೇಶದಲ್ಲಿ ಲಾಕ್‍ಡೌನ್ ಇರುವ ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕೃತ್ರಿಮವಾಗಿ ಇಳಿಕೆ ಕಾಣುತ್ತಿರುವಾಗ ಸಾಲ ಮರುಪಾವತಿಯ ದಿನಾಂಕವನ್ನು ಮುಂದೂಡುವುದು ಅನಿವಾರ್ಯ. ಈ ಕುರಿತಾಗಿ ಈ ಸುದ್ದಿವಾಹಿನಿಗಳು ಅಭಿಯಾನವನ್ನೇಕೆ ನಡೆಸುತ್ತಿಲ್ಲ ? ಜನತಾ ಕಫ್ರ್ಯೂ ಹೆಸರಿನಲ್ಲಿ ನಡೆದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ರಾಜ್ಯಗಳು ಅಧಿಕಾರದ ದುರ್ಬಳಕೆ ಮಾಡಿದ್ದನ್ನು ಎತ್ತಿ ಹೇಳುವ ಬದಲಿಗೆ ಪೋಲೀಸರ ಹೇಳಿಕೆಗೆ ಮಹತ್ವ ನೀಡಲಾಯಿತು. ಸ್ವಯಂ ಪ್ರೇರಿತರಾಗಿ ಬಂದ್‍ನಲ್ಲಿ ಪಾಲ್ಗೊಳ್ಳಿ, ಇಲ್ಲವಾದಲ್ಲಿ ನಿಮ್ಮ ಮೇಲೆ ಕೇಸ್ ಹಾಕಲಾಗುವುದು ಎಂಬ ರಾಜ್ಯ ಪೋಲೀಸ್ ಮುಖ್ಯಸ್ಥರು, ಜಿಲ್ಲಾಪೋಲೀಸ್ ವರಿಷ್ಠಾಧಿಕಾರಿಗಳ ಹೇಳಿಕೆಗಳೇ ಮಹತ್ವ ಪಡೆದವು. ಇದೇ ರೀತಿಯ ಹೇಳಿಕೆಗಳನ್ನು ಕೆಲವೆಡೆ ಪೋಲೀಸರು ಮೈಕ್ ಮೂಲಕ ಪ್ರಚಾರ ನಡೆಸಿದರು. ಒಂದೆಡೆ ಸುದ್ದಿ ವಾಹಿನಿಗಳಿಂದ ಬಿತ್ತರವಾಗುವ, ಭಯ ಹುಟ್ಟಿಸುವ ಅರ್ಧಂಬದ್ಧ ಮಾಹಿತಿಗಳು, ಇನ್ನೊಂದೆಡೆ ಅಧಿಕಾರಿಗಳ ದಬಾವಣೆಯಿಂದಾಗಿ ಕಳೆದ ರವಿವಾರದ ಜನತಾ ಕಫ್ರ್ಯೂ ಯಶಸ್ವಿಯಾದಂತೆ ಕಂಡೀತೇ ಹೊರತೂ ನೈಜವಾದ ಸ್ವಪ್ರೇರಣೆಯಿಂದಲ್ಲ. ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರು, ಪೋಲೀಸರು, ಮಾಧ್ಯಮದವರು, ಸೈನಿಕರು, ಸ್ವಯಂ ಸೇವಕರು, ಮುಂತಾದವರಿಗಾಗಿ ಕೃತಜ್ಞತೆ ಸಲ್ಲಿಸಲು ರವಿವಾರ ಸಂಜೆ 5 ಗಂಟೆಗೆ ನಡೆಸಿದ ಚಪ್ಪಾಳೆ ಮತ್ತು ಘಂಟನಾದ ಅಭಿಯಾನದ ಭಾವುಕತೆಗೆ ಒಳಗಾದ ಜನತೆ ವಾಸ್ತವವನ್ನು ಗಮನಿಸಲೇ ಇಲ್ಲ. ಮದ್ಯಪ್ರದೇಶದ ಸರ್ಕಾರವನ್ನು ಪತನಗೊಳಿಸಲು ಸಾವಿರಾರು ಕೋಟಿ ರೂಪಾಯಿ ಖರ್ಚುಮಾಡಿ ಅನೈತಿಕ ವಿಧಾನದಿಂದ ತಮ್ಮ ಪಕ್ಷದ ಸರ್ಕಾರ ಸ್ಥಾಪಿಸಲು ಶ್ರಮಿಸಿದ ಪ್ರಧಾನಿಯವರ ಸ್ವಾರ್ಥ ಜನರಿಗೆ ಕಾಣಲೇ ಇಲ್ಲ. ದೇಶೀಯ ಪರಿಸ್ಥಿತಿಗೆ ಅನುಗುಣವಾಗಿ ಕೊರೊನಾ ವಿರುದ್ಧದ ಹೋರಾಟ ಕೈಗೊಳ್ಳದೇ, ಪಾಶ್ಚಾತ್ಯ ದೇಶಗಳ ಪದ್ಧತಿಯನ್ನು ಇಲ್ಲಿಯೂ ಅಳವಡಿಸಿ ಅಂತರಾಷ್ಟ್ರೀಯ ಮನ್ನಣೆಗಾಗಿ ನಡೆಸುವ ಪ್ರಯತ್ನವನ್ನು ಜನರು ಗಮನಿಸಲೇ ಇಲ್ಲ. ಕೇಂದ್ರ ಸರ್ಕಾರದ ಆಪ್ತವಲಯದವರು ಸಾಲಮರುಪಾವತಿ, ಮಾಡದಿರುವ ಕಾರಣಕ್ಕಾಗಿ ಸಮಸ್ಯೆಗೊಳಗಾದ ಯಸ್ ಬ್ಯಾಂಕ್‍ನ ಪುನಶ್ಚೇತನಕ್ಕಾಗಿ ಸರ್ಕಾರಿ ಸ್ವಾಮ್ಯದ ಎಸ್ ಬಿಐನ ನಿಧಿಯನ್ನು ಬಳಸಿದ್ದು ಜನರಿಗೆ ಅರ್ಥವೇ ಆಗಲಿಲ್ಲ. ಖಾಸಗಿ ಬ್ಯಾಂಕ್ ರಕ್ಷಣೆಗಾಗಿ ಒಂದೇ ವಾರದಲ್ಲಿ ಧಾವಿಸಿ ಬಂದ ಕೇಂದ್ರ ಸರ್ಕಾರಕ್ಕೆ ಆರು ತಿಂಗಳಿನಿಂದಲೂ ಪರಿತಪಿಸುತ್ತಿರುವ ಸಹಕಾರಿ ರಂಗದ ಪಿ.ಎಮ್.ಸಿ ಬ್ಯಾಂಕ್‍ನ ಗ್ರಾಹಕರು ಕಾಣುವುದೇ ಇಲ್ಲ. ಕುಸಿಯುತ್ತಿರುವ ಅರ್ಥವ್ಯವಸ್ಥೆಯಿಂದ ಸಂಕಷ್ಠಕ್ಕೊಳಗಾಗಿರುವ ಜನಸಾಮಾನ್ಯರ ಮನಸ್ಸನ್ನು ಬೇರೆಡೆ ತಿರುಗಿಸುವ ಕ್ರಮವಾಗಿ ನಡೆಸುವ ಚಪ್ಪಾಳೆ ಅಭಿಯಾನದಂತಹ ಜನಪ್ರಿಯ ಕಾರ್ಯಕ್ರಮಗಳಿಗೆ ಸುದ್ದಿ ಮಾದ್ಯಮಗಳೂ ಬೆಂಬಲ ನೀಡುತ್ತಿವೆ. ಯಾಕೆಂದರೆ ಅದರ ಮಾಲೀಕರುಗಳು ಮೊದಲ ಗುಂಪಿಗೆ ಸೇರಿದವರು. ಜನರು ಗುಂಪುಗುಂಪಾಗಿ ಸೇರಿ ಚಪ್ಪಾಳೆ, ಜಾಗಟೆ ಬಡಿಯುತ್ತಾ ಮೆರವಣಿಗೆ ಹೋಗಲು ಮಾಧ್ಯಮಗಳ ಕ್ಯಾಮರಾಗಳು ಪ್ರೇರಣೆ ನೀಡಿ, ಸಾಮಾಜಿಕ ಅಂತರ ಕಾಪಾಡುವ ಮೂಲ ಉದ್ದೇಶವನ್ನೇ ಮರೆಸಿವೆ. ವ್ಯಕ್ತಿ ಪೂಜೆ ಮತ್ತು ನಾಯಕರ ಕುರಿತು ಅಂಧಾಭಿಮಾನ , ಚಮಾಚಾಗಿರಿ ಮತ್ತು ನಾಯಕರ ಕುರಿತು ಚಪ್ಪಾಳೆ, ಶಂಖ ಧ್ವನಿ ಮುಂತಾದವುಗಳಿಂದ ಕೊರೊನಾ ಭೂತವನ್ನು (?) ದೂರ ಓಡಿಸಲು ಸಾಧ್ಯ. ಅಂಥವರಿಗೆ ಮಾರ್ಚ್ 22 ಅಮವಾಸ್ಯೆಯಾಗಿ ಕಾಣುತ್ತದೆ. (ಇನ್ನೂ 2 ದಿನ ತಡವಿದ್ದರೂ ಸಹ) ಸೋಂಕು ತಡೆಗಾಗಿ ಮುಖಕ್ಕೆ ಗವಸು ಧರಿಸಲು ಮಾಧ್ಯಮಗಳ ಪ್ರೇರಣೆಯೂ ಕಾರಣ. ಸೋಂಕಿತ ವ್ಯಕ್ತಿಯು ಸೀನಿದಾಗ, ಕೆಮ್ಮಿದಾಗ ವೈರಸ್ ಗಾಳಿಯಲ್ಲಿ ಸೇರಬಾರದೆಂಬ ಕಾರಣಕ್ಕೆ ಮುಖಕ್ಕೆ ಗೌಸ್ ಧರಿಸಬೇಕು. ಆದರೆ, ಆರೋಗ್ಯವಂತರು ಮುಖದ ಗವಸು ಧರಿಸಿ ಓಡಾಡುತ್ತಾರೆ. ಇದು ಗೊಡ್ಡು ಕಂದಾಚಾರಿಗಳ ಮಡಿಧಾರಣೆಯಂತಿದೆ. ಪೂಜೆ ಮತ್ತು ಊಟದ ಸಮಯದಲ್ಲಿ ರೇಷ್ಮೆ ಬಟ್ಟೆ ಧಾರಣೆ ಒಳಿತೆಂಬ ಕಾರಣಕ್ಕೆ , ತಿಂಗಳುಗಟ್ಟಲೇ ತೊಳೆಯದೇ ಇದ್ದರೂ ಅದೇ ವಸ್ತ್ರವನ್ನು ಮಡಿ ಎಂದು ಭಾವಿಸಿ ಬಳಸುವ ರೀತಿಯಿದು. ಸೋಂಕು ತಡೆಯಲು ಮೂಗು, ಬಾಯಿ ಕಣ್ಣನ್ನು ಪದೇ ಪದೇ ಕೈ ತೊಳೆಯದೇ ಮುಟ್ಟಬಾರದು ಎಂಬುದು ಸರಿ. ಮುಖಕ್ಕೆ ಗವಸು ಧರಿಸಿದಾಗ ಆಗುವ ಅಲವರಿಕೆಯಿಂದ ಅಥವಾ ಅದನ್ನು ಸರಿಪಡಿಸಲು ಕೈ ಪದೇಪದೇ ಅಲ್ಲಿಗೇ ಹೋಗುತ್ತದೆ. ಮುಖಗೌಸನ್ನು ಪ್ರತಿಬಾರಿ ಧರಿಸುವಾಗಲೂ ಅದನ್ನು ಶುಚಿಗೊಳಿಸಲು ಸಾಧ್ಯವೇ? ಭಾರತೀಯರಲ್ಲಿ ರೋಗನಿರೋಧಕ ಶಕ್ತಿ ಪಾಶ್ಚಾತ್ಯರಿಗೆ ಹೋಲಿಸಿದರೆ ತುಂಬಾ ಹೆಚ್ಚು. ನಮ್ಮ ಜೀವನದ ರೀತಿ, ನೀತಿಗಳು, ವಿಧಿ- ವಿಧಾನಗಳು ಆರೋಗ್ಯ ರಕ್ಷಣೆಗೆ ಪೂರಕ. ಉದಾಹರಣೆಗಾಗಿ ಕೈ ಕುಲುಕುವ ಬದಲಿಗೆ ನಮಸ್ಕಾರ. ಊಟಕ್ಕೂ ಮೊದಲು ಕೈಕಾಲು ತೊಳೆಯುವುದು, ಹೊರಗಿನಿಂದ ಬಂದು ಮನೆ ಸೇರಿದೊಡನೆ ಬಟ್ಟೆ ಬದಲಾಯಿಸುವುದು . ಪ್ರಾರ್ಥನೆ, ಪೂಜೆ ಇತ್ಯಾದಿ. ಕೊರೊನಾ ವೈರಾಣುವಿಗೆ ನೀಡುತ್ತಿರುವ ಪ್ರಚಾರದಷ್ಟು ಅದು ಪ್ರಬಲವಲ್ಲ. ಈ ಸೋಂಕನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯ ಸಾಮಾನ್ಯ ಭಾರತೀಯರ ದೇಹದಲ್ಲಿ, ಬದುಕಿನ ರೀತಿಯಲ್ಲಿ ಅಂತರ್ಗತವಾಗಿದೆ. ಸರ್ಕಾರ ಮತ್ತು ಮಾಧ್ಯಮಗಳು ಮಾಡಬೇಕಾದ ಮೊದಲ ಕ್ರಮವೆಂದರೆ ಜನರಲ್ಲಿ ಅನಗತ್ಯವಾದ ಭಯ ಮೂಡಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಕೈಗೊಳ್ಳುತ್ತಿರುವ ಪಾಶ್ಚಾತ್ಯ ದೇಶಗಳ ಅಂಧಾನುಕರಣೆಯ ಕ್ರಮಗಳು ಹಾಗೂ ಇವು ಮಾಧ್ಯಮಗಳಲ್ಲಿ ಅತಿಯಾಗಿ ವಿಜೃಂಭಿತವಾಗಿರುವುದರಿಂದ ಜನರು ಭಯಭೀತರಾಗಿದ್ದಾರೆ, ಆತಂಕಗೊಂಡಿದ್ದಾರೆ. ಆದ್ದರಿಂದಲೇ ಬೆಂಗಳೂರಿನಿಂದ

ಭಯವೇ ಅಪಾಯಕಾರಿ Read Post »

ಇತರೆ

ಪ್ರಸ್ತುತ

ಗೋಲ್ಡನ್ ಟೈಮ್ ಸ್ಮಿತಾ ರಾಘವೇಂದ್ರ ಅಬ್ಬಬ್ಬಾ ಅಂದ್ರೆ ಮೂರುದಿನ ಇರಬಹುದಪ್ಪಾ ಮನೆಲಿ ಅದಕ್ಕಿಂತ ಹೆಚ್ಚಿಗೆದಿನ ಬಾಗಿಲುಹಾಕಿ ಕೂರಲು ಅಸಾಧ್ಯ..ಆದರೆ ಬರೋಬ್ಬರಿ ಇಪ್ಪತ್ತೊಂದು ದಿನಗಳಕಾಲ ಮಹಾಮಾರಿ ಕೋವಿಡ್ 19 ತೊಲಗಿಸಲು ಮನೆಯೇ ಮದ್ದು ಎಂದು,ಜನಹಿತಕ್ಕಾಗಿ ಜಾರಿಮಾಡಿದ ಸರ್ಕಾರದ ನಿಯಮ ಪಾಲಿಸದೇ ಇರಲು ಸಾಧ್ಯವಿಲ್ಲ.. ಲಕ್ಷಣರೇಖೆ ಹಾಕಿ ಬಾಗಿಲು ಹಾಕಿ ಕೊಳ್ಳುವದು ಉತ್ತಮ ಕೆಲಸ ಆದರೆ ಅದೆಷ್ಟು ಜನರಿಗೆ ಒಳಗೊಳಗೇ ಕಸಿವಿಸಿ,ದಿಗಿಲು,ಇನ್ನೇನು ಬದುಕೇ ಮುಗಿಯಿತೇ!? ಎನ್ನುವ ಭಾವ,ಬಾಗಿಲು ಹಾಕಿ ಕೂತು ಏನು ಮಾಡುವದು ಎನ್ನುವ ಗೊಣಗು. ತಲೆ ಕೆಡಿಸಿಕೊಳ್ಳಬೇಡಿ ಅಯ್ಯೋ ಹೇಗೆ ಈ ಇಪ್ಪತ್ತೊಂದು ದಿನ ಕಳೆಯಲಪ್ಪಾ!? ಅಂತ ತಲೆಯಮೇಲೆ ಸೂರು ಬಿದ್ದವರಂತೆ ಆಡಬೇಡಿ. ಇಂತಹ ಉತ್ತಮ ಅವಕಾಶ ಮತ್ತೆ ನಮ್ಮ, ನಿಮ್ಮ ಜೀವನದಲ್ಲಿ ಬರಲಾರದು. ಗೃಹ ಬಂಧನವಲ್ಲ ಗೃಹವಾಸ ಇದು ನಮ್ಮದೇ ಒಳಿತಿಗಾಗಿ ಎಂದು ಮನಃಪೂರ್ವಕವಾಗಿ ಸ್ವಾಗತಿಸಿ. ಒಂದಿಷ್ಟು ನಿಯಮ ಹಾಕಿ ಕೊಳ್ಳಿ ಸದುಪಯೋಗ ಪಡಿಸಿಕೊಳ್ಳುವತ್ತ ಮನಸು ವಾಲಲಿ. ಎಲ್ಲರೂ ಮನೆಯಲ್ಲಿಯೇ ಇರುವದರಿಂದ ಮನೆಯ ಹೆಂಗಸರಿಗೆ ಸಹಜವಾಗಿಯೇ ಕೆಲಸಗಳು ಜಾಸ್ತಿಯಾಗುತ್ತವೆ,ಅಡುಗೆ ಮನೆಯಲ್ಲಿ ತಾಯಿಯ ಜೊತೆ ಹೆಂಡತಿಯ ಜೊತೆ ಸಹಕರಿಸಿ. ಮನೆಯ ಹೆಣ್ಣುಮಕ್ಕಳಿಗೆ ಅಡುಗೆ ಕಲಿಯಲು ಉತ್ತಮ ಅವಕಾಶ. *ಎಷ್ಟೋದಿನಗಳಿಂದ ಉಳಿದೇಹೋದ ಕೆಲಸಗಳನ್ನು ಕೈಗೆತ್ತಿಕೊಳ್ಳಿ *ಒಳ್ಳೆಯ ಪುಸ್ತಕಗಳನ್ನು ಓದಿ *ಮಕ್ಕಳು ಮನೆಯೊಳಗೇ ಬಂದಿಯಾಗಿರಲು ಇಷ್ಟ ಪಡಲಾರರು ಅವರನ್ನು ಸಂಭಾಳಿಸುವದೇ ಒಂದು ದೊಡ್ಡ ಸವಾಲು ಮನೆಯ ಪ್ರತಿಯೊಂದು ಸದಸ್ಯರೂ ಮಕ್ಕಳೊಂದಿಗೆ ಹೆಚ್ಚು ಹೆಚ್ಚು ಸಮಯಕಳೆಯಿರಿ. ಅನವಶ್ಯಕ ರೇಗು ಮಕ್ಕಳನ್ನು ಘಾಸಿಗೊಳಿಸದಿರಲಿ. *sslc ಮಕ್ಕಳಿಗೆ ಪರೀಕ್ಷೆ ಮುಗಿಯದ ಕಾರಣ ಅವರು ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ ಸದಾ ಅವರಿಗೆ ಧೈರ್ಯ ತುಂಬುತ್ತಿರಿ ಸಂಬಂಧಗಳನ್ನು ಆಪ್ತವಾಗಿ ನೋಡಿ ಮುನಿಸು ವೈಮನಸ್ಸುಗಳಿಗೆ ಅವಕಾಷ ನೀಡದಿರಿ. *ಹೀಗೆ ಇಷ್ಟು ದಿನಗಳಕಾಲ ಇಡೀ ಮನೆ ಸದಸ್ಯರು ಒಟ್ಟಿಗೆ ಇರುವ ಅವಕಾಶ ಜೀವನದಲ್ಲಿ ಮತ್ತೆ ಬರಲಾರದು ಎಂಬುದನ್ನು ಅರಿತುಕೊಳ್ಳಿ. ನೆನಪಿರಲಿ ಮತ್ತೆ ನಾವು ಅದೇ ಬ್ಯೂಸಿ ಬ್ಯೂಸಿ ಜೀವನಕ್ಕೆ ತರೆದುಕೊಳ್ಳಲೇಬೇಕು ಓಡುವ ಕಾಲದೊಂದಿಗೆ ದಾವಂತದಲಿ ಓಡಲೇಬೇಕು ಪ್ರತಿಯೊಬ್ಬರಿಗೂ ಈ ಕಾಲ ಗೋಲ್ಡನ್ ಸಮಯ. ಸದುಪಯೋಗಪಡಿಸಿಕೊಳ್ಳಿ. *ಮನೆಯ ಸದಸ್ಯರೆಲ್ಲ ಕೂತು ಸುದ್ದಿ ಹೇಳಿ, ಆಟವಾಡಿ, ಪರಸ್ಪರ ಅರ್ಥ ಮಾಡಿಕೊಳ್ಳಿ, ಅದೆಷ್ಟೋ ಜನರು ಏನೂ ಕೆಲಸ ಇಲ್ವಲ್ಲಾ ಎಂದು ಮೂರು ಹೊತ್ತು ಮೊಬೈಲ್ ನಲ್ಲಿ ಮುಳುಗಿ ಸಾಮಾಜಿಕ ತಾಣದಲ್ಲಿ ಅನವಶ್ಯಕ ಸುದ್ದಿಗಳಿಗೆ ಇಂಬು ಕೊಡುತ್ತಾ ಸಮಯ ಕಳೆಯುತ್ತಾರೆ. ಖಂಡಿತವಾಗಿ ಈ ತಪ್ಪು ಮಾಡಬೇಡಿ. ಮತ್ತಷ್ಟು ಮೊಬೈಲ್ ದಾಸ್ಯತ್ವಕ್ಕೆ ಬಲಿಯಾಗದಿರಿ. ಕೊನೆಯದಾಗಿ ಈ ಗೃಹವಾಸ ಶಾಶ್ವತವಲ್ಲ ನಾವು ದೇಶದ ಒಳಿತಿಗಾಗಿ ನಿಯಮಪಾಲನೆ ಮಾಡುತ್ತಿದ್ದೇವೆ.ಸಣ್ಣ ಪುಟ್ಟ ಕಷ್ಟಗಳನ್ನು ಸಹಿಸಿಕೊಳ್ಳೋಣ ತಾಳ್ಮೆ ಕಳೆದುಕೊಳ್ಳದಿರೋಣ ಎಂದು ನಿರ್ಧಾರಮಾಡಿ.. ಮುಖ್ಯವಾಗಿ ಮುನಿಸು ಜಗಳಗಳಿಗೆ ಯಾವುದೇ ಅವಕಾಶ ಕೊಡಲಾರೆ ಎಂದು ಪ್ರತಿಯೊಬ್ಬರೂ ಮನದೊಳಗೇ ಶಪಥ ಕೈಗೊಳ್ಳಿ.. ಖುಷಿಯಾಗಿ ಕಳೆಯಿರಿ. *************

ಪ್ರಸ್ತುತ Read Post »

ಅಂಕಣ ಸಂಗಾತಿ, ಇತರೆ

ಜ್ಞಾನಪೀಠ ವಿಜೇತರು

ಯು.ಆರ್.ಅನಂತಮೂರ್ತಿ..! ಜ್ಞಾನಪೀಠ ಪುರಸ್ಕೃತ ಯು.ಆರ್.ಅನಂತಮೂರ್ತಿ..! ಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿ ೧೯೯೪ರಲ್ಲಿ ಬಂದಾಗ ಕನ್ನಡ ಸಾಹಿತ್ಯ ಲೋಕ ಮತ್ತೊಮ್ಮೆ ಇಡೀ ದೇಶದ ಗಮನ ಸೆಳೆಯಿತು. ಈ ಗೌರವ ಪಡೆದವರು ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ… ಎಲ್ಲರಿಗೂ ಅವರವರ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸುವ ಅನಂತಮೂರ್ತಿ; ವಿದೇಶಗಳ ಹಲವಾರು ಭಾಷೆ ತಿಳಿದಿರುವ ನಮಗೆ ನಮ್ಮ ಅಕ್ಕಪಕ್ಕದ ನಾಡಿನ ಭಾಷೆಗಳು ಗೊತ್ತೇ ಇಲ್ಲದ್ದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಜಗತ್ತಿನ ಬೇರೆ ಬೇರೆ ಭಾಷೆಗಳ ಹಲವು ಮಹತ್ವದ ಕೃತಿಗಳು ಇಂಗ್ಲೀಷಿಗೆ ಸಮರ್ಥವಾಗಿ ಅನುವಾದಗೊಳ್ಳಲು ಸಾಧ್ಯವಿಲ್ಲ ಎನ್ನುವುದ ಅವರ ಅಭಿಪ್ರಾಯವಾಗಿದೆ. ಕನ್ನಡ ಸಾಹಿತಿಯೂ ಮತ್ತು ಭಾರತೀಯ ಸಾಹಿತ್ಯದ ವಿಮರ್ಶಕರೂ ಆದ ಅನಂತಮೂರ್ತಿ ತಮ್ಮನ್ನು ಕನ್ನಡ ಸಂಸ್ಕೃತಿಯ Critical Insider ಎಂದು ಕರೆದುಕೊಳ್ಳುತ್ತಾರೆ… ತಮ್ಮ ಬಹು ಚರ್ಚಿತ ಸಂಸ್ಕಾರ ಕಾದಂಬರಿಯಿಂದ ಭಾರತೀಯ ಸಾಹಿತ್ಯ ಮತ್ತು ಚಲನಚಿತ್ರ ರಂಗಗಳಲ್ಲಿ ಒಂದು ದೊಡ್ಡ ವಿವಾದವನ್ನೇ ಮಾಡಿದ ಅನಂತಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಹಳ್ಳಿಯಲ್ಲಿ. ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತ (ಕುವೆಂಪು ಮತ್ತು ಅನಂತಮೂರ್ತಿ) ರನ್ನು ನೀಡಿದ ಹೆಗ್ಗಳಿಕೆ ತೀರ್ಥಹಳ್ಳಿ ತಾಲ್ಲೂಕಿನದು. ಇವರು ಹುಟ್ಟಿದ್ದು ೧೯೩೨ರ ಡಿಸೆಂಬರ್ ೨೧ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ. ತಾಯಿ ಸತ್ಯಮ್ಮ (ಸತ್ಯಭಾಮ)… ದೂರ್ವಾಸಪುರದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ. ಪಡೆದರು… ೧೯೭೦ರಿಂದ ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನಂತಮೂರ್ತಿಯವರು, ೧೯೮೭ರಲ್ಲಿ ಕೇರಳದ ಕೋಟ್ಟಯಂನ ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದ ಉಪಕುಲಗತಿಗಳಾಗಿದ್ದರು. ೧೯೯೨-೯೩ರ ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯದ ಅಧ್ಯಕ್ಷರಾಗಿದ್ದರು. ೧೯೯೩ರಲ್ಲಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಗೋಕಾಕರ ಅನಂತರ ಈ ಸಂಸ್ಥೆಯ ಅಧ್ಯಕ್ಷರಾದ ಎರಡನೆಯ ಕನ್ನಡಿಗರು ಇವರು… ಅನಂತಮೂರ್ತಿಯವರು ದೇಶವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಜವಾಹರಲಾಲ್ ನೆಹರೂ ವಿ.ವಿ., ಜರ್ಮನಿಯ ತೂಬಿಂಗೆನ್ ವಿ.ವಿ., ಅಮೇರಿಕ ದೇಶದ ಐಯೊವಾ ವಿ.ವಿ., ಟಫಟ್ಸ್ ವಿ.ವಿ., ಕೊಲ್ಲಾಪುರದ ಶಿವಾಜಿ ವಿ.ವಿ.ಗಳಲ್ಲಿ ಪ್ರಾಧ್ಯಾಪಕರಾಗಿದ್ದರು… ಬರಹಗಾರರಾಗಿ, ಭಾಷಣಕಾರರಾಗಿ ಅನಂತಮೂರ್ತಿಯವರು ದೇಶದ ಒಳಗೆ ಮತ್ತು ಹೊರಗೆ ಹಲವಾರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ; ಉಪನ್ಯಾಸ ನೀಡಿದ್ದಾರೆ. ೧೯೮೦ರಲ್ಲಿ ಸೋವಿಯತ್ ರಷ್ಯಾ, ಹಂಗೇರಿ, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೆ ಭೇಟಿ ನೀಡಿದ ಭಾರತೀಯ ಲೇಖಕರ ಬಳಗದ ಸದಸ್ಯರಾಗಿದ್ದರು. ಮಾರ್ಕ್ಸ್‌ವಾದದಿಂದ ತುಂಬ ಪ್ರಭಾವಿತರಾಗಿದ್ದ ಇವರು ತಮ್ಮ ಹಲವಾರು ಅಭಿಪ್ರಾಯಗಳನ್ನು ಪರೀಕ್ಷಿಸಿ ನೋಡಲು ಈ ಭೇಟಿ ನೆರವಾಯಿತು. ಸೋವಿಯತ್ ಪತ್ರಿಕೆಯೊಂದರ ಸಲಹಾ ಸಮಿತಿಯ ಸದಸ್ಯರಾಗಿ ೧೯೮೯ರಲ್ಲಿ ಮಾಸ್ಕೋಗೆ ಭೇಟಿ ನೀಡಿದರು. ೧೯೯೩ರಲ್ಲಿ ಚೀನಾ ದೇಶಕ್ಕೆ ಭೇಟಿ ನೀಡಿದ ಭಾರತೀಯ ಬರಹಗಾರರ ಬಳಗಕ್ಕೆ ಇವರು ನಾಯಕರಾಗಿದ್ದರು. ಇವಲ್ಲದೆ ದೇಶವಿದೇಶಗಳ ಹಲವಾರು ವೇದಿಕೆಗಳಿಂದ ನೂರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ… ಇಷ್ಟೇ ಅಲ್ಲದೆ, ಅನಂತಮೂರ್ತಿಯವರು ಕನ್ನಡದ ಹಲವಾರು ಸಾಹಿತ್ಯ ದಿಗ್ಗಜರನ್ನು ರೇಡಿಯೋ ಮತ್ತು ದೂರದರ್ಶನಗಳಲ್ಲಿ ಸಂದರ್ಶಿಸಿದ್ದಾರೆ. ಮೈಸೂರು ಆಕಾಶವಾಣಿಗಾಗಿ ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಆರ್.ಕೆ. ನಾರಾಯಣ್, ಆರ್.ಕೆ.ಲಕ್ಷ್ಮಣ್ ಮತ್ತು ಜನರಲ್ ಕಾರಿಯಪ್ಪ ಅವರನ್ನು ಸಂದರ್ಶಿಸಿದ್ದಾರೆ. ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರುಗಳನ್ನು ಕುರಿತು ದೂರದರ್ಶನವು ನಿರ್ಮಿಸಿದ ಸಾಕ್ಷ್ಯ ಚಿತ್ರಗಳಲ್ಲಿ ಸಂದರ್ಶಕರಾಗಿ ಭಾಗವಹಿಸಿದ್ದಾರೆ… ಅನಂತಮೂರ್ತಿಯವರು ಪ್ರಸಿದ್ಧರಾಗಿರುವುದು ಕನ್ನಡದ ಬರಹಗಾರರಾಗಿ ಮತ್ತು ಕನ್ನಡ ಸಂಸ್ಕೃತಿಯ critical insider ಆಗಿ. ೧೯೫೫ರಲ್ಲಿ “ಎಂದೆಂದೂ ಮುಗಿಯದ ಕತೆ” ಕಥಾ ಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು. ಮೌನಿ, ಪ್ರಶ್ನೆ, ಆಕಾಶ ಮತ್ತು ಬೆಕ್ಕು -ಇವರ ಕಥಾಸಂಕಲನಗಳು. ಈ ಎಲ್ಲ ಕತೆಗಳನ್ನೂ ಒಳಗೊಂಡ “ಮೂರು ದಶಕದ ಕಥೆಗಳು” ೧೯೮೯ರಲ್ಲಿ ಹೊರಬಂದಿದೆ. ಹಿರಿಯ ಸಮಾಜವಾದಿ ರಾಜಕಾರಣಿ ಜೆ. ಎಚ್. ಪಟೇಲರ ಸಮೀಪವರ್ತಿಯಾಗಿದ್ದ ಅನಂತಮೂರ್ತಿ ಅವರು ಶಾಂತವೇರಿ ಗೋಪಾಲ ಗೌಡ ಮತ್ತು ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದವರು. ಇವರ ಬರಹದಲ್ಲಿ ಈ ಇಬ್ಬರ ಪ್ರಭಾವಗಳು ಎದ್ದು ಕಾಣುತ್ತವೆ… ೧೯೬೫ರಲ್ಲಿ ಇವರ ಮೊದಲ ಕಾದಂಬರಿ “ಸಂಸ್ಕಾರ” ಪ್ರಕಟವಾಯಿತು. ಪ್ರಕಟವಾದಾಗ ಮತ್ತು ಚಲನಚಿತ್ರವಾದಾಗ ತುಂಬ ವಿವಾದವನ್ನುಂಟು ಮಾಡಿದ ಈ ಕಾದಂಬರಿ ಹಲವಾರು ದೇಶೀಯ ಮತ್ತು ವಿದೇಶೀಯ ಭಾಷೆಗಳಿಗೆ ಅನುವಾದಗೊಂಡಿದೆ. ಭಾರತೀಪುರ, ಅವಸ್ಥೆ ಮತ್ತು ಭವ -ಇವರ ಇತರ ಕಾದಂಬರಿಗಳು. “ಆವಾಹನೆ” ಎಂಬ ಒಂದು ನಾಟಕವನ್ನು ಬರೆದಿರುವ ಅನಂತಮೂರ್ತಿ “೧೫ ಪದ್ಯಗಳು”, “ಮಿಥುನ” ಮತ್ತು “ಅಜ್ಜನ ಹೆಗಲ ಸುಕ್ಕುಗಳು” ಎಂಬ ಮೂರು ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಪ್ರಜ್ಞೆ ಮತ್ತು ಪರಿಸರ, ಪೂರ್ವಾಪರ, ಸಮಕ್ಷಮ -ಇವು ಅವರ ಪ್ರಬಂಧ ಸಂಕಲನಗಳು. ಇಷ್ಟಲ್ಲದೆ ಇಂಗ್ಲೀಷಿನಲ್ಲಿ ಇವರು ಬರೆದಿರುವ ಹಲವಾರು ಪ್ರಬಂಧಗಳು ದೇಶ-ವಿದೇಶಗಳ ಸಾಹಿತ್ಯಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ೧೯೮೧ರಲ್ಲಿ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು “ರುಜುವಾತು” ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು… ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯ ಕುದುರೆ, ನವಿಲುಗಳು, ಬರ, ಘಟಶ್ರಾದ್ಧ, ತಾಯಿ, ಹುಲಿಯ ಹೆಂಗರಳು ಈ ಸಾಲಿಗೆ ಸೇರುತ್ತವೆ… ಅನಂತಮೂರ್ತಿಯವರ ಸಂಸ್ಕಾರ, ಅವಸ್ಥೆ ಕಾದಂಬರಿಗಳನ್ನು ಮತ್ತು ಬರ, ಘಟಶ್ರಾದ್ಧ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಘಟಶ್ರಾದ್ಧ ಕತೆಯನ್ನು ಆಧರಿಸಿ “ದೀಕ್ಷಾ” ಎಂಬ ಹಿಂದಿ ಚಲನಚಿತ್ರವೂ ತಯಾರಾಗಿದೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು ಭಾರತ ಸರಕಾರದಿಂದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ… ಸಂಸ್ಕಾರ, ಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಅನಂತಮೂರ್ತಿಯವರಿಗೆ ಪ್ರಶಸ್ತಿ ಸಿಕ್ಕಿದೆ. ೧೯೮೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೪ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,೧೯೯೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೪ರಲ್ಲಿ ಮಾಸ್ತಿ ಪ್ರಶಸ್ತಿ -ಇವು ಅನಂತಮೂರ್ತಿಯವರಿಗೆ ಬಂದ ಮನ್ನಣೆಗಳಲ್ಲಿ ಕೆಲವು. ೧೯೯೪ರಲ್ಲಿ ಬಂದಿರುವ ಜ್ಞಾನಪೀಠ ಪ್ರಶಸ್ತಿ ಇವೆಲ್ಲವುಗಳಿಗೆ ಕಳಶಪ್ರಾಯವಾದುದು… ಹೀಗಿದ್ದರು ಹೀಗಿತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿಯವರ ಬದುಕು ಮತ್ತು ಸಾಹಿತ್ಯ… *********** ‌‌‌‌ — ಕೆ.ಶಿವು.ಲಕ್ಕಣ್ಣವರ

ಜ್ಞಾನಪೀಠ ವಿಜೇತರು Read Post »

ಇತರೆ

ಯುಗಾದಿಯ ಸೂರ್ಯಸ್ನಾನ

ಯುಗಾದಿಯ ಸೂರ್ಯಸ್ನಾನ ಸ್ಮಿತಾ ರಾಘವೇಂದ್ರ ಯುಗದ ಆದಿಯೂ ಪ್ರಕೃತಿಯ ಪ್ರೀತಿಯೂ ಯುಗ ಉರುಳಿ ಯುಗ ಬರಲು ನವ ಯುಗಾದಿ ಬಾಡುವಲ್ಲೂ ಬಿಡದೇ ಚಿಗುರುವ ಈ ಪ್ರಕೃತಿಯ ಆದಿ. ಇಡೀ ಪ್ರಕೃತಿಯೇ ಹೊಸ ಚೈತನ್ಯವೊಂದಕ್ಕೆ ತರೆದು ಕೊಳ್ಳುವ ಕಾಲ ಮರಗಳೆಲ್ಲ ಚಿಗುರೆಲೆಯ ಹೊದ್ದು ಹೂ ಹಣ್ಣು ಗೊಂಚಲುಗಳಿಂದ ನಳ ನಳಿಸಿ ಮತ್ತೊಂದು ಸೃಷ್ಟಿಗೆ ಬೀಜಗಳ ಪಸರಿಸಿ ತೃಪ್ತವಾಗುವ ಕಾಲ. ಆಗೆಲ್ಲ ಯುಗಾದಿ ಬಂತೆದರೆ ಬೆಟ್ಟಗುಡ್ಡಗಳ ತಿರುಗುವದೇ ಒಂದು ಸಂಭ್ರಮ ಗೊಂಚಲು ಗೊಂಚಲಾಗಿ ಬಾಗಿ ನಿಂತ ಸಂಪಿಗೆ, ನೇರಳೆ, ಕೌಳಿ,ಬಿಕ್ಕೆ ಹಣ್ಣು, ಮುಳ್ಳೆಹಣ್ಣು,ಇನ್ನೂ ಹಲವುಜಾತಿಯ ಹಣ್ಣುಗಳ ಕಿತ್ತು ಮಡಿಲೊಳಗೆ ತುಂಬಿಕೊಂಡು ಮನಸೋ ಇಚ್ಚೆ ಸವಿಯುತ್ತಿದ್ದೆವು.ಹುಳಿ, ಸಿಹಿ, ಕಹಿ,ಅದೆಷ್ಟು ವಿಧದ ರುಚಿಗಳು. ದೇಹಕ್ಕೂ, ಮನಸಿಗೂ, ಆರೋಗ್ಯಕ್ಕೂ, ಖುಷಿ ನೀಡುತ್ತಿತ್ತು. ಅಯಾ ಕಾಲಕ್ಕೆ ಪ್ರಕೃತಿಯ ಮಡಿಲೊಳಗೆ ಸಿಗುವ ಹಣ್ಣನ್ನು ತಂದು ಸವಿಯದೇ ಹೋದರೆ ಅದೇನೋ ಕಳೆದುಕೊಂಡ ಭಾವ ಇಗಲೂ ಕಾಡುತ್ತದೆ. ಹೊರಗೆ ಹೋದರೆ ಬೆಟ್ಟದ ಹಣ್ಣುಗಳ ತಿಂದರೆ ಇನ್ಪೆಕ್ಷನ್ ಆಗುತ್ತದೆ ಎನ್ನುವ ಕಾಲ ಬರತೊಡಗಿತು. ಮಾನವ ಪ್ರಕೃತಿಯ ಜೊತೆಗಿನ ಸಂಬಂಧ ನಿಧಾನವಾಗಿ ತೊರೆದು ಆಧುನಿಕತೆಯೆಡೆಗೆ ತೆರೆದುಕೊಳ್ಳತೊಡಗಿದ. ಸಿಟಿಯಲ್ಲಿರುವ ಮಾಲ್‌ಗಳು ತುಂಬಿ ತುಳುಕಾಡುತೊಡಗಿದವು. ಎಲ್ಲೆಡೆ ರಶ್ಯೋ ರಶ್ಯು. ಹಬ್ಬದ ಆಫರ್ಸ್ ಗಳು ಎಲ್ಲರನ್ನೂ ತನ್ನತ್ತ ಸೆಳೆದು ಹಬ್ಬವೆಂದರೆ ಖರೀದಿ ಅನ್ನುವಂತಾಯಿತು. ಈಗಿನ ಯುವಕ ಯುವತಿಯರು ರಜೆ ಇದೆ ಅಂದರೆ ಸ್ನೇಹಿತರ ಜೊತೆ ಪಾರ್ಟಿ, ಕೂಟ ಅಂತ ಮೋಜುಮಸ್ತಿಯಲ್ಲಿ ತೊಡಗುತ್ತಾರೆ. ಮಕ್ಕಳಿಗೆಲ್ಲಿ ನಮ್ಮ ಪ್ರಕೃತಿಯ ಪರಿಚಯವಾಗಲು ಸಾಧ್ಯ. ಬೆಳಗಾಗೆದ್ದು ಬೇವಿನ ಮರ ಹುಡಿಕಿಕೊಂಡು ಹೋಗಿ ತೆಕ್ಕೆಯತುಂಬಾ ಸೊಪ್ಪು ಕಿತ್ತು ತರುತ್ತುದ್ದ ದಿನಗಳವು. ಅದನ್ನು ಬಚ್ಚಲುಮನೆಯ ನೀರಿನ ಹಂಡೆಗೆ ಹಾಕಿ ಚೆನ್ನಾಗಿ ಕುದಿಸುತ್ತುದ್ದರು ಅಪ್ಪ. ಅದರ ಘಮವೇ ಇಂದಿಗೂ ಒಂತರ ಅಪ್ಯಾಯಮಾನ,ಹಬ್ಬದ ದಿನ ಆರಂಭ ವಾಗುವ ಈ ಪ್ರಕ್ರಿಯೆ ಆಗಾಗ ನಡೆಯುತ್ತಲೇ ಇತ್ತು. ಅದರ ಸೊಪ್ಪುಗಳನ್ನು ಕುದಿಸಿ ಪ್ರತಿಯೊಬ್ಬರಿಗೂ ಒಂದೊಂದು ಲೋಟ ಕುಡಿಯಲು ನೀಡುತ್ತಿದ್ದಳು ಅಮ್ಮ. ಕಹಿ ಎಂದು ತಕರಾರು ತೆಗೆದರೆ ಮುಗಿತು, ಮೂಗು ಹಿಡಿದು ಕುಡಿಸುತ್ತಿದ್ದಳು.ಕಹಿಯ ಒಗರನ್ನು ನೀಗಿಸಿಕೊಳ್ಳಲು ಕೈಲೊಂದು ಹುಣಸೇ ಹಣ್ಣಿನ ಚೂರು ಹಿಡಿದು ಗಟ ಗಟನೇ ಕುಡಿದು ಗಬಕ್ಕನೇ ಹುಣಸೇಹಣ್ಣು ಬಾಯಿಗೆ ಹಾಕಿಕೊಳ್ಳುತ್ತಿದ್ದೆವು. ಪ್ರತೀ ರವಿವಾರ ಕಹಿ ಕುಡಿಯಲೇಬೇಕಾಗಿತ್ತು ಅಂತಹ ಆರೋಗ್ಯ ಪೂರ್ಣ ನಿಯಮಗಳೆಲ್ಲ ಇಂದು ಜಿಮ್,ಆಸ್ಪತ್ರೆ,ಸೇರಿಕೊಂಡಿವೆ. ಸಹಜವಾಗಿ ಎಟುಕುವ ಯಾವ ಸವಲತ್ತುಗಳೂ ಬೇಡ,ಅದಕ್ಕೆ ಹಣತೆತ್ತು ಆಹ್ವಾಹನೆ ಮಾಡಿದರೆನೇ ಖುಷಿ ಮತ್ತು ಅದು ಸತ್ಯ ಅನ್ನುವ ನಂಬಿಕೆ. ವಸಂತ ಋತುವಿನ ಆಗಮನವೆಂದರೆ ಸಂಭ್ರಮ ಪಲ್ಲವಿಸುವ ಸಮಯ. ಈ ಋತುರಾಜನ ಆಗಮನದೊಂದಿಗೆ ಯುಗಾದಿ ಹಲವು ಆರೋಗ್ಯ ಸೂತ್ರಗಳನ್ನು ಹೊತ್ತು ತರುತ್ತದೆ. ಧರ್ಮಸಿಂಧು, ಅಥರ್ವವೇದ, ಶತಪಥ ಬ್ರಾಹ್ಮಣ ಇನ್ನೂ ಮುಂತಾದ ಧಾರ್ಮಿಕ ಗ್ರಂಥಗಳಲ್ಲಿ ಯುಗಾದಿಯ ವೈಶಿಷ್ಟ್ಯದ ಉಲ್ಲೇಖವಿದೆ. ‘ಯುಗ’ ಎಂದರೆ- ನೂತನ ವರ್ಷ; ‘ಆದಿ’ ಎಂದರೆ- ಆರಂಭ. ಈ ಋತುವಿನಲ್ಲಿ ಹೊಸ ಚಿಗುರಿನ ಹಸಿರು ವಸ್ತ್ರವನ್ನುಟ್ಟು ರಾರಾಜಿಸುವ ನಿಸರ್ಗವನ್ನು ಕಂಡಾಗ, ಕೋಗಿಲೆಗಳ ಇಂಚರವನ್ನು ಆಲಿಸಿದಾಗ, ‘ಆನಂದಮಯ ಈ ಜಗ ಹೃದಯ’ ಎಂಬ ಕವಿ ವಾಣಿಯ ಸತ್ಯದ ದರ್ಶನವಾಗುತ್ತದೆ. ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ವಸಂತ ಋತುವೆಂದರೆ ಸಂಭ್ರಮದ ಹೊನಲು.ಹಣ್ಣು ಚಿಗುರೆಲೆಗಳ ತಿಂದು ತೃಪ್ತವಾಗಿ ವಿಹರಿಸುತ್ತವೆ. ಅದಕ್ಕಾಗಿಯೆ ಸರ್ವ ಋತುಗಳಲ್ಲಿ ವಸಂತ ಋತು ಶ್ರೇಷ್ಠ ಕೂಡ. ಉಸ್ ಉಸ್ ಎಂದು ಎ ಸಿ ಯೊಳಗೆ ಕೂತರೂ ಬೆವರಿಳಿಸಿ ಬಾಡುತ್ತಿರುವ ಮನುಷ್ಯ,ರಣ ರಣ ಸೂರ್ಯನ ಕಿರಣಕ್ಕೂ ಸೆಡ್ಡು ಹೊಡೆದು ಬದುಕುವ ಕಲೆಯ ತಣ್ಣಗೆ ಕಲಿಸುತ್ತಿರುತ್ತದೆ ಪ್ರಕೃತಿ. ಆದರಿಂದು ಪ್ರಕೃತಿಗೇ ಸೆಡ್ಡು ಹೊಡೆದು ಸಾಗುತ್ತಿದ್ದಾನೆ ಮನುಜ. ಅದರ ಪರಿಣಾಮವನ್ನೂ ಜೊತೆ ಜೊತೆಗೇ ಅನುಭವಿಸಿದರೂ ಕಿಂಚಿತ್ತೂ ಬದಲಾಗದ ಮಾನವ. ಹೌದು,ವಿಕಾರಿ ನಾಮದ ಯುಗಾದಿ ತನ್ನ ವಿಕಾರ ರೂಪವನ್ನು ಇಡೀ ಜಗತ್ತಿಗೇ ತೋರಿಸುತ್ತಿದೆ. ಇಂದು,ಮನುಷ್ಯನ ಮಿತಿಮೀರಿದ ಆಸೆಗಳು ಮನುಜಕುಲವನ್ನೇ ನಾಶಮಾಡುತ್ತಿವೆ. ಪ್ರತಿಯೊಂದನ್ನೂ ಸಮತೋಲನದಲ್ಲಿ ಇರಿಸಿಕೊಳ್ಳುವ ಕಲೆ ಮಾನವನಿಗಿಂತ ಪ್ರಕೃತಿಗೇ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿಯೇ ಕಾಲ ಕಾಲಕ್ಕೆ ತನ್ನ ನಿಲುವನ್ನು ಚಾಚುತಪ್ಪದೇ ತೋರಿಸುತ್ತದೆ,ಪಾಲಿಸುತ್ತದೆ, ಯುಗಾದಿಕೂಡ ಅಂತಹದ್ದೊಂದು ಪ್ರಕೃತಿ ಪಾಲನೆ ಮತ್ತು ನಿಲುವಿನ ಸಂಕೇತವೇ ಹಿಂದೂ ಸಂಪ್ರದಾಯದಂತೆ ಒಂದು ಸಂವತ್ಸರ ಕಳೆದು ಇನ್ನೊಂದು ಸಂವತ್ಸರದ ಆರಂಭ. ಆರಂಬದಲ್ಲಿಯೇ ಪ್ರಕೃತಿ ಬೀಜೊತ್ಪತ್ತಿಯನ್ನು ಮಾಡಿ ಬರುವ ಮಳೆಗಾಲಕ್ಕೆ ಮೊಳಕೆಯೊಡೆಯಲು ತನ್ನ ಸೃಷ್ಟಿಯ ಸಮತೋಲನ ಕಾಯ್ದುಕೊಳ್ಳಲು ಸಿದ್ಧವಾಗುತ್ತದೆ. ಅಂತೆಯೇ ಬರಲಿರುವ ಬದುಕು ಹೇಗೂ ಇರಬಹುದು ಕಹಿಯಾಗಲಿ ಸಿಹಿಯಾಗಲೀ ಎಲ್ಲದಕ್ಕೂ ಸಿದ್ದರಾಗಿ ಮುನ್ನಡೆಯಬೇಕು ಎಂದು ಹಿರಿಯರು ಬೇವು ಬೆಲ್ಲವನ್ನು ತಿನ್ನುವ ಮೂಲಕ ಒಲವು, ನಲಿವು, ಸಹಬಾಳ್ವೆಯ,ದ್ಯೋತಕವೆಂದು ಯುಗಾದಿಯನ್ನು ಬರಮಾಡಿಕೊಳ್ಳುತ್ತಾರೆ. ಶತಾಯು:ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| ಎನ್ನುವಂತೆ– (ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.) ಆರೋಗ್ಯದ ದೃಷ್ಟಿಯಿಂದಲೂ ಬೇವು ದೇಹಕ್ಕೆ ಬಹಳ ಒಳ್ಳೆಯ ದಿವ್ಯ ಔಷಧ ನಮ್ಮೊಳಗಿನ ಕಲ್ಮಶಗಳನ್ನು ಹೊರದೂಡುತ್ತದೆ. ಅಲ್ಲದೇ ಬೇಸಿಗೆ ಕಾಲಕ್ಕೆ ರೋಗ ರುಜಿನಿಗಳು ಅಧಿಕ ಮತ್ತು ಬಹಳಬೇಗ ವ್ಯಾಪಿಸುತ್ತದೆ. ಬೇವಿನ ಎಲೆ, ಚಿಗುರು, ಹೂವು, ಕಾಯಿ, ಬೀಜ, ಎಣ್ಣೆ, ಕಾಂಡ, ತೊಗಟೆ, ಬೇವಿನ ಬೇರುಗಳೆಲ್ಲವೂ ಮದ್ದಿಗೊದಗುತ್ತವೆ. ಆದರೆ ಬಳಸಲು ವ್ಯವಧಾನ ಬೇಕು. ಕಾಯಿಲೆ ಎಷ್ಟೆ ಗಂಭೀರವಿರಲಿ, ಯಾವ ಚಿಕಿತ್ಸೆಗೂ ಗಾಂಧೀಜಿ ಒಪ್ಪುತ್ತಿರಲಿಲ್ಲವಂತೆ. ಬೇವಿನ ಎಲೆಯ ಕಷಾಯ ಮತ್ತು ಆಡಿನ ಹಾಲು ಕುಡಿದು,ಮೈಗೆ ಆಗಾಗ ಬೇವಿನ ಎಣ್ಣೆ ಬಳಿದುಕೊಂಡು ಮರದ ಹಲಗೆಗಳ ಮೇಲೆ ಮಲಗಿ ಸೂರ್ಯಸ್ನಾನ ಮಾಡುತ್ತಿದ್ದರಂತೆ. ನಾವಿಂದು ಶಾಸ್ತ್ರಕ್ಕೆ ಒಂದು ಎಲೆ ತಿಂದು ಹಬ್ಬದ ಆಚರಣೆಯಿಂದ ಬೀಗುತ್ತಿದ್ದೇವೆ. ಈ ಹಬ್ಬವನ್ನು ಭಾರತ ಪರ್ವದಲ್ಲಿ ಬೇರೆ-ಬೇರೆ ಹೆಸರಿನಿಂದ, ಸಾಮಾನ್ಯವಾಗಿ ಎಲ್ಲರೂ ಆಚರಿಸುವರು. ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ಧ ವಾದ ಯುಗಾದಿ ಹಬ್ಬ ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಯುಗಾದಿ ಹಬ್ಬವು ಹಿಂದುಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನ ಕೂಡಾ. ಒಟ್ಟಾರೆ ಯುಗಾದಿಯು ಸಾಂಪ್ರದಾಯಿಕ ಆಚರಣೆಯೊಂದಿಗೆ , ಪ್ರಕೃತಿಯೊಂದಿಗಿನ ನಮ್ಮ ಅವಿನಾಭಾವ ಸಂಬಂಧದ ಪ್ರತೀಕವೆಂದರೆ ತಪ್ಪಾಗಲಾರದು. ಅದೆಷ್ಟು ರೋಗ ನಿರೋಧಕಗಳನ್ನು ನಮಗೆ ಪ್ರಕೃತಿ ಕೊಡುಗೆಯಾಗಿ ನೀಡಿದೆ.ನಾವದನ್ನು ಗಮನಿಸುತ್ತಲೇ ಇಲ್ಲ ಹಳೆಯ ಪದ್ದತಿಗಳೆಲ್ಲ ಜೊಳ್ಳು. ವಿಜ್ಙಾನವೇ ಹೆಚ್ಚೆಂದು ಅಹಂಕಾರದಿಂದ ಸಾಗುತ್ತಿದ್ದೇವೆ. ಆದರೆ ನೆನಪಿರಲಿ ಹಳೆಯಬೇರಿನ ಭದ್ರತೆಯೇ ಹೊಸ ಚಿಗುರಿಗೆ ನಾಂದಿ. ಇಂದು ಜಗತ್ತೇ ಎದುರಿಸುತ್ತಿರು ಕೊರೋನಾ ಎಂವ ವೈರಾಣುವಿನ ಆಟಾಟೋಪ ನಮ್ಮ ಹಿಂದೂ ಸಂಪ್ರದಾಯ ಮಡಿ ಯೆಂಬ ಸ್ವಚ್ಚತೆ.ಅಪ್ಪುಗೆ ಗಿಂತ ನಮಸ್ಕಾರದ ಗೌರವ. ಹಬ್ಬಗಳ ಶಿಸ್ತುಬದ್ಧ ಸಂಪ್ರದಾಯಗಳು, ಪ್ರತೀ ಘಟ್ಟವನ್ನು ನೆನಪಿಸುತ್ತಿರುವದೇ ಇದಕ್ಕೆ ಸಾಕ್ಷಿ ಆದರೆ ಕಳೆದ ಕಾಲ ಮತ್ತೆ ಬರಲಾರದು. ಇರುವ ಬರುವ ದಿನಗಳನ್ನು ಜಾಗರೂಕವಾಗಿ ಬದುಕುವದು ಬಹಳ ಮುಖ್ಯ ಪ್ರತಿಯೊಂದು ಹಬ್ಬ ಹರಿದಿನಗಳಿಗೂ ಅದರದೇ ಆದ ಸಂಪ್ರದಾಯ ಶಾಸ್ತ್ರ ಆಚರಣೆಗಳು ನಮ್ಮ ಅರೋಗ್ಯ ಸ್ವಚ್ಚತೆಯೊಂದಿಗೆ ಜೋಡಣೆಯಾಗಿದೆ ಆದರೆ ಕೇವಲ ಅದನ್ನು ಆಡಂಭರವಾಗಿಮಾತ್ರ ನಾವಿಂದು ನೋಡುತ್ತಿದ್ದೇವೆ. ಈಗ ಸಧ್ಯದ ಪರಿಸ್ಥಿತಿಯಲ್ಲಿ ಬಂದಿರುವ ಮಹಾ ಮಾರಿ ರೋಗದ ವಿಕಾರತೆಯು ತೊರೆದು ಹೊಸ ಶಾರ್ವರಿಯ, ಶಕ್ತಿ ಯುಗ ಎಲ್ಲರ ಕಾಯಾ ವಾಚಾ ಮನಸಾ ಆರಂಭವಾಗಲಿ. ********

ಯುಗಾದಿಯ ಸೂರ್ಯಸ್ನಾನ Read Post »

ಇತರೆ

ಪ್ರಸ್ತುತ

ಮಾನವನ ಮಿದುಳಿಗೇ ತಗಲಿರುವ ವೈರಸ್ ಗಣೇಶಭಟ್, ಶಿರಸಿ ಮಾನವನ ಮಿದುಳಿಗೇ ತಗಲಿರುವ ವೈರಸ್………….. ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ವೈರಸ್ ಯಾವುದೆಂದು ಕೇಳಿದರೆ ಚಿಕ್ಕ ಮಕ್ಕಳೂ ಕೂಡಾ ಕೊರೊನಾ ಎಂದು ಹೇಳುವಷ್ಟು ಅದರ ಹೆಸರು ಜನಜನಿತವಾಗಿದೆ. ಕೊರೊನಾ ವೈರಾಣು ತಗಲದಂತೆ ಸುರಕ್ಷಾ ಕ್ರಮವಾಗಿ ಮಾಲ್‍ಗಳನ್ನು, ಸಿನಿಮಾ, ನಾಟಕಗಳನ್ನು ಬಂದ್ ಮಾಡಲಾಗಿದೆ. ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಭಯದಿಂದಾಗಿ ಜನರ ಓಡಾಟ ಕಡಿಮೆಯಾಗಿದೆ. ಸಾರಿಗೆ ವ್ಯವಸ್ಥೆಯ ಬಳಕೆದಾರರ ಸಂಖ್ಯೆ ಕುಗ್ಗುತ್ತಿದೆ. ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿರುವುದರಿಂದ ಅಂಗಡಿ, ಹೋಟೆಲ್‍ಗಳ ವ್ಯಾಪಾರ, ವ್ಯವಹಾರ ಕುಂಠಿತವಾಗಿದೆ. ಕೆಲವು ಕೃಷಿ ಉತ್ಪನ್ನಗಳ ಮಾರುಕಟ್ಟೆಗಳಲ್ಲಿ ವ್ಯವಹಾರ ಸ್ಥಗಿತಗೊಳಿಸಲಾಗಿದೆ. ಶಾಲಾ- ಕಾಲೇಜುಗಳಿಗೆ ರಜಾ ನೀಡಲಾಗಿದೆ. ಒಟ್ಟಾರೆಯಾಗಿ ಜನಜೀವನ ಸ್ತಬ್ಧಗೊಳ್ಳುತ್ತಿದೆ. ಇದಕ್ಕೆಲ್ಲಾ ಕೊರೊನಾ ವೈರಸ್ ಕುರಿತಾದ ಅತಿ ಎನ್ನುವಷ್ಟು ಭಯವೇ ಕಾರಣ. ಕೊರೊನಾ ನೆಪದಲ್ಲಿ ಜಾಗತಿಕ ಶೇರು ಮಾರುಕಟ್ಟೆಯಲ್ಲಿ ಅಲ್ಲೋಲ- ಕಲ್ಲೋಲ ಏರ್ಪಟ್ಟಿದೆ. ವ್ಯಾಪಾರ, ವ್ಯವಹಾರ, ಉದ್ದಿಮೆಗಳು ಹಿನ್ನೆಡೆ ಅನುಭವಿಸುತ್ತಿವೆ; ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಕಾಡ ತೊಡಗಿದೆ. ಕೇವಲ ಮೂರು- ನಾಲ್ಕು ತಿಂಗಳುಗಳಲ್ಲಿ ಇಡೀ ಜಗತ್ತಿನ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡುವಷ್ಟು ಕೊರೊನಾ ವೈರಸ್ ಬಲಿಷ್ಠವಾಗಿದೆಯೇ ಎಂಬ ಪ್ರಶ್ನೆಗೆ ಇಲ್ಲವೆಂದೇ ಹೇಳಬೇಕಾಗುತ್ತದೆ. ಜಾಗತಿಕ ಅರ್ಥವ್ಯವಸ್ಥೆಯ ಇಂದಿನ ಹಿಂಜರಿತ ಹಾಗೂ ಏರುಪೇರಿಕೆ ಕೊರೊನಾಕ್ಕಿಂತ ಎಷ್ಟೋ ಪಟ್ಟು ಬಲಿಷ್ಠ ಹಾಗೂ ಅಪಾಯಕಾರಿಯಾದ ವೈರಸ್ ಕಾರಣವಾಗಿದೆ. ಈ ಅನಿಷ್ಠವನ್ನು ಕಂಡೂ ಕಾಣದಂತೆ , ಆರ್ಥಿಕ ತಜ್ಞರು ವರ್ತಿಸುತ್ತಿದ್ದಾರೆ; ರಾಜಕಾರಣಿಗಳು ತಮ್ಮ ಹಾಗೂ ತಮ್ಮ ಪಕ್ಷದ ಲಾಭಕ್ಕಾಗಿ ಈ ವೈರಸ್‍ನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ. ಮಾನವನ ಮಿದುಳಿಗೇ ಅಂಟಿರುವ ಇಂತಹ ಅತಿ ಅಪಾಯಕಾರಿ ವೈರಸ್‍ನ ಹೆಸರೇ ಸಂಪತ್ತು ಸಂಗ್ರಹಣಾ ಮನೋಭಾವ. ಸಂಪತ್ತನ್ನು ಗಳಿಸುವುದು ಎಲ್ಲರಿಗೂ ಅವಶ್ಯಕ. ಆದರೆ ಸಂಪತ್ತಿನ ಗಳಿಕೆ ಹಾಗೂ ಸಂಗ್ರಹಣೆಯನ್ನೇ ಜೀವನದ ಗುರಿಯಾಗಿಸಿಕೊಂಡ ಕೆಲವರು ನಡೆಸುವ ವ್ಯವಹಾರಗಳಿಂದ , ಆರ್ಥಿಕ ರೀತಿ- ನೀತಿಗಳಿಂದಾಗಿ ಇಡೀ ಸಮಾಜ ಕಷ್ಟ- ನಷ್ಟ ಅನುಭವಿಸಬೇಕಾಗುತ್ತದೆ. ಜಾಗತಿಕ ಅರ್ಥವ್ಯವಸ್ಥೆಯ ಇಂದಿನ ದುಸ್ಥಿತಿಗೆ ಇದೇ ವೈರಸ್ ಪ್ರಮುಖ ಕಾರಣವಾಗಿದೆ. ಶೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಏರು-ಪೇರುಗಳಿಗೆ ಕೊರೊನಾವನ್ನು ಕಾರಣವೆಂದು ಹೇಳಲಾಗುತ್ತಿದೆ. ವಾಸ್ತವ ಮಾತ್ರ ಇದಕ್ಕೆ ತೀರಾ ವ್ಯತಿರಿಕ್ತವಾಗಿದೆ. ಶೇರು ಮಾರುಕಟ್ಟೆಯೆಂದರೆ ಸರಕಾರದಿಂದ ಮಾನ್ಯತೆ ಪಡೆದ ಜೂಜುಕಟ್ಟೆ; ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ ಇದು ಪರವಾನಿಗೆ ಪಡೆದ ಓಸಿ ಅಡ್ಡೆ. ಯಾವ ಕಂಪನಿಯ ಶೇರಿನ ಬೆಲೆ ಮುಂದಿನ ವಾರ ಹೆಚ್ಚಾದೀತು, ಯಾವುದರ ಬೆಲೆ ಇಳಿದೀತು ಮುಂತಾಗಿ ಊಹಿಸಿ, ಶೇರುಗಳ ಖರೀದಿ, ವಿಕ್ರಿ ನಡೆಯುತ್ತದೆ. ಶೇರು ಮಾರಾಟದ ಪ್ರಾರಂಭದ ಹಂತದಲ್ಲಿ ಮಾತ್ರ ಕಂಪನಿಗಳಿಗೆ ಬಂಡವಾಳ ದೊರೆಯುತ್ತದೆಯೇ ಹೊರತು, ಮುಂದಿನ ಹಂತದ ಶೇರು ಮಾರಾಟ ಅಥವಾ ಕೈ ಬದಲಾವಣೆಯಿಂದ ಆ ಕಂಪನಿಗೆ ಯಾವುದೇ ಬಂಡವಾಳ ಸಿಗುವುದಿಲ್ಲ. ಊಹಾ- ಪೋಹದ ದಂಧೆಯಲ್ಲಿ ಕೆಲವು ಶೇರುಗಳ ಬೆಲೆ ಅತಾರ್ಕಿಕ ಹೆಚ್ಚಳವನ್ನು ಅಥವಾ ಇಳಿಕೆಯನ್ನು ಕಾಣುತ್ತದೆ. ಈ ಏರಿಳಿತವನ್ನು ಉದ್ದೇಶಪೂರ್ವಕವಾಗಿ ನಿರ್ದೇಶಿಸುವ ಕಾಣದ ಕೈಗಳು ತಮ್ಮ ಲಾಭ ಗಳಿಕೆಯ ಉದ್ದೇಶವನ್ನು ಪೂರ್ತಿಗೊಳಿಸಿಕೊಳ್ಳುತ್ತಿರುತ್ತವೆ. ಆರ್ಥಿಕ ತಜ್ಞರು ಹೇಳುವಂತೆ ಶೇರು ಮಾರುಕಟ್ಟೆಯ ಊಹಾ-ಪೋಹದ ಗುಳ್ಳೆ ಅತಿಯಾಗಿ ಉಬ್ಬಿದೆ. ಯಾವುದೇ ಕ್ಷಣದಲ್ಲಿ ಈ ಗುಳ್ಳೆ ಒಡೆಯುವ ಸಾಧ್ಯತೆಯಿದೆಯೆಂದು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಶೇರು ಮಾರುಕಟ್ಟೆಯ ಕುಸಿತದಿಂದ ಸಂಪತ್ತಿನ ನಷ್ಟವಾಗುತ್ತಿರುವುದು ಜೂಜಾಟದಲ್ಲಿ ತೊಡಗಿಕೊಂಡವರಿಗೆ ಮಾತ್ರ. ಕಂಪನಿಗಳಿಗೆ ಆಗುತ್ತಿರುವ ನಷ್ಟವೂ ಕಾಲ್ಪನಿಕ ಮೌಲ್ಯದಲ್ಲಿಯೇ ಹೊರತು ನೈಜ ಸಂಪತ್ತಿನಲ್ಲಿ ಅಲ್ಲ. ಕೊರೊನಾ ನೆಪದಲ್ಲಿ ಶೇರು ಮಾರುಕಟ್ಟೆಯ ಗುಳ್ಳೆ ಒಡೆಯುತ್ತಿರುವುದರಿಂದ ಜನಸಾಮಾನ್ಯರಿಗೆ ಯಾವ ನಷ್ಟವೂ ಇಲ್ಲ. ನ್ಯೂಯಾರ್ಕ್‍ನಿಂದ ಮುಂಬೈ ಶೇರು ಪೇಟೆಯವರೆಗಿನ ಪ್ರಮುಖ ಕೇಂದ್ರಗಳಲ್ಲಿ ಶೇರಿನ ಮೌಲ್ಯಗಳು ಕುಸಿಯುತ್ತಿವೆ; ಆದರೆ ಕೊರೊನಾ ವೈರಸ್‍ನ ಹರಡುವಿಕೆಯ ಕೇಂದ್ರವಾದ ಚೀನಾದ ಶೇರು ಮಾರುಕಟ್ಟೆ ಮಾತ್ರ ಏರಿಕೆಯ ದಾರಿಯಲ್ಲಿದೆ. ಇದಕ್ಕೆ ಮೂಲ ಕಾರಣ ಅಮೇರಿಕಾ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ. ಜಗತ್ತಿನ ಸಂಪನ್ಮೂಲಗಳ ಮೇಲೆ ತನ್ನ ಹತೋಟಿ ಹೊಂದುವ ಸಲುವಾಗಿ ಅಮೇರಿಕವು ಯುದ್ಧವೂ ಸೇರಿದಂತೆ ಹಲವು ವಿಧಾನಗಳನ್ನು ಬಳಸುತ್ತದೆ. ಅಮೇರಿಕಾದ ಮಾರುಕಟ್ಟೆಯ ಮೇಲಿನ ತನ್ನ ನಿಯಂತ್ರಣಗಳನ್ನು ಬಿಗಿಗೊಳಿಸಲು ಚೀನಾ ಪ್ರಯತ್ನಿಸುತ್ತಿದೆ. ಡಾಲರ್ ಮತ್ತು ಅಮೇರಿಕಾದ ಟ್ರೆಸರಿ ಬಾಂಡ್‍ಗಳಲ್ಲಿ ಹಣ ತೊಡಗಿಸಿರುವ ಜಪಾನ್‍ಗೆ ಅಮೇರಿಕಾದ ಅರ್ಥವ್ಯವಸ್ಥೆ ಬೆಳೆಯುವುದು ಅನಿವಾರ್ಯ. ಆರ್ಥಿಕ ಮುತ್ಸದ್ಧಿತನ ಹೊಂದಿಲ್ಲದ ರಾಜಕಾರಣಿಗಳನ್ನು ಹೊಂದಿರುವ ಭಾರತ ಮತ್ತು ಅಂತಹ ಕೆಲವು ದೇಶಗಳು ಅನಗತ್ಯವಾಗಿ ಅಮೇರಿಕಾದ ಪಲ್ಲಕ್ಕಿ ಹೊರುತ್ತಿವೆ. ಕಾಡುತ್ತಿರುವ ಆರ್ಥಿಕ ಹಿಂಜರಿತದಿಂದ ಪಾರಾಗಲು ಶಸ್ತ್ರಾಸ್ತ್ರಗಳ ಮಾರಾಟ ಮಾಡುವುದು ಅಮೇರಿಕಾಕ್ಕೆ ಅನಿವಾರ್ಯ. ಯಾಕೆಂದರೆ , ಶಸ್ತ್ರಾಸ್ತ್ರ ಮತ್ತು ವಿಮಾನ ತಯಾರಿಕೆಯ ಹೊರತಾಗಿ ಬೇರೆಲ್ಲಾ ವಸ್ತುಗಳ ಉತ್ಪಾದನಾ ಚಟುವಟಿಕೆ ಲಾಭದಾಯಕವಲ್ಲದ ಕಾರಣ ಅಲ್ಲಿ ಸ್ಥಗಿತಗೊಂಡಿದೆ. ಉಪ್ಪಿನಿಂದ ಉಕ್ಕು ತಯಾರಿಕಾ ಕ್ಷೇತ್ರದವರೆಗೂ ತನ್ನ ಕಂಪನಿಯೇ ಹಿಡಿತ ಹೊಂದಿರಬೇಕೆಂಬ ಉದ್ದೇಶ ಕೇವಲ ಭಾರತ ಮೂಲದ ಕಂಪನಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಜಗದ್ವ್ಯಾಪಿಯಾಗಿದೆ. ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕೆಂಬ ದಾಹಕ್ಕೆ ಬಲಿಯಾದವರಿಗೆ ಇತರರ ಕಷ್ಟ- ನಷ್ಟಗಳನ್ನು ಗಮನಿಸುವ ವ್ಯವಧಾನವೇ ಇರುವುದಿಲ್ಲ. ಆಡಳಿತ ನಡೆಸುವವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಚುನಾವಣಾ ನಿಧಿಯನ್ನು ನೀಡಿ, ತಮಗೆ ಬೇಕಾದಂತೆ ಕಾಯ್ದೆ ಕಾನೂನುಗಳನ್ನು ರೂಪಿಸಿಕೊಳ್ಳುತ್ತಾರೆ. ಸಂಪತ್ತು ಗಳಿಕೆಯ ವ್ಯಾಮೋಹ ಹೆಚ್ಚಿನ ಜನರಿಗೆ ಇರುತ್ತದಾದರೂ ಆ ದಾರಿಯ ಓಟದಲ್ಲಿ ಕೆಲವರು ಮಾತ್ರ ಇತರರನ್ನು ಹಿಂದಿಕ್ಕಿ ಮುಂದೆ ಬರುತ್ತಾರೆ. ಇದರ ಪರಿಣಾಮದಿಂದಾಗಿ ಜಗತ್ತಿನ ಅತಿ ಶ್ರೀಮಂತ ಶೇಕಡಾ ಒಂದರಷ್ಟು ಜನರು ಜಾಗತಿಕ ಸಂಪತ್ತಿನ ಅರ್ಧದಷ್ಟರ ಒಡೆತನ ಹೊಂದಿದ್ದಾರೆ. ಇದರ ಇನ್ನೊಂದು ಮುಖವೆಂದರೆ ಜಗತ್ತಿನ 10% ಜನರು ಸಂಪತ್ತಿನ 85% ರ ಒಡೆತನ ಹೊಂದಿದ್ದಾರೆ. ಅಂದರೆ ಜಗತ್ತಿನ 90% ಜನರ ಕೈಯಲ್ಲಿರುವುದು ಉಳಿದ 15% ಸಂಪತ್ತು ಮಾತ್ರ. ಸಂಪತ್ತಿನ ವಿತರಣೆಯಲ್ಲಿನ ಅಸಮಾನತೆಯಿಂದ ತೊಂದರೆ ಏನೆಂದು ಪ್ರಶ್ನೆ ಬರುವುದು ಸಹಜ. ವ್ಯಕ್ತಿಯ ಕೈಯಲ್ಲಿ ಸಂಗ್ರಹವಾಗುವ ಸಂಪತ್ತಿನ ಬಳಕೆಯ ರೀತಿ, ನೀತಿ ಹಾಗೂ ಉದ್ದೇಶಗಳು ಅದರ ಪ್ರಮಾಣದ ಮೇಲೆ ಅವಲಂಬಿತವಾಗುತ್ತದೆ. ಒಂದು ಸರಳ ಉದಾಹರಣೆಯಿಂದ ಈ ವಿದ್ಯಮಾನವನ್ನು ವಿವರಿಸಬಹುದು. ಒಬ್ಬ ವ್ಯಕ್ತಿಯ, ಕೈಯಲ್ಲಿರುವ ಬಂಡವಾಳವು ಸಾವಿರ ಅಥವಾ ಹತ್ತು ಸಾವಿರ ರೂಪಾಯಿಗಳಿದ್ದಾಗ, ತನ್ನ ಜೀವನ ನಿರ್ವಹಣೆಗಾಗಿ ಕಡಿಮೆ ಪ್ರತಿಫಲವಿರುವ ಉದ್ಯಮ ಅಥವಾ ವ್ಯವಹಾರವನ್ನು ಆ ವ್ಯಕ್ತಿ ಕೈಗೊಳ್ಳುತ್ತಾನೆ. ತೊಡಗಿಸಿದ ಬಂಡವಾಳದ ಮೇಲೆ 5 ಅಥವಾ 10 ಶೇಕಡಾ ಲಾಭ ಬಂದರೂ ಆತ ತೃಪ್ತಿ ಪಡುತ್ತಾನೆ. ಆದರೆ ಅದೇ ಬಂಡವಾಳದ ಪ್ರಮಾಣ ಏರುತ್ತಾ ಹೋಗಿ ಕೋಟಿಗಟ್ಟಲೇ ಆದಾಗ, ಸಣ್ಣ ಪ್ರಮಾಣದ ಲಾಭವುಳ್ಳ ವ್ಯವಹಾರದಲ್ಲಿ ಅಂತಹ ಆಸಕ್ತಿ ಇರುವುದಿಲ್ಲ. ಬದಲಿಗೆ ಅತಿ ಹೆಚ್ಚು ಲಾಭ ಬರುವ ಉದ್ಯೋಗದ ಆಯ್ಕೆಯನ್ನು ಮಾಡುತ್ತಾನೆ. ಈ ಪ್ರವೃತ್ತಿಯಿಂದಾಗಿ ಸಂಪನ್ಮೂಲಗಳನ್ನು ಲಾಭ ಗಳಿಕೆ ಹೆಚ್ಚಿರುವ ಉದ್ಧೇಶಕ್ಕೆ ಬಳಸಲಾಗುತ್ತದೆ. ಅಂದರೆ ಸಂಪನ್ಮೂಲಗಳ ದುರುಪಯೋಗವಾಗುತ್ತದೆ. ಜನರಿಗೆ ಅಗತ್ಯವಾದ ಉದ್ಧೇಶದ ಬಳಕೆ ಹಿನ್ನೆಲೆಗೆ ಸರಿಯುತ್ತದೆ. ಉದಾಹರಣೆಗಾಗಿ ಸೀಮಿತವಾಗಿರುವ ಸಿಹಿನೀರು ಕುಡಿಯಲು ಅಥವಾ ಕೃಷಿಗೆ ಬಳಕೆಯಾಗುವ ಬದಲಿಗೆ ತಂಪು ಪಾನೀಯ ಅಥವಾ ಹೆಂಡದ ಉತ್ಪಾದನೆಗೆ ಬಳಸಲ್ಪಡುತ್ತದೆ. ಉತ್ಪಾದಿತ ವಸ್ತುವಿಗೆ ಬೇಡಿಕೆ ಸೃಷ್ಟಿಸುವ ಸಲುವಾಗಿ ಅಪಾಯಕಾರಿ ವಿಧಾನಗಳನ್ನು ಹುಟ್ಟು ಹಾಕಲಾಗುತ್ತದೆ. ಸಾಮಾನ್ಯವಾಗಿ ಊಹಾ- ಪೋಹದ ದಂದೆಯಲ್ಲಿಯೇ ಅತಿ ಹೆಚ್ಚು ಲಾಭ ಗಳಿಕೆಯಾಗುತ್ತದೆ. ಅದರಿಂದಾಗಿ ಕೂಡಿಟ್ಟ ಸಂಪತ್ತನ್ನು ಶೇರು ಮಾರುಕಟ್ಟೆಯಲ್ಲಿ ಅಥವಾ ಅಕ್ರಮ ದಾಸ್ತಾನು ದಂಧೆಯಲ್ಲಿ ತೊಡಗಿಸುತ್ತಾರೆ. ಇಂತಹ ಅವಕಾಶಗಳು ದೊರೆಯದಿದ್ದಾಗ ಸಂಪತ್ತನ್ನು ಬಳಸದೇ ಹಾಗೆಯೇ ಕೂಡಿಡಲಾಗುತ್ತದೆ. ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಪತ್ತು ಕ್ರೋಢೀಕೃತಗೊಂಡಾಗ ಹಲವರ ಕೈಯಲ್ಲಿ ಹಣ ಚಲಾವಣೆಯಾಗುವದಕ್ಕೆ ತಡೆ ಉಂಟಾಗುತ್ತದೆ ಮತ್ತು ಅವರ ಖರೀದಿ ಶಕ್ತಿ ಕುಂಠಿತವಾಗುತ್ತದೆ. ಹೊಸದಾಗಿ ಸೃಷ್ಟಿಯಾಗುವ ಸಂಪತ್ತು ಉಳ್ಳವರ ಕೈಗೇ ಪುನಃ ಸೇರುತ್ತದೆ ಹಾಗೂ ವ್ಯಕ್ತಿಗತ ಆದಾಯದಲ್ಲಿ ಕೂಡಾ ಅಸಮಾನತೆ ಉಂಟಾಗುತ್ತದೆ. ದೊಡ್ಡ ಕಂಪನಿಗಳು ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸುವುದರಿಂದಾಗಿ, ಸಣ್ಣ ಪುಟ್ಟ ಉದ್ಯಮಗಳು ಸ್ಪರ್ಧಿಸಲಾಗದೇ ಸೋಲುತ್ತವೆ. ಪ್ರತಿ ಸ್ಪರ್ಧಿಗಳನ್ನು ಮಣಿಸುವುದಕ್ಕಾಗಿ ಬೆಲೆ ಇಳಿಕೆಯ ಸಮರವನ್ನೇ ಸಾರುವ ಉಳ್ಳವರು, ಎದುರಾಳಿ ಸೋತ ನಂತರ ಬೆಲೆ ಏರಿಸಿ ಲಾಭ ದೋಚುತ್ತಾರೆ. ಭಾರತದ ಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಇದಕ್ಕೆ ತಾಜಾ ಸಾಕ್ಷಿ. ಸಂಪತ್ತು ಸೃಷ್ಟಿಸುವವರು ಹಾಗೂ ಉಳ್ಳವರು ತೆರಿಗೆ ಪಾವತಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆಂದು ಹೇಳುವುದು ಬರೀ ಮಿಥ್ಯೆ. ಅಂತಹ ಉದ್ಯಮ ದೈತ್ಯರು ಪಡೆಯುವ ತೆರಿಗೆ ವಿನಾಯಿತಿಗಳು ಹಾಗೂ ಸರ್ಕಾರ ನೀಡುವ ಮೂಲ ಸೌಕರ್ಯಗಳು ಅವರು ನೀಡುವ ತೆರಿಗೆಯ ಎಷ್ಟೋ ಪಟ್ಟು ಹೆಚ್ಚಿಗೆ ಇರುತ್ತದೆ. ದೇಶದ ಸಂಪತ್ತು ಸೀಮಿತ ವ್ಯಕ್ತಿಗಳ ಕೈಯಲ್ಲಿ ಶೇಖರವಾಗುವುದರ ಪರಿಣಾಮ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಆಗುತ್ತಿರುವುದನ್ನು ನಮ್ಮ ದೇಶದಲ್ಲಿ ಕಾಣುತ್ತಿದ್ದೇವೆ. ಸಂಪತ್ತು ಸೃಷ್ಟಿಸುವವರು ಹಾಗೂ ಹೂಡಿಕೆದಾರರೇ ದೇಶೋದ್ಧಾರಕರು ಎಂಬ ಭ್ರಮೆಯಿಂದಾಗಿ ಬ್ಯಾಂಕ್‍ಗಳು ಅವರಿಗೆ ಮಿತಿಮೀರಿ ಸಾಲ ನೀಡುತ್ತವೆ. ಹೊಟ್ಟೆ,ಬಟ್ಟೆ ಕಟ್ಟಿ ಜನಸಾಮಾನ್ಯರು ಉಳಿಸಿದ ಹಣವನ್ನು ಸಾಲ ರೂಪದಲ್ಲಿ ಪಡೆದು ಶ್ರೀಮಂತ ಉದ್ಯಮಿಗಳು ತಮ್ಮ ವೈಯಕ್ತಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾರೆ. ಅವರು ಪಡೆದ ಸಾಲಗಳು ರೈಟ್ ಆಪ್ ಹೆಸರಿನಲ್ಲಿ ಮನ್ನಾ ಆಗುತ್ತವೆ. ಅಂತಹ ಬ್ಯಾಂಕ್‍ಗಳ ರಕ್ಷಣೆಗೆ ಜನರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಗಳಿಸಿದ ಲಾಭವನ್ನು ಬಳಸಲಾಗುತ್ತದೆ ಯಸ್ ಬ್ಯಾಂಕ್ ಹಗರಣ ಇತ್ತೀಚಿನ ಉದಾಹರಣೆ. ಬೇರೆ ಬ್ಯಾಂಕ್‍ಗಳಲ್ಲಿ ಸುಸ್ತಿದಾರರಾಗಿ ಪಡೆದ ಸಾಲವನ್ನು ಹಿಂದಿರುಗಿಸಿರದ ಹತ್ತು ಕಂಪನಿಗಳಿಗೆ ನೀಡಿದ ಮೂವತ್ತಾರು ಸಾವಿರ ಕೋಟಿ ರೂಪಾಯಿ ಸಾಲ ವಸೂಲಿಯಾಗದೇ ಯಸ್ ಬ್ಯಾಂಕ್ ಅಪಾಯಕ್ಕೆ ಸಿಲುಕಿದ್ದರಿಂದ , ಅದರ ರಕ್ಷಣೆಗಾಗಿ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್‍ನ್ನು ಮುಂದೆ ಮಾಡಿರುವುದನ್ನು ಕಾಣುತ್ತಿದ್ದೇನೆ. ಬ್ಯಾಂಕ್‍ನಿಂದ ಚಿಕ್ಕ ಮೊತ್ತದ ಸಾಲ ಪಡೆಯಲು ಸಾಮಾನ್ಯ ವ್ಯಕ್ತಿ ನೀಡಬೇಕಾದ ಭದ್ರತೆಯನ್ನು ಸಾವಿರಾರು ಕೋಟಿ ರೂಪಾಯಿ ಸಾಲ ಪಡೆಯುವ ವ್ಯಕ್ತಿ ನೀಡಬೇಕಾಗಿಲ್ಲ; ಅವನಿಂದ ಪಡೆಯುವುದೂ ಇಲ್ಲ. ಸಾವಿರ ರೂಪಾಯಿಗಳಲ್ಲಿ ಸಾಲ ಪಡೆಯುವಾಗ ಇತರ ಬ್ಯಾಂಕ್‍ಗಳಿಂದ ಬೇಬಾಕಿ ಪತ್ರ ತರುವುದು ಕಡ್ಡಾಯ. ಆದರೆ ಸಾವಿರಾರು ಕೋಟಿ ರೂಪಾಯಿ ಸಾಲಕ್ಕೆ ಇದು ಅನ್ವಯಿಸುವುದಿಲ್ಲ. ಯಸ್ ಬ್ಯಾಂಕ್‍ನ ಪ್ರಮುಖ ಸುಸ್ತಿದಾರ ಸಾಲಗಾರರಾದ ಅಂಬಾನಿ, ಐಎಲ್‍ಎಫ್‍ಎಸ್ ಮುಂತಾದವರು ಇತÀರ ಬ್ಯಾಂಕ್‍ಗಳಲ್ಲಿ ಈಗಾಗಲೇ ಸುಸ್ತಿದಾರರಾಗಿದ್ದುದು ಬಹಿರಂಗವಾಗಿದ್ದರೂ ಅವರಿಗೆ ಹೊಸ ಸಾಲ ಸಿಗುತ್ತದೆ. ಸಂಪತ್ತಿನ ಕೇಂದ್ರೀಕರಣವನ್ನು ತಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಜಗತ್ತಿನ ಹಲವು ರಾಷ್ಟ್ರಗಳು ಕೈಗೊಳ್ಳಲಿಲ್ಲ. ಭಾರತದ ಅತಿ ಶ್ರೀಮಂತರಾದ 1% ಜನರು ಅಂದರೆ ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನರ ಕೈಯಲ್ಲಿ 70% ಜನರ ಅಂದರೆ 90 ಕೋಟಿ ಜನರ ಕೈಯಲ್ಲಿರುವ ಸಂಪತ್ತಿನ ನಾಲ್ಕು ಪಟ್ಟು ಸಂಪತ್ತು ಶೇಖರವಾಗಿದೆ. ಈ ಪ್ರಮಾಣ ಏರುತ್ತಲೇ ಇದೆ. ಭಾರತದ ಮುಕ್ಕಾಲು ಪಾಲು ಸಂಪತ್ತು ಕೇವಲ ಹದಿಮೂರು ಕೋಟಿ ಜನರ ಕೈಯಲ್ಲಿಯೇ ಇದೆ. ಅತಿ ಶ್ರೀಮಂತ 63 ಭಾರತೀಯರ ಸಂಪತ್ತು ಸುಮಾರು 80 ಕೋಟಿ ಜನರ ಸಂಪತ್ತಿಗೆ ಸಮವಾಗಿದೆ. ಜಗತ್ತಿನ 26 ಅತಿ ಶ್ರೀಮಂತರ ಸಂಪತ್ತು ಜಗತ್ತಿನ ಅರ್ಧದಷ್ಟು ಜನರ ಅಂದರೆ ಸುಮಾರು 380 ಕೋಟಿ ಜನರ ಸಂಪತ್ತಿಗೆ ಸಮವಾಗಿದೆ. ಸಂಪತ್ತು ವಿತರಣೆಯ ಪ್ರಮಾಣ ಈಗಾಗಲೇ ಅಪಾಯಕಾರಿ ಹಂತ ತಲ್ಪಿದ್ದು,, ಅದರ ಪರಿಣಾಮದಿಂದಾಗಿ ಆರ್ಥಿಕ ಹಿಂಜರಿತ, ಸಾಮಾಜಿಕ ಸಂಘರ್ಷ, ಅಶಾಂತಿ ಕಟ್ಟಿಟ್ಟ ಬುತ್ತಿ ಎಂಬುದು ಅರ್ಥಶಾಸ್ತ್ರಜ್ಞರ ಅಭಿಮತ. ಸಂಪತ್ತು ಗಳಿಕೆಯ ವ್ಯಾಮೋಹ ಇಡೀ ಸಮಾಜವನ್ನು ಸಾಂಸರ್ಗಿಕ ರೋಗದ ರೀತಿಯಲ್ಲಿ ಆವರಿಸುತ್ತಿದೆ. ಈ

ಪ್ರಸ್ತುತ Read Post »

ಇತರೆ

ಜ್ಞಾನಪೀಠ ವಿಜೇತರು

ವಿ.ಕೃ. ಗೋಕಾಕ್ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿ.ಕೃ. ಗೋಕಾಕ್..! ಕನ್ನಡದಲ್ಲಿ ನವ್ಯಕಾವ್ಯ ಪ್ರವರ್ತಕರಾಗಿ ‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕರು ಕೃಷ್ಣರಾಯ-ಸುಂದರಮ್ಮ ದಂಪತಿಗಳಿಗೆ ೯-೮-೧೯0೯ರಲ್ಲಿ ಜನಿಸಿದರು. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ೧೯೩೧ರಲ್ಲಿ ಪುಣೆಯ ಫಗ್ರ್ಯುಸನ್ ಕಾಲೇಜಿನಲ್ಲಿ ಅನಂತರ ಆಕ್ಸಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು… ಉನ್ನತ ಶಿಕ್ಷಣ ಪಡೆದು ವಿದೇಶದಿಂದ ಬಂದ ಮೇಲೆ ಸಾಂಗ್ಲಿಯ ವಿಲ್ಲಿಂಗ್‍ಟನ್ ಕಾಲೇಜಿನಲ್ಲಿ, ಅನಂತರ ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ, ಧಾರವಾಡದ ಕರ್ಣಾಟಕ ಕಾಲೇಜಿನಲ್ಲಿ (೧೯೫೨) ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿದರು… ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದರು. ೧೯೭0ರಲ್ಲಿ ಸಿಮ್ಲಾದ ಇನ್ಸ್ಟಿಟ್ಯೂಟ್ ಆಫ್ ಸ್ಟಡೀಸ್ ನಿರ್ದೇಶಕರಾದರು… ಆಂಧ್ರದ ಪುಟ್ಟಪರ್ತಿಯ ಸತ್ಯಸಾಯಿ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಗೋಕಾಕರು, ಪಿ. ಇ. ಎನ್. ಅಧಿವೇಶನಕ್ಕೆ ೧೯೫೭ರಲ್ಲಿ ಜಪಾನಿಗೆ ತೆರಳಿದರು. ಬೆಲ್ಜಿಯಂನಲ್ಲಿ ಕವಿ ಸಮ್ಮೇಳನದಲ್ಲಿ ಭಾಗವಹಿಸಿದರು, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದರು… ಗೋಕಾಕರಿಗೆ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ (೧೯೫೮), ಅಮೆರಿಕಾದ ಫೆಸಿಫಿಕ್ ವಿಶ್ವವಿದ್ಯಾಲಯ, ಕರ್ನಾಟಕ, ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಗಳನ್ನು ನೀಡಿವೆ… ಕನ್ನಡ ಸಾಹಿತ್ಯ ಪರಿಷತ್ತು ೧೯೫೮ರಲ್ಲಿ ಬಳ್ಳಾರಿಯಲ್ಲಿ ನಡೆದ ೪೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಗೆ ಆಯ್ಕೆ ಮಾಡಿ ಗೌರವಿಸಿದೆ. ದ್ಯಾವಾ ಪೃಥಿವಿ ಖಂಡಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ ವಿ.ಕೆ.ಗೋಕಾಕರಿಗೆ… ತಮ್ಮ ‘ಭಾರತ ಸಿಂಧುರಶ್ಮಿ’ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದಿರುವ ಗೋಕಾಕರು ಕನ್ನಡಕ್ಕೆ ಉತ್ತಮ ಕೃತಿಗಳನ್ನು ನೀಡಿದ್ದಾರೆ. ಸಮರಸವೇ ಜೀವನ (ಇಜ್ಜೋಡು) ಬೃಹತ್ ಕಾದಂಬರಿ ಇವರಿಗೆ ಹೆಸರನ್ನು ತಂದುಕೊಟ್ಟಿದೆ. ಇವರು ಭಾಷಾ ಆಯೋಗದ ಅಧ್ಯಕ್ಷರಾಗಿ ಸಲ್ಲಿಸಿದ ಗೋಕಾಕ ವರದಿ ಇತಿಹಾಸವನ್ನೇ ಸೃಷ್ಟಿಸಿತು… ನವ್ಯತೆ ಹಾಗೂ ಕಾವ್ಯ ಜೀವನ, ವಿಶ್ವಮಾನವ ದೃಷ್ಟಿ, ಸೌಂದರ್ಯ ಮೀಮಾಂಸೆ, ಆಂಗ್ಲ ಸಾಹಿತ್ಯಕ್ಕೆ ನೀಡಿದ ಸ್ಫೂರ್ತಿ ಇತ್ಯಾದಿ ವಿಮರ್ಶಾ ಗ್ರಂಥಗಳು, ಜನನಾಯಕ, ವಿಮರ್ಶಕ ವೈದ್ಯ, ಯುಗಾಂತರ, ಮುಂತಾದ ನಾಟಕಗಳು ಇವರಿಂದ ರಚಿತವಾಗಿವೆ. ಇಂಗ್ಲಿಷಿನಲ್ಲಿಯೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ… ಅರವಿಂದ ಭಕ್ತರು, ಬೇಂದ್ರೆ ಆರಾಧಕರೂ ಆಗಿದ್ದ ಗೋಕಾಕರು ೨೮-೪-೧೯೯೨ರಲ್ಲಿ ಮುಂಬಯಿಯಲ್ಲಿ ನಿಧನರಾದರು..! ******* — ಕೆ.ಶಿವು.ಲಕ್ಕಣ್ಣವರ

ಜ್ಞಾನಪೀಠ ವಿಜೇತರು Read Post »

ಇತರೆ

ದ.ರಾ.ಬೇಂದ್ರೆ ಒಂದು ಓದು

ಹೃದಯ ತ0ತಿ ಮೀಟಿದ ವರಕವಿ ವೀಣಾ ರಮೇಶ್ ಕನ್ನಡದ ಕಾವ್ಯಗಳ ಮೇಲೆ ಧಾರವಾಡದ ಪೇಡೆಯ ಸಿಹಿ ಉಣಬಡಿಸಿದ ಕವಿಗ್ಗಜ. ಮೇಲೆ ಕಾವ್ಯ ರಸಗಳ ಪ್ರೀತಿ ಪ್ರೇಮದ ಭಾಷೆಗೆ ಹೊಸತು ವ್ಯಾಖ್ಯಾನ ಕೊಟ್ಟ ಮುದ್ದು ಕವಿ. ರಸಕಾವ್ಯಗಳ ಮೇಲೆ ಪಾತಾರ ಗಿತ್ತಿಯ ಬಣ್ಣ ತು0ಬಿ, ಚೆಲುವು ಬೆರಸಿ ಅ0ದ ಚೆ0ದದ ಪುಕ್ಖಗಳನಿಟ್ಟು ಮನಸುಗಳ ಮರೆಯಲಿ ಕುಣಿದು ಹಾರುವ ಪದಗಳ ಕಟ್ಟಿದ ಬೇ0ದ್ರೆ ಸಾಹಿತ್ಯ. ಮೀಟಿದ ನಾಲ್ಕು ತ0ತಿಗಳಲ್ಲಿ ಹೊಮ್ಮಿದ ನಾದಲೀಲೆ ಕನ್ನಡದ ಶಿಖಿರದ ಮೇಲೆ ಪ್ರತಿಧ್ವನಿಸಿದ ನಮ್ಮ ಅಜ್ಜ ಬೇ0ದ್ರೆ. ಕನ್ನಡದ ಭಾಷೆಯಲ್ಲಿ ಜವಾರಿ ಭಾಷೆ ಆಗಿರುವ ಧಾರವಾಡ ಕನ್ನಡವನ್ನು ಸೂಕ್ಷ್ಮವಾಗಿ ಸೃಜನಾತ್ಮಕವಾಗಿ ಬಳಸಿಕೊ0ಡವರು ಬೇ0ದ್ರೆ ಯವರು ತನ್ನ ಕಾವ್ಯದ ಕ್ರಾ0ತಿಕಾರಿ ಸಾಲುಗಳಿ0ದ ಜೈಲು ಸೇರಿದ ಕವಿ ದ.ರಾ.ಬೇ0ದ್ರೆ. ಸ್ವಾತ0ತ್ರ್ಯ ಸ0ಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಬೇ0ದ್ರೆ ನರಬಲಿ ಕವಿತೆಯಿ0ದ ಅದನ್ನು ತಿಳಿದು ಅರ್ಥ ಮಾಡಿಕೊ0ಡ ಬ್ರಿಟಿಷರು ಅಧ್ಯಾಪಕ ವೃತ್ತಿಯಿ0ದ ವಜಾ ಗೊಳಿಸಿದರು ಅವರ ಮಾತ್ರ ಭಾಷೆ ಮರಾಠಿ, ಆದರೆ ಅವರಿಗೆ ಒಲಿದು ಬ0ದದ್ದು ಕನ್ನಡ ಭಾಷೆ, ಕನ್ನಡಕ್ಕೆ ಜ್ಞಾನಪೀಠ ತ0ದುಕೊಟ್ಟರು. ಬೇ0ದ್ರೆಯವರ ಮೊನಚಾದ ಸಾಹಿತ್ಯದಿ0ದ ಸೆರೆವಾಸ ಅನುಭವಿಸಿದರು. ಜೈಲು ಸೇರಿದ ಬೇ0ದ್ರೆ ಆದರೆ ಅವರ ಕಾವ್ಯ ಸ್ಪೂತರ್ಿಗೆ ಧಕ್ಕೆ ಯಾಗಲಿಲ್ಲ. ಅವರ ಸಾಹಿತ್ಯ ಪ್ರೇಮಕ್ಕೆ ಕೊರತೆಯಾಗಲಿಲ್ಲ. ಬದುಕಿನ ಬಗ್ಗೆ ಅತ್ಯ0ತ ಪರಿಣಾಮಕಾರಿ ಸಾಹಿತ್ಯ ಬರೆದ ಧೀಮ0ತ ಬೇ0ದ್ರೆ. ಉತ್ಸಾಹದ ಚಿಲುಮೆ. ನೊ0ದ ಜೀವಕ್ಕೆ ಸಾ0ತ್ವಾನ ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು. ಇದು ಅವರ ಬದುಕಿನ ಕಾವ್ಯ ಪ್ರೀತಿ. ಧಾರವಾಡದ ಸಾಧನಕೇರಿಯಲ್ಲಿ ಜನನ. ವೈಧಿಕ ಕುಟು0ಬದಲ್ಲಿ ಜನಿಸಿದ ಬೇ0ದ್ರೆ ಕನ್ನಡವನ್ನು ಅಪ್ಪಿಕೊ0ಡರು. ಕನ್ನಡದ ಒಡನಾಟ, ಬದುಕಿಗೆ ಅ0ಟದ ಬಡತನ ಅವರ ಕಾವ್ಯಕ್ಕೆ ಮೂಲಸೆಲೆಯಾಗಿ ಹೋಯಿತು. ಅವರ ಬದುಕಲ್ಲಿ ನಡೆದ ಘಟನೆ. ನಿಜಕ್ಕೂ ರೋಚಕ, ಬಾಲ್ಯದಲ್ಲೇ ಕವಿತೆಗಳನ್ನು ಬರೆಯುತ್ತಿದ್ದರು ಬೇ0ದ್ರೆ. ಅವರು ರಚಿಸಿದ ಒ0ದು ಕವನ ಪುಣೆಯಲ್ಲಿ ಬಿ.ಎ. ಮಾಡುತ್ತಿದ್ದಾಗ, ಪಠ್ಯದಲ್ಲಿ ಬ0ತಿತ್ತು. ಅದನ್ನು ಸ್ವತಃ ಬೇ0ದ್ರೆಯವರೆ ಬರೆದದ್ದು ಎ0ದು ಕನ್ನಡ ಪಾಠ ಮಾಡುತ್ತಿದ್ದ ಅಧ್ಯಾಪಕರಿಗೆ ತಿಳಿದಿಲ್ಲ. ಕಾಲೇಜು ಮುಗಿಯುವ ವೇಳೆಗೆ ಸ್ವತಃ ಬೇ0ದ್ರೆಯವರೇ ಬರೆದದ್ದು ಎ0ದು ಕನ್ನಡ ಪಾಠ ಮಾಡುತ್ತಿದ್ದ ಅಧ್ಯಾಪಕರಿಗೆ ತಿಳಿದಿಲ್ಲ. ಕಾಲೇಜು ಮುಗಿಯುವ ವೇಳೆಗೆ ಸ್ವತಃ ಬೇ0ದ್ರೆಯವರೇ ತಿಳಿಸಿದರ0ತೆ, ಮೇರು ಕವಿ ಬೇ0ದ್ರೆ. ರಸವೇ ಜನನ ವಿರಸವೇ ಮರಣ ಸಮರಸವೇ ಜೀವನ ಬದುಕಿನ ನೈಜ ಪ0ಕ್ತಿಯ ಸಾಲುಗಳು ಕಾವ್ಯರೂಪದಲ್ಲಿ ಚಲ್ಲಿದರು ಬೇ0ದ್ರೆ. ಮಹಾರಾಷ್ಟ್ರ ಸೊಲ್ಲಾಪುರದಲ್ಲಿ ಅಧ್ಯಾಪಕರಾಗಿ ಬೇ0ದ್ರೆ ಕನ್ನಡದಲ್ಲೇ ಕಾವ್ಯ ರಚಿಸಿದರು. ಅ0ಬಿಕಾತನಯದತ್ತ ಎನ್ನುವ ಕಾವ್ಯನಾಮದಿ0ದ ಕನ್ನಡ ವರ ಕವಿ ಎನಿಸಿಕೊ0ಡರು. ಬದುಕಿನುದ್ದಕ್ಕು ನೋವುಗಳನ್ನು ಅನುಭವಿಸಿದರು. ಬೇ0ದ್ರೆ ಅನುಭವಕ್ಕೆ ಬ0ದ ಪ್ರತಿ ಕ್ಷಣಗಳಿಗೂ ಅಕ್ಷರ ರೂಪ ತ0ದುಕೊಟ್ಟರು. ಕೈಯಲ್ಲಿದ್ದ ಹೈಸ್ಕೂಲ್ ಕೆಲಸವು ಹೋಯಿತು ಕೈಯಲ್ಲಿ ಬಿಡಿಗಾಸು ಇರಲಿಲ್ಲ. ಹುಟ್ಟಿದ ನಾಲ್ಕು ಮಕ್ಕಳು ಒಟ್ಟೊಟ್ಟಿಗೆ ಹಾಸಿಗೆ ಹಿಡಿದಾಗ ಚಿಕಿತ್ಸೆ ಕೊಡಲಾಗಲಿಲ್ಲ. ಅದರಲ್ಲಿ ಒ0ದು ಮಗು ಸತ್ತು ಹೋಯಿತು. ಆ ಕ್ಷಣ ಪತ್ನಿಯ ಕಣ್ಣೀರು ಕ0ಡು ಬೇ0ದ್ರೆ, ಮಾತಲ್ಲಿ ಹೇಳಲಾಗದನ್ನು ಕವಿತೆಯ ಮೂಲಕ ತಿಳಿಸಿದರು. ನೀ ಹಿ0ಗೆ ನೋಡಬೇಡ ನನ್ನ ನೀ ಹಿ0ಗೆ ನೋಡಿದರೆ ನನ್ನ ತಿರುಗಿ ನಾ ಹೆ0ಗ ನೀಡಲಿ ನಿನ್ನ ಇದು ಅವರ ಕಣ್ಣೀರಲ್ಲಿ ಉಕ್ಕಿದ ಹಾಡು.           ಬೇ0ದ್ರೆ ಕಾವ್ಯಶಕ್ತಿ ಅ0ತದ್ದು ಎಷ್ಟು ಕಷ್ಟ ಬ0ದರೂ ಎ0ತ ಪರಿಸ್ಥಿತಿ ಎದುರಾದರೂ ದೃತಿಗೆಡಲಿಲ್ಲ ಅಳುಕಲಿಲ್ಲ ಅವರ ಪ್ರತಿ ನೋವಿಗೂ        ಅವರ ಸಾಹಿತ್ಯ ಮದ್ದಾಗಿತ್ತು. ಅವರ ಕವನಗಳೇ ಎಲ್ಲದಕ್ಕೂ ಸಮಾಧಾನ ನೀಡಿತ್ತು. ಅವರ ಕವನ ಓದಿದ ಒಬ್ಬರು ಬೇ0ದ್ರೆಗೆ ಹೇಳಿದರ0ತೆ ನಾನು ಬೇ0ದ್ರೆ ಆಗಬೇಕು ಅ0ತ ಅದಕ್ಕೆ ಬೇ0ದ್ರೆ ಹೇಳದರ0ತೆ ಬೇ0ದ್ರೆ ಯಾರಲ್ಲೂ ಹೇಳಿಕೊ0ಡಿಲ್ಲ, ಯಾರ ಸಹಾಯವೂ ಕೇಳಿಲ್ಲ. ವರಕವಿ ಎನಿಸಿಕೊ0ಡತು ಇಳಿದು ಬಾ ಬೇ0ದ್ರೆ ಇಳಿದು ಬಾ…. ಕನ್ನಡದ ಕಾವ್ಯಗೀತೆಗಳಲ್ಲಿ ಹರಿದು…. ಬಾ…. ಸಾಹಿತ್ಯ ಶಿಬಿರದ ನೆತ್ತಿಯಿ0ದ ಇಳಿದು…ಬಾ….ಬೇ0ದ್ರೆ ಇಳಿದು ಬಾ…ವರಕವಿಗಿ0ದು ಹೃದಯದಾಳದಲ್ಲೊ0ದು ನಮನ.    **************

ದ.ರಾ.ಬೇಂದ್ರೆ ಒಂದು ಓದು Read Post »

ಇತರೆ

ವಿಶ್ವ ಗುಬ್ಬಚ್ಚಿಗಳ ದಿನ

ಎಲ್ಲಿ ಹೋದವು ಈ ಗುಬ್ಬಚ್ಚಿಗಳು..! ಕೆ.ಶಿವು ಲಕ್ಕಣ್ಣವರ ಎಲ್ಲಿ ಹೋದವು ಈ ಗುಬ್ಬಚ್ಚಿಗಳು..! ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನ. ಅದಕ್ಕಾಗಿ ಆ ನೆಪದಲ್ಲಿ ಈ ಗುಬ್ಬಚ್ಚಿಗಳ ಕುರಿತಾದ ಈ ಲೇಖನ… ಒಂದು ಕಾಲದಲ್ಲಿ ಬಹುತೇಕ ಹಳ್ಳಿಮನೆಗಳಲ್ಲಿ ಬೆಳಗ್ಗಿನ ಅಲಾರ್ಮ್ ಎಂದರೆ ಗುಬ್ಬಚ್ಚಿಗಳ ಚಿಲಿಪಿಲಿಯೇ… ಈಗಲೂ ಬೇರೆ ಊರು ಇರಲಿ, ನಮ್ಮ ಊರಿನಲ್ಲಿ ಅಲ್ಲಲ್ಲಿ ಮನೆಗಳಲ್ಲಿ ಗುಬ್ಬಚ್ಚಿಗಳು ಗೋಡು ಕಟ್ಟುತ್ತಿವೆ. ವಾಸಿಸುತ್ತಿವೆ. ಅಷ್ಟಿಷ್ಟು ಇರುವ ಈ ಗುಬ್ಬಚ್ಚಿಗಳು ಹಾಗೋ-ಹೀಗೋ ಹೇಗೋ ವಾಸಿಸುತ್ತವೆ… ಒಂದಿಷ್ಟು ದಿನಗಳ ವರೆಗೆ ಕಣ್ಮರೆಯಾಗಿದ್ದ ಈ ಗುಬ್ಬಚ್ಚಿಗಳು ಈಗ ಒಂದಿಷ್ಟು ನೋಡಲು ಸಿಗುತ್ತಿವೆ. ಅದೇ ಪುಣ್ಯ. ಈ ಗುಬ್ಬಚ್ಚಿಗಳು ಮಣ್ಣಿನ ಮನೆಗಳ ಜಂತಿಯ ಬಿರುಕುಗಳಲ್ಲಿ ಅಥವಾ ಅಲ್ಲಲ್ಲಿ ಮನೆಗಳ ಸಂದಿ-ಗೊಂದಿಗಳಲ್ಲಿ ಗೂಡು ಕಟ್ಟಿಕೊಂಡು ವಾಸಿಸುತ್ತವೆ. ಈ ಗುಬ್ಬಚ್ಚಿಗಳು ವಾಸಿಸುವ ಜಂತಿಯ ಬಿರುಕುಗಳು ಅಥವಾ ಸಂದಿ-ಗೊಂದಿಗಳಲ್ಲೇ ತಮ್ಮ ವಂಶೋದ್ಧಾರದ ಪಡಿಪಾಟಲನ್ನು ತೀರಿಸಿಕೊಳ್ಳುತ್ತಿವೆ. ವಂಶೋದ್ಧಾರವೆಂದರೆ ಅದೇ ಗೂಡುಗಳಲ್ಲಿ ತತ್ತಿ(ಮೊಟ್ಟೆ) ಇಡುವುದು, ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವುದು, ಆ ಮರಿ ತುಸು ರಕ್ಕೆ:ಪುಕ್ಕ ಮೂಡಿದೊಡನೆ ಹಾರುವುದು. ಹೀಗೆ ವಂಶೋದ್ಧಾರದ ಸಂಸ್ಕಾರದಲ್ಲಿ ಗುಬ್ಬಚ್ಚಿಗಳು ಅಷ್ಟಿಷ್ಟಾಗಿ ಒಂದಿಷ್ಟು ಜೀವನ ಕಾಣುತ್ತಿವೆ … ಸಾಂದರ್ಭಿಕವಾಗಿ ಹೇಳುತ್ತೇನೆ, ಗುಬ್ಬಚ್ಚಿಗಳಂತೆ ನಮ್ಮ ಹಳ್ಳಿಯಲ್ಲಿ ಕಾಗೆ, ಗೂಬೆಗಳು, ಅಲ್ಲಲ್ಲಿ ಅಪರೂಪಕ್ಕೊಮ್ಮೆ ಕಾಣಸಿಗುವ ರತ್ನ ಪಕ್ಷಿ (ಹಳ್ಳಗಳಲ್ಲಿ ಈ ರತ್ನ ಪಕ್ಷಿಗೆ ಸಾಂಬಾರಗಾಗಿ ಅಂತಲೂ ಕರೆಯುತ್ತಾರೆ)ಗಳು, ಗೊರವಂಕಗಳು ಇತ್ಯಾದಿ ಪಕ್ಷಿಗಳು ಅಪರೂಪದ ಅತಿಥಿಯಂತೆ ಕಾಣಸಿಗುತ್ತವೆ… ಹೊಲ-ಗದ್ದೆ, ತೋಟಗಳಲ್ಲೂ ಗಣನೀಯವಾದ ಅಪರೂಪದ ಅತಿಥಿಯಾದರೂ ಇವೆ ಇವು. ಆದರೆ ಇವುಗಳ ಸಂಖ್ಯೆ ತೀರಾ ಗಣನೀಯವಾಗಿ ಇಳಿಮುವಾಗಿದೆ. ಅಂದರೆ ಈ ಪಕ್ಷಿಗಳೆಲ್ಲ ಮುಂದೊಂದು ದಿನ ಕನಸಿನಂತೆ ಆಗಬಹುದು. ಇವುಗಳೆಲ್ಲವೂ ಸರ್ವನಾಶವಾಗಲೂಬಹುದು… ಇದೆಲ್ಲ ಈಗ ಯಾಕೆ ಮಾತು ಬಂತಂದರೆ ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನವಾದ್ದರಿಂದ ಇದೆಲ್ಲ ನೆನಪಾಯಿತು… ಒಂದು ಮುಖ್ಯ ವಿಷಯವೆಂದರೆ ಈ ಗುಬ್ಬಚ್ಚಿಗಳು, ಕಾಗೆ, ಗೂಬೆಗಳೆಲ್ಲ ಕಾಂಕ್ರೀಟ್ ಕಾಡುಗಳಾದ ಪಟ್ಟಣ, ನಗರ, ಮಹಾನಗರಗಳಲ್ಲಿ ಕಾಣಸಿಗುವುದೇ ಇಲ್ಲ. ಅಂದರೆ ನಾಶವಾಗಿವೆ. ಮನುಷ್ಯ ತನ್ನ ಮಿತಿಮೀರಿದ ತೀವ್ರ ಸ್ವಾರ್ಥದಲ್ಲಿ ಈ ಉಳಿದ ಪ್ರಕೃತಿ ಸಹಜ ಪ್ರಾಣಿ-ಪಕ್ಷಿಗಳಿಗೆ ಜಾಗವೇ ಇಲ್ಲದಂತೆ ಮಾಡಿದ್ದಾನೆ..! ಇರಲಿ, ಮುಖ್ಯ ವಿಷಯಕ್ಕೆ ಬರುತ್ತೇನೆ ಈಗ. ಅದೇ ಗುಬ್ಬಚ್ಚಿಗಳ ವಿಷಯ… ಈ ಗುಬ್ಬಚ್ಚಿಗಳು ಸಂಗ್ರಹಿಸಿಟ್ಟ ಭತ್ತದ ಒಣಹುಲ್ಲುಗಳ ತೆನೆಯಲ್ಲಿ ಅಲ್ಲಲ್ಲಿ ಸಿಗುವ ಭತ್ತಗಳನ್ನು ಹುಡುಕುತ್ತ ಸಂಸಾರ ಸಮೇತ ಸುಪ್ರಭಾತ ಹಾಡುವುದು ಗುಬ್ಬಚ್ಚಿಗಳ ದಿನಚರಿಯ ಮೊಟ್ಟ ಮೊದಲ ಕೆಲಸ..! ಹೆಣ್ಣು ಗುಬ್ಬಿಯ ಗರ್ಭದಲ್ಲಿ ಪುಟ್ಟದೊಂದು ಗುಬ್ಬಚ್ಚಿ ಮೊಳೆಯುತ್ತಿದೆ ಎಂಬುದು ತಿಳಿಯುತ್ತಿದ್ದಂತೆಯೇ ಅವುಗಳ ತಯಾರಿ ಶುರು. ಗಂಡು ಗುಬ್ಬಿಗಂತೂ ಆಗ ಎಲ್ಲಿಲ್ಲದ ಕೆಲಸ. ಒಂದೊಂದೇ ಹುಲ್ಲುಕಡ್ಡಿಗಳನ್ನು ಆರಿಸಿ ತಂದು ಗೂಡನ್ನು ಕಟ್ಟಿ ಜೋಪಾನ ಮಾಡುವುದೇನು. ಕಾಳು ಕಡಿ ಸಂಗ್ರಹಿಸುವುದೇನು. ಆ ಸಂಭ್ರಮ ಅವಕ್ಕೇ ಗೊತ್ತು..! ಮೊಟ್ಟೆಗೆ ಸರದಿಯಂತೆ ಕಾವುಕೊಡುವ ಜೋಡಿ! ಮನೆಯೊಡತಿ ಅಕ್ಕರೆಯಿಂದ ಹಾಕಿದ ಅಕ್ಕಿ ಕಾಳುಗಳನ್ನೆಲ್ಲ ತನ್ನ ಪುಟ್ಟ ಕೊಕ್ಕಲ್ಲಿ ಆರಿಸಿಕೊಂಡು, ಗೂಡಲ್ಲಿ ರಚ್ಚೆಹಿಡಿದ ಮರಿಗಳ ಬಾಯಿಗೆ ಗುಟುಕಿಡುವ ಪರಿ. ಆಹಾ ಅದನ್ನು ನೋಡಿಯೇ ಆನಂದಿಸಬೇಕು… ಆದರೆ. ಆ ಮಧುರ ಕ್ಷಣಗಳು ಇನ್ನು ಮರೀಚಿಕೆ ಮಾತ್ರವಾ…? ಮನುಷ್ಯನ ಸಹವಾಸದಲ್ಲೇ ಬದುಕುತ್ತಿದ್ದ ಮನೆಗುಬ್ಬಿಗಳು ‘ಈ ಮನುಷ್ಯರ ಸಹವಾಸವೇ ಸಾಕು’ ಎಂದು ಹಳ್ಳಿಮನೆ ಬಿಟ್ಟು ಪಟ್ಟಣ ಸೇರಿದ್ದೇವೆಯೇ..? ಹಾಗೇನೂ ಇಲ್ಲ ಎಂದಾದರೆ ಇದ್ದ ಗುಬ್ಬಿಗಳೆಲ್ಲ ಎಲ್ಲಿ ಹೋದವು? ಹಳ್ಳಿಗಳಲ್ಲಿ ಪ್ರತಿ ಮನೆಯಲ್ಲೂ ಏನಿಲ್ಲವೆಂದರೆ ಕನಿಷ್ಠ 10-15 ಸಂಖ್ಯೆಯಲ್ಲಿರುತ್ತಿದ್ದ ಗುಬ್ಬಚ್ಚಿ ಮಾಯವಾಗಿದ್ದೇಕೆ..? ಅಳಿವಿನಂಚಿಗೆ ಸರಿಯುತ್ತಿರುವ ‘ಮನೆಗುಬ್ಬಿ’ಗಳನ್ನು ರಕ್ಷಸಿ ಎಂದು ಕೂಗಿ ಹೇಳುವುದಕ್ಕಾಗಿ ಇಂದು ‘ವಿಶ್ವ ಮನೆ ಗುಬ್ಬಿಗಳ ದಿನ’ವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷ ಮಾ.20 ರಂದು ಆಚರಣೆಗೊಳ್ಳುವ ಈ ದಿನದಂದು ಗುಬ್ಬಿಗಳ ಸಂತತಿಯನ್ನು ರಕ್ಷಿಸುವುದಕ್ಕೆ ಪಣತೊಡಲಾಗುತ್ತದೆ… ಮನುಷ್ಯನ ಸ್ನೇಹಿತರಾದ ಈ ಗುಬ್ಬಿಗಳು ಚಿಂವ್ ಚಿಂವ್ ಎನ್ನುತ್ತ ಮನೆತುಂಬ ಓಡಾಡುತ್ತಿದ್ದರೇನೇ ಶೋಭೆ. ಆದರೆ ಕಾರಣಾಂತರಗಳಿಂದ ಅವುಗಳ ಸಂತತಿ ಕಡಿಮೆಯಾಗುತ್ತಿರುವುದು ಆತಂಕ ಮೂಡಿಸಿದೆ… ಎಲ್ಲಿ ಹೋದವು ಮುದ್ದು ಗುಬ್ಬಚ್ಚಿಗಳು..?– ಮನುಷ್ಯನ ಸಾಂಗತ್ಯದಲ್ಲೇ ಬದುಕಲು ಬಯಸುತ್ತಿದ್ದ ಗುಬ್ಬಿಗಳು ಗೂಡು ಕಟ್ಟುತ್ತಿದ್ದಿದ್ದೇ ಮನೆಯ ಮಾಡಿನ ಸಂದಿ-ಗೊಂದಿಗಳಲ್ಲಿ. ಸದಾ ಮನೆಯಲ್ಲೇ ಕೂತು, ಹೊರಗೆಲ್ಲೂ ಸುತ್ತದವರಿಗೆ ‘ಮನೆಗುಬ್ಬಿ’ ಎಂಬ ಉಪಮೇಯ ಈಗಲೂ ಚಾಲ್ತಿಯಲ್ಲಿದೆ. ಅಂದರೆ ಅಷ್ಟರ ಮಟ್ಟಿಗೆ ಗುಬ್ಬಚ್ಚಿಗಳು ಮನೆಯ ಸದಸ್ಯರೇ ಆಗಿ ಮನೆಯಲ್ಲುಳಿಯುತ್ತಿದ್ದವು. ಆದರೆ ಇತ್ತೀಚೆಗೆ ಹಳ್ಳಿ ಮನೆಗಳೂ ಥಾರಸಿಯಾಗಿ ಬದಲಾಗಿದ್ದು, ಮೊಬೈಲ್ ತರಂಗಗಳು ಗುಬ್ಬಚ್ಚಿಯ ಜೀವಕ್ಕೇ ಸಂಚಕಾರ ಎಂಬ ಆತಂಕ ಮುಂತಾದವೆಲ್ಲ ಸೇರಿ ಮುದ್ದು ಗುಬ್ಬಚ್ಚಿಗಳು ಕಣ್ಣಿಗೇ ಕಾಣದಂತೆ ಮಾಯವಾಗಿವೆ… ವಿಶ್ವವನ್ನು ಸುಂದರವಾಗಿಸಿದ ಗುಬ್ಬಚ್ಚಿಗಳು ವಿಶ್ವ ಗುಬ್ಬಿಗಳ ದಿನದಂದು ಈ ಪುಟ್ಟ ಪ್ರಭೇದವನ್ನು ರಕ್ಷಿಸಲು ಕೈಜೋಡಿಸೋಣ. ಅವುಗಳ ಚಿಲಿಪಿಲಿ ಸದ್ದು ಈ ವಿಶ್ವವನ್ನು ಮತ್ತಷ್ಟು ಸುಂದರವಾಗಿಸಿದೆ. ಅವುಗಳಿಗೆ ನೀರು, ಆಹಾರ, ನೆರಳು ನೀಡಿ ಸಲಹೋಣ… ಈ ಸುಂದರ ಗುಬ್ಬಿಗಳನ್ನು ರಕ್ಷಿಸೋಣ. ಇಲ್ಲವೆಂದರೆ ನಮ್ಮ ಮುಂದಿನ ತಲೆಮಾರಿಗೆ ಇವುಗಳ ಚಿತ್ರವನ್ನಷ್ಟೇ ತೋರಿಸಬೇಕಾದೀತು… ರಕ್ಷಣೆಯ ಕುರಿತು ಅರಿವು ಮೂಡಿಸೋಣ– ನಿಸರ್ಗದ ಸಣ್ಣಪುಟ್ಟ ಜೀವಿಗಳೂ ನಮ್ಮ ಬದುಕನ್ನು ಸುಂದರವಾಗಿಸಿವೆ. ನಿಸರ್ಗದ ಪ್ರತಿ ವಸ್ತುವನ್ನೂ, ಜೀವಿಯನ್ನೂ ರಕ್ಷಿಸುವುದು ನಮ್ಮ ಕರ್ತವ್ಯ. ವಿಶ್ವ ಗುಬ್ಬಿ ದಿನದಂದು ಈ ಪಕ್ಷಿಗಳ ರಕ್ಷಣೆಯ ಕುರಿತು ಅರಿವು ಮೂಡಿಸೋಣ… ಗುಬ್ಬಿಗಳ ಚಿಲಿಪಿಲಿ ಸದ್ದಿನಿಂದಲೇ ಈ ಜಗತ್ತು ಸುಂದರವಾಗಿದೆ. ಎಂದು ನನಗೆ ಹಲವು ಬಾರಿ ಅನ್ನಿಸುತ್ತದೆ. ಅವುಗಳಿಗೆ ನಮ್ಮ ಮನೆಯ ಒಂದು ಮಾಡಿನಲ್ಲಿ ಕೊಂಚ ಜಾಗ ಮಾಡಿಕೊಡೋಣ. ಅವುಗಳಿಗೆ ನೀರು, ಆಹಾರ ಒದಗಿಸೋಣ. ಈ ಬೇಸಿಗೆಯಲ್ಲಿ ಅವುಗಳ ರಕ್ಷಣೆ ನಮ್ಮ ಹೊಣೆ..! ಈ ಸಮತೋಲನದ ಗುಬ್ಬಚ್ಚಿಗಳು ಈಗ ಬೇಕಾಗಿದೆ..! ಇಂತಿಷ್ಟು ಹೇಳಿ ನನ್ನ ಮಾತು ಮುಗಿಸುತ್ತೇನೆ..!

ವಿಶ್ವ ಗುಬ್ಬಚ್ಚಿಗಳ ದಿನ Read Post »

ಇತರೆ

ಲಹರಿ

ಇಂದು ಬಾನಿಗೆಲ್ಲ ಹಬ್ಬ ಚಂದ್ರಪ್ರಭ ಬಿ. ಇಂದು ಬಾನಿಗೆಲ್ಲ ಹಬ್ಬ… ಕಳೆದ ದಶಕದ ಸಿನಿಮಾ ಹಾಡೊಂದರ ಈ ಸಾಲು ಮುಂದುವರಿದಂತೆ ಗಾಳಿ ಗಂಧ, ಭೂಮಿ, ಪುಷ್ಪ ಕುಲ, ಸುಮ್ಮನಿರದ ಮನಸು, ಓಡುತಿರುವ ವಯಸು, ಉಸಿರಿಗೆ ಉಕ್ಕುವ ಎದೆ,ಮರಳು..ಕಡಲು..ಅಪ್ಪುವಲೆ – ಎಲ್ಲಕ್ಕೂ ಇಂದು ಹಬ್ಬ ಎಂದು ಬಣ್ಣಿಸುತ್ತದೆ. ತನ್ನ fast beat (ದೃತ್ ಲಯ) ನಿಂದಾಗಿ ಇಡೀ ಗೀತೆಯೇ ಕಿವಿಗೆ ಹಬ್ಬವಾಗುವ ವಿಶಿಷ್ಟ ಹಾಡು ಇದು. ಒಂದರ್ಥಲ್ಲಿ ಹೀಗೆ ಮನಸ್ಸು ಖುಷಿಯಿಂದ ಕುಪ್ಪಳಿಸಿ ತನ್ನಷ್ಟಕ್ಕೆ ತಾನೇ ಸಾಲೊಂದನ್ನು ಗುನುಗತೊಡಗುವ ಗಳಿಗೆಯೇ ಅವರವರ ಪಾಲಿನ ಹಬ್ಬ. ಇನ್ನು ಕಾಲಕಾಲಕ್ಕೆ ಆಗಮಿಸುವ ಹಬ್ಬಗಳದೂ ಒಂದು ಸೊಬಗು, ಸೊಗಸು. ಬಹುತ್ವ ಪ್ರಧಾನವಾಗಿರುವ ಭಾರತದ ನೆಲದಲ್ಲಿ ಹೆಜ್ಜೆ ಹೆಜ್ಜೆಗೆ ಭಾಷೆ, ವೇಷ, ಉಡುಪು,ಆಹಾರ – ಪದ್ಧತಿ ಇತ್ಯಾದಿ ಎಲ್ಲದರಲ್ಲಿ ಅಭೂತಪೂರ್ವ ಬದಲಾವಣೆ ಕಂಡು ಬರುತ್ತದೆ. ಅಂತೆಯೇ ಈ ನೆಲದ ಮಕ್ಕಳು ಆಚರಿಸುವ ಹಬ್ಬಗಳಲ್ಲೂ ವೈವಿಧ್ಯತೆಯದೇ ಕಾರುಬಾರು. ಬಹುತೇಕ ಹಬ್ಬಗಳು ಋತುಮಾನಕ್ಕೆ ಅನುಗುಣವಾಗಿ ಬರುವಂಥವುಗಳಾಗಿವೆ. ಬಿರು ಬಿಸಿಲ ಬೇಸಗೆ ಕರಗಿ ಮೋಡ ಮಳೆಯಾಗುವ ಹೊತ್ತಲ್ಲಿ ಆಗಮಿಸುವುದು ಶ್ರಾವಣ. ಅಂಬಿಕಾತನಯದತ್ತರ “ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ ಬಂತು ಕಾಡಿಗೆ…” ಗೀತೆಯನ್ನು ಕೇಳತೊಡಗಿದರೆ ಮುಗಿಲ ಸೆರೆಯಿಂದ ಮುಕ್ತವಾದ ಮಳೆ ಧಾರೆ ಧಾರೆಯಾಗಿ ಇಳೆಯನ್ನೆಲ್ಲ ತೋಯಿಸುತ್ತಿರುವಂತೆ ಭಾಸವಾಗುತ್ತದೆ. ವೈಶಾಖದ ಧಗೆಯಲ್ಲಿ ಬಿರುಕು ಬಿಟ್ಟ ಭುವಿ ವರ್ಷ ಧಾರೆಗೆ ಮೈತೆರೆದು ಬೆಟ್ಟ, ಬಯಲು,ನದಿ,ಕಣಿವೆ,ಗಿಡ ಮರ, ಪ್ರಾಣಿ ಪಕ್ಷಿ – ಎಲ್ಲವೆಂದರೆ ಎಲ್ಲರಿಗೂ ತೊಯ್ದು ತೊಪ್ಪೆಯಾಗುವ ಸಂಭ್ರಮ. ಹದಗೊಳಿಸಿದ ತನ್ನ ಭೂಮಿಯನ್ನು ಉತ್ತಿ ಬಿತ್ತಲು ಅಣಿಯಾಗುವ ರೈತ ಬಂಧು. ಸಾಲು ಸಾಲಾಗಿ ಬರುವ ಹಬ್ಬಗಳನ್ನು ಆಚರಿಸುವ ಸಡಗರದಲ್ಲಿ ಅವ್ವಂದಿರು.. ಗುಡಿ ಗುಂಡಾರಗಳಲ್ಲಿ ವಿಶೇಷ ಪೂಜೆ, ಅಲಂಕಾರ, ತೇರೆಳೆವ ಸಂಭ್ರಮ. ನಾಡಿಗೆ ದೊಡ್ಡದೆಂಬ ಹೆಗ್ಗಳಿಕೆಯ ನಾಗರ ಪಂಚಮಿ. ಜೀಕುವ ಜೋಕಾಲಿ, ಬಗೆ ಬಗೆಯ ಉಂಡಿ ತಂಬಿಟ್ಟು, ಹೋಳಿಗೆ. ಪಂಚಮಿಯನ್ನು ಹಿಂಬಾಲಿಸಿ ಬರುವ ಗಣೇಶ ಚತುರ್ಥಿ. ಅಬಾಲ ವೃದ್ಧರಾದಿ ಎಲ್ಲರಿಗೂ ಬೆನಕನನ್ನು ಅತಿಥಿಯಾಗಿ ಕರೆತಂದು ಕೂಡ್ರಿಸುವ, ಪೂಜಿಸುವ, ಮರಳಿ ಮತ್ತೆ ಕಳಿಸಿಕೊಡುವ ಸಂಭ್ರಮ. ಹೋಳಿಗೆ, ಕಡುಬು, ಮೋದಕಗಳ ಜತೆಗೆ ಪಟಾಕಿ ಸುಡುವ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಆಮೋದ ಪ್ರಮೋದ. ತಕ್ಕ ಮಟ್ಟಿಗೆ ಮಳೆ ಸುರಿದಿದ್ದಾದರೆ ರೈತನ ಮೊಗದಲ್ಲೂ ಒಂದು ಹೊಸ ಕಳೆ, ಭರವಸೆ. ಕಾಳು ಕಡಿ ತಕ್ಕೊಂಡು ಗೋಧಿ, ಜೋಳ ಬಿತ್ತಲು ಕಾಯುವ ಸಮಯದಲ್ಲಿ ನವರಾತ್ರಿ ಸಡಗರ. ದೇವಿ ಆರಾಧನೆ, ಪುರಾಣ ಪುಣ್ಯ ಕಥಾ ಶ್ರವಣ..ಮಹಾನವಮಿ, ವಿಜಯದಶಮಿ. ಗೋಧಿ ಹಚ್ಚ ಹಸಿರಿನಿಂದ ಕಂಗೊಳಿಸುವ ಹೊತ್ತಲ್ಲಿ ಸಾಲು ದೀಪಗಳ ಹೊತ್ತು ತರುವ ದೀಪಾವಳಿ. ಶ್ರಾವಣದ ಮೋಡಗಳೆಲ್ಲ ಚದುರಿ ಕಾರ್ತೀಕದ ಬೆಳಕಿನ ಗೂಡುಗಳ ಹಾವಳಿ. ಹೊಸ ಬಟ್ಟೆ ಖರೀಸುವ, ಸುಣ್ಣ ಬಣ್ಣ ಬಳಿದು ಮನೆ ಸಿಂಗರಿಸುವ, ಬಗೆ ಬಗೆ ಭಕ್ಷ್ಯ ಭೋಜ್ಯ ತಯಾರಿಸುವ, ಆ ಪೂಜೆ ಈ ಪೂಜೆ, ಅಂಗಡಿಗಳ ಹೊಸ ಖಾತೆಯ ಲೆಕ್ಕ, ಮಿತ್ರರು, ಬಂಧುಗಳನ್ನು ಭೇಟಿ ಮಾಡುವ, ಆನಂದಿಸುವ ರಸ ಗಳಿಗೆ. ಗೌರಿ ಹುಣ್ಣಿಮೆ, ಎಳ್ಳಮಾವಾಸ್ಯೆ, ಸಂಕ್ರಾಂತಿಯ ಸುಗ್ಗಿ ವೈಭವ. ‌ಚರಗ ಚೆಲ್ಲುವ ವಿಶಿಷ್ಟ ಆಚರಣೆ. ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸುವ ರೈತ ಬಂಧುಗಳ ಅಪರೂಪದ ನಡೆ. ಎಳ್ಳು ಹೋಳಿಗೆ, ಸೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಕಾರೆಳ್ಳು ಚಟ್ನಿ, ತರಾವರಿ ಪಲ್ಯಗಳನ್ನು ಬುತ್ತಿ ಕಟ್ಟಿಕೊಂಡು ಬೆಳೆಯ ನಡುವೆ ಕುಳಿತು ಉಣ್ಣುವ, ತೆನೆಗಟ್ಟಿದ ಕಾಳುಗಳನ್ನು ಸುಟ್ಟು ಸಿಹಿ ತೆನೆ ಸವಿಯುವ ಅನನ್ಯ ಕಾಲ. ಪ್ರಕೃತಿಯಲ್ಲೂ ಬದುಕಿನಲ್ಲೂ ಸಂಕ್ರಮಣವನ್ನು ಅರಸುವ ಮನುಜ ಸಹಜ ಹುಡುಕಾಟ. ಹಿಂಬಾಲಿಸುವ ತೆನೆ ಕಟ್ಟುವ ಹಬ್ಬ, ಕಾಮ ದಹನದ ಹೋಳೀ ಹುಣ್ಣಿಮೆ, ಪೂಜೆ ಉಪವಾಸದ ಶಿವರಾತ್ರಿ.. ಚೈತ್ರಾಗಮನ. ಎಲೆ ಉದುರಿ ಹೊಸ ಚಿಗುರು, ಮುಗುಳು ನಗುವಾಗ ಕೋಗಿಲೆಯ ಗಾನವೂ ಮಾವಿನ ಸವಿಯೂ ಬೆರೆತು ಹಿತವಾಗುವ ಬೇಸಗೆ. ಯುಗಾದಿಯ ಸಂದರ್ಭದಲ್ಲಿ ಬಾಳ್ವೆಯಲ್ಲಿ ಸಿಹಿ ಕಹಿ ಸಮ್ಮಿಲನದ ಸಂಕೇತವಾಗಿ ಬೇವು ಬೆಲ್ಲದ ಸವಿಯುಣ್ಣುವ ಸಡಗರ.‌ ಉರುಳುತ್ತ ಉರುಳುತ್ತ ಋತು ಚಕ್ರವೊಂದು ಪೂರ್ಣಗೊಂಡು ಮತ್ತೆ ಹೊಸ ನಿರೀಕ್ಷೆಗಳೊಂದಿಗೆ ಬದುಕಿನ ಬಂಡಿ ಎಳೆವ ಜೀವಗಳು. ಪ್ರತಿಯೊಂದು ಹಬ್ಬಕ್ಕೂ ಒಂದು ವೃತ್ತಾಂತ, ಕತೆಯ ಹಿನ್ನಲೆ, ಅಧ್ಯಾತ್ಮಿಕತೆಯ ಲೇಪನ. ಅದೆಂತೇ ಇರಲಿ. ಈ ಹಬ್ಬಗಳು ಇರಲೇಬೇಕೆ? ಕಾಸಿಗೆ ಕಾಸು ಕೂಡಿಸಿ ಸಾಲ ಮಾಡಿ ಹಬ್ಬ ಆಚರಿಸುವುದು ತರವೆ? ಇದ್ದವರದು ಒಂದು ಕತೆಯಾದರೆ ಇಲ್ಲದವರ ಪಾಡು ಏನು? ಇತ್ಯಾದಿ ಪ್ರಶ್ನೆ ಸಾಲು ಕಾಡುವುದು ನಿಜ. ಇರುವವರು ಇಲ್ಲದವರು, ಮಿತ್ರರು ಶತ್ರುಗಳು, ಬೇಕಾದವರು ಬೇಡದವರು – ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ಕೊಟ್ಟು ತೆಗೆದುಕೊಂಡು ಜೀವನ ಸಹ್ಯವಾಗುವಂತೆ ಮಾಡುವ ಅವಕಾಶ ಒದಗಿಸುವುದು ಹಬ್ಬಗಳು. ತನ್ನಂತೆ ಪರರ ಬಗೆವ ಹೃದಯಗಳಿಗೆ ಕೈಯೆತ್ತಿ ಕೊಡಲು ಹಬ್ಬದ ನೆಪ ಬೇಕಿಲ್ಲ. ಆದರೆ ಪ್ರೇರಣೆಯಿರದೇ ಹಂಚಿಕೊಳ್ಳಲು ಒಪ್ಪದ ಜೀವಗಳಿಗೆ ಹಬ್ಬಗಳೇ ಬರಬೇಕು. ಸಾಮಾಜಿಕ, ಆರ್ಥಿಕ, ರಾಜಕೀಯ ಯಾವ ಆಯಾಮದಲ್ಲಿದ್ದರೂ ಬದುಕಿನ ಏಕತಾನತೆಯನ್ನು ನೀಗಲು ಹಬ್ಬಗಳು ಬರಬೇಕು. ಬದುಕಿಗೆ ಬಣ್ಣ ತುಂಬಿ ಬದುಕು ಹೆಚ್ಚೆಚ್ಚು ಸಹ್ಯ ಆಗುವಂತೆ ಮಾಡಲು ಹಬ್ಬಗಳು ಬೇಕು. ನಮ್ಮ ನಮ್ಮ ನಡುವಿನ ಗೋಡೆಗಳ ದಾಟಿ, ಅಹಮ್ಮಿನ ಕೋಟೆ ಒಡೆದು ಸೇತುವೆ ಕಟ್ಟಲು ಹಬ್ಬಗಳೇ ಬರಬೇಕು. ಮತ್ತೆ ಮತ್ತೆ ಬರುವ ಯುಗದ ಆದಿ ಎಲ್ಲ ಜೀವಿಗಳಿಗೂ ಚೈತನ್ಯದಾಯಿನಿ. ಹಳತನ್ನು ಕಳಚಿಕೊಂಡು ಹೊಸತಿಗೆ ತೆರೆದುಕೊಳ್ಳಲು ಹಪಾಪಿಸುವ ಜೀವಗಳ ಒಳ ತುಡಿತ. ಮತ್ತೊಂದು ಬೇಸಗೆ..ಮತ್ತೆ ಮಳೆಗಾಲ..ಉಕ್ಕುವ ನದಿ, ಕೆರೆ ತೊರೆಗಳು.. ಬರಗಾಲದ ಬವಣೆ.. ಜಲ ಪ್ರಳಯ, ಹನಿ ನೀರಿಗೆ ಹಾಹಾಕಾರ – ಎಲ್ಲವುಗಳನ್ನು ದಾಟುತ್ತ ದಾಟುತ್ತ ಮತ್ತೆ ಮತ್ತೆ ಬಂದು ಬದುಕಿಗೆ ಬಣ್ಣ ತುಂಬುವ, ಜೀವಸೆಲೆಯಾಗುವ ಹಬ್ಬಗಳದೇ ಒಂದು ಬಗೆ. ತನ್ನೊಳಗಿನ ಒಲವು ನಲಿವು, ಮಿಡಿತ ತುಡಿತಗಳಿಗೆ ಸಾಕ್ಷಿಯಾಗುವ ಜೀವ ಕಡು ತಾಪದಲ್ಲಿ ರೋಧಿಸುವಂತೆಯೇ ನಲಿವಿನಲ್ಲಿ ಹಾಡಲು ತೊಡಗುವುದು ಕೂಡ ಹಬ್ಬದ ಮಾದರಿಯೇ. ಈ ಬರಹದ ಆರಂಭದಲ್ಲಿ ನಿರೂಪಿಸಿರುವಂತೆ ಜೀವ ಕುಣಿದು ಕುಪ್ಪಳಿಸಲು ತೊಡಗಿದೆಯೆಂದರೆ ಹೃದಯದಲ್ಲಿ ನೂರು ವೀಣೆಗಳ ಸ್ವರ ಮೀಟಿದೆ ಎಂತಲೇ ಅರ್ಥ. ನಗುವು ಸಹಜದ ಧರ್ಮ ನಗಿಸುವುದು ಪರ ಧರ್ಮ| ನಗುವ ಕೇಳುತ ನಗುವುದತಿಶಯದ ಧರ್ಮ|| ನಗುವ ನಗಿಸುವ ನಗಿಸಿ ನಗುತ ಬಾಳುವ ವರವ| ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ|| ನಕ್ಕು ಹಗುರಾಗದೇ ಸಾಗದ ಬದುಕನ್ನು ಸಹನೀಯವಾಗಿಸಿಕೊಳ್ಳಲು ಮಂದಹಾಸವನ್ನು ಧರಿಸುವುದೇ ಇರುವ ಒಂದೇ ದಾರಿ.. ಹೆಜ್ಜೆ ಹೆಜ್ಜೆಯಲ್ಲಿ ಜತೆಯಾಗುವ ಕವಿ ಸಾಲುಗಳೊಂದಿಗೆ ಸಾಗುವಾಗ ಮತ್ತೆ ಮತ್ತೆ ನೆನಪಾಗುವವು ಇಂಥವೇ ಸಾಲು.. ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ನಾ ನಕ್ಕು ಜಗವಳಲು ನೋಡಬಹುದೆ? ನಾನಳಲು ಜಗವೆನ್ನನೆತ್ತಿಕೊಳದೆ? (ಈಶ್ವರ ಸಣಕಲ್) ನಿಮ್ಮ ತುಟಿಯ ಮೇಲೊಂದು ನಗು ಮೂಡಿದ ಕ್ಷಣ ನಿಮಗೂ ಹಬ್ಬ..ನಿಮ್ಮ ಸುತ್ತಲೂ ಇರುವವರಿಗೂ ಹಬ್ಬ.. **********

ಲಹರಿ Read Post »

You cannot copy content of this page

Scroll to Top