Category: ಇತರೆ

ಇತರೆ

ದಾರಾವಾಹಿ ಆವರ್ತನ ಅದ್ಯಾಯ-40 ಹೇಮಚಂದ್ರ ಗುರೂಜಿಯ ಕೋಣೆಯಿಂದ ಹೊರಗೆ ಬಂದ ಮೇಲೆ ಅಣ್ಣಪ್ಪ, ಸುಮಿತ್ರಮ್ಮ ಮತ್ತು ರಾಧಾಳನ್ನು ಒಳಗೆ ಕರೆದ. ಅಷ್ಟೊತ್ತಿಗೆ ಗುರೂಜಿಯವರು ಧ್ಯಾನ ಭಂಗಿಯಲ್ಲಿ ಕುಳಿತಿದ್ದವರು ಸುಮಿತ್ರಮ್ಮನನ್ನು ಕಂಡು ಎಚ್ಚೆತ್ತವರು, ‘ಬನ್ನಿ ಸುಮಿತ್ರಮ್ಮ ಇನ್ನೇನು ವಿಷಯ…?’ ಎಂದರು ನಗುತ್ತ. ‘ನಮಸ್ಕಾರ ಗುರೂಜಿ… ವಿಶೇಷ ಏನೂ ಇಲ್ಲ. ಆದರೆ ಹೊಸದೊಂದು ತಾಪತ್ರಯ ವಕ್ಕರಿಸಿದೆ. ಇವಳು ರಾಧಾ ಅಂತ. ನಮ್ಮ ನೆರೆಮನೆಯವಳು’ ಎಂದು ಪರಿಚಯಿಸಿದ ಸುಮಿತ್ರಮ್ಮ ರಾಧಾಳ ಗಂಡನ ಸಮಸ್ಯೆಯನ್ನೂ, ಅವನಿಗೆ ಬಿದ್ದ ಕನಸನ್ನೂ ಮತ್ತು ಮುಖ್ಯವಾಗಿ ತಮ್ಮ […]

ಡಾ.ಸುಜಾತಾ.ಚಲವಾದಿಯವರ ಪ್ರಬಂಧ

ನಾನು ಅಲ್ಲಿಂದ ಕಾಲು ಕಿತ್ತೆ. ಮಳೆಹನಿ ಹಾಗೆ ಜಿನುಗುತ್ತಿತ್ತು ನನ್ನ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳ ಸುರಿಮಳೆ ಪ್ರಾರಂಭವಾಯಿತು. ಮಳೆ ನಿಂತಿತು ಪ್ರಶ್ನೆಗಳು ಮಾತ್ರ ನಿಲ್ಲಲಿಲ್ಲ. ಮತ್ತೆ ಬುದ್ದರ ಕಡೆ ಧ್ಯಾನಸ್ಥೆಯಂತೆ ಮೂಕಳಾದೆ

ಜ್ಞಾನದ ಹೊತ್ತಿಗೆಗಳು

ಲೇಖನ ಜ್ಞಾನದ ಹೊತ್ತಿಗೆಗಳು ಆರ್. ಬಿ. ಪ್ರಿಯಾಂಕ : ಪುಸ್ತಕಗಳು  ಮಸ್ತಕಗಳ   ತೆರೆಸುತ್ತವೆ,  ಪುಸ್ತಕಗಳು  ಹೃದಯಗಳ  ತಟ್ಟುತ್ತವೆ,   ಪುಸ್ತಕಗಳು  ಮಾತು – ಮನಗಳ ಒಂದು ಮಾಡುತ್ತವೆ,   ಎನ್ನುವoತೆ ಈ ಪುಸ್ತಕಗಳು ಮಾನವನಲ್ಲಿ ಹೊಮ್ಮುವ  ಜಿಜ್ಞಾಸೆಗಳ ಫಲವಾಗಿವೆ.  ಮನುಷ್ಯನ  ಯೋಚನೆಗಳು,  ಕಾರ್ಯಗಳು,  ಸಾಧನೆಗಳು, ಪುಸ್ತಕಗಳ  ರೂಪದಲ್ಲಿ   ಶಾಶ್ವತವಾಗಿರುತ್ತವೆ. ಈ  ಪುಸ್ತಕಗಳು ಪೀಳಿಗೆಯಿಂದ  ಪೀಳಿಗೆಗೆ ಜ್ಞಾನವವನ್ನು  ವರ್ಗಾಯಿಸುವ ಸುಲಭ ಸಾಧನಗಳಾಗಿವೆ. ಒಳ್ಳೆಯ ವಿಚಾರಗಳನ್ನು, ಮೌಲ್ಯಗಳನ್ನು ಮಾನವನ ಮನದಲ್ಲಿ ಆಳವಾಗಿ ಬಿತ್ತುವುದರಲ್ಲಿ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ. ಹೆಚ್ಚು ಹೆಚ್ಚು ಓದಿದಂತೆ […]

ದಾರಾವಾಹಿ ಆವರ್ತನ ಅದ್ಯಾಯ-39 ‘ಕೊಡೆಕ್ಕೆನಾ’ ಹೋಟೇಲಿನೆದುರು ವ್ಯಾಪಾರ ಆರಂಭಿಸಿ ಕೈಸುಟ್ಟುಗೊಂಡು ದಿವಾಳಿಯಾದ ಹೇಮಚಂದ್ರನು ಹೈರಾಣಾಗಿದ್ದ ಸಂದರ್ಭದಲ್ಲಿ ತನ್ನ ಹತ್ತಿರದ ಸಂಬಂಧಿಯೊಬ್ಬನ ಸಲಹೆಯ ಮೇರೆಗೆ ಗುರೂಜೀಯವರಲ್ಲಿಗೆ ಬಂದ. ಅವರ ಆಪ್ತ ಸಹಾಯಕ ರಾಘವನ ಕಥೆ ಕೇಳಿ ಬೆಕ್ಕಸ ಬೆರಗಾಗಿ ತಾನು ಕುಳಿತ ಭಂಗಿಯನ್ನೊಮ್ಮೆ ಸೂಕ್ಷ್ಮವಾಗಿ ಸರಿಪಡಿಸಿ ನೆಟ್ಟಗೆ ಕುಳಿತುಕೊಂಡ. ತನ್ನದೂ ಇವನದೇ ಕಥೆ. ಹಾಗಾಗಿ ತನಗೂ ಈ ಗುರೂಜಿಯವರಿಂದ ಪರಿಹಾರ ದೊರಕೀತು ಎಂದುಕೊಂಡು ಉಲ್ಲಸಿತನಾದ. ಅದರ ನಡುವೆಯೂ ಅವನನ್ನೊಂದು ಅನುಮಾನ ಕಾಡಿತು. ಅದನ್ನು ನಿವಾರಿಸಿಕೊಳ್ಳಲು, ‘ನನ್ನದೂ ನಿಮ್ಮದೇ ಸಮಸ್ಯೆ ಮಾರಾಯ್ರೇ. ಆದರೆ ಈ ಗುರೂಜಿಯವರು ಅದಕ್ಕೆ ಯಾವ್ಯಾವ ಬಗೆಯ ಪರಿಹಾರವನ್ನು ಹೇಳಬಹುದೆಂಬ ಐಡಿಯಾ ಇದೆಯಾ ನಿಮಗೆ…?’ ಎಂದು ರಾಘವನನ್ನು ಪ್ರಶ್ನಿಸಿದ. ‘ಅಯ್ಯೋ, ಅದು ಬಿಡಿ. ಅವರು ಯಾವತ್ತೂ ದುಡ್ಡು ಮಾಡುವವರ ಜಾತಿಗೆ ಸೇರಿದವರಲ್ಲ. ಹಾಗಾಗಿ ದೊಡ್ಡ ದೊಡ್ಡ ವಿಧಿಗಳನ್ನೇನೂ ಹೇಳುವುದಿಲ್ಲ. ನಿಮಗ್ಯಾರಾದರೂ ಮಾಟ ಗೀಟ ಮಾಡಿಸಿದ್ದರೆ ಅದರ ನಿವಾರಣೆಗೆ ಕೆಲವು ಪೂಜೆ, ಪುನಸ್ಕಾರಗಳನ್ನು ಹೇಳಬಹುದಷ್ಟೇ. ಎಷ್ಟೆಷ್ಟೋ ಬಡವರ ಸಮಸ್ಯೆಗಳನ್ನು ಅವರು ಕೆಲವೊಮ್ಮೆ ಪುಕ್ಕಟೆಯಾಗಿ ತಮ್ಮ ಮಂತ್ರಶಕ್ತಿಯಿಂದಲೇ ನಿವಾರಿಸಿ ಕಳುಹಿಸಿದ್ದುಂಟು!’ ಎಂದು ವಿಸ್ಮಯ ಸೂಚಿಸುತ್ತ ಹೇಳಿದ. ಅಷ್ಟು ಕೇಳಿದ ಹೇಮಚಂದ್ರ ಪೂರ್ಣ ನಿರಾಳನಾದ. ‘ಹೌದೂ, ನಿಮ್ಮದೆಂಥ ಸಮಸ್ಯೆ ಮಾರಾಯ್ರೇ…?’ ಎಂದು ರಾಘವ ಎತ್ತಲೋ ನೋಡುತ್ತ, ಸಿಗರೇಟಿನ ಹೊಗೆ ಉಗುಳುತ್ತ ಅವನನ್ನು ಪ್ರಶ್ನಿಸಿದ. ‘ನನ್ನದೂ ವ್ಯಾಪಾರದ ಅವಸ್ಥೆಯೇ ಮಾರಾಯ್ರೇ! ಹೊಟೇಲು ಮಾಲಿಕನೊಬ್ಬ ನನ್ನ ಮೇಲೆ ಮಾಟ ಮಾಡಿಸಿರಬೇಕು. ಬರೇ ಆರು ತಿಂಗಳಲ್ಲಿ ಇಪ್ಪತ್ತು ಲಕ್ಷ ಲಾಸ್ ಆಯಿತು. ಅದರ ಮೇಲೆ ಒಂದಷ್ಟು ಸಾಲವೂ ಆಗಿಬಿಟ್ಟಿದೆ. ಆ ಸಾಲಗಾರರ ತೊಂದರೆ ತಾಳಲಾಗದೆ ಜೀವ ತೆಗೆದುಕೊಳ್ಳುವುದೊಂದೇ ದಾರಿ ಅನ್ನುವ ಮಟ್ಟಕ್ಕೆ ಬಂದು ನಿಂತಿದ್ದೆ. ಅಷ್ಟರಲ್ಲಿ ನನ್ನ ಸಂಬಂಧಿಕನೊಬ್ಬ ಈ ಗುರೂಜಿಯವರಲ್ಲಿಗೆ ಕಳುಹಿಸಿಕೊಟ್ಟ!’ ಎಂದ ವಿಷಾದದಿಂದ. ‘ಓಹೋ, ಹೌದಾ… ಇಲ್ಲಿಗೆ ಬಂದಾಯ್ತಲ್ಲ ಇನ್ನು ಮಂಡೆಬಿಸಿ ಬಿಟ್ಟುಬಿಡಿ. ನೀವೆಷ್ಟು ಕಳೆದುಕೊಂಡಿದ್ದೀರೋ ಅದರ ಡಬ್ಬಲ್ ತಿರುಗಿ ನಿಮ್ಮ ಹತ್ತಿರ ಬಂದೇ ಬರುತ್ತದೆ. ಅದಕ್ಕೆ ನಾನು ಭರವಸೆ ಕೊಡಬಲ್ಲೆ!’ ಎಂದು ಎದೆಯುಬ್ಬಿಸಿ ಅಂದವನು, ‘ಹೌದೂ ನಿಮ್ಮನ್ನು ಇಲ್ಲಿಗೆ ಕಳುಹಿಸಿದವನು ನಿಮ್ಮ ಸಂಬಂಧಿಕನೆಂದಿರಲ್ಲ ಆ ಪುಣ್ಯಾತ್ಮನ ಹೇಸರೇನಂದಿರಿ…?’ ಎಂದು ಪ್ರಶ್ನಿಸಿದ. ‘ಪ್ರಕಾಶ ಅಂತ. ಅವನು ನನ್ನ ಹತ್ತಿರದ ಸಂಬಂಧಿಯೇನೂ ಅಲ್ಲ. ಆದರೂ ಕಷ್ಟಕಾಲದಲ್ಲಿ ಅಂಥವರೇ ಆಗುವುದು ಅಂತ ಈಗ ಗೊತ್ತಾಗುತ್ತಿದೆ ಮಾರಾಯ್ರೇ!’ ಎಂದು ಹೇಮಚಂದ್ರ ಅವನನ್ನು ಸ್ಮರಿಸಿದ. ‘ಓಹೋ, ಅವನಾ… ಹೌದೌದು. ಅಂತವರೇ ಆಗುವುದು ಮಾರಾಯ್ರೇ!’ ಎಂದ ರಾಘವ ಇನ್ನು ತನ್ನ ಕೆಲಸವಾಯಿತು ಎಂಬಂತೆ ಎದ್ದು ನಿಂತವನು ಯಾರಿಗೋ ಕರೆ ಮಾಡಲು ನೆನಪಾದಂತೆ ನಟಿಸುತ್ತ ಫೋನೆತ್ತಿಕೊಂಡು, ‘ಆಯ್ತು ನೀವು ಕುಳಿತಿರಿ. ನಾನೀಗ ಬಂದೆ…’ ಎಂದವನು ಮತ್ತೆ ಅವನತ್ತ ತಿರುಗಿಯೂ ನೋಡದೆ ಹೊರಟು ಹೋದ. ಅವನು ಅತ್ತ ಹೋಗುತ್ತಲೇ, ಎಲ್ಲಿಂದಲೋ ಹಾರಿ ಬಂದ ಕಾಗೆಯೊಂದು ಹೇಮಚಂದ್ರನ ನೆತ್ತಿಯ ಮೇಲಿನ ಮರದ ಕೊಂಬೆಯಲ್ಲಿ ಕುಳಿತುಕೊಂಡು ಸ್ವಲ್ಪ ಹೊತ್ತು ಕ್ರಾವ್ಸ್…ಕ್ರಾವ್ಸ್…ಕ್ರಾವ್ಸ್…! ಎಂದು ಅರಚಿದ್ದು, ಪಿಚಕ್ಕನೆ ಅವನ ಮೇಲೆ ಹಿಕ್ಕೆ ಸುರಿದು ಹಾರಿ ಹೋಯಿತು. ಹೇಮನಾಥ ಬೆಚ್ಚಿಬಿದ್ದ. ಅವನ ಮೈಯಿಡೀ ಕೆಟ್ಟ ವಾಸನೆ ಹೊಮ್ಮತೊಡಗಿತು. ಅಸಹ್ಯದಿಂದ ಎದ್ದು ಸಮೀಪದ ನಳ್ಳಿಯತ್ತ ಧಾವಿಸಿ ತೊಳೆದುಕೊಂಡ. ಆದರೂ ಕೊಳೆತ ಮೀನಿನಂಥ ವಾಸನೆ ಹಾಗೆಯೇ ಉಳಿಯಿತು. ತಲೆಯನ್ನು ಕರವಸ್ತ್ರ್ರದಿಂದ ತಿಕ್ಕಿತಿಕ್ಕಿ ಒರೆಸಿಕೊಂಡು ಮರಳಿ ಅಲ್ಲಿ ಕೂರಲಾಗದೆ ಅಸಹನೆಯಿಂದ ಅಡ್ಡಾಡತೊಡಗಿದ.                                                                                    *** ಹೇಮಚಂದ್ರನೊಡನೆ ಮಾತಾಡಿ ಅಲ್ಲಿಂದ ಮರೆಯಾದ ರಾಘವ ಕೂಡಲೇ ಗುರೂಜಿಯವರಿಗೆ ಕರೆ ಮಾಡಿದ. ಆದರೆ ಆಹೊತ್ತು ಗುರೂಜಿಯವರ ಎದುರಿನಲ್ಲಿ ಶ್ರೀಮಂತ ಜೋಡಿಯೊಂದು ತಮ್ಮ ಜೀವನವೇ ಕಳೆದು ಹೋದಂಥ ದುಃಖದಿಂದ ಕುಳಿತಿತ್ತು. ಗುರೂಜಿಯವರು ಅವರ ಸಮಸ್ಯೆಯನ್ನೂ ಅವರ ಮನೆಯ ವಿವರವನ್ನೂ ಮತ್ತು ವಠಾರದ ಚಿತ್ರಣವನ್ನೂ ಅವರಿಂದಲೇ ಕೆದಕಿ ಕೆದಕಿ ಪ್ರಶ್ನಿಸುತ್ತ ಸಾಕಷ್ಟು ತಿಳಿದುಕೊಂಡವರು ಕೊನೆಯಲ್ಲಿ ತಮ್ಮ ಕವಡೆಗಳನ್ನು ಹರಿಯಬಿಟ್ಟರು. ಅವುಗಳು ಕೆಲವುಕ್ಷಣ ಕುಣಿದು ಕುಪ್ಪಳಿಸಿ ಬಿದ್ದ ಸ್ಥಿತಿಯ ಮೇಲೆ ಲೆಕ್ಕಾಚಾರ ಹಾಕಿದವರು, ‘ನೋಡೀ, ನಿಮ್ಮ ಅನ್ಯೋನ್ಯ ದಾಂಪತ್ಯದಲ್ಲಿ ಈಚೀಚೆಗೆ ಕಂಡು ಬಂದಿರುವ ಮನಸ್ತಾಪಕ್ಕೂ ಮತ್ತು ನಿಮ್ಮ ಆರ್ಥಿಕ ಸಂಕಷ್ಟಕ್ಕೂ ಕಾರಣವೇನೆಂದು ಇಲ್ಲಿ ಸ್ಪಷ್ಟವಾಗುತ್ತಿದೆ. ನೀವು ಹೊಸತಾಗಿ ಕಟ್ಟಿಸಿರುವ ಬಂಗಲೆಯ ವಾಸ್ತುದೋಷವೇ ಈ ಎಲ್ಲ ಅನಾಹುತಕ್ಕೆ ಕಾರಣ! ಆದರೆ ಅದರ ಪರಿಹಾರಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೇ. ಬಂಗಲೆಯ ಮುಖ್ಯ ದ್ವಾರವನ್ನು ಕಿತ್ತು ನಾವು ಸೂಚಿಸುವ ದಿಕ್ಕಿಗೆ ಇರಿಸಿದರಾಯ್ತು. ಆನಂತರ ನಿಮ್ಮ ಬೆಡ್‍ರೂಮಿಗೆ ನೇರವಾಗಿ ಕಾಣಿಸುವ, ನಿಮ್ಮ ನೆರೆಮನೆಯ ತೋಟದಲ್ಲಿ ಹಳೆಯ ಕಾಟು ಮಾವಿನಮರವೊಂದಿದೆ ಅಂತ ಹೇಳಿದಿರಲ್ಲ ಆ ಮರವು ಪ್ರೇತಾತ್ಮಗಳ ವಾಸ್ಥಸ್ಥಾನವಾಗಿರುವುದೂ ಇಲ್ಲಿ ತೋರಿ ಬರುತ್ತಿದೆ. ಅವು ಮಸ್ಸರಗೊಂಡು ನಿಮ್ಮ ದಾಂಪತ್ಯ ಸುಖಕ್ಕೆ ಕಲ್ಲು ಹಾಕುತ್ತಿವೆ. ಆದಷ್ಟು ಬೇಗ ಆ ಮರವನ್ನು ಕಡಿಸುವ ಏರ್ಪಾಟ್ಟು ಮಾಡಿಸಿ. ಬಳಿಕ ನಾವು ಸೂಚಿಸುವ ಕೆಲವು ಪೂಜಾವಿಧಿಗಳನ್ನೂ ಭಕ್ತಿಯಿಂದ ನೆರವೇರಿಸಿಬಿಡಿ. ಆಮೇಲೆ ನಿಮ್ಮ ಸರ್ವ ಸಮಸ್ಯೆಗಳೂ ನಿವಾರಣೆಯಾಗುತ್ತವೆ, ಚಿಂತಿಸಬೇಡಿ!’ ಎಂದು ಸಲಹೆಯಿತ್ತರು.    ಅಷ್ಟು ಕೇಳಿದ ಹೆಂಗಸು ಸ್ವಲ್ಪ ನಿರಾಳಲಾಗಿ ಗಂಡನ ಮುಖ ದಿಟ್ಟಿಸಿದಳು. ಆದರೆ ಗಂಡಸಿಗೆ ಮರುಕ್ಷಣ ಬೇರೊಂದು ಚಿಂತೆ ಕಾಡಿತು. ‘ಸರಿ ಗುರೂಜಿ. ನೀವು ಹೇಳಿದಂತೆ ಮನೆಯ ದ್ವಾರವನ್ನು ತೆಗೆದು ಬೇರೆಡೆಗಿರಿಸಬಹುದು. ಆದರೆ ಮಾವಿನ ಮರ ಕಡಿಯಲು ನೆರೆಮನೆಯವರು ಒಪ್ಪುತ್ತಾರಾ…?’ ಎಂದು ಪ್ರಶ್ನಿಸಿದ. ‘ಅದೂ ಹೌದು. ಆದರೆ ಅದಕ್ಕೂ ನಮ್ಮ ಬಳಿ ಪರಿಹಾರವಿದೆ ಬಿಡಿ!’ ಎಂದ ಗುರೂಜಿಯವರು ಕುಂಕುಮದ ಕಟ್ಟೊಂದನ್ನು ತೆಗೆದು ಕಣ್ಣುಮುಚ್ಚಿ ಮಂತ್ರಿಸಿ ಅವರ ಕೈಗಿತ್ತು, ‘ಈ ಪ್ರಸಾದವನ್ನು ಆ ಮನೆಯವರಿಗೆ ಕೊಡಿ ಮತ್ತು ಆ ಮರದ ಕುರಿತು ನಾವು ಹೇಳಿದ ವಿಷಯವನ್ನೂ ಅವರಿಗೆ ವಿವರಿಸಿ. ಒಪ್ಪುತ್ತಾರೆ. ಆಗಲೂ ಒಪ್ಪದಿದ್ದರೆ ಮುಂದೇನು ಮಾಡಬೇಕೆಂಬುದನ್ನು ನಾವೇ ಹೇಳುತ್ತೇವೆ. ಯಾವುದಕ್ಕೂ ಆ ಕೆಲಸವಾದ ಮೇಲೆ ಇನ್ನೊಮ್ಮೆ ಬಂದು ಹೋಗಿ!’ ಎಂದು ನಗುತ್ತ ಹೇಳಿದರು. ಆಗ ಆ ದಂಪತಿಗೆ ಧೈರ್ಯ ಬಂತು. ‘ಸರಿ ಗುರೂಜಿ!’ ಎಂದು ಅವರು ನಮ್ರವಾಗಿ ಎದ್ದವರು ಐನೂರರ ಎರಡು ನೋಟುಗಳನ್ನು ಅವರ ಹರಿವಾಣದಲ್ಲಿಟ್ಟು ಕೈಮುಗಿದು ಹೊರಟು ಹೋದರು.    ಶ್ರೀಮಂತ ದಂಪತಿ ಹೊರಗೆ ಹೋದ ಬೆನ್ನಿಗೆ ಮಧ್ಯಮವರ್ಗದ ಜೋಡಿಯೊಂದು ಅಳುಕುತ್ತ ನಾಚುತ್ತ ಗುರೂಜಿಯ ಕೋಣೆಯನ್ನು ಪ್ರವೇಶಿಸಿತು. ಗುರೂಜಿಯವರು ಆ ಇಬ್ಬರನ್ನೂ ಆಪಾದಮಸ್ತಕ ದಿಟ್ಟಿಸಿದವರು ಹೌದೂ, ಇವರು ಮೂರು ತಿಂಗಳ ಹಿಂದೊಮ್ಮೆ ಬಂದು ಹೋದವರಲ್ಲವಾ…? ಎಂದುಕೊಂಡವರ ಮುಖದಲ್ಲಿ ತಟ್ಟನೆ ಅಸಹನೆಯ ಹೊಗೆಯಾಡಿತು. ಥತ್! ದರಿದ್ರದವುಗಳೆಲ್ಲಿಯಾದರೂ! ಮತ್ತೆ ಯಾಕೆ ವಕ್ಕರಿಸಿದವು? ಎಂದು ಚಿಂತಿಸಿದವರಿಗೆ ಆ ಜೋಡಿಯ ಸಮಸ್ಯೆಯೂ ಮುನ್ನೆಲೆಗೆ ಬಂತು. ಥೂ! ಇವುಗಳು ಕೊಡುವ ಇನ್ನೂರು ರೂಪಾಯಿಗೆ ನಾವು ಇವರಿಗೆ ಸಂತಾನಭಾಗ್ಯ ಕರುಣಿಸಬೇಕಂತೆ. ತಲೆಕೆಟ್ಟವುಗಳು! ಎಂದು ಒಳಗೊಳಗೇ ಬೈದುಕೊಳ್ಳುತ್ತ, ‘ಹ್ಞೂಂ  ಹೇಳಿ ಏನು ವಿಶೇಷ? ಏನಾದರೂ ಸಿಹಿ ಸುದ್ದಿ ತಂದಿದ್ದೀರೋ ಇಲ್ಲವೋ…?’ ಎಂದು ನಗುತ್ತ ಕೇಳಿದರು. ಆದರೆ ಆ ದಂಪತಿಯ ಮುಖಗಳು ಬಾಡಿದವು. ‘ಅದು ಗುರೂಜೀ… ನಾವು ಹೋದ ಸಲ ಬಂದಾಗ ನೀವು ನಮ್ಮ ತೊಂದರೆಯ ನಿವಾರಣೆಗೆ ನಮ್ಮ ಕುಲದೇವರಿಗೆ ಒಂದೂವರೆ ಕಿಲೋ ಉದ್ದಿನ ಬೇಳೆಯನ್ನು ಭಕ್ತಿಯಿಂದ ಸಮರ್ಪಿಸಿಲು ಹೇಳಿದ್ದಿರಿ. ನಾವು ಕೂಡಾ ಹಾಗೆಯೇ ಮಾಡಿದೆವು. ಆದರೆ ಆ ಮೇಲೆ ಮೂರು ತಿಂಗಳು ಕಳೆಯಿತು. ಇನ್ನೂ ಯಾವ ಸೂಚನೆಯೂ ಇಲ್ಲ!’ ಎಂದ ಹೆಂಗಸು ಮತ್ತೆ ತಲೆ ತಗ್ಗಿಸಿ ಕುಳಿತಳು. ಗುರೂಜಿಯವರಿಗೆ ಜಿಗುಪ್ಸೆ ಮೂಡಿತು. ‘ಹೌದಾ ಅಮ್ಮಾ… ಮೂರು ತಿಂಗಳಲ್ಲಿ ಎಷ್ಟು ಬಾರಿ ಕೊಟ್ಟಿದ್ದೀರಿ? ಒಂದೇ ಸಲ ಅಲ್ಲವಾ… ಅದೂ ಒಂದೂವರೆ ಕೇಜಿ ಅಷ್ಟೇ ತಾನೇ. ಅಯ್ಯೋ, ಅಷ್ಟಕ್ಕೆಲ್ಲ ನಮ್ಮ ಈಗಿನ ಯಾವ ದೇವರು ಪ್ರಸನ್ನನಾಗುತ್ತಾನಮ್ಮಾ! ಇನ್ನೊಂದಷ್ಟು ಕಾಲ ಕೊಡುತ್ತಲೇ ಇರು. ದೇವರಿಗೂ ನಾವು ಆಗಾಗ ಸ್ವಲ್ಪ ಕಾಟ ಕೊಡುತ್ತಲೇ ಇರಬೇಕಮ್ಮಾ. ಆಗಲೇ ಅವನೂ ನಮ್ಮಾಚೆ ತಿರುಗಿ ನೋಡುವುದು!’ ಎಂದು ವ್ಯಂಗ್ಯವಾಗಿ ನಗುತ್ತ ಹೇಳಿದರು. ಆಗ ಅವಳ ಗಂಡ, ಗುರೂಜಿಯವರಿಗೆ ಕಾಣದಂತೆ ಹುಬ್ಬುಗಂಟಿಕ್ಕಿ ತಲೆಯನ್ನು ಕೆರೆದುಕೊಂಡ. ‘ಹ್ಞಾಂ! ಅಂದಹಾಗೆ ಇನ್ನು ಮುಂದೆ ಹೀಗೆ ಮಾಡಿ, ಒಂದು ತಿಂಗಳು ಉದ್ದಿನ ಬೇಳೆ ಕೊಟ್ಟರೆ ಮತ್ತೊಂದು ತಿಂಗಳು ತೊಗರಿಬೇಳೆ ಕೊಡಿ. ಅದರಿಂದ ದೇವರು ಸಂಪ್ರೀತನಾಗಿ ನಿಮಗೆ ಖಂಡಿತಾ ಸಂತಾನವಾಗುತ್ತದೆ. ಹೋಗಿ ಬನ್ನಿ!’ ಎಂದು ಗುರೂಜಿಯವರು ನಯವಾಗಿ ಅಂದರು. ಅಷ್ಟು ಕೇಳಿದ ಆ ಬಡಪಾಯಿ ದಂಪತಿ, ‘ಆಯ್ತು ಗುರೂಜಿ. ಎಲ್ಲಾ ನಿಮ್ಮ ಆಶೀರ್ವಾದ!’ ಎಂದು ಕೈಮುಗಿದು ಇನ್ನೂರು ರೂಪಾಯಿಯನ್ನು ಅವರ ಮುಂದಿಟ್ಟು ಹೊರಟು ಹೋದರು. ಅಷ್ಟರಲ್ಲಿ ಗುರೂಜಿಯವರಿಗೆ ರಾಘವನ ಕರೆ ಬಂತು. ಫೋನೆತ್ತಿಕೊಂಡರು. ಅದು ತಮ್ಮ ಸಹಾಯಕನ ಕರೆ ಎಂದು ತಿಳಿದರೂ ಅಭ್ಯಾಸ ಬಲದಂತೆ, ‘ಓಂ ನಾಗಾಯ ನಮಃ ಯಾರು ಮಾತಾಡ್ತಾ ಇರೋದು…?’ ಎಂದರು.    ‘ನಾನು ಗುರೂಜೀ ರಾಘವ…ಹೊರಗಡೆ ಒಂದು ಹೊಸ ಕೇಸು ಬಂದು ಕೂತಿದೆ. ಕೆಂಪು ಶರ್ಟು ಮತ್ತು ಹಳೆಯ ಮಾಡೆಲಿನ ರಾಡೋ ವಾಚು ಧರಿಸಿರುವ ಹೇಮಚಂದ್ರ ಎಂಬವನಿದ್ದಾನೆ. ಸುಮಾರಾದ ಕುಳವೇ. ಹೊಟೇಲ್ ಬ್ಯುಸಿನೆಸ್ಸು. ಯಾರೋ ಮಾಟ ಮಾಡಿಸಿದ್ದಾರಂತೆ. ಈಗ ವ್ಯಾಪಾರ ಮುಳುಗಿ ಇಪ್ಪತ್ತು ಲಕ್ಷ ಲಾಸ್ ಆಗಿದೆಯಂತೆ. ಗಮನಿಸಿ!’ ಎಂದು ಸಂಕ್ಷಿಪ್ತ ಮಾಹಿತಿ ನೀಡಿ ಫೋನಿಟ್ಟ. ‘ಓಹೋ, ಹೌದಾ…, ಸರಿ, ಸರಿ!’ ಎಂದು ಗುರೂಜಿಯೂ ಫೋನಿಟ್ಟವರು ತಕ್ಷಣ ಅಣ್ಣಪ್ಪನನ್ನು ಕರೆದು, ‘ನೋಡನಾ… ಹೇಮಚಂದ್ರ ಎಂಬವನನ್ನು ಒಳಗೆ ಕಳುಹಿಸು…!’ ಎಂದು ಆಜ್ಞಾಪಿಸಿದರು. ಅದಕ್ಕವನು, ‘ಗುರೂಜೀ, ಸುಮಿತ್ರಮ್ಮ ಎಂಬವರು ಅವರಿಗಿಂದ ಮೊದಲು ಬಂದು ಕೂತಿದ್ದಾರೆ…!’ ಎಂದು ಹಲ್ಲುಗಿಂಜಿದ. […]

ಕನ್ನಡ ಸಾಹಿತ್ಯದಲ್ಲಿ‌ ಅಂತರ್ಜಾಲ ಪತ್ರಿಕೆಗಳ ಪಾತ್ರ

ಕನ್ನಡ ಸಾಹಿತ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಹಾಗೂ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯವನ್ನು ಅಂತರಜಾಲ ಪತ್ರಿಕೆಗಳು ಮಾಡುತ್ತಿವೆ.  ಅಲ್ಲದೇ ಅನೇಕ ಪರಿಚಯವೇ ಇಲ್ಲದ ಸಾಹಿತಿಗಳನ್ನು ಅವರ ಕೃತಿಗಳ ಮೂಲಕ ವಿಶ್ವದಾದ್ಯಂತ ವ್ಯಾಪಿಸಿರುವ ಕನ್ನಡಿಗರಿಗೆ ಗುರುತಿಸುವ ಕಾರ್ಯ ಈ ಅಂತರ್ಜಾಲ ಪತ್ರಿಕೆ ಮಾಡುತ್ತಿದ್ದು, ಕನ್ನಡ ಸಾಹಿತ್ಯವನ್ನು ಆಳವಾಗಿ ಅರಿಯಲು ನೆರವಾಗುತ್ತಿದೆ.

ವಾರ್ಷಿಕ ವಿಶೇಷ-2021

ವಾರ್ಷಿಕ ವಿಶೇಷ-2021 ಕನ್ನಡ ಸಾಹಿತ್ಯ ಮತ್ತು ಧರ್ಮ ಶಾಂತಲಾ ಮಧು ಕನ್ನಡದ ಮೊದಲ ಗ್ರಂಥವೆಂದು ಒಪ್ಪಿಕೊಳ್ಳಲಾದ `ಕವಿರಾಜಮಾರ್ಗ’ದಲ್ಲಿ `ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರಧರ್ಮಮುಮಂ’ ಎಂಬ ಚಿನ್ನದಂತಹ ಮಾತೊಂದಿದೆ. ಈ ಮಾತಿನ ಅರ್ಥ `ನಿಜವಾದ ಐಶ್ವರ್ಯ (ಕಸವರ) ಪರವಿಚಾರಗಳನ್ನು ಧರ್ಮಗಳನ್ನು ಸಹಿಸುವುದೇ ಆಗಿದೆ’ ಎನ್ನುವುದು. `ಅನ್ಯರ ವಿಚಾರಗಳನ್ನು ಧರ್ಮಗಳನ್ನು ಸಹಿಸುವುದೇ ನಿಜವಾದ ಸಂಪತ್ತು’ ಎನ್ನುವ ಈ ಸೂಕ್ತಿ ಕನ್ನಡನಾಡು ಧರ್ಮಗಳ ವಿಚಾರಗಳಲ್ಲಿ ಉದ್ದಕ್ಕೂ ತಾಳಿದ ನಿಲುವಿಗೆ ಬರೆದ ಒಂದು ವ್ಯಾಖ್ಯಾನದಂತಿದೆ, ಕರ್ನಾಟಕದ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಅದರ […]

ವಾರ್ಷಿಕ ವಿಶೇಷ-2021

 ಭಾಷೆಯೊಂದು ತನ್ನ  ಗರ್ಭದಲ್ಲಿ  ಅಡಗಿಸಿಕೊಂಡ ಸಾಹಿತ್ಯ ವಿಚಾರಧಾರೆಗಳು   ಸಾರ್ವಕಾಲಿಕವಾದವು. ಧರ್ಮಜಾತಿಗಳನ್ನು ಮೀರಿ ಸಾಹಿತ್ಯ ಚರಿತ್ರೆಯ ಕಾಲಾನುಕ್ರಮಣಿಕೆಯ   ಭಾಗವಾಗಿಯೇ  ಜೈನ,ಶೈವ, ವೈದಿಕ ಸಾಹಿತ್ಯವೂ ವೈವಿಧ್ಯಮಯವಾಗಿ ಛಂದಸ್ಸು ಅಲಂಕಾರಗಳೊಂದಿಗೆ ಅನೂಚಾನವಾಗಿ ಬಂದಿರುವುದು ಕನ್ನಡ ಸಾಹಿತ್ಯದ ಹೆಗ್ಗಳಿಕೆ.

ವಾರ್ಷಿಕ ವಿಶೇಷ-2021

ಈ ಅನೇಕ ಬಗೆಯ ಕವಿಗಳಿಗೆ, ಲೇಖಕರಿಗೆ, ಸಾಹಿತ್ಯ ಓದುಗರಿಗೆ ವೇದಿಕೆ ನೀಡಿದ್ದು ಈ ಅಂತರ್ಜಾಲದ ಪತ್ರಿಕೆಗಳು,ಸಮಾನ ಆಸಕ್ತ ಸಮುದಾಯಗಳ ಬ್ಲಾಗ್ಗಳು, ಇ- ವೃತ್ತ ಪತ್ರಿಕೆಗಳು ಇವುಗಳ ಸೇವೆ ಅಷ್ಟಿಟ್ಟಲ್ಲ. ಜನರಿಗೆ ಧೈರ್ಯ, ಜಾಗೃತಿ ಮೂಡಿಸುವುದರ ಜೊತೆ ಜೊತೆಗೆ ಅವರಲ್ಲಿ ವಿಭಿನ್ನ ಆಸಕ್ತಿ ಮೂಡಿಸುತ್ತ ಬಂದಿತು

ಕಣ್ಣಿಲ್ಲದ ಲೋಕಕ್ಕೆ ಕಣ್ಣು ಕೊಟ್ಟ ಡಾಕ್ಟರು

ಕೃತಿ: -‘ಮುಟ್ಟಿಸಿಕೊಂಡವರು:
ಡಾ. ಬಿ.ಎಂ. ತಿಪ್ಪೇಸ್ವಾಮಿ ನೆನಪಿನ ಪುಸ್ತಕ’ (1998)
ಸಂಪಾದಕರು: -ಬಿ.ವಿ. ವೀರಭದ್ರಪ್ಪ, ಬಿ.ಟಿ. ಜಾಹ್ನವಿ

Back To Top