Category: ಕಾವ್ಯಯಾನ

ಕಾವ್ಯಯಾನ

ಕವಿತೆ

ಖಾಲಿ ಬೆಂಚುಗಳ ಪ್ರಶ್ನೆ ದೇವು ಮಾಕೊಂಡ ನರೇಂದ್ರ, ನರೇಂದ್ರ!ಆಗ ಕೂಗಿನಲಿಏಕನಾದವಿತ್ತು ಹಾಳೆಗಳು ಮೆಲುಕು ಹಾಕುತ್ತಲೇ ಇದ್ದವುಕವಿತೆಯಾಗಿಹಾಡಾಗಿ ಈಗಆತಕಥೆಯಾಗಿದ್ದಾನೆಉಪಮೇಯಗಳ ನಡುವೆ ಸಿಲುಕಿಅಂತೆಕಂತೆಗಳ ಸಾಲು ಸೇರಿ ಅವನು ಕಟ್ಟಿ ಮೇಯಿಸಿದ ಧರ್ಮಹಗ್ಗ ಹರಿದುಕೊಂಡುಗೂಟ ಬದಲಿಸಿಕೊಂಡಿದೆಬಾಲಿಶ ಮೋಹ ಮಹಲುಗಳಿಗೆ ಅಂವ ನೆಟ್ಟ ಪಡಿ ಪದಾರ್ಥಗಳುಹಸಿಮಣ್ಣಿನ ಹುಸಿ ಬೀಜಗಳಾಗಿವೆ ನಾವೀಗ ಖಾಲಿ ಮೇಜುಗಳ ಹಿಂದೆ ನಿಂತುಕಪ್ಪು ಹಲಗೆಯ ಮೇಲೆ ಬರೆಯುವ ಹಾಗಿಲ್ಲಸಂತನೆಂದುಸನಾತನ ಪರಿಚಾರಕನೆಂದು ಈಗಖಾಲಿ ಬೆಂಚುಗಳೆ ಪ್ರಶ್ನೆ ಕೇಳುತ್ತಿವೆಅವನ ಮನೆಗೆ ಬಾಗಿಲುಗಳು ಎಷ್ಟೆಂದುಹಾಗಾಗಿನನ್ನ ತರಗತಿಯಲ್ಲಿ ನೀನೊಬ್ಬ ಪ್ರಶ್ನಾರ್ಥಕ ಚಿಹ್ನೆ ************************

ನಾನೂ ರಾಧೆ

ನಾನೂ ರಾಧೆ ಕವಿತೆ ಪೂರ್ಣಿಮಾ ಸುರೇಶ್ ನಮ್ಮೂರಿನ ತುಂಬೆಲ್ಲಾಅವರದೇ ಮಾತು- ಕತೆಕಾಡಿದೆ ಅವರ ಕಾಣುವತವಕದ ವ್ಯಥೆ ಆ ಹಾಲು ತುಳುಕುವ ಕೊಡಮೊಸರ ಮಡಕೆಅವಳ ಅರ್ಧ ಬಿಚ್ಚಿದ ಮುಡಿನವಿಲು ನಡಿಗೆಯ ಅಡಿಅವಳ ಮಿದುನುಡಿಯ ಚೆದುರುಆ ವಿಜನ ಬೀದಿದಟ್ಟನೆ ಬಿದಿರ ಮೆಳೆ ಯಮುನೆಯ ಕಚಗುಳಿ ಇಡುವಆ ಮೆಲ್ಲೆಲರುಅವನ ಗುನುಗಿನ ಬೆರಳುಅವಳ ಕಣ್ಣವೀಣೆಯ ಮೇಲೆಅವಳ ಅಕ್ಷತ ಬಿಂಬಅವನ ದಿಟ್ಟಿಯನು ತೊಳಗುವಬೆಳಕಿನ ಕಂಬ ಎಲ್ಲವನೂ ಇಣುಕಿಕಾಣುವ ಬಯಕೆಈ ಕಾತರ ದಗ್ಧ ಮನಕೆ,ಗೋಕುಲದ ಬಾಗಿಲಲ್ಲೆಒಲವ ಘಮಲುಪರಿಸರದ ತುಂಬರಾಸಲೀಲೆಯ ಅಮಲುಒಳಗೆ ಸುಳಿದಾಡಿದೆಅಲ್ಲಲ್ಲಿ ಎಡತಾಕಿದೆರಾಧಾಕೃಷ್ಣರ ಅರಸುತ ಸಿಕ್ಕಿದ […]

ಕಾವ್ಯಯಾನ

ಕವಿತೆ ಮಿಲನ ವೀಣಾ ರಮೇಶ್ ಮದುವನದ ಅಂಗಳದಲಿಮಧುರ ಮೌನ ಹಾಸಿದೆಮಧು ಮನಸುಗಳು ಬೆಸೆದಿರೆ,ಮಧು ಅರಸುವ ದುಂಬಿಗಳುಮಧುವಿಹಾರದ ಹಿಗ್ಗಿನಲಿ ಹಸಿರ ಹಂದರದೊಳಗೆಗಂಧರ್ವರೆ ಧರೆಗಿಳಿದಂತೆಮುದ ನೀಡಿ ಮತ್ತೇರಿಸಿದಆಲಾಪದ ದುಂಬಿಗಳುಮಧು ಹನಿಯೊಂದುಜಾರಿದೆ,ಕೆನ್ನೆ ಮಾತಾಡಿದೆತುಸು ಬಣ್ಣದಲಿ,ಅದರುತಿದೆ ಅಧರಗಳು ಭಾವಗಳ ಅರಮನೆಯಲಿಮಧುಮಂಚದ ಉಯ್ಯಾಲೆಪ್ರೇಮರಾಗದಿ ತೂಗುತಿರೆಸವಿಗನಸುಗಳು ಬಿಗಿದಪ್ಪಿನನ್ನೊಡಲಲಿ ಕೂತಿರೇ ಮಧುಚಂದಿರನು ಕರೆದಿರೆಮೆಲ್ಲನೆತನುಮನಗಳು ಹೆಣೆದಿದೆಪ್ರೇಮದ ಚಿಲುಮೆಅಧರ ಸುಖದೊಳಗಿನಮದಿರೆ,ಯ ಬೆಚ್ಚನೆಯಹಿತದೊಳಗೆ ಮಧುಮಿಲನದ ಅರಸಿಗೆಚೈತ್ರವಸಂತನ ಆಗಮನದ ಸಂತಸಮತ್ತದೇ ಪ್ರತಿಪದೆಗೆಸಂಭ್ರಮದ ಮಧುಮಾಸ *********************

ಕಾವ್ಯಯಾನ

ಕವಿತೆ ನಾಲ್ಕು ಹೆಜ್ಜೆ ನಡೆಯಬಹುದಿತ್ತು ಪ್ಯಾರಿಸುತ ನಾಲ್ಕು ಹೆಜ್ಜೆ ನಡೆಯಬಹುದಿತ್ತು ನೀನುಒಂದೇ ಒಂದು ಹೆಜ್ಜೆ ಮುಂದೆ ಹಾಕಲಿಲ್ಲಕೈಕೈ ಹಿಡಿದು,ಭುಜಕೆ ಭುಜವ ರಕ್ಷಿಸಿಮೆಚ್ಚಿಕೊಂಡಿದ್ದೆ ನಾನುಹಿಡಿದ ಕೈ ಕೊಸರಿಕೊಂಡು ಅಲ್ಲೇ ನಿಂತೆ ನೀನುನಾನು ನೀನು ಮತ್ತು ಭವಿಷತ್ತಿನ ನಮ್ಮೆರಡುಮುದ್ದು ಮಕ್ಕಳಿಗೆ ನೀತಿಯನ್ನುನೀಡಬಹುದಿತ್ತು ನಾವು…ಇಬ್ಬರಲ್ಲಿ ಯಾರೋ ಒಬ್ಬರು ನೀತಿಗೆಟ್ಟಿದ್ದೇವೆಪುಟ ಹಿಮ್ಮುಖವಾಗಿ ಹಾರಿದಂತೆಲ್ಲಇಬ್ಬರು ಸ್ವಚ್ಛಂದ ಪ್ರೇಮಿಗಳು ಅನ್ನುವಅದೆಷ್ಟು ಪುರಾವೆಗಳು ಉಲ್ಲೇಖಿತವಾಗಿವೆಕೆಲವು ಪುಟಗಳು ಮಾಸಿ ಹರಿದು ಹೋಗಿವೆಅದರಲ್ಲೇನಾದರೂ ದಾಖಲಿಸಿದ್ದುಉಳಿದಿರಬಹುದೇನೋ…?! ನಾಲ್ಕು ಹೆಜ್ಜೆ ಮುಂದೆ ಹೋಗಿ,ತಿರುಗಿ ನೋಡಿದೆ ನಾನುನನ್ನ ಹೆಜ್ಜೆ ಅಳಿಸಿ,ಗುರುತು ಸಿಗದೆ ಹಲ್ಲು ತೋರಿದೆ […]

ಕಾವ್ಯಯಾನ

ಲೀನವಾಗುವೆ ಕವಿತೆ ಸರಿತಾ ಮಧು ದಟ್ಟ ಕಾನನದ ನಡುವೆದಿಟ್ಟ ಹೆಜ್ಜೆಯನಿಟ್ಟು ನಡೆವೆಸುತ್ತಲೂ ಜೀಂಗುಡುವ ಸದ್ದು‌ಕತ್ತನೆತ್ತಲು ಕಾರ್ಮೋಡಗಳ ಕತ್ತಲುಅಡಿಇಡಲು ಕಲ್ಲು ಮುಳ್ಳಿನ ಹಾದಿಅಲ್ಲೇ ನಿಂತರೆ ಕ್ರೂರಮೃಗಗಳ ಭೀತಿ ಮುಗಿಲೆತ್ತರದ ಮರಗಳಿಗೆ ಒರಗಲೇ ಸ್ವಲ್ಪಮುಗಿದ ಹಾದಿಗೊಮ್ಮೆ ತಿರುಗಲೇ ಸ್ವಲ್ಪ ಭಯ , ಹಾ ! ಭಯದಣಿವ ಲೆಕ್ಕಿಸದೇ ಓಡಿದೆ ಮತ್ತೆನಾ ಕಳೆದುಕೊಂಡ ನನ್ನ ಸಾಮ್ರಾಜ್ಯಕ್ಕೆಅದು ಮಾತ್ರ ಎಂದಿಗೂ ನನ್ನದೇನಾನಲ್ಲಿ , ನಾನು ನನಗಾಗಿ ಮಾತ್ರಏಕಾಂತತೆಯ ಮೌನದೊಳಗೆಲೀನವಾಗುವುದೆನ್ನ ಮನ.. ******************************

ಪ್ರಶ್ನಿಸು ಪ್ರಶ್ನಿಸುತ್ತಲೇ ಇರು

ಕವಿತೆ ನಾಗರಾಜ ಹರಪನಹಳ್ಳಿ ಮುಗ್ಧತೆ ಸೌಂದರ್ಯವಹಾಗೆಲ್ಲ ಬೀದಿಗಿಡಲಾಗದುಒಲವೇಬೀದಿಯಲ್ಲಿ ಉರಿವ ಕಣ್ಣುಗಳಿವೆ ಹಾದಿ ಬೀದಿಗಳಲ್ಲಿ ಕರೋನಾ ಭಯಅದನ್ನೂ ಮೀರಿದ ಖದೀಮರ‌ ಸಂಚಿದೆಯಿಲ್ಲಿ ;ಸಮಾಜ ಇನ್ನೂ ಬದಲಾಗಿಲ್ಲಬದಲಿಸಲು ಯತ್ನಿಸಿದ ಬುದ್ಧ, ಬಸವ ,ಅಕ್ಕಅಲ್ಲಮ ಸೋತಿದ್ದಾರೆ….ಪುರೋಹಿತಶಾಹಿಯ ಕುತಂತ್ರಕೆ ಆನೆಕಾಲಿನ ಸಂಕೋಲೆಗೆ ಸಿಲುಕಿನೆಲಕೆ ಹತ್ತಿದ ರಕ್ತದ ಕಲೆ ಕಲ್ಯಾಣದ ಬೀದಿ ಬೀದಿಗಳಲಿಮತ್ತೆ ಅರಳಲಿ; ಅವೇ ಕಲ್ಯಾಣದ ಕ್ರಾಂತಿಯ ಹೂಚಿತ್ರಗಳಾಗಲಿ :ಅತ್ತ ಅತ್ತತ್ತ ಒಮ್ಮೆ ಹೊರಳಿ ನೋಡುಯಾವ ಹೆಸರುಗಳ ಇತಿಹಾಸದಲ್ಲಿ ಹೂಳಲಾಗಿದೆಯೋ ಅಲ್ಲಿಂದಲೇ ಕಸುವು ಪಡೆದುಕೊ ಗೆಳತಿ, ಆ ಕನಸುಗಳ ಹಂಚು ಕಲ್ಯಾಣದ ಬೀದಿಗಳಲಿ […]

ಶಾಮ

ಕವಿತೆ ಅರ್ಪಣಾ ಮೂರ್ತಿ ಮರೆತು ಮರೆತುನೆನಪಾಗುವನಿನ್ನ ನೆನಪುಗಳು ನೆನಪಾಗಲೆಂದೆಮರೆವು ಮರೆಸಿನೆನಪಿಸಿದೆ ಈಗ, ಗೋಕುಲದಸಂಜೆಗಳುಹೀಗೆ ನಿನ್ನನೆನಪಿನ ನೆಪದಿಂದಕೆಂಪೇರಿಹಗಲಮರೆಸಿದಾಗೆಲ್ಲನೀನಿಲ್ಲಿ ನನ್ನನೆನಪಿಗಿಳಿದಿರುತ್ತಿನೋಡು, ಬಿಗಿದ ಗಂಟಲಬಿಕ್ಕುನಿನ್ನ ನೆನಪಿಗೆ ನಾನಿಳಿದಿರುವೆನೆಂಬುದ ನೆನಪಿಸಿಬಿಡುವುದುಮರೆಯದಂತೆ, ನೀನೆಂದರೆ ಹೀಗೆನೆನಪಾಗದನೆನಪುಮರೆಯಲಾರದಮರೆವು. *******************************

ನಿನದೇ ನೆನಪು

ಕವಿತೆ ಮಾಲತಿ ಶಶಿಧರ್ ಈಗೀಗ ದಾರಿಯಲಿ ಒಬ್ಬಳೇಸ್ಕೂಟಿ ಬಿಡುವಾಗ ಹಿಂದೆಯಾರೋ ಕೂತು ನನ್ನನೆಚ್ಚಿನ ಗೀತೆ ಗುನುಗಿದಂತೆ,ತಿರುಗಿ ನೋಡಿದರೆ ಖಾಲಿಸೀಟುಕನ್ನಡಿಯ ಸರಿಪಡಿಸಿಗಮನಿಸಿದರೆ ಕಣ್ಮನಸೆಳೆವ ರೂಪವೊಂದುನಸುನಕ್ಕನಂತೆ.. ಇತ್ತ ಮನೆಯ ಮುಂದಿನರಂಗೋಲಿಯ ಚುಕ್ಕಿಯೊಂದುತಪ್ಪಿಸಿಕೊಂಡಂತೆಎಷ್ಟೇ ಗೆರೆ ಎಳೆದರುರಂಗೋಲಿ ಅಪೂರ್ಣವಾದಂತೆ.. ಮನೆಯ ಸೂರಿನ ಮೇಲೆಕಡಜವೊಂದು ಕಟ್ಟಿದ್ದಮಣ್ಣಿನ ಗೂಡು ಕುಸಿದುಬಿದ್ದಂತೆ,ಮನೆಗಾಗಿ ಹುಡುಕಾಡಿಏಕಾಂಗಿಯಾಗಿ ಬಿಕ್ಕಿದಂತೆ.. ಸ್ನೇಹಿತೆ ನೀಡಿದಗಿಳಿಮರಿ ಜೋಡಿಗಳುಪಂಜರದಲ್ಲಿಬಂಧಿಯಾದಂತೆ,ಲೋಕವನೇ ಮರೆತುಕೊಕ್ಕಿಗೆ ಕೊಕ್ಕುಅಂಟಿಸಿಕೊಂಡು ಅದೇನೊಮಾತಾಡಿದಂತೆ ಹಾಡಿನಲ್ಲೂ, ಕನ್ನಡಿಯಲ್ಲೂಅಪೂರ್ಣತೆಯಲ್ಲೂ,ಅಸಹಾಯಕತೆಯಲ್ಲೂ,ಪಂಜರದಲ್ಲೂಮಾತಿನಲ್ಲೂ,ನೋವಲ್ಲು ನಲಿವಿನಲ್ಲೂಬರೀ ನಿನದೇ ನೆನಪು.. ******************************

ಕುದಿವೆಸರ ಅಗುಳಾಗಬೇಕು

ಕವಿತೆ ಪ್ರೇಮಾ ಟಿ ಎಮ್ ಆರ್ ತನ್ನ ಹೀಗಿಟ್ಟವರನ್ನೆಲ್ಲಶಾಪ ಹಾಕಬೇಕೆಂದುಕೊಂಡಿದ್ದುಅದೆಷ್ಟುಬಾರಿಯೋತನಗಿಷ್ಟಬಂದಂತೆಇರಬಹುದಾಗಿದ್ದರೂಅವರಿಟ್ಟ ಪಾತ್ರೆಯೊಳಗೇತುಂಬಿಕೊಂಡಂತೆಬದುಕಿದ್ದು ತನ್ನದೂತಪ್ಪಲ್ಲವಾ?ಮತ್ತೆ ಈ ಮನೆಅಪ್ಪ ಅಮ್ಮ ಅತ್ತೆಮಾವಈ ಮಗಳ ಅಪ್ಪಎಲ್ಲರೂ ತನ್ನವರಲ್ಲವೇಎಂದುಕೊಳ್ಳುತ್ತಲೇಅವಳು ಅವಳಂತಿರದೇಅಮ್ಮನಂತೆ ಅಕ್ಕನಂತೆಬದುಕ ಬದುಕುತ್ತಲೇಇದ್ದಾಳೆ ಎಗರಿಬೀಳಬೇಕಾದಲ್ಲೆಲ್ಲತಣ್ಣೆ ಅಂಬಲಿಯಂತೆಹಳ್ಳೆಣ್ಣೆಯಂತೆಹಂದಾಡುತ್ತಾಳೆ ಮಂದಮಂದವಾಗಿಮನೆಮುಂದೆ ಬಿದ್ದುಕೊಂಡಪೆದ್ದಮುಂಡೆಯಂಥಕಾಲ್ದಾರಿಯೇ ತಾನೆಂದುಕೊಂಡಿದ್ದುಅದೆಷ್ಟು ಬಾರಿಯೋಉಗುಳಿ ಉಚ್ಚೆ ಹೊಯ್ದರೂಹೊದ್ದು ಮಲಗಿಕೊಂಡ ಬೀದಿ ತಡೆಯಲಾರದೇ ಗುಡಗುಡಿಸಿದ್ದೂಇದೆಯಾದರೂ ಮತ್ತೆಪಶ್ಚಾತ್ತಾಪದ ಉರಿಯೂಅವಳ ಉಡಿಗೇಕುದಿವೆಸರೊಳಗಿನ ಅಗುಳಾಗಿಮುಚ್ಚಳ ಕೊಡವಿ ಉಕ್ಕಬೇಕುಸಿಡಿಯಬೇಕು ಬಿಡಿಯಾಗಿ ಹಿಡಿಯಾಗಿಒಟ್ಟಿದ ಒಲೆ ಆರುವ ತನಕಹುದುಗದೇ ಬುದುಗಬೇಕುಒಮ್ಮೆಗಾದರೂ ಅಂದುಕೊಳ್ಳುತ್ತಾಳೆ

ಗಝಲ್

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ನಿನ್ನ ಹೃದಯದ ನೋವು ಅರಿಯದಾಯಿತು ಗೆಳತಿಪ್ರೀತಿಯ ಆಳಕಿಳಿದು ಕೇಳಿ ತಿಳಿಯದಾಯಿತುಗೆಳತಿ ಮನವೆಲ್ಲ ಸೋತು ಮೆತ್ತಗಾಗಿ ಹೋದೆ ನಾನುಮೌನವೆ ಉಸಿರಾಗಿ ಮಾತು ಬಾರದಾಯಿತು ಗೆಳತಿ ಒಲವನೆಲ್ಲ ತಂದು ಸುರಿದರೂ ನಿನಗೆ ತಿಳಿಯಲಿಲ್ಲಗಾಯಗಳ ಬರೆಗೆ ಜೀವ ಮೇಲೇಳದಾಯಿತು ಗೆಳತಿ ಜೀವ ಶವವಾಗಿ ನರಳುತಿದೆ ನಿನ್ನೆಡೆಗಿನ ಆಸೆಗೆಬರುವಿಕೆಗೆ ಕಾದು ಜೀವ ಶವವಾಯಿತು ಗೆಳತಿ ಕಂಡ ಕನಸುಗಳೆಲ್ಲ ನುಚ್ಚು ನೂರಾದವು ನಿನಗಾಗಿಮರುಳನ ಕಣ್ಣಿರಧಾರೆ ನದಿಯಾಗಿ ಹರಿದೊಯಿತು ಗೆಳತಿ *********************************

Back To Top