Category: ಕಾವ್ಯಯಾನ

ಕಾವ್ಯಯಾನ

ವಿನಂತಿಯಷ್ಟೇ…

ಕವಿತೆ ಮಧುಸೂದನ ಮದ್ದೂರು ನಿನ್ನ ಒಂದೇ ಒಂದು ಕನಸಿಗೆ ಇಷ್ಟು ಪರಿತಪಿಸ ಬೇಕಿತ್ತೆ…..? ನಿನ್ನ ಕುಡಿಮಿಂಚ ಕಣ್ಣೋಟಎದೆ ಇರಿದಿದ್ದರೆ ಸಾಕಿತ್ತು..ಎದೆಗೆ ನಿನ್ನ ನೆನಪುಗಳ ಭರ್ಜಿಯಿಂದಇರಿದುಕೊಳ್ಳಬೇಕಿರಲಿಲ್ಲ..ನಿನ್ನ ತುಸು ಸ್ಪರ್ಶದ ಕೆನೆಗಾಳಿ ಎದೆಗೆ ಸೊಂಕಿದ್ದರೆ ಸಾಕಿತ್ತು… ನಿನ್ನ ಸಿಹಿ ಮುತ್ತೊಂದು ಸಿಕ್ಕಿದ್ದರೆ ಸಾಕಿತ್ತು..ಮಧುಶಾಲೆಗೆ ಎಡತಾಕಿ ಮತ್ತಿನ ಬಾಟಲಿಗಳಿಗೆ ಮುತ್ತಿಕ್ಕುವ ಪ್ರಮೇಯವೇ ಇರುತ್ತಿರಲಿಲ್ಲ… ನಿನ್ನ ನವಿರು ಬಿಸಿಯುಸಿರು ನನ್ನೆದೆಗೆ ಸುಳಿಗಾಳಿಯಾಗಿದ್ದರೆ ಸಾಕಿತ್ತು..ಧೂಮಲೀಲಾ ವಿನೋದವಳಿಗೆ ಅಗ್ನಿಮಿತ್ರನಾಗುತ್ತಿರಲಿಲ್ಲ.. ಈಗಲೂ ಕಾಲ‌ಮಿಂಚಿಲ್ಲ..ಒಂದೇ ಒಂದು ಬಾರಿ ಕನಸಿಗೆ ಬಂದು ಬಿಡು ಸಾಕುಈ‌ ನನ್ನಿ ವ್ಯಸನಗಳ ಸಾಮ್ರಾಜ್ಯವ ಸೋಲಿಸಿಎದೆಯ […]

ಗಝಲ್

ಗಝಲ್ ಶಶಿಕಾಂತೆ ನಿನ್ನನ್ನು ಎದೆಯಾಳದಿಂದ ಅನಂತವಾಗಿ ಪ್ರೀತಿಸುತಿರುವೆನುಆಣೆ ಇಡಲೇ,ನನ್ನೊಲವನ್ನೆಲ್ಲಾ ನಿನಗಾಗೇ ಮುಡಿಪಾಗಿಡುವೆನು. ಜೀವನವೆಂಬುದು ಮೂರು ದಿನದ ಸಂತೆಯಂತೆ ಚೆಲುವೆ.ಆ ಸಂತೆಯಲ್ಲಿ ನೀ ನೀಡಿದೆ ನನಗೆ ಯಾರೂ ನೀಡದ ಸ್ನೇಹವನು. ನೀನೀಗ ಹೃದಯ ವೀಣೆ ಮೀಟಿಯಾಗಿದೆ ದೂರ ಹೋಗದಿರು ಸಖಿ ತಾಳಿಕೊಳ್ಳಲಾರದು ನನ್ನೆದೆ ವಿರಹದ ಬೇಗೆಯನು. ಈ ಬಾಳು ಬರಡು ಬಂಜರುಭೂಮಿ ಆಗಿತ್ತು ನಿನ್ನಾಗಮದ ಮೊದಲು.ಪ್ರೇಮ ಸಿಂಚನದಿಂದ ಮನದಲಿ ನೀ ಮೂಡಿಸಿದೆ ಹೊಸ ಬಯಕೆಗಳನು ನಿನ್ನ ಹೆಸರೇ ನನ್ನುಸಿರಾಗಿದೆ ನಾವು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದಾಗದಿಂದ.ಬಾ ಜಾನು, ನನ್ನೆದೆಗೊರಗಿ ಮಲಗಿ […]

ಉತ್ತರ ಏನು?

ಕವಿತೆ ನಂದಿನಿ ಹೆದ್ದುರ್ಗ ಅವನೆನ್ನ ಅಗತ್ಯವಲ್ಲ.ಅನಿವಾರ್ಯವಲ್ಲಅಭೇದ್ಯವೂ ಅಲ್ಲ.ನಡುದಾರಿಯಲಿ ಸಿಕ್ಕ ದಾರಿಹೋಕ.ನನ್ನ ನೋಡಿ ಸಣ್ಣಗೆ ನಕ್ಕ. ಒಡ್ಡಿಕೊಂಡೆವು ಎಂದುಎರಡುಅಲುಗಿನ ನಡೆಗೆ ನಾವಿಬ್ಬರೂ.? ಅವನೀಗ ನನ್ನೆದೆಯ ರಾಗ.ಬೆವರ ಬೆಳಕು.ಹೆರಳ ಸಿಕ್ಕು.ಕಣ್ಣ ಚುಕ್ಕಿ.ಒಳಗಿನೊಳಗಿನ ಭಕ್ತಿ. ಅವನೆನ್ನ ಬಯಕೆ ಎನ್ನ ಬಳಲಿಕೆಮಳೆಗರೆವ ಮುಗಿಲುಆಳದ ದಿಗಿಲುಅವನೆನ್ನ ಬೇಕುಪದ್ಯದ ಪರಾಕು.ಅವನು…ಸಿಹಿಯಾದ ಕತ್ತಲುಹೂ ಹಿಡಿದ ಹಿತ್ತಿಲು.ಅವನೆನ್ನ ಸುಖ ನನ್ನ ಮೋಹದ ಸಖ ಜಗದ ಆ ಬದಿಯಲಿ ಅವನುಸಮೃದ್ಧ ಏಕಾಂತದಲಿ ನಾನುಹರಿದು ಅಲೆಗಳ ಬಣ್ಣಸುತ್ತೆಲ್ಲಾ ತಿಳಿಗೆಂಪು ಉದ್ಯಾನ.ಹೊರಳಿದರೆ ಹಗಲುಅವನೆದೆಯ ಮಗ್ಗುಲು ನನ್ನಇಂದು ನಾಳೆ ನಿನ್ನೆಗಳೆಲ್ಲಾಕಣ್ಣು ಕೂಡಿದಕ್ಷಣದ ಧ್ಯಾನದಲ್ಲಿ ಅದೇ […]

ನನ್ನೊಳಗಿನ ನೀನು.

ಕವಿತೆ ಶೀಲಾಭಂಡಾರ್ಕರ್ ಹುಡುಕುತ್ತೇನೆ ನಿನ್ನನ್ನು ಲೆಕ್ಕವಿಲ್ಲದನಕ್ಷತ್ರಗಳ ಮಿಣುಕು ಮಿಣುಕುನಾಟ್ಯದೊಳಗೆ.ಆತುರಗಾರ ಚಂದ್ರನೂನಿನ್ನ ನೆನಪಿಸುತ್ತಾನೆ..ಅವಸರದಿ ಅವಿತುಕೊಳ್ಳುವಾಗಮೋಡದ ಸೆರಗಿನೊಳಗೆ ಬೀಸಿ ಬರುವ ತಂಗಾಳಿಯೊಂದುಸದ್ದಿಲ್ಲದೆ ತುಟಿಗಳಿಗೆಮುತ್ತಾಗಿ ಬಿಸಿಯಾಗುವತುಂಟ ಸಮಯದಿನೀನೇ ಇರುವೆ ಆ ಇರುವಿನೊಳಗೆ. ಹಿತ್ತಲ ಮೂಲೆಯ ಗಿಡದಲ್ಲೀಗಅಬ್ಬಲಿಗೆಯ ಶ್ರಾಯ.ಹೂ ಅರಳುವ ಮೃದು ಮಧುರಪರಿಮಳವಾಗಿ ನೀನಿರುವೆ.ಗಂಧ ಸುಗಂಧದೊಳಗೆ. ಸಂಜೆಗಳಲಿ ಕೆಂಪಾಗಿಸೂರ್ಯ ಮುಳುಗುವಾಗಕಾಡುವ ನೆನಪಾಗುವೆ..ಅಂಗಳದಲ್ಲಿ ಆಟವಾಡುವಬುಲ್‍ಬುಲ್ ಜೋಡಿ ಹಕ್ಕಿಗಳಲಲ್ಲೆ ಸಲ್ಲಾಪಗಳ ಸದ್ದು ಗದ್ದಲದೊಳಗೆ. ನಿಶ್ಶಬ್ದವಾಗಿ ಪಿಸುನುಡಿಯೊಂದುಒಳಗಿನಿಂದ ಉಸುರಿದಾಗಯುಗಗಳಿಂದ ಹುಡುಕುತಿದ್ದನನ್ನನ್ನೇ ಎಲ್ಲೆಡೆ.. ಕಂಡುಕೊಂಡೆ.,ನಿನ್ನ ಕಂಡಾಗ ನನ್ನೊಳಗೆ. **************************

ಎರಡು ಕವಿತೆಗಳು

ಶೋಭಾ ನಾಯ್ಕ ಹಿರೇಕೈ ಅವರ ಎರಡು ಕವಿತೆಗಳು ಶೋಭಾ ನಾಯ್ಕ ಹಿರೇಕೈ ಕವಿತೆ – ೧…ಹೆಚ್ಚೆಂದರೇನು ಮಾಡಿಯೇನು? ಅವರಂತೆ ತಣ್ಣೀರಲ್ಲಿ ಮಿಂದುನಲವತ್ತೆಂಟನೆಯ ದಿನದವ್ರತ ಮುಗಿಸಿ,ಆ ಕೋಟೆ ಕೊತ್ತಲಗಳ ದಾಟಿಬೆಟ್ಟವೇರಿ ಗುಡ್ಡವಿಳಿದು, ಕಣ್ಗಾವಲ ತಪ್ಪಿಸಿನಿನ್ನ ಬಳಿ ನಡೆದೇ….ಬಂದೆನೆಂದು ಇಟ್ಟುಕೋಹೆಚ್ಚೆಂದರೆ ನಾನಲ್ಲಿಏನು ಮಾಡಿಯೇನು? ‘ಬಾಲಕನಾಗಿಹೆ ಅಯ್ಯಪ್ಪ’ ಈಹಾಡು ಹಾಡು ಕೇಳಿ ಕೇಳಿಇತ್ತೀಚೆಗೆ ನಿನ್ನ ಹಳೆಯದೊಂದುಪಟ ನೋಡಿದ ಮೇಲೆನನ್ನ ಮಗನಿಗೂ..ನಿನಗೂ..ಯಾವ ಪರಕ್ಕೂ ..ಉಳಿದಿಲ್ಲ ನೋಡು ಎಷ್ಟೋ ವರ್ಷ ನಿಂತೇ ಇರುವೆಬಾ ಮಲಗಿಕೋ ಎಂದುಮಡಿಲ ಚೆಲ್ಲಿನನ್ನ ಮುಟ್ಟಿನ ಕಥೆಯನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯನಿನಗೆ […]

ಕೊಡುವುದಾದರೂ ಯಾರಿಗೆ ?

ಚಿತ್ರ ಮತ್ತು ಕವಿತೆ : ವಿಜಯಶ್ರೀ ಹಾಲಾಡಿ. ಹೌದುಈ ಪ್ರೀತಿಯನ್ನುಮೊಗೆಮೊಗೆದುಕೊಡುವುದಾದರೂ ಯಾರಿಗೆ ? ನೇರಳೆಮರಕ್ಕೆ ಅಳಿಲಿಗೆಬೆಚ್ಚನೆ ಗೂಡಿನ ಹಕ್ಕಿಗೆ ? ಹೆಣ್ತನದ ಪರಿಧಿಗೆ ಎಂದೂ ದಕ್ಕದಮುಖ –ಮುಖವಾಡಗಳು …ರಾತ್ರಿ -ಹಗಲುಗಳನ್ನುಗೆಜ್ಜೆಕಾಲಿನಲ್ಲಿ ನೋಯಿಸಲೆ …ಯಾತನೆಯನ್ನು ನುಂಗುತ್ತಿರುವೆಸಂಜೆಯ ಏಕಾಂತಗಳಲ್ಲಿಹೆಪ್ಪುಗಟ್ಟಿದ ಇರುಳುಗಳಲ್ಲಿ .. ಬೊಗಸೆಯೊಡ್ಡಿದ್ದೇನೆಮಂಡಿಯೂರಿದ್ದೇನೆಹಟಮಾರಿ ಕಡಲಾಗಿದ್ದೇನೆ..ತರ್ಕಕ್ಕೆ ನಿಲುಕದ ಗಳಿಗೆ-ಗಳಲ್ಲಿ ಒಂಟಿಹೂವಂತೆನಿಂತುಬಿಟ್ಟಿದ್ದೇನೆ .. ಲೆಕ್ಕವಿಟ್ಟಿಲ್ಲ ಕೋಗಿಲೆಹಾಡಿದ ಹಾಡುಗಳನ್ನು… ಉದುರಿಬಿದ್ದ ಗರಿಗಳನ್ನುಮತ್ತೆ ಹುಟ್ಟಿಸಿಕೊಳ್ಳಲುಸಾಧ್ಯವಾಗುವುದಾದರೆಪ್ರೀತಿಯಿಂದ ಆರ್ತಳಾಗಿದ್ದೇನೆ.

ನಾವೀಗ ಹೊರಟಿದ್ದೇವೆ

ಕವಿತೆ ಶೀಲಾ ಭಂಡಾರ್ಕರ್ ನಾವೀಗ ಹೊರಟಿದ್ದೇವೆಒಂದೊಮ್ಮೆ ನಮ್ಮದಾಗಿದ್ದನಮ್ಮ ಊರಿಗೆ. ಯಾರೊಬ್ಬರಾದರೂತಡೆಯುವವರಿಲ್ಲವೇ!! ನಮ್ಮನ್ನುಹೋಗಬೇಡಿರೆಂದು ಕೈ ಹಿಡಿದು.ಈ ಪಟ್ಟಣ ನಿಮ್ಮದೂ ಕೂಡ ಎಂದು. ಇಟ್ಟಿಗೆ ಮರಳು ಹೊತ್ತ ತೋಳುಗಳುಸುತ್ತಿಗೆ ಉಳಿ ಹಿಡಿದ ಕೈಗಳುಗಂಟು ಮೂಟೆಗಳನ್ನುಹೊತ್ತು ಕೊಂಡು ಹೊರಟಿವೆ,ಭಾರವಾದ ಮನಸ್ಸನ್ನುಎದೆಯೊಳಗೆ ಮುಚ್ಚಿಟ್ಟು. ಯಾರಿಗೂ ನೆನಪಾಗಲಿಲ್ಲವೇ..ತಮ್ಮ ಮನೆಗಳಿಗೆಗಾರೆ ಮೆತ್ತಿದ, ಬಣ್ಣ ಹಚ್ಚಿದಕೈಗಳ ಹಿಂದೆ ಒಂದು ಉಸಿರುಹೊತ್ತ ಜೀವವಿದೆ.ನಮಗಾಗಿ ದುಡಿದ ಚೇತನವಿದೆ.ಅನಿಸಲಿಲ್ಲವೇ ಒಮ್ಮೆಯೂ. ಕಾಲೆಳೆದು ನಡೆದಿದ್ದೇವೆ.ದೇಹಕ್ಕಿಂತ ಭಾರವಾದಉಸಿರನ್ನು ಹೊತ್ತುಕೊಂಡು.ಊರು ತಲುಪುವ ಆಸೆಯಿಂದ.ನಮ್ಮದೇನಾದರೂ ಜಾಗ,ಒಂದಾದರೂ ಕುರುಹು..ಅಲ್ಲಿಯಾದರೂ..ಉಳಿದಿರಬಹುದೆಂಬ ನಿರೀಕ್ಷೆಯಿಂದ. ಹೊರಟಿದ್ದೇವೆ ಒಂದೊಮ್ಮೆನಮ್ಮದಾಗಿದ್ದ ನಮ್ಮ ಊರಿಗೆ. *******************

ಮಗಳು ಹುಟ್ಟಿದ್ದಾಳೆ

ಕವಿತೆ ನಿನ್ನೆ ಯಾವನೋ ಪಾಪಿ ತ್ರಿಪುರದಲ್ಲಿ ಹೆಣ್ಣು ಹುಟ್ಟಿದೆ ಅಂತ ತಾನು ಆತ್ಮಹತ್ಯೆ ಮಾಡಿಕೊಂಡನಂತೆ ಮತ್ತು ಅವನ ಮಡದಿ ಹೃದಯಾಘಾತವಾಗಿ ಸತ್ತಳು.ಅದಕ್ಕೆ ಇದನ್ನು ನಿಮಗೆ ಒಪ್ಪಿಸಬೇಕು ಅನಿಸಿತು. ಪ್ಯಾರಿಸುತ ಮಗಳು ಹುಟ್ಟಿದ್ದಾಳೆ…ಪದಗಳಿಗೆ ಸಿಗದ ದನಿಯೊಂದುಕಿವಿಗೆ ಬಿದ್ದು ನನ್ನ ಮನವು ಹಿಗ್ಗಿದೆಮುದ್ದು ಮುದ್ದು ಮುಖವ ಹೊತ್ತುಬೆಳಗು ಮುಂಜಾನೆ ಬೆಳಕು ಚಿಮ್ಮಿಸಿಬೆಚ್ಚನೆ ಹಾಸಿಗೆಯಲ್ಲಿ ಗೊಂಬೆಯಂತೆ ಮಲಗಿದ್ದಾಳೆಅವಳ ಮುಷ್ಟಿಯಲ್ಲಿ ಅನ್ನದ,ಆಯುಷ್ಯದ,ವಿದ್ಯಾರೇಖೆಗಳುಅಡ್ಡವಾಗಿ ನದಿಯು ಹರಿಯುವ ದಾರಿಯಂತೆಗುರುತು ಮಾಡಿಕೊಂಡಿವೆಬೆಳ್ಳಿ ಮುಖದಲ್ಲಿ ಹೊಮ್ಮುವ ಪ್ರಕಾಶತೆಗೆಸುತ್ತಲೂ ಎಲ್ಲರಿಗೂ ನಗುವು ಹಂಚಿ ಹೋಗಿದೆಅವಳು ಗೊಂಬೆ,ಹೆಮ್ಮರದ ಕೊಂಬೆ ಮಗಳು ಹುಟ್ಟಿದ್ದಾಳೆ….ನನಗೂ […]

ಸಂಜೆಯಾಗುತಿದೆ

ಕವಿತೆ ಶಾಂತಲಾ ಮಧು ಸಂಜೆಯಾಗುತಿದೆಆರಾಗಲಿಲ್ಲ ಸಂಜೆಯಾಗುತಿದೆಬೆಳದಿಂಗಳಾಸೆ ಚಂದ್ರನಿಗೆಕಸ್ತೂರಿ ತಿಲಕವನಿಡುವೆನೆನುತಹಾಡಿ ಓಡಿದರೆ,ಸಂಜೆಯಾಗುತಿದೆ ಬೆಟ್ಟಗಳ ತುದಿ ಏರಿಮೋಡದಲಿ ಈಜಾಡಿ..ಹಕ್ಕಿ ಜೊತೆ ಚಿಲಿಪಿಲಿಮಾತಾಡ ಹವಣಿಸಲುಹಾರಿ ಹೋಯಿತು ಹಕ್ಕಿಸಂಜೆಯಾಗುತಿದೆ ಮೊಟ್ಟೆ ಮರಿಗಳ ಸಲಹಿರೆಕ್ಕೆ ಪುಕ್ಕಗಳು ಬಲಿತುಹಾರ ಬಯಸಲು ಮುನ್ನಸಂಜೆಯಾಗುತಿದೆ ಹುಲ್ಲು ಗರಿಕೆಯ ತಂದುಎಣಿಸಿ ಪೋಣಿಸಿ ಗೂಡು ಕಟ್ಟಿಮೆರೆಯುವ ತವಕಸಂಜೆಯಾಗುತಿದೆ ಚಲಿಸುತಿದೆ ಚಿತ್ರವದುಮನಃ ಪಟಲ ಕೆದಕುತಿದೆಕೆಂಪನೆಯ ಆಗಸದಿಮರೆಯಾಗುತಿಹನವನುಸಂಜೆಯಾಗುತಿದೆ *****

ಗಝಲ್ ಜುಗಲ್

ಗಝಲ್ ಜುಗಲ್ ಮೊಟ್ಟಮೊದಲಬಾರಿಗೆ ಗಝಲ್ ಕವಿಗಳವಿವರಣೆಗಳೊಂದಿಗೆ ಶ್ರೀದೇವಿ ಕೆರೆಮನೆ ಗಿರೀಶ್ ಜಕಾಪುರೆ ನನ್ನ ದನಿಗೆ ನಿನ್ನ ದನಿಯು (ಶ್ರೀದೇವಿ ಕೆರೆಮನೆ) ಜಗದ ಜೀವನಾಡಿಯಲ್ಲಿ ಅಮೃತದ ಕಳಶ ಜೊತೆಯಾದಂತೆ ನನ್ನ ದನಿಗೆ ನಿನ್ನ ದನಿಯುಜೀವ ಕರುಣೆಯ ಪೊರೆವ ಜಗನ್ಮಾತೆಯ ಸುದೀರ್ಘ ಉಸಿರಂತೆ ನನ್ನ ದನಿಗೆ ನಿನ್ನ ದನಿಯು ಸೆರಗಿನ ಮರೆಯಿಂದ ಇಣುಕಿದ ಕೂಸಿನ ಹವಳದ ತುಟಿಯ ಕಟವಾಯಿಯಲ್ಲಿದೆ ನೊರೆವಾಲುಹಾಲುಗಲ್ಲದ ಮುಗ್ಧ ಮುಖದ ಮಗುವಿನ ಕಿಲಕಿಲ ನಗುವಂತೆ ನನ್ನ ದನಿಗೆ ನಿನ್ನ ದನಿಯು ಕನಸುಗಳೇ ಇರದ ಬರಡು ಎದೆಯೊಳಗೆ ಮೊಳೆತಿದೆ […]

Back To Top