Category: ಕಾವ್ಯಯಾನ

ಕಾವ್ಯಯಾನ

ನಿತ್ಯ ಮುನ್ನುಡಿ ಕವಿತೆ

ಸ್ಮಿತಾ ಭಟ್ ಈ ದಿನ ಹೊಸದೊಂದು ಕವಿತೆಗೆ ಮುನ್ನುಡಿಯಾದರೂ ಬರೆಯಲೇ ಬೇಕುಮುನ್ನೆಡೆಗೆ ಬರುವ ಹಲವು ವಿಚಾರಗಳ ನಡುವೆಯೂ . ಅರೇ,!ಎಷ್ಟು ಚಂದದ ಸಾಲೊಂದು ಹುಟ್ಟಿದೆಈ ಕೊಗಿಲೆಯ ಉಯಿಲಿಗೆಇಂದು ಹುರುಪಿದೆ ನೊಡು. ಸುತ್ತುವ ಸಾಲುಗಳಿಗೀಗಹೊಸ ಭಾವಗಳ ಅಲಂಕಾರಉಪಹಾರದ ಗಡಿಬಿಡಿಯಲ್ಲಿಉಪಯೋಗಿಸಲಾಗದೇ ಉಳಿದೇ ಬಿಡುತ್ತದೆ. ಮೈಮುರಿದು ಏಳುವಾಗಿನ ತೀವ್ರತೆಗೆತಿಂಡಿ ಪಾತ್ರೆಗಳ ಗಲಬರಿಸುವಾಗ ಸ್ವಲ್ಪ ಕುಂದಾಗಿದೆ. ಸ್ನಾನದ ಮನೆಯಲ್ಲಿ ಮತ್ತೆ ನೆನಪಾಗುವಅದೇ ಸಾಲುಗಳ ಮುಂದುವರಿದ ಭಾಗಕನ್ನಡಿಯ ಮುಂದೆ ಕರಗಿ,ಅಡುಗೆ ಮನೆಯಿಂದಸೀದಿದ ವಾಸನೆಯೊಂದುಮೂಗಿಗೆ ರಾಚಿ,ಮುದ್ದಾದ ಸಾಲುಗಳೆಲ್ಲ ಈಗ ಕಮಟು. ಸಿಡಿಮಿಡಿಯ ಮನಸುಇಳಿವ ಕಣ್ಣಾಲಿಗಳನೂ ತಡೆದು […]

ಗಝಲ್

ರತ್ನರಾಯ ಮಲ್ಲ ಕೋಟೆಯಲ್ಲಿ ಕುಂತಿರುವೆ ಬರುವವರೆಲ್ಲ ಬಂದುಬಿಡಿಹಸಿವಿನಿಂದ ಬಳಲುತಿರುವೆ ತಿನ್ನುವವರೆಲ್ಲ ತಿಂದುಬಿಡಿ ಬುದ್ಧಿಮಾತುಗಳು ಬುದ್ಧಿಭ್ರಮಣೆಯಲಿ ಕೊಳೆಯುತಿವೆಜೋಳಿಗೆಯು ಹರಿದಿದೆ ನೋಟುಗಳಿಂದ ತುಂಬಿಸಿಬಿಡಿ ಭೂಷಣವಾಗಿದ್ಧ ನಾಚಿಕೆಯ ಪರದೆಯನ್ನು ಎಸೆದಿರುವೆನೀವು ಬಂದ ಕೆಲಸವನ್ನು ಮುಗಿಸಿಕೊಂಡು ಹೋಗಿಬಿಡಿ ಪೂಜೆ-ಪುನಸ್ಕಾರದ ಜೊಳ್ಳು ಮೌಲ್ಯಗಳು ಬೇಡವಾಗಿವೆನಮ್ಮ ಪಾಡಿಗೆ ನಮಗೆ ಸುಖವಾಗಿ ಇರಲು ಬಿಟ್ಟುಬಿಡಿ ಹಸಿಮಾಂಸ ತಿನ್ನುವ ರಣಹದ್ದುಗಳ ಪರಪಂಚವಿದುಅನ್ನ ತಿನ್ನುವುದನ್ನು ಕಲಿತು ನೆಮ್ಮದಿಯಾಗಿ ಇದ್ದುಬಿಡಿ **************

ಶೂನ್ಯದುಂಗುರ….

ಶಿವಲೀಲಾ ಹುಣಸಗಿ ಅರಿವಿಗೆ ಬಾರದ ಕ್ಷಣ ನೆನೆದುಭಯದ ನಡುವೆ ನಲುಗುತಿವೆಹಿಂಡಿ ಹಿಪ್ಪೆಯಾದ ಮನಗಳುಆದ್ರತೆಗೊಂದು ಭದ್ರತೆಯಿಲ್ಲದೆಅಂಜಿಕೆಯ ಹಿನ್ನೋಟ ತಲೆ ಕೆಳಗೆಬಿಂಬಗಳ ಮೆಲುಕಿನ ಶರಣಾಗತಿಗೊತ್ತು ಗುರಿಯಿಲ್ಲದ ಮೌನಕೆಕೊರಳೊಡ್ಡಿ ನೇಣಿಗೇರಿದವರೆಲ್ಲಥಟ್ಟನೆ ಪ್ರತ್ಯಕ್ಷವಾದ..ಪ್ರೇತಾತ್ಮದಂತೆನರಕಗಳು ಅಂತಸ್ತಿನ ಅರಮನೆಯಉತ್ಸವ ಮೂರ್ತಿಗಳಾಗುವಾಗೆಲ್ಲಬಿಕ್ಕಳಿಕೆಗಳು,ನೀರಿಳಿಯದಾ ಗಂಟಲಲ್ಲಿಉಸಿರ ಬಿಗಿದಾಟಕೆ ಹರಕೆಯ ಜಪತಪನೆತ್ತಿಗಾದ ಗಾಯಕೆ ಸುಣ್ಣದಾ ಶೂಚಿತ್ತದಲ್ಲಿ ಮೂಡಿದ ನಕ್ಷತ್ರಗಳೆಲ್ಲವೂಬಾನ ಹುಡುಕಿ ಹೊರಟಂತೆಮಾನಗಳೆಲ್ಲ ಬಿಕರಿಯಾಗಿಹವುಮಾರುಕಟ್ಟೆಗೂ ಲಗ್ಗೆಯಿಡದೆಸಂದಿಗೊಂದಿಗಳಲ್ಲಿ ಅಡಗಿರುವಗಿರಾಕಿಗಳಿಗೇನು ಕೊರತೆಯಿಲ್ಲಮಾಂಸದ ಮುದ್ದೆ ಯಾವುದಾರೇನುಹರೆಯದಲಿ ಮಾಗಿರಬೇಕು ಅಷ್ಟೇತುಟಿಕಚ್ಚಿ ನರಳುವಾಗೆಲ್ಲ ಟೊಂಕದಾಡಾಬು ಸಡಿಲವಾಗಿ ಕಳಚಿದಂತೆಮನಸಿಗೆ ರುಚಿಸದಿದ್ದರು ಲೋಭವಿಲ್ಲದೇಹದಂಗಗಳಿಗೆ ಮೋಹದ‌ ಉಡುಗೊರೆಇಳೆಯ ಸೇರುವ ಕಾಯ ನಿರ್ಮೊಹಿಮಣ್ಣಾದವರ ಚರಿತ್ರೆ ಅರಹುವವರಿಲ್ಲಸಾವು…ಎಂದೆಂದಿಗೂ […]

ನಾನೋರ್ವ ಕವಿ

ಪ್ರಕಾಶ್ ಕೋನಾಪುರ ನಾನೇನು ಮಾಡಲಿ ನಾನೋರ್ವ ಕವಿಕವಿತೆ ಬರೆಯುವುದೇ ನನ್ನ ಕಾಯಕಅಕ್ಷರಗಳ ಅಭ್ಯಾಸದಲಿ ರೂಪಕಗಳಮೋಹಪಾಶದಲಿ ಪ್ರತಿಮೆಗಳ ಪೇರಿಸಿಭಾವಸನ್ನೀಯಲ್ಲೀ ತೇಲಾಡುವ ಕವಿ ಮೊಗ್ಗು ಹೂ ಹಣ್ಣು ದುಂಬಿ ತರುಲತೆಕಾಗೆ ಗುಬ್ಬಿ ಗಿಳಿವಿಂಡು ಪಾರಿವಾಳಮೊಲ ಹಸು ಕರು ನಾಯಿ ನರಿ ಕುರಿ ತೋಳನದಿ ಬೆಟ್ಟ ಕಾನನ ಸೂರ್ಯ ಚಂದ್ರ ಆಕಾಶಬೈಗು ಬೆಳಗು ಸೃಷ್ಟಿಯ ಸೊಬಗು ವರ್ಣಿಸಿ ವರ್ಣಿಸಿಕವಿತೆಗಳ ಮಹಾಪೂರವೇ ಹರಿಸಿಯಾಯ್ತು ಹೆಣ್ಣಿನ ಮೂಗು ತುಟಿ ಕಟಿ ಕದಪು ಮುಂಗುರುಳುಎದೆಕಳಸ ನಾಭಿ ನಡ ನೀತಂಬ ಕೋಮಲ ಪಾದಪಡುವ ಪಾಡು ತ್ಯಾಗ ಸಹನೆ […]

ಮಳೆಹಾಡು-4

ಆಶಾ ಜಗದೀಶ್ ಒಂದು ತಣ್ಣನೆಯ ರಾತ್ರಿಮಳೆಗೆಅದೆಷ್ಟೋ ವರ್ಷಗಳ ತಪಸ್ಸಿನಂತೆಕಾದು ಕುಳಿತಿದ್ದೆರಾತ್ರಿಗಳಾಗಲೀ ಮಳೆಯಾಗಲೀಒಟ್ಟಾಗಿ ಬಂದೇ ಇಲ್ಲ ಅಂತಲ್ಲಅವು ಒಟ್ಟಾಗಿ ಬಂದ ಒಂದು ದಿನವೂನಾನು ಪ್ರಜ್ಞೆಯಿಂದಿರಲಿಲ್ಲ ಸರಿ ರಾತ್ರಿ ಹೀಗೆ ಜಗತ್ತೇ ನಿದ್ರೆಯ ತೆಕ್ಕೆಯಲ್ಲಿರತಿ ಶಿಖರ ಮುಟ್ಟುತ್ತಿರುವಾಗನಾನು ಮಾತ್ರ ಅದನ್ನು ಧಿಕ್ಕರಿಸಿಮುಂಬಾಗಿಲ ತೆರೆದು ಮಂಜಿನಷ್ಟು ತಣ್ಣಗಿದ್ದಕಲ್ಲ ಮೆಟ್ಟಿಲ ಮೇಲೆ ಕೂರುವಾಗಪರಮ ಚರಮ ಸುಖವನ್ನೂಮೀರಿದೊಂದು ಅನುಭೂತಿಮತ್ತು ಈ ಮಳೆಯ ಮೇಲೆಸಣ್ಣದೊಂದು ಹುಸಿ ಮುನಿಸು ತನ್ನ ರಾತ್ರಿ ಸಖನನ್ನು ಕೂಡುವಅಮೃತಘಳಿಗೆಯ ಬಗ್ಗೆಚಕಾರೆತ್ತದೆ ಸೂಚನೆ ಕೊಡದೆಸುರಿದು ಸೇರಿ ಸರಿದು ಹೋಗಿಯಾಗಿಮರು ಮುಂಜಾನೆ ಮನೆ ಮುಂದೆನೆನ್ನೆಯ […]

ಭಿನ್ನ ಬದುಕು

ಸರಿತಾ ಮಧು ನೀರಿನೊಂದಿಗೆ ನಂಬಿಕೆ ಇಟ್ಟುಮೀನು ಮರಿಗಳ ಅದರೊಳು ಬಿಟ್ಟುಅದಮ್ಯ ಆಸೆಯಿಂದ ದಿನಗಳೆದದ್ದುಅಪರಿಮಿತ ಮಳೆಗೆ ಕನಸೆಲ್ಲವೂಕೊಚ್ಚಿ ಹೋದದ್ದು ಅನೂಹ್ಯ! ಜಲ ಸೌಂದರ್ಯ ನೋಡಲುಮುಗಿಬಿದ್ದ ಜನಸಮೂಹ ಒಂದೆಡೆಅಳಿದುಳಿದ ಕನಸ ಶೋಧಿಸಲುತೆಪ್ಪ ಹತ್ತಿ ಹೊರಟ ಬೆಸ್ತರ ಹುಡುಗಿ ಇನ್ನೊಂದೆಡೆ ಹೂಗಳಂತೆ ಬದುಕು ಸುಂದರವಾದೀತೆಂದುತೆಪ್ಪವನೇರಿ ಹೊರಟಿದೆ ಬಾಲೆಯ ಕನಸುಅವಳ ಮುಗ್ಧ ನಗೆ ಹೂವ ಸೌಂದರ್ಯದಂತೆಬಣ್ಣ ಬಣ್ಣದ ಆಸೆಗಳು ಗರಿಗೆದರಿ ನಿಂತಂತೆ ಹೂವ ಹಿಡಿದು ಅದೇನು ಉಸುರಿದಳೋಅದೂ ತಲೆ ತೂಗಿ ಅವಳೆಡೆಗೆ ನಗುವ ಚೆಲ್ಲಿದೆಆನಂದಮಯ ಸಮಯ ಈರ್ವರ ನಡುವೆಬಾಲೆ ಮತ್ತು ಹೂವು ಜಗದ […]

ಸುರಿಯುತಿಹ ಮೋಡಗಳು

ಡಾ. ಪ್ರತಿಭಾ ಸುರಿಯುತಿರೆಜಿಟಿ,ಜಿಟಿ ಮಳೆಹನಿಗಳುನೋಡಿರಿ ಹರಡಿದೆ ಘಮಸುತ್ತಮೂತ್ತಲೂ. ಅವಳು ಅದೇ ಭೂತಾಯಿನಿಂತಿಹಳು,ಹಸಿರು ಸೀರೆರವಿಕೆಯ ತೊಟ್ಟು. ಸುರಿಸುತಿಹೆ ಮೋಡಗಳುಮಳೆ ಹನಿಗಳು ಶುರುವಾಗಿದೆನೋಡಿ ಕಣ್ಣುಮುಚ್ಚಾಲೆ ಆಟ. ಸ್ವಲ್ಪವೇ, ಸ್ವಲ್ಪವೇಹಿಡಿದು ಬಿಟ್ಟು, ಹಿಡಿದು ಬಿಟ್ಟು ಎನ್ನವಂತೆ ಸುರಿಸುತಿಹೆ ಮೋಡಗಳುಮಳೆಹನಿಗಳ.ದಾರಿಯುಂಟಕೂ ತೊಡಕುಗಳು ಸುರಿಯುವಮಳೆ ಹನಿಗಳಿಗೆಗಾಳಿಯದು ನೋಡಿಬಂದಿತು ರಭಸವಾಗಿಕೊಂಡೊಯ್ಯಲು ಮೋಡಗಳ ಬೇರೆ ಜಾಗಕ್ಕೆ. *************************

ಮಳೆಹಾಡು-3

ಸಂಜೆಯ ಮುಹೂರ್ತ ಆಶಾ ಜಗದೀಶ್ ಅದೆಷ್ಟೋ ವರ್ಷಗಳ ಪೂರ್ವ ನಿಯೋಜಿತಘಟನೆಯಿದು ಎನಿಸುವಂತೆಸುರಿಯುತ್ತಿರುವ ಈ ಮಳೆಗೆಸಂಜೆಯ ಮುಹೂರ್ತ ರಾಗ, ರಂಗು ಮತ್ತು ದೀರ್ಘ ಕ್ಷಣಗಳಕಟು ಮೌನಕಣ್ಣೀರು ಸ್ಫುರಿಸುವಂತೆ ತಾಕುವತಣ್ಣ ಸಣ್ಣ ಸಣ್ಣ ಸಿಡಿ ಹನಿಗಳುಯಾವುದಕ್ಕೂ ಪ್ರತಿರೋಧ ಒಡ್ಡದರಸ್ತೆಗೆ ಇದೊಂದು ಜನ್ಮದ ಸುವಾಸನೆಯನ್ನುಬಿಗಿ ಹಿಡಿದು ಉಚ್ವಾಸಕ್ಕೆ ಎಳೆಸುವ ಆಸೆಮತ್ತಷ್ಟು ಕಠೋರವಾಗಿ ಎದೆ ಸೆಟೆಸಿಮಲಗುತ್ತದೆ… ಒಂಚೂರೂ ನಡುಗದ ಮಲ್ಲಿಗೆ ಬಳ್ಳಿಮಳೆಯ ಹೊಡೆತಕ್ಕೆ ನಲುಗಿದೆಮತ್ತೆ ಮತ್ತೆ ಸರಿ ಮಾಡಿ ಹಿಡಿದೆತ್ತಿತಂತಿಯಿಂದ ಬಂಧಿಸಿ ತರಸಿಗೇರುವಂತೆಮಾಡುವ ಒಡತಿ ನಡುಗುತ್ತಾ ಒಳಗಿದ್ದಾಳೆತಾನು ಕಟ್ಟಿದ ತಂತಿ ತುಂಡಾಗಿಬೀಳುತ್ತಿರುವ ಬಳ್ಳಿಯ […]

ಆರು ಮೂರು

ಡಾ.ಅಜಿತ್ ಹರೀಶಿ ಮೂಲ ಆಲಯದಿಂದ ಕೈಲಾಸ ಪಟದಾಟಲೆತ್ತ ಬೀರಿ ಅದರತ್ತ ನೋಟಬುಡದಲ್ಲಿ ಬಿಸಿಯಿಲ್ಲಮೇಲೇರಿದಂತೆ ಕಾವೇರಿ ಪರದಾಟ ಹಿಂದೆ ಮುಂದೆ, ನೂಕುನುಗ್ಗಲುಆರು ಬಿದ್ದರೆ ಇನ್ನೊಂದು ಬಾರಿಸಿಗುವುದು ಆಡಲುಮೊದಮೊದಲು ಸಣ್ಣ ಏಣಿಹಾವು, ಆತಂಕವಿಲ್ಲ ಕಳೆ ಕಟ್ಟಿದೆ ಕೊನೆಯಲ್ಲಿನುಣುಪಾದ ದಂತದ ದಾಳದಲ್ಲಿಮೂರು ಬಿದ್ದರೆ ಹಾವು ಕಚ್ಚಿನಿಶ್ಚಲವಾಗುವುದು ನಿಶ್ಚಿತ ನೆಲಕಚ್ಚಿಕೈಲಾಸ ಕಾಣಬಹುದು ಬಿದ್ದರೆ ಆರುಶಿವ ಪಾರ್ವತಿ ಕಾಣುತಿಹರು ಒಂದು ಐದು ಬೀಳುತಿಹುದು ನೆತ್ತದಲಿಅತ್ತ ಇತ್ತ ಎತ್ತ ಎಂತ ಮಾಡಿದರೂ ಕೈಲಾಸ ಪ್ರಾಪ್ತಿಯಿಲ್ಲಆಟ ಬಿಟ್ಟು ಏಳುವಂತಿಲ್ಲಆರಕ್ಕೇರದ ಮೂರಕ್ಕಿಳಿಯಿದ ಬದುಕಿನಂತೆ ಲತ್ತದಲಿ ಮೂಡಿತು ಮೂರರ ಮುಖವಂತೂಮತ್ತೆ […]

ಆಕೆ ಉಲ್ಲಾಸದಿ‌ ನಕ್ಕಳು

ನಾಗರಾಜ್ ಹರಪನಹಳ್ಳಿ -೧-ವಾರಬಿಟ್ಟು ಸುರಿದ ಮಳೆಗೆಉಲ್ಲಾಸದಿಂದ ನಕ್ಕಳು ಭೂತಾಯಿ ಕಂಪೌಂಡ್ ಕಟ್ಟೆ ಮೇಲೆ ಕುಳಿತಗುಬ್ಬಚ್ಚಿ ಹಿಂಡಿನ ಹರಟೆಜಗುಲಿ ಒಳಗಿನ ಹೆಂಗಸರ ನಾಚಿಸಿತು -೨-ಮಳೆ ಸುರಿದಾಯ್ತುಹನಿಯುಂಡ ಭೂಮಿನಿದ್ದೆ ಹೋಗಿದೆಮೈಮುರಿಯುತ್ತಿದೆ ನೆಲಪುಟಿದೇಳುತ್ತಿದೆ ಚಿಗುರುಪ್ರತಿ ಚಿಗುರಿನಲಿತೇಲಿ ಬಂದಿದೆನಿನ್ನದೇ ಬಿಂಬ -೩-ಹಗಲು ರಾತ್ರಿಯನ್ನದೇಮಳೆ ಸುರಿಯಿತುನಾನು ನೀನು ಮಾತಾಡಿಕೊಂಡಂತೆ ಅತ್ಯಂತ ಉಲ್ಲಾಸಿತಳಾಗಿ ನಕ್ಕಿದ್ದು ಭೂಮಿಮಾತಾಡುತ್ತಲೇ ನಾವುನಕ್ಕು ಅತ್ತಂತೆ ನಡುನಡುವೆ ಮತ್ತೆ ನಕ್ಕು ಉಲ್ಲಾಸಿತ ಗೊಂಡಂತೆ ಮಡಿಲಲ್ಲಿ ನೂರು ನೋವು ತುಂಬಿಕೊಂಡು ನಗುವ ಆಕೆನೂರು ಸಂಕಟ ನುಂಗಿಯೂ ನಕ್ಕಂತೆ ನಾನು -೪-ಮಾತಿಗೆ ಮಾತು ಬೆಸೆಯಿತು ,ಹೆಜ್ಜೆ […]

Back To Top