Category: ಇತರೆ

ಇತರೆ

ಸಿಲ್ಕ್ ಸ್ಮಿತಾ ಜನ್ಮದಿನಕ್ಕೆ ಸಂಗಾತಿ ಶುಭಾಶಯ ಹಾಗೂ ಚಿರ ನೆನಪು

ಭಾರತೀಯ ಸಿನಿಮಾ ರಂಗದ ಅಪ್ರತಿಮ ಪ್ರತಿಭಾವಂತ ನಟಿಯಲ್ಲೊಬ್ಬರಾದ
ಸಿಲ್ಕ್ ಸ್ಮಿತಾ ಬದುಕಿದ್ದಿದ್ದರೆ ಇವತ್ತಿಗೆ ಅರವತ್ತೊಂದು ವರ್ಷಗಳಾಗುತ್ತಿದ್ದವು.

ತೆರೆಯ ಮೇಲೆ ಪುರುಷ ಪ್ರಧಾನ ವ್ಯವಸ್ಥೆಯ ಉಗ್ರ ಸಮರ್ಥಕ ಸ್ತ್ರೀ ಪಾತ್ರಗಳ ಕೋಪ, ದ್ವೇಷವನ್ನು ಸಹಿಸಿಕೊಂಡು ಅವಮಾನದಿಂದ ಏಕಾಂಗಿಯಾಗಿ ಮರೆಯಾಗುತ್ತಿದ್ದ ಸ್ಮಿತ ನಿಜ ಜೀವನದಲ್ಲೂ ಅದೇ ರೀತಿಯ ಏಕಾಂಗಿತನಕ್ಕೆ ಬಲಿಯಾದವರು.

ಈ ಅಪ್ರತಿಮ ಪ್ರತಿಭಾವಂತೆ, ಸುಂದರಿ, ಹೃದಯವಂತ ಕಲಾವಿದೆಯನ್ನು ಭಾರತದ ಚಿತ್ರರಂಗ stereotypical characters ಗಳಲ್ಲೆ ಕಳೆದು ಹಾಕಿತು. ಒಂಟಿಯಾಗಿಸಿತು.

ಬೇರೆ ಜನಪ್ರಿಯ ನಟಿಯರಾಗಿದ್ದರೆ ಅರವತ್ತು ತುಂಬಿದ ಕಾರಣಕ್ಕೆ ಶುಭಾಶಯಗಳ ಹೊಳೆಯೆ ಹರಿದಿರುತ್ತಿತ್ತು.
ಸಿಲ್ಕ್ ಸ್ಮಿತಾ ಅವರಿಗೆ ಶುಭಾಶಯಗಳನ್ನು ಹೇಳುವುದಕ್ಕೂ ಹಿಂದು ಮುಂದು ನೋಡುವ ಮಡಿವಂತ ಸಮಾಜದಲ್ಲಿ ಇವತ್ತಿಗೂ ನಾವಿದ್ದೇವೆ.

ಆದರೆ ಆಕೆ ಇವೆಲ್ಲವನ್ನು ಮೀರಿ ಹೋಗಿ ಅಮರರಾಗಿದ್ದಾರೆ.


ಎಲ್.ಎಚ್.ಲಕ್ಷ್ಮಿನಾರಾಯಣ

ಧಾರಾವಾಹಿ ಆವರ್ತನ ಅದ್ಯಾಯ-45 ಡಾ. ನರಹರಿಯು ಗೋಪಾಲನನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಅಲ್ಲಿಂದ ಹೊರಟ ಸುಮಿತ್ರಮ್ಮನ ತಲೆಯಲ್ಲಿ ತಮ್ಮ ಮನೆಯ ದಾರಿಯುದ್ದಕ್ಕೂ ನರಹರಿಯ ಮಾತುಗಳೇ ತಿರುಗುತ್ತಿದ್ದವು. ಯಾವುದನ್ನು ನಂಬಬೇಕು? ಯಾರನ್ನು ನಂಬಬೇಕು? ಈ ನರಹರಿ ಹೇಳುವ ಮಾತಿನಲ್ಲೂ ಸತ್ಯವಿದೆ ಎಂದುಕೊಂಡರೆ ಗುರೂಜಿಯವರ ವೇದಾಂತವು ಬೇರೊಂದು ಕಥೆಯನ್ನು ಹೇಳುತ್ತದೆಯಲ್ಲ! ಇವುಗಳಲ್ಲಿ ಯಾವುದು ಸರಿ, ಯಾವುದು ಸತ್ಯ? ಇಂಥ ಹತ್ತು ಹಲವು ನಂಬಿಕೆಗಳು ಹಾಗು ಪೂಜೆ, ಪುನಸ್ಕಾರಗಳ ವಿಚಾರಗಳಲ್ಲಾಗಲೀ ಅಥವಾ ಕುಟುಂಬದ, ಸಾಮಾಜದ ಯಾವುದೇ ವಿಷಯಗಳಲ್ಲಾಗಲೀ ಗಂಡಸರಿಗಿಂತ ಹೆಂಗಸರೇ ಯಾಕೆ […]

ಸಿರಿವೆನ್ನಲ ಸೀತಾರಾಮ ಶಾಸ್ತ್ರಿ ನೆನಪಿಗೆ.

ಶ್ರೀಸಿರಿವೆನ್ನಲ‌ ಸೀತಾರಾಮಶಾಸ್ತ್ರಿಯವರುತೆಲುಗಿನಖ್ಯಾತಚಲನಚಿತ್ರಗೀತೆರಚನಾಕಾರರು. ಇವರು೩೦-೧೧-೨೦೨೧ರಂದುಮರಣಿಸಿದರು. ಈಸಂತಾಪದಸಂದರ್ಭದಲ್ಲಿಅವರಿಗೆಅವರದೇಗೀತೆಯಅನುವಾದದಮೂಲಕಸಂಗಾತಿ ಪತ್ರಿಕೆಶ್ರದ್ಧಾಂಜಲಿಅರ್ಪಿಸುತ್ತದೆ

ಶಿಶುಗೀತೆ

ಶಿಶುಗೀತೆ ಚೈತ್ರಾ ತಿಪ್ಪೇಸ್ವಾಮಿ ಗಾಳಿ ಬೇಕಣ್ಣ ನಮಗೆ ಗಾಳಿಯು ಬೇಕಣ್ಣಬದುಕಲು ನಮಗೆ ಗಾಳಿಯು ಬೇಕಣ್ಣ||ಪ|| ಗಾಳಿಯಿಲ್ಲದೆ ಯಾರು ಉಳಿಯರುಅದುವೆ ನಮ್ಮ ಪ್ರಾಣವಾಯುವುಕ್ಷಣವೂ ತೊರೆದು ಉಳಿಯಲಾರೆವು.||ಗಾಳಿಯು|| ಶುದ್ಧ ಗಾಳಿಯು ದೇಹಕೆ ಉತ್ತಮಪರಿಸರದಿಂದಲೆ ಗಾಳಿಯ ಹರಿವುಚೆಂದದಿ ಗಿಡಮರ ಬೆಳೆಸಬೇಕಣ್ಣ.|| ಗಾಳಿಯು|| ಮೀರಿದ ಜನಸಂಖ್ಯೆ ಭೂಮಿ ಮೇಲೆಹೆಚ್ಚಿದೆ ವಾಹನ ರಸ್ತೆಯ ತುಂಬಾಕೆಟ್ಟಿದೆ ಗಾಳಿ ವಿಷಾನಿಲ ಸೇರುತ.||ಗಾಳಿಯು|| ಮಲಿನಗೊಂಡ ಗಾಳಿಯ ಸೇವಿಸಿಶ್ವಾಸ ರೋಗಗಳು ಬಂದವು ನೋಡಿಮಲಿನ ತಡೆದರ ನಮಗೆ ಉಳಿವು.‌‌‌‌ ||ಗಾಳಿಯು||

ಸರಣಿ ಬರಹ ಅಂಬೇಡ್ಕರ್ ಓದು ಭಾಗ-4 ಬಾಲ್ಯ ಉನ್ನತ ವ್ಯಾಸಂಗ  ತಂದೆಯ ಸಾವು ಅಂಬೇಡ್ಕರರಿಗೆ ಮರೆಯಲಾಗದ ದು:ಖವನ್ನುಂಟು ಮಾಡಿತು. ತಂದೆಯ ನೆನಪು ಮರುಕಳಿಸುತಿತ್ತು. ಆದರೂ ಅವರಲ್ಲಿ ಉನ್ನತ ವ್ಯಾಸಂಗದ ಮಹತ್ಪಾಕಾಂಕ್ಷೆ ಉತ್ಕಟಗೊಂಡಿತು. ಅದೇ ಸಂದರ್ಭದಲ್ಲಿ ಬರೋಡಾದ ಮಹಾರಾಜರು ನಾಲ್ಕು ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಕಳುಹಿಸಿ ಕೊಡುವುದಾಗಿ ಪ್ರಕಟಣೆ ಹೊರಡಿಸಿದ್ದರು. ಪ್ರಕಟಣೆಯಲ್ಲಿ ಕರಾರೊಂದನ್ನು ಹಾಕಿದ್ದರು ಅದೇನೆಂದರೆ ಮಹಾರಾಜರು ಕೊಡುವ ಶಿಷ್ಯವೇತನವನ್ನು ವಿದ್ಯಾಭ್ಯಾಸಕ್ಕಾಗಿ ಮಾತ್ರ ಉಪಯೋಗಿಸಿಕೊಳ್ಳಬೇಕು, ಬೇರೆಯದಕ್ಕೆ ಹಣ ಬಳಸಿಕೊಳ್ಳುವಂತಿಲ್ಲಅಲ್ಲದೆ ವಿದ್ಯಾರ್ಜನೆ ಪೂರ್ಣಗೊಳಿಸಿ ಬಂದನಂತರ ಬರೋಡಾ […]

ಧಾರಾವಾಹಿ ಆವರ್ತನ ಅದ್ಯಾಯ-44 ಏಕನಾಥರು ಒಂದು ಕಾಲದಲ್ಲಿ ತಮ್ಮನ್ನು ಕಾಡುತ್ತಿದ್ದಂಥ ದಟ್ಟದಾರಿದ್ರ್ಯವನ್ನು ಮೀರಿ ಬೆಳೆದಿದ್ದರು. ಹಾಗಾಗಿ ಅಂದು, ‘ಹೊಟ್ಟೆಪಾಡಿಗೊಂದು ಉದ್ಯೋಗ!’ ಎಂದಿದ್ದ ಅವರ ಆ ಬೀಜಮಂತ್ರದ ಅರ್ಥವು ಈಗ ಸಂಪೂರ್ಣ ಬದಲಾಗಿ, ‘ಆಗರ್ಭ ಶ್ರೀಮಂತಿಕೆ ಮತ್ತು ಸಾಮಾಜಿಕ ಪ್ರತಿಷ್ಠೆಯೇ ತಮ್ಮ ಜೀವನದ ಪರಮೋಚ್ಛ ಗುರಿ!’ ಎಂದಾಗಿತ್ತು. ಆದ್ದರಿಂದ ತಮ್ಮ ಹಠಯೋಗದಂಥ ಜೀವನಶೈಲಿಯಿಂದ ತಾವು ಅಂದುಕೊಂಡಂತೆಯೇ ಭರ್ಜರಿ ಯಶಸ್ಸು ಗಳಿಸಿದ್ದರು. ಆವತ್ತು ಒಂದು ಹೊತ್ತಿನ ತುತ್ತಿಗೂ ಗತಿಯಿಲ್ಲದ ಕಾಲದಲ್ಲಿ ಏನೇನು ಬಯಸಿದ್ದರೋ ಅವೆಲ್ಲವೂ ಇಂದು ಅವರ ಪಾದಗಳ ಬಳಿ […]

ಸರಣಿ ಬರಹ ಅಂಬೇಡ್ಕರ್ ಓದು ಭಾಗ-3 ಬಾಲ್ಯ [1:03 pm, 24/11/2021] ಸಂಗಾತಿ ಸಾಹಿತ್ಯ ಪತ್ರಿಕೆ: ರಾಮಜಿ ಸಕ್ಪಾಲರು ಮಗನನ್ನು ಹೆಚ್ಚು ಹೆಚ್ಚು ಓದಿಸಬೇಕು, ಸಮಾಜಕ್ಕೆ ಬೆಳಕು ನೀಡುವಂತ ದೊಡ್ಡ ವ್ಯಕ್ತಿಯನ್ನಾಗಿ ಮಾಡಬೇಕೆಂಬ ಮಹಾದಾಶೆಯೊಂದಿಗೆ ಕಷ್ಟ ಪಟ್ಟು ಕಲಿಸಿದರು. “ಬೆಳೆವ ಸಿರಿ ಮೊಳಕೆಯಲ್ಲಿಯೇ ಕಾಣು”ವಂತೆ ಭೀಮನು ಶ್ರಮ ಪಟ್ಟು ಓದಿ 1907 ರಲ್ಲಿ ಮ್ಯಾಟ್ರಿಕ್ ಪರೀಕ್ಷೆ ಪಾಸು ಮಾಡಿದನು. ನಿಮ್ನ ವರ್ಗದ ಹುಡುಗನೊಬ್ಬ ಮಾಡಿದ ಮೊದಲ ಮಹಾಸಾಧನೆ ಇದಾಗಿತ್ತು. ಅಸ್ಪೃಶ್ಯ ಬಾಲಕನು ಆ ಕಾಲದಲ್ಲಿ ಮ್ಯಾಟ್ರಿಕ್ ಪರೀಕ್ಷೆ […]

ಕಂಪೆನಿ ಸರಕಾರವೂ ಹಾಗೂ ರೈತರ ದಂಗೆಯೂ

ಲೇಖನ ಕಂಪೆನಿ ಸರಕಾರವೂ ಹಾಗೂ ರೈತರ ದಂಗೆಯೂ ಹಾರೋಹಳ್ಳಿ ರವೀಂದ್ರ ರೈತ ಚಳವಳಿಯು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸಮಕಾಲೀನ ವ್ಯವಸ್ಥೆಯ ಪ್ರತಿಭಟನೆಯೊಡನೆ ಹುಟ್ಟಿಕೊಂಡ ಒಂದು ಸಂಘಟನೆ.  ಭಾರತದಲ್ಲಿ ಇಲ್ಲಿಯವರೆವಿಗೂ ಸುಮಾರು ನೂರಾರು ರೈತ ಚಳವಳಿಗಳು ನಡೆದಿವೆ. ಮೊಘಲರ ಕಾಲದಿಂದ ಈವರೆವಿಗೂ ಭಾರತದಲ್ಲಿ 77 ರೈತ ಹೋರಾಟಗಳ ದಾಖಲೆಯನ್ನು  ಕ್ಯಾಥಲೀನ್ ಗಾಫೆ ಎಂಬಾಕೆ ಕೊಟ್ಟಿದ್ದಾಳೆ.  ಇಂತಹ  ಚಳವಳಿಗಳನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ, 1. ಪುನರುತ್ಥಾಪನ ದಂಗೆಗಳು 2. ಧಾರ್ಮಿಕ ಚಳವಳಿಗಳು 3. ಸಮಾಜನಿಷ್ಠ ದರೋಡೆಗಳು 4. ಭಯೋತ್ಪಾದಕ […]

ಮತ್ತೆಮಳೆ ಹೊಯ್ಯುತ್ತಿದೆ

ತಳಮಳ ಎಬ್ಬಿಸುವ  ಒಳ ಮನಸನ್ನು ಯಾವ ರೀತಿಯಲ್ಲಿ ಸಂತೈಸುವುದು? ಕಳೆದು ಹೋದ ಮಳೆಯ ಪರಿಮಳವನ್ನು ಮತ್ತೊಮ್ಮೆ ಹೇಗೆ ಆಗ್ರಾಣಿಸುವುದು?

ಧಾರಾವಾಹಿ ಆವರ್ತನ ಅದ್ಯಾಯ-43 ಗುರೂಜಿಯವರ ಧಾರ್ಮಿಕ ಕಾರ್ಯಕ್ಕೆ ಸುಂದರವಾಗಿ ರಂಗೋಲಿಯಿಟ್ಟು ಶೃಂಗಾರಗೊಂಡ ಜಾಗದಲ್ಲಿದ್ದ ದೈತ್ಯ ಮರಗಳು ತಂತಮ್ಮ ಅಂತ್ಯ ಕಾಲ ಸಮೀಪಿಸಿತೆಂಬುದನ್ನು ನೆನೆದು ಭಯ, ದುಃಖದಿಂದ ತರತರ ಕಂಪಿಸುತ್ತ ಕೆಲವುಕ್ಷಣ ಆಮ್ಲಜನಕವನ್ನು ಸ್ರವಿಸುವುದನ್ನೇ ಮರೆತು ಇಂಗಾಲವನ್ನು ಕಕ್ಕುತ್ತಿವೆಯೇನೋ ಎಂಬಂತೆ ಅಲ್ಲಿನ ಪರಿಸರವು ಒಮ್ಮೆಲೇ ಮಲೀನಗೊಂಡಿತು. ಅದರೊಂದಿಗೆ ಕಾಡಿನ ಸೆರಗಿನಲ್ಲಿದ್ದ ಸರೋವರವೂ ತಲ್ಲಣಿಸುತ್ತ, ಸ್ಫಟಿಕದಂಥ ಜಲರಾಶಿಯು ಮಂದವಾಗಿ ಮೇಲ್ಪದರದಲ್ಲಿ ಹಳದಿಮಿಶ್ರಿತ ಕೆಂಬಣ್ಣದ ದಟ್ಟ ಪದರವೊಂದು ಸೃಷ್ಟಿಯಾಗಿ ಸೇವಿಸಲಯೋಗ್ಯವಾಗಿಬಿಟ್ಟಿತು. ಗುರೂಜಿಯವರ ಚಟುವಟಿಕೆ ನಡೆಯಲಿದ್ದ ಸ್ಥಳದ ಒಂದು ಮೂಲೆಯಲ್ಲಿ ನಿಂತುಕೊಂಡು ಅವರನ್ನು ಕಾಯುತ್ತಿದ್ದ ಭೂಮಾಲಕರ ಮತ್ತು ಊರ ಭಕ್ತಾದಿಗಳ ಗುಂಪು ಅಲ್ಲಿ ಸೃಷ್ಟಿಯಾದ ವಿಷಮ ವಾತಾವರಣವನ್ನು ಕಂಡು ತೀವ್ರ ಗಾಬರಿಗೊಂಡಿತು. ಕೆಲವರಿಗೆ ಕಾಡಿಗೆ ಕಾಡೇ ನೊಂದು ರೋಧಿಸುವಂತೆಯೂ ಭಾಸವಾಗಿ ಭಯವಾಯಿತು.      ಇತ್ತ ಹುಚ್ಚೆದ್ದು ಧಾವಿಸುತ್ತಿದ್ದ ಬಿರುಗಾಳಿಯು ರಪ್ಪನೆ ಜನರ ಗುಂಪಿನತ್ತ ನುಗ್ಗಿತು. ತಾನು ಬಾಚಿ ಹೊತ್ತು ತಂದಿದ್ದ ಕಸಕಡ್ಡಿ ಕಶ್ಮಲಗಳನ್ನೆಲ್ಲ ಕ್ರೋಧವೆತ್ತಂತೆ ರಪರಪನೇ ನೆರೆದವರ ಮೇಲಪ್ಪಳಿಸುತ್ತ ಸುಳಿಯಿತು. ಆ ಜನರು ಭೀತಿಯಿಂದ ದಿಕ್ಕುದೆಸೆ ತಪ್ಪಿ ಓಡುತ್ತ ಸಿಕ್ಕಸಿಕ್ಕ ಮರಗಿಡಗಳ ಮರೆಗೆ ಸರಿದು ಅಡಗಿಕೊಳ್ಳತೊಡಗಿದರು. ಅಷ್ಟರಲ್ಲಿ ಗುರೂಜಿಯವರ ತಂಡವೂ ಕಾಡಿನೊಳಗೆ ಅಡಿಯಿಟ್ಟಿತು. ಅವರನ್ನು ಕಂಡ ಬಿರುಗಾಳಿಯ ರಭಸವು ದುಪ್ಪಟ್ಟಾಗುವುದಕ್ಕೂ ನಂದಿಮರದ ದೊಡ್ಡ ಒಣ ರೆಂಬೆಯೊಂದು ಗುರೂಜಿಯವರ ನೆತ್ತಿಯ ನೇರಕ್ಕೆ ಮುರಿದು ಬೀಳುವುದಕ್ಕೂ ಸರಿಹೋಯಿತು. ಆದರೆ ಅದನ್ನು ತಟ್ಟನೆ ಗಮನಿಸಿದ ಗುರೂಜಿಯವರು ಹೌಹಾರಿ ಒಂದೇ ಉಸಿರಿಗೆ ಹಿಂದೆ ನೆಗೆದು ಅದೇ ವೇಗದಲ್ಲಿ ಹಿಂದಿರುಗಿ ಓಡಲಿದ್ದರು. ಆದರೆ ಅದು ಹೇಗೋ ಕಷ್ಟಪಟ್ಟು ಸಂಭಾಳಿಸಿಕೊಂಡು ನಿಂತರು. ಆದರೆ ಆಕ್ಷಣ ಅವರ ಗಟ್ಟಿ ಹೃದಯವನ್ನು ಯಾರೋ ಬಿರುಸಾಗಿ ತಿವಿದಂಥ ನೋವೊಂದು ಕಾಣಿಸಿಕೊಂಡಿತು. ಎದೆಯ ಭಾಗನ್ನು ರಪ್ಪನೆ ಅಮುಕಿ ಹಿಡಿದುಕೊಂಡು ಅವುಡುಗಚ್ಚಿ ನೋವು ನುಂಗಿದರು. ಬಿರುಗಾಳಿಯ ರೌದ್ರ ನರ್ತನ ತಣ್ಣಗಾಗುವವರೆಗೆ ಮರವೊಂದನ್ನು ಬಿಗಿಯಾಗಿ ಹಿಡಿದು ನಿಂತು ಸುಧಾರಿಸಿಕೊಂಡರು.    ಅತ್ತ ಅಲ್ಲೊಂದು ತಮಾಷೆಯೂ ನಡೆದಿತ್ತು. ರಾಘವ ಉಟ್ಟಿದ್ದ ಬಿಳಿಯ ಪಂಚೆಯೂ ಹೆಗಲ ಮೇಲೆ ಹೆಮ್ಮೆಯಿಂದ ನೇತಾಡಿಸಿಕೊಂಡಿದ್ದ ಉತ್ತರೀಯವೂ ಬಿರುಗಾಳಿಗೆ ಸಿಲುಕಿ ಹಾರಿ ಹೋಗಿ ಮರದ ಎತ್ತರದ ಕೊಂಬೆಯೊಂದಲ್ಲಿ ನೇತಾಡುತ್ತಿದ್ದವು. ಅವನ ಅವಸ್ಥೆಯನ್ನು ಕಂಡ ಕೆಲವರಿಗೆ ಅಂಥ ಸ್ಥಿತಿಯಲ್ಲೂ ನಗು ಉಕ್ಕಿತು.  ಅವರೆಲ್ಲ ಮುಸಿಮುಸಿ ನಕ್ಕಾಗ ಉಳಿದವರೂ ಜೋರಾಗಿ ನಗತೊಡಗಿದರು. ಆಗ ರಾಘವನಿಗೆ ತೀರಾ ಅವಮಾನವೆನಿಸಿತು. ಆತ ಕೂಡಲೇ ಪಂಚೆಯಿದ್ದ ಮರವೇರಲು ಮುಂದಾದ. ಆದರೆ ಮತ್ತೇನೋ ಹೊಳೆದು ಕಾರಿನತ್ತ ಓಡಿದ. ಅಲ್ಲಿದ್ದ ಹಳೆಯ ಪಂಚೆಯೊಂದನ್ನು ಉಟ್ಟುಕೊಂಡು ಹಿಂದಿರುಗಿದ.                                                                                *** ದೇವರಕಾಡಿನಲ್ಲಿ ಭುಗಿಲೆದ್ದ ಬಿರುಗಾಳಿಯು ಸ್ವಲ್ಪಹೊತ್ತಿನಲ್ಲಿ ನಿಧಾನಕ್ಕೆ ಬಿಸಿಯೇರಿ ಕಾಡಿನೊಳಗಿನ ಮನುಷ್ಯ ಕ್ರಿಮಿಗಳನ್ನೆಲ್ಲ ಉಸಿರುಗಟ್ಟಿಸಿ ಹೊರಗೋಡಿಸಲೆತ್ನಿಸಿತು. ಆದರೆ ಅಷ್ಟರಲ್ಲಿ ಗೂರೂಜಿಯವರ ಮಹತ್ವಾಕಾಂಕ್ಷೆಯೂ ಜಾಗ್ರತಗೊಂಡಿದ್ದರಿಂದ ಬಿರುಗಾಳಿಯು ಮೆಲ್ಲನೆ ತನ್ನ ತೀಕ್ಷ್ಣತೆಯನ್ನು ಕಳೆದುಕೊಂಡು ಕಣ್ಮರೆಯಾಯಿತು. ಪರಿಸ್ಥಿತಿ ಶಾಂತವಾಗುತ್ತಲೇ ಗುರೂಜಿಯವರು ಜೀರ್ಣೋದ್ಧಾರದ ನಾಂದಿಗೆ ಬಂದು ಸೇರಿದ್ದ ಭಕ್ತಾದಿಗಳನ್ನುದ್ದೇಶಿಸಿ ಮಾತಾಡಲಿಚ್ಛಿಸಿದರು. ‘ಉಙಂ…ಉಙಂ…!’ ಎಂದು ಗಂಟಲು ಸರಿಪಡಿಸಿಕೊಳ್ಳುತ್ತ ಎಲ್ಲರನ್ನೂ ಎಚ್ಚರಿಸಿದರು. ಆಗ ಜನರೂ ಅಷ್ಟರವರೆಗೆ ತಮ್ಮನ್ನು ಕಾಡುತ್ತಿದ್ದ ಆತಂಕವನ್ನು ಬದಿಗೊತ್ತಿ ಗುರೂಜಿಯವರ ಮಾತುಗಳನ್ನು ಆಲಿಸತೊಡಗಿದರು. ‘ನೋಡಿ ಭಕ್ತಾದಿಗಳೇ… ಈಗ ಸ್ವಲ್ಪಹೊತ್ತಿನ ಮುಂಚೆ ಈ ಪವಿತ್ರ ಸನ್ನಿಧಿಯಲ್ಲಿ ನಡೆದ ವಿಚಿತ್ರ ಘಟನೆಗೆ ನೀವೆಲ್ಲ ಸಾಕ್ಷಿಯಾಗಿದ್ದೀರಿ ಅಂತ ಹೇಳಲು ನಮಗೆ ಸಂತೋಷವಾಗುತ್ತಿದೆ. ಯಾವ ಮಹಾಶಕ್ತಿಯನ್ನು ನಾವು ಶ್ರದ್ಧಾಭಕ್ತಿಯಿಂದ ಪೂಜಿಸಿಕೊಂಡು ಬರಲು ಇಚ್ಛಿಸಿದ್ದೇವೋ ಅದೇ ಶಕ್ತಿಯು ಇವತ್ತು ನಮಗೆಲ್ಲರಿಗೂ ಎಂಥ ವಿಶೇಷ ಸ್ವಾಗತವನ್ನು ನೀಡಿತು ಎನ್ನುವುದನ್ನು ನೀವೆಲ್ಲ ಕಣ್ಣಾರೆ ನೋಡಿರುವಿರಿ. ಆದರೂ ನಿಮಗೆ ನಾವದನ್ನು ಸ್ವಲ್ಪ ವಿವರಿಸಿ ಹೇಳಬೇಕು. ನಮ್ಮೆಲ್ಲರ ಈ ನಿರ್ಧಾರದಿಂದ ನಾಗದೇವನಿಗೆ ಆದಂಥ ಅಪರಿಮಿತ ಸಂತೋಷವು ಬಿರುಗಾಳಿಯ ರೂಪದಲ್ಲಿ ಕಾಣಿಸಿಕೊಂಡರೆ ನಂದಿಮರದ ಒಣ ಗೆಲ್ಲೊಂದು…!’ ಎಂದು ಮಾತು ನಿಲ್ಲಿಸಿದವರು, ‘ಭಕ್ತಾದಿಗಳೇ ಗಮನವಿಟ್ಟು ಕೇಳಿಸಿಕೊಳ್ಳಿ! ನಾವು ಹೇಳುತ್ತಿರುವುದು ಗಟ್ಟಿಮುಟ್ಟಾದ ಹಸಿ ಗೆಲ್ಲಿನ ಬಗ್ಗೆ ಅಲ್ಲ…, ಒಣಗಿ ಕುಂಬಾದ ಗೆಲ್ಲು! ಅದು ಒಂದುವೇಳೆ ನಾಡಿದ್ದು ಜೀರ್ಣೋದ್ಧಾರದ ಸಮಯದಲ್ಲೆಲ್ಲಾದರೂ ಮುರಿದು ಬೀಳುತ್ತಿದ್ದರೆ ಎಂಥ ಅನಾಹುತವಾಗುತ್ತಿತ್ತು ಅಂತ ನೀವೇ ಊಹಿಸಿಕೊಳ್ಳಿ! ಅಂಥ ಕುಂಬು ರೆಂಬೆಯೊಂದು ನಮ್ಮೆಲ್ಲರ ಕಣ್ಣಮುಂದೆಯೇ ಮುರಿದು ಬಿದ್ದಿರುವುದು ಇಲ್ಲಿನ ದೈವಭೂತಗಳೂ ನಮ್ಮೆಲ್ಲರ ಮೇಲೆ ಇಟ್ಟಿರುವ ಕೃಪಾಕಟಾಕ್ಷಕ್ಕೆ ಸಣ್ಣದೊಂದು ಉದಾಹರಣೆ ಎಂದೇ ತಿಳಿಯಬೇಕು. ಆದ್ದರಿಂದ ಮುಂದೆ ನಡೆಯಲಿರುವ ಮಹತ್ಕಾರ್ಯಕ್ಕೆ ಇಲ್ಲಿನ ಸರ್ವಶಕ್ತಿಗಳ ಸಂಪೂರ್ಣ ಸಹಕಾರ ನಮಗಿದೆ ಎನ್ನುವುದೇ ಈ ಘಟನೆಯ ಒಳಾರ್ಥ. ಹಾಗಾಗಿ ನಮ್ಮ ಪಾಲಿಗೆ ಇದಕ್ಕಿಂತ ಶುಭಗಳಿಗೆ ಇನ್ನೊಂದು ಬರಲಾರದು. ಆದಷ್ಟು ಬೇಗ ಕೆಲಸ ಆರಂಭಿಸುವ ಬನ್ನಿ…!’ ಎಂದು ನಗುತ್ತ ಹೇಳಿದವರು ರಾಘವನತ್ತ ತಿರುಗಿ ಮುಂದಿನ ಕಾರ್ಯಕ್ಕೆ ಅಣಿ ಮಾಡುವಂತೆ ಸಂಜ್ಞೆ ಮಾಡಿದರು.    ರಾಘವನು ಕೂಡಲೇ ಜಾಗದ ಹಿರಿಯನೊಬ್ಬನನ್ನು ಕರೆದುಕೊಂಡು ನೀರು ತರಲು ಸಮೀಪದ ಮದಗದತ್ತ ಹೋದ. ಆದರೆ ಆ ಸರೋವರದ ನೀರು ಹಳದಿ ಬಣ್ಣಕ್ಕೆ ತಿರುಗಿತ್ತು. ಅಷ್ಟಲ್ಲದೇ ಯಾವುದೋ ಪ್ರಾಣಿಯೊಂದು ಸತ್ತು ಕೊಳೆತ ದುರ್ವಾಸನೆ ಬೀರುತ್ತಿದ್ದ ನೀರಿನ ಮೇಲೆ ಹಿಂಡುಹಿಂಡು ನೊಣಗಳು ಗುಂಯ್ಯಿಗುಟ್ಟುತ್ತಿದ್ದವು. ಅದನ್ನು ಕಂಡ ಆ ಹಿರಿಯನಿಗೆ ಆತಂಕವಾಯಿತು. ಎಂದೂ ಹೀಗೆ ಮಲೀನವಾಗದಿದ್ದ ನಿರ್ಮಲ ಸರೋವರಕ್ಕೆ ಇಂದೇನಾಯಿತು? ಎಂದು ಚಿಂತಿಸಿದವನು ರಾಘವನನ್ನು ತಡೆದು ಗುರೂಜಿಯವರಿಗೆ ವಿಷಯ ತಿಳಿಸಿ ಬರಲು ಸೂಚಿಸಿದ. ರಾಘವ ತಕ್ಷಣ ಹೋಗಿ ಗುರೂಜಿಯ ಕಿವಿಯಲ್ಲಿ ವಿಷಯವನ್ನರುಹಿದ. ಅದನ್ನು ಕೇಳಿದ ಗುರೂಜಿಯವರ ಮುಖವು ವಿವರ್ಣವಾಯಿತು. ಆದ್ದರಿಂದ ಅವರು ಕ್ಷಣಹೊತ್ತು ಧ್ಯಾನಮಗ್ನರಾಗಿಬಿಟ್ಟರು. ಬಳಿಕ ತಮ್ಮ ಚೀಲದಿಂದ ಮಣ್ಣಿನ ಸಣ್ಣ ಪೊಟ್ಟಣವೊಂದನ್ನು ತೆಗೆದು ಅವನ ಕೈಗಿತ್ತು,‘ಇದು ಮೂಲ ನಾಗನ ಹುತ್ತದ ಪ್ರಸಾದ. ಭಕ್ತಿಯಿಂದ ಪ್ರಾರ್ಥಿಸಿಕೊಂಡು ಮದಗಕ್ಕೆ ಚೆಲ್ಲಿ ಅದೇ ಜಾಗದ ನೀರನ್ನು ತೆಗೆದುಕೊಂಡು ಬಾ!’ ಎಂದು ಆಜ್ಞಾಪಿಸಿದರು. ರಾಘವ ಆ ಪ್ರಸಾದವನ್ನು ಕೊಂಡೊಯ್ದು ಹಾಗೆಯೇ ಮಾಡಿದ. ಆಶ್ಚರ್ಯ! ಆ ಮಣ್ಣಿನ ಪ್ರಸಾದ ಬಿದ್ದ ಜಾಗದಷ್ಟು ನೀರು ತಕ್ಷಣ ಶುದ್ಧವಾದಂತೆ ತೋರಿತು! ಇಬ್ಬರಿಗೂ ವಿಸ್ಮಯವಾಯಿತು. ಅವರು ಗುರೂಜಿಯವರ ಮಹಿಮೆಯನ್ನು ಕೊಂಡಾಡುತ್ತ ನೀರು ಹೊತ್ತುಕೊಂಡು ಹಿಂದಿರುಗಿದರು.   ಹಿಂದಿರುಗಿ ಬಂದ ಹಿರಿಯ ತಾನು ಕಂಡ ವಿಚಿತ್ರವನ್ನು ಉಳಿದ ಭಕ್ತಾದಿಗಳಿಗೂ ವಿವರಿಸಿದ. ಅವರೂ ಅಚ್ಚರಿಗೊಂಡು ಭಯಭಕ್ತಿಯಿಂದ ಪುಳಕಿತರಾದರು. ಗುರೂಜಿಯವರು ಭಕ್ತಾದಿಗಳ ಸಮ್ಮುಖದಲ್ಲಿ ತಮ್ಮ ಮುಂದಿನ ಚಮತ್ಕಾರವನ್ನು ತೋರಿಸಲು ಸಿದ್ಧರಾದರು. ಕಾಡಿನ ನಡುವೆ ಪ್ರಶಸ್ತ ಸ್ಥಳವೊಂದರಲ್ಲಿ ಹೋಮ ಕುಂಡವನ್ನು ಸ್ಥಾಪಿಸಲಾಯಿತು. ಗುರೂಜಿಯವರು ತಮ್ಮೊಂದಿಗೆ ಕರೆದು ತಂದಿದ್ದ ಏಳು ಮಂದಿ ಸಹಾಯಕರೊಂದಿಗೆ ಹೋಮ ಕುಂಡದೆದುರು ಪದ್ಮಾಸೀನರಾಗಿ ಕುಳಿತು ಮಂತ್ರೋಚ್ಛರಣೆಯಲ್ಲಿ ತೊಡಗಿದರು. ಸುಮಾರು ಅರ್ಧ ಗಂಟೆಯ ಕಾಲ ವಿಶೇಷ ಹೋಮವೊಂದು ನಡೆದು ಪೂರ್ಣಾಹುತಿ ಕೊಟ್ಟು ಎದ್ದು ನಿಂತ ಗುರೂಜಿಯವರು ತಮ್ಮ ಮೈತುಂಬಾ ಇಳಿಯುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡರು. ಬಳಿಕ ಮುಂದಿನ ವಿಶೇಷ ವಿಧಿಗೆ ಮುಂದಾದರು.    ಗುರೂಜಿಯವರ ಸಹಾಯಕರು ಅವರ ಇಂಗಿತವನ್ನು ಅರ್ಥೈಸಿಕೊಂಡು ಮುಂದೆ ಬಂದು ಅವರ ಅಕ್ಕಪಕ್ಕ ಕೈಮುಗಿದು ನಿಂತುಕೊಂಡರು. ಮುಂದಿನಕ್ಷಣ ಗುರೂಜಿಯವರು ನಾಗದೇವನೇ ಮೈಮೇಲೆ ಬಂದಂತೆ ಆವೇಶಭರಿತರಾಗಿ ನಡುಗತೊಡಗಿದರು. ಹತ್ತಾರು ಕಪ್ಪು ಮಚ್ಚೆಗಳಿಂದ ಕೂಡಿದ ಅವರ ಕೆನ್ನಾಲಿಗೆಯು ಕ್ಷಣಕ್ಷಣಕ್ಕೂ ಹೊರ ಒಳಗೆ ಹರಿದಾಡುತ್ತ ಭಯ ಹುಟ್ಟಿಸುವಂಥ ಹಾವಿನ ವರ್ತನೆಯಂತೆಯೇ ಭಕ್ತಾದಿಗಳಿಗೆ ಭಾಸವಾಯಿತು. ಎಲ್ಲರೂ ಭೀತರಾಗಿ ನೋಡುತ್ತಿದ್ದರು. ಅಷ್ಟರಲ್ಲಿ ಗುರೂಜಿಯವರ ಆವೇಶವು ಸ್ವಲ್ಪ ತಗ್ಗಿತು. ರಾಘವ ಅದನ್ನೇ ಕಾಯುತ್ತಿದ್ದವನಂತೆ ರಪ್ಪನೆ ಸಿಪ್ಪೆ ಸುಲಿದ ಕಾಯಿಯೊಂದನ್ನೂ, ಕತ್ತಿಯನ್ನೂ ತಂದು ಅವರ ಕೈಗಿತ್ತು ಗೋಣು ಬಗ್ಗಿಸಿ ಹಿಂದೆ ಸರಿದು ಕೈಕಟ್ಟಿ ನಿಂತುಕೊಂಡ. ಗುರೂಜಿಯವರು ಕಣ್ಣುಮುಚ್ಚಿ ವಿಚಿತ್ರ ಮಂತ್ರವೊಂದನ್ನು ತಾರಕಸ್ವರದಲ್ಲಿ ಪಠಿಸುತ್ತ ಕಾಯಿಯನ್ನು ಒಂದೇ ಏಟಿಗೆ ಎರಡು ಹೋಳಾಗಿ ಒಡೆದರು. ಬಳಿಕ ಊರ ಗುರಿಕಾರನತ್ತಲೂ ಜಾಗದ ವಾರಸುದಾರರತ್ತಲೂ ಮತ್ತು ಭಕ್ತಾದಿಗಳತ್ತಲೂ ಗಂಭೀರವಾಗಿ ದಿಟ್ಟಿಸುತ್ತ ಕಣ್ಣಸನ್ನೆಯಿಂದಲೇ ಅವರೆಲ್ಲರ ಅಪ್ಪಣೆ ಕೋರಿದರು. ಆಗ ಎಲ್ಲರೂ ಭಕ್ತಿಯಿಂದ ಅನುಮತಿ ಸೂಚಿಸಿದರು. ಗುರೂಜಿಯವರು ಅದೇ ಮಂತ್ರವನ್ನು ಮರಳಿ ಉಚ್ಛರಿಸುತ್ತ ಕಾಯಿಯ ಹೋಳುಗಳನ್ನು ಬೀಸಿ ಎದುರಿನ ಒಂದಷ್ಟು ದೂರಕ್ಕೆಸೆದರು. ಅದರಲ್ಲೊಂದು ಜುಟ್ಟಿನ ಹೋಳು ರುಮ್ಮನೆ ಹಾರಿ ಹೋಗಿ ರೆಂಜೆ ಮರದ ಬುಡಕ್ಕೆ ಬಡಿದು ಅಂಗಾತ ಬಿದ್ದಿತು.     ನೆರೆದ ಭಕ್ತಾದಿಗಳು ಮುಂದೆ ನಡೆಯಲಿದ್ದ ಸೋಜಿಗವನ್ನು ಕಾಣಲು ಉಸಿರು ಬಿಗಿದು ಹಿಡಿದು ನಿಂತಿದ್ದರು. ಗುರೂಜಿಯವರು ನಿಧಾನವಾಗಿ ಕಣ್ಣು ತೆರೆದರು. ಜಾಗಕ್ಕೆ ಸಂಬಂಧಿಸಿದ ಒಂದಿಬ್ಬರು ಮಧ್ಯ ವಯಸ್ಕರನ್ನು ತೀಕ್ಷ್ಣವಾಗಿ ದಿಟ್ಟಿಸಿದರು. ಗುರೂಜಿಯವರ ನೋಟಕ್ಕೆ ಆ ಬಡಪಾಯಿಗಳ ಹೃದಯಗಳು ಜೋರಾಗಿ ಬಡಿದುಕೊಳ್ಳಲಾರಂಭಿಸಿದವು. ಅಷ್ಟರಲ್ಲಿ ಗುರೂಜಿಯವರು, ‘ಭಯಪಡಬೇಡಿ ಭಕ್ತಾದಿಗಳೇ ಮುಂದೆ ಬನ್ನಿ…!’ ಎಂದು ಅವರಿಗೆ ಆಜ್ಞಾಪಿಸಿದರು. ಅವರು ಅಳುಕುತ್ತ ಮುಂದೆ ಬಂದರು. ‘ಓ ಅಲ್ಲಿಗೆ ಹೋಗಿ ಆ ರೆಂಜೆಮರದ ಕೆಳಗೆ ನಾಗನು ಎಸೆದ ಪ್ರಸಾದ ಬಿದ್ದಿದೆಯಲ್ಲಾ ಆ ಸ್ಥಳವನ್ನು ಪೂರ್ಣ ಭಕ್ತಿಯಿಂದ ಅಗೆಯಿರಿ. ಹ್ಞೂಂ, ಹೊರಡಿ!’ ಎಂದು ಒರಟಾಗಿ ಸೂಚಿಸಿದರು. ಅವರಿಬ್ಬರೂ ಗುರೂಜಿಯ ಸಾಕು ಪ್ರಾಣಿಗಳಂತೆ ತಲೆಯಲ್ಲಾಡಿಸಿ ಕೈಮುಗಿದು ಹೋಗಿ ಅಗೆಯತೊಡಗಿದರು. ಉಳಿದ ಭಕ್ತಾದಿಗಳು ಅವರ ಕ್ರಿಯೆಯನ್ನು ಭಯಾಸಕ್ತಿಯಿಂದ ನೋಡತೊಡಗಿದರು. ಕೆಲಹೊತ್ತಲ್ಲಿ, ಅಗೆಯುವವರ ಪಿಕ್ಕಾಸಿಗೆ ಕಲ್ಲಿನಂಥ ವಸ್ತುವೊಂದು ಟಣ್ಣೆಂದು ತಗುಲಿತು. ಅವರು ತಟ್ಟನೆ ಕೆಲಸ ನಿಲ್ಲಿಸಿ, ‘ಮುಂದೇನು…?’ ಎಂಬಂತೆ ಗುರೂಜಿಯವರನ್ನು ದಿಟ್ಟಿಸಿದರು. ಗುರೂಜಿಯವರು ಕೆಲಸ ಮುಂದುವರೆಸುವಂತೆ ಸನ್ನೆ ಮಾಡಿದರು. ಅವರು ಮರಳಿ ಅಗೆಯತೊಡಗಿದರು. ಸ್ವಲ್ಪಹೊತ್ತಿನಲ್ಲಿ ಹೊಂಡದಲ್ಲಿದ್ದ ನಾಗನಕಲ್ಲುಗಳೂ ಮತ್ತು ದೈವದ ಕುರುಹುಗಳೂ ಒಂದೊಂದಾಗಿ ಕಾಣಿಸಿಕೊಂಡವು. ಆಕೂಡಲೇ ಗುರೂಜಿಯವರು ಮುಂದೆ ಬಂದು ಅವರನ್ನು ತಡೆದು, ‘ಹ್ಞೂಂ ಹ್ಞೂಂ…! ನೀವು ಮುಟ್ಟಬೇಡಿ. ಇನ್ನು ನಿಮ್ಮ ಕೆಲಸವಾಯಿತು. ಮೇಲೆ ಬನ್ನಿ!’ ಎಂದು ಹೇಳಿ ರಾಘವನನ್ನು ಕರೆದು ಆ ಕಲ್ಲುಗಳನ್ನು ಹೊರಗೆ ತೆಗೆದಿರಿಸಿದರು. ಆಗ ಊರ ಜನರೂ ಜಾಗದ ಮಾಲಕ ತಂಡವೂ ವಿಸ್ಮಯದಿಂದ ಮೂಕರಾಗಿ ಆ ಕಲ್ಲುಗಳಿಗೂ, ಗುರೂಜಿಯವರ ಪಾದಗಳಿಗೂ ದಡಬಡನೇ ಸಾಷ್ಟಾಂಗ ಬಿದ್ದರು. ‘ಹ್ಞೂಂ! ಇಲ್ಲಿಗೆ ನಮ್ಮ ಕೆಲಸ ಮುಗಿಯಿತು. ದೇವರು ದೊಡ್ಡವನು. ಎಲ್ಲರಿಗೂ ಕಾರಣಿಕವನ್ನು ತೋರಿಸಿಕೊಟ್ಟ! ಇನ್ನು ಈ ಸ್ಥಳದಲ್ಲಿ ಅವನನ್ನು ಮತ್ತು ಅವನ ಪರಿವಾರವನ್ನು ನಂಬುವುದು, ಬಿಡುವುದು ನಿಮಗೆ ಸೇರಿದ್ದು!’ ಎಂದ ಗುರೂಜಿಯವರು ಹೊರಡಲನುವಾದರು. ಆಗ ಜಾಗ ವಾರಿಸುದಾರರಿಗೂ ಭಕ್ತಾದಿಗಳಿಗೂ ಆತಂಕವೆದ್ದಿತು. ಅವರೆಲ್ಲ ಕೆಲಹೊತ್ತು ತಂತಮ್ಮೊಳಗೆ ಚರ್ಚಿಸಿಕೊಂಡರು. ಕೊನೆಯಲ್ಲಿ ಗುರಿಕಾರನು ಮುಂದೆ ಬಂದು ಗುರೂಜಿಯವರನ್ನು ಕುಳಿತುಕೊಳ್ಳಲು ವಿನಂತಿಸಿ, ಜೀರ್ಣೋದ್ಧಾರದ ಮಾತುಕತೆಗೆ ಬೇಡಿಕೊಂಡ. ಅದರಿಂದ ಗುರೂಜಿಯವರು ಒಳಗೊಳಗೇ ಆನಂದಪಟ್ಟರು. ಎಲ್ಲರನ್ನೂ ಕರೆದು ತಮ್ಮೆದುರು ಕುಳ್ಳಿರಿಸಿಕೊಂಡರು. ಅವರಲ್ಲಿ ಅನೇಕರನ್ನು ಆಯ್ದು, ‘ಭಾಗಿವನ ನಾಗಬನ ಜೀರ್ಣೋದ್ಧಾರ ಸಮಿತಿ!’ ಎಂಬ ತಂಡವನ್ನು ರಚಿಸಿದರು. ಅದರಲ್ಲೂ ಮೂರು ಪಂಗಡವನ್ನು ಮಾಡಿದರು. ಒಂದನ್ನು ಹಣಕಾಸು ಹೊಂದಿಸಲು ಮತ್ತೊಂದನ್ನು ವ್ಯವಹಾರ ನಿರ್ವಹಿಸಲು ನೇಮಿಸಿದರು. ನಾಗಬನ ಜೀರ್ಣೋದ್ಧಾರದ ಉಸ್ತುವಾರಿಯನ್ನು ಉಳಿದೊಂದು ತಂಡಕ್ಕೊಪ್ಪಿಸಿದರು. ಮುಂದಿನ ಕೆಲಸಕ್ಕೆ ಸದ್ಯದಲ್ಲೇ ‘ಕೆಸರುಗಲ್ಲು ಹಾಕುವ ಭರವಸೆಕೊಟ್ಟು ಎಲ್ಲರಿಗೂ ಆಶೀರ್ವಚನ ನೀಡಿ ಹಿಂದಿರುಗಿದರು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್‍ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ […]

Back To Top