Category: ಕಾವ್ಯಯಾನ

ಕಾವ್ಯಯಾನ

ದೇವರ ಲೀಲೆ

ಕವಿತೆ ದೇವರ ಲೀಲೆ ಬಾಪು ಖಾಡೆ ನೀಲಿಯ ಹಾಳೆಗೆ ಚಿತ್ರವ ಬರೆದುಮೇಲಕೆ ಎಸೆದಿರುವೆಶಿವನೇ ಮೇಲಕೆ ಎಸೆದಿರುವೆಮೂಡಣ ರವಿಗೂ ಹುಣ್ಣಿಮೆ ಶಶಿಗೂಸ್ನೇಹವ ಬೆಸೆದಿರುವೆಬೆಳಕಿನ ಸ್ನೇಹವ ಬೆಸೆದಿರುವೆ ತುಂಬಿದ ಅಂಬುಧಿ ಅಲೆಗಳ ಮೇಲೆನರ್ತನ ನಡೆಸಿರುವೆಹರನೇ ನರ್ತನ ನಡೆಸಿರುವೆಹಕ್ಕಿಯ ಹಿಂಡಿನ ಮೆತ್ತನೆ ಮೈಗೆಅಂಗಿಯ ತೊಡಿಸಿರುವೆರಂಗಿನ ಅಂಗಿಯ ತೊಡಿಸಿರುವೆ ಬಳುಕುವ ಬಳ್ಳಿಗೆ ಬಣ್ಣದ ಹೂಗಳಚಿತ್ರವ ಬಿಡಿಸಿರುವೆಚಂದದ ಚಿತ್ರವ ಬಿಡಿಸಿರುವೆಕೋಗಿಲೆ ಕಂಠದಿ ಕಾಣದೆ ಕುಳಿತುವೀಣೆಯ ನುಡಿಸಿರುವೆಚೈತ್ರದ ವೀಣೆಯ ನುಡಿಸಿರುವೆ ಎಲ್ಲೊ ಅವಿತು ಸೋಲು-ಗೆಲುವಿನಸೂತ್ರವ ಹಿಡಿದಿರುವೆಜೀವನ ಸೂತ್ರವ ಹಿಡಿದಿರುವೆನಾಟಕವಾಡಿ ಪಾತ್ರವ ಮುಗಿಯಲುಪರದೆಯ ಸರಿಸಿರುವೆಅಂಕದ ಪರದೆಯ ಸರಿಸಿರುವೆ […]

ಏಕೆ ಹೀಗೆ ಈ ಬಿರುಕುಗಳು?

ಕವಿತೆ ಏಕೆ ಹೀಗೆ ಈ ಬಿರುಕುಗಳು? ಮಮತಾಶ0ಕರ್ ಕಳಚಿಕೊಳ್ಳುವುದೇಕೆ ಒಂದೊಂದೇ ಕೊಂಡಿಗಳು?ಯಾವಬಾದರಾಯಣ ಸ0ಬಂಧಗಳೋಬೆಸೆದುಕೊಂಡಿದ್ದವುಈಗ ಬೆಸುಗೆ ಬಿಟ್ಟುಕೊಳ್ಳತೊಡಗಿದೆ ಬಿರುಕು ದೊಡ್ಡದಾಗುತ್ತಾ ಹೋದಂತೆದೂರಾಗುತ್ತ ಹೋಗುತ್ತೇವೆ…ಜೊತೆಗೆ ಅಪಾರ್ಥಗಳೂ್ ಬೆಳೆಯುತ್ತಾ ಹೋಗುತ್ತವೆಅಷ್ಟೇ ಆದರೆ ಪರವಾಗಿಲ್ಲ…ಆದರೆ ನಾವೇನು ಹೇಳಿಲ್ಲವೋಅದು ಎದುರಿನವರಿಗೆ ಕೇಳುತ್ತದೆನಮ್ಮ ಮೌನ ಏನೇನೋ ಹೇಳುತ್ತಿರುತ್ತದೆ…! ಈಗ ಈ ಸ್ಂಜೆ ಕೆಂಪಲ್ಲಿಕರಗಿ ಹೋಗುತ್ತಿದೆ ಸಂಬಂಧಗಳುಕತ್ತಲಾಗುತ್ತಿರುವಾಗ ಅನಿಸುತ್ತಿದೆ ಅವರಿಗೆಸ್ವಲ್ಪವೇ ಕ್ಷಮಿಸಿದ್ದರೂ ಇರುತ್ತಿತ್ತೇನೋಈ ಬಿಟ್ಟುಹೋದ ಸಂಬಂಧಗಳು…. ಆದರೇನು…ಅಹಂಕಾರಗಳ ಯುದ್ದದಲ್ಲಿವಿದಾಯವೇ ಗೆದ್ದುಬಿಟ್ಟಿದೆ…..! **************************************

ಮುಂಗಾರಿನ ಮಳೆಯಲಿ

ಕವಿತೆ ಮುಂಗಾರಿನ ಮಳೆಯಲಿ ಜಯಶ್ರೀ ಭ.ಭಂಡಾರಿ. ಬೆಳಗಿನಿಂದ ಕಂಬ ನಿಂತಂಗ ನಿಂತ ಕಾಯ್ತಿದಿನಿನೀ ಬರುವ ದಾರಿಗೆ ಎವೆಯಿಕ್ಕದೆ ನೋಡ್ತಿದಿನಿಮುಂಗಾರು ಮಳೆಯ ಮಣ್ಣವಾಸನೆಯಲಿನಿನ್ನ ಬೆವರಘಮಲು ತೇಲಿಬರುವದೆ ಎಂದು ಪಟಪಟ ಮಳೆಹನಿಗಳೆಲ್ಲ ಕಣ್ಣತೋಯಿಸಿನಿನ್ನ ನೆನಪುಗಳಲ್ಲಿ ಮನ ಹೂವಾಗಿಸಿಪ್ರತಿಕ್ಷಣ ಶಬರಿಯಾಗಿರುವೆ ಕಣೆ ನಿನ್ನ ನೆನೆಸಿಕಡಲಾದ ಭಾವನೆಗಳೆಲ್ಲ ಮುನಿಸಿ ಮುತ್ತಿಕ್ಕಿವೆ ನಿನಗೇಕೆ ಇಂತಹ ಕಠಿಣ ಮನಸುಬರಬಾರದೆ ಭಾವನೆಗಳಿಗೆ ರೆಕ್ಕೆಮೂಡಿಸಿಅರಳಬಾರದೆ ನನ್ನಿ ಬಾಹುಗಳ ಬಳಸಿರಿಮ್ ಜಿಮ್ ನಾದದಲಿ ಒಂದಾಗುವಾ ಸರಸಿ ಗೆಜ್ಜೆಯ ಹೊನ್ನ ಪಾದಗಳ ಅರಸಿ ನೀಹೆಜ್ಜೆಯನಿಡುತ ಒಲಿದು ಬಾರೆ ಒಲವ ಕನವರಿಸಿಎದೆಯಬಾಂಧಳದ ತುಂಬೆಲ್ಲ […]

ಶಾಲೆ ಮಾಸ್ತರ್ರು

ಕವಿತೆ ಶಾಲೆ ಮಾಸ್ತರ್ರು ಫಾಲ್ಗುಣ ಗೌಡ ಅಚವೆ ಗೆರೆ ಗೆರೆಗಳ ಪಾಯಜಾಮಗದ್ದೆ ಹಾಳಿಯ ಮೇಲೆ ನಡೆದು ಬಂದರೆಎದುರುಗೊಳ್ಳುತ್ತದೆ ಬೆತ್ತ ವರಾಂಡಾದಲ್ಲಿಟೇಬಲ್ಲು ಚೊಕ್ ಪೀಸು ಕರಿ ಹಲಗೆಎಲ್ಲವೂ ಒಮ್ಮೆ ಎದ್ದು ನಿಲ್ಲುತ್ತವೆ ಪ್ರಾರ್ಥನಾ ಬೆಲ್ಲಿಗೆ ಎಚ್ಚರಗೊಂಡ ಗಾಂಧಿ,ಬೋಸ್,ರಾಧಾಕೃಷ್ಣನ್ ಎಲ್ಲ ಮಕ್ಕಳೊಂದಿಗೆ ಎದೆಗೆ ಕೈಯಿಟ್ಟು ನಿಂತಂತೆ ಮಕ್ಕಳಿಗೆ ಭಾಸವಾಗುತ್ತದೆ ಮಗ್ಗಿ ಬರೆದ ಪಾಟಿ ಅದ್ದು ಹೋಗಿದೆ ಜೋರುಮಳೆಗೆಮತ್ತೆ ತೋರಿಸಬೇಕು ಬರೆದುಇಲ್ಲದಿರೆ ಗದ್ದೆಯಲಿ ಸಗಣಿ ಹೆಕ್ಕಬೇಕು ಆಗಾಗ ಅಂಗಿಯನು ಉಲ್ಟಾ ಹಾಕಿ ಬಂದರೂನೋಡಿಯೂ ನೋಡದಂತೆಕಿಟಕಿಗಳೂ ಗಪ್ ಚಿಪ್ಹೆದರಿ ಕೂತ ಮಕ್ಕಳಂತೆ ಏಕೋಪಾದ್ಯಾಯ […]

ಸುಮ್ಮನೆ ಬದುಕಿಬಿಡು

ಕವಿತೆ ಸುಮ್ಮನೆ ಬದುಕಿಬಿಡು ವಿಶಾಲಾ ಆರಾಧ್ಯ ಬದುಕಿ ಬಿಡಬೇಕು ಸುಮ್ಮನೆದುಮ್ಮಾನ ಬಿಗುಮಾನವಿಲ್ಲದೆಎಲ್ಲರೊಳಗೊಂದಾಗಿಯೂತಾನೇತಾನಾಗಿ ಆಕಾಶಕ್ಕೇಕೆ ಚಪ್ಪರ ..ನಿಸರ್ಗಕ್ಕೇನು ಮದುವೆಯೇ?ಇಷ್ಟಕ್ಕೂ ಮದುವೆಗೆ ಚಪ್ಪರಬೇಕೇ ಬೇಕೆಂದವರಾರು?ಮದುವೆಗೆ ಗಂಡು ಹೆಣ್ಣಿದ್ದರೆ ಸಾಕುಬೇರೆಲ್ಲಾ ಬೇಲಿಗಳ ಕಿತ್ತು ಹಾಕು ಪ್ರಕೃತಿ ಚೈತ್ರದ ಚಿಗುರೊಡನೆಮೈನೆರೆದಾಳೆ ಚಲುವೆರೆದಾಳೆಹೆಣ್ಣಿನ ಗುಣವೇ ಈ ಮಣ್ಣಿಗೂಮೈದುಂಬಿದಾಗ ಮಿಕ್ಕಿ ಎರೆವುದುಪ್ರಕೃತಿ ಸಹಜ ! ಅದಕೇಕೆ ನಿಯಮ ***************************

ಮನ ನೆಡದಾಗ

ಕವಿತೆ ಮನ ನೆಡದಾಗ ರೇಶ್ಮಾಗುಳೇದಗುಡ್ಡಾಕರ್ ನಡೆಯುತ್ತ ನಡೆಯುತ್ತಾ ನಡೆದದಾರಿಯೇ ಕಾಣಲಿಲ್ಲ ಹಿಂತಿರುಗಿನೋಡಿದಾಗ ಮುಂದಿರುವ ಗೂಢಾರಣ್ಯವುನಡಿಗೆಗೆ ಧೊಳಿಪಟವಾಗಿಅವಶೇಷವೇ ಇಲ್ಲದಂತಾಗಿತ್ತು …..! ಬದುಕಿನ ಪ್ರವಾಹಕ್ಕೆ ನಿಲ್ಲದಪಯಣ ರಭಸದಿ ಹುಡುಕುತ್ತಲೆಇತ್ತು ನೆಮ್ಮದಿಯ ದಡವದಣಿವರಿಯದ ದೇಹದ ಜೊತೆಗೆಹೆಗಲಲ್ಲಿ ಭದ್ರವಾಗಿದ್ದವು ಕನಸಿನಜೋಳಿಗೆ ಒಮ್ಮೊಮ್ಮೆ ನಿಂತಲ್ಲೇ ನಿಂತು ,ಕಾದು ,ಕಾದು , ಕೆಂಡಕಿಂತಲುಬಿಸಿಯಾಗಿ ! ಎಲ್ಲ ಬೇಗುದಿಗಳನ್ನುತನ್ನೊಳಗೆ ಸುಟ್ಟು ಬೂದಿಮಾಡಿತು …… ದಿಟ್ಟತನ ನೋಡುಗರ ಎದೆಯಲ್ಲಿಭಯದ ಬುಗುರಿಯ ಆಡಿಸಿದ್ದುಕ್ಷಣ ಮಾತ್ರದಲ್ಲಿಸಂಕೋಲೆಗಳನ್ನು ಕಿತ್ತು ಒಸೆದಮೇಲೆಹೆದರುವದು ಯಾತಕ್ಕೆ ?ಭವಿಷ್ಯ ಕ್ಕೂ ,ವಾಸ್ತವಕ್ಕೂ …..ಬಿರುಗಾಳಿಗೆ ಸಿಕ್ಕ ತರಗೆಲೆಯಂತಾದವುಭಯದ ಭೂತಗಳು … […]

ಜೋಳದ ಹೂವು

ಕವಿತೆ ಜೋಳದ ಹೂವು ಪೂಜಾ ನಾರಾಯಣ ನಾಯಕ್ ಬಿಕ್ಕಳಿಸಿ ಬಿಕ್ಕಳಿಸಿ ಅಳುತಿದೆಜೋಳದ ಹೂವೊಂದು ಮಗುವಂತೆಮನದಿಂಗಿತವ ಕೇಳುವವರಾರೆಂದುನರಳುತಿದೆ ತನ್ನೆದೆಯ ಗೂಡಲ್ಲಿರಾತ್ರಿ-ಹಗಲೆನ್ನದೆ. ಯಾರಬಳಿ ನನ್ನ ಮನದಿಂಗಿತವನರುಹಲಿ?ಯಾರ ಬಳಿ ತೋಡಿಕೊಳ್ಳಲಿ ನನ್ನಳಲ?ಗೆಳೆತನದ ಸಲುವಾಗಿ ಯಾರ್ಯಾರ ಬೇಡಲಿ?ನನ್ನೆಡಗೆ ಸುಳಿಯರಾರೂಅಯ್ಯೋ, ಇದು ನನ್ನ ವಿಧಿಯೆ? ಪಾತರಗಿತ್ತಿಗೆ ಹೇಳಲೆ?ಛೇ, ತಗುಲಿದೆ ಮಲ್ಲಿಗೆಯ ಹುಚ್ಚು!ಭ್ರಮರಕ್ಕೆ ತಟ್ಟಿದೆಸೂರ್ಯಕಾಂತಿಯ ಮೋಹ!ಕಣಜವನು ಕೈಬೀಸಿ ಕರೆವೆನೆಂದರೆಛೇ, ಅದಕೂ ಸೋಕಿದೆ ತಾವರೆಯ ಪ್ರೇಮ!ಯಾರ ಬಳಿ ಹೇಳಲಿ ಅಡಗಿದಗುಹೆಯೊಳಗಿನ ಮರ್ಮ ಕಣ್ಣೀರಿನದ್ದೆಂದು,ಗೋಗರೆಯುತಿಹೆ ಸುಯ್ಲು ಸೋರದ ಹಾಗೆನುಂಗುತಿಹೆ ಒಳಗೊಳಗೆ… ಎತ್ತಲಿಂದಲೂ ಬರರ್ಯಾಕೆ ಇತ್ತ?ಕುಸುಮ-ವಾಸನೆಯ ಕಂಪಿಲ್ಲವೆಂದೆ?ಇದ್ದರೂ ಇರಬಹುದೆ ನನ್ನೊಳಗಿನಮಧುವಿಗೆ […]

ದೊರೆಯ ಕಿರೀಟದ ನೀಲ ಮಣಿಯಲ್ಲಿ….

ಕವಿತೆ ದೊರೆಯ ಕಿರೀಟದ ನೀಲ ಮಣಿಯಲ್ಲಿ…. ಶ್ರೀದೇವಿ ಕೆರೆಮನೆ ರತ್ನ ಖಚಿತ ಸಿಂಹಾಸನದಲ್ಲಿ ಆಸೀನನಾಗಿದ್ದದೊರೆಯಲ್ಲೊಂದು ಉದಾಸೀನಅನತಿ ದೂರದಲ್ಲಿ, ಕೈ ಕಟ್ಟಿವಿಧೇಯಳಾಗಿ ನಿಂತಿದ್ದಕಪ್ಪು ಬಣ್ಣದ ನಿರಾಭರಣ ಯುವತಿಯಕಡೆಗೊಂದು ದಿವ್ಯ ನಿರ್ಲಕ್ಷ ಹ್ಞೂಂಕರಿಸಿ ಎದುರಿಂದ ತೊಲಗೆಂಬಂತೆಕೈಬೀಸಿದ ದೊರೆಯಲ್ಲಿ ಅದೇನೋ ವ್ಯಂಗ್ಯಸುಂದರವಾಗಿರದ್ದು ಯಾವುದೂ ಕಣ್ಣೆದುರುಕಾಣಲೇ ಬಾರದು ಎಂಬ ಹಟಎದುರಿಗಿದ್ದ ಯುವತಿಯೋಯಾರ ಕಣ್ಣೂ ಅರಳಿಸಿದ ಸೀದಾ ಕವಿತೆ ದೊರೆಯ ಅಣತಿಯಂತೆ ತಲೆ ತಗ್ಗಿಸಿಮುಖ ತಿರುವಿ ಹೊರ ಹೊರಟಾಕೆಯಕಣ್ಣಲ್ಲೊಂದು ಅಬ್ಬರಿಸುವ ಕಡಲುಉಕ್ಕಿದ ನಗೆಯಲ್ಲೊಂದು ಕಡಲಲೆಗಳನೆನಪಿಸುವ ಭೋರ್ಗರೆತ ಅದೋ…ದೊರೆ ಓಡೋಡಿ ಬಂದಿದ್ದಾನೆಈಗ ತಾನೆ ಹೊರಗೆ ಹೋದಕಪ್ಪು […]

ಗೆಳೆಯರು ಹಲವರು

ಕವಿತೆ ಗೆಳೆಯರು ಹಲವರು ಮಾಲಾ.ಮಾ.ಅಕ್ಕಿಶೆಟ್ಟಿ. ಕಲಿಸುವುದು ದಿನವೂಗೆಳೆತನ ವ್ಯಾಖ್ಯೆಗಳುವಾಟ್ಸಪ್ ಫೇಸ್ ಬುಕ್ ನಲ್ಲಿ ನೋಯಿಸುವುದು ಹೀಯಾಳಿಸುವುದುಕಡೆಗಣಿಸುವುದು ಸಲ್ಲಚೂರು ಚೂರು ಹೃದಯವನ್ನಂತೂಮಾಡಬಾರದುಗಳ ಸರಮಾಲೆಯಲ್ಲಿಸಾಲು ನಿಂತ ‘ಬಾರದುಗಳು’ ಬೇಕೇ ಬೇಕು ಹಠಒಂದು ಕಾಲದಲ್ಲಿ ಗೆಳೆತನಇರದಿರೆ ನಿರುತ್ಸಾಹಸಿಗಲಿಲ್ಲ ಅಂದುಸಿಗುತ್ತಿದೆ ಇಂದುವಾಟ್ಸಪ್ ಫೇಸ್ ಬುಕ್ ನಲ್ಲಿ ಒಂಟಿತನ, ಅಸಂತೋಷಅಶಾಂತಿಯನ್ನು ಕೊಟ್ಟದೇಣಿಗೆ ಅಂದಿನ ಗೆಳೆತನದ್ದುಸುಧಾರಿಸಿದ ಗೆಳೆತನಇಗಿಂದು ನೀಗಿಸಲುಅಸಾಧ್ಯ ಆಗಿನ ಬೇಡಿಕೆಯನ್ನುಸಾಕು ಗೆಳೆತನ ಡೋಂಗಿರೂಢಿಯಾಗಿದೆ ಅವರಿಲ್ಲದಜೀವನದ ಒಂಟಿ ಪಯಣ ವ್ಯತ್ಯಾಸವಿಲ್ಲ ಇವರಇರುವಿಕೆ ಇಲ್ಲದಿರುವಿಕೆಯಾರ್ಯಾರ ಜೀವನದಲ್ಲಿಏನು, ಕುತೂಹಲವಿಲ್ಲಆತ್ಮೀಯರಲ್ಲದವರಜೊತೆ ಉತ್ಸಾಹವೆಲ್ಲಿ ನೀರೆರೆಯಲು ಬರುವರುಸತ್ತಾಗ ಬಾಯಲ್ಲಿ ಆತ್ಮೀಯರುಹೊರತು ಡೋಂಗಿಯಲ್ಲಪಾಪ ಫೋಟೋ […]

ನನ್ನ ಬೆರಳುಗಳು

ಕವಿತೆ ನನ್ನ ಬೆರಳುಗಳು ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ನನ್ನ ಬೆರಳುಗಳುಗಿಡಗಳಲ್ಲಿ ಚಿಗುರುತ್ತವೆಹವಳದಂತೆ ಕೆಂಪು ಕೆಂಪುಅರಳುತ್ತವೆ ತಾವರೆಯ ಎಸಳುಗಳಂತೆಕೊಳದಲ್ಲಿ ಮೀನುಗಳಾಗಿಉಗುರುಗಳು ಕಣ್ಣುಗಳಾಗಿಕಣ್ಣು ಮಿಟುಕಿಸದೆ ದೇವರಾಗುತ್ತವೆಮಿಂಚಿನ ಗತಿಯಲ್ಲಿ ಚಲಿಸುತ್ತವೆನಾನು ಗಾಳ ಹಾಕುತ್ತೇನೆನನ್ನದೇ ಬೆರಳುಗಳಿಗೆಕವಿತೆಯ ಎರೆಹುಳ ತುಂಡುಪದ ಸಿಕ್ಕಿಸಿ ಮೀನುಗಳು ನೀರು ಬಿಟ್ಟೊಡನೆಮರಳಿ ಬೆರಳುಗಳಾಗುತ್ತವೆಹವಳ ಚಿಗುರುಗಳಾದತಾವರೆ ಎಸಳುಗಳಾದಕೊಳದೊಳಗೆ ಮೀನುಗಳಾದಅನುಭವಗಳನ್ನು ಬರೆಯುತ್ತವೆದೇವರಾದದ್ದನ್ನೆ ಮರೆತುಇನ್ನೇನೋ ಹೊಸತು ಆಗಲುರೆಕ್ಕೆ ಬಿಚ್ಚಿಕೊಂಡು ಹೊರಟುಬಿಡುತ್ತವೆಹೊಸತು ಆದಾಗೆಲ್ಲ ದೇವರಾದ್ದನ್ನುಬೆರಳಾದಾಗೆಲ್ಲ ಮರೆಯುತ್ತಮರಳಿ ಹೊರಡುತ್ತವೆ ಅದಕೇ…ನನ್ನ ಕವನಗಳು ದೇವರನ್ನುಮುಟ್ಟುವುದೇ ಇಲ್ಲಇನ್ನೇನು ಬೆರಳು ಆತನನ್ನುಮುಟ್ಟಿತು ಎಂಬಷ್ಟರಲ್ಲಿಅದಕ್ಕೆ ಮುಟ್ಟು ಆಗಿರುತ್ತದೆಕವನಗಳು ಹಾಳೆಗಳಲ್ಲೇಹಳತಾಗುತ್ತವೆ ನನ್ನ ಹೃದಯಒಂದು ಮೀನಾಗಿಬಿಟ್ಟಿದೆಗಾಳ ಅವನ […]

Back To Top